ಎನಗೆ ಕಾಯುವುಂಟೆಂಬರು ಕಾಯವನೆಗಿಲ್ಲವಯ್ಯ.

ವಿಕಿಸೋರ್ಸ್ದಿಂದ



Pages   (key to Page Status)   


ಎನಗೆ ಕಾಯುವುಂಟೆಂಬರು ಕಾಯವನೆಗಿಲ್ಲವಯ್ಯ. ಎನಗೆ ಜೀವವುಂಟೆಂಬರು ಎನಗೆ ಜೀವ ಮುನ್ನವೆ ಇಲ್ಲವಯ್ಯ. ಎನಗೆ ಭಾವವುಂಟೆಂಬರು ಎನಗೆ ಭಾವ ಮುನ್ನವೆ ಇಲ್ಲವಯ್ಯ. ಅದೇನು ಕಾರಣವೆಂದಡೆ: ಎನ್ನ ಕಾಯ ಜೀವ ಪ್ರಾಣನಾಯಕ ಪರಮೇಶ್ವರ ನೀನಾದ ಕಾರಣ. ಎನಗಿನ್ನಾವ ಭಯವೂ ಇಲ್ಲ ನೋಡಾ. ನಾನು ನಿರ್ಭಯನಾದ ಕಾರಣ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.