ಎಲೆ ಗುರುಕಾರುಣ್ಯವಾಯಿತ್ತೆಂಬ ಅಣ್ಣಗಳು

ವಿಕಿಸೋರ್ಸ್ದಿಂದ



Pages   (key to Page Status)   


ಎಲೆ ಗುರುಕಾರುಣ್ಯವಾಯಿತ್ತೆಂಬ ಅಣ್ಣಗಳು ನೀವು ಕೇಳಿರೆ :ಶಿವನಾವಕಡೆ ಶಕ್ತಿ ಆವ ಕಡೆ ? ಉತ್ಪತ್ಯವ ಬಲ್ಲರೆ ನೀವು ಹೇಳಿರೆ ! ಶಕ್ತಿಯ ಮೇಲೆ ಸಾಹಿತ್ಯವ ಮಾಡಿಕೊಟ್ಟನಲ್ಲಾ ನಿಮ್ಮ ಗುರು. ಶಿವನ ಶಿವಂಗರ್ಪಿಸುವ ಪರಿಯೆಂತೊ ? ಶಿವ ನಷ್ಟ
ಶಕ್ತಿ ನಷ್ಟ
ಈ ಉಭಯಸ್ಥಳವನರಿದಡೆ ಕೂಡಲಚೆನ್ನಸಂಗಾ ನೀನೆಂಬೆನು.