ಎಚ್ಚು ಬಾಲಿಯ ಕೊಂದ

ವಿಕಿಸೋರ್ಸ್ದಿಂದ



Pages   (key to Page Status)   

ಎಚ್ಚು ಬಾಲಿಯ ಕೊಂದ
ಕಟ್ಟಿದನು ಶರಧಿಯನು
ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ. ಮಾಯದ ಸಂಸಾರವ ನಚ್ಚಿ
ಕೆಟ್ಟು ಬರುದೊರೆವೊಗಬೇಡ. ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ.