Transclusion_Status_Detection_Tool

ಕಂಥೆ ಖಟ್ವಾಂಗ ದಂಡ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಕಂಥೆ ಖಟ್ವಾಂಗ ದಂಡ ಕಮಂಡಲ ಗುಂಡುಗಪ್ಪರದ ಜೋಳಿಗೆ ಕಾಮಾಕ್ಷಿ ಇವು ಪಂಚಮುದ್ರೆ ಪರಿಪೂರ್ಣಸ್ಥಲಕುಳವೆಂದು ನುಡಿದುಕೊಂಡು ನಡೆವರಯ್ಯ. ಜೀವವೆಂಬುದು ಹಾರಿ ಕಾಯವೆಂಬ ಕಂಥೆಯ ತಡೆಗೆಡೆದು ಮೆಟ್ಟಿ ಮೆಟ್ಟಿ ಹೂಳುವಲ್ಲಿ ಬಿಟ್ಟು ಹೋಹ ಪ್ರಾಣಕ್ಕೆ ಆವುದು ಕಂಥೆ? ಆವುದು ಖಟ್ವಾಂಗ? ಆವುದು ದಂಡ? ಆವುದು ಕಮಂಡಲ? ಆವುದು ಗುಂಡುಗಪ್ಪರದ ಜೋಳಿಗೆ? ಆವುದು ಕಾಮಾಕ್ಷಿ? ಈ ಸ್ಥಲಕುಳದ ನಿರ್ಣಯವ ಬಲ್ಲರೆ ಹಿರಿಯರೆಂದೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.