Transclusion_Status_Detection_Tool

ಎನಗೆ ಕಾಯುವುಂಟೆಂಬರು ಕಾಯವನೆಗಿಲ್ಲವಯ್ಯ.

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಎನಗೆ ಕಾಯುವುಂಟೆಂಬರು ಕಾಯವನೆಗಿಲ್ಲವಯ್ಯ. ಎನಗೆ ಜೀವವುಂಟೆಂಬರು ಎನಗೆ ಜೀವ ಮುನ್ನವೆ ಇಲ್ಲವಯ್ಯ. ಎನಗೆ ಭಾವವುಂಟೆಂಬರು ಎನಗೆ ಭಾವ ಮುನ್ನವೆ ಇಲ್ಲವಯ್ಯ. ಅದೇನು ಕಾರಣವೆಂದಡೆ: ಎನ್ನ ಕಾಯ ಜೀವ ಪ್ರಾಣನಾಯಕ ಪರಮೇಶ್ವರ ನೀನಾದ ಕಾರಣ. ಎನಗಿನ್ನಾವ ಭಯವೂ ಇಲ್ಲ ನೋಡಾ. ನಾನು ನಿರ್ಭಯನಾದ ಕಾರಣ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.