Transclusion_Status_Detection_Tool

ಒಡಲು ಉಮಾಪತಿಯಲ್ಲಿ ನಿಂದು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಒಡಲು ಉಮಾಪತಿಯಲ್ಲಿ ನಿಂದು ಮನವು ಮಾರಾರಿಯಲ್ಲಿ ಬಲಿದು ನಿಂದ ಕಾರಣ ತನುಮನದ ತಾಮಸದ ತವಕ ಮುರಿದೋಡಿತ್ತು ನೋಡಾ. ಜೀವ ಪ್ರಣವವನಪ್ಪಿ ಪರಮಾತ್ಮ ಸ್ವರೂಪು ಕೃತ ನಿಶ್ಚಯವಾಗಿ ಪ್ರಪಂಚ ತಲೆದೋರಲೀಯದು ನೋಡಾ. ಭಾವ ಬ್ರಹ್ಮವನಪ್ಪಿ ದೇಹ ಭಾವಂಗಳನೆಲ್ಲಾ ಕೊಡಹಿತ್ತು ನೋಡಾ. ದೇಹ ಮೋಹವಳಿದು ಸರ್ವಾಂಗವು ಲಿಂಗನಿಷೆ*ಯಲ್ಲಿ ಲೀಯವಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.