ಉದಕದ ಕೈಕಾಲ ಮುರಿದು,

ವಿಕಿಸೋರ್ಸ್ದಿಂದ



Pages   (key to Page Status)   


ಉದಕದ ಕೈಕಾಲ ಮುರಿದು
ಅಗ್ನಿಯ ಕಿವಿಮೂಗನರಿದು
ವಾಯುವ ತಲೆಯ ಕೊಯ್ದು
ಆಕಾಶವ ಶೂಲದಲಿಕ್ಕಿದ ಬಲ್ಲಿದ ತಳವಾರನೀತನು ! ಅರಸು ಪ್ರಧಾನ ಮಂತ್ರಿ ಮೂವರ ಮುಂದುಗೆಡಿಸಿದ ಬಲ್ಲಿದ ತಳವಾರನೀತನು ! ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು ಬಿಯ್ಯಗವ ಹೂಡಿ ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರ.