ಕನ್ನಡ ಸಾಹಿತ್ಯ ಚಿತ್ರಗಳು

ವಿಕಿಸೋರ್ಸ್ದಿಂದ

ಕನ್ನಡ ಸಾಹಿತ್ಯ ಚಿತ್ರಗಳು
by ಎಲ್. ಗುಂಡಪ್ಪ

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

ಕನ್ನಡ ಸಾಹಿತ್ಯ ಚಿತ್ರಗಳು

ಮೊದಲನೆಯ ಸಾಲು

(ಕಥೆಗಳು)

ಎಲ್.ಗುಂಡಪ್ಪ, ಎಂ. ಎ.

ಪ್ರಕಾಶಕರು:
ಎಸ್.ಎಸ್.ಎನ್.ಬುಕ್ ಡಿಪೋ,
ಸಿಟಿ ಮಾರ್ಕೇಟ್, ಬೆಂಗಳೂರು ಸಿಟಿ


ಹಕ್ಕುಗಳನ್ನೆಲ್ಲ ಗ್ರಂಥಕರ್ತರಿಗೇ ಕಾದಿರಿಸಿದೆ

ಬೆಲೆ ಒಂದೂ ಕಾಲು ರೂಪಾಯಿ

ಮುದ್ರಕರು
ಎಚ್. ಎಲ್. ಪ್ರಸಾದ್,
ಟೌನ್ ಪ್ರೆಸ್, ಬೆಂಗಳೂರು ಸಿಟಿ

ಕನ್ನಡದ


ಅಮೃತ ಪುತ್ರನಿಗೆ

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮುಕ್ತಿಯ
ಗಳಿಸಿಕೊಂಡರೆ ಸಾಲದೇ ?

- ಅನುಭವಾಮೃತ

ಅರಿಕೆ[ಸಂಪಾದಿಸಿ]

ಮನಸ್ಸನ್ನು ನಲಿಸಿ ಹೃದಯವನ್ನು ಹಿಗ್ಗಿಸಿ ಬುದ್ಧಿಯನ್ನು ತಿದ್ದಿ ಬಾಳನ್ನು ಬೆಳಗಿಸಲು ಸಾಹಿತ್ಯ ಉತ್ತಮ ಸಾಧನ. ಸಾಹಿತ್ಯ ಪರಿಚಯ ದಿಂದ ದೊರಕುವ ಸಂಸ್ಕಾರ ಮಾನವನನ್ನು “ಧನ್ಯನನ್ನಾಗಿ ಮಾಡುತ್ತದೆ. ಸಾಹಿತ್ಯಕ್ಕೆ ಶಾಶ್ವತವಾದ ಒಂದು ಬೆಲೆಯಿದೆ ; ಶಕ್ತಿಯಿದೆ. ಕಾಲ ದೇಶ ಭೇದದಿಂದ ಅದಕ್ಕೆ ಚ್ಯುತಿಯಿಲ್ಲ. ಅದನ್ನು ಅರಿತು ಗುರುತಿಸಿ ಬಳಸಿಕೊಳ್ಳುವುದು ಸಾಹಿತ್ಯ ವ್ಯಾಸಂಗದ ಗುರಿ. ಜನದ ಕರ್ತವ್ಯ.

ನಾಡಿನ ಪುನರುಜ್ಜಿವನಸಾಧನೆಯಲ್ಲಿ ಸಾಹಿತ್ಯದ ಪಾತ್ರ ಕಿಂದಲ್ಲ, ಬಹು ಹಿರಿದು. ಅದಕ್ಕೇ ಅಗ್ರಸ್ಥಾನವೆಂದರೂ ಸಲ್ಲುತ್ತದೆ. ಹೊಸಕಾಲದ ಸಾಹಿತ್ಯ ಹಲವು ಬಗೆಯಲ್ಲಿ ಹೊರಹೊಮ್ಮಿ ಹರಿಯುತ್ತಿದೆ. ಜನ ಇದನ್ನು ಸುಲಭವಾಗಿ ಅರಿಯಬಲ್ಲರು. ಆದರೆ ಹಳೆಯ ಸಾಹಿತ್ಯ ಬಹು ಜನಕ್ಕೆ ನಿಲುಕದು. ಈಗಿನ ಎಷ್ಟೋ ಮಂದಿಗೆ ಅದರಲ್ಲಿ ಏನಿದೆಯೆಂಬುದೇ ತಿಳಿ ಅಪರಿಚಯದಿಂದಾಗಿ ಹಳೆಯ ಸಾಹಿತ್ಯದಲ್ಲಿ ಹುರುಳಿಲ್ಲ ಎಂಬ ಹಳಿವಿನ ಮಾತು ಅಲ್ಲಲ್ಲಿ, ಆಗಾಗ ಕೇಳಬರುತ್ತಿದೆ.

ಹಳೆಯ ಸಾಹಿತ್ಯ ನೆಲದೊಳಗೆ ಮರೆಯಾಗಿರುವ ಮರದ ಬೇರಿನಂತೆ, ಚಿಗುರು ಹೂವು ಹಣ್ಣುಗಳನ್ನು ಕಂಡುಂಡು ತಣಿಯುವವರು ಬೇರನ್ನು ಮರೆಯುವುದು ಸಹಜ ; ಸರಿಯಲ್ಲ. ಹಳೆಯ ಸಾಹಿತ್ಯದ ಪರಿಚಯ ಅಭ್ಯಾಸಗಳಿಗೆ ಜನರ ಆಸೆಯೂ ಪ್ರಯತ್ನವೂ ಹಚ್ಚ ಬೇಕೆಂಬುದು ನಿಜ, ಅಭ್ಯಾಸಿಗಳಿಗೆ ತಕ್ಕ ಸಹಾಯ ಸಲಕರಣೆಗಳನ್ನು ಒದಗಿಸಿ ಕೊಡ ಬೇಕಾದ್ದು ಅಗತ್ಯವೆಂಬುದೂ ಅಷ್ಟೇ ನಿಜ. ಈಗ ನಾನು ಕೈಕೊಂಡಿರು ವುದು ಅವರಿಗೆ ನೆರವು ಕೊಡುವ ಒಂದು ಪ್ರಯತ್ನ.

ಕನ್ನಡದ ಹಳೆಯ ಸಾಹಿತ್ಯ ರಾಶಿಯಿಂದ ಅದರ ನಾನಾಮುಖಗಳೂ ತೋರಿಬರುವಂತೆ ಸುಮಾರು ನೂರು ಚಿತ್ರಗಳನ್ನು ಆಯ್ದು ಐದಾರು ಸಾಲುಗಳಲ್ಲಿ ಅಳವಡಿಸಿ ಕೊಡಬೇಕೆಂಬುದು ನನ್ನ ಉದ್ದೇಶ. ಕವಿಯ ನಿರೂಪಣ ಕ್ರಮವನ್ನನುಸರಿಸಿ ಸಾಧ್ಯವಾದ ಮಟ್ಟಿಗೂ ಅವನ ಮಾತುಗಳನ್ನೇ ಬಳಸಿಕೊಂಡು ಈಗಿನ ರೂಪದಲ್ಲಿ ಈಗಿನವರಿಗೆ ಅರ್ಥ ವಾಗುವಂತೆ ಬರೆಯುವುದು ನನ್ನ ರೀತಿ. ಮುಖ್ಯವಾಗಿ ವಿದ್ಯಾರ್ಥಿಗಳಿಗೂ, ಜೀವನಕ್ಕಾಗಿ ಹಲವು ವೃತ್ತಿಗಳಲ್ಲಿ ತೊಡಗಿ ಸಾಹಿತ್ಯಾಭ್ಯಾಸಕ್ಕೆ ಹೆಚ್ಚು ಬಿಡುವಿಲ್ಲದಿರುವ ಸಾಮಾನ್ಯ ವಿದ್ಯಾನ ನರ್ತ ಈ ಪ್ರಯತ್ನದಿಂದ ಸಹಾಯವಾಗಬಹುದೆಂದು ನಂಬಿದ್ದೇನೆ.

ಸರಳತೆಗಾಗಿ ಇಲ್ಲಿ ಉದಾಹರಿಸಿರುವ ಪದ್ಯಗಳಲ್ಲಿ 'ಅ'ಕಾರ * ಆ ಕಾರಗಳನ್ನು ಉಪಯೋಗಿಸಿಲ್ಲ. ಅದಕ್ಕೆ ಬದಲಾಗಿ 1 ರ 'ಕಾರ - ಛ 'ಕಾರ ಗಳನ್ನೆ ಬಳಸಿದೆ.


ಈ ಕೆಲಸ ಮಾಡಬೇಕೆಂದು ನಾಲೈದು ವರ್ಷಗಳಿಂದಲೂ ಆಲೋಚಿಸುತ್ತಿದ್ದೆನಾದ ಇಬ್ಬರು ಮಾನ್ಯ ಮಿತ್ರರ ಪ್ರೋತ್ಸಾಹದಿಂದ ಈಗ ಇದು ಕಾರ್ಯರೂಪಕ್ಕೆ ಬಂತು. ಶ್ರೀ ಎಂ. ವಿ. ಸೀತಾರಾಮಯ್ಯ ಎಂ.ಎ., ಆವರು ಒಳ್ಳೆಯ ಚಿತ್ರ ಬರೆದುಕೊಟ್ಟು ಪುಸ್ತಕದ ಅಂದವನ್ನು ಹೆಚ್ಚಿಸಿದ್ದಾರೆ. ಇವರಿಗೆ ವಂದನೆಗಳು.

ಬೆಂಗಳೂರು
೨೪-೩-೧೯೪೫

ಎಲ್. ಗುಂಡಪ್ಪ

ಎನಿತನೊರಟ್ಟು ಸೇಟ್ಟಿ ಕಸಿಯೆನನ್ ಅವರ ಹೆಸರಿಟ್ಟು, ಮಚ್ಚ
೪ನನರಸಿನೇಳು ದವನಂ ಜಗದೊಳ್ ಪಡೆ ಆರು ಬಾರದಾ
ತನ ಮುಖದಿಂದಲ್ಲದದು ಸಲ್ಲದು ಕಟ್ಟಿಯುಮನೊ ಮಾಲೆಗಾ
ರನ ಪೊಸಬಾಸಿಗ, ಮುದಿವ ಭೋಗಿಗಳಿಲ್ಲದೆ ಬಾಡಿಪೋಗದೇ

–ಜನ್ನ

[ಎಷ್ಟು ಅಕ್ಕರೆಯಿಂದ ಹೇಳಿದರೆ ತಾನೆ ಕವಿ ಏನು ಮಾಡಿ ತಾನು ? ಅವನ ಕೃತಿಯ ಗುಣವನ್ನು ಗುರುತಿಸಿ ತಿಳಿದು ಮುಚ್ಚ ಬನವನ್ನು ಹುಡುಕಲೇ ಬೇಕು, ಲೋಕದಲ್ಲಿ ಅಂಥವನನ್ನು ತಡೆಯುವುದು ಬಹು ಕಷ್ಟ, ಬಂದಲ್ಲದೆ ಕವಿಕೃತಿಯ ಗುಣ ಗೊತ್ತಾಗುವುದಿಲ್ಲ ; ಕೃತಿಗೆ ಸಾರ್ಥಕ್ಕೆ ಬರುವು ದಿಲ್ಲ. ಪಾಳೆಗಾರ ಹೂವಿನ ಹೊಸ ಟಾಸಿಗಳನ್ನು ಕದರೆ ತಾನೆ ಏನು ? ಮುಡಿ ಯುವ ಭೋಗಿಗಳಿಲ್ಲದಿದ್ದರೆ ಆ ಜ) ಹಾಗೆಯೆ) ಬಾಡಿಹೋಗುವುದಿಲ್ಲನೆ ?]

ಪರಿವಿಡಿ[ಸಂಪಾದಿಸಿ]

೧ ವಿದ್ಯುಚ್ಚೋರನೆಂಬ ಋಷಿಯ ಕಥೆ

೨ ಭರತ-ಬಾಹುಬಳಿ

೩ ಕಣ್ಣಪ್ಪ

೪ ಕಿನ್ನರ ಬೊಮ್ಮಯ್ಯ

೫ ಉತ್ತರ ಕುಮಾರ

೬ ನಿಶ್ಚಂಕೆಯ ಕಥೆ

ಲಲಿತಾಂಗ
ವಿಶ್ವಾನುಲೋಮ

೭ ತಾಂಡವ ಮುನಿ

೮ ಕೋಳೂರು ಕೊಡಗೂಸು

ಅರ್ಥಕೋಶ

ಟಿಪ್ಪಣಿ

ಕನ್ನಡ ಸಾಹಿತ್ಯ ಚಿತ್ರಗಳು[ಸಂಪಾದಿಸಿ]

ವಿದ್ಯುಚ್ಚೋರನೆಂಬ ಋಷಿಯ ಕಥೆ[ಸಂಪಾದಿಸಿ]

ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಏದೇಹವೆಂಬುದು ನಾಡು, ಅಲ್ಲಿ ಮಿಥಿಳೆಯೆಂಬುದು ಪಟ್ಟಣ. ಅದನ್ನಾಳುವವನು ವಾಮರಥನೆಂಬ ಆತನ ಮಹಾದೇವಿ ಬಂಧುಮತಿಯೆಂಬವಳು, ವಿಷಯ ಭೋಗಗಳನ್ನು ಅನುಭವಿಸುತ್ತ ಸುಖವಾಗಿದ್ದರು.

ಆ ಪಟ್ಟಣದಲ್ಲಿ ಯಮದಂಡನೆಂಬವನು ತಳಾರ. ಅಲ್ಲಿ ವಿದ್ಯುಚ್ಚೋರನೆಂಬೊಬ್ಬ ಕಳ್ಳ, ಆ ಕಳ್ಳನು ಬಗೆಬಗೆಯ ತಸ್ಕರಶಾಸ್ತ್ರಗಳಲ್ಲಿ ಬಹು ಕುಶಲನಾದವನು. ಪಟ್ಟಣದ ಬೆಲೆ ಬಾಳುವ ವಸ್ತುಗಳನ್ನು ಇರು ಬೆಲ್ಲ ಕದಿಯುವನು. ಕದ್ದು, ಪಟ್ಟಣಕ್ಕೆ ಸ್ವಲ್ಪ ದೂರದಲ್ಲಿ ಒಂದು ಪರ್ವತ ವುಂಟು. ಅದರಲ್ಲಿ ದೊಡ್ಡದೊಂದು ಗುಹೆಯುಂಟು. ಇದರೊಳಗೆ ಕದ್ದ ವಸ್ತುಗಳನ್ನೆಲ್ಲ ಹೂಳಿಟ್ಟು ಗುಹೆಯ ಬಾಗಿಲನ್ನು ದೊಡ್ಡದೊಂದು ಶಿಲೆಯಿಂದ ಮುಚ್ಚಿ ಬರುವನು. ಹಗಲೆಲ್ಲ ಹಾಳು ದೇಗುಲದಲ್ಲಿ ಅಂಜನ ಎಚ್ಚಿ ವೇಷ ಮರಸಿಕೊಂಡಿರುವನು: ಮೈಯೆಲ್ಲ ತೊನ್ನು ; ಮುರುಟಿದ ಕೈಕಾಲುಗಳು ; ಮೂಗು ಒಳಕ್ಕಿಳಿದು ಲಸಿಗೆ ಸುರಿಯುವುದು ; ನೊಣ ಮುಸುರಿಕೊಂಡು ತನ್ನು ತಿರುವುವು; ನೋಡಿದವರೆಲ್ಲ ಹೇಸುವರು. ಹೀಗೆ ಏಕಾರ ವೇಷದಿಂದ ಮನೆಮನೆಗೂ ಅಲೆದು ಭಿಕ್ಷೆ ಬೇಡುತ್ತ, ತಾನು ತೊನ್ನನೆಂಬುದನ್ನು ತೋರಿಸಿಕೊಳ್ಳುತ್ತಿರುವನು. ಹಗಲೆಲ್ಲ ಹೀಗಿದ್ದು ರಾತ್ರಿಯಾದ ಮೇಲೆ ತನ್ನ ಸ್ವಾಭಾವಿಕವಾದ ಮೊದಲಿನ ದಿವ್ಯ ರೂಪನ್ನು ಕೈಕೊಂಡು ಪಟ್ಟಿ ಬಟ್ಟೆ ಯನ್ನುಟ್ಟು ಗಂಧ ಹಚ್ಚಿ ಹೂವು ಮುಡಿದು ಕರ್ಪೂರಸೇರಿಸಿವ ತಾಂಬೂಲ ವನ್ನು ಮೆಲ್ಲುತ್ತ ಸೂಳೆಗೇರಿಗಳಲ್ಲಿ ಸುಳಿಯುವನು, ಹಣವನ್ನು ವೆಚ್ಚ ಮಾಡಿ ಇಷ್ಟವಾದ ಭೋಗವನ್ನನುಭವಿಸುವನು, ಯಾರೂ ಅರಿಯದಂತಿದ್ದು ಅಧಿ ಕಾರಿಗಳು, ಸಾಮಂತರು, ಸೂಳೆಯರು ಮೊದಲಾದವರ ಧನವನ್ನೆಲ್ಲ ಕದ್ದು ಗವಿ ಸೇರಿಸುವನು. ________________

ಕನ್ನಡ ಸಾಹಿತ್ಯ ಚಿತ್ರ:ಇಳು ವಾಮರಥನ ವಲಸರುಷನಾದ ಪದ್ಮರಥಗೆ ಕಿಚಂದ್ರನ ಮೆಟ್ಟಿ ಕೊಟ್ಟಿದ್ದ ಸರ್ವರುಜಾಪಹಾರವೆಂಬ ಒಂದು ಸಂ.ಕ್ರಮ ದಿಂದ ವಾಮರಥನಿಗೆ ಬಂದಿತ್ತು, ಅದನ್ನು ಆತನು ಒತವಸದ ಎಳೆದು ಅಂತಸ್ತಿನಲ್ಲಿ ತನ್ನ ಮಲಗುವ ಕೋಣೆಯಲ್ಲಿ ಒಂದು ಪೆಟ್ಟಿಗೆಯಲ್ಲಿರುವನು. ಎಲ್ಲ ಕಾಲದಲ್ಲೂ ಗಂಧ ಪುಷ್ಪ ದೀಪ ಧೂಪ ಅಕ್ಷತಗಳಿಂದ ಪೂಜಿಸಿ ನವ ಸ್ಕಾರ ಮಾಡುತ್ತಿರ.ವನು. ವಿದ್ಯುಜ್ಯೋಬನು ಕಣ್ಣಿಗೆ ಅ೦ಜನ ಎತ್ತಿಕೊಂಡು ಯಾರೂ ತನ್ನನ್ನು ಕಾಣದಂತಾಗಿರಲು ಅರಮನೆಯನ್ನು ಹೊಕ್ಕು ದೊರೆಯ ಮಲಗುವ ಕೋಣೆಗೆ ನುಗ್ಗಿ, ತಲೆದೆಸೆಯಲ್ಲಿ ಪೂಜೆ ಮಾಡಿದ್ದ ಇಟ್ಟಿಗೆಯನ್ನು ತೆರೆದು ಆ ಹಾರವನ್ನು ತೆಗೆದುಕೊಂಡು ಅರಮನೆಯಿಂದ ಹೊರ ಬಿದ್ದು ಹೊ ಊರ ಹೊರಗಿನ ಗುಹೆಯಲ್ಲಿ ಹೂಳಿಟ್ಟ, ಪಟ್ಟಣಕ್ಕೆ ಬಂದು ಮೊದಲಿ ನಂತೆಯೆ ತೊನ್ನು ರೂಪು ಮಾಡಿಕೊಂಡಿದ್ದನು. ಇತ್ತ ಅರಸನು ನಸರು ಮಡಿವಾಗ ಹಾರವನ್ನು ಕಣಜಿ, ಆಸ್ವಾನ ಮಂಟಪದಲ್ಲಿ ಸಿಂಹಾಸದನ ಮೇಲೆ ಕೂತು ತಳ: ರನದ ಯಮದಂಡನಿಗೆ ಹೇಳಿಕಳಿಸಿ ಕರಸಿದನು. ಕರಸಿ, " ಎಲವೋ ಯಮದಂಡಾ, ಪಟ್ಟಣದ ಹಾರುವರ, ಹರದರ, ಸೂಳೆಯರ, ಒಕ್ಕಲಮಕ್ಕಳ ಒಡವೆಯನ್ನೆಲ್ಲ ಕದ್ದರೂ ವಿಚಾರಿಸದೆ ಸುಮ್ಮನಿದ್ದಿದೆ. ಅಲ್ಲದೆ ನಮ್ಮ ಸಚ್ಚೆಮಯ ಕಳ್ಳನು ಹೋಕು ಪೆಟಕಿ ತೆರೆದು ಒಚ್ಚು ತೇ೦ದ್ರ ಕುಲಭವಾದ ಮಾಗ್ರವನ್ನು $ಗೆದ ಕೊಂಡು ಹೋವನು, ಬೇಗ ಕಳ್ಳನನ್ನು ಗೋವ: ಸಾರವನ್ನು ತೆಗೆದ ಕೊಂಡು ಬಾ ತಾಗೆ ತರದಿದ್ದರೆ ಕಳ್ಳನಿಗೆ ತಕ್ಕ ಸಿಗ್ರಹವನ್ನು ನಿನಗೆ ಮಾಡುವೆನು ?? ಎಂದನು. ಕೇಳಿ ತಳರನು, “ ದೇವಾ ನನಗೆ ಏಳು ದಿನ ಅವಕಾಶ ಕೊಡಬೇಕು, ಏಳು ದಿವಸದೊಳಗೆ ಕಳ್ಳನನ್ನು ಕಂಡುಹಿಡಿಯದೆ ಹೋದೆನ:ದರೆ, ದೇವರು ನನ್ನನ್ನು ಮೆಚ್ಚಿದಂತೆ ಮಾಡಬಹುದು ” ಎಂದನು. ದೊರೆ ಆದಕೊಪ್ಪಿದನು. - ತಳಾರನು ಪಟ್ಟಣದಲ್ಲಿ ಸೂಳೆಗೇರಿಗಳಲ್ಲೂ ಅಂಗಡಿಗಳಲ್ಲ ಬಸದಿ ಗಳಲ್ಲೂ ವಿಹಾರಗಳಲ್ಲೂ ಕೇಶಿರ್ಕೆರಿಗಳಲ್ಲಿ ಆರಾಮಗಳಲ್ಲಿ ದೇವಾ ಲಯಗಳ ಪಟ್ಟಣದ ಹೊರಗೂ ಒಳಗೂ, ಅಕ್ಕಪಕ್ಕದ ಪಟ್ಟಣಗಳ ಸ್ಥಿರ. ________________

1 ವಿದು ಚೋರನೆಂಬ ಋಷಿಯ ಕಥೆ ಆರು ದಿವಸದ ವರೆಗೂ ಎಡೆಬಿಡದೆ ಹುಡುಕಿದನು. ಕಳ್ಳನನ್ನು ಎಲ್ಲಿಯೂ ಕಾಣಲಿಲ್ಲ. ಏಳನೆಯ ದಿವಸ ಹಾಳು ದೇಗುಲದಲ್ಲಿದ್ದ ತೊನ್ನನು ಹೋಗು ವಾಗ ಸ್ವಲ್ಪ ದೊಡ್ಡದಾದ ಒಂದು ಸಿಕ್ಕ ಹಬ್ಬವನ್ನು ದಾರಿಯಲ್ಲಿ ಕಂಡು ಇದನ್ನು ವಿದ್ಯಾಧರ ಕರಣದಿಂದ ಹಾರಿ ಹೋದನು. ಯಮದಂಡನು ದೂರ ದಲ್ಲಿದ್ದು ಅದನ್ನು ಕಡನು, ಕಂಡು ಇವನೇ ಕಳ್ಳನೆಂದು ನಿನ್ನಯಿಸಿ ಹಿಡಿದುಕೊಂಡು ಅವನ: ಹುಯ್ಯಲಿಡುತ್ತಿದ್ದರೂ ಬಿಡದೆ ಅವನನ್ನು ಅರಮನೆಗೆ ಎಳೆದುಕೊಂಡು ಹೋಗಿ, 'ಕಳ್ಳನನ್ನು ತಂದೆ ” ಎಂದು ಅರಸನಿಗೆ ತೋರಿಸಿ, * ಈ ತನೇ ಕಳ್ಳ'ನೆಂದು ಹೇಳಿದನು. ಅದಕ್ಕೆ ತೊನ್ನನು, “ ದೇವಾ, ನಾನು ಕಳ್ಳನಲ್ಲ. ಇದನ್ನು ಪಟ್ಟಣವಲ್ಲ ಬಲ್ಲದು. ಕಳ್ಳನನ್ನು ಕಂಡುಹಿಡಿಯಲಾರದೆ ನನ್ನ ಸಾವಿಗೆ ಅ೦ಜಿ, ಈ ಬಡ ಸರದೇಶಿಯನ್ನು, ಪಟ್ಟಣದಲ್ಲಿ ತಿರಿದುಂಡು ಬಾಳುವ ನನ್ನನ್ನು ಹಿಡಿದು ಕೊಂಡು ಬಂದು ಕೊಲ್ಲಿಸುತ್ತಾನೆ” ಎಂದನು. ತಳರನು ಕಳ್ಳರನ್ನು ಕಂಡು ಹಿಡಿಯುವ ಶಾಸ್ತ್ರಗಳಲ್ಲಿ ಬಹಳ ಕುಶಲನಾದವನು. ಆದ್ದರಿಂದ ಅವನು ದೊರೆಗೆ * ಇವನು ರೂಪ ಮರೆಸಿಕೊಂಡು ರಾತ್ರಿ ಹೊತ್ತು ಪಟ್ಟಣದಲ್ಲೆಲ್ಲ ಕದ್ದು ಹಗಲು ಈ ರೀತಿ ತೊನ್ನನಾಗಿರುತ್ತಾರೆ. ನೀವು ನಂಬದಿದ್ದರೆ ನಂಬುವಂತೆ ಮಾಡಿ ತೋರಿಸುತ್ತೇನೆ” ಎಂದನು. ಹಾಗೆಂದು ಪ್ರತಿಘುಟಿಕಾಂಜನಗಳನ್ನು ತೊನ್ನನ ಕಣ್ಣಿಗೆ ಎಚ್ಚಿದನು. ಕೂಡಲೆ ದಿವ್ಯವಾದ ಮೊದಲಿನ ರೂಪುಂಟಾ ಯತು. ಆಗ ಕಳ್ಳನು, “ ಇವನು ಮೋಸಗಾರ, ಇಂದ್ರಜಾಲಗಳನ್ನು ಬಲ್ಲವ ನಾದ್ದರಿಂದ ಎಲ್ಲಾ ರೂಪಗಳನ್ನೂ ಮಾಡಬಲ್ಲ ” ಎಂದು ವಾದಿಸಿದನು. ತಳಾರನು, ” ಬೇರೆಯವರಿಗೂ ಮಾಡಿ ನಂಬಿಕೆ ತೋರಿಸುತ್ತೇನೆ” ಎಂದು ನುಡಿದನು, ಅರಸನ ಅಪ್ಪಣೆ ಪಡೆದು ಅರಸಿಯರ ಮತ್ತು ಸೂಳೆಯರ ಕಣ್ಣುಗಳಿಗೆ ಅಂಜನವನ್ನ ಚ್ಚಿದನು. ಅವರೆಲ್ಲ ತೊನ್ನೆಯರಾದರು. ಬಳಿಕ ಪ್ರತಿಘುಟಿಕಾಂಜನಗಳನ್ನೆ ಬೈಲು ಅವರು ಸ್ವಾಭಾವಿಕವಾದ ತಮ್ಮ ರೂಪನ್ನು ಪಡೆದರು. - ಅದನ್ನು ಕಂಡು ಅರಸನಿಗೆ ನಂಬಿಕೆಯಾಯಿತು. ಇವನೇ ಕಳ್ಳ.

  • ಏದ್ಯಾಥರಿತ ಹಾಗೆ ಕೌಶದಲ್ಲಿ ಹೋಗುವ ಒಂಭು ವಿದ್ಯ, ________________

ಕನ್ನಡ ಸಾಹಿತ್ಯ ಚಿತ್ರಗಳು ಇವನನ್ನು ದಂಡಿಸು ” ಎಂದು ಯಮದಂಡನಿಗೆ ಅಪ್ಪಣೆಮಾಡಿದನು, ಅವನು ಕಳ್ಳನನ್ನು ತನ್ನ ಜೊತೆಯಲ್ಲಿ ಮನೆಗೆ ಕರೆದುಕೊಂಡು ಹೋಗಿ, ಮಾಘಮಾಸದ ರಾತ್ರಿಯಲ್ಲಿ ಅತಿ ಶೀತದಲ್ಲಿ ಘೋರವಾದ ಮೂವತ್ತೆರಡು ಬಗೆಯ ದಂಡನೆ ಗಳಿಂದ ಬಹು ದೀರ್ಘಕಾಲ ದಂಡಿಸಿದನು. ತೊನ್ನನು ಅವಷ್ಟನ್ನೂ ಸಹಿಸಿ ಕೊಂಡು, “ ನಾನು ಕಳ್ಳನಲ್ಲ. ಅಯ್ಯೋ ! ಬಲ್ಲಾಳನದಿಂದ ಈ ತಳಾರನು ನನ್ನನ್ನು ಕೊಲ್ಲುತ್ತಾನೆ ” ಎಂದು ಕಿರಿಚಿ ಹುಯ್ಯಲಿಟ್ಟನು. ಇಳಾರನಿಗೆ * ಇವನು ಕಳ್ಳನಲ್ಲ ' ಎಂಬ ಒಂದು ನಂಬಿಕೆಯಾಯಿತು. ಬೆಳಗಾಗಲು ಅರಮನೆಗೆ ಹೋಗಿ ದೊರೆಯನ್ನು ಕಂಡು, ' ದೇವಾ, ಮೂವತ್ತೆರಡು ಬಗೆಯ ಘೋರದಂಡನೆಗಳಿಂದಲೂ ದಂಡಿಸಿ ನೋಡಿದೆನು. ಇವನು ಕಳ್ಳನಲ್ಲ. ನನ್ನನ್ನು ದೇವರು ಮೆಚ್ಚಿದಂತೆ ಮಾಡಬಹುದು” ಎಂದು ಬಿನ್ನಯಿಸಿವನು, ಅರಸನು, “ ಯಮದಂಡನನ್ನು ಸ್ಮಶಾನದಲ್ಲಿ ಶೂಲಕ್ಕೆ ಹಾಕಿ ” ಎಂದು ಆಳುಗಳಿಗೆ ಅಪ್ಪಣೆ ಮಾಡಿದನು. ಅವರು ಆತನನ್ನು ಸ್ಮಶಾ ನಕ್ಕೆ ಎಳೆದುಕೊಂಡು ಹೋಗಿ ಶೂಲದ ಮೇಲೇರಿಸಲು ಸಿದ್ದವಾದರು. ಅಷ್ಟರಲ್ಲಿ ಅವರೊಡನೆಯೇ ಹೋಗಿದ್ದ ತೊನ್ನನು ರೂಪನ್ನು ಮಾರ್ಪಡಿಸಿ ಕೊಂಡು ತನ್ನ ಸ್ವಾಭಾವಿಕವಾದ ವಿದ್ಯುಚೊರನ ದಿವ್ಯ ರೂಪವನ್ನು ತಾಳಿ ದನು. ತಾಳಿ ಯಮದಂಡನನ್ನು ಶೂಲಕ್ಕೆ ಹಾಕುವುದಕ್ಕೆ ಬಿಡದೆ ಅಡ್ಡ ನಿಂತನು. ಅರಸನ ಕಾಸಿನಾಳುಗಳನ್ನು ಕುರಿತು, " ಎಲೆ ಅಣ್ಣಗಳಿರಾ, ನೀವು ಈತನನ್ನು ಕೊ೦ದಿ. ಈತನು ಶಲದಲ್ಲಿ ಹಾಕಲ್ಪಟ್ಟವನಾಗಿ ಸತ್ತವನೇ ?? ಎಂದು ನುಡಿದನು. ಆ ಬಳಿಕ ಇಳಾರನನ್ನು ಮಾತಾಡಿಸಿದನ: : ( ಎಲಾ ಯಮದಂಡಾ, ನೀನೂ ನಾನೂ ಕಿರಿತನದಲ್ಲಿ ಒಬ್ಬ ಉಪಾಧ್ಯಾಯರ ಬಳಿಯಲ್ಲಿ ಓದುತ್ತಿದ್ದಾಗ ನಂದನವನದೊಳಗೆ ನಾನು ಮಾಡಿದ ಪ್ರತಿಜ್ಞೆಯನ್ನು ನೆನೆದೆಯೋ ? ಒಂದೂ ದೋಷವಿಲ್ಲದೆ ನಿನ್ನನ್ನು ಕೊಲ್ಲಿಸಿದೆನೋ, ಕೊಲ್ಲಿಸಲಿಲ್ಲವೋ ? ಮಾಡಿದ ಪ್ರತಿಜ್ಞೆಯನ್ನು ನೆನೆಯುನೆಯೋ, ನೆನೆಯುವುದಿಲ್ಲವೋ ?” ಎಂದನು. ಯನು ದಂಡನು “ ಚೆನ್ನಾಗಿ ನೆನೆದೆನೆ "ಂದನು. ವಿದ್ಯುಚ್ಚರನು, “ಮತ್ತೀಗ ನೀನೇನು ಸತ್ಯಯೋ, ಸಾಲೆಯೋ; ಮತ್ತೆ (ನೋ ?” ಎಂದನು. ಆಗ ಯಮದಂಡನು “ ದೇವಾ, ನೀನು ಗೆದ್ದೆ; ನಾನು ಸೋತೆ ; ಸು” ಎಂದನು.

          ವಿದ್ಯುಚ್ಚೋರನೆಂಬ ಋಷಿಯ ಕಥೆ      ೫
 
 ಹೀಗೆ ಅವರಿಬ್ಬರೂ ಒಬ್ಬರಿಗೊಬ್ಬರು ಆಡಿಕೊಳ್ಳುತ್ತಿದ್ದ ಮಾತುಗಳನ್ನು ಕಾಲಿನವರೂ ಊರಜನರೂ ಕೇಳಿ ಚೋದ್ಯಪಟ್ಟು  ಬೆರಗಾಗಿದ್ದರು.
  ವಿದ್ಯುಚ್ಚೋರನು ಕಾಪಿನವರಿಗೆ ಹೀಗೆ ಹೇಳಿದನು:"ನನ್ನನ್ನೂ ಈತನ್ನನ್ನೂ ಅರಸನಲ್ಲಿಗೆ ಕರೆದುಕೊಂಡು ಹೋಗಿ.ಅರಸನ ಮುಂದೆ ನನಗೂ ಇವನಿಗೂ ಮಾತುಂಟು.ಅಲ್ಲಿ ಆ ಮಾತಾಡಿದ ಬಳಿಕ ಅರಸನು ಈತನನ್ನು ತನ್ನ ಮನಬಂದಂತೆ ಮಾಡಲಿ.'ಎಂತಾದರೂ,ಕೊಲ್ಲ ಹೇಳಿದರೂ ಮೂರು ಸಲ ಬೆಸಗೊಂಡಲ್ಲದೆ ಕೊಲ್ಲಲಾಗದು'ಎಂದು ನೀತಿಶಾಸ್ತ್ರಗಳಲ್ಲಿ ಹೇಳಿದೆ.ಅದರಿಂದ ನಮ್ಮಿಬ್ಬರನ್ನು ಅರಮನೆಗೆ ಕರೆದುಕೊಂಡು ಹೋಗಿ ಅರಸನಿಗೆ ತೋರಿಸಿ"ಎನ್ನಲಾಗಿ,ಇ ಕಾಪಿನವರು ಇಬ್ಬರನ್ನೂ ಅರಸನ ಬಳಿಗೆ ಕರೆದುಕೊಂಡು ಹೋದರು.ಹೋಗಿ,"ದೇವಾ,ಈತನು ಯಮದಂಡನನ್ನು ಕೊಲ್ಲಬಿಡದೆ ತಡೆದನು"ಎಂದು ಅರಸನು ಕೇಳಲು,ವಿದ್ಯುಚ್ಚೋರನು ಹೇಳತೊಡಗಿದ.
   "ಯಮದಂಡನದೇನೂ ದೋಷವಿಲ್ಲ. ದೇವತಾ ರಕ್ಷಿತವಾದ ಸರ್ವರುಜಾಪಹಾರನೆಂಬ ನಿಮ್ಮ ಹಾರ ಮೊದಲಾಗಿ ಪಟ್ಟಣದ ಒಡವೆಗಳನ್ನೆಲ್ಲ ರಾತ್ರಿಹೊತ್ತು ಈ ರೂಪಿನಲ್ಲಿ ಕದ್ದು,ಹಗಲೆಲ್ಲ ತೊನ್ನವನಾಗಿ ಹಾಳು ದೇಗುಲಲ್ಲಿ ಇರುತ್ತಿದ್ದೆ. ಆದ್ದರಿಂದ ನನ್ನನ್ನು ಕೊಲ್ಲಿ.ಈತನಿಗೇನೂ ದೋಷವಿಲ್ಲ."ಹೀಗೆನ್ನಲು ಅರಸನು,"ಆ ಕದ್ದ ಒಡವೆಯನ್ನೆಲ್ಲ ಏನು ಮಾಡಿದೆ?"ಎಂದು ಕೇಳಿದನು."ಅಷ್ಟೂ ಇದೆ.ಐದಾರು ಸಾವಿರ ದೀನರ ವೆಚ್ಚವಾಗಿದೆ.ಉಳಿದದ್ದೆಲ್ಲ ಅಚ್ಚಳಿಯದೆ ಇದೆ"ಎಂದನು.ದೊರೆ,"ಹಾಗಾದರೆ,ಹಾರವನ್ನು ತೆಗೆದುಕೊಂಡು ಬಾ.ಪಟ್ಟಣದವರಿಗೂ ಅವರವರ ಒಡವೆಗಳನ್ನಿಟ್ಟಿರುವ ಸ್ಥಳವನ್ನು ತೋರಿಸಿ"ಎಂದು ಅಪ್ಪಣೆ ಮಾಡಿ ಪಟ್ಟಣದ ಜನಗಳನ್ನೂ ಅವನೊಡನೆ ಕಳಿಸಿದನು.
     ಅವರೆಲ್ಲ ಕಾಪಿನೊಡನೆ ಹೊರಟರು.ವಿದ್ಯುಚ್ಚೋರನು ಅವರೊಡನೆ ಹೋಗಿ ಗುಹೆಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಶಿಲೆಯನ್ನು ತೆಗೆದುಹಾಕಿ ಹೊಳಹೊಕ್ಕು ಹಾರವನ್ನು ತೆಗೆದುಕೊಂಡು ಪಟ್ಟಣದ ಜನಕ್ಕೆಲ್ಲ,"ನಿಮ್ಮ ನಿಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಳ್ಳಿ.ಒಬ್ಬರದೊಬ್ಬರಿಗೆ ಪಲ್ಲಟಿಸ 
೬         ಕನ್ನಡ ಸಾಹಿತ್ಯ ಚಿತ್ರಗಹಳು 
   ದಂತೆ ನೋಡಿಕೊಳ್ಳಿ"ಎಂದು ತೋರಿಸಿದನು.ಅವರೆಲ್ಲ ತಮ್ಮ ತಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಂಡರು.
     ಆಮೇಲೆ ವಿದ್ಯುಚ್ಚೋರನು ಹಾರವನ್ನು    ತೆಗೆದುಕೊಂಡು ಹೋಗಿ ದೊರೆಗೆ ಒಪ್ಪಿಸಿದನು.ಆಗ ಆತನ"ಮಾಘಮಾಸದ ರಾತ್ರಿಯಲ್ಲಿ,ನಾಲ್ಕು ಚಾವದಲ್ಲಿಯೂ ಘೋರವಾದ ಮೂವತ್ತೆರೆಡು ದಂಡೆಗಳನ್ನು ಹೇಗೆ ಸೈರಿಸಿದೆ?"ಎಂದು ಕೇಳಿದನು.ಅದಕ್ಕೆ ವಿದ್ಯುಚ್ಚೋರನಿಂತೆಂದನು:
      "ದೇವಾ,ಕಿರಿಯವನಾಗಿದ್ದಾಗ ಒಂದು ದಿವಸ ನನ್ನನ್ನು ಓದಿಸುವ ಓಜರೊಡನೆ ಸಹಸ್ರಕೂಟ ಚೈತ್ಯಾಲಯಕ್ಕೆ ನಾನೂ ಹೋಗಿದ್ದೆ.ಓಜರು ದೇವರನ್ನು ವಂದಿಸಿಹೋದರು.ಅವರು ಬರುವವರೆಗೂ ನಾನು ಚರಿತ್ರೆ ಪುರಾಣಗಳನ್ನು ವ್ಯಾಖ್ಯಾನ ಮಾಡುತ್ತಿದ್ದೆ ಶಿವಗುಪ್ತರೆಂಬ ಆಚಾರ್ಯರ ಹತ್ತಿರ ಕುಳಿತಿದ್ದು ಅವರ ವ್ಯಾಖ್ಯಾನವನ್ನು ಕೇಳುತ್ತದ್ದೆ. ಅವರು ಹೀಗೆ ಹೇಳುತ್ತಿದ್ದರು:'ವ್ರತ ಶೀಲ ಚಾರಿತ್ರ ಗುಣಗಳಲ್ಲದವರು,ಜೀವಗಳನ್ನು ಕೊಲ್ಲುವವರು,ಬೇಟೆಯಾಡುವವರು,ರಾಗ ದ್ವೇಷ ರೋಭಗಳಿಂದ ಸುಳ್ಳಾಡುವವರು,ಜೀವಿಗಳಿಗೆ ಸಂತಾನವನ್ನೂ ವಧೆಯನ್ನೂ ಮಾಡುವವರು,ಮಧ್ಯ ಮಾಂಸಗಳನ್ನು ಸೇವಿಸುವವರು-ಇವರೇ ಮೊದಲಾದವರೆಲ್ಲ ನರಕಗಳಲ್ಲಿ ಹುಟ್ಟಿ ದುಃಖವನ್ನನುಭವಿಸುತ್ತಾರೆ'ಎಂದು ಹೇಳಿ ಆ ನರಕ ದುಃಖಗಳನ್ನೆಲ್ಲ ವಿವರಿಸಿದರು.ಮುಂದುವರಿಸಿ,'ಮತ್ತೂ ದಾನ,ಪೂಜೆ,ಶೀಲ,ಉಪವಾಸ-ಎಂಬ ಈ ನಾಲ್ಕು ಬಗೆಯ ಶ್ರಾವಕ ಧರ್ಮಗಳನ್ನು ನಡೆಸುವವರೂ,ತಪಸ್ಸು ಮಾಡುವವರೂ,ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯುತ್ತಾರೆ'ಎಂದು ಹೇಳಿದರು.ಅದನ್ನು ಕೇಳಿ ಆ ಭಟಾರರ ಪಕ್ಕದಲ್ಲಿ ಶ್ರಾವಕ ಧರ್ಮಗಳನ್ನು ಕೈಕೊಂಡನು.'ಅಂತರಂಗ ಬಹಿರಂಗಗಳಲ್ಲಿ ಯಾವ ಪರಿಗ್ರಹವೂ ಇಲ್ಲದಿರುವುದೇ ತಪಸ್ಸು'ಎಂಬಿವೇ ಮೊದಲಾದ ತತ್ತ್ವಗಳನ್ನು ತಿಳಿದುಕೊಂಡೆನು;ಸಮ್ಯಕ್ತ್ವವ ಕೈಕೊಂಡೆನು;ವ್ರತಗಳನ್ನು ತಾಳಿದೆನು.ಆಗ ಕೇಳಿದ್ದ ನರಕ ದುಃಖಗಳ ಶತಸಹಸ್ರಭಾಗಕ್ಕೂ ಇವು ಸಮವಲ್ಲವೆಂದು ಈ ಮೂವತ್ತೆಲಡು ದಂಡನೆಗಳನ್ನೂ ಸೈರಿಸಕೊಂಡೆನು"ಎಂದನು.
    ಅದನ್ನು ಕೇಳಿ ಅರಷನು,"ನಿನ್ನನ್ನು ಮೆಚ್ಚಿದೆ.ಬೇಡಿಕೊ.ನೀನು ಬೇಡಿ 
        ವಿದ್ಯುಚ್ಚೋರನೆಂಬ ಋಷಿಯ ಕಥೆ       ೬
  ದ್ದೆಲ್ಲವನ್ನೂ ಕೊಡುತ್ತೇನೆ"ಎಂದನು.ಎನ್ನಲಾಗಿ,"ಬೇರೆ ಏನನ್ನೂ ಒಲ್ಲೆ.ನನ್ನ ಕೆಳೆಯನಾದ ಯಮದಂಡನಿಗೆ ಕ್ಷಮೆದೋರಬೇಕು.ಇದೊಂದನ್ನೇ ನಾನು ಬೇಡುವುದು"ಎಂದು ವಿದ್ಯುಚ್ಚೋರನು ಕೇಳಿಕೊಂಡನು.ಅರಸನೂ ಮತ್ತೆ ಹೀಗೆಂದು ಬೆಸಗೊಂಡನು:"ಯಮದಂಡನು ನಿನಗೆ ಹೇಗೆ ಕೆಳೆಯನಾದನು?ನೀನು ಶ್ರಾವಕ ವ್ರತಗಳನ್ನು ಕೈಕೊಂಡೆಯಾದರೂ ಏಕೆ ಕದಿಯೂತ್ತೀತ?"ಹೀಗೆ ಬೆಸೆಗೊಳ್ಳಲಾಗಿ ಆತನು,"ಯಮದಂಡನು ನನಗೆ ಕೆಳೆಯನಾಗಿರುವ ಸಂಗತಿಯನ್ನೂ ನಿನ್ನ ಪಟ್ಟಣದ ಧನವನ್ನು ಕದ್ದದಕ್ಕೆ ಕಾರಣವನ್ನೂ ಹೇಳುತ್ತೇನೆ.ಕೇಳು,ಅರಸ"ಎಂದು ಹೇಳತೊಡಗಿದನು:
    "ದಕ್ಷಿಣಾಪಥದಲ್ಲಿ ಅಭೀರವೆಂಬ ನಾಡು.ಅಲ್ಲಿ ವರ್ಣೆಯೆಂಬ ತೊರೆ.ಅದರ ದಡದಲ್ಲಿ ವೇಣಾತಟವೆಂಬ ಪಟ್ಟಣ.ಅ ಷಟ್ಟಣ ಬಹು ರಮ್ಯವಾಗಿ ಸ್ವರ್ಗವನ್ನೆ ಹೋಲುತ್ತಿರುವುದು.ಅದನ್ನಾಳುವವನು ಜಿತಶತ್ರುವೆಂಬರಸ.ಆತನ ಮಹಾದೇವಿ ವಿಜಯಮತಿಯೆಂಬವಳು.ಆ ಇಬ್ಬರಿಗೂ ಮಗ ನಾನು,ವಿದ್ಯುಚ್ಚೋರ.ಮತ್ತು ಅದೇ ಪಟ್ಟಣದಲ್ಲಿ ಯಮಪಾಶನೆಂಬವನು ತಳಾರ.ಆತನ ಹೆಂಡತಿ ನಿಜಗುಣದೇವತೆಯೆಂಬವಳು.ಆ ಇಬ್ಬರಿಗೂ ಮಗ ಈತ,ಯಮದಂಡನೆಂಬವನು.ನಾವಿಬ್ಬರೂ .ಮಾನ ವಯಸ್ಸಿನವರು.ಐದಾರು ವರ್ಷದವರಾಗಿದ್ದಾಗ ಸಿದ್ದಾರ್ಥನೆಂಬ ಉಪಾಧ್ಯಾಯರ ಬಳಿ ಇಬ್ಬರೂ ಓದುವುದಕ್ಕೆ ಬಿಟ್ಟರು.ಏಳೆಂಟು ವರ್ಷದೊಳಗೆ ವ್ಯಾಕರಣ,ಛಂದಸ್ಸು,ಅಲಂಕಾರ,ಕಾವ್ಯ,ನಾಟಕ,ಚಾಣಕ್ಯ,ವೈದ್ಯ ಮೊದಲಾದ ಶಾಸ್ತ್ರಗಳನ್ನೆಲ್ಲ ಇಬ್ಬರೂ ಕಲಿತೆವು.ಬಳಿಕ ಈತ ತಳಾರನ ಮಗನಾಗಿದ್ದರಿಂದ ಕಳ್ಳರನ್ನು ಕಂಡುಹಿಡಿಯುವ ರೀತಿಯನ್ನು ತಿಳಿಸುವ'ಸುರಖ'ವೆಂಬ ವಿದ್ಯೆಯನ್ನು ಕಲಿತನು.ನಾನು ಕದಿಯುವ ಉಪಾಯವನ್ನು ಹೇಳುವ 'ಕರಪಟ'ಶಾಸ್ತ್ರವನ್ನು ಕಲಿತೆನು.ಹೀಗೆ ನಾವಿಬ್ಬರೂ ಅನ್ಯೋನ್ಯ ಪ್ರೀತಿಯಿಂದ ಕಾಲಕಳೆಯುತ್ತಿದ್ದೆವು.
  "ಒಂದು ದಿವಸ ಇಬ್ಬರೂ ವನಕ್ರೀಡೆಯಾಡುವುದಕ್ಕೆಂದು ಇಂದ್ರೋಪಮವೆಂಬ ವನಕ್ಕೆ ಹೋದೆವು.ಹಲವು ತೆರದ ವೃಕ್ಷಜಾತಿಗಳಿಂದ ಕಿಕ್ಕಿರಿದಿದ್ದ ಆ ವನದಲ್ಲಿ ಇಬ್ಬರೂ ಉಳಿಚೆಂಡಾಡುತ್ತಿದ್ದೆವು.ಆಗ,ಇವನು ಆಲೋಕನ ವಿದ್ಯೆಯನ್ನು ಕಲ್ತವನಾದ್ದರಿಂದ ಎಲ್ಲಿ ಉಳಿದರೂ ಇವನನ್ನು                   ಕನ್ನಡ ಸಾಹಿತ್ಯ ಚಿತ್ರಗಳು

ಕಾಣಲಾಗುತಿರಲಿಲ್ಲ. ಇವನನ್ನು ಬಹಳ ಹೊತು ಹುಡುಕಿ ಕಾಣದೆ ದೆಸೆ ಗೆಟ್ಟು ಬೆಸತೆನು.ಆಗ'ಆಗಲಿ,ಮಗನೇ,ನೀನು ತಳಾರೆನಾದಾಗ ನಿನ್ನ ಕಾಸಿನಲಿ ಕದು ನಿನ್ನನು ಕೊಲ್ಲಿಸದಿದ್ದರೆ ಏನಾಯಿತು!ಎoದು ನುಡಿದೆನೆ.ಅದಕೆ ಈತನೂ ಹೀಗೆoದನು:'ಆಗಲಿ. ಮಗನೇ,ನೀನು ನಾನು ತಳಾರು ಮಾಡುವಾಗ ಕದ್ದರೆ ನಿನನು ಹಿಡಿದು ಕಟಿ ಕಳ್ಳರ ದ೦ಡನೆಯಿ೦ದ ದ೦ಡಿಸದಿದ್ದರೆ ಏನಾಯಿತು! ಎ೦ದು ನುಡಿದನು.ಈ ಮಾತನ್ನು ಮರೆಯಬೇಡ,ಎ೦ದೂ ಒಬ್ಬರನ್ನೊಬ್ಬರು ಮೂದಲಿಸಿ ಪ್ರತಿಜ್ನೆ ಮಾಡಿದೆವು. "ಕೆಲವು ಕಾಲ ಕಳೆದ ಮೇಲೆ ನಮ್ಮ ತ೦ದೆ ನನಗೆ ಪಟ್ಟಕಟ್ಟಿ ತಪಸ್ಸಿಗೆ ಹೋದನು.ಇದನ್ನು ತ೦ದೆಯು ತನ್ನ ವ೦ಶಕ್ರಮದ ಅಧಿಕಾರವನ್ನು ಈತನಿಗೆ ಕೊಟ್ಟು ಅರಸನೊಡನೆ ತಪಸ್ಸಿಗೆ ನಡೆದನು. ನಾನು ರಾಜನಾದೆ ಈತನು ತಳಾರಾದನು.ಹೀಗೆ ಸುಖದಲ್ಲಿ ಇಬ್ಬರಿಗೂ ಕಾಲ ಕಳೆಯುತ್ತಿತ್ತು.ಮತ್ತೆ ಒ೦ದು ದಿವಸ ಈತ ತನ್ನ ಮನಸ್ಸಿನಲ್ಲಿ ಹೀಗೆ೦ದುಕೊ೦ಡನು.:- 'ನಮಸ್ಕಾರ ಕಳ್ಳ :ನಾನು ಈ ಪಟ್ಟಣದಲ್ಲಿ ತೆಳಾರು ಮಾಡುತ್ತಿದ್ದೇನೆ.ಇದು ಕಾರ್ಯ ಒಳ್ಳೆದಲ್ಲ" ಎ೦ದು ನನ ಗ೦ಜಿ ನಾಡು ಬಿಟ್ಟು ಬ೦ದು ನಿಮಗೆ ಆಳಾದನು. ನಾನೂ ಈತನನ್ನು ನಾನಾಳುವ ದೇಶದ ಎ೦ಟು ದಿಕ್ಕಿನ ಗ್ರಾಮ ನಗರಾದಿಗಳೆಲ್ಲ ಹುಡುಕಿಸಿ ಕಾಣದೆ ಪರಮ೦ಡಲಗಳಲ್ಲಿಯೂ ಹುಡುಕಿಸಿದೆನು. ಎಲ್ಲಿಯೂ ಕಾಣದಿರಲೂ ಇಲ್ಲಿಗೆ ಚರರನ್ನಟ್ಟಿದೆನು ಅವರು ಹುಡುಕಿ ಬ೦ದು ದೇವಾ ಮಿಥಿಳೆಯಿ೦ದ ಪಟ್ಟಣ. ಅದನ್ನಾಳುವವನು ನಾಮರಥನೆ೦ಬ ಆತನಿಗೆ ಯಮಥ೦ಡನು ಆಳಾಗಿ ಪಟ್ಟಣದ ಕಾಪು ಪಡೆದು ಸುಖವಾಗಿದ್ದಾನೆ ಎ೦ದು ಹೇಳಿದರು. "ಆ ಮಾತನ್ನು ಕೇಳಿ ನಾನು ಪುರುಷೊತ್ತಮನೆ೦ಬ ಮ೦ತ್ರಿಗೆ ಮಿಥಿಳಾ ಪಟ್ಟಣಕ್ಕೆ ಯಾರೂ ಅರಿಯದ ಹಾಗೆ ಹೋಗಿ ಯಮದ೦ಡನನ್ನು ಕರೆದುಕೊ೦ಡು ಬರುತ್ತೇನೆ'ಎ೦ದು ಹೇಳಿದೆನು.ಹೇಳಿ ವಜ್ರಸೇನನೆ೦ಬ ಹೆಗ್ಗಡೆಯನ್ನು ಕರೆಸಿ 'ನಾನು ಒ೦ದು ಮದೆನಾರ್ತೆಗಾಗಿ ಹೋಗಿಬರುತ್ತೇನೆ. ನಾನು ಬರುವವರೆಗೂ ರಾಜ್ಯವನ್ನು ಪಾಲಿಸುತ್ತಿರು' ಎ೦ದು ಏರ್ಪಡಿಸಿ ಸಮಸ್ತ ರಾಜ್ಯಭಾರವನ್ನೂ ಒಪ್ಪಿಸಿಕೊಟ್ಟನು.ಬಳಿಕ ಅರ್ದರಾತ್ರಿಯಲ್ಲಿ ಯಾರು ಅರಿಯದ ಹಾಗೆ ಒಬ್ಬನೇ ಹೊರಟು ಬ೦ದು ಈ ಪಟ್ಟಣವನ್ನು ಕನ್ನಡ ಸಾಹಿತ್ಯ ಚಿತ್ರಗಳು


ಕಾಣಲಾಗುತಿರಲಿಲ್ಲ. ಇವನನ್ನು ಬಹಳ ಹೊತು ಹುಡುಕಿ ಕಾಣದೆ ದೆಸೆ ಗೆಟ್ಟು ಬೆಸತೆನು.ಆಗ'ಆಗಲಿ,ಮಗನೇ,ನೀನು ತಳಾರೆನಾದಾಗ ನಿನ್ನ ಕಾಸಿನಲಿ ಕದು ನಿನ್ನನು ಕೊಲ್ಲಿಸದಿದ್ದರೆ ಏನಾಯಿತು!ಎoದು ನುಡಿದೆನೆ.ಅದಕೆ ಈತನೂ ಹೀಗೆoದನು:'ಆಗಲಿ. ಮಗನೇ,ನೀನು ನಾನು ತಳಾರು ಮಾಡುವಾಗ ಕದ್ದರೆ ನಿನನು ಹಿಡಿದು ಕಟಿ ಕಳ್ಳರ ದ೦ಡನೆಯಿ೦ದ ದ೦ಡಿಸದಿದ್ದರೆ ಏನಾಯಿತು! ಎ೦ದು ನುಡಿದನು.ಈ ಮಾತನ್ನು ಮರೆಯಬೇಡ,ಎ೦ದೂ ಒಬ್ಬರನ್ನೊಬ್ಬರು ಮೂದಲಿಸಿ ಪ್ರತಿಜ್ನೆ ಮಾಡಿದೆವು. "ಕೆಲವು ಕಾಲ ಕಳೆದ ಮೇಲೆ ನಮ್ಮ ತ೦ದೆ ನನಗೆ ಪಟ್ಟಕಟ್ಟಿ ತಪಸ್ಸಿಗೆ ಹೋದನು.ಇದನ್ನು ತ೦ದೆಯು ತನ್ನ ವ೦ಶಕ್ರಮದ ಅಧಿಕಾರವನ್ನು ಈತನಿಗೆ ಕೊಟ್ಟು ಅರಸನೊಡನೆ ತಪಸ್ಸಿಗೆ ನಡೆದನು. ನಾನು ರಾಜನಾದೆ ಈತನು ತಳಾರಾದನು.ಹೀಗೆ ಸುಖದಲ್ಲಿ ಇಬ್ಬರಿಗೂ ಕಾಲ ಕಳೆಯುತ್ತಿತ್ತು.ಮತ್ತೆ ಒ೦ದು ದಿವಸ ಈತ ತನ್ನ ಮನಸ್ಸಿನಲ್ಲಿ ಹೀಗೆ೦ದುಕೊ೦ಡನು.:- 'ನಮಸ್ಕಾರ ಕಳ್ಳ :ನಾನು ಈ ಪಟ್ಟಣದಲ್ಲಿ ತೆಳಾರು ಮಾಡುತ್ತಿದ್ದೇನೆ.ಇದು ಕಾರ್ಯ ಒಳ್ಳೆದಲ್ಲ" ಎ೦ದು ನನ ಗ೦ಜಿ ನಾಡು ಬಿಟ್ಟು ಬ೦ದು ನಿಮಗೆ ಆಳಾದನು. ನಾನೂ ಈತನನ್ನು ನಾನಾಳುವ ದೇಶದ ಎ೦ಟು ದಿಕ್ಕಿನ ಗ್ರಾಮ ನಗರಾದಿಗಳೆಲ್ಲ ಹುಡುಕಿಸಿ ಕಾಣದೆ ಪರಮ೦ಡಲಗಳಲ್ಲಿಯೂ ಹುಡುಕಿಸಿದೆನು. ಎಲ್ಲಿಯೂ ಕಾಣದಿರಲೂ ಇಲ್ಲಿಗೆ ಚರರನ್ನಟ್ಟಿದೆನು ಅವರು ಹುಡುಕಿ ಬ೦ದು ದೇವಾ ಮಿಥಿಳೆಯಿ೦ದ ಪಟ್ಟಣ. ಅದನ್ನಾಳುವವನು ನಾಮರಥನೆ೦ಬ ಆತನಿಗೆ ಯಮಥ೦ಡನು ಆಳಾಗಿ ಪಟ್ಟಣದ ಕಾಪು ಪಡೆದು ಸುಖವಾಗಿದ್ದಾನೆ ಎ೦ದು ಹೇಳಿದರು. "ಆ ಮಾತನ್ನು ಕೇಳಿ ನಾನು ಪುರುಷೊತ್ತಮನೆ೦ಬ ಮ೦ತ್ರಿಗೆ ಮಿಥಿಳಾ ಪಟ್ಟಣಕ್ಕೆ ಯಾರೂ ಅರಿಯದ ಹಾಗೆ ಹೋಗಿ ಯಮದ೦ಡನನ್ನು ಕರೆದುಕೊ೦ಡು ಬರುತ್ತೇನೆ'ಎ೦ದು ಹೇಳಿದೆನು.ಹೇಳಿ ವಜ್ರಸೇನನೆ೦ಬ ಹೆಗ್ಗಡೆಯನ್ನು ಕರೆಸಿ 'ನಾನು ಒ೦ದು ಮದೆನಾರ್ತೆಗಾಗಿ ಹೋಗಿಬರುತ್ತೇನೆ. ನಾನು ಬರುವವರೆಗೂ ರಾಜ್ಯವನ್ನು ಪಾಲಿಸುತ್ತಿರು' ಎ೦ದು ಏರ್ಪಡಿಸಿ ಸಮಸ್ತ ರಾಜ್ಯಭಾರವನ್ನೂ ಒಪ್ಪಿಸಿಕೊಟ್ಟನು.ಬಳಿಕ ಅರ್ದರಾತ್ರಿಯಲ್ಲಿ ಯಾರು ಅರಿಯದ ಹಾಗೆ ಒಬ್ಬನೇ ಹೊರಟು ಬ೦ದು ಈ ಪಟ್ಟಣವನ್ನು ಕನ್ನಡ ಸಾಹಿತ್ಯ ಚಿತ್ರಗಳು


ಕಾಣಲಾಗುತಿರಲಿಲ್ಲ. ಇವನನ್ನು ಬಹಳ ಹೊತು ಹುಡುಕಿ ಕಾಣದೆ ದೆಸೆ ಗೆಟ್ಟು ಬೆಸತೆನು.ಆಗ'ಆಗಲಿ,ಮಗನೇ,ನೀನು ತಳಾರೆನಾದಾಗ ನಿನ್ನ ಕಾಸಿನಲಿ ಕದು ನಿನ್ನನು ಕೊಲ್ಲಿಸದಿದ್ದರೆ ಏನಾಯಿತು!ಎoದು ನುಡಿದೆನೆ.ಅದಕೆ ಈತನೂ ಹೀಗೆoದನು:'ಆಗಲಿ. ಮಗನೇ,ನೀನು ನಾನು ತಳಾರು ಮಾಡುವಾಗ ಕದ್ದರೆ ನಿನನು ಹಿಡಿದು ಕಟಿ ಕಳ್ಳರ ದ೦ಡನೆಯಿ೦ದ ದ೦ಡಿಸದಿದ್ದರೆ ಏನಾಯಿತು! ಎ೦ದು ನುಡಿದನು.ಈ ಮಾತನ್ನು ಮರೆಯಬೇಡ,ಎ೦ದೂ ಒಬ್ಬರನ್ನೊಬ್ಬರು ಮೂದಲಿಸಿ ಪ್ರತಿಜ್ನೆ ಮಾಡಿದೆವು. "ಕೆಲವು ಕಾಲ ಕಳೆದ ಮೇಲೆ ನಮ್ಮ ತ೦ದೆ ನನಗೆ ಪಟ್ಟಕಟ್ಟಿ ತಪಸ್ಸಿಗೆ ಹೋದನು.ಇದನ್ನು ತ೦ದೆಯು ತನ್ನ ವ೦ಶಕ್ರಮದ ಅಧಿಕಾರವನ್ನು ಈತನಿಗೆ ಕೊಟ್ಟು ಅರಸನೊಡನೆ ತಪಸ್ಸಿಗೆ ನಡೆದನು. ನಾನು ರಾಜನಾದೆ ಈತನು ತಳಾರಾದನು.ಹೀಗೆ ಸುಖದಲ್ಲಿ ಇಬ್ಬರಿಗೂ ಕಾಲ ಕಳೆಯುತ್ತಿತ್ತು.ಮತ್ತೆ ಒ೦ದು ದಿವಸ ಈತ ತನ್ನ ಮನಸ್ಸಿನಲ್ಲಿ ಹೀಗೆ೦ದುಕೊ೦ಡನು.:- 'ನಮಸ್ಕಾರ ಕಳ್ಳ :ನಾನು ಈ ಪಟ್ಟಣದಲ್ಲಿ ತೆಳಾರು ಮಾಡುತ್ತಿದ್ದೇನೆ.ಇದು ಕಾರ್ಯ ಒಳ್ಳೆದಲ್ಲ" ಎ೦ದು ನನ ಗ೦ಜಿ ನಾಡು ಬಿಟ್ಟು ಬ೦ದು ನಿಮಗೆ ಆಳಾದನು. ನಾನೂ ಈತನನ್ನು ನಾನಾಳುವ ದೇಶದ ಎ೦ಟು ದಿಕ್ಕಿನ ಗ್ರಾಮ ನಗರಾದಿಗಳೆಲ್ಲ ಹುಡುಕಿಸಿ ಕಾಣದೆ ಪರಮ೦ಡಲಗಳಲ್ಲಿಯೂ ಹುಡುಕಿಸಿದೆನು. ಎಲ್ಲಿಯೂ ಕಾಣದಿರಲೂ ಇಲ್ಲಿಗೆ ಚರರನ್ನಟ್ಟಿದೆನು ಅವರು ಹುಡುಕಿ ಬ೦ದು ದೇವಾ ಮಿಥಿಳೆಯಿ೦ದ ಪಟ್ಟಣ. ಅದನ್ನಾಳುವವನು ನಾಮರಥನೆ೦ಬ ಆತನಿಗೆ ಯಮಥ೦ಡನು ಆಳಾಗಿ ಪಟ್ಟಣದ ಕಾಪು ಪಡೆದು ಸುಖವಾಗಿದ್ದಾನೆ ಎ೦ದು ಹೇಳಿದರು. "ಆ ಮಾತನ್ನು ಕೇಳಿ ನಾನು ಪುರುಷೊತ್ತಮನೆ೦ಬ ಮ೦ತ್ರಿಗೆ ಮಿಥಿಳಾ ಪಟ್ಟಣಕ್ಕೆ ಯಾರೂ ಅರಿಯದ ಹಾಗೆ ಹೋಗಿ ಯಮದ೦ಡನನ್ನು ಕರೆದುಕೊ೦ಡು ಬರುತ್ತೇನೆ'ಎ೦ದು ಹೇಳಿದೆನು.ಹೇಳಿ ವಜ್ರಸೇನನೆ೦ಬ ಹೆಗ್ಗಡೆಯನ್ನು ಕರೆಸಿ 'ನಾನು ಒ೦ದು ಮದೆನಾರ್ತೆಗಾಗಿ ಹೋಗಿಬರುತ್ತೇನೆ. ನಾನು ಬರುವವರೆಗೂ ರಾಜ್ಯವನ್ನು ಪಾಲಿಸುತ್ತಿರು' ಎ೦ದು ಏರ್ಪಡಿಸಿ ಸಮಸ್ತ ರಾಜ್ಯಭಾರವನ್ನೂ ಒಪ್ಪಿಸಿಕೊಟ್ಟನು.ಬಳಿಕ ಅರ್ದರಾತ್ರಿಯಲ್ಲಿ ಯಾರು ಅರಿಯದ ಹಾಗೆ ಒಬ್ಬನೇ ಹೊರಟು ಬ೦ದು ಈ ಪಟ್ಟಣವನ್ನು ವಿದ್ಕುಚೋರನೆಂಬ ಋಷಿಯ ಕಥೆ

ಮನುಷ್ಯರ ರೂಪ, ಯೌವನ,ತೇಜಸ್ಸು,ಸೌಭಾಗ್ಯ,ಆಯಸ್ಸು,ಸಂಪತ್ತು,ಸಲ್ಮೆ ಇವೇ ಮೊದಲಾದವೆಲ್ಲ ಅನಿತ್ಯಗಳು. ಯಾವಾಗ ಈ ಶರೀರವು ಸ್ವಸ್ಥವಾಗಿರುವುದೋ, ಯಾವಾಗ ಮುಪ್ಪು ಇನ್ನೂ ದೂರವಾಗಿರುವುದೋ,ಯಾವಾಗ ಇಂದ್ರಿಯಶಕ್ತಿ ಕುಗ್ಗದೆ ತಡೆಯಿಲ್ಲದ್ದಾಗಿರುವುದೋ, ಯಾವಾಗ ಆಯಸ್ಸಿಗೆ ಇನ್ನೂ ಕ್ಶಯಕಟ್ಟದಿರುವುದೋ,ಆಗಲೆ ವಿದ್ವಾಂಸನಾದವನು ಆತ್ಮಶ್ರೇಯಸ್ಸಿಗೆ ಪ್ರಯತ್ನ ಮಾಡಬೇಕು. ಮನೆ ಹೊತ್ತಿ ಬೇಯುತ್ತಿರುವಾಗ ಬಾನಿ ತೋಡುವ ಪ್ರಯತ್ನ ಮಾಡುವುದು ಅದೆಂಧದು? ಎಂದು ಮೊದಲಾಗಿ ಶಾಸ್ತ್ರ.ವಚನಗಳನ್ನು ಉದಾಹರಿಸಿ ನುಡಿದು, ತನ್ನ ನಿಶ್ಛಯವನ್ನು ದೃಢಪಡಿಸಿದನು.ಮತ್ತೆ ನೆರೆದ ಜನರನೆಲ್ಲ ಕುರಿತು,"ನಾನು ಅರಸ;ಇವರು ಆಳುಗಳು; ನನಗೇನು?-ಎಂದುಕೊಂಡು ಅರಿತು ಅರಿಯಧೆ ನಾನು ಯಾರನ್ನಾದರು ಏನನ್ನಾದರೂ ಅಂದಿದ್ದು, ಆ ಸಂಕಟ ಮನಸ್ಸಿನಲ್ಲಿ ಕೊರೆಯುತ್ತಿದ್ದರೂ ಆ ಮಾತನ್ನು ಎಲ್ಲರೂ ಮರೆತುಬಿಡಿ" ಎಂದು ಕೇಳಿಕೊಂಡು ಕ್ಶಮೆಗೊಳಿಸಿದನು.

ಬಳಿಕ ವಿದ್ಯುದಂಗನೆಂಬ ತನ್ನ ಹಿರಿಯ ಮಗನಿಗೆ ಪಟ್ಟಕಟ್ಟಿ ರಾಜ್ಯಾಭಿಷೇಕ ಮಾಡಿ "ಈತನನ್ನು ಹಿಡಿದು ನೀವೆಲ್ಲ ಸಿಖವಾಗಿ ಬಾಳಿ" ಎಂದು ಕಲ್ಪಿಸಿದನು. ಯಮದಂಡನಿಗೆ ತಳಾರಿಕೆಯನ್ನು ಕೊಟ್ಟನು.ಆಮೇಲೆ ಮಂಗಳಾಲಂಕಾರಗಳನ್ನು ಧರಿಸಿ ಪಟ್ಟದಾನೆಯನ್ನೇರಿ, ಸತಿಯರು ಸಂಗಡ ಬರುತ್ತಿರಲು ಇಕ್ಕೆಲದಲ್ಲೂ ಚಾಮರನಿಕ್ಕಿಸಿಕೊಳ್ಳುತ್ತಾ ಸಮಸ್ತಾ ರಾಜ್ಯ ಚಿಪ್ನೆಗಳೊಡನೆ ಹೊರಟು, ವಂದಿ ಮಾಗಧ ಯಾಚಕಾದಿಗಳಿಗೂ,ದೀನ ಅನಾಥ ಅಂಧಕರಿಗೂ ತುಷ್ಟಿದಾನ ಕೊಡುತ್ತಾ ಸಹಸ್ರಕೂಟ ಚೈತ್ಯಾಲಯಕ್ಕೆ ಹೋದನು.ಅಲ್ಲಿ ಆನೆಯಿಂದಿಳಿದು ಬಸದಿಯನ್ನು ಮೂರು ಸಲ ಪ್ರದಕ್ಶನೆಮಾಡಿ ದೇವರನ್ನು ವಂದಿಸಿದನು. ಬಳಿಕ ಗುಣಧರರೆಂಬ ಆಚಾರ್ಯರ ಬಳಿ ಗೈದಿ ಗುರುಭಕ್ತಿಯಿಂದ ವಂದಿಸಿ,"ಭಟಾರಾ, ಸಂಸಾರವೆಂಬ ಸಮುದ್ರದಲ್ಲಿ ಮುಳುಗಿದ್ದೇನೆ. ಮುಳುಗಬಿಡದೆ ನನ್ನನ್ನು ಮೇಲೆತ್ತಿರಿ. ದೀಕ್ಶೆಯನ್ನು ಅನುಗ್ರಹಿಸಿರಿ" ಎಂದು ನುಡಿದು ಒಡಂಬಡಿಸಿ ದೀಕ್ಶೆಪಡೆದು ತಪೋನಿರತನಾದನು. ಸೌಂದರಿ ಮಹಾದೇವಿ ಮೊದಲಾದ ಅವನ ಅರಸಿಯರೂ ತಪಸ್ಸನ್ನು ಕೈಕೊಂಡು ಘೋರ ತಪಸ್ಸಿಗೆ ತೊಡಗಿದರು. ಕನ್ನಡ ಸಾಹಿತ್ಯ ಚಿತ್ರಗಳು

ಇತ್ತ ವಿದ್ಯುಚ್ಚೋರ ಮುನಿ ಹನ್ನೆರಡು ವರ್ಷಗಳವರೆಗು ಗುರುಗಳನ್ನ ಗಲದೆ ಸಮಸ್ತ ಆಗಮವೆಲ್ಲವನ್ನೂ ಕಲಿತರು. ಉಗ್ರೋಗ್ರ ತಪಸ್ಸು ಮಾಡಿ ಕಡೆಗೆ ಆಚಾರ್ಯರಾದರು. ಐನೂರು ಮಂದಿ ಶಿಷ್ಯರೊಡನೆ ದೇಶನಿಹಾರ ಮಾಡುತ್ತಿದ್ದರು.

    ಹೀಗೆ ವಿಹರಿಸುತ್ತಿದ್ದಾಗ ಒಮ್ಮೆ ಪೂರ್ವದೇಶದಲ್ಲಿ ಖಾಳಿಮಂಡಳವೆಂಬ ನಾಡಿನಲ್ಲಿ ತಾಮ್ರಲಿಪಿಯೆಂಬ ಪಟ್ಟಣದ ಹೊರವಳಯಕ್ಕೆ ಹೋದರು. ಅಲ್ಲಿ ವರಾಂಗಾಯಿಯೆಂಬ ಉಗ್ರದೇವತೆಗೆ ಆರಾರು ತಿಂಗಲಿಗೊಮ್ಮೆ ಜಾತ್ರೆಯಾಗುವುದು.ಅಷ್ಟಮೆಯ ದಿನ ಜಾತ್ರೆ ನೆರೆಯಿತು. ದುರ್ಗಾದೇವತೆ ಋಷಿಗಳ ಬರವನ್ನು ದೂರದಲ್ಲೆ ಕಂಡು ಎದುರು ಹೋಗಿ "ನನ್ನ ಜಾತ್ರೆ ಮುಗಿಯುವವರೆಗೂ ನೀವು ಈ ಪಟ್ಟಣವನ್ನು ಪ್ರವೇಶಿಸಬೇಡಿ" ಎಂದು ತಡೆದಳು.

ಶಿಷ್ಯರು "ನಮ್ಮನ್ನು ದೇವತೆ ಏನು ಮಾಡುತ್ತಾಳೆ? ಹೋಗೋಣ ಭಟಾರಾ!" ಎಂದು ಅವರನ್ನೊಡಗೊಂಡು ಪಟ್ಟಣವನ್ನು ಪ್ರವೀಶಿಸಿದರು.

   ರಾತ್ರಿ ಪಟ್ಟಣದ ಪಶ್ಛಿಮ ದಿಕ್ಕಿನ ಕೋಟಿಯ ಹೊರಗಡೆ ವಿದ್ಯುಚ್ಚೋರ ಭಟಾರರು ಪ್ರತಿಮಾ ಯೋಗದಲ್ಲಿ ನಿಂತರು. ದೇವತೆ ಮುನಿದು ಪಾರಿವಾಳದಷ್ಟು ದೊಡ್ಡವಾದ ಚಿಕ್ಕುಟಗಳನ್ನೂ ಸೊಳ್ಳಿಗಳನ್ನೂ ನಿರ್ಮಿಸಿ ಅವರ ಮೇಲೆ ಬಿಟ್ಟಳು. ಇರುಳು ನಾಲ್ಕು ಜಾನವೂ ಅವು ಮೈಯನ್ನೆಲ್ಲ ತಿನ್ನುತ್ತಿದ್ದು ನರಕ ವೇದನೆಗಿಂತ ಹೆಚ್ಚು ವೇದನೆಯುಂಟಾಗುವಂತೆ ಮಾಡಿದವು. ವಿದ್ಯುಚ್ಚೋರ ಮುನಿಗಳು ಅವೊಂದೂ ಇಲ್ಲವೇ ಇಲ್ಲವೋ ಎಂಬಂತೆ ಆ ವೀದನೆಗಳನ್ನೆಲ್ಲ ಸೈರಿಸಿದರು. ಸೈರಿಸಿ ಉತ್ತಮ ಧ್ಯಾನದಲ್ಲಿ ಮನಸ್ಸು ನಿಲ್ಲಿಸಿದರು. ಕಡೆಗೆ ಸಮಸ್ತ ಕರ್ಮಗಳನ್ನೂ ಕೆಡಿಸಿ ಮೋಕ್ಶಕ್ಕೆ ಹೋದರು.
     ಭವ್ಯರು ವಿದ್ಯುಚ್ಚೋರಾ ಋಷಿಗಳನ್ನು ನೆನೆದು ದುಖಗಳನ್ನೆಲ್ಲ ಸೈರಿಸಿ ರತ್ನತ್ರಯಗಳನ್ನು ಸಾಧಿಸಿ ಸ್ವರ್ಗಮೋಕ್ಶ ಸುಖಗಳನ್ನು ಪಡೆಯಲಿ.
                            ಹಿನ್ನುಡಿ

[ಇದು "ವಡ್ಡಾರಾಧನೆ" ಎಂಬ ಹಳಗನ್ನಡ ಗ್ರಂಧದಲ್ಲಿನ ಒಂದು ಕಥೆ.ಆ ಗ್ರಂಥದಲ್ಲಿ ಇಂಥವೇ ಹತ್ತಿಪ್ಪತ್ತು ಕಧೆಗಳಿವೆ.ಧರ್ಮಮಾರ್ಗದಲ್ಲಿ ನಡೆದು ತಪಸ್ಸು ಮಾಡುವಾಗ ಅನೇಕ ಬಗೆಯ ತೊಂದರೆಗಳಿಗೆ ಸಿಕ್ಕಿ, ಅವುಗಳನ್ನೆಲ್ಲ ಸಹಿಸಿ ವಿದ್ಯುಚ್ಚೋರನೆಂಬ ಋಷಿಯ ಕಥೆ ಮುಕ್ತರಾದ ದೊಡ್ಡವರ ಸಂಗತಿಗಳು ಆ ಎಲ್ಲ ಕಥೆಗಳಲ್ಲಿಯೂ ಬರುತ್ತವೆ. ಧರ್ಮ ಮತ್ತು ತಪಸ್ಸಿನ ವಿಷಯಗಳನ್ನು ಹೇಳುವ ಆ ಕಥೆಗಳಲ್ಲಿ ಜನರ ನಡವಳಿಕೆಗೆ ಸಂಬಂಧಪಟ್ಟ ಎಷ್ಟೋ ಸಂಗತಿಗಳು ಗೋತ್ತಾಗುತ್ತವೆ, ಎಲ್ಲ ಕಥೆಗಳೂ ಚೆನ್ನಾಗಿವೆ. "ವಡ್ಡಾರಾಧನೆ" ಎಂದರೆ "ವೃದ್ದಾರಾಧನೆ ದೊಡ್ಡವರ ಪೂಜೆ" ಎಂದರ್ಥ. ಕಠಿನವಾದ ತಪಸ್ಸಿನಲ್ಲಿ ತೊಡಗಿದ ಜೈನ ಸನ್ಯಾಸಿಗಳು ಈ ಕಥೆಗಳಲ್ಲಿ ಹೇಳಿರುವ ಹಿರಿಯರು ಎಂಥೆಂಥ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದರಂತೆ. ಹಿರಿಯರ ಒಳ್ಳೆಯ ಗುಣಗಳನ್ನು ನೆನೆದು ಅವರು ನಡೆದಂತೆ ನಡೆಯುವುದೇ ನಾವು ಅವರಿಗೆ ಮಾಡುವ ನಿಜವಾದ ಪೂಜೆ. ಅದಕ್ಕಾಗಿಯೇ ಈ ಪುಸ್ತಕಕ್ಕೆ "ನವ್ಡಾರಾಧನೆ" ಎಂದು ಹೆಸರಿಟ್ಟಂತೆ ತೋರುತ್ತದೆ.

  ನಮಗೆ ಇದುವರೆಗೆ ಸಿಕ್ಕಿರುವ ಕನ್ನಡ ಗ್ರಂಥಗಳಲ್ಲೆಲ್ಲ ಈ ವಡ್ಡಾರಾದನೆಯೇ ಬಹು ಹಳೆಯದು. ಇದು ಕ್ರಿ.ಶ ಣದು ಅಥವ ಆರನೆಯ ಶತಮಾನದಲ್ಲಿ ಬರೆದದ್ದಾಗಿರಬೇಕು.ಇನ್ನೂ ಹಿಂದಿನ ಕಾಲವಾಗಿದ್ದರೂ ಇರಬಹುದು.ಇದರ ಭಾಷೆ ಈಗ ನಾವು 'ಹಳೆಗನ್ನಡ' ಎನ್ನುತ್ತೇವಲ್ಲ ಅದಕ್ಕೂ ಹಳೆಯದು.ನಾಲ್ಕು ಐದನೆಯ ಶತಮಾನದ ಶಾಸನಗಳಲ್ಲಿ ಕೆಲವು ಕಡೆ ಇಂಥ ಭಾಷೆ ಕಂಡುಬರುತ್ತದೆ.ಇದನ್ನು 'ಪೂರ್ವದ ಹಲಗನ್ನಡ' ಎನ್ನಬಹುದು.
    ಇದನ್ನು ಬರೆದವರು 'ರೇವಾಕೋಟ್ಯಾಚಾರ್ಯ'ರೆಂಬ ಜೈನಗುರುಗಳು.                                     ಭರತ - ಬಾಹುಬಲಿ

ಪರಮ ಜಿನೇ೦ದ್ರ ಸರಸ್ವತಿ ಬೇರದು ಪೆಣ್ಣ ರೂಪಮ೦ ಧರಿಯಿಸಿ ನಿ೦ದುದಲ್ತದುವೆ ಭಾವಿನಸಿಯೋದುವ ಕೇಳ್ವಫೂಜಿಪಾ ದರಿಸುವ ಭವ್ಯಕೋಟಿಗೆ ನಿರ೦ತರ ಸೌಖ್ ಮನೀವುದಾನದ ಕ೯ರೆದಪೆನಾ ಸರಸ್ವತಿಯೆ ಮಾಳೆಮಹಗಿಲ್ಲಿಯೆ ವಾಗ್ವಿಳಾಸಮ೦

[ಸರ್ವ ಶ್ರೇಷನಾದ ಜನನ ಮಾತೇ ಸರಸ್ವತಿ. ಸರಸ್ವತಿಯೆ೦ದರೆ ಬೇರೆ

ಒ೦ದು ಹೆಣ್ಣು ರೂಪವಲ್ಲ. ಜನನನ ವಾಣಿಯನ್ನು ಮನಸಿನಲ್ಲಿ ಭಾವಿಸಿಹಕೊ೦ಡು

ಓದುವ, ಕೇಳುವ,ಪೂಜಿಸುವ ಮತ್ತು ಆದರಿಸುವ ಪುಣ್ಯವ೦ತರಿಗೆಲ್ಲ ಅದು ಶಾಶ್ವತನಾದ ಸುಖವನ್ನು ದಯಪಾಲಿಸುತ್ತದೆ. ನಾನು ಅ ಜನ ವಾಣಿಗೇ ಪ್ರಾಥ೯ನೆ ಮಾಡಿಕೊಳ್ಳುತ್ತೇನೆ. ಅ ಸರಸ್ವತಿಯು ನಮಗೆ ಮಾತಿನ ಸೊಗಸನ್ನು ಉ೦ಟು ಮಾದಲಿ.]

                                 ಮೊದಲ ಮಾತು

[ ಒ೦ದು ಕಾಲದಲ್ಲಿ ಎಲ್ಲಿ ನೋಡಿದರೂ ಧಮ೯ ನೆಲನಸಿರುವುದು, ಸುಖ ಸಮ್ರುದಿ ತು೦ಬಿರುವುದು. ಬರುಬರುತ್ತ ಧನ೯ವು ಸುಖವೂ ಇಳಿಮುಖವಾಗಿ ಅಧನ೯ ದುಃಖಗಳು ತಲೆಯೆತ್ತುವುವು. ಕಡೆಗೆ ಅಧನಮ೯ವೇ ಮೇಲ್ಗೆಯಾಗಿ ಧಮ೯ ನಶಿನಸುವುದು. ಆಮೇಲೆ ಅಧಮ೯ಕ್ಕೆ ಇಳಿಹಗತಿಯೊದಗಿ ಧಮ೯ ಬೆಳೆದು ತಾನೇ ತಾನಾಗುವುದು. ಹೀಗೆ ಲೋಕದಲ್ಲಿ ಸದಾ ನಡೆಯುತ್ತಲೇ ಇರುವುದು. ಧಮ೯ ಇಳಿಮುಖನಾಗಿ ಕುಗ್ಗುವ ಕಾಲಕ್ಕೆ ಅವಸಎ೯ಣಿಯೆ೦ದೂ, ಮೇಲ್ಮುಖವಾಗಿ ಹೆಚ್ಚುವ ಕಾಲಕ್ಕೆ ಉತ್ಸವಿ೯ಣಿಯೆ೦ದೂ ಹೆಸರು. ಅಧಮ೯ ಹೆಚ್ಚಿದಾಗಲೆಲ್ಲ ಪ್ರತಿ ಅವಸಪಿ೯ಣಿಯಲ್ಲೂ ಉತ್ಸಪಿ೯ಯಲ್ಲೂ ಇಪ್ಪತ್ತುನಲ್ಕು ಮ೦ದಿ ಲೋಕೋದ್ದಾರಕರೂ ಆದ ಇವರನ್ನೇ ದೇವರೆ೦ದು ಕರೆಯುವುದು.

ಈ ತೀಥ೯೦ಕರರು ಕೂಡ ನಮ್ಮೆಲ್ಲರ೦ಕಯೇ ಸಾಧಾರಮಣರಾಗಿದ್ದವರು.

ಅವರೂ ತಮ್ಮ ಕಮ೯ಕ್ಕೆ ತಕ್ಕಒತೆ ಸ್ವಗ೯ ನರಕಗಳನ್ನು ಸೇರಿ ಸುಖದುಃಖಗಳನ್ನು ಅನುಭವಿಸುವರು ; ಮೃಗ , ಪಕ್ಶಿ, ಮನುಷ್ಯ ಮೊದಲಾದ ಜನ್ಮಗಳಲ್ಲಿ ಬ೦ದು ತೊಳಲುವರು . ಕ್ರಮಕ್ರಮವಾಗಿ ತಮ್ಮ ಕೆಟ್ಟ ಗುಣಗಳನ್ನೆಲ್ಲ ಕಳೆದುಕೊ೦ಡು ಒಳ್ಳೆಯ ಗುಣಗಳನ್ನೇ ಹೆಚ್ಚಿನಿಕೊಳ್ಳುವರು. ಕಟ್ಟಕಡೆಗೆ ಹುಟ್ಟು ಸಾವುಗಳಿ ಭರತ ಬಾಹುಬಲಿ ಕಟ್ಟನ್ನು ಕಲಚಕೊಳ್ಳುವ ಮಾಗ೯ನನ್ನು ತಿಳಿದುಕೊಳ್ಳುವರು. ಇವರಿ೦ದ ಅವರಿಗೆ 'ತೀಥ೯೦ಕದ ರುಹಗುವ ಯೋಗ್ಯಹತೆಯು೦ಟಾಗುವುದು.

ದೇವತೆಗಳು ತೀಥ೯೦ಕರರ ಅವತಾರನನನ್ನೆ ಹಾರಯಿನಸಿಕೂ೦ಡು ಅವರ ಸೆವೆಗೆ

ಸಿದ್ದರಾಗಿರುವರು. ಆಗ ಆ ಮಹಾತ್ಮರು ತಮ್ಮ ಕೊಟ್ಟಕೊನೆಯ ಜನ್ಮದಲ್ಲಿ ಮನುಷ್ಯತರಾಗಿ ಕ್ಷತ್ರಿಯ ನ೦ಶದಲ್ಲಿ ಹುಟ್ಟುವರು. ಆ ಜನ್ಮದಲ್ಲಿ ಅತಿ ಕಠಿನ ತಪಸ್ಸು ಮಾಡಿ ಕೇವಲ ಟಾನನೆ೦ಬ ಉತ್ತಮ ರೀತಿಯ ಔನವನ್ನು ಪದೆಯುವರು. ಲೋಕದ ಉದ್ದಾರಕ್ಕಾಗಿ ಕೆಲವು ಕಾಲ ಧಮ೯ಬೋಧೆ ಮಾಡುತ್ತಿದ್ದು ಕೊನೆಗೆ ಮುಕ್ತರಾಗುವರು.

ಹೀಗೆ೦ಬುದು ಜೈನರು ದೇವರೆ೦ದು ಪೂಜಿಸುವುದು ಈ

ಮಹಾಪುರುಷರನ್ನೇ. ನಾವಿರುವ ಈ ಕಾಲ ಅನಸಸಿ೯ಗೆ ಸೇರಿದ್ದು.ಈ ಅವ ಸಪಿ೯ಣಿಯಲ್ಲಿ ಅನತರಿಸಿದ ನೊದಲನೆಯ ತೀಥ೯೦ಕರ ಋಷಭ ( ವೃಷಭ ಎ೦ಬುದು ಈ ಸದವ ಮತ್ತೋ೦ದು ರೂಪ) ; ಕಡೆಯ ತೀಥ೯೦ಕರ ಮಹಾವೀರ ಸ್ವಾಮಿ. ಇಲ್ಲ ಕೊಟ್ಟಿರುವ ಕಥೆ ಆದಿ ತೀಥ೯೦ಕರಸಿಗೆ ಸ೦ಬ೦ಧಿಸಿದ್ದು. ]

                                     ನಾಭಿರಾಜ
ಅವಸಪಿ೯ಣಿ ಆರ೦ಭವಾಗುವ ಮೊದಲು ಲೋಕದಲ್ಲಿ ಎಲ್ಲವೂ ಎಲ್ಲವೂ ಸುಖ

ಮಯವಾಗಿತ್ತು. ಜನರು ಯಾವುದಕ್ಕೂ ಕಷ್ಟಪಟ್ಟು ದುಡಿಯಬೇಕಾಗಿರಲಿಲ್ಲ. ಅವರಿಗೆ ಬೇಕಾಗಿದ್ದ ಬೆಳಕು, ಮನೆ, ಒಡನೆ ಪಾತ್ರೆ, ಅನ್ನ , ಬಟ್ಟೆ ಮೊದಲಾದವನ್ನೆಲ್ಲ ಅವರು ಬಯಸಿದ ಕೂಡಲೆ ಹತ್ತು ಬಗೆಯ ಕಲ್ಪ ವೃಕ್ಷಗಳು ಕೊಟ್ಟುಬಿಡುತ್ತಿದ್ದವು. ಜನ ಪರಮಾನ೦ವದಿ೦ದಿದ್ದರು

ಎಷ್ಟೋಕಾಲ ಕಳೆದ ಮೇಲೆ ಅಧಮ೯ದ ಫಲವಾಗಿ ಒ೦ದೊ೦ದಾಗಿ ಕಲ್ಪ ವೃಕ್ಷಗಳು ಮಾಯನಾದವು. ಲೋಕದ ಸ್ಥಿತಿ ಬದಲಾಗಿ ಜನಕ್ಕೆಕಳ ನಳ ಹಚ್ಚತೊಡಗಿತು.ಅ೦ಥ ಸಮಯಗಳಲ್ಲಿ ಕೆಲವರು ಮಹಾತ್ಮರು ಜನಕ್ಕೆ ತಿಳಿವಳಿಕೆ ಹೇಳಿ ಕಳವಳವನ್ನು ಕಳೆಯುತ್ತಿದ್ದರು ; ಸುಖಸಾಧನೆಯ ಮಾಗ೯ಗಳನ್ನು ಹೇಳಿಕೋಡುತ್ತಿದ್ದರು, ಇ೦ಥವರೇ ಮನುಗಳು. ಇವರು ಹದಿನಾಲ್ಕು ಮ೦ದಿ.

 ನಾಭಿರಾಜನು ಹದಿನಾಲ್ಕನೆಯ ಮನು.ಅವನು ಅಯೋಧ್ಯೆಯಲ್ಲಿ

ಅಳುತ್ತಿದ್ದನು. ಅವನು ಬಹುಹುಣವ೦ತ ; ಮಹಾ ಭವಶಾಲಿ. ಅವನಿಗೆ 2] ಭರತ-ಬಾಹುಬಲಿ ೧೭

ವನ್ನು ಮಾಡಿ ತೋರಿಸಿ ಆನಂದ ನೃತ್ಯವನ್ನಾಡಿದರು.  ಜಿನ ಶಿಶುವಿಗೆ ಒಡ
ನಾಡಿಗಳಾಗಿರಲು  ಕೆಲವರ  ದೇವಕುಮಾರರನ್ನು  ಅಲ್ಲಿ  ಬಿಟ್ಟು  ಸ್ವರ್ಗಕ್ಕೆ
ಪ್ರಯಾಣಮಡಿದರು.
    ಋಷಭದೇವನು ದೇವತೆಗಳ ಒಡನಾಟದಲ್ಲಿ  ಬೆಳೆಯುತ್ತ  ಬಲ್ಯವನ್ನು
ಕಳೆದು ಯೌವನದಲ್ಲಿ ಅಡಿಯಿಟ್ಟನು. ಆಗ ಅವನ ರೂಪು ಅದ್ಬುತವಾಗಿತ್ತು;
ಸಮಸ್ತರನ್ನೂ ಮುಗ್ಧಮಾಡುತ್ತಿತ್ತು.  ಆದರೂ ಅವನಿಗೆ ಮುಕ್ತಿಸಾಧನೆಯೇ
ಗುರಿಯಾಗಿ ಸಂಸಾರದಲ್ಲಿ ಅನಾದರವುಂಟಾಯಿತು.  ನಾಭಿರಾಜನು ಮಗನ
ಅತಿಶಯವಾದ ಈ  ರೂಪವೈಭವವನ್ನು  ಕಂಡು ಅವನಿಗೆ ಮದುವೆ ಮಾಡ
ಬಯಸಿದನು.  ಅವನ  ಮನಃಸ್ಥಿತಿಯನ್ನರಿತು, 'ಏನೆನ್ನುವನೋ'  ಎಂದು 
ಅಳುಕಿದನು.  ಅಂಜುತ್ತಂಜುತ್ತಲೆ ತನ್ನ ಆಸೆಯನ್ನು  ಮಗನಿಗೆ ತಿಳಿಸಿದನು.
ಋಷಭನು   ತಂದೆತಾಯಿಗಳ   ಸಂತೋಷಕ್ಕಾಗಿಯೂ    ಲೋಕಾನುಗ್ರಹ
ಕ್ಕಾಗಿಯೂ ಮದುವೆಗೆ ಒಡಂಬಟ್ಟನು.  ಯಶಸ್ವತಿ, ಸುನಂದೆ ಎಂಬ ಇಬ್ಬರು
ಕನ್ಯೆಯರನ್ನು  ಆತನಿಗೆ  ಮದುವೆ  ಮಾಡಿದರು.   ಸರ್ವಪ್ರಕಾರದಿಂದಲೂ
ಅವರು ಆತನಿಗೆ ತಕ್ಕವರು.  ತಮ್ಮ ಗುಣಶೀಲಗಳಿಂದ ಆ ಪರಮನು ಮನ
ಸ್ಸನ್ನು ತಮ್ಮೆಡೆಗೆ ಆಕರ್ಷಿಸಿಕೊಂಡರು; ತಮ್ಮ ಸರ್ವಪ್ರೆಮವನ್ನೂ  ಆ ಪರ
ಮೇಶ್ವರನಿಗೆ ಅರ್ಪಿಸಿದರು.  ಆದರ್ಷ ದಂಪತಿಗಳಾಗಿ ಅವರು ಕಾಲ ಕಳೆಯು
ತ್ತಿದ್ದರು.
                    ಭರತನ ಜನನ
    ಸಂಸಾರ ಸುಖದ ಸಾರವನ್ನು ಸವಿಯುತ್ತಿದ್ದ ಆ ದಂಪತಿಗಳಿಗೆ  ಕಾಲ
ಕಳೆದದ್ದೇ ಗೊತ್ತಾಗಲಿಲ್ಲ.  ಅನೇಕ ವರ್ಷಗಳು ಕಳೆದ ಬಳಿಕ ಒಂದು ದಿನ
ಹಿರಿಯ ರಾಣಿ ಯಶಸ್ವತಿ  ನಿದ್ರಿಸುತ್ತಿದ್ದಾಗ  ಸೂರ್ಯ,  ಚಂದ್ರ,  ಮೇರು
ಪರ್ವತ,  ಸಮುದ್ರ,  ಪದ್ಮದಲ್ಲಿ  ಉದ್ಭವಿಸಿ ಎದ್ದು ಬರುತ್ತಿದ್ದ ಲಕ್ಷ್ಮಿ, ಕಲ್ಪ
ವೃಕ್ಷ-ಇವನ್ನು  ಕನಸಿನಲ್ಲಿ ಕಂಡಳು.   ಆ ಕನಸನ್ನು ಆದಿನಾಥನಿಗೆ  ತಿಳಿ
ಸಲು ಆತನು,"ಈ ಭರತ ಭೂಮಿಯನ್ನೆಲ್ಲ ಆಳುವ ಚಕ್ರವರ್ತಿ ನಿನ್ನ ಹೊಟ್ಟಿ
ಯಲ್ಲಿ ಹುಟ್ಟುವನು.  ಪುಣ್ಯಾತ್ಮರಾದ ಇನ್ನೂ ಹಲವರು ಮಕ್ಕಳು ನಿನಗಾಗು
ವರು" ಎಂದನು.

ಕನ್ನಡ ಸಾಹಿತ್ಯ ಚಿತ್ರಗಳು

೧೮

ಕೇಳಿ ಯಶಸ್ವತಿಯ ಆನಂದಕ್ಕೆ ಪಾರವಿಲ್ಲವಾಯಿತು. ಕಾಲಕ್ರಮದಲ್ಲಿ

ಆಕೆ ಗರ್ಭಿಣಿಯಾದಳು. ಆಗ ಆಕೆಊಪವನಗಳಲ್ಲಿ ವಿಹರಿಸುವುದಕ್ಕೆ ಬದ ಲಾಗಿ ಹಿಮವತ್ಪರ್ವತ ಮತ್ತು ನಿಜಯಾರ್ಧ ಪರ್ವತಗಳ ಶಿಖರಗಳಲ್ಲಿ ಆಲೆ ದಾಡಬೇಕೆಂದು ಅಫೇಕ್ಷಿಸುವಳು; ಸಮುದ್ರದಲ್ಲಿ ಜಲಕೇಳಿಯಾಡಲು ಅತ್ಯಾಸೆ ಪಡುವಳು; ಮೃದು ಮಧುರವಾದ ಸರಸವಾಕ್ಯಗಳನ್ನು ಕೇಳಲು ಬೇಸರಪಟ್ಟು ಅಸಮಸಾಹಸಿಗಳ ವೀರಕಥೆಗಳನ್ನು ಕೇಳಲು ಉತ್ಸಾಹಗೊಳ್ಳು ವಳು; ಪಂಜರದ ಗಿಳಿಗಳೊಡನೆ ಮಾತಾಡುವುದನ್ನು ಬಿಟ್ಟು ಸಿಂಹದ ಮರಿ ಗಳನ್ನು ತರಿಸಿ ನೋಡುತ್ತಿರುವಳು; ಕನ್ನಡಿಯಿದ್ದರೂ ಕತ್ತಿಯಲ್ಲಿ ಮುಖ ನೋಡಿಕೊಳ್ಳುವಳು; ಗೀತಕ್ಕೆ ಕಿವಿಗೊಡದೆ ಧನುಷ್ಟಂಕಾರವನ್ನು ಕೇಳ ಬಯಸುವಳು. ಹೀಗೆ ನೀರಜನನಿಗೆ ತಕ್ಕು ಬಯಕೆಗಳು ಆಕೆಗೆ ತಲೆದೂರು ತ್ತಿದ್ದವು.

ನವಮಾಸ ತುಂಬಿತು. ಆಕೆ ಶುಭಮುಹೂರ್ತದಲ್ಲಿ ಮನುವಂಶಕ್ಕೆ

ಕಲಶಪ್ರಾಯನಾದ ಸುಕುಮಾರನನ್ನು ಹಡೆದಳು. ಆ ಪುಣ್ಯಶಾಲಿಯ ಜನ್ಮ ದಿನದಲ್ಲಿ ಎಲ್ಲೆಲ್ಲೂ ತ್ಂಗಾಳಿ ಸುಳಿಯಿತು; ಆಕಾಶವೆಲ್ಲ ಹಾಲಿನಲ್ಲಿ ತೊಳೆ ಯಿತ್ತೋ ಎಂಬಂತೆ ಹೊಳೆಯುತ್ತಿತ್ತು. ಎಲ್ಲೆಲೂ ಹರ್ಷ ಕುಳುಕಾಡುತ್ತಿತ್ತು. ಅರಮನೆಯಲ್ಲಿನ ಸಡಗರವನ್ನಂತೂ ಹೇಳತೀರದು. ಎತ್ತಿ ಕಟ್ಟದ ಬಾವುಟ ಗಳು ಪಟಪಟನೆ ಹಾರುತ್ತಿದ್ದವು. ರತ್ನದ ತೋರಣಗಳು ಸುತ್ತಮುತ್ತ ಕಳೆ ಯೆರಚುತ್ತಿದ್ದವು. ಆನಂದಭೇರಿಗಳ ಗಂಭೀರ ಧ್ವನಿ ದಿಕ್ಕುದಿಕ್ಕಿಗೂ ಒಳಗೂ ಓಡಾಡುತ್ತಿದ್ದರು.

ನಾಭಿರಾಜನೂ ಇತರ ಹಿರಿಯರೂ ಹರ್ಷಗೊಂಡರು. ಸಮಸ್ತ

ಬಂಧು ಜನರೂ ನೆರದು ಬಹು ಸಂಭ್ರಮದಿಂದ ಜಾತಕರ್ಮೋತ್ಸವವನ್ನು ನೆರವೇರಿಸಿದರು. ಎಲ್ಲರೂ ಸೇರಿ ಕೂಸಿಗೆ ಭರತ ಎಂದು ಹೆಸರಿಟ್ಟರು.

ಭರತನ ಬಾಲ್ಯ

ಮಗು ಕಾಂತಿಯಿಂದ ಕಂಗೊಳಿಸುತ್ತ ಬಹು ಮುದ್ದಾಗಿತ್ತು. ತಾಯಿ

ತಂದೆಗಳು ಅದರ ನಸುನಗೆಗೆ ಮರುಳಾಗಿ ಹೋದರು. ಗುರುಹಿರಿಯರಿಗೆ

ಆ ಮಗುವಿನ ಸುಂದರ ಮುಖಮಂಡಲವನ್ನು ಎಷ್ಟು ನೋಡಿದರೂ ತೃಪ್ತಿ

ಭರತ-ಬಾಹುಬಲಿ

೧೯

ಯಿಲ್ಲ. ಅಂತ್ಃಪುರದ ಪರಿಚಾರಿಕೆಯರು 'ನಾ ಮುಂದು ತಾ ಮುಂದು' ಎಂದು ಎತ್ತಿ ಆಡಿಸುತ್ತಿದ್ದರು; ಬಾಲಕಮ ಒಬ್ಬರ ತೋಳಿನಿಂದ ಒಬ್ಬರ ತೋಳಿಗೆ ಹರಿದಾಡುತ್ತಿದ್ದನು. ಬಾಲಚಂದ್ರನಂತೆ ಆ ಬಾಲಕನು ದಿನದಿನಕ್ಕೆ ಬೆಳೆಯುತ್ತಿರಲು ದಟ್ಟಡಿ, ತೊದಲುನುಡಿ, ಆರಳಿದ ಮುಖ, ಅದರಲ್ಲಿ ಸದಾ ಸುಳಿದಾಡುತ್ತಿರುವ ಕಿರುನಗೆ-ಇವುಗಳ ಚೆಲುವಿನಿಂದ ಎಲ್ಲರ ಮನಸ್ಸನ್ನೂ ಸೆಳೆಯುತ್ತಿದ್ದನು.

ಹೀಗೆ ಬೆಳೆಯುತ್ತಿರಲು ಆದಿನಾಧನು ಭರತನಿಗೆ ಅನ್ನ ಪ್ರಾಶನ, ಚೌಲ,

ಉಪನಯನ, ಮೊದಲಾದ ಸ್ಂಸ್ಕಾರಗಳನ್ನು ಕಾಲವರಿತು ತಾನೆ ನೆರವೇರಿ ಸಿದನು. ಬಾಲಕನಿಗೆ ಹತ್ತು ಹನ್ನೊಂದರ ವಯಸ್ಸಾಯಿತು. ಆಗ ಅವನು ಅಂತಃಪುರದ ದಾಸನ ಹೆಗಲೇರಿ ತರ್ಜನಿಯನ್ನು ಆಂಕುಶದಂತೆ ನಸುಬಾಗಿಸಿ ಪ್ರಮದವನಕ್ಕೆ ಪ್ರವೇಶಮಾಡುವನು. ಅಲ್ಲಿನ ಕೃತಕ ಗಿರಿಗಳನ್ನು ಮಹೋ ನ್ನತವಾದ ಗಿರಿದುರ್ಗಗಳೆಂದೇ ಭಾವಿಸಿ ಅವನ್ನು ಗೆಲ್ಲಲು ಮುನ್ನುಗ್ಗಿಸುವನು. ದಟ್ಟವಾಗಿ ಬೆಳೆದ ಬಾಳೆಯ ಗುಂಪನ್ನು ವನದುರ್ಗಗಳೆಂದು ತಿಳಿದು ಧ್ವಂಸ ಮಾಡುನನು. ವೊಳಕಾಲವರಿಗೆ ಬರುವ ನೀರ್ಗಾಲುವೆಗಳನ್ನು ಅಸಾಧ್ಯ ಜಲದುರ್ಗಗಳೆಂದುಕೊಂಡು ನುಗ್ಗಿ ಕವಡಿಬಿಡುವನು. ಬಿಳಿಯ ತಾವರೆ ಗಳನ್ನು ಶ್ವೇತಚ್ಛತ್ರಗಳೆಂದು ಹಿಡಿಸಿಕೊಳ್ಳುವನು. ಅಶೋಕದ ಎಳೆ ಚಿಗು ರನ್ನು ವಿಜಯ ಧ್ವಜವೆಂದು ಎತ್ತಿಹಿಡಿಸುವನು. ಒಡನಾಡಿಗಳು 'ಜಯ! ಜಯ! ' ಎಂದು ಆನಂದ ಕೋಲಾಹಲ ಮಾಡುತ್ತಿರಲು ಲತಾಗೃಹಕ್ಕೆ ಬಂದು ರಾಜಠೀವಿಯಿಂದ ಪೀಠದ ಮೇಲೆ ಮಂಡಿಸುವನು. ಬಳಿಕ ತನ್ನ ಸುತ್ತಲೂ ನೆರೆದ ಬಾಲಕವೃಂದಕ್ಕೆ 'ನಿನಗೆ ಈ ದೇಶ, ನಿನಗೆ ಆ ದೇಶ' ಎಂದು ಒಬ್ಬೊಬ್ಬರಿಗೆ ಒಂದೊಂದು ದೇಶವನ್ನು ಮೆಚ್ಚುಕೊಡುವನು.

ಈ ರೀತಿ ಸಾಮ್ರಾಜ್ಯದಾಟದಲ್ಲಿ ಆನಂದಿಸುತ್ತಿದ್ದ ಭರತನಿಗೆ ಕ್ರಮ

ಕ್ರಮವಾಗಿ ಬಾಲ್ಯ ಕಳೆದು ಯೌವನ ತಲೆದೋರಿತು. ಆಗ ಅವನ ಸರ್ವ ಪ್ರಕಾರದಲ್ಲಿಯೂ ತಂದೆಯನ್ನೆ ಹೋಲುತ್ತಿದ್ದನು. ತಂದೆಯ ರೂಪು, ತಂದೆಯ ಚೆಲುವು, ತಂದೆಯ ರೀತಿ, ತಂದೆಯ ಮಾತಿನ ಸೊಗಸು, ಎಲ್ಲವೂ ಅವನಲ್ಲಿ ಪ್ರತಿಬಿಂಬಿಸುತ್ತಿದ್ದವು. ತಂದೆಯ ಅಚ್ಚಿನಲ್ಲಿ ಒತ್ತಿದ ಹಾಗೆ ಭರತ ಕುಮಾರನು ಪ್ರಕಾಶಿಸುತ್ತಿದ್ದನು. ________________

ಕನ್ನಡ ಸಾಹಿತ್ಯ ಚಿತ್ರಗಳು ಬಾಹುಬಲಿ ಭರತನು ಹುಟ್ಟಿದ ಸ್ವಲ್ಪ ಕಾಲದ ಮೇಲೆ ಕಿರಿಯ ರಾಣಿ ಸುನಂದೆ ಗರ್ಭಿಣಿಯಾದಳು. ಆ ಕಾಲದಲ್ಲಿ ಆಕೆಗೆ ದಿಗ್ಗಜಗಳನ್ನು ಹೋಲುವ ಮದ್ದಾನೆಗಳ ಹೋರಾಟವನ್ನು ನೋಡಬೇಕೆಂದೂ, ಜಗಜಟ್ಟಿಗಳೆಂದು ಹೆಸರುವಾಸಿ ಪಡೆದ ಮಲ್ಲರ ಮಲ್ಲಗಾಳಗವನ್ನು ಕಾಣಬೇಕೆಂದೂ ಅತಿ ಕುತೂ ಹಲವಾಗುತ್ತಿತ್ತು. ಆ ಬಗೆಯ ಅಸಾಧಾರಣವಾದ ಬಯಕೆಗಳು ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವಿನ ಬಾಹುಬಲವನ್ನು ಸಾರಿ ಹೇಳುವಂತಿತ್ತು. ದಿನ ತುಂಬಿದ ಬಳಿಕ ಮನುಕುಲದ ಯಶಶ್ಮಿ ಜಯಶ್ರೀಗಳು ಮೂಡಿ ಬಂದ ೬ ತೆ ಒಬ್ಬ ಕುಮಾರನು ಹುಟ್ಟಿದನು. ಆ ಸಮಯದಲ್ಲಿ ದೇವತೆಗಳೆಲ್ಲ ಆನಂದಿ ಸಿದರು. ಅರಮನೆಯ ಆನಂದವಾದ್ಯಗಳ ಜೊತೆಗೆ ದೇವಲೋಕದ ವಾದ್ಯ ಗಳ ಮೊಳಗಿದವು. ಊರಿನಲ್ಲಿ ಎಲ್ಲಿ ನೋಡಿದರೂ ಧ್ವಜ ತೋರಣಗಳನ್ನೆತ್ತಿ ಕಟ್ಟಿ ಪರಿಮಳ ಪುಷ್ಪಗಳನ್ನೆರಚಿ ಸರ್ವಾಲಂಕಾರ ಭೂಷಿತರಾಗಿ ಜನ ಆನಂ ಧೋತ್ಸವಗಳಲ್ಲಿ ಮುಳುಗಿದ್ದರು. ಮಗುವಿಗೆ ' ಬಾಹುಬಲಿ ” ಎಂದು ಹೆಸರಿಟ್ಟರು ಅದರ ಬಾಲ ಕೇಳಿ ಗಳಿಂದ ನಾಭಿರಾಜನೇ ಮೊದಲಾದವರೆಲ್ಲರೂ ಪರಮಾನಂದಭರಿತರಾದರು. ಬಾಹುಬಲಿ ಬೆಳೆ ಬೆಳೆದಂತೆ ತನ್ನ ಹೆಸರನ್ನು ಸಾರ್ಥಕ ಪಡಿಸುತ್ತಿದ್ದನು. ಜೊತೆಯ ಬಾಲಕರೊಡನೆ ಕುಸ್ತಿ ಮಾಡುವನು ; ತೋ೪* ತಟ್ಟ ಜಟ್ಟಿಗಳ ಮೇಲೆ ಬಿದ್ದು ಕಾಳಿಗಮಾಡುವನು. ಹೀಗೆ ತೋಳ್ಬಲವನ್ನು ಮೆರಸುವುದ ರಲ್ಲಿ ಮನಮೆಚ್ಚಿ ಆನಂದಿಸುತ್ತಿದ್ದನು. ನವಯೌವನದ ಕಳೆ ಅಡಿಯಿಡುತ್ತಿರಲು ಅವನ ಚೆಲುವಿಗೆ ಎಣೆಯಿಲ್ಲ ವಾಯಿತು. ಅರಳು ತಾವರೆಯನ್ನು ಹೋಲುವ ಮುಖ, ಕಮಲ ದಳದಂತಹ ಕಣ್ಣುಗಳು, ಮೇಘದಂತೆ ಗಂಭೀರವಾದ ದನಿ, ಕಪ್ಪಾದ ತಲೆಗೂದಲು, ವಿಸ್ತಾರವಾದ ಎದೆ, ಮೊಳಕಾಲವರೆಗೂ ನೀಡಿದ ಬಲವಾದ ತೋಳುಗಳು, ದುಂಡುದೊಡೆಗಳು, ತುಂಬಿದ ಮೈ ಕಟ್ಟು, ಕುಲಶೈಲದಂತೆ ಔನ್ನತ್ಯ- ಹೀಗೆ ಬಾಹುಬಲಿ ಸಕಲ ಸೌಂದರ್ಯ ಸಂಪನ್ನನಾದನು. ಅವನ ಆ ಅಸಮಾನ ವಾದ ಚೆಲುವನ್ನು ಒಮ್ಮೆ ಕಂಡವರು ಅದನ್ನೆ೦ದಿಗೂ ಮರೆಯುವಂತಿಲ್ಲ. ________________

ಭರತ-ಬಾಹುಬಲಿ ಕನಸಿನಲ್ಲಿ ಕೂಡ ಅದನ್ನೆ ನೆನೆಯುವರು. ಅವನು ಆ ಕಾಲದ * ಕಾಮದೇವ. ಎಂದಮೇಲೆ ಅವನ ಸೌಂದಯ್ಯಕ್ಕೆ ಬೇ೬ ವರ್ಣನೆಯೇಕೆ ? ಬೇರೆ ಮಕ್ಕಳು ಯಶಸ್ವತಿಗೆ ಭರತನಾದ ಮೇಲೆ ತೊಂಬತ್ತೊಂಭತ್ತು ಮಂದಿ ಗಂಡು ಮಕ್ಕಳೂ ಎಲ್ಲರಿಗಿಂತಲೂ ಕಿರಿಯವಳಾಗಿ ಒಬ್ಬ ಮಗಳೂ ಹುಟ್ಟಿದರು. ಬಾಹುಬಲಿ ಹುಟ್ಟಿದ ಬಳಿಕ ಸುನಂದೆ ಒಬ್ಬ ಮಗಳನ್ನು ಮಾತ್ರ ಪಡೆದಳು. ಯಶಸ್ವತಿಯ ಮಗಳು ಬ್ರಹ್ಮ ; ಸುನಂದೆಯ ಮಗಳು ಸೌಂದರಿ. ಈ ಮಕ್ಕಳೆಲ್ಲರೂ ಕುಲಭೂಷಣರಾಗಿ ಬೆಳಗುತ್ತಿದ್ದರು. ಇವರನ್ನೆಲ್ಲ ಕಂಡು ಆದಿ ಪುರುಷನ ಅಕ್ಕರೆ ಉಕ್ಕಿ ಬಂತು. ಅವರೆಲ್ಲ ರಿಗೂ ತಕ್ಕ ಭೂಷಣಗಳನ್ನು ತನ್ನ ಬುದ್ಧಿ ಬಲದಿಂದ ಹೊಸದಾಗಿ ನಿರ್ಮಿಸಿ ಕೊಟ್ಟನು, ಅವರೆಲ್ಲರೂ ಇಳೆಯೆರಚುವ ಆ ಅಲಂಕಾರಗಳನ್ನು ತೊಟ್ಟು ಬೆಳಕಿನ ಕಣಗಳಿಂದಲೇ ನಿರ್ಮಿತರಾಗಿರುವರೊ ಎಂಬಂತೆ ತೋರುತ್ತಿದ್ದರು. ವಿದ್ಯೋಪದೇಶ ಈ ಮಕ್ಕಳಿಗೆ ತಕ್ಕ ವಿದ್ಯೆಗಳನ್ನು ಕಲಿಸಬೇಕೆಂದು ಆದಿನಾಥನಿಗೆ ಮನಸ್ಸಾಯಿತು. ಆ ಹೊತ್ತಿಗೆ ಸರಿಯಾಗಿ ಬ್ರಹ್ಮ ಸೌ೦ದರಿಯರಿಬ್ಬರೂ ತಂದೆಯ ಸಮಾಸಕ್ಕೆ ಬಂದು ನಮಸ್ಕಾರ ಮಾಡಿ ದೂರ ಕುಳಿತುಕೊಂಡರು. ಋಷಭಸ್ವಾಮಿಯು ಮಕ್ಕಳಿಬ್ಬರನ್ನೂ ಹತ್ತಿರ ಕರೆದು ತೊಡೆಯ ಮೇಲೆ ಕೂರಿಸಿಕೊಂಡು, ಮಕ್ಕಳಿರಾ, ನಿಮ್ಮಿಬ್ಬರ ನಡವಳಿಕೆಯೂ ವಿನಯಕ್ಕೆ ನೆಲೆಯಾಗಿದೆ. ಈ ವಯಸ್ಸು, ಈ ಶೀಲ, ಈ ಏನಯ- ಎಲ್ಲಕ್ಕೂ ವಿದ್ಯೆ ಯನ್ನು ಸೇರಿಸಿದರೆ ಆಗ ನೀನೆ ಜಗತ್ಪಾವನೆಯರಾಗುತ್ತೀರಿ. ಎಲ್ಲರನ್ನೂ ಮಾರಿಸುತ್ತೀರಿ ?” ಎಂದು ನುಡಿದನು. ಬಳಿಕ ಅವರಿಬ್ಬರನ್ನೂ ಎರಡು ಪಕ್ಕ ಗಳಲ್ಲಿ ಕೂರಿಸಿಕೊಂಡು ಹಿರಿಯ ಮಗಳು ಬ್ರಹ್ಮಗೆ ಲಿಪಿಗಳನ್ನೂ ಸೌಂವರಿಗೆ ಗಣಿತವನ್ನೂ ಉಪದೇಶಮಾಡಿದನು. ಇದರ ಜೊತೆಗೆ ವಾಯವನ್ನೂ

  • ಜೈನಪುರಾಣಗಳು ಒಟ್ಟು ಇಪ್ಪತ್ತು ನಾಲ್ಕು ಮಂದಿ ಕಾನುದೇವರು ಬೇರೆ ಭೇರೆ ಕಾಲಗಳಲ್ಲಿದ್ದರೆಂದು ಹೇಳುತ್ತವೆ. ಅವರಲ್ಲಿ ಬಾಹುಬಲಿ ಮೊದಲನೆಯವನು, ________________

ಕನ್ನಡ ಸಾಹಿತ್ಯ ಚಿತ್ರಗಳು ಸಮಸ್ತ ಕಲೆಗಳನ್ನೂ ತಿಳಿಸಿ ಅವರು ಸಕಲ ವಿದ್ಯಾ ಪರಿಪೂರ್ಣೆಯರಾಗುವಂತೆ ಮಾಡಿದನು, ಹೀಗೆ ಮೊದಲು ಹೆಣ್ಣು ಮಕ್ಕಳಿಗೆ ವಿದ್ಯೋಪದೇಶಮಾಡಿ ಆಮೇಲೆ ಗಂಡುಮಕ್ಕಳಿಗೆ ಕಲಿಸಕೊಡಗಿದನು, ಭರತನಿಗೆ ಅರ್ಥಶಾಸ್ತ್ರ ಭರತಶಾಸ್ತ್ರ ಗಳನ್ನು ತಿಳಿಸಿದನು. ಬಾಹುಬಲಿಗೆ ಕಾಮತಂತ್ರ, ಆಯುರ್ವೇದ, ಧನು ರ್ವೇದ, ಹಸ್ತಿ ತಂತ್ರ, ಅಶ್ವತಂತ್ರ, ರತ್ನ ಪರೀಕ್ಷೆ ಮೊದಲಾದವನ್ನು ಕಲಿಸಿ ದನು. ಉಳಿದ ಮಕ್ಕಳಿಗೆಲ್ಲ ಗೀಳವಾದ್ಯಗಳ ಅರಿವನ್ನೊಳಗೊಂಡ ಗಂಧರ್ವ ಶಾಸ್ತ್ರ, ಚಿತ್ರಕಲೆ, ವಾಸ್ತು ವಿದ್ಯೆ ಮುಂತಾದ ಲೋಕೋಪಕಾರಿಗಳಾದ ಶಾಸ್ತ್ರ ಗಳು ಎಷ್ಟಿವೆಯೋ ಅಷ್ಟನ್ನೂ ಉಪದೇಶಮಾಡಿದನು. ಉತ್ತಮ ವಿದ್ಯೆಗಳಿಗೆ ನೆಲೆಯಾದ ಮಕ್ಕಳೆಲ್ಲರೂ ತಮ್ಮ ನಯ ವಿನಯಗಳಿಂದ ತಂದೆಯ ಮನಸ್ಸಿಗೆ ಆನಂದವುಂಟುಮಾಡುತ್ತಿದ್ದರು. fy. ಗಾರಂಭ ಅಷ್ಟು ಹೊತ್ತಿಗೆ ಲೋಕದಲ್ಲಿ ಜನ ಕಷ್ಟ ಪಟ್ಟು ದುಡಿಯದೆ ಸುಖವಾಗಿ ಬಾಳಬಹುದಾಗಿದ್ದ ಭೂಗಭೂವಿ) ಸಿಕ್ರಿ ಪೂರ್ತಿಯಾಗಿ ಮಾಯವಾಯಿತು, ಮೈ ಮುರಿದು ಕೆಲಸಮಾಡಿಯೇ ಬದುಕಬೇಕಾದ ಕರ್ಮಭೂಮಿ ಸ್ಥಿತಿ ಪ್ರಾರಂಭವಾಯಿತು. ಆಗ ಮೊದಲು ತಾನಾಗಿಯೇ ಹುಟ್ಟಿ ಬೆಳೆದು ಫಲ ಕೊಡುತ್ತಿದ್ದ ಸಸ್ಸಾದಿಗಳ ಸಾರ ಕುಗ್ಗಿ ಹೋಯಿತು. ಜನರಿಗೆ ರೋಗರುಜಿನ ಗಳ ಬಾಧೆಯೂ ಬಂದೊದಗಿತು, ನಗಾಣದೆ ಪ್ರಜೆಗಳೆಲ್ಲ ಒಟ್ಟುಗೂಡಿ ನಾಭಿರಾಜನ ಸಲಹೆಯಂತೆ ಆದಿನಾಥನ ಬಳಿ ಬಂದರು. ತಮ್ಮ ಹಸಿವು ಸಂಕಟಗಳನ್ನು ಪರಿಹರಿಸಿ ಬಾಳುವ ದಾವ ತೋರಬೇಕೆಂದು ಮೊರೆಯಿಟ್ಟರು, ಋಷಭಸ್ವಾಮಿಯು ಅವರ ಮೊರೆಯನ್ನು ಕೇಳಿ, ' ಅಂಜಬೇಡಿ ” ಎಂದು ಅವರನ್ನೆಲ್ಲ ಸ೦ತಯಿಸಿದನು. ಬಳಿಕ ಭೂಮಿಯನ್ನು ಅಲ್ಲಲ್ಲಿಯ ಪ್ರಕೃತಿ ಸ್ವಭಾವಕ್ಕನುಗುಣವಾಗಿ ಅನೇಕ ಬಗೆಯಾಗಿ ವಿಂಗಡಿಸಿದನು. ಆಯಾ ಪ್ರದೇಶದಲ್ಲಿ ಹೇಗೆ ಹೇಗೆ ಜೀವನ ಸೌಕಯ್ಯಗಳನ್ನು ದೊರಕಿಸಿಕೊಳ್ಳಬಹುದೆಂಬುದನ್ನು ತಿಳಿಸಿದನು. ದೇಶಗಳನ್ನು ಆಳುವುದು, ತೆರಿಗೆಯೆತ್ತುವುದು, ಜನ ನೆಮ್ಮದಿಗೆ ದಾರಿಮಾಡು ________________

ಭರತ-ಚಟು ವುದು, ಮೊದಲಾದ ಕ್ರಮವನ್ನು ವಿವರಿಸಿದನು. ಜನರ ಜೀವನೋಪಾಯ ಕಾಗಿ ಬರವಣಿಗೆ, ಕೃಷಿ, ವಾಣಿಜ್ಯ, ಹಸ್ತ ಕೌಶಲ್ಯದಿಂದ ಸಾಧಿಸುವ ಶಿಲ್ಪ, ಕತ್ತಿ ಹಿಡಿದು ರಕ್ಷಣೆ ಮಾಡುವ ಶಸ್ತ್ರಕರ್ಮ, ಪಶುಪಾಲನೆ, ಸೇವಾವೃತ್ತಿ ಮೊದಲಾದ ವೃತ್ತಿಗಳನ್ನು ಕಲ್ಪಿಸಿದನು. ಜನರನ್ನು ಕ್ಷತ್ರಿಯ, ವೈಶ್ಯ, ಶೂದ್ರ ರೆಂದು ಮೂರು ವರ್ಣಗಳಾಗಿ ವಿಂಗಡಿಸಿ ಅವರವರ ಕರ್ತವ್ಯಗಳನ್ನು ಗೊತ್ತು ಮಾಡಿದನು, ಈ ವ್ಯವಸ್ಥೆಯನ್ನು ಮಾರದೆ ನಡೆಯುತ್ತಿದ್ದರೆ ಈ ಕೀಳಾಲ ದಲ್ಲಿ ಜನ ಸುಖವಾಗಿ ಬಾಳಬಹುದೆಂದು ನಿಯಮಿಸಿದನು. ಆದಿನಾಥನು ಹೀಗೆ ಕಟ್ಟುಪಾಡು ಮಾಡಿದಂದಿನಿಂದ ಕೃತಯುಗ ಪ್ರಾರಂಭವಾಯಿತು. ಅದೇ ಕಾಲದಲ್ಲಿ ಋಷಭಸ್ವಾಮಿಗೆ ಪಟ್ಟಾಭಿಷೇಕವಾಯಿತು. ರಾಜ್ಯ ವಾಳುತ್ತ ತಾನು ಮಾಡಿದ ಲೋಕವ್ಯವಸ್ಥೆಯನ್ನು ಸರಿಯಾಗಿ ನಡಸು ವುದಕ್ಕೂ, ಮಾರಿದವರನ್ನು ಉಚಿತ ರೀತಿಯಲ್ಲಿ ಶಿಕ್ಷಿಸುವುದಕ್ಕೆ ಯೋಗ್ಯ ವಾದ ರಾಜಕುಲಗಳನ್ನು ಸ್ಥಾಪಿಸಿದನು, ಋಷಭಸ್ವಾಮಿಯೇ ಆದರ್ಶ ರಾಜ ನಾಗಿ ರಾಜ್ಯಪಾಲನೆ ಮಾಡುತ್ತಿರಲು ನೆಲವೆಲ್ಲ ಹರ್ಷಕ್ಕೆ ನೆಲೆಯಾಗಿತ್ತು. ಋಷಭನ ವೈರಾಗ್ಯ, ಪರಿನಿಷ್ಮ ಣ ಮೆಚ್ಚಿನ ಮಡದಿಯರು, ವಿದ್ಯಾ ವಿನಯ ಸಂಪನ್ನರಾದ ಮಕ್ಕಳು, ತೃಪ್ತರಾದ ಪ್ರಜೆಗಳು ಇವರಿಂದ ಕೂಡಿ ಪರಮಾನಂದಭರಿತನಾಗಿ ರಾಜ್ಯ ಭಾರ ಮಾಡುತ್ತ ಆದಿನಾಥನು ಅನೇಕ ವರ್ಷಗಳನ್ನು ಕಳೆದನು. ಬಳಿಕ ಒಮ್ಮೆ ಆತನು ಒಡೋಲಗದಲ್ಲಿರುವಾಗ ದೇವೇಂದ್ರನು ದೇವಸಮೂಹ ದೊಡನೆ ಆ ಸ್ಥಾನಕ್ಕೆ ಬಂದನು. ಅಪ್ಪರೆಯರ ನೃತ್ಯ ಸೇವೆಯಿಂದ ಪರಮ ನನ್ನು ಸಂತೋಷಪಡಿಸಬೇಕೆಂಬ ತಮ್ಮ ಬಯಕೆಯನ್ನು ಅರಿಕೆಮಾಡಿ ಕೊಂಡನು, ಆದಿನಾಥನು ತಾನು ಯಾವೊಂದು ಆಸೆಯೂ ಇಲ್ಲದವನಾದರೂ ಸಮಸ್ತ ಸುರ ನರರ ಆಸೆ ಪೂರ್ಣವಾಗಲೆಂಬ ಭಾವನೆಯಿಂದ ಅದಕ್ಕೆ ಸಮ್ಮತಿ ಯಿತ್ತನು. ದೇವವಾದ್ಯಗಳ ಮಧುರರವವೂ, ದೇವಸ್ತ್ರೀಯರ ಇಂಪಾದ ಗಾನವೂ ಅಮೃತದ ಮಳೆ ಸುರಿದಂತೆ ರಂಜಿಸುತ್ತಿರಲು ನೀಳಾಂಜನೆಯೆಂಬ ದೇವ ನರ್ತಕಿಯೊಬ್ಬಳು ನರ್ತನಕ್ಕೆ ಪ್ರಾರಂಭಿಸಿದಳು. ಅವಳ ಕೂಪಕ್ಕೂ ನರ್ತನ ________________

೨೪ ಕನ್ನಡ ಸಾಹಿತ್ಯ ಚಿತ್ರಗಳು ಕೌಶಲ್ಯಕ್ಕೂ ಸಭೆಯೆಲ್ಲ ಬೆರಗಾಯಿತು, ನಿಸ್ಸ೦ಗನಾದ ಆದಿನಾಥನೇ ಆ ಸೊಗಸಿಗೆ ಮನಸೋತು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದಾಗ ಆ ನೀಳಾಂಜನೆಗೆ ಆಯಸ್ಸು ಮುಗಿಯಿತು. ಆಡುತ್ತಾಡುತ್ತ ಆಕೆ ಮಿಂಚಿನಂತೆ ತಟಕ್ಕನೆ ಮಾಯವಾದಳು, ರಸಭಂಗ ವಾದೀತೆಂದು ಇಂದ್ರನು ತನ್ನ ಶಕ್ತಿಯಿಂದ ಅವಳಂತೆಯೇ ಮತ್ತೊಬ್ಬಳನ್ನು ಸೃಷ್ಟಿಸಿ ನರ್ತನವನ್ನು ಮುಂದುವರಿಸಿದನು. ಅಲ್ಲಿ ನೆರೆದ ನರರಾಗಲಿ ಸುರ ರಾಗಲಿ ಅದನ್ನು ಅರಿಯಲಿಲ್ಲ ; ಮೊದಲಿನ ನೀಳಾಂಜನೆಯೆಂದೇ ಭಾವಿಸಿ ದ್ದರು. ಆದಿನಾಥನಿಗೆ ಮಾತ್ರ ಆ ಗುಟ್ಟು ಗೊತ್ತಾಗಿ ಹೋಯಿತು. ಅದನ್ನು ಕಂಡು ಋಷಭಸ್ವಾಮಿಯು “ ದೇಹ ಎಷ್ಟು ಅನಿತ್ಯವಾದ್ದು !” ಎಂದು ಆಶ್ಚರ್ಯಪಟ್ಟನು. ಸಂಸಾರದ ಅಸ್ಥಿರತೆ ಚೆನ್ನಾಗಿ "ಮಂದಾ ಯಿತು, ಇನ್ನು ನನಗೆ ಈ ಭೋಗ ಭಾಗ್ಯಗಳೊಂದೂ ಬೇಡ ' ಎಂದು ನಿಶ್ಚಯಮಾಡಿ ಎಲ್ಲವನ್ನೂ ತೊರೆದನು. ಮುಕ್ತಿಯನ್ನು ಸಾಧಿಸಬೇಕೆಂದು ಸಂಕಲ್ಪಿಸಿ ತಪಸ್ಸಿಗೆ ಹೊರಡಲು ಸಿದ್ದನಾದನು. ಬಳಿಕ ಭರತನನ್ನು ಕರಸಿ ಆತನಿಗೆ ಪಟ್ಟಾಭಿಷೇಕ ಮಾಡಿ ರಾಜ ಪದವಿ ಯನ್ನಿತ್ತನು. ಬಾಹುಬಲಿಗೆ ಯುವರಾಜಪದವಿಯನ್ನು ಕೊಟ್ಟನು. ಭರ ತನು ಅಯೋಧ್ಯಾ ಪಟ್ಟಣದಲ್ಲಿಯ ಬಾಹುಬಲಿ ಮೌದನಪುರದಲ್ಲಿಯೂ ಆಳುತ್ತಿರುವಂತೆ ನಿಯಮಿಸಿದವ. ಉಳಿದ ಮಕ್ಕಳಿಗೂ ಭೂಮಂಡಲವನ್ನು ಹಂಚಿಕೊಟ್ಟು ಒಬ್ಬೊಬ್ಬರನ್ನು ಒಂದೊಂದು ಕಡೆ ನಿಲ್ಲಿಸಿದನು. ಬಂಧು ಗಳಲ್ಲರಿಗೂ ಉಚಿತ ಸತ್ಕಾರ ಮಾಡಿ ತಾಯಿತಂದೆಗಳ ಅಪ್ಪಣೆ ಪಡೆದು ತಸ ಸ್ಸಿಗೆ ಹೊರಟನು. ಆಗ ದೇವತೆಗಳು ಮತ್ತೊಮ್ಮೆ ಋಷಭಸ್ವಾಮಿಗೆ ಅಭಿಷೇಕ ಮಾಡಿ ದರು. ಆನಂತರ ಪಲ್ಲಕ್ಕಿಯೊಂದನ್ನು ಅಣಿಮಾಡಿ ತಂದರು. ಋಷಭ ಸ್ವಾಮಿ ಅದನ್ನು ಹತ್ತಿದ ಬಳಿಕ ಏಳಡಿಗಳಷ್ಟು ದೂರ ಕ್ಷತ್ರಿಯ ರಾಜರು ಅದನ್ನು ಹೊತ್ತು ನಡೆದರು. ಬಳಿಕ ದೇವತೆಗಳು ತಮ್ಮ ಕೈಗೆ ತೆಗೆದು ಕೊಂಡು ಆಕಾಶ ಮಾರ್ಗದಲ್ಲಿ ಸಂಭ್ರಮದಿಂದ ನಡೆದರು. ಊರ ಹೊರ ಗಿನ ವನದಲ್ಲಿ ಪಲ್ಲಕ್ಕಿಯನ್ನಿಳಿಸಲು ಆದಿನಾಥನು ವಿಧಿವಿಹಿತವಾಗಿ ದೀಕ್ಷೆ ಯನ್ನು ಕೈಕೊಂಡನು. ಆತನು ಕಿತ್ತೆಸೆದ ಕುರುಳನ್ನು ಪೂಜಿಸಿ ದೇವತೆಗಳು ________________

ಭರತ-ಬಾಹುಬಲಿ ಕ್ಷೀರಸಮುದ್ರದಲ್ಲಿ ಹಾಕಿ ಬಂದರು. ಹೀಗೆ ' ಸರಿಸಿ ಮಣ ಕಲ್ಯಾಣ ? ವನ್ನು ನೆರವೇರಿಸಿ ಮುನೀಂದ್ರನ ಪಾದಗಳಿಗೆರಗಿ ಸ್ವರ್ಗಕ್ಕೆ ನಡೆದು, ಭರ ತನೂ ಭಕ್ತಿಯಿಂದ ಆತನನ್ನು ಪೂಜಿಸಿ ರಾಜಧಾನಿಗೆ ಹಿಂದಿರುಗಿದನು. - ಆದಿನಾಥನ ತಪಸ್ಸು - ಆದಿನಾಥನು ಮೌನ ಮತ್ತು ಅನಶನ ವ್ರತಗಳನ್ನು ಧರಿಸಿ ಧ್ಯಾನಾ ಸಕ್ತನಾದನು. ' ಇನ್ನು ಆರು ತಿಂಗಳು ಕಳೆದಲ್ಲದೆ ಕೈಯೆತ್ತುವುದಿಲ್ಲ ? ಎಂದು ಸಂಕಲ್ಪಿಸಿ ಪ್ರತಿಮಾಯೋಗವಲ್ಲಿ ನಿಂತನು. ಏನೇನೋ ಅಡ್ಡಿಗಳು ಬಂದವು. ಆದರೂ ಆತನ ಧ್ಯಾನಕ್ಕೆ ಚ್ಯುತಿ ಬರಲಿಲ್ಲ. ಆತನ ತಪಸ್ಸು ವೃದ್ಧಿಯಾಗುತ್ತ ಬಂದಂತೆಲ್ಲ ಅದರ ಪ್ರಭಾವದಿಂದ ಅಲ್ಲಿದ್ದ ಸಮಸ್ತ ಪ್ರಾಣಿ ವರ್ಗವೂ ಜಾತಿ ವೈರವನ್ನು ತೊರೆದು ಆ ಕಾಡಿನಲ್ಲಿ ಅನ್ನೋನ್ಯ ಪ್ರೀತಿಯಿಂದ ಬಾಳುತ್ತಿದ್ದವು. ಆರು ತಿಂಗಳು ಕಳೆದ ಮೇಲೆ ಧ್ಯಾನವನ್ನು ಮುಗಿಸಿ ಚರಿಗೆಗೆ ಹೊರ ಟನು. ಉತ್ತಮ ಆಹಾರಕ್ಕಾಗಿ ದೇಶದೇಶಗಳನ್ನು ಸಂಚರಿಸಿದನು. ಜನರು ಅ೦ ದ ಮುನಿಗೆ ಭಿಕ್ಷೆ ನೀಡಲು ಯೋಗ್ಯವಾದ ವಸ್ತು ಯಾವುದೆಂದರಿಯದೆ ಬಟ್ಟೆ ಬರೆ ಊಟ ತಿಂಡಿಗಳನ್ನು ಅರ್ಪಿಸಬಂದರು, ಮುನೀಶ್ವರನು ಯಾವು ದನ್ನೂ ಸ್ವೀಕರಿಸಲಿಲ್ಲ. ಕಡೆಗೆ ಹಸ್ತಿನಾವತಿಯ ಆರಸನಾದ ಶ್ರೇಯಾಂಸ ನೆಂಬುವನು ಇಷ್ಟಾರ್ಥವನ್ನು ಸಲ್ಲಿಸಲು ಕಲ್ಪವೃಕ್ಷವೇ ಹತ್ತಿರ ಬರುತ್ತಿರು ವುದೋ ಎಂಬಂತೆ ಬರುತ್ತಿರುವ ಆ ಮುನೀಂದ್ರನಿಗೆ ಪರಿಶುದ್ಧವಾದ ಕಬ್ಬಿನ ಹಾಲನ್ನು ಸಮರ್ಪಿಸಿದನು. ಭಕ್ತಿಯಿಂದರ್ಪಿಸಿದ ಆ ನಿರ್ದುಷ್ಟ ರಸವನ್ನು ಸ್ವಾಮಿ ಪಾನ ಮಾಡಿದನು. ಆಗ ಪಂಚಾಶ್ಚಯ್ಯಗಳಾದವು. ಋಷಭಯೋಗಿಯು ಹಲವು ಸಂವತ್ಸರಗಳವರೆಗೆ ದೇಶಾಟನೆ ಮಾಡು ತಿದ್ದು ಕಡೆಗೆ ಪುರಿಮತಾಳವೆಂಬ ಪಟ್ಟಣದ ಹೊರ ಉದ್ಯಾನದಲ್ಲಿ ಘೋರ ತಪಸ್ಸಿಗೆ ತೊಡಗಿದನು. ಕೇವಲ ಜ್ಞಾನೋತ್ಪತ್ತಿ ಹೀಗೆ ತಪೋನಿರತನಾಗಿರಲು ಋಷಭಯೋಗಿಯ ಕರ್ಮಬೀಜವೆಲ್ಲ ________________

ಕನ್ನಡ ಸಾಹಿತ್ಯ ಚಿತ್ರಗಳು ಸುಟ್ಟು ಹೋಯಿತು. ಹುಟ್ಟು ಸಾವಿನ ಚಕ್ರಕ್ಕೆ ಆತನನ್ನು ಬಿಗಿದಿದ್ದ ಬಂಧನ ವೆಲ್ಲ ಬಿಚ್ಚಿ ಹೋಗಿ ಆತ್ಮ ಮುಕ್ತವಾಯಿತು. ಆ ಮುಕ್ತಾತ್ಮನಿಗೆ ಕೇವಲ ಜ್ಞಾನವೆಂಬ ಸರ್ವೋತ್ಕೃಷ್ಟವಾದ ಜ್ಞಾನ ಉಂಟಾಯಿತು, ಋಷಭಯೋಗಿ ಜಿನನಾದನು, ತೀರ್ಥ೦ಕರನಾದನು. ಕೇವಲ ಜ್ಞಾನೋತ್ಪತ್ತಿಯಾದಾಗ ದೇವತೆಗಳು ಬಂದು ಆನಂದ ನೃತ್ಯ ಮಾಡಿ ಉತ್ಸವವನ್ನಾಚರಿಸಿದರು. ಇಂದ್ರನ ಆಜ್ಞೆಯಂತೆ ಕುಬೇರನು ಜಿನನ ಧರ್ಮಬೋಧೆಗೆ ಅನುಕೂಲಿಸುವ ಸಮವಸರಣ ಮಂಟಪವನ್ನು ನಿರ್ಮಿಸಿದನು. ಅದರಲ್ಲಿ ದೇವಾಸುರನರರು ಮಾತ್ರವೇ ಅಲ್ಲ, ಪಶು ಪಕ್ಷಿ ಮೊದಲಾದ ಸಮಸ್ಯೆ ಪ್ರಾಣಿಗಳಿಗೂ ಎಡೆಯುಂಟು. ಅದು ಆಕಾಶಗಾಮಿ ಯಾಗಿ ಜಿನನ ಮನಸ್ಸನ್ನನುಸರಿಸಿ ಎಲ್ಲೆಂದರಲ್ಲಿ ಸಂಚರಿಸುವುದು, ಆ ಮಂಟಪದಲ್ಲಿ ತೀರ್ಥ೦ಕರನ ಬೋಧಾಮೃತವನ್ನು ಸವಿಯಲು ಸಮಸ್ತ ಜೀವ ರಾಶಿಗಳೂ ಬಂದು ನೆರೆದವು. ಪುರಿಮತಾಳಪುರದರಸು ಭರತನೊತ್ತಿನ ತನ್ನ ವೃಷಭಸೇನನೆಂಬ ವನು ಆದಿ ತೀರ್ಥ೦ಕರನನ್ನಾ ರಾಧಿಸಲು ಮಂಗಳದ್ರವ್ಯ ಸಮೇತನಾಗಿ ಬಂದನು. ಬಂದು ವೃಷಭಸ್ವಾಮಿಯ ಮಂಗಳಮುಖವನ್ನು ಕಂಡನೋ ಇಲ್ಲವೋ, ಆತನಿಗೆ ಪರಮ ವೈರಾಗ್ಯ ತಲೆದೋರಿತು. ಅರ್ಹತ್ಪರಮೇಶ್ವರನ ಸಮಕ್ಷದಲ್ಲಿ ದೀಕ್ಷೆಯಾ೦ತು ಆತನ ಮೊದಲನೆಯ ಗಣಧರನಾದನು. ಚಕ್ರರತ್ಯೋತ್ಪತ್ತಿ ಇತ್ತ ಆಯೋಧ್ಯೆಯಲ್ಲಿ ಭರತರಾಜನು ಆಸ್ಸಾನಮಂಟಪದಲ್ಲಿದ್ದಾಗ ಪುರೋಹಿತನು ಬಂದು ಆದಿನಾಥನಿಗೆ ಕೇವಲಜ್ಞಾನವುಂಟಾದ ಸುದ್ದಿಯನ್ನು ತಿಳಿಸಿದನು. ಆಯುಧಾಗಾರದಲ್ಲಿ ಸೂಯ್ಯನಂತೆ ಕಳೆಯೆರಚುವ ಚಕ್ರರತ್ನ ನುದ್ಭವಿಸಿತೆಂದು ಆಯುಧಾಧ್ಯಕ್ಷನು ಬಿನ್ನವಿಸಿದನು. ಅಂತಃಪುರದಲ್ಲಿ ಪಟ್ಟದ ರಾಣಿ ಸುಕುಮಾರನನ್ನು ಹೆತ್ತಳೆಂದು ಕಂಚುಕಿ ವಿಜ್ಞಾಪಿಸಿಕೊಂಡನು. ಏಕ ಕಾಲದಲ್ಲಿ ಬಂದ ಈ ಮೂರು ಶುಭ ಸಮಾಚಾರಗಳನ್ನೂ ಕೇಳಿ ಭರತನು ಪರಮಾನಂದಭರಿತನಾದನು. ________________

ಭರತ-ಬಾಹುಬಲಿ ಇವುಗಳಲ್ಲಿ ಮೊದಲು ಯಾವ ಶುಭಕ್ಕಾಗಿ ಉತ್ಸವ ನಡೆಸಬೇಕೆಂದು ಸ್ವಲ್ಪ ಹೊತ್ತು ಯೋಚಿಸಿದನು. ' ಧರ್ಮ, ಅರ್ಥ, ಕಾಮ,--ಎಂಬ ಪುರು ಷಾರ್ಥಗಳಲ್ಲಿ ಧರ್ಮವೇ ಮುಖ್ಯ. ಧರ್ಮದ ಫಲ ಅರ್ಥ, ಕಾಮ ಆ ಫಲದ ರಸ. ಆದ್ದರಿಂದ ಅರ್ಹತ್ಪರಮೆಶ್ವರನ ಪೂಜೆಯೇ ಪ್ರಥಮ ಕರ್ತವ್ಯ ? ಎಂದು ನಿಶ್ಚಯಿಸಿದನು. ಬಳಿಕ ಅಂತಃಪುರ ಪರಿವಾರ ಸಮೇತನಾಗಿ ಸಮವ ಸರಣ ಮಂಟಪದೆಡೆಗೆ ಪ್ರಯಾಣ ಮಾಡಿದನು. ಧರ್ಮಾಮೃತ ವರ್ಷ ಸಮಸ್ತ ರಾಜಚಿಹ್ನೆಗಳನ್ನೂ ದೂರದಲ್ಲಿ ಬಿಟ್ಟು ಕಾಲ್ನಡಿಗೆಯಿಂದಲೆ ಅರ್ಹನ ಅಡಿದಾವರೆಗಳೆಡೆಗೆ ನಡೆದನು, ಮೂರು ಸಾರಿ ಪ್ರದಕ್ಷಿಣೆ ಮಾಡಿ ಭಗವಂತನ ಎದುರಿಗೆ ನಿಂತು ಕೈಮುಗಿದು ಭಕ್ತಿಯಿಂದ ಸ್ತೋತ್ರಮಾಡಿ * ಇಂದ್ರ ಪದವಿಯೇ ಮೊದಲಾದ್ದು ಯಾವುದೂ ಸ್ಥಿರವಲ್ಲ. ಅದೊಂದೂ ನನಗೆ ಬೇಡ, ಉತ್ತಮ ಜ್ಞಾನ ದೊರೆಯುವಂತೆ ಕರುಣಿಸು ' ಎಂದು ಪ್ರಾರ್ಥಿಸಿದನು. ಭರತನ ಪ್ರಾರ್ಥನೆಯನ್ನು ಸಾರ್ಥಕಪಡಿಸಲೋ ಎಂಬಂತೆ ಆದಿ ತೀರ್ಥಂಕರನು ದಿವ್ಯ ಧ್ವನಿಯಲ್ಲಿ ಧರ್ಮೋಪದೇಶ ಮಾಡತೊಡಗಿದನು. ಆ ಉಪದೇಶ ಸಭೆಯಲ್ಲಿದ್ದ ಸಮಸ್ತರಿಗೂ ಅವರವರ ಭಾಷೆಯಲ್ಲಿ ಅರ್ಥವಾಗು ತಿತ್ತು. ಲೋಕದ ಸ್ವರೂಸ, ತತ್ವನಿವೇಚನೆ, ಮುಕ್ತಿ ಸಾಧನೆಯ ವಿಧಾನ ಎಲ್ಲವೂ ಆ ಬೋಧನೆಯಿಂದ ಸ್ಪಷ್ಟವಾಯಿತು. ಅಲ್ಲಿ ನೆರೆದ ಎಷ್ಟೋ ಜನರು – ಅರಸುಗಳೂ ಸಾಧಾರಣರೂ, ಗಂಡ ಸರೂ, ಹೆಂಗಸರೂ-ಆ ದಿಜಿನನ ಸನ್ನಿಧಿಯಲ್ಲಿ ದೀಕ್ಷೆ ತೆಗೆದುಕೊಂಡರು. ಬ್ರಹ್ಮ ಸೌಂದರಿಯರು ವೈರಾಗ್ಯಕ್ಕೆ ಮನಸ್ಸು ಕೊಟ್ಟರು. ವಿವಾಹವನ್ನೊಲ್ಲದೆ ಗುರುಪ್ರಸಾದದಿಂದ ದೀಕ್ಷೇತಾಳಿ ಗಣಿನೀ ಗಣಕ್ಕೆ ಮುಖ್ಯೆಯರಾದರು. ಭರತ ಬಾಹುಬಲಿಗಳು ಭಗವಂತನನ್ನು ವಂದಿಸಿ ತಮ್ಮ ತಮ್ಮ ರಾಜಧಾನಿಗಳಿಗೆ ಹೋದರು. ಆದಿತೀರ್ಥಂಕರನು ಸಮವಸರಣ ಮಂಟಪದಲ್ಲಿ ನೆಲಸಿ ಶಕ, ಕಾಶ್ಮೀರ, ಆಂಧ್ರ, ಕರ್ನಾಟಕ, ಮಗಧ ಮೊದಲಾದ ದೇಶಗಳಲ್ಲಿ ಸಂಚರಿಸಿ ಅಲ್ಲೆಲ್ಲ ________________

ಕನ್ನಡ ಸಾಹಿತ್ಯ ಚಿತ್ರಗಳು ಧರ್ಮಾಮೃತ ವರ್ಷವನ್ನೆರೆಡು ಲೋಕವನ್ನು ಧನ್ಯವಾಗಿ ಮಾಡಿದನು. ಕಡೆಗೆ ಕೈಲಾಸ ಪರ್ವತದಲ್ಲಿ ನೆಲಸಿದನು, ಭರತನ ದಿಗ್ವಿಜಯ ಪ್ರಯಾಣ ಸಮವಸರಣದಿಂದ ರಾಜಧಾನಿಗೆ ಹಿಂದಿರುಗಿದ ಭರತರಾಜನು ಆಯುಧಾಗಾರಕ್ಕೆ ಹೋಗಿ ಚಕ್ರಪೂಜೆಯನ್ನು ನೆರವೇರಿಸಿದನು. ಆ ಚಕ್ರ ರತ್ನದ ಜೊತೆಯಲ್ಲಿ ಇನ್ನೂ * ಹದಿಮೂರು ಇತರ ರತ್ನಗಳಿಗೂ ಪೂಜೆ ಮಾಡಿದನು. ಬಳಿಕ ಅರಮನೆಗೆ ಬಂದು ಸಿ” ಯ ಮಗನಿಗೆ ಜಾತಕರ್ಮೋ ತ್ಸವವನ್ನು ನೆರವೇರಿಸಿದನು. ಯಾರ ಆಯುಧಾಗಾರದಲ್ಲಿ ಚಕ್ರರತ್ನವು ವಿಸುವುದೋ ಆ ರಾಜನೇ ಚಕ್ರವರ್ತಿಯಾಗತಕ್ಕವನು. ಈ ಅವಸರ್ಪಿಣಿಯಲ್ಲಿ ಭರತನೇ ಆದಿಚಕ್ರ ವರ್ತಿ, ಲೋಕದ ದೊರೆಗಳನ್ನೆಲ್ಲ ಅಡಿಗೆರಗಿಸಿದಲ್ಲದೆ ಯಾರೂ ಚಕ್ರವರ್ತಿ ಯಾಗುವ ಹಾಗಿಲ್ಲ. ಆದ್ದರಿಂದ ಭರತನು ದಿಗ್ವಿಜಯಕ್ಕೆ ಸನ್ನಾಹಮಾಡ ತೊಡಗಿದನು. ಅಷ್ಟರಲ್ಲಿ ಶರತ್ಕಾಲ ಬಂತು. ಅದು ವಿಜಯಯಾತ್ರೆಗೆ ಸರಿಯಾದ ಕಾಲ, ಪುರೋಹಿತನು ವಿಜಯಪ್ರಯಾಣಕ್ಕೆ ಶುಭ ಮುಹೂರ್ತವನ್ನು ಗೊತ್ತು ಮಾಡಿದನು. ರಾಜಾಜ್ಞೆಯಿಂದ ದಿಗ್ವಿಜಯ ಪ್ರಯಾಣ ಸೂಚನೆಯ ಭೇರಿಯನ್ನು ಹೊಡೆಯಿಸಿದರು. ಚತುರಂಗ ಸೈನ್ಯ ನೆರೆಯಿತು. ಸರ್ವಾಲಂಕಾರ ಭೂಷಿತನಾದ ಭರತ ರಾಜನು ಪುರೋಹಿತನ ಆಶೀರ್ವಾದಗಳನ್ನಾಲಿಸುತ್ತ ನಿಂತಿರಲು ಅಜಿತಂ ಜಯವೆಂಬ ಆತನ ವಿಜಯರಥ ಸಜ್ಜಾಗಿ ಬಂತು, ಹೂರ್ತಿಕರು, “ದೇವಾ, ವಿಜಯಪ್ರಸ್ಥಾನ ಲಗ್ನ ಹತ್ತಿರ ಬಂತು' ಎಂದು ವಿಜ್ಞಾಪಿಸಿದರು. ದುಂದುಭಿಗಳ ಘೋಷ ದಿಕ್ಕುಗಳ ಕೊನೆಮುಟ್ಟಿತ್ತು ; ಮಂಗಳ ಗೀತಗಳ ಇನಿ ದನಿ ವಾದ್ಯಗಳ ನಾದದೊಡನೆ ಬೆರೆಯಿತು. ಗುರುಜನರು ನಾನಾವಿಧವಾಗಿ

  • ಛತ್ರರತ್ನ, ಖಡ್ಡ ರತ್ನ, ದಂಡ ರತ್ನ, ಚರ್ಮರತ್ನ, ಮಣಿರತ್ನ, ಕಾಕಿಣಿ ರತ್ನ, ಗೃಹಪತಿರತ್ನ, ಸೇನಾನಿರತ್ನ, ತಕ್ಷಕ ರತ್ನ, ಪುರೋಹಿತರತ್ನ, ಹಸ್ತಿರತ್ನ ತುರಗರತ್ನ, ಸ್ತ್ರೀರತ್ನ, ಇಲ್ಲೆಲ್ಲ ರತ್ನ ' ಎಂದರೆ ಅತ್ಯಂತ ಶ್ರೇಷ್ಟವಾದ್ದು ಎಂದು ಅಭಿಪ್ರಾಯ. ________________

ಭರತ-ಬಾಹು ಆಶೀರ್ವಾದ ಮಾಡುತ್ತ ಅಕ್ಷತೆಯೆರಚಿದರು. ನಂದಿಗಳು ಗಂಭೀರ ಧ್ವನಿ ಯಿಂದ ರಾಜನ ಗುಣಗಾನ ಮಾಡತೊಡಗಿದರು. ಈ ಮಂಗಳ ಧ್ವನಿಗಳ ನಡುವೆ ಚಕ್ರವರ್ತಿಯ ರಥವನ್ನೇರಿ ವಿಜಯ ಪ್ರಯಾಣ ಬೆಳಸಿದನು. ಅಂದು ಅಯೋಧ್ಯಾ ಪಟ್ಟಣದ ಹತ್ತಿರವೇ ಸಿದ್ಧಪಡಿಸಿದ್ದ 'ವಿಜಯ ಪ್ರಸ್ಥಾನ ಶಿಬಿರ' ದಲ್ಲಿ ತಂಗಿದನು, ಪೂರ್ವ ದಿಗ್ವಿಜಯ ಮರುದಿನ ಚಕ್ರವರ್ತಿಯ ಸೇನೆ ಪೂರ್ವಾಭಿಮುಖವಾಗಿ ಪ್ರಯಾಣ ಮಾಡಿತು. ನೆಲ, ಆಕಾಶ, ದಿಕ್ಕುಗಳನ್ನೆಲ್ಲ ಬೆಳಗಿ ಸೂರ್ಯನಂತೆ ಪ್ರಜ್ವಲಿ ಸುತ ಚಕರ ಮುಂದೆ ನಡೆಯಿತು. ಅದರ ಜೊತೆಯಲಿ ಪಡೆಗೆ ಅಡ ಬಂದ ಬೆಟ್ಟಗುಡ್ಡಗಳನ್ನು ಕಡಿದು ದಾರಿ ಬಿಡಿಸಿ ಮಟ್ಟ ಮಾಡುತ್ತ ದಂಡರತ್ನ ನಡೆಯಿತು. ದಂಡ ರತ್ನದ ಹಿಂದೆ ಆನೆ, ಕುದುರೆ, ತೇರು, ಕಲಾಳೆಂಬ ನಾಲ್ಕು ಬಗೆಯ ಸೈನ್ಯವೂ ಸದವಳನ ಸನ್ನೆಯಲ್ಲಿ ಶಿಸ್ತಿನಿಂದ ಮುಂದುವರಿ ಋತು, ಚಕ್ರವರ್ತಿಯ ಚತುರಂಗ ಸೈನ್ಯದ ಜೊತೆಗೆ ದಿವಿಜ ಖೇಚರ ಸೈನ್ಯಗಳೂ ಸೇರಿದವು ಈ ಷಡಂಗಬಲ ಭೂಮ್ಯಾಕಾಶಗಳನ್ನೆಲ್ಲ ತುಂಬಿತು.

  • ಆ ದೊಡ್ಡ ಪಡೆ ಗಂಗಾನದಿಯ ದಡದಲ್ಲಿ ಎರಡನೆಯ ಗಂಗೆ ಯೆಂಬಂತೆ ನಡೆಯುತ್ತಿರಲು ಗಡಿನಾಡಗಳ ರಾಜರೂ ಹೊರನಾಡುಗಳ ದೊರೆಗಳೂ ಕಪ್ಪ ಕಾಣಿಕೆಗಳನ್ನು ತಂದೊಪ್ಪಿಸಿದರು. ಮಹಾ ಪರಾಕ್ರಮಿ ಗಳೆಂದು ಹೆಸರು ಹೊಂದಿದ ವಿಕ್ರಮಶಾಲಿಗಳೆಲ್ಲ ದಂಡಕ್ಕೆ ಭಯ ಪಟ್ಟು ಚಕ ವರ್ತಿಗೆ ತಲೆ ಬಾಗಿಸಿದರು. ಆ ವಿಚಯ ಸೈನ್ಯಕ್ಕೆ ಎದುರಿಲ್ಲವಾಯಿತು. ನಿರಾತಂಕವಾಗಿ ಮುಂದುವರಿಯುತ್ತ ಪೂರ್ವ ಸಮುದ್ರದ ತೀರವನ್ನು ಸೇರಿ ಪಡೆ ಗಂಗಾ ದ್ವಾರದಲ್ಲಿ ಬೀಡುಬಿಟ್ಟಿತು,

ಸಮುದ್ರತೀರದ ದೇಶಾಧಿಪತಿಗಳೆಲ್ಲ ಭರತ ಚಕ್ರವರ್ತಿಯ ಬರವನ್ನು ಕೇಳಿ ಭಯಭ್ರಾಂತರಾದರು. ತಮ್ಮ ಬಲದರ್ಪವನ್ನು ಬಿಟ್ಟುಡುಗಿ ಶರಣ? ಗತರಾದರು. ಚಕ್ರವರ್ತಿ ಅವರನ್ನೆಲ್ಲ ಅನುಗ್ರಹಿಸಿ ಉಚಿತ ರೀತಿಯಲ್ಲಿ ನನ್ನಿಸಿದನು. - ಮಾಗಧ ಗರ್ವಭಂಗ ಪೂರ್ವ ಸಮುದ್ರ ಮಧ್ಯದಲ್ಲಿ ಮಾಗಧನೆಂಬೊಬ್ಬ ವ್ಯ೦ತರದೇವತೆ ________________

ಕನ್ನಡ ಸಾಹಿತ್ಯ ಚಿತ್ರಗಳು ಆಳುತ್ತಿದ್ದನು. ಅವನನ್ನು ಜಯಿಸಹೊರಟ ಚಕ್ರವರ್ತಿಯನ್ನು ಕಡಲಡ್ಡ ಗಟ್ಟಿತು. ಮಾರಿ ಮುನ್ನುಗ್ಗುವೆನೆಂದು ಯತ್ನಿಸಿದ ಆತನಿಗೆ ಪುರೋಹಿತನೂ ಕುಲವೃದ್ದರೂ ಹಿತೋಪದೇಶ ಮಾಡಿದರು. ಅದರಂತೆ ಗಂಗಾಸಾಗರ ಸಂಗಮದಲ್ಲಿ ದರ್ಭೆಯ ಮೇಲೆ ಮಲಗಿ ಭರತೇಶ್ವರನು ಮೂರು ದಿನಗಳ ವರೆಗೆ ಉಪವಾಸವ್ರತವನ್ನಾಚರಿಸಿದನು. ಪುರೋಹಿತನು ಜಿನಪೂಜೆ ಯನ್ನೂ ಶಾಂತಿಕ್ರಿಯೆಗಳನ್ನೂ ನೆರವೇರಿಸಿದನು. ನಾಲ್ಕನೆಯ ದಿನ ಬೆಳಗ್ಗೆ ಭರತ ರಾಜನು ಮಂಗಳಾಲಂಕಾರ ಮಾಡಿಕೊಂಡು ದಿವ್ಯಾಸ್ತ್ರಗಳನ್ನು ಧರಿಸಿದನು. ನೀರಿನಲ್ಲಿ ನೆಲದಲ್ಲೂ ತಡೆಯಿಲ್ಲದೆ ನಡೆಯುವ ಕುದುರೆಗಳನ್ನು ಹೂಡಿದ ರಥವನ್ನು ಸಾರಥಿ ತಂದು ನಿಲ್ಲಿಸಿದನು. ಅದನ್ನೆರಿ ಆ ಮಹಾಮಹಿಮನು ಗಂಗಾ ದ್ವಾರದಿಂದ ಲವಣ ಸಮುದ್ರವನ್ನು ಪ್ರವೇಶಮಾಡಿದನು. ಕುದುರೆಗಳ ಗೊರಸು ಮುಳುಗಲಿಲ್ಲ. ಚಕ್ರ ಕೆಳಗಿಳಿಯಲಿಲ್ಲ. ಚಕ್ರದ ಚೀತ್ಕಾರವೂ ನಿಲ್ಲಲಿಲ್ಲ. ನೆಲದ ಮೇಲೆ ಹೇಗೋ ಹಾಗೆ ಅತಿ ಸುಲಲಿತ ವಾಗಿ ನೀರಿನ ಮೇಲೂ ತೇರು ನಡೆಯುತ್ತಿತ್ತು. ಹೀಗೆ ಹನ್ನೆರಡು ಯೋಜನ ನಡೆದು ತಟಕ್ಕನೆ ರಥ ನಿಂತುಬಿಟ್ಟಿತು. ಭರತನಿಗೆ ಕೋಪವುಕ್ಕಿತು, ವಜ್ರಕಾಂಡವೆಂಬ ಬಿಲ್ಲನ್ನು ಕೈಗೆತ್ತಿ ಕೊಂಡು ಹೆದೆಯೇರಿಸಿದನು ; ಅಮೋಘ ಬಾಣವನ್ನು ಹೂಡಿದನು. ಆ ಬಾಣದಲ್ಲಿ, “ಫುರು ಪರಮೇಶ್ವರ ಪುತ್ರನಾದ ಭರತ ಚಕ್ರವರ್ತಿ ಬಂದಿದ್ದಾನೆ. ಎಲ್ಲ ಭೂನಿವಾಸಿಗಳೂ ವ್ಯ೦ತರಾಮರರೂ ತಲೆ ತಗ್ಗಿಸಿಕೊಂಡು ಬಂದು ಕಾಣಬೇಕು” ಎಂಬ ಲೇಖನವನ್ನಿಟ್ಟನು ಇಟ್ಟು ಅಲ್ಲಿಂದಲೇ ಮಾಗ ಧಾಮರನ ಮೇಲೆ ಪ್ರಯೋಗಿಸಿದನು. ಬಾಣ ನೇರವಾಗಿ ಮಾಗಧನ ಸಭೆಗೆ ಹೋಗಿ ಬಿದ್ದಿತು. ಆ ಲೇಖನ ವನ್ನೊದಿಸಿ ಕೇಳಿ ಮಾಗಧನು ಕೆರಳಿದನು. “ತನ್ನ ಕುಲದ ಚಲದ ಅಗ್ಗಳಿಕೆ ಕೆಡುವಂತೆ ಮತ್ತೊಬ್ಬನಿಗೆ ತಲೆಬಾಗಿ ಬಾಳುವವನು ಬದುಕಿದ್ದರೂ ಸತ್ತಂತೆಯೇ ಸರಿ” ಎಂದು ನುಡಿದನು. ಅಂಥ ಹೇಡಿಯಾಗಲು ಹೇಸಿ ಕದನಕಾತರನಾಗಿ ಗರ್ಜಿಸಿದನು. - ಕುಲವೃದ್ಧರು ಅವನಿಗೆ ಸಮಾಧಾನ ಹೇಳಿದರು : “ಈ ಅಭಿಮಾನ ವೇನೋ ಒಳ್ಳೆಯದು. ಆದರೆ ಯಾರೊಬ್ಬರೂ ತಾನೇ ಸರ್ವಶ್ರೇಷ್ಠನೆಂದು 9 84 ________________

ಭರತ ಬಾಹುಬಲಿ ಭಾವಿಸಬಾರದು, ದೊಡ್ಡವರಿಗೂ ದೊಡ್ಡವರಿದ್ದೇ ಇರುವರು. ಈತ ಸಾಮಾನ್ಯನಲ್ಲ ; ಚಕ್ರವರ್ತಿ, ಬಲಸ್ಸನೊಡನೆ ಕಾಳಗ ಸಲ್ಲದು. ಆದ ರಿಂದ ಸಾಮವೇ ಸರಿ” ಎಂದು ತಿಳಿಯಹೇಳಿದರು. - ಮಾಗಧಾಮರನು ನಿಜವನ್ನರಿತು ಗರ್ವ ವುಡುಗಿ ಭರತೇಶನನ್ನು ಬಂದು ಕಂಡನು, ಕೈಗಾಣಿಕೆಗಳನ್ನು ಸಮರ್ಪಿಸಿ ಆತನಿಗೆ ಅಧೀನನಾದನು. ಭರತನೂ ಮಾಗಧನನ್ನು ಉಚಿತ ಮರ್ಯಾದೆಗಳಿ೦ದ ಸಂತೋಷಪಡಿಸಿದನು. ವಿಜಯಾರ್ಧ ಸರ್ವತವನ್ನು ದಾಟಿದ್ದು ಮಾಗಧನನ್ನು ಜಯಿಸಿ ಮರಳಿದ ಭರತೇಶನು ದಕ್ಷಿಣಮುಖವಾಗಿ ತಿರುಗಿ ನಾನಾ ದೇಶಗಳನ್ನು ಗೆಲ್ಲುತ್ತ ಮುಂಬರಿದನು. ದಕ್ಷಿಣ ಪಶ್ಚಿಮ ಸಮುದ್ರಗಳ ನಡುಗಡ್ಡೆಗಳಲ್ಲಿದ್ದ ನರತನು ಪ್ರಭಾಸಾಮರರನ್ನೂ ಮಾಗಧ ನನ್ನು ಗೆದ್ದ ರೀತಿಯಲ್ಲಿ ಅಡಿಗೆರಗಿಸಿಕೊಂಡನು. ಬಳಿಕ ಸಿಂಧನದಿಯನ್ನನು ಸರಿಸಿ ಉತ್ತರಾಭಿಮುಖವಾಗಿ ನಡೆದು ವಿಜಯಾರ್ಧ ಪರ್ವತದ ತಪ್ಪಲಿಗೆ ಬಂದು ಸೇರಿದನು, * ವಿಜಯಾರ್ಧ ಕುಮಾರನು ಚಕ್ರವರ್ತಿಯನ್ನಾದರಿಸಿ ಅಭಿಷೇಕ ಮಾಡಿದನು. ಭರತವರ್ಷದ ನಟ್ಟನಡುವೆ ಪೂರ್ವ ಪಶ್ಚಿಮ ಸಮುದ್ರಗಳ ವರೆಗೂ ಹಬ್ಬಿ ಅದನ್ನು ಉತ್ತರ ದಕ್ಷಿಣ ಭಾಗಗಳಾಗಿ ವಿಂಗಡಿಸುವುದು ಆ ವಿಜ ಯಾರ್ಧ ಪರ್ವತ, ಅಲ್ಲಿ ಬೀಡು ಬಿಟ್ಟಿದ್ದಾಗ ಗಂಗಾ ಸಿಂಧೂನದಿಗಳ ಮಧ್ಯ ಪ್ರದೇಶದ ರಾಜರೆಲ್ಲ ಭರತನನ್ನು ಬಂದು ಕೂಡಿಕೊಂಡರು. ವೃಷಭದೇವ ನಲ್ಲಿದ್ದ ಗೌರವದಿಂದಲೂ ತಮ್ಮ ನನ್ನೈನಿಂದಲೂ ಭರತನಿಗೆ ಅಧೀನರಾದರು. ದಕ್ಷಿಣ ಭರತವನ್ನೆಲ್ಲ ಗೆದ್ದ ಮೇಲೆ ಭರತನ ದೃಷ್ಟಿ ಉತ್ತರಕ್ಕೆ ಹೊರ ಳಿತು. ಆದರೆ ವಿಜಯಾರ್ಧ ಪರ್ವತವನ್ನು ದಾಟುವುದಸಾಧ್ಯ. 'ತಮಿತ್ರ ಗುಹೆ ” ಯೆಂಬ ಒಂದು ಗುಹೆಯೊಳಗೆ ಬೇಕು, ಆ ಗುಹೆಯ ಬಾಗಿಲು ಆ ಬಿಟ್ಟಿದೆ. ಏನು ಮಾಡುವುದೆಂದು ಯೋಚಿಸುತ್ತಿರುವಷ್ಟರಲ್ಲಿ ಅಲ್ಲಿನವನಾದ

  1. ಆ ಪರ್ವತದ ಅಭಿವಾನಿದೇವತೆ. ________________

ಕನ್ನಡ ಸಾಹಿತ್ಯ ಚಿತ್ರಗಳು ಕೃತಮಾಲನೆಂಬ ಅಮರನೊಬ್ಬನು ಬಂದು ಆ ಗವಿಯ ಬಾಗಿಲು ತೆರೆಯುವ ಗುಟ್ಟನ್ನು ತಿಳಿಸಿ ಕೊಟ್ಟನು.

  • ಚಕ್ರವರ್ತಿಯು ಅವನ್ನೆಲ್ಲ ಸೇನಾಪತಿಗೆ ತಿಳಿಯ ಹೇಳಿದನು. ಆತನು ತುರಂಗ ರತ್ನ ವನ್ನೇರಿ ನಡೆದು ವಜ್ರ ಕವಾಟವನ್ನು ದಂಡರತ್ನ ದಿಂದ ಗಟ್ಟಿ ಯಾಗಿ ಬಡಿದನು. ತಕ್ಷಣ ಬೆಟ್ಟ ಬಿರಿದು ಬಾಯ್ದಿಡುವುದೋ ಎಂಬಂತೆ, ನೆಲ ನೊಂದು ನರಳುವುದೋ ಎಂಬಂತೆ, ಅದ್ಭುತವಾದ ಅಬ್ಬರ ಕೇಳ ಬಂತು. ವಜ್ರದರೆಗಳು ಪಕ್ಕಕ್ಕೆ ಸರಿದು ನಿಲ್ಲಲು ಒಳಗಿನಿಂದ ಬೆಂಕಿಯುರಿ ಭುಗಿಲೆಂದು ಹೊರಹೊಮ್ಮಿತು, ಅಶ್ವರತ್ನ ಒಂದೇ ಹಾರಿಗೆ ಹನ್ನೆರಡು ಯೋಜನ ಹಾರಿ ದೂರ ಸರಿಯಿತು.

ಆ ಬಳಿಕ ಸೇನಾಪತಿಯು ಪಶ್ಚಿಮ ಮೇಚ್ಛಖಂಡದ ಮೇಲೆ ದಂಡೆತ್ತಿ ನಡೆದನು, ಆ ಖಂಡವನ್ನೆಲ್ಲ ಮೂರು ಸಾರಿ ಬಳಸಿ ಅಲ್ಲಿನ ರಾಜಾಧಿರಾಜ ರನ್ನೆಲ್ಲ ಗೆದ್ದು, ಮುಖ್ಯರಾದವರನ್ನು ಮುಂದಿಟ್ಟು ಕೊಂಡು ಭರತಚಕ್ರ ವರ್ತಿಯ ಸನ್ನಿಧಿಗೆ ಕರೆತಂದನು, ಅಷ್ಟರಲ್ಲಿ ಆರು ತಿಂಗಳು ಕಳೆಯಿತು, ಗುಹೆಯ ಬೆಂಕಿಯೂ ಆರಿತ್ತು. ತಮಿಸ್ರಗುಹೆ ಹನ್ನೆರಡು ಯೋಜನ ಅಗಲವಾಗಿ ಎಂಟು ಯೋಜನ ಎತ್ತರವಾಗಿ ಕತ್ತಲೆ ತುಂಬಿ ಬಹು ಭಯಂಕರವಾಗಿತ್ತು. ಅದರ ನಡುವೆ ಸಿಂಧೂನದಿ ಅಂತರ್ಗಾಮಿಯಾಗಿ ಹರಿಯುತ್ತಿತ್ತು, ಭರತ ಚಕ್ರವರ್ತಿ ಆದರ ಬಾಗಿಲ ಬಳಿ ತಕ್ಕ ಕಾಸನ್ನೆರ್ಪಡಿಸಿ ಪಡೆ ಮುನ್ನುಗ್ಗಲೆಂದು ಅಪ್ಪಣೆಮಾಡಿ ದನು. ಒಳಗಿನ ಕಗ್ಗತ್ತಲೆಯನ್ನು ಕಂಡು ಪಡೆ ನಡುಗಿ ಹಿಂಜರಿಯಿತು. ಆಗ ಪುರೋಹಿತನು ಗವಿಯ ಇಕ್ಕೆಲದ ಗೋಡೆಗಳಲ್ಲೂ ಕಾಕಿಣಿ ರತ್ನಗಳನ್ನು ಮೆಟ್ಟಿಸಿ ಸೂರ್ಯ ಚಂದ್ರಮಂಡಲಗಳನ್ನು ಯೋಜನಕ್ಕೊಂದರಂತೆ ರಚಿಸಿ ದನು. ಅವುಗಳ ಬೆಳಕಿನಲ್ಲಿಯೂ ಚಕ್ರರತ್ನದ ಉಜ್ವಲ ಕಾಂತಿಯಲ್ಲಿಯೂ ಕತ್ತಲೆಯೆಲ್ಲ ಕರಗಿ ಹೋಯಿತು. ಸೇನೆ ನಿರಾತಂಕವಾಗಿ ಗವಿಯನ್ನು ಪ್ರವೇ ಶಿಸಿ ಎರಡಾಗಿ ಒಡೆದು ಸಿಂಧೂನದಿಯ ಇಕ್ಕೆಲಗಳಲ್ಲೂ ಮುಂದುವರಿಯ ತೊಡಗಿತು. ಗುಹೆಯಲ್ಲಿ ಅರ್ಧದಷ್ಟು ದೂರ ಸಾಗಿದ ಮೇಲೆ ಮತ್ತೊಂದು ತೊಂದರೆ ಅಡ್ಡಬಂತು. ಗುಹೆಯ ಗೋಡೆಯ ಎರಡು ಕಡೆಗಳಿಂದಲೂ ಎರಡು ನದಿ ________________

ಭರತ-ಬಾಹುಬಳಿ ಗಳು ಹರಿದು ಬಂದು ಸಿಂಧುವಿಗೆ ಕೊಡುತ್ತ ದಾರಿಯನ್ನು ಕಟ್ಟಿಬಿಟ್ಟಿವೆ. ಒಂದರ ನೀರು ತಳದ ಮರಳನೂ ಹೊತ್ತು ಮೇಲಕೆ ನೆಗೆಯುವುದು : ಇನ್ನೊಂದರ ನೀರು ಚೂರು ಚೆಂಡು ಬಿದ್ದರೂ ಅದನ್ನು ತಳಕ್ಕೆ ಮುಳುಗಿಸಿ ಬಿಡುವುದು. ಈ ವಿಚಿತ್ರದ ಹೊಳೆಗಳನ್ನು ಹಾಯುವುದು ಹೇಗೆಂದು ಬಗೆ ಹರಿಯಲಿಲ್ಲ. ಚಕ್ರವರ್ತಿ ಸ್ಥಪತಿರತ್ನ ನಿಗೆ ಹೇಳಿಕಳಿಸಿದನು. ಆತ ಬಂದು ಚೆನ್ನಾಗಿ ಪರೀಕ್ಷಿಸಿ ಗಾಳಿಯ ವಿಚಿತ್ರ ಗತಿಯಿಂದ ಅಂಥ ವೈಚಿತ್ರ್ಯವುಂಟಾಗಿದೆ ಯೆಂದರಿತು ಬಿನ್ನಯಿಸಿದನು. ಬಳಿಕ ಅಮಾನುಷಾರಣ್ಯಗಳಿಂದ ಮರ ಗಳನ್ನು ತರಿಸಿ ನದಿಗಳಿಗೆ ಸೇತುವೆ ಕಟ್ಟದನು. ಸೇನೆ ಸೇತುವೆಯ ಮೇಲೆ ಸರಾಗವಾಗಿ ನಡೆಯಿತು, ತಮಸ ಗುಹೆಯ ಉತ್ತರ ದ್ವಾರವನ್ನು ಅನಾಯಾಸವಾಗಿ ತೆಗೆದು ಚಕ್ರವರ್ತಿ ಉತ್ತರ ಭರತಕ್ಕೆ ಪ್ರವೇಶ ಮಾಡಿದನು. ಉತ್ತರ ಭರತ ವಿಜಯ ಮೊದಲು ಸಿಂಧೂನದಿಯ ಪಶ್ಚಿಮ ಖಂಡವನ್ನು ಮುತ್ತಿ ಅಲ್ಲಿನ ದೊರೆ ಗಳನ್ನೆಲ್ಲ ಸೇನಾಪತಿಯೇ ಗೆದ್ದು ಬಂದನು. ತರುವಾಯ ಭರತ ಚಕ್ರ ಶ್ವರನು ಮಧ್ಯಮ ಖಂಡಕ್ಕೆ ನುಗ್ಗಿ ದನು. ಅಲ್ಲಿ ಬಳಾಕಾವರ್ತರೆಂಬ ಇಬ್ಬರು ಮೇಚ್ಛರಾಜರು ಮಲೆತು ನಿಂತರು. ತಮ್ಮ ಬಲಗಳನ್ನೊಂದುಗುಡಿಸಿ ಚಕ್ರ ವರ್ತಿಯನ್ನು ಲೆಕ್ಕಿಸದೆ ಯುದ್ಧಕ್ಕೆ ಸಿದ್ಧರಾದರು. ಅವರ ಮಂತ್ರಿಗಳು ಆಲೋಚನೆ ಮಾಡಿ, ಈತನು ವಿಜಯಾರ್ಧ ಪರ್ವತವನ್ನು ದಾಟಿ ಬಂದಿರು ವುದರಿಂದ ಮಹಾಮಹಿಮನೇ ಆಗಿರಬೇಕು, ಈತನೊಡನೆ ಎದುರು ನಿಂತು ಕಾದುವುದು ಉಚಿತವಲ್ಲ. ಗಹನವಾದ ನಮ್ಮ ದುರ್ಗಗಳಲ್ಲಿ ನೆಲೆ ನಿಂತು ಈತನ ಸೈನ್ಯಕ್ಕೆ ಕಿರುಕುಳ ಕೊಡೋಣ. ನಮ್ಮ ದುರ್ಗಗಳ ಮೇಲೆ ದಂಡು ನುಗ್ಗಿಸಿದರೆ ಅದರ ಆಟ ಸಾಗದು ” ಎಂದು ಸಲಹೆ ಹೇಳಿದರು. ಬಳಾಕಾ ವರ್ತಕು ಅದೇ ನೀತಿಯನ್ನನುಸರಿಸಿದರು. ದುರ್ಗದ ರಕ್ಷಣೆ ಹೊಂದಿದ ಬಳಾಕಾವರ್ತರು ತಮ್ಮ ಕುಲದೇವತೆ ಗಳಾದ ಮೇಘಮುಖರೆಂಬ ನಾಗದೇವತೆಗಳನ್ನು ಪೂಜಿಸಿ ಪ್ರಾರ್ಥಿಸಿ ಕೊಂಡರು. ಆ ನಾಗದೇವತೆಗಳು ಅದ್ಭುತ ಮೇಘಾಕಾರದಿಂದ ಬಂದು ________________

ಕನ್ನಡ ಸಾಹಿತ್ಯ ಚಿತ್ರಗಳು ಅಪರಿಮಿತವಾಗಿ ಮಳೆ ಸುರಿಸಿದರು. ನೀರು ಸಮುದ್ರದಂತೆ ಉಕ್ಕಿಬಂದು ಸೈನ್ಯವನ್ನು ಕೊಚ್ಚಿಸತೊಡಗಿತು. ಚಕ್ರವರ್ತಿ ಸೈನ್ಯವನ್ನೆಲ್ಲ ಚರ್ಮರತ್ನದ ಮೇಲೇರಿಸಿದನು ; ಮೇಲೆ ಛತ್ರರತ್ನವನ್ನು ಹಿಡಿಸಿದನು. ಸಾಗರದ ನಡುವೆ ದೊಡ್ಡ ಹಡಗಿನಲ್ಲಿರುವಂತೆ ಚರ್ಮರತ್ನದ ಮೇಲೆ ಸೇನೆ ಸುರಕ್ಷಿತವಾಗಿತ್ತು. ಮೇಲಿನಿಂದ ಒಂದು ತೊಟ್ಟೂ ನೀರು ಬೀಳದಂತೆ ಛತ್ರರತ್ನ ಮರೆಮಾಡಿತು. ಜಯಕುಮಾರ ನೆಂಬ ಮಹಾವೀರನು ಮೇಘಮುಖಾಮರರೊಡನೆ ಕಾಳಗಕ್ಕೆ ನಿಂತನು. ಮೇಘಮುಖರು ಪೆಟ್ಟು ತಿಂದು ನೊಂದರು. ಆದರೂ ಕಾಳಗ ಬೇಗ ಕೊನೆ ಗೊಳ್ಳದಿರಲು ಭರತೇಶ್ವರ ಚಕ್ರವರ್ತಿ ಖಡ್ಡ ರತ್ನ ಕೈ ಕೈನೀಡಿದನು. ಆಗ ಮೇಘಮುಖರು ಅಂಜಿ ಹಿಂಜರಿದರು. ಬಳಾಕಾವರ್ತರು ಸೊಕ್ಕುಡುಗಿ ಚಕ್ರೇಶನ ಅಡಿಗೆರಗಿದರು. ಮುಂದೆ ವಿಜಯಿಯಾದ ಭರತೇಶ್ವರನು ಸಿಂಧೂ ಮೂಲಕ್ಕೆ ಹೋಗಿ ಸಿಂಧು ದೇವಿಯಿಂದ ಅಭಿಷಿಕ್ತನಾದನು. ಹಿಮವತ್ಪರ್ವತದ ಮಧ್ಯಮ ಶಿಖರವನ್ನು ತಲುಪಿ ಹಿಮವತ್ಕುಮಾರನಿಂದ ಪೂಜೆಗೊಂಡನು. ಅಲ್ಲಿಂದ ವೃಷಭಾಚಲಕ್ಕೆ ಹೋಗಿ ಸೇರಿದನು. ಅಲ್ಲಿ ತನ್ನ ವಿಜಯ ಪ್ರಶಸ್ತಿಯನ್ನು ಕತ್ತಿಸಬೇಕೆಂದು ನಿಶ್ಚಯಿಸಿದನು, ಕೆತ್ತಿ ಸನೋಡಿದರೆ ಪೂರ್ವ ಚಕ್ರವರ್ತಿಗಳ ಪ್ರಶಸ್ತಿಯಿಂದ ಅಲ್ಲಿನ ಕಲ್ಲುಗಳೆಲ್ಲ ತುಂಬಿಹೋಗಿದ್ದವು. ಮತ್ತಾರ ಪ್ರಶ ಸಿಗೂ ಎಡೆಯುಳಿದಿರಲಿಲ್ಲ. ಅದುವರೆಗೂ ಆತನು ತಾನೇ ಮಹಾಶೂರನೆಂದುಕೊಂಡಿದ್ದನು. ಈ ಪ್ರಶಸ್ತಿಗಳನ್ನು ಕಂಡ ಬಳಿಕ ಮಡುಗಟ್ಟಿದ್ದ ಅವನ ಗರ್ವರಸವೆಲ್ಲ ಸೋರಿ ಹೋಯಿತು. ಹೆಮ್ಮೆಯಡಗಿ ನಾಚಿ ತಲೆ ತಗ್ಗಿಸಿದನು. ಆದರೂ ಸ್ವಾಭಿ ಮಾನಕ್ಕೆ ಸಿಕ್ಕಿ ಪೂರ್ವ ಚಕ್ರವರ್ತಿಗಳ ಪ್ರಶಸ್ತಿಗಳಲ್ಲೊಂದನ್ನು ದಂಡರತ್ನ ದಿಂಬೊರಸಿ ಹಾಕಿ ಆಯೆಡೆಯಲ್ಲಿ ತನ್ನ ಪ್ರಶಸ್ತಿಯನ್ನು ಬರಸಿದನು. ಆ ಬಳಿಕ ಸೇನಾ ಸಮೇತನಾಗಿ ಗಂಗಾಕೂಟಕ್ಕೆ ಹೋಗಿ ಸೇರಿದನು. ಗಂಗಾದೇವಿ ಆತನಿಗೆ ತನ್ನ ಮಗಳ ಜಲಗಳಿಂದ ಅಭಿಷೇಕ ಮಾಡಿದಳು. ಆಮೇಲೆ ಗಂಗೆಯ ತಡಿವಿಡಿದು ಚಕ್ರವರ್ತಿಯ ಸೈನ್ಯ ದಕ್ಷಿಣಾಭಿಮುಖವಾಗಿ ________________

ಭರತ-ಬಾಹುಬಲಿ { ಪ್ರಯಾಣ ಮಾಡಿತು. ವಿಜಯಾರ್ಧ ಪರ್ವತದ ಪೂರ್ವದ ಕಡೆ ಇರುವ * ಕಾಂಡಕ ಪ್ರಪಾತ' ಗುಹೆಯ ಬಳಿ ಬೀಡುಬಿಟ್ಟಿತು. ಸೇನಾಪತಿಯು ಹಿಂದಿನಂತೆಯೇ ಗುಹೆಯ ಬಾಗಿಲನ್ನು ತೆರೆದು ಬೆಂಕಿ ಆರುವ ವರೆಗೂ ಪೂರ್ವ ಮೇಚ್ಚ ಖಂಡವನ್ನು ಗೆಲ್ಲಲು ನಡೆದನು. ಆ ಆ ಸಮಯದಲ್ಲಿ ಸಮಸ್ತ ವಿದ್ಯಾಧರ ರಾಜರೂ ನಮಿ ವಿನಮಿಗಳನ್ನು ಮುಂದುಮಾಡಿಕೊಂಡು ಬಂದು ಭರತ ಚಕ್ರವರ್ತಿಯನ್ನು ಕಂಡರು. ನಮಿ ಏನಮಿಗಳು ತಮ್ಮ * ನಂಟನ್ನು ನೆನೆದು ಭರತನಿಗೆ ತಮ್ಮ ತಂಗಿಯಾದ ಸುಭದ್ರೆಯೆಂಬ ಕನ್ಯಾರತ್ನ ವನ್ನು ಪರಮ ಸಂಭ್ರಮದಿಂದ ಮದುವೆಮಾಡಿ ಕೊಟ್ಟರು. ಸೇನಾಪತಿಯ ಮೇಚ್ಚಖಂಡವನ್ನು ಗೆದ್ದು ಬಂದನು. ದಿಗ್ವಿಜಯ ಪೂರ್ಣವಾಯಿತು. ಚಕ್ರರತ್ನ ಕಾಕಿಣಿರತ್ನಗಳ ಪ್ರಕಾಶ ದಲ್ಲಿ ಸೇನಾಸಮೇತನಾಗಿ ಭರತಚಕ್ರವರ್ತಿಯು “ ಕೌಂಡಕ ಪ್ರಪಾತ ಗುಹೆಯ ಮಾರ್ಗವಾಗಿ ವಿಜಯಾರ್ಧ ಪರ್ವತವನ್ನು ದಾಟಿ ಬಂದನು. ಅದರ ದಕ್ಷಿಣದಲ್ಲಿರುವ ಕೈಲಾಸ ಪರ್ವತದ ತಪ್ಪಲಲ್ಲಿ ಬೀಡು ಬಿಟ್ಟು, ಮತ್ತೊಮ್ಮೆ ವೃಷಭನಾಥನ ದರ್ಶನಮಾಡಿದನು. ಆದಿತೀರ್ಥಂಕರನನ್ನು ಭಕ್ತಿಯಿಂದರ್ಚಿಸಿ, ಸ್ತುತಿಸಿ ಬಳಿಕ ರಾಜಧಾನಿಗೆ ಹಿಂದಿರುಗಿದನು. ನಡೆಗೆ ತಡೆ ಪಟ್ಟಂಡ ಭರತ ಮಂಡಲವನ್ನೂ ತನ್ನ ಪರಾಕ್ರಮದಿಂದ ಅಡಿಗೆರಗಿಸಿ ಭರತ ಚಕ್ರವರ್ತಿ ಹಲವು ಪಯಣಗಳಲ್ಲಿ ಅಯೋಧ್ಯಾ ಪಟ್ಟಣದ ಬಳಿಗೆ ಬಂದನು. ಅಲ್ಲಿಯವರೆಗೂ ಎಲ್ಲಿಯೂ ನಿಲ್ಲದೆ ಹಗೆಗಳನ್ನೆಲ್ಲ ಧ್ವಂಸ ಮಾಡುತ್ತ ನುಗ್ಗುತ್ತಿದ್ದ ಚಕ್ರರತ್ನ ರಾಜಧಾನಿಯ ಬಾಗಿಲಿನಲ್ಲಿ ಅಲುಗದೆ ನಿಂತುಬಿಟ್ಟಿತು. ಪುರಪ್ರವೇಶ ಮಾಡದೆ ಚಕ್ರ ನಡೆಗೆಟ್ಟು ನಿಂತಿತೆಂಬ ಸುದ್ದಿ ಭರತ ಚಕ್ರವರ್ತಿಯ ಕಿವಿ ಮುಟ್ಟಿತು. ಆತನು ಆಶ್ಚಯ್ಯ ಪಟ್ಟು ಪುರೋಹಿತ ನನ್ನು ಕರಸಿ ಕಾರಣವೇನೆಂದು ಕೇಳಿದನು.

  • raವರು ಭರತನ ತಾಯಿ ಯಶಸ್ವತಿಯ ಅಣ್ಣಂದಿರಾದ ಕಪ್ಪ ಮಹಾತಚ್ಚರ ಮಕ್ಕಳು, ಆದಿತೀರ್ಥಂಕರನ ಸೇವಾ ಮಹಿಮೆಯಿಂದ ಅವರಿಗೆ ವಿದ್ಯಾಧರ ಪದವಿ ఉంటాయత, ________________

ಕನ್ನಡ ಸಾಹಿತ್ಯ ಚಿತ್ರಗಳು ಪುರೋಹಿತನು "ದೇವಾ, ನಿನಗೆ ಇನ್ನೂ ಹಗೆಗಳಿರುವರೆಂಬುದನ್ನು ಇದು ಸೂಚಿಸುತ್ತದೆ” ಎಂದು ನುಡಿದನು, ಮತ್ತೂ ಮುಂದುವರಿಸಿ “ ನೀನು ಇದುವರೆಗೂ ಹೊರರಾಜ್ಯಗಳಲ್ಲಿ ಸಾಧಿಸಬೇಕಾದ್ದನ್ನೆಲ್ಲ ಸಾಧಿಸಿದ್ದಾಯಿತು. ಒಳದೇಶದಲ್ಲಿ ಸಾಧಿಸುವುದು ಸ್ವಲ್ಪ ಉಬಗೆ, ನಿನ್ನ ತಮ್ಮಂದಿರು ಇನ್ನೂ ನಿನಗೆ ಎರಗಿಲ್ಲ. * ಭರತನೂ ಪುರುಸುತ, ನಾವೂ ಪುರುಸುತರು. ನಮಗೆ ತಂದೆ ರಾಜ್ಯ ಕೊಟ್ಟಿದ್ದಾನೆ. ನಮ್ಮ ಭಾಗ್ಯವನ್ನು ನಾವು ಅನುಭವಿಸುತ್ತೇವೆ ? ಎಂದು ಅವರು ಮದಿಸಿದ್ದಾರೆ. ಅವರಲ್ಲಿ ಅತಿ ಪರಾಕ್ರಮಿಯಾದ ಬಾಹು ಬಲಿಯಂತೂ ತನ್ನ ತೋYಲವನ್ನೇ ಮೆರೆಯುತ್ತಿದ್ದಾನೆ. ಆದಿ ಬ್ರಹ್ಮನು ಕೊಟ್ಟ ಈ ರಾಜ್ಯಕ್ಕೆ ನಾನು ಒಡೆಯ. ಭರತನು ಆರಸಾದರೆ ನನಗೇನು ? ಎಂದು ಮದಿಸಿದ್ದಾನೆ. ಬಲಗರ್ವಿತರಾದ ಸುಭಟರ ತೋಳ್ಳಲವನ್ನು ಧ್ವಂಸ ಮಾಡುವುದು ಅವನಿಗೆ ಆಟವಾಗಿ ಹೋಗಿದೆ. " ಶತ್ರುಗಳನ್ನು ಮುರಿ ದೇನೇ ! ' ಎಂದು ಅವನು ಸದಾ ಕಾತರಿಸುತ್ತಿದ್ದಾನೆ. ರಾಜನೆಂಬ ಹೆಸರು ನಿನಗೊಬ್ಬನಿಗೆ ಸಲ್ಲತಕ್ಕದ್ದಾಗಿರಬೇಕು, ಭರತೇ ಸ್ವರಾ, ಅವರೆಲ್ಲರೂ ನಿನ್ನ ಕಾಲೆರಗಿ ರಾಜಸುಖವನ್ನನುಭವಿಸಲಿ. ಒಲ್ಲದಿದ್ದರೆ ಪುರು ಪರಮೇಶ್ವರನ ಪಾದಪದ್ಮಕ್ಕೆರಗಿ ತಪಸ್ಸು ಮಾಡಲಿ, ಬೇರೆ ದಾರಿ ಯಿಲ್ಲ” ಎಂದನು. ಭರತಾನುಜರ ವೈರಾಗ್ಯ ಕೇಳಿ ಭರತನಿಗೆ ಕೋಪ ಕೆರಳಿತು ; ಕಣ್ಣು ಕೆಂಡವಾಯಿತು. “ ಆಹಾ ! ನನ್ನ ತಮ್ಮಂದಿರು ಹೀಗೆ ಮದಿಸಿರುವರೆ ? ಇವರನ್ನು ಯುದ್ಧ ಮಾಡಿ ಸೋಲಿಸಬೇಕು. - ನಮಗೇನು ಮಾಡಿಯಾನು ?' ಎಂದು ಅವರು ಭಾವಿಸಿ ಕೊಂಡು ತಾವೇ ಶೂರರೆಂದು ಸೊಕ್ಕಿದ್ದಾರೆ. ಹೀಗಿರುವಾಗ ಲೋಕವನ್ನೆಲ್ಲ ಗೆದ್ದು ತಾನೆ ಫಲವೇನು ? ಬಾಹುಬಲಿಯೊಬ್ಬ ಸಿಡಿದು ನಿಂತಿರುವಾಗ ಲೋಕ ದರಸುಗಳೆಲ್ಲ ನನ್ನ ಕಾಲಿಗೆ ಬಿದ್ದರೂ ಬಂದ ಭಾಗ್ಯವೇನು ? ” ಎಂದು ಗರ್ಜಿಸಿದನು. ತಮ್ಮಂದಿರ ಮೇಲೆ ದಂಡೆತ್ತಿ ನಡೆಯಲಿಚ್ಚಿಸಿದ ಚಕ್ರವರ್ತಿಯನ್ನು ಕುರಿತು, 'ದೇವಾ, ನಿನ್ನ ಒಂದು ಓಲೆಯಲ್ಲಿ ಮುಗಿಯುವಂಥದು ಈ ಮನೆ ________________

ಭರತ-ಬಾಹುಬಲಿ ವಾರ್ತೆ, ಇದಕ್ಕೇಕಿಷ್ಟು ಮಾತು ? - ಅವರ ಬಳಿಗೆ ನಿನ್ನ ಶಾಸನವನ್ನು ಹೊತ್ತ ಹರಿಕಾರರನ್ನು ಕಳಿಸು' ಎಂದು ಪುರೋಹಿತನು ಸಲಹೆಕೊಟ್ಟನು. ಭರತೇಶ್ವರ ಚಕ್ರವರ್ತಿಯ ಹರಿಕಾರರು ಆತನ ತಮ್ಮಂದಿರ ಬಳಿ ಹೋಗಿ, “ ಈ ಭೂಮಂಡಲ ಸಾಮ್ರಾಜ್ಯವು ನನ್ನೊಬ್ಬನ ಭೋಗಕ್ಕಾಗಿ ಮಾತ್ರವೇ ಅಲ್ಲ, ನಿಮ್ಮೆಲ್ಲರಿಗೂ ಹಿರಿಯಣ್ಣನಾದ ನಾನು ತಂದೆಯ ಸಮಾನ ವೆಂದು ತಿಳಿದು ವಿನಯವನ್ನು ತೋರಿಸಿನಾವೆಲ್ಲಾ ಒಟ್ಟಿಗೆ ಇರೋಣ, ಬನ್ನಿ' ಎಂಬ ಒಡೆಯನ ಅಪ್ಪಣೆಯನ್ನು ನೆತ್ತಿಯಲ್ಲಿ ಹೊತ್ತು ಬಂದು ಚಕ್ರ ವರ್ತಿಯ ಪಾದಕ್ಕೆರಗಿರಿ ” ಎಂದು ತಿಳಿಸಿದರು. ಅವರೆಲ್ಲರೂ ರಾಜಶಾಸನವನ್ನು ಕೇಳಿ ದೂತರಿಗೆ ಮರ್ಯಾದೆಮಾಡಿ ಕಳಿಸಿಕೊಟ್ಟರು. ಬಳಿಕ, “ಇದುವರೆಗೂ ಹಿರಿಯಣ್ಣ, ಗುರು, ತಂದ-ಎಂದು ಭರತನಿಗೆ ನಮಸ್ಕಾರ ಮಾಡುತ್ತಿದ್ದೆವು. ಈಗ ಆಳು, ಅರಸ ' ಎಂಬ ಭೇದವುಂಟಾಯಿತೆ ! ಛೇ ! ಇದೆಂಥ ಪ್ರೀತಿ ! ತಂದೆ ಕೊಟ್ಟ ರಾಜ್ಯಕ್ಕೆ ಇವ ನಿಗೆ ನಾವು ಕಿಂಕರರಾಗಬೇಕೇ ? ಇದು ಅಕ್ಕಿ ಕೊಟ್ಟು ಎಂಜಲನ್ನ ತಿಂದ ಹಾಗಲ್ಲವೆ ? ಇಂದ್ರ ವಂದಿತನಾದ ಪುರುದೇವನಿಗೆ ಮಕ್ಕಳಾಗಿ ಪರಮ ಪುರು ಷಾರ್ಥವನ್ನೇ ಪಡೆಯುತ್ತೇವೆ. ಈ ರಾಜ್ಯಭಾರ ವ್ಯರ್ಥವಾದ ಭಾರ” ಎಂದು ನಿಶ್ಚಯಿಸಿ ರಾಜ್ಯವನ್ನು ತೊರೆದು ಆದಿದೇವನ ಆಸ್ಥಾನಕ್ಕೆ ಹೊರಟು ಹೋದರು, ಹೋಗಿ, “ ದೇವಾ, ನೀನು ನನಗೆ ರಾಜ್ಯವನ್ನು ಕೊಟ್ಟೆ. ಓಡ ಹುಟ್ಟಿದ ಕಾರಣ ಭರತನು ' ನನಗೆರಗಿ ” ಎಂದು ಪೀಡಿಸುತ್ತಿದ್ದಾನೆ. ನಿನ್ನಡಿ ಗೆರಗಿದ ನಾವು ಮತ್ತಾರಿಗೂ ಎರಗಲಾರೆವು. ಆ ಭರತನನ್ನೂ ಅಡಿಗೆರಗಿಸುವ ತಪಸ್ಸನ್ನು ನಮಗೆ ದಯಪಾಲಿಸು ” ಎಂದು ಬೇಡಿ ದೀಕ್ಷೆ ಹೊಂದಿದರು. - ಬಾಹುಬಲಿಗೆ ರಾಯಭಾರ ಆ ಸುದ್ದಿಯನ್ನು ಕೇಳಿ ಭರತನಿಗೆ ಪರಮಾಶ್ಚರ್ಯವಾಯಿತು. ಅವರ ಆ ನಡವಳಿಕೆಯನ್ನು ಮನಸ್ಸಿನಲ್ಲೇ ಶ್ಲಾಘಿಸಿದನು. “ಒಬ್ಬ ತಾಯ ಹೊಟ್ಟೆ ಯಲ್ಲಿ ಹುಟ್ಟಿದವರಾದರೂ ಇವರು ನನಗೆ ಎರಗಲಿಲ್ಲ. ಇನ್ನು ಆ ಬಾಹುಬಲಿ ನನಗೆ ತಗ್ಗು ವನ ? ಸೂರ್ಯಕಾಂತಮಣಿ ಬಿಸಿಲಿಗೆ ಮಾರುರಿಯುವಂತೆ ________________

ಕನ್ನಡ ಸಾಹಿತ್ಯ ಚಿತ್ರಗಳು ಪರಾಕ್ರಮ ಪ್ರದರ್ಶನದಿಂದ ಆವನಿನ್ನೂ ಕೆರಳುತ್ತಾನೆ. ಆದ್ದರಿಂದ ಸಾಮ ದಿಂದಲೆ ವಶಪಡಿಸಿಕೊಳ್ಳಬೇಕು. ಅದು ಸಾಗದಿದ್ದರೆ ನನ್ನ ಮೆಚ್ಚಿನ ದಂಡ ಇದ್ದೇ ಇದೆ ” ಎಂದು ಭಾವಿಸಿ ಮಂತ್ರಿಗಳೊಡನೆ ಆಪ್ತಾಲೋಚನೆ ನಡೆಸಿ ದನು. ಅವರೂ ಒಪ್ಪಿದರು. ಆಗ ಚಕ್ರವರ್ತಿಯ ಅಪ್ಪಣೆಯ ಪ್ರಕಾರ ಸಂಧಿವಿಗ್ರಹಿಯು ಸಂಧಾನ ಕುಶಲನೂ ಯೋಗ್ಯನೂ ಆದ ಒಬ್ಬ ಮಹತ್ತರವನ್ನು ಬಾಹುಬಲಿಯ ಬಳಿಗೆ ಕಳಿಸಿದನು. ಆ ರಾಯಭಾರಿಯು ಕೆಲವು ದಿನಗಳಲ್ಲಿ ಪೌದನಪುರವನ್ನು ಸೇರಿ ತನ್ನ ಬರವನ್ನು ಹೇಳಿ ಕಳಿಸಿದನು. ಅಪ್ಪಣೆ ಪಡೆದು ಆಸ್ಥಾನವನ್ನು ಹೊಕ್ಕು ನೆಲಕ್ಕೆ ಬಗ್ಗಿ ನಮಸ್ಕಾರ ಮಾಡಿದನು. ಪಚ್ಚೆಯ ಬೆಟ್ಟದಿಂದ ಉತ್ತಮ ಮನುಷ್ಯಾಕೃತಿಯನ್ನು ಆದಿಬ್ರಹ್ಮನು ನಿರ್ಮಿಸಿದನೋ ಎಂಬಂತೆಯ ಕ್ಷಾತ್ರ ತೇಜಸ್ಸೆ ದೊರೆಯ ರೂಪದಿಂದ ಅವತಾರ ಮಾಡಿದೆಯೋ ಎಂಬಂತೆಯೂ ಸುಂದರ ರೂಪಿನಿಂದ ಪ್ರಕಾಶಿಸು ತಿದ್ದ ಬಾಹುಬಲಿಯನ್ನು ಕಣ್ಣಿಟ್ಟು ನೋಡಿದನು. ನೋಡಿ, 'ಈ ಕುಮಾರನ ತೇಜಸ್ಸು ಚಕ್ರವರ್ತಿಗೂ ಇಲ್ಲ' ಎಂದುಕೊಂಡನು. ಬಳಿಕ, 'ದೇವಃ, ಇದು ನಿಮ್ಮ ಅಣ್ಣನಾದ ರಾಜಾಧಿರಾಜನು ನಿಮಗೆ ಕಳಿಸಿರುವ ಮಹಾಪ್ರಸಾದ, ಒಪ್ಪಿಸಿಕೊಳ್ಳಬೇಕು' ಎಂದು ಉಪಾಯನ ರತ್ನ ಕರಂಡಕವನ್ನರ್ಪಿಸಿದನು. ಮಹಾಸಂಧಿ ವಿಗ್ರಹಿಯು ಅದನ್ನು ಕೈಗೆ ತೆಗೆದು ಕೊಂಡು ಮುದ್ರೆಯೊಡೆದನು. ರತ್ನಾಭರಣಗಳನ್ನು ಕೋಶಾಧ್ಯಕನ ವಶಕ್ಕೆ ಕೊಟ್ಟು ಲೇಖನವನ್ನು ಓದತೊಡಗಿದನು. “ಸ್ವಸ್ತಿ. ಸಮಸ್ತಲೋಕಾಧೀಶ್ವರನಾದ ಪುರುಷರಮೇಶ್ವರನ ಪಾದಪದ್ಮ ಗಳಿಗೆರಗಿ, ಚಕ್ರರತ್ನದ ಕಾಂತಿಯಿಂದ ನಿಖಿಲ ದಿದ್ದೇಶಗಳನ್ನೂ ಜಯಿಸಿರುವ ಭರತೇಶ್ವರ ಚಕ್ರವರ್ತಿಯು ತನ್ನ ಪ್ರಿಯಾನುಜನಾದ ಬಾಹುಬಲಿ ಕುಮಾರ ನನ್ನು ಪರಮಾಶೀರ್ವಾದಗಳಿಂದ ಹರಸಿ, ಬಿಲ್ಲುಗಳೆಂಬ ಲತೆಗಳಿಗೆ ಊರೆ ಗಂಬಗಳೂ ತನ್ನ ವಿಜಯೋತ್ಸವ ತೋರಣಸ್ತ೦ಭಗಳೂ ವೀರಶ್ರೀಯೆಂಬ ಹೆಣ್ಣು ಸರ್ಪಕ್ಕೆ ಆಶ್ರಯನಾದ ಚಂದನಕಾಂಡಗಳೂ ಆದ ಬಾಹುದಂಡಗಳಿಂದ ಅತಿಗಾಢವಾಗಿ ಆಲಿಂಗಿಸಿ, ಕಾವ್ಯವನ್ನು ಬೆಸಸಿದ್ದಾನೆ. ಮತ್ತೇನೆಂದರೆ ....” ________________

ಭರತ-ಬಾಹುಬಲಿ ಎಂದು ಓದಿದನೋ ಇಲ್ಲವೋ, ಬಾಹುಬಲಿ, “ಸಾಕು, ನಿಲ್ಲಿಸು. ಕಾರ್ ವೇನೆಂಬುದು ಆಮೇಲೆ ತಿಳಿಯಲಾಗುವುದು. ಮಹಾರಾಜನು ಅಯೋಧ್ಯಾ ಪಟ್ಟಣದಲ್ಲಿ ಸುಖವಾಗಿದ್ದಾನೆಯೇ, ಹೇಳು, ಚಕ್ರೇಶ್ವರನಿಗೆ ನಾನಾ ಚಿಂತೆ, ಹೇಗಾದರೂ ನಮ್ಮನ್ನು ನೆನೆದನಲ್ಲಾ ! ದಿಗ್ವಿಜಯ ತಡೆಯಿಲ್ಲದೆ ನಡೆಯಿ ತಷ್ಟೆ ? ಭೂವಲ್ಲಭನ ಭುಜಬಲಕ್ಕೆ ಚ್ಯುತಿಯಿಲ್ಲ ತಾನೆ ? ಅರಸುಗಳೆಲ್ಲ ತಗ್ಗಿ ಬಂದರೆಂದೂ ದಿಕ್ಕುಗಳೆಲ್ಲ ಅಳುಕಿದವೆಂದೂ ಲೋಕವೇ ಹೊಗಳುತ್ತಿರಲು ಕೇಳಿ ಆನಂದಿಸುತ್ತಿದ್ದೇವೆ. ಅಲ್ಲದೆ, ಹೇಳು, ಎಂದು ಭರತನ ದೂತನನ್ನು ಕುರಿತು ನುಡಿದನು. - ಆ ದೂತನು, “ ದೇವಾ, ನಿಮ್ಮಣ್ಣನ ದಿಗ್ವಿಜಯ ವೃತ್ತಾಂತವನ್ನು ಕೇಳಲು ನಿಮಗೆ ತುಂಬ ಆನಂದವಲ್ಲವೆ, ಅದನ್ನು ಪೂರ್ಣವಾಗಿ ವಿವರಿಸಲು ನನಗೆ ಸಾಧ್ಯವಿಲ್ಲ. ಸಂಕ್ಷೇಪವಾಗಿ ಹೇಳುತ್ತೇನೆ ಎಂದು ಚಕ್ರವರ್ತಿಯ ವಿಜಯಯಾತ್ರೆಯನ್ನು ಬಣ್ಣಿಸತೊಡಗಿದನು ; “ ನಿಮ್ಮಣ್ಣನ ಪುರು ಪರ ಮೇಶ್ವರನ ಕೇವಲ ಜ್ಞಾನಪೂಜೆಯನ್ನೂ ಚಕ್ರಪೂಚೆಯನ್ನೂ ನೆರವೇರಿಸಿ, ಸಾಹಸ ಮುಗಿಲು ಮುಟ್ಟುವಂತೆ ತನ್ನ ಪ್ರತಾಪವನ್ನು ತೋರಿಸಲೆಳಸಿ ದಿಕ್ಕಿ ಜಯಕ್ಕೆ ಹೊರಟನು. ಎದುರಿಸುವ ಜಟ್ಟಿಗರು ಯಾರೂ ಇಲ್ಲದಂತೆ ಸಕಲ ದಿಕ್ಕಕ್ರವನ್ನೂ ಗೆಲ್ಲಲು ಸಮರ್ಥವಾದ ಚಕ್ರವನ್ನೊಡಗೊಂಡು ನಡೆದನು. ಆ ವೈಭವವೇನು ಸಾಮಾನ್ಯವೇ ? ಗಿರಿದುರ್ಗ ಜಲದುರ್ಗ ವನದುರ್ಗಗಳಾವುವೂ ಆತನಿಗೆ ಅಡ್ಡಿಯಾಗ ಲಿಲ್ಲ, ಪೂರ್ವ ದಕ್ಷಿಣ ಪಶ್ಚಿಮ ಸಮುದ್ರ ತೀರಗಳ ದೇಶಾಧಿಪತಿಗಳನ್ನೆಲ್ಲ ಆಡಿಗೆರಗಿಸಿದನು. ರಥವೇರಿ ಸಮುದ್ರದಲ್ಲಿ ನುಗ್ಗಿ ಅಲ್ಲಿನ ವ್ಯ೦ತರಾಮರರನ್ನು ಬಾಣವೊಂದರಿಂದಲೆ ಗೆದ್ದು ಬಂದನು, ವಿಜಯಾರ್ಧಕುಮಾರನನ್ನೂ ಕೃತ ಮಾಲಾಮರನನ್ನೂ ಅಧೀನಮಾಡಿಕೊಂಡನು. ತಮಿಶ್ರಗುಹೆಯ ಮ ಕವಾಟವನ್ನು ಭೇದಿಸಿದನು. ಉತ್ತರಭರತದಲ್ಲಿ ಮಾರಾಂತ ಬಲಾಕಾವರ್ತ ರನ್ನೂ ಅವರ ನೆರವಿಗೆ ಬಂದ ಮೇಘಮುಖರನ್ನೂ ಆಡಗಿಸಿದನು, ಸಿಂಧೂ ದೇವಿಯಿಂದ ಅಭಿಷೇಕಗೊಂಡು ಹಿಮವತ್ಕುಮಾರನ ಕಾಣಿಕೆಯನ್ನು ಸ್ವೀಕ ರಿಸಿ ವೃಷಭಾದ್ರಿಯಲ್ಲಿ ಅಪ್ರತಿಹತವಾದ ತನ್ನ ವಿಜಯದ ಪ್ರಶಸ್ತಿಯನ್ನು ಕೆತ್ತಿ ಸಿದನು. ಬಳಿಕ ಗಂಗಾದೇವಿಯೊಪ್ಪಿ ಒದ ಅನರ್ಘರತ್ನಗಳನ್ನು ಸ್ವೀಕರಿಸಿ ________________


ಕನ್ನಡ ಸಾಹಿತ್ಯ ಚಿತ್ರಗಳು ನಖ ವಿನಮಿ ಮೊದಲಾದ ವಿದ್ಯಾಧರರನ್ನೆಲ್ಲ ಆಜ್ಞಾ ವಿಧೇಯರನ್ನಾಗಿ ಮಾಡಿ ದನು. ಕಡೆಗೆ ಕಾಂಡಕ ಪ್ರಪಾತ ಗುಹೆಯ ವಜ್ರದ ಬಾಗಿಲನ್ನು ಭೇದಿಸಿ ಕೊಂಡು ವಿಜಯರ್ಧ ಪರ್ವತವನ್ನು ದಾಟಿ ಬಂದನು. ಹೀಗೆ ದೇವಾಸುರ ಖೇಚರಾದಿಗಳನ್ನೆಲ್ಲ ಆಜ್ಞಾವರ್ತಿಗಳಾಗಿ ಮಾಡಿಕೊಂಡು ದಿಗ್ವಿಜಯವನ್ನು ಪೂರ್ಣಮಾಡಿದನು. ರಾಜಧಾನಿಗೆ ಹಿಂದಿರುಗಿ ಆ ಭರತ ಚಕ್ರವರ್ತಿ, ' ನನ್ನ ಪ್ರಿಯ ತಮ್ಮ ನಿಲ್ಲದೆ ಈ ಸಾಮ್ರಾಜ್ಯವೆಲ್ಲ ಬಿಮ್ಮೆನಿಸುತ್ತಿದೆ. ಅವನೊಬ್ಬ ನನಗೆರಗದಿದ್ದರೆ ಈ ಚಕ್ರವರ್ತಿ ಪದವಿಯೂ ದೊಡ್ಡದಲ್ಲ' ಎಂದು ಬೆಸಸಿ ನನ್ನನ್ನು ತಮ್ಮಲ್ಲಿಗೆ ಅಟ್ಟಿದನು. ಸಹಜ, ಕೃತ್ರಿಮ-ಎಂದು ವಿನಯ ಎರಡು ವಿಧ. ಅವೆರಡೂ ತಿಳಿದವರನ್ನು ಬೇರೆ ಬೇರೆ ರೀತಿಯಿಂದ ಮೆಚ್ಚಿ ಸುವುವು. ದೇವಾ, ನಿನ್ನಲ್ಲಿ ಆವೆರಡೂ ಉಂಟು” ಎಂದು ನುಡಿದು ಸುಮ್ಮನಾದನು. ಬಾಹುಬಲಿಯ ದರ್ಪೂಕ್ಕಿ ದೂತನ ಆ ಮಾತುಗಳನ್ನು ಕೇಳಿ ಬಾಹುಬಲಿಯ ಕ್ರೋಧ ಉಕ್ಕೇ ರಿತು, ಕೋಪವನ್ನೊಳಗೊಂಡ ಮುಗುಳುನಗೆ ನಕ್ಕು ಹೇಳತೊಡಗಿದನು :

  • ನಮ್ಮ ಮನಸ್ಸನ್ನರಿಯಲು ಮೊದಲು ಸಾಮವನ್ನು ನುಡಿದೆ. ಆಮೇಲೆ ಭೇದ ದಂಡಗಳನ್ನೂ ಸೂಚಿಸಿದೆ. ತಿದ್ದಿ ಅಚ್ಚು ಕಟ್ಟಾಗಿ ಆಡುವ ಮಾತಿನ ಬಳ್ಮೆ ನಿನಗೆ ಚೆನ್ನಾಗಿದೆ. - ನಿನ್ನ ದೊರೆಯ ದಿಗ್ವಿಜಯದ ಉನ್ನತಿಯನ್ನು ಹೊಗಳಿ ಹೊಗಳಿ ಮೈ ಮರೆತುಹೋದೆಯಲ್ಲವೆ ! ಅದು ಅವನ ಭಂಗವನ್ನ ಎತ್ತಿ ತೋರಿಸುವಂತಾ ಯಿತು. ಚಕ್ರವನ್ನು ಮುಂದಿಟ್ಟು ಕೊಂಡು ಲೋಕವನ್ನೆಲ್ಲ ಸುತ್ತಿ ತೊಳಲಿ ದ್ದನ್ನೂ, ತಾನು ಹೂಳದ ನಿಧಿಯನ್ನು ಕಿತ್ತು ತಂದಂತೆ ವಸ್ತುಗಳನ್ನು ಹೊತ್ತು ತಂದದ್ದನ್ನೂ ಏನೆಂದು ಹೊಗಳುವೆಯೋ ಕಾಣೆ, ಸಮುದ್ರದ ದಡ ದಲ್ಲಿ ಹಸಿದು ಬಿದ್ದಿದ್ದು ಉದಕಮಂತ್ರದ ಬಲದಿಂದ ಕಡಲಿನಲ್ಲಿ ನುಸುಳಿದಾಗ ಅಮರರು ಕರುಣೆಯಿಂದ ಅವನಿಗೆ ಧನವನ್ನು ಕೊಟ್ಟರು ; ಅಂಜಿ ಕೊಟ್ಟರೆ ? ಉತ್ತರ ಭರತದಲ್ಲಿ ಅವನಿಗೆ ಆದ ಆಪತ್ತು ನಿನಗೆ ತಿಳಿಯದೆಂದು ತೋರು ಇದೆ, ಬಳಕಾವರ್ತರು ಮುತ್ತಿ ಇವನ ಪಡೆ ಗೋಳು ಕರೆಯುವಂತೆ ಮಾಡ ________________

ಭರತ-ಬಾಹುಬಲಿ ಅಲ್ಲವೇ ? ಮೇಘಮುಖರ ಜಲವರ್ಷದಲ್ಲಿ ಕೊಡಚರ್ಮಗಳ ಮರೆಹೊಕ್ಕು ಗೂಡು ಹೊಕ್ಕಂತೆ ಅಡಗಿದ್ದ ನಮ್ಮ ಗ್ರಜನ ದಿಗ್ವಿಜಯ ಪರಾಕ್ರಮ ಬಹು ಮಹತ್ವದ್ದೇ ಸರಿ ! ತನ್ನ ಪ್ರಶಸ್ತಿಯನ್ನು ಕೆತ್ತಿಸಿದನೆಂದೆ. ಪೂರ್ವ ಚಕ್ರ ವರ್ತಿಗಳ ಪ್ರಶಸ್ತಿಯನ್ನಳಿಸಿಯಲ್ಲವೇ, ತನ್ನದನ್ನು ಕೆತ್ತಿಸಿದ್ದು ? ಯಶಸ್ಸೇ ನಿಜವಾದ ಧನ, ಅದನ್ನು ಈ ರೀತಿ ಅಳಿಸಿ ಕೆಡಿಸಿದವನು ಪಡೆದ ಧನ ಅದೆಂಥ ಧನ ? ಹಿರಿಯಣ್ಣನಿಗೆ ಪ್ರೀತಿಯಿಂದ ಎರಗುವುದೇನವಮಾನವಲ್ಲ. ಆದರೆ ಅವನು ನೆತ್ತಿಯ ಮೇಲೆ ಕತ್ತಿಯ ಬಲದಿಂದ ಎರಗಿಸಕೊರಟಿದ್ದಾನೆ. ಹೀಗಿರುವಾಗ ನಾವು ಭರತನಿಗೆರಗುವುದು ಹೇಡಿತನವಾದೀತು, ಅಣ್ಣ ತಮ್ಮಂ ದಿರು ಹೊಂದಿಕೊಂಡಿದ್ದರೆ ವಿನಯ, ಪ್ರೀತಿ---ಎಲ್ಲ ಒಪ್ಪುತ್ತದೆ. ಈಗ ಭರ ತನು ನನ್ನ ಹೆಸರು ಕೇಳಿದರೂ ಸೈರಿಸಲಾರ. ಅ೦ಥವನಿಗೆ ತಲೆಬಾಗಿ ಲೋಕ ದಿಂದ ನಗಿಸಿಕೊಳ್ಳುವವನಲ್ಲ, ನಾನು, ಭರತನು ಷಟ್ಟಂಡ ಚಕ್ರವರ್ತಿಯೆಂಬ ವೈಭವವನ್ನು ದೂರದಲ್ಲಿ ಕೇಳಿ ವಿಶ್ವಾಸದಿಂದಿರುವ ಈ ಬಂಧುತ್ವ ವೇ ಸಾಕು, ಕರೆದರೆ ಏನಪ್ಪಣೆ ? ಎನ್ನು ವ ' ಜೀಯ, ದೇವಾ, ಮಹಾಪ್ರಸಾದ' ಎನ್ನುವ ದೈನ್ಯಕ್ಕೆ ನಾನು ಮೈಯೊಡು ನವನಲ್ಲ, ಆಳು, ಅರಸ' ಎಂಬ ಭೇದ ನಮಗೇಕೆ ? ಆದಿದೇವನಾದ ಪುರುದೇವನು ಕೊಟ್ಟಿರುವ ರಾಜ್ಯಕ್ಕೆ ಯಾರ ಹಂಗೇನು ? ತಂದೆ ರಾಜ್ಯವನ್ನು ಕೊಟ್ಟಾಗ ನನಗೂ ಅವನಿಗೂ ಇಬ್ಬರಿಗೂ ' ರಾಜ' ಎಂಬ ಹೆಸರನ್ನು ಕೊಟ್ಟನು. ಈಗ ತಾನು ' ರಾಜಾಧಿರಾಜ 'ನೆಂಬ ಹೆಮ್ಮೆಯ ಹೆಸರನ್ನಿಟ್ಟುಕೊಂಡಿದ್ದಾನೆ! ಚಕ್ರ ಹುಟ್ಟ ಚಕ್ರವರ್ತಿಯಾದ ಮಾತ್ರಕ್ಕೆ ನನ್ನ ಮೇಲೇಕೆ ಈ ಆಕ್ರಮಣವನ್ನು ತೋರಬೇಕು ? ಹುರು ಇಲ್ಲದ ಈ ಮಾತನ್ನು ಸರಿಸಮನಾದ ನನಗೆ ಹೇಳುವುದೆ ? ಭರತ ಬಾಹುಬಲಿ ಗಳಿಬ್ಬರೂ ಪುರುತನಯರು. ಅವರಲ್ಲಿ ಯಾರಳವು ಎಷ್ಟೆಂಬುದನ್ನು ಲೋಕ ವರಿಯುವಂತೆ ತೂಗಿ ತೋರಿಸುವ ತಕ್ಕಡಿ ಈ ನನ್ನ ತೋಳು, ಪಟ್ಟಂಡ ಭೂಮಂಡಲವನ್ನೂ ಗೆದ್ದ ಅಖಂಡಪ್ರತಾಪನಾದ ಚಕ್ರ ವರ್ತಿಯು, ತನ್ನ ಆರು ಬಲಗಳನ್ನೂ ಕೂಡಿಕೊಂಡು ಬರಲಿ, ಪ್ರಾಣಪ್ರಿಯ ________________

ಕನ್ನಡ ಸಾಹಿತ್ಯ ಚಿತ್ರಗಳು ರಾದ ಹೆಂಡಿರು ಮಕ್ಕಳಲ್ಲೂ ಧನಸಮೂಹದಲ್ಲ ಆಸೆ ತೊರೆದು ಕಾಳಗಕ್ಕೆ ಬರಲಿ, ಯಾರು ಹೆಚ್ಚು ಎನ್ನುವುದನ್ನು ನೀನು ಕಾಣುತ್ತೀಯೆ.” ಹೀಗೆ ದರ್ಫೋಕ್ತಿಗಳನ್ನಾಡಿ ಚಕ್ರವರ್ತಿಯ ದೂತನನ್ನು ಉಚಿತ ರೀತಿ ಯಲ್ಲಿ ಸತ್ಕರಿಸಿ ಹಿಂದಕ್ಕೆ ಕಳಿಸಿದನು. ಯುದ್ಧ ಸನ್ನಾಹ ಆ ದೂತನು ಸಾಕೇತಪುರವನ್ನು ಸೇರಿ ಆಸ್ಥಾನದಲ್ಲಿದ್ದ ಚಕ್ರವರ್ತಿ ಯನ್ನು ಕಂಡು ನಮಸ್ಕರಿಸಿ ನಡೆದದ್ದನ್ನೆಲ್ಲ ವಿವರಿಸಿದನು. “ ರಾಜಾಧಿರಾಜಾ, ಪಟ್ಟಂಡ ಭೂಮಂಡಲವೂ ನಿನ್ನಡಿಗೆರಗಿದ್ದು ಸಾಲದೆ ? ಮಿತಿಮೀರಿದ ಈ ಹಗಾರನಿಂದೇನೆಂದು ಕಡೆಗಣಿಸಿ ಸುಮ್ಮನಿದ್ದು ಬಿಡುವುದು ಉಚಿತ. ಹಾಗೆ ಮಾಡಿದರೆ ಮರ್ಯಾದೆಯನ್ನು ಕಾದ ನಿಮ್ಮ ದೊಡ್ಡತನ ಲೋಕದಲ್ಲೆಲ್ಲ ಹರಡುವುದು. ನೀವು ಕೋಪಗೊಂಡರೆ ನಿಮ್ಮ ತಮ್ಮ ನಿನಗೆರಗುವುದಿಲ್ಲ. ಇದು ನಿಜ. ಎಂದು ನುಡಿದನು. ಕೇಳಿ ಚಕ್ರವರ್ತಿ, “ ನಮ್ಮ ದಿಗ್ವಿಜಯ ತುದಿಮುಟ್ಟಿತು. ಈಗ ನಮ್ಮ ದಾಯದನು ನನ್ನೊಡನೆ ಕಾದಬೇಕೆಂದು ಉಬ್ಬಿ ನಿಂತಿದ್ದಾನೆ. ಕದನ ಬೇಡವೆಂದು ಬಿಡುವುದು ಕ್ರಮವಲ್ಲ. ಅವನ ಭುಜಬಲವನ್ನೂ ನೋಡೋಣ? ಎಂದು ಆಸ್ಥಾನದಿಂದ ಎದ್ದನು. ಭರತ ಬಾಹುಬಲಿಗಳಿಬ್ಬರೂ ಸೇನೆಗಳನ್ನು ಸಿದ್ಧಮಾಡಿಕೊಂಡರು, ಚಕ್ರವರ್ತಿಯ ವಿಜಯ ಸೈನ್ಯ ರಾಜಧಾನಿಯಿಂದ ಪೌದನಪುರಕ್ಕೆ ಪ್ರಯಾಣ ಮಾಡಿತು, ಬಾಹುಬಲಿಯ ಪಡೆ ಅದನಡ್ಡಗಟ್ಟಿತು, ಅಣ್ಣ ತಮ್ಮಂದಿ ರಿಬ್ಬರೂ ಧನುರ್ಧಾರಿಗಳಾಗಿ ಎದುರು ಬದುರು ನಿಂತರು. - ಮಂತ್ರಿಗಳ ಸಂಧಾನ ಇನ್ನೇನು ಕದನ ಮೊದಲಾಗಬೇಕು ಎನ್ನುವಷ್ಟರಲ್ಲಿ ಎರಡು ಕಡೆಯ ಮುಖ್ಯ ಮಂತ್ರಿಗಳೂ, “ ಈ ಇಬ್ಬರರಸುಗಳೊ ಚರಮ ದೇಹಧಾರಿಗಳು, ಇವರು ಯುದ್ಧಕ್ಕೆ ತೊಡಗಿದರೆ ಸಕಲ ಸೈನ್ಯವೂ ನಾಶವಾಗುವುದು. ಜನ ಸಂಹಾರಕ್ಕೆ ಕಾರಣವಾಗುವ ಯುದ್ಧ ಬೇಡ, ಧರ್ಮ ಯುದ್ಧವೇ ನಡೆಯಲಿ? ________________

ಭರತ-ಬಾಹ.ಬಳಿ

ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರ ವರ್ತಿಯ ಬಳಿ ಬಂದರು. “ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿ ದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.” ಮಂತ್ರಿಗಳಿಬ್ಬರೂ ಬಾಹುಬಲಿಯ ಸವಿತಾಸಕ್ಕೆ ಹೋಗಿ ಮೊದಲಿ ನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗ ಬಲವನ್ನು ಯಾವನೆದುರಿ ಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು. ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದು ಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿ ಯನ್ನೊ ಡಂಬಡಿಸಿದರು. ಧರ್ಮ ಯುದ್ದ ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆ ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆ ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.

  • ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ, ________________

ಕನ್ನಡ ಸಾಹಿತ್ಯ ಚಿತ್ರಗಳು ಮೊದಲು ದೃಷ್ಟಿಯುದ , ಒಬ್ಬರನ್ನೊಬ್ಬರು ಎವೆಯಿಕ್ಕದೆ ನೋಡುತ್ತ ನಿಂತರು. ಬಾಹುಬಲಿ ಕಣ್ಣಿನಲ್ಲಿ ಹೀರಿಬಿಡುವಂತೆ ಭರತನನ್ನು ಅಲುಗದೆ ನೋಡುತ್ತಿದ್ದನು. ಆ ತೇಜಸ್ಸನ್ನು ಸೈರಿಸಲಾರದೆ ಭರತರಾಜನು ಕಣ್ಣು ಮುಚ್ಚಿ ಸೋತುಹೋದನು. ಆಮೇಲೆ ಜಲಯುದ ಮೊದಲಾಯಿತು. ಮದಿಸಿದಾನೆಗಳಂತೆ ಕೊಳಕ್ಕೆ ನುಗ್ಗಿ ಒಬ್ಬರಮೇಲೊಬ್ಬರು ನೀರೆರಚತೊಡಗಿದರು. ಭರತನ ಮುಖದಲ್ಲಿ ಹಬ್ಬಿದ ಕೋಪದ ಬೆಂಕಿಯನ್ನು ಆರಿಸುವವನ ಕಾಗೆ ಬಾಹುಬಲಿ ಅವನ ಮುಖಕ್ಕೆ ತಿಳಿನೀರು ತುಳುಕಿದನು. ಭರತೇಶ್ವರನೆರಚಿದ ನೀರು ಬಾಹು ಬಲಿಯ ಎದೆಗೆ ಮಾತ್ರ ತಾಕಿತು, ಆನೆಯ ಸೊಂಡಿಲಿನಂತಿರುವ ಬಾಹು ಬಲಿಯ ಕೈ ಎರಚನ ನೀಲೇಔಗೆ ಮುಖವೊಡ್ಕಲಾರದೆ ಚಕ್ರವರ್ತಿ ಮುಖದಿರುಹಿದನು . ಕಡೆಯದಾಗಿ ಬಾಹು ಯುದ್ಧ ಪ್ರಾರಂಭವಾಯಿತು. ಅವರಿಬ್ಬರ ಹೋರಾಟವನ್ನೂ ನೋಡಿ ಎರಡು ಕಡೆಯಲ್ಲ ನೆರೆದ ಸುರ ನರ ವಿದ್ಯಾಧರ ಬಲವೆಲ್ಲ ಬೆರಗಾಯಿತು. ಕಡೆಗೆ ಬಾಹುಬಲಿ ಭರತನನ್ನು ಹಿಡಿದೆತ್ತಿ ಬೀಸಿ ಸುತ್ತಿಸಿದನು. ಹೊಂಬೆಟ್ಟವನ್ನು ಹೊತ್ತ ಪಚ್ಚೆಯ ಬೆಟ್ಟವೋ ಎಂದು ತೋರುತ್ತಿದ್ದನು. ಹಾಗೆ ಎತ್ತಿ ಹಿಡಿದುಕೊಂಡು, ಇವನು ಭರತ ಭೂಮಿ ಗೆಲ್ಲ ಒಡೆಯ. • ಹಿರಿಯಣ್ಣ, ಆದ್ದರಿಂದ ಗುರು. ಮಹಾಮಹಿಮನಾದ ಇವ ನನ್ನು ನೆಲಕ್ಕೆ ಕೆಡವಿ ಭಂಗಪಡಿಸುವುದು ಸರಿಯಲ್ಲ ಎಂದು ಭಾವಿಸಿ ಭರ ತನನ್ನು ಮೆಲ್ಲಗೆ ನೆಲಕ್ಕಿಳಿಸಿದನು. ಬಾಹುಬಲಿಯ ಪಡೆ ಉಬ್ಬಿ ನಿಜಯಘೋಷಣೆ ಮಾಡಿತು. ಭರತನ ಬಲ ಕಳೆಗೆಟ್ಟು ತಲೆ ತಗ್ಗಿಸಿತು. ನೆರೆದ ಎರಡು ಬಲಗಳೆದುರಿಗೆ, ಅಷ್ಟು ಮಂದಿ ಆರಸುಗಳ ಮುಂದೆ, ತನಗೆ ಹಾಗೆ ಸೋಲಾಗಲು ಭರತನು ಕೋಪದುರಿಗಳನ್ನು ಗುಳತೊಡಗಿದನು. ಚಕ್ರರತ್ನವನ್ನು ನೆನೆದು ಬಾಹುಬಲಿಯನ್ನು ತಾಗುವಂತೆ ಅಪ್ಪಣೆಮಾಡಿದನು. ಚಕ್ರವರ್ತಿ ನೆನೆದ ಕೂಡಲೆ ಚಕ್ರರ ಮುಂದೆ ಬಂದಿತು. ಆದರೆ ಆ ________________

ಭರತ-ಬಷುಬಲಿ ಅಪ್ಪಣೆಯನ್ನು ನಡಸಲಾರವಾಯಿತು. ಅದು ಬಾಹುಬಲಿಗೆ ಮೂರು ಸಾರಿ ಪ್ರದಕ್ಷಿಣೆ ಮಾಡಿ ಅವನ ಬಲಭುಜದ ಪಕ್ಕದಲ್ಲಿ ನಿಂತುಬಿಟ್ಟಿತು. ಆಗ ಬಾಹುಬಲಿಯ ಕೀರ್ತಿ ಲೋಕವನ್ನೆಲ್ಲ ಹಬ್ಬಿತೆಂಬಂತೆ ದೇವ ದುಂದುಭಿಗಳು ಮೊಳಗಿದವು. ದೇವಸ್ತ್ರೀಯರು ಮಂಗಳ ಗೀತಗಳನ್ನು ಹಾಡಿ ದರು. ಸಂತುಷ್ಟರಾದ ದೇವತೆಗಳ ಆನಂದಬಾಷ್ಪದ ಸುರಿಮಳೆಯೊ ಎಂಬಂತೆ ಪುಷ್ಪವೃಷ್ಟಿ ಸುರಿಯಿತು, ಭರತನ ಲಜ್ಜೆ, ಬಾಹುಬಲಿಯ ತ್ಯಾಗ * ಚಕ್ರವರ್ತಿ ತನಗಲ್ಲದ್ದನ್ನು ಮಾಡಿದನಲ್ಲಾ!' ಎಂದು ಕುಲ ವೃದ್ದರೂ ಅಲ್ಲಿ ನೆರೆದ ಉಳಿದವರೆಲ್ಲರೂ ಆಡತೊಡಗಿದರು, ಕೇಳಿ ಭರತೇಶ್ವ ರನು ನಾಚಿ ತಲೆ ತಗ್ಗಿಸಿದನು. ಬಾಹುಬಲಿಗೂ ಮನಸ್ಸು ನೊಂದಿತು. “ ಭರತೇಶ್ವರನು ನನ್ನಲ್ಲ ಇಂಥ ಸಾಹಸ ಮಾಡಿದನೇ ! ಆಹಾ, ರಾಜ್ಯ ಮೋಹವನ್ನು ತೊರೆಯುವುದು ಎಷ್ಟು ಕಷ್ಟ ! ಇದು ಸೋದರರನ್ನು ಕಾಡಿಸುತ್ತದೆ ; ತಂದೆಮಕ್ಕಳಿಗೆ ಮುನಿ ಸುಂಟುಮಾಡುತ್ತದೆ. ಮನುಕುಲತಿಲಕನಾದ ಇಂಥವನನ್ನೂ ಹೀಗೆ ಮತಿ ಗೆಡಿಸಿಬಿಟ್ಟಿತು. ಇನ್ನು ದುಷ್ಟರ ವಿಚಾರವನ್ನು ಹೇಳುವುದೇನು ? ಇಂಥ ರಾಜೈಶ್ವರ್ಯವನ್ನು ತಾಳುವುದು ತಾನೆ ಹೇಗೆ ? ಎಂದು ಮುಂತಾಗಿ ಆಳವಾಗಿ ಆಲೋಚಿಸಲು ಮೊದಲುಮಾಡಿದನು. ಕಡೆಗೆ, “ ಕೆಡುವ ಒಡಲು, ಕೆಡುವ ರಾಜ್ಯ-ಈ ಒಂದೂ ನನಗೆ ಬೇಡ ” ಎಂದು ನಿಶ್ಚಯಿಸಿ ಜೈನ ದೀಕ್ಷೆ ಯನ್ನು ಧರಿಸಲು ಸಂಕಲ್ಪಿಸಿದನು. ಬಳಿಕ ಭರತನನ್ನು ಕುರಿತು, “ ಚಕ್ರೇಶ್ವರಾ, ನಾಚಿಕೆಯನ್ನು ಬಿಡು. ಕೋಪವನ್ನು ತೊರೆ, ಈ ತಮ್ಮಂದಿರ ಮೇಲೆ ಆಗ್ರಹಮಾಡುವುದು ದೊಡ್ಡ ತನವೆ ? ರಾಜ್ಯಲಕ್ಷ್ಮಿ ನಿನ್ನ ವಕ್ಷಸ್ಥಳದಲ್ಲಿ ನೆಲಸಿರಲಿ. ತಂದೆ ಕೊಟ್ಟ ಭೂಮಿಯನ್ನು ನಾನು ನಿನಗೆ ಕೊಟ್ಟೆ. ನೀನು ಬಯಸಿದ ನೆಲಕ್ಕೆ ನಾನು ಆಸೆ ಮಾಡಿದರೆ, ನೀನು ಒಲಿದ ಹೆಣ್ಣಿಗೆ ಆಸೆ ಮಾಡಿದಂತೆ. ಅದು ಉಚಿತವಲ್ಲ. ಅಣ್ಣಾ, ಸರಿಯಾಗಿ ವಿಚಾರಮಾಡದೆ ನಿನ್ನ ವಿಷಯದಲ್ಲಿ ದೊಡ್ಡ ಅವಿನಯ ________________

7 ಕನ್ನಡ ಸಾಹಿತ್ಯ ಚಿತ್ರಗಳು ವನ್ನಾಚರಿಸಿದ್ದೇನೆ. ಆ ದೋಷವನ್ನು ತಪಸ್ಸು ಮಾಡಿ ಪರಿಹರಿಸಿಕೊಳ್ಳು ತೇನೆ. ನನ್ನ ಈ ಅಪರಾಧವನ್ನು ಮನ್ನಿಸು ” ಎಂದು ನುಡಿದನು. ಬಾಹುಬಲಿ ತಪಸ್ಸಿಗೆ ಹೊರಡಲಿರುವ ನಿಶ್ಚಯವನ್ನು ಕೇಳಿ ಭರತನ ಕೋಪವೆಲ್ಲ ಕರಗಿಹೋಯಿತು. * ತಮ್ಮನಲ್ಲಿ ಏತಕ್ಕಾದರೂ ಹೀಗೆ ಮಾಡಿ ದೆನೋ ! ” ಎಂದು ಪಶ್ಚಾತ್ತಾಪ ಬಲವಾಯಿತು. ಆಗ, “ ನೀನೊಬ್ಬನಪ್ಪಾ ನನಗುಳಿದಿರುವ ತಮ್ಮ ; ಮನುವಂಶಕ್ಕೆ ಅಲಂಕಾರವಾಗಿರುವವನು, ಬೇಡಪ್ಪಾ, ನೀನೂ ತಪೋವನಕ್ಕೆ ಹೋದರೆ ಈ ಸಾಮ್ರಾಜ್ಯವನ್ನು ಯಾರಿ ಗಾಗಿ ಮೆರೆಯಲಿ ? ೨೨ ಎಂದು ಭರತನು ಕಣ್ಣೀರು ಕರೆಯತೊಡಗಿದನು ; ಆ ಕಣ್ಣೀರಿನಿಂದ ಬಾಹುಬಲಿಯ ಕಾಲು ತೊಳೆಯುತ್ತಿದ್ದನು. ಬಾಹು ಬಲಿಗೂ ಕಣ್ಣೀರುಕ್ಕಿ ಬಂತು. ಅಣ್ಣನ ತಲೆಯ ಮೇಲೆ ಕಣ್ಣೀರ ಸರಿ ಸುರಿ ಸುತ್ತ ವಂಶಕ್ರಮವಾಗಿ ಬಂದ ರಾಜ್ಯಕ್ಕೆ ಆತನಿಗೆ ಅಭಿಷೇಕ ಮಾಡುತ್ತಿರು ವನೋ ಎಂಬಂತೆ ತೋರಿದನು. ಹೇಗೆ ಹೇಗೋ ಭರತೇಶ್ವರನನ್ನೊಡಂಬಡಿಸಿ, ಮಹಾಬಲಿಯೆಂಬ ತನ್ನ ಮಗನಿಗೆ ಪಟ್ಟಗಟ್ಟಿ ಭಗವಂತನ ಸಮವಸರಣ ಮಂಟಪಕ್ಕೆ ನಡೆದನು, ಆದಿ ನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ ದೇವಾ, ಮೊದಲು ನನಗೆ ಯುವರಾಜಪದವಿಯನ್ನು ದಯಪಾಲಿಸಿದೆ. ಈಗ ವೈರಾಗ್ಯ ಮಾರ್ಗದ ಯುವ ರಾಜ ಪದವಿಯನ್ನು ಕರುಣಿಸು ” ಎಂದು ಬೇಡಿ ದೀಕ್ಷೆ ಪಡೆದನು. ಭಗವಾನ್ ಬಾಹುಬಲಿ, ಪ್ರಿಯಧರ್ಮ ನೃಪತಿ ಬಾಹುಬಲಿ ದೀಕ್ಷೆಯನ್ನು ಕೈಕೊಂಡಮೇಲೆ, ಗುರು ಉಪದೇಶಿಸಿದ ಶಾಸ್ತ್ರಗಳನ್ನು ಕಲಿತು, ವಿಧಿಸಿದ ಅನುಷ್ಠಾನಗಳನ್ನು ಮಾಡುತ್ತ ಕೆಲವು ಕಾಲ ಕಳೆದನು. ಕಡೆಗೆ ಒಂದು ಸಂವತ್ಸರದ ಅವಧಿ ಮಾಡಿಕೊಂಡು ಪ್ರತಿಮಾಯೋಗದಲ್ಲಿ ನಿಂತನು. ಹಾಗೆ ನಿಂತಾಗ ಕಾಲ ಬಳಿ ಹುತ್ತಗಳಿದ್ದವು. ಬಳ್ಳಿಗಳು ಹುಟ್ಟಿ ಮೈಮೇಲೆಲ್ಲ ಹಬ್ಬಿದವು. ಹುತ್ತದಿಂದ ಹೊರಟ ಹಾವು ಗಳು ಬಳ್ಳಿಗಳ ಮೇಲೆ ಹತ್ತಿ ಮುನಿಯ ಮೈ ಮೇಲೆಲ್ಲ ಓಡಾಡುತ್ತಿದ್ದವು. ಆ ವಿಷ ಸರ್ಪಗಳು ಮಹಾಮುನಿಯ ಘೋರ ತಪೋಗಿಯ ಧೂಮರೇಖೆಗಳೂ ________________

ಭರತ-ಬಾಹುಬಲಿ ಎಂಬಂತೆ ತೋರುತ್ತಿದ್ದವು ಆ ಮುನಿಯನ್ನು ಮುಚ್ಚುವಂತೆ ಹಬ್ಬುತ್ತಿದ್ದ ಲತೆಗಳ ಹೆಣಿಗೆಯನ್ನು ಖೇಚರಿಯರು ಬಿಡಿಸುತ್ತಿದ್ದರು." ಹೀಗೆ ಉಗೊಗ್ರವಾಗಿ ತಪಸ್ಸು ಮಾಡುತ್ತಿದ್ದರೂ ಬಾಹುಬಲಿ ಮುನಿಗೆ ಕೇವಲ ಜ್ಞಾನ ಹುಟ್ಟಲಿಲ್ಲ. ಭರತನಿಗೆ ವಿಸ್ಮಯವಾಯಿತು. ಕಾರಣ ವೇನೆಂದು ಆದಿನಾಥನನ್ನು ಬೆಸಗೊಂಡನು. “ ಭರತನ ನೆಲದ ಮೇಲೆ ನಿಂ ತಿರುವೆನಲ್ಲಾ!' ಎಂದು ಅಳುಕುತ್ತ ಅಭಿಮಾನವನಿನ್ನೂ ಬಿಡದಿರುವುದರಿಂದ ಆತನಿಗೆ ಕೇವಲ ಜ್ಞಾನ ಹುಟ್ಟಲಿಲ್ಲವೆಂದೂ ಭರತನು ಹೋಗಿ ಕಾಲೆರಗಿದರೆ ಕೇವಲ ಜ್ಞಾನವುಂಟಾಗುವುದೆಂದೂ ಆದಿತೀರ್ಥ೦ಕರನು ಅಪ್ಪಣೆ ಕೊಡಿ ಸಿದನು, ಅದನ್ನು ರಾಜಾಧಿರಾಜನು ಪರಿವಾರ ಸಮೇತನಾಗಿ ಬಂದು ಬಾಹುಬಲಿ ಮುನಿಯನ್ನು ಪೂಜಿಸಿ ಅಡಿಗೆರಗಿದನು. ಎರಗಿ, “ಅಯ್ಯಾ ಮುನಿಯೇ, ಈ ನೆಲ ನಿನ್ನದು. ನೀನು ಕೊಟ್ಟಿದ್ದರಿಂದ ನನಗೆ ಬಂತು. ನನ್ನ ದೆಂದೇಕೆ ಭಾವಿಸುವೆ ? ನಿನ್ನನ್ನೆ ನೀನು ನೆನೆದುಕೊ, ಬೇರೆ ಏನನೂ ನೆನೆಯಬೇಡ ” ಎಂದನು. ಆ ಕೂಡಲೆ ಮನಸ್ಸಿನೊಳಗಿದ್ದ ಅಲ್ಪ ಸ್ವಲ್ಪ ಅಹಂಕಾರವೂ ನಾಶ ವಾಗಿ ಹೋಯಿತು. ಸರ್ವವನ್ನೂ ತಿಳಿಯುವಂತೆ ಪ್ರಕಾಶಿಸುವ, ಕೇವಲ ಜ್ಞಾನ ತಲೆದೋರಿತು. ಬಾಹುಬಲಿ ಜಿನನಾದನು, ದೇವತೆಗಳು ಬಂದು ಬಾಹುಬಲಿ ಕೇವಲಿಯ ಅಡಿಗೆರಗಿ ಪೂಜಿಸಿ ಹೋದರು. ಬಾಹುಬಲಿ ಕೇವಲಿ ನಾನಾ ದೇಶಗಳಲ್ಲಿ ವಿಹರಿಸಿ ಕೈಲಾಸಕ್ಕೆ ಬಂದು ಆದಿದೇವನ ಸನ್ನಿಧಿಯಲ್ಲಿದ್ದನು. ಇತ್ತ ಭರತೇಶ್ವರನು ದಿಗ್ವಿಜಯಾನಂತರದಲ್ಲಿ ಅಯೋಧ್ಯೆಗೆ ಹಿಂದಿರುಗಿ ಸಾಮ್ರಾಜ್ಯಾಧಿಕಾರದಲ್ಲಿ ಪಟ್ಟಾಭಿಷಿಕ್ತನಾದನು ; ಆದಿ ಚಕ್ರವರ್ತಿಯಾದನು. ಹಿಮವತ್ಪರ್ವತದಿಂದ ಲವಣ ಸಮುದ್ರದವರೆಗಿನ ಪಟ್ಟಂಡ ಭೂಮಂಡಲವೂ ಅವನ ಆಜ್ಞೆಗೆ ತಲೆಬಾಗಿ ನಡುಗುತ್ತಿತ್ತು ಮಾಗಧಾದಿ ಅಮರರು ಅವ ನನ್ನು ಓಲಗಿಸುತ್ತಿದ್ದರು. * ಪ್ರಿಯಧರ್ಮ ನೃಪತಿ ' ಎನಿಸಿದ ಚಕ್ರವರ್ತಿಯ ಕೀರ್ತಿ ಭೂಮ್ಯಾಕಾಶಗಳನ್ನೆಲ್ಲ ಬೆಳಗುತ್ತಿತ್ತು. ಧರ್ಮಪ್ರಿಯನಾದ ಆ ರಾಜನ ಮೇಲ್ಪಂಕ್ತಿಯಿಂದ ಸಮಸ್ತ ಭೂಮಂಡಲದಲ್ಲೂ ಪ್ರಜೆಗಳೆಲ್ಲ ಧರ್ಮ ಪ್ರಿಯರಾದರು, ________________

ಕನ್ನಡ ಸಾಹಿತ್ಯ ಚಿತ್ರಗಳು ಹಿನ್ನುಡಿ ತ್ರಿದಶಸ್ತುತ ಇದಾದಿ ದೇವಚರಿತಂ ಕರ್ಣಾಮ್ಮ ತಂದೆಯ ಕೈದು ಭವ್ಯಾವಳಿಗೆಂದು ಹೇಳಿಕೆ ಬುಧರ್ ಸ್ವರ್ಗಾಪವರ್ಗಕ್ಕೆ ಮಾ ಸ್ಪದಮುಪ್ಪಾದಿ ಪುರಾಣ ವಸ್ತುಕೃತಿಯಂ ಶೇ ೯೦ ಬೆಡಂಗಪ್ಪಮಾ ರ್ಗದೊಳಂ ದೇಸಿಯೊಳಂ ಪೊದಲ್ಲೆಸೆವಿನಂ ಸಂಸಾರ ಸಾರೋದಯ [* ಇದು ಆದಿದೇವನ ಚರಿತ್ರೆ ; ದೇವತೆಗಳೆಲ್ಲ ಹೊಗಳುವಂಥದು. ಭವ್ಯ ಸಮೂಡದ (ಎಂದರೆ ಪುಣ್ಯವಂತರಾದ ಜೈನಭಕ್ತರ ಕಿವಿಗೆ ಇದು ಅಮೃತವನ್ನೆ ಯುವಂಥದಾಗಲಿ ಎಂದು ಪಂಡಿತರು ಹೇಳಿಸಿದರು. ಸ್ವರ್ಗ ಮೋಕ್ಷಗಳಿಗೆ ಆಸ್ಪದ ವಾದದ್ದು ಆದಿಪುರಾಣ, ಆದರ ವಿಷಯವನ್ನು ಎತ್ತಿಕೊಂಡು ಚಮತ್ಕಾರವಾಗಿರುವ ಮಾರ್ಗವೂ (ಪ್ರೌಢಶಾಸ್ತ್ರ ರೀತಿ ಸ್ವಾಭಾವಿಕವಾದ ದೆಸೆಯ (ನಾಡ ನುಡಿ ಕಟ್ಟು) ಹೊಂದಿಕೊಂಡು ಚೆನ್ನಾಗಿ ಕಾಣುವಂತೆ ಸಂಸಾರ ಸಾರೋದಯ( ನೆಂಬ ಬಿರುದುಳ್ಳ ಸಂಸನು ಕಾವ್ಯವಾಗಿ ಹೇಳಿದನು.} [ಈ ಕಥೆಯಲ್ಲಿ ವರ್ಣಿ ಸಿರುವ ಬಾಹುಬಲಿಯೇ ನಮ್ಮ ಗೊಮ್ಮಟೇಶ್ವರಸ್ವಾಮಿ, ಆ ಆದ್ಯುತ ಮನೋಹರ ಮೂರ್ತಿ ತಿಂದು ಬಾಹುಬಲಿ ಪ್ರತಿವಯೋಗದಲ್ಲಿ ನಿಂತ ರೀತಿಯನ್ನು ತೋರಿಸುತ್ತದೆ. ಈ ಕಥೆಯನ್ನು ಕನ್ನಡದಲ್ಲಿ ಬರೆದವನು ನಮ್ಮ ಆದಿ ಕವಿ ಸಂಸ. ಆತ ಕನ್ನ ಡದ ಮೇಲಿನ, ಕನ್ನಡ ನಾಡಿನ ಮೇಲಿನ ಅಕ್ಕರೆಯನ್ನು ಉಕ್ಕಿ ಹರಿಸಿದ್ದಾನೆ. ಆದಿ ಪುರಾಣ, ವಿಕ್ರಮಾರ್ಜುನ ವಿಜಯ ಎಂಬವು ಅವನು ರಚಿಸಿದ ಕೃತಿಗಳು. ಇಲ್ಲಿ ಕೊಟ್ಟಿರುವುದು ಆದಿಪುರಾಣದ ಕಥೆ, ವಿಕ್ರಮಾರ್ಜುನ ವಿಜಯ ದಲ್ಲಿ ಮಹಾಭಾರ ತದ ಕಥೆಯನ್ನು ವಿವರಿಸಿದ್ದಾನೆ. ಇದನ್ನು ಪಂಪ ಭಾರತ' ಎಂದು ಕರೆಯುವುದು ರೂಢಿ. ಇವೆರಡು ಗ್ರಂಥಗಳೂ ಆ ಕಾಲದ ಕನ್ನಡದಲ್ಲಿ--ಸಾವಿರ ವರ್ಷ ಹಿಂದಿನ ಹಳಗನ್ನಡದಲ್ಲಿ ಬರೆದಿವೆ, ಆದರ ಸ್ವರೂಪವನ್ನು ಇಲ್ಲಿ ಕೊಟ್ಟಿರುವ ಎರಡು ಪದ್ಯ ಗಳಿಂದ ತಿಳಿದುಕೊಳ್ಳಬಹುದು. ಪಂಪ ಒಳ್ಳೆಯ ಕವಿ ಮಾತ್ರವೇ ಅಲ್ಲ ; ದೊಡ್ಡ ಪಂಡಿತನೂ ಹೌದು. ಆಪ್ಟೆ ಆ೪ ; ರಾಜನ ದಂಡನಾಯಕನೂ ಆಗಿದ್ದನು. ನಾಡು, ನುಡಿ, ರಾಜಸೇವೆಗಳನ್ನು ಜನ ಮೆಚ್ಚುವಂತೆಯೂ ತನ್ನ ಮನಸ್ಸು ಮೆಚ್ಚುವಂತೆಯೂ ಮಾಡಿದ ಧನಾತ್ಮ. ಆತನಿಗೆ ಕವಿತಾಗುಣಾರ್ಣವ, ಸರಸ್ವತೀ ಮಣಿಹಾರ, ಸಂಸಾರ ಸಾರೋದಯ ಮೊದಲಾದ ಬಿರುದುಗಳಿದ್ದವು, ಈ ಆದಿಪುರಾಣವನ್ನು ಕ್ರಿ. ಶ. ೯೪೧-ri೨ರಲ್ಲಿ ರಚಿಸಿದನೆಂದು ಪಂಡಿತರು ಗೊತ್ತು ಮಾಡಿದ್ದಾರೆ. ________________

ಕಣ್ಣಪ್ಪ ಸಡಿ ಫಡ ! ಮಾನವರ್ ಕುಡುವರೆಂಬುದನಾಡದಿರಿನ ಮುಂದೆ ಕ ಪ್ರಡದ ಶರೀರಿಗಳ ಕೃಣದ ಹಾ ಹಗಕ್ಕಟ ! ಮಣ್ಣ ಬೊಂಬೆಗಳ ಕುಡುವುವೆ ? ಬೇಡು, ಬೇಡಿದುದನೀವ ಮಹಾನಿಥಿಯಂ ಮಹೇಶನಂ ಮೃಡನನನ್ನದಾನಿಯನಲಂಪಿನ ಪೆಂಪಿನ ಹಂಸೆಯಾಳನಂ [ 1 ಮನುಷ್ಯರು ಕೊಡುತ್ತಾರೆ' ಎಂಬ ಮಾತನ್ನು ನನ್ನ ಮುಂದೆ ಆಗಬೇಡ, ಅವರು ಬಟ್ಟೆಯಲ್ಲಿ ಮಾಡಿಟ್ಟಿರುವ ಆಕಾರಗಳು ! ಹುಲ್ಲಿನ ಬಿಂಬಗಳು ! ಮಣ್ಣಿನ ಬೊಂಬೆಗಳು ! ಅವರೇನು ತಾನೆ ಕೊಟ್ಟಾರು ? ಬೇಡುವ ಹಾಗಿದ್ದರೆ ಹಂಪಯೊಡ ಯನಾದ ಮಹೇಶ್ವರನನ್ನು ಬೇಡಿಕೊ. ಆ ಮಹಶ್ವರನು ಸಮಸ್ತ ಸುಖಕ್ಕೂ ನೆಲೆ ಯಾದವನು; ಮಹಾಮಹಿಮೆಯುಳ್ಳವನು ; ಒಂದಿಷ್ಟೂ ಕುಂದಿಲ್ಲದ ಬಾನಿ ; ಬೇಡಿದ್ದನ್ನೆಲ್ಲಾ ಕೊಡುವ ಮಹಾನಿಧಿ, ಅಂಥ ಮಹೇಶ್ವರನನ್ನು ಬಿಟ್ಟು ಮನುಷ್ಯ ರನ್ನು ಬೇಡುವುದ ! ] ಚೋಳ ಮಂಡಲ ಶಿವಭಕ್ತಿಗೆ ತವರುಮನೆಯಾಗಿದೆ. ಆ ದೇಶದಲ್ಲಿ 'ತಿರುಕಾಳು' ಎಂಬೊಂದು ಪಟ್ಟಣ - ( ಶ್ರೀ ಕಾಳಹಸ್ತಿ ' ಎಂಬುದು ಇದರ ಸಂಸ್ಕೃತ ರೂಪ). ಅಲ್ಲಿ ಒಬ್ಬ ಬೇಡರ ನಾಯಕನಿದ್ದನು. ಅವನ ಹೆಸರು ಕಣ್ಣಪ್ಪ, ಕಣ್ಣಪ್ಪನ ನಡೆ, ನುಡಿ-ಎಲ್ಲ ಬೇಡರಿಗೆ ತಕ್ಕಂತಿತ್ತು. ಎಲ್ಲ ಬಗೆಯ ಬೇಟೆಗಳಲ್ಲಿಯೂ ಅವನಿಗೆ ತುಂಬ ತಿಳಿವಳಿಕೆ. ಸದಾ ಬೇಟೆಯಲ್ಲಿಯೇ ಅವನಿಗೆ ಆಸಕ್ತಿ, ಸತ್ಯ ನುಡಿಯುವುದನ್ನು ಅವನು ಕನಸಿನಲ್ಲೂ ಕಂಡ ರಿಯ. ಶಿವನೆಂಬುದು ಅವನ ಮನಸ್ಸಿಗೂ ಹೊಳೆದಿರಲಿಲ್ಲ. ತನಗಿಂತ ಬೇರೆ ದೊಡ್ಡವರಿದ್ದಾರೆ ಎಂಬ ಸಂಗತಿಯೂ ಅವನಿಗೆ ಗೊತ್ತಿಲ್ಲ. ತಾನೇ ದೊಡ್ಡವ ನೆಂದುಕೊಂಡು ಬೇರೆ ಯಾರನ್ನೂ ಲಕ್ಷಿಸದೆ ತನಗೆ ಹಿತ ತೋರಿದಂತೆ ನಡೆದು ಬಿಡುತ್ತಿದ್ದನು. ಹಾಗೆ ನಡೆಯುವಾಗ ಸುಳ್ಳಾಡುವುದಕ್ಕೆ ಹಿಂಜರಿಯುತ್ತಿಕ' ಲಿಲ್ಲ. ಊಟ, ತಿಂಡಿ ಮೊದಲಾಗಿ ಏನೇ ಆಸೆ ಬರಲಿ, ಅದು ಸರಿಯೋ ತಪ್ಪೆ ಎಂದು ಸ್ವಲ್ಪವೂ ಯೋಚಿಸದೆ ಅದನ್ನು ಈಡೇರಿಸಿಕೊಳ್ಳಲು ಮುಂದೆ ನುಗ್ಗು ________________

ಕನ್ನಡ ಸಾಹಿತ್ಯ ಚಿತ್ರಗಳು ತಿದ್ದನು. ಹಾಗೆ ಆಸೆಗಳಿಗೆ ಸಿಕ್ಕಿ ನಡೆಯುವಾಗ ಅವನಿಗೆ ತನ್ನ ಮೇಲೂ ಲಕ್ಷವಿಲ್ಲ ; ಬೇರೆ ಯಾವುದರ ಮೇಲೂ ಲಕ್ಷ್ಯವಿಲ್ಲ, ಹೀಗಿದ್ದರೂ ಕಣ್ಣಪ್ಪ ನಿಜವಾಗಿಯೂ ಬಹು ದೊಡ್ಡ ಮನುಷ್ಯ ; ತುಂಬ ಸಂಸ್ಕಾರ ಹೊಂದಿದ ಜೀವ, ಬೇಡತನದ ವೇಷ ಅವನ ನಿಜವಾದ ಯೋಗ್ಯತೆಯನ್ನು ಮುಚ್ಚಿ ಮರೆಮಾಡಿತ್ತು. ಸೂರ್ಯನಿಗೆ ಮೋಡ ಮುಚ್ಚಿ ದಂತಾಗಿತ್ತು ಅವನ ರೀತಿ, ಮೋಡವೆಲ್ಲ ಚೆದರಿ ಸೂರ್ಯಬಿಂಬ ಹೊಳೆ ಹೊಳೆಯುತ್ತ ಹೊರಬರುವ ಕಾಲವೂ ಹತ್ತಿರ ಬರುತ್ತಿತ್ತು. ಕಣ್ಣಪ್ಪ ಬೇಟೆಗೆ ಹೊರಟಾಗ ಅವನ ರೂಪವನ್ನು ನೋಡಬೇಕು ? ಜುಂಜುದಲೆ ; ಕೆಂಗಣ್ಣು ; ಗುಲಗಂಜಿಯ ಆಭರಣಗಳು, ತೊಡೆಗೆ ಚಲ್ಲಣ. ತಲೆ, ಕೈ ಮತ್ತು ತೊಡೆಗಳಲ್ಲಿ ಕವಡೆಯ ದಂಡೆಗಳು, ತೊಗಲಿನ ಉಡುಗೆ ಗಳನ್ನು ಬಿಗಿದುಟ್ಟಿದ್ದಾನೆ ; ನಡುನಡುವೆ ಎಲುವಿನ ತುಂಡುಗಳನ್ನು ಸೆಕ್ಕಿ ಸಿದ್ದಾನೆ. ಉದ್ದನೆಯ ಹುರಿ ಕಟ್ಟಿ ಇಳಿಯ ಬಿಟ್ಟ ಚೌರಿ ಬೆನ್ನ ಮೇಲೆ ಆಳ್ವಾ ಡುತ್ತಿದೆ. ಎತ್ತಿ ಕಟ್ಟಿದ ನೆತ್ತಿಗನ್ನಡಿ ಹೊಳೆಹೊಳೆಯುತ್ತಿದೆ. ಎಡಗೈಯಲ್ಲಿ ದೊಡ್ಡ ಬಿಲ್ಲು ಹಿಡಿದಿದ್ದಾನೆ. ಬೆನ್ನ ಮೇಲೆ ಬತ್ತಳಿಕೆಯಲ್ಲಿ ಕೂರಂಬುಗಳು ಗರಿಗೆದರುತ್ತಿವೆ. ಹೀಗೆ ಅಲಂಕಾರ ಮಾಡಿಕೊಂಡು ಬೇಡರ ಪಡೆಯನ್ನು ಸೇರಿಸಿಕೊಂಡು ಅಬ್ಬರಿಸುತ್ತ ಕಣ್ಣಪ್ಪ ಬೇಟೆಗೆ ಹೊರಟನೆಂದರೆ ಬೇಡರೆಲ್ಲ ರಿಗೂ ದೊಡ್ಡ ಹಬ್ಬ. ಬೇಟೆಯ ದಿಟ್ಟರೆಲ್ಲ ಕಣ್ಣಪ್ಪನ ಹಿಂದ ಹೊರಡುವರು. 'ತಿರುಕಾಳ ಬೆಟ್ಟದ ತಪ್ಪಲಿನ ಕಾಡನ್ನೆಲ್ಲ ಅಲೆಯುವರು ; ಮರೆಯಲ್ಲಡಗಿ ಮೃಗಗಳನ್ನು ಕಾಯುವರು ; ಪೊದೆ ಮೊದಲಾದೆಡೆಗಳಲ್ಲಿ ಅಡಗಿದ್ದವನ್ನು ಬಡಿದೆಬ್ಬಿಸಿ ಸೋವಿ ತರುವರು. ಯಾವುದಾದರೂ ಮೃಗ ಸರಿಯಾದ ಸ್ಥಳದಲ್ಲಿ ಕಂಡು ಬಂತೆಂದರೆ ಆ ಕೂಡಲೆ ಕಣ್ಣಪ್ಪ ಸರಕ್ಕನೆ ನೆಗೆದು ನಿಲ್ಲುವನು. ನೀಟಡಿ ಯಿಟ್ಟು ಬಾಗಿ ನಿಂತು ' ಕುಬುಬು' ಎಂದು ಕೂಗಿ ಬಿಲ್ಲಿಗೆ ಹೆದೆಯೇರಿಸು ವನು, ಹೆದೆಯನ್ನು ಬಲಗೈಯಿಂದ ಕಿವಿಯವರೆಗೆ ಎಳೆದು ತರುತ್ತಿರುವಷ್ಟರಲ್ಲಿ ಹೂಡಿರುವ ಕೂರಂಬು ತನ್ನನ್ನು ' ಬೇಗ ಬಿಡು, ಬಿಡು' ಎಂದು ತವಕಿ ಸುತ್ತಿರುವಂತೆ ತೋರುವುದು. ಅವನು ಬಿಟ್ಟ ಬಾಣವೇ ನಾಟುವುದೋ ________________

ಕಣ್ಣಪ್ಪ ಅಥವಾ ಅವನ ನೋಟವೇ ಬಾಣವಾಗಿ ನಾಟುವುದೋ ಹೇಳಬಾರದಷ್ಟು ವೇಗ ಅವನೆಸುಗೆ, ಅವನ ಬಿಲ್ಲಿನ ಗುರಿಗೆ ಸಿಕ್ಕಿದ ಒಂದು ಮೃಗವೂ ತಪ್ಪಿ ಹೋಗದು, ಭಯಪಟ್ಟು ಓಡಿಯೂ ಹೋಗದು. ಮೃಗಗಳೆಲ್ಲ ಸಂತೋಷ ದಿಂದ ಅವನ ಅಂಬಿಗೆ ಮೈಯೊಡ್ಡುವುವು, ಕಣ್ಣಪ್ಪ ಅವನ್ನು ಮತ್ತೊಂದು ಅಡಿ ಮೆಟ್ಟಬಿಡದೆ ಹೊಡೆದುಹಾಕುವನು ; ಅವುಗಳ ಜೀವ ಮರುಹುಟ್ಟು ಹುಟ್ಟದಂತೆ ನೆಟ್ಟನೆ ಸ್ವರ್ಗಕ್ಕೆ ನೆಗೆಯುವುವು. ಹೀಗೆ ಕಣ್ಣಪ್ಪನ ಬೇಟೆಯ ಲೀಲೆ ತಿರುಕಾಳು ಮಲೆಯ ತಪ್ಪಲಲ್ಲೆಲ್ಲ ದನಿಗೊಡುತ್ತಿತ್ತು. ಒಂದು ದಿನ ಕಣ್ಣಪ್ಪ ಬೇಟೆಗೆ ಹೊರಟಾಗ ಅವನಿಗೆ ಬಲಗಣ್ಣ ಬಲ ಹುಟ್ಟೂ ಅದುರಿತು. ಆಗ ಅವನು, ' ಇಂದು ಬೇಟಿ ಲೇ ಸಾಗುತ್ತದೆ' ಎಂದು ಕೊಂಡು ನಲಿದುಚ್ಛಿದನು. ಬಹಳ ಉತ್ಸಾಹದಿಂದ ಮುಂದುವರಿದು ನಡೆ * ದನು. ಅದೇ ಸಮಯದಲ್ಲಿ ಇತ್ತ ತಿರುಕಾಳತ್ತಿ ಮಲೆಯಲ್ಲಿದ್ದ ಈಶ್ವರನು ಒಂದು ಮಾಯಾ ಮೃಗವನ್ನು ನಿರ್ಮಿಸಿ, “ ನೀನು ಕಣ್ಣಪ್ಪನೆದುರಿಗೆ ಸುಳಿದು ಅವನನ್ನು ನನ್ನ ಬಳಿಗೆ ಸೆಳೆದುಕೊಂಡು ಬಾ ' ಎಂದು ಅಪ್ಪಣೆಮಾಡಿದನು. ಕೂಡಲೆ ಆ ಮೃಗ ಗಳಗಳನೆ ಬೆಟ್ಟದಿಂದ ಇಳಿದು ಬಂತು. ಬಂದು ದೂರದಲ್ಲಿ ಕಣ್ಣಪ್ಪನಿಗೆ ಕಾಣುವಂತೆ ಸುಳಿಯತೊಡಗಿತು. ಸ್ವಲ್ಪ ಹೊತ್ತು ಅತ್ತಿತ್ತ ಸುಳಿದಾಡುವುದು ; ಸ್ವಲ್ಪ ಹೊತ್ತು ನಿಲ್ಲುವುದು ; ಮತ್ತೆ ಅತ್ತಿತ್ತ ನಡೆದು ನಲಿದಾಡುವುದು, ಮೃಗದ ಸುಳಿದಾಟವನ್ನು ಕಂಡ ಕಣ್ಣಪ್ಪನಿಗೆ ಅದರ ಮೇಲೆ ತುಂಬ ಆಸೆಯಾಯಿತು. ಅದನ್ನು ಹೊಡೆಯ ಹೊರಟನು. ಮೃಗ ಛಂಗನೆ ನೆಗೆದು ಓಡತೊಡಗಿತು. ಕಣ್ಣಪ್ಪ ಅಟ್ಟಿಸಿಕೊಂಡು ಅದನ್ನು ಬೆಂಬತ್ತಿದನು, ಮೃಗ ಒಮ್ಮೆ ತಿಟ್ಟು ಹತ್ತುವುದು ; ಒಮ್ಮೆ ತಗ್ಗಿಗಿಳಿಯುವುದು. ಕೈಗೆ ಸಿಕ್ಕಿದಂತೆ ಮೆಲ್ಲನೆ ನಡೆಯುತ್ತಿದ್ದು ತಟಕ್ಕನೆ ಪಕ್ಕಕ್ಕೆ ಹೊರಳಿ ದಟ್ಟಡವಿ ಯನ್ನು ಹೊಕ್ಕು ಬಿಡುವುದು, ಪೊದರುಗಳಲ್ಲೂ ಕತ್ತಲೆ ತುಂಬಿದ ಮೇಳ ಗಳಲ್ಲೂ ನುಸಳಿ ನುಸುಳಿ ನಡೆಯುವುದು. ಕಣ್ಣಪ್ಪ ಅದರ ಮೇಲೆಯೇ ಕಣ್ಣಿಟ್ಟು ಅದು ಹೋದೆಡೆಯಲ್ಲೆಲ್ಲ ಬಿಡದೆ ಹಿಂಬಾಲಿಸುವನು. ಹಳ್ಳ ಕೊಳ್ಳ ಗಳಲ್ಲೂ ಬಳ್ಳಿ ಹಾವಸೆ ಬೆಳೆದ ಮಡುಗಳಲ್ಲೂ ಬೆತ್ತದ ಬಿದಿರಿನ ಹಿಂಡಲು ಗಳಲ್ಲೂ ಕಲ್ಲು ಮೊರಡಿಗಳಲ್ಲ ಆ ಮೃಗ ಹೊಕ್ಕು ಸುತ್ತಿ ಸುತ್ತಿ ಓಡತೊಡ ________________

ಕನ್ನಡ ಸಾಹಿತ್ಯ ಚಿತ್ರಗಳು ಗಿತು, ಕಣ್ಣಪ್ಪನೂ ಅದು ಹೊಕ್ಕಲ್ಲಿ ಹೊಕ್ಕು, ನೆಗೆದಲ್ಲಿ ನೆಗೆದು, ಓಡಿದಲ್ಲಿ ಬೆಂಬತ್ತಿ ಓಡಿ ಅದನ್ನು ಎಡೆಬಿಡದೆ ಅನುಸರಿಸುತ್ತಿದ್ದನು. ಅವನ ಮನಸ್ಕೂ ಕಣ್ಣ ಮೃಗದ ಮೇಲೆ ; ಮನಸ್ಸಿನಲ್ಲಿ ಅತ್ಯಂತ ತವಕ ; ಎಷ್ಟು ತವಕ ಪಟ್ಟರೂ ಮೈ ಹಿಂದೆ ಹಿಂದೆ. ಆದರೂ ಛಲದಿಂದ ಕಣ್ಣಪ್ಪನು ಆ ಮೃಗ ವನ್ನು ಮರೆಯಾಗಗೊಡದೆ ಬೆಂಬತ್ತಿದನು. ಕಡೆಗೆ ಅದು ಬೆಟ್ಟವನ್ನು ಹತ್ತಿ ಕಣ್ಣಪ್ಪನನ್ನು ಹಿಂದೆಯೇ ಎಳೆದುಕೊಂಡು ಶಿವನ ದೇವಾಲಯದ ಬಳಿ ಮಾಯವಾಯಿತು. ಕಣ್ಣಪ್ಪ ಅಲ್ಲೆಲ್ಲ ಬಹಳ ಹೊತ್ತು ಹುಡುಕಿದನು. ಎಲ್ಲಿಯೂ ಕಾಣ ದಿರಲು ಅವನಿಗೆ ಕೋಪವೇರಿತು. ದಡದಡನೆ ದೇವಾಲಯದ ಬಳಿ ಬಂದು * ಎನ್ನವನೇ, ಎನ್ನವನೇ, ಕದ ತೆರೆ, ತೆರೆ ” ಎಂದು ಒಂದೇ ಸಮನೆ ಕೂಗಲು ಮೊದಲುಮಾಡಿದನು. ತಟ್ಟನೆ ಕದ ತೆರೆಯಿತು. ಕಣ್ಣಪ್ಪ ಒಳ ಹೊಕ್ಕು ಲಿಂಗದ ಮುಂದೆ ನಿಂತು, “ ನೋಡು ಮಾದೇವನೇ ! ಕೇಳು ನನ್ನ ವನೇ! ಈಗ ನಾನು ನಿನ್ನ ಸತ್ಯವನ್ನು ನೋಡಿಬಿಡುತ್ತೇನೆ. ಹೋದ ಹುಲ್ಲೆ ಯನ್ನು ತೋರಿಸಿದರೆ ನೀನು ನನಗೆ ಒಳ್ಳೆಯವನು. ತೋರಿಸಿ ಕೊಟ್ಟರೆ ಅದ ರಲ್ಲಿ ನಿನಗೂ ಪಾಲು ಕೊಡುತ್ತೇನೆ, ನಾನೇನು ವಂಚನೆ ಮಾಡುವುದಿಲ್ಲ. ನಿನ್ನ ಪಾಲನ್ನು ನೀನು ತೆಗೆದುಕೊ ” ಎಂದು ಕೇಳಿಕೊಂಡನು. ಈಶ್ವರನಿಗೆ ನಗು ಬಂತು. ನಕ್ಕು, “ ಇವನ ಮೇಲೆ ನನಗೆ ಕಡು ಮೋಹ ” ಎಂದು ಕೊಂಡು ಕಣ್ಣಪ್ಪನಿಗೆ ಮೃಗವನ್ನು ತೋರಿಸಿದನು. ಕಂಡು ಕಣ್ಣಪ್ಪನಿಗೆ ಪರಮಾನಂದವಾಯಿತು. " ಅಯ್ಯಯ್ಯ ! ಇಂಥ ಸತ್ಯವನ್ನು 'ಕಂಡೆನಲ್ಲ ! ಕೈಯ ಮೇಲೆಯೇ ತೋರಿಸುವ ಒಡೆಯ ನನ್ನು ಕಂಡುಬಿಟ್ಟೆ ! ಅಯ್ಯಾ, ಇನ್ನು ನಿನ್ನ ನಗಲುವುದಿಲ್ಲ, ಇದುವರೆಗೂ ನಿನ್ನ ವಿಚಾರ ತಿಳಿದಿರಲಿಲ್ಲ. ತಿಳಿಯದೆ ಕೆಟ್ಟೆ, ತಿಳಿದ ಮೇಲೆ ಇನ್ನು ಬಿಟ್ಟೆನೇ ? ನನಗಿರುವವನು ನೀನು ; ನಿನಗಿರುವವನು ನಾನು, ಇಷ್ಟು ದಿಟವು ನಿನ್ನನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಇಂದು ಮೊದಲಾಗಿ ನಿನ್ನ ಹೆಜ್ಜೆಯನ್ನು ಬಿಟ್ಟಗಲುವುದಿಲ್ಲ ನಾನು. • ರಸ ಬಸಿಯುವ ಹೊಸ ಮಚ್ಚೆಯನ್ನು ತಂದು ಕೊಡುತ್ತೇನೆ. ಸಂಜೆಯಾದ ಮೇಲೆ ನಿನ್ನನ್ನು ಒಂಟಿಯಾಗಿ ಬಿಟ್ಟು ಹೋಗು ________________

ಕಣ್ಣಪ್ಪ ವುದಿಲ್ಲ. ಅ೦ಜ ಬೇಡ ; ಚಿಂತಿಸಬೇಡ” ಎಂದು ಅನೇಕ ಬಗೆಯಾಗಿ ಹಿಗ್ಗಿ ನಿಂದ ಹೇಳುತ್ತ ಕುಣಿದಾಡಿದನು. ಆಮೇಲೆ ಹುಲ್ಲೆಯನ್ನು ಹೊಡೆದು ಬಾಣಸಮೇತವಾಗಿ ಅದನ್ನು ದೇವಾಲಯಕ್ಕೆ ತಂದನು, ತಂದು, “ ದೇವಾ, ನೋಡು, ನಾನೇನು ಹುಸಿ ಯುವುದಿಲ್ಲ. ನಿನ್ನ ಮುಂದಿಟ್ಟು ಸರಿಯಾಗಿ ಹಂಚುತ್ತೇನೆ. ನಂಬು, ನನ್ನಲ್ಲಿ ಮಾಯೆಯಿಲ್ಲ, ನನ್ನ ವನೇ ?” ಎಂದು ಪ್ರೀತಿಯಿಂದ ನುಡಿಯುತ್ತ ಹುಲ್ಲಿ ಯನ್ನು ಕತ್ತರಿಸಿ ಸರಿಯಾಗಿ ಪಾಲುಮಾಡಿಟ್ಟನು. ಇಟ್ಟು, “ ನಿನಗೆ ಯಾವುದು ಬೇಕೋ ಅದನ್ನು ತೆಗೆದುಕೊ ” ಎಂದು ಒಳ್ಳೆಯ ಭಾಗವನ್ನೇ ಶಿವನಿಗೆ ಒಪ್ಪಿಸಿದನು. ನಿನ್ನ ಭಾಗವನ್ನು ಯಾರ ಕೈಗೂ ಕೊಡುವುದಿಲ್ಲ. ನಾನೇ ಕಾಸಿ ಲೇಸುಮಾಡಿ ಕೊಡುತ್ತೇನೆ” ಎಂದು ತಿಳಿಸಿ ಬೆಂಕಿ ಹೊತ್ತಿಸಿ ದನು, ಮಾಂಸಖಂಡಗಳನ್ನು ಬಿಡಿಸಿ ಕೋಲಿಗೆ ಚುಚ್ಚಿ ಬೆಂಕಿಗೆ ಹಿಡಿದು ಕಾಸಿ ಪಕಮಾಡಿದನು. ಕೆಂಪಾದ, ಸೊಂಪಾದ, ಕಂಪಳ ಖಂಡಗಳನೆ ಆಯಾಯ್ತು ಕಾಸಿ ಕೈಗೆತೆಗೆದು ರುಚಿನೋಡಿ ಇಂಪಾಗಿ, ಮೃದುವಾಗಿ ಕಂಡ ವನ್ನು ಬೇರೆ ಇರಿಸಿದನು. ಬಳಿಕ ಮುತ್ತುಗದ ಎಲೆಯನ್ನು ಹಚ್ಚಿ ಅದರಲ್ಲಿ ಖಂಡ ಗಳನ್ನಿಟ್ಟುಕೊಂಡು ಶಿವನ ಬಳಿಗೆ ತಂದನು. “ಎನ್ನ ವನೇ ಉಣ್ಣು, ಉಣ್ಣು” ಎಂದು ಕೇಳಿಕೊಂಡನು. “ ಎನ್ನವನೇ, ಸವಿನೋಡು, ನನ್ನಾಣೆ, ನಿನ್ನಾಣೆ!” ಎಂದು ಅಂಗಲಾಚಿದನು, ಅವನ ಭಕ್ತಿ ಶಂಕರನಿಗೆ ಸೊಗಸಿತು. ಭಕ್ತನನ್ನು ತೃಪ್ತಿ ಪಡಿಸ ಬೇಕೆಂದು, ಅವನು ಅರ್ಪಿಸಿದ ಮಾಂಸವನ್ನು ತಾನೇ ಕೈಕೊಂಡ ಹಾಗೆ ಕಾಣಿಸಿದನು. ಆ ಖಂಡಗಳನ್ನೆಲ್ಲ ಭೂತಗಳಿಗೆ ಕೊಟ್ಟು ಅವನ ನಿರ್ಮಲ ವಾದ ಭಕ್ತಿಯನ್ನೂ ಆತುರದ ಪ್ರೇಮವನ್ನೂ ತಾನು ಸ್ವೀಕರಿಸಿದನು. ಭಕ್ತನ ಮನಸ್ಸಿಗೆ ಶಿವನೇ ಉಂಡಂತ ಭಾವನೆ. ಶಿವನು ಭಕ್ತಿಯನ್ನು ಸವಿಸವಿದು ಆಗುತ್ತಿದ್ದನು. ಹೀಗೆ ಶಿವನು ಆಯೋಗಿಸುತ್ತಿರುವುದನ್ನು ಕಂಡು ಕಣ್ಣಪ್ಪ ನಿಗೆ ಮನಸ್ಸು ಮರುಗಿತು. ( ತಂದೇ, ಇಷ್ಟು ದಿನವೂ ಅಡವಿಯಲ್ಲಿ ಒಬ್ಬನೇ ಇದ್ದೆಯಲ್ಲಾ ! ನಿನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ ವಲ್ಲಾ ! ಹಲವುಪಾಸಗಳಲ್ಲಿ ಒಂದೂಟವನ್ನು ಕಂಡೆ,ಹನನ್ನ ಇಟ್ಟ ಇನ್ನು ನಿನ್ನನ್ನು ನಾನು ಸಲಹುತ್ತೇನೆ”.ಇನ್ನು ಕನಿಷ್ಟಜಿಸಿ ಕುಡಿದರೆ ________________

ಕನ್ನಡ ಸಾಹಿತ್ಯ ಚಿತ್ರಗಳು ರಾತ್ರಿಯಾಯಿತು. ಕಣ್ಣಪ್ಪ ಸುತ್ತಣ ಪೊದೆಗಳಲ್ಲಿ ಹುಡುಕಿ ಪುಕಲೆ ಗಳನ್ನಾ ಯ ಹೊರೆಕಟ್ಟಿ ಹೊತ್ತು ತಂದನು ; ಶಿವನಿಗೆ ಬೆಳಕು ಬೇಕೆಂದು ಮುಂದೆ ಬೆಂಕಿಯೊಟ್ಟಿದನು, ಒಟ್ಟ, “ ತಂದೇ, ನೀನಿನ್ನು ನಿದ್ದೆ ಮಾಡು. ಯಾವ ದುಗುಡವೂ ಬೇಡ, ನಾನು ಕಾವಲಾಗಿರುತ್ತೇನೆ. ಭಯಪಡಬೇಡ !! ಎಂದು ಶಿವನನ್ನು ನಿದ್ದೆ ಮಾಡಿಸಿದನು. ಆಮೇಲೆ ಮೆಲ್ಲನೆ ದೇವಾಲಯದ ಹೊರಕ್ಕೆ ಬಂದು ಸದ್ದು ಮಾಡುತ್ತಿದ್ದ ಹಕ್ಕಿಗಳನ್ನೆಲ್ಲ ಎಬ್ಬಿಸಿ ಓಡಿಸುವನು. “ಸದ್ದಿನಿಂದ ನಿದ್ದೆಗೆಟ್ಟರೆ ನನ್ನವನಿಗೆ ನಾಳೆ ಸರಿಯಾಗಿ ಹಸಿವಾಗುವುದಿಲ್ಲ. ಹಸಿವಿಲ್ಲದೆ, ಏನೂ ಉಣ್ಣದೆ ಹಾಗೇ ಇದ್ದು ಬಿಡುತ್ತಾನೆ” ಎಂದುಕೊಂಡು ಸುತ್ತ ಕಣ್ಣಿಟ್ಟು ನೋಡುತ್ತಿರುವನು. ಅಲ್ಲಿ ಬಂದ ಮೃಗಗಳನ್ನೆಲ್ಲ ದಿಕ್ಕು ದಿಕ್ಕಿಗೂ ಚೆದರಿ ಓಡುವಂತೆ ಹೊಡೆದಟ್ಟುವನು. ಹಕ್ಕಿಗಳ ನುಣ್ಣನಿಗಳನ್ನೂ ನಿಲ್ಲಿಸಿಬಿಡುವನು. ಒಳಕ್ಕೆ ಬಂದು ಶಿವ ನಿದ್ದೆ ಮಾಡುತ್ತಿರುವನೋ ಇಲ್ಲವೋ ಎಂದು ಆಲಿಸುವನು. ಬಳಿಕ ಹೊರಹೊರಟು ಹೊರದನಿಗಳನ್ನಾಲಿಸುವನು, ತಿರುಗಿ ಒಳಹೊಕ್ಕು ಉಸಿರನ್ನಾಲಿಸಿ, ( ಪಾಪ, ಬಳಲಿದ್ದಾನೆ, ನಿದ್ದೆ ಮಾಡಪ್ಪ ಎನ್ನು ವನು. ಹೀಗೆ ಒಳಕ್ಕೂ ಹೊರಕ್ಕೂ ಓಡಾಡುತ್ತ ಶಿವನ ನಿದ್ದೆಗೆ ಭಂಗ ಬರದಂತೆ ಕಾವಲು ಕಾಯುವುದರಲ್ಲಿ ಬೆಳಗಾಗುವವರೆಗೂ ಎಚ್ಚತ್ತಿದ್ದು ಜಾಗರಣೆ ಮಾಡಿದನು. ಬೆಳಗಾಗಿ ಶಿವನು ಉಪ್ಪವಡಿಸಲು ನೋಡಿ ನಲಿದಾಡಿದನು. “ ನಿದ್ದೆ ತಿಳಿದೆದ್ದೆಯಾ, ಎನ್ನ ವನೇ ? ಹಸಿದೆಯಯ್ಯಾ, ಹೊಸ ಮಾಂಸವನ್ನು ತರಲು ಹೋಗುತ್ತೇನೆ. ನನ್ನ ವನೇ ಬಲು ಬೇಗ ಬಂದುಬಿಡುತ್ತೇನೆ, ನೋಡು. ನಿನ್ನಾಣೆ, ತಡಮಾಡುವುದಿಲ್ಲ. ನಾನೊಂದು ಕಡೆಯೂ ನಿಲ್ಲುವುದಿಲ್ಲ” ಎಂದು ಸಂತಯಿಸಿ ಹೊರಹೊರಟನು. ಪ್ರೀತಿ ಉಕ್ಕಿ ಬಂತು, ಬಿಟ್ಟು ಹೋಗಲು ಮನಸ್ಸು ಯಾಡತೊಡಗಿತು. ಎರಡು ಮೂರು ಹೆಜ್ಜೆ ಇಟ್ಟು, ತಿರುಗಿ ಬಂದು, “ ಎನ್ನವನೇ, ಚಿಂತೆ ಮಾಡಬೇಡ, ಇಗೋ, ಈಗ ಬಂದು ಬಿಡುತ್ತೇನೆ ನೋಡು ” ಎಂದು ಸಮಾಧಾನ ನುಡಿಯುವನು, ಆಪ್ಪಿ, ಮುದ್ದಾಡಿ ಕೊಂಡಾಡುವನು. ಅಗಲಲಾರದೆ ಅಲ್ಲಿ ಇರಲೂ ಆರದೆ ಸಂಕಟಪಡುವನು. ಅವನ ಸ್ನೇಹ ಎಷ್ಟೆಂದು ಹೇಳೋಣ ! ಕಡೆಗೆ ಹೇಗೋ ಮನಸ್ಸು ಬಿಗಿ ಹಿಡಿದುಕೊಂಡು ಹೊರಹೊರಟನು. ತಿರುತಿರುಗಿ ಹಿಂದೆ ನೋಡುತ್ತಲೇ ________________

ಮುಂದುವರಿದನು. ಶಿವಲಿಂಗ ಕಣ್ಮರೆಯಾಗಲು ಕಂದಿ ಕುಂದಿಹೋದನು. ಶಿವನನ್ನೇ ನೆನೆಯುತ್ತ ಶಿವನಿಗೆಂದು ಮೃಗವನ್ನರಸುತ್ತಿದ್ದನು. ಕಣ್ಣಪ್ಪ ಅತ್ತ ಹೋದ ಮೇಲೆ ಊರಿನಿಂದ ಶಿವನನ್ನು ಪೂಜಿಸುವುದ ಕಾಗಿ ಒಬ್ಬ ಬ್ರಾಹ್ಮಣ ಇತ್ತ ಬಂದನು. ಮೈಗೆ ವಿಭೂತಿಯನ್ನು ಪೂಸಿ ಪ್ಲಾನೆ ; ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದಾನೆ. ಕೈಯ್ಯಲ್ಲಿ ಕರಡಿಗೆ, ಅಗ್ಗ ವಣಿ, ಆತ ಮೆಲ್ಲಮೆಲ್ಲನೆ ಬೆಟ್ಟವನ್ನು ಹತ್ತುತ್ಯ ದೇವಾಲಯದ ಬಾಗಿಲಿಗೆ ಬಂದನು, ಗವಲು ಕವಿದು ಬಂತು. ಆ ಹೊಲಸು ವಾಸನೆ ಮೂಗಿಗಡರಲು * ಇದೆಲ್ಲಿಯ ಅದ್ಭುತವಪ್ಪಾ' ಎಂದುಕೊಂಡು ಗುಡಿಯ ಬಾಗಿಲಿನಿಂದ ಹಿಂ ದಿರುಗಿ ಬಂದು ಕರಡಿಗಯನ್ನೂ ಅಗ್ಗವಣಿಯನ್ನು ಒಂದು ಕಡೆ ಇಟ್ಟನು. ಹೇಸಿ ಅಸಹ್ಯ ಪಟ್ಟುಕೊಂಡು ಉಗುಳಿ ಮೂಗು ಮುಚ್ಚಿಕೊಂಡನು. 'ಎಲ್ಲಿಯ ದುರಾಚಾರ ಬಂತೋ ! ಶಂಕರನಿಗೆ ಎಂಥ ಜುಗುಪ್ಪೆಯುಂಟಾಯಿತೋ !! ಎಂದು ಪೇಚಾಡುತ್ತ ಮೂಗು ಮುಚ್ಚಿಕೊಂಡೇ ಒಳಕ್ಕೆ ಬಂದನು. ಬಂದು, (* ಎಳೆ ದೇವ, ಇಂಥ ಪಾಪಕರ್ಮ ಮಾಡುವ ಕಟುಕನನ್ನು ಒಳಕ್ಕೆ ಬರ ಗೊಡಿಸುವುದೆ ? ಏನಯ್ಯ, ಎಲ್ಲಿದ್ದೆ ? ಏನಾದೆ, ಎಲೆ ದೇವ ? ೨೨ ಎಂದು ನುಡಿಯುತ್ತ ಪೊರಕೆಯಿಂದ ಗುಡಿಸಿ, ಗೋಮಯನಿಕ್ಕಿ ಶುಚಿಮಾಡಿದನು, ತರುವಾಯ ಕೊಳ್ಳಕ್ಕೆ ಹೋಗಿ ಮತ್ತೊಮ್ಮೆ ಮಿಂದು, 'ಶಿವ ಶಿವ' ಎಂದು ನೆನೆಯುತ್ತ ಬಂದು ಅಗ್ಗವಣಿಯನ್ನೂ ಕರಡಿಗೆಯನ್ನೂ ತೆಗೆದುಕೊಂಡು ಶಿವಾಲಯದ ಒಳಹೊಕ್ಕನು.

  • ಶುದ್ಧಾತ್ಮ ಶಿವಾ, ಹೀಗೆ ಮಾಡಿಸುವುದೇ ? ನಿರ್ಮಲ ಪ್ರಭುವೇ, ಹೀಗೆ ಮಾಡಿಸುವರೇ ? ” ಎನ್ನುತ್ತ ಭಯಭಕ್ತಿಯಿಂದ ಕಾಳಯರಸನಿಗೆ ಅಭಿಷೇಕ ಮಾಡಿದನು. ಬಿಲ್ವ ಪತ್ರೆ, ಗರುಗ, ಉತ್ತರಣೆ, ದೊಡ್ಡ ಪತ್ರೆ, ಬಿಳಿಯ ಗರುಕೆ ಮೊದಲಾದ ಬಗೆಬಗೆಯ ಪತ್ರಗಳನ್ನು ತಂದೊಟ್ಟ ಸಜ್ಜನ ಸ್ನೇಹಭರಿತನಾದ ಪರಮಾತ್ಮನಿಗೆ ಪೂಜೆ ಮಾಡಿದನು. ರುದ್ರಸೂಕ್ತಗಳನ್ನು ಪಠಿಸಿ ಹಲವು ಜಪಗಳನ್ನು ಮಾಡಿದನು. ಧೂಪಾರತಿಯೆತ್ತಿ ನೈವೇದ್ಯವನ್ನು ಸಮರ್ಪಿಸಿ, “ಕಾಪಾ, ಶರಣು ” ಎಂದು ಆಡ್ಡ ಬಿದ್ದನು. “ಈ ಪಶುಕರ್ಮ ಕಾರನನ್ನು ಹುಗಿಸಬೇಡ, ಕಂಡೆಯಾ, ಹೇಸಿಗೆ ಮಾಡುವ ಕಿರಾತನನ್ನು ಹೋಗಿಸಬೇಡ, ಕಂಡಯಣ ” ಎಂದು ಬೇಡಿಕೊಂಡನು. ಚಂದ್ರಶೇಖರ, ________________

ಕನ್ನಡ ಸಾಹಿತ್ಯ ಚಿತ್ರಗಳು ಕರುಣಿಸು ” ಎಂದು ಕೈ ಮುಗಿದು ನಿಂತನು. ಹೀಗೆ ಪೂಜೆಯನ್ನು ಮುಗಿಸಿ ಗರ್ಭಗೃಹ, ಸುಕನಾಸಿ, ರಂಗಮಂಟಪದ ಹೊರಮುಖ-- ಈ ಮೂರು ಬಾಗಿಲುಗಳ ಕದಗಳನ್ನೂ ಮುಚ್ಚಿ ಸರಪಣಿ ಸೇರಿಸಿ ಬಿಗಿಯಾಗಿ ಬೀಗ ಹಾಕಿ ದನು, “ ಶಂಕರಾ, ಇನ್ನು ಅವನನ್ನು ಒಳಹೊಗಿಸಬೇಡ” ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತ ಪಟ್ಟಣಕ್ಕೆ ಹಿಂದಿರುಗಿ ಹೋದನು. ಇತ್ಯ ಬೇಡರ ಕಣ್ಣಪ್ಪ ಮೃಗವನ್ನು ಹುಡುಕಿಕೊಂಡು ಕಾಡಿನಲ್ಲೆಲ್ಲ ಅಲೆಯುತ್ತಿದ್ದನು. “ ಎನ್ನವನು ಹಸಿದನು ” ಎಂದು ಮನಸ್ಸಿನಲ್ಲಿ ಸದಾ ದುಗುಡ. ಆದರೂ ಸಿಕ್ಕಿ ಸಿಕ್ಕಿದ ಮೃಗವನ್ನು ಹೊಡೆಯಲೋಲ್ಲ. ಬಾಡಿದ ಮೃಗಗಳನ್ನೂ ರೋಗದ ಮೃಗಗಳನ್ನೂ ಕಂಡರೆ, “ ಇವು ಹೊಲ್ಲ ; ಎನ್ನವನ ಹೊಟ್ಟೆಗಾಗುವುದಿಲ್ಲ ; ಬೇಡ ” ಎಂದುಕೊಂಡು ಆ೦ಬೆಸೆಯದೆ ಸುಮ್ಮನೆ ನಿಲ್ಲುವನು. * ಬಾಳೆ ಎನ್ನ ಮಾದೇವ ” ಎನ್ನುತ್ತ ಹುಡುಕಾಡುತ್ತಿರುವಲ್ಲಿ ಅಷ್ಟಾಂಗ ಪುಷ್ಟವಾಗಿದ್ದ ಒಂದು ಮೃಗವನ್ನು ಕಂಡು ಮನಸ್ಸಿಗೆ ಒಪ್ಪಾಗಲು ಬಾಣಬಿಟ್ಟನು. ಆ ಮೃಗ ನೆಲಕ್ಕೆ ಬೀಳುವ ಮೊದಲೇ ಓಡಿಹೋಗಿ ಹಿಡಿದೆತ್ತಿ ಕೊಂಡನು. * ನೆಲಕ್ಕೆ ಸೋಕಿದರೆ ನನ್ನೊಡೆಯ ಹೇಸುವನು ” ಎಂದು ಕಲ್ಪಾಳೆಯೆಲೆಗಳನ್ನು ಕೊಯ್ದು ಬೆಳೆದ ಕಸಲೆಯ ಮೇಲೆ ಹಾಸಿ ಅಲ್ಲಿ ಮೃಗ ವನ್ನಿಟ್ಟು ಎಲೆ ಮುಚ್ಚಿದನು, “ ಗಾಳಿ ತಾಗಿದರೆ ಒಲ್ಲ ; ಎನ್ನವನು ಸುಖಿ ” ಎಂದುಕೊಳ್ಳುವನು. ಆಮೇಲೆ ಎಳೆಯ ಮಾವಿನ ಮರದ ಕೆಳಗೆ ತಂದಿಟ್ಟು ಕೊಂಡು ಮುತ್ತುಗದ ಎಲೆಗಳನ್ನು ಹಾಸಿ ಮೃಗವನ್ನು ಕೊಯ್ದು ಖಂಡ ಗಳನ್ನು ಬಿಡಿಸಿಟ್ಟನು. ಬೆಂಕಿಯೊಟ್ಟ ಕಾಸಿ ಪಕ್ವ ಮಾಡಿದನು. “ ಕಾವು ಹೆಚ್ಚಾಯಿತು ; ಇದು ಸಿದುಹೋಯಿತು ಎಂದು ಬೇರೆ ಇರಿಸುವನು. ಮೃದುವಾದವನ್ನು ಕೈಯಿಂದ ಮುಟ್ಟಿ ಮುಟ್ಟ ಪರೀಕ್ಷಿಸುವನು ; ಚೆಲುವಾದು ವನ್ನು ಕಣ್ಣುಗಳಿಂದ ನೋಡಿ ನೋಡಿ ಪರೀಕ್ಷಿಸುವನು ; ಕಂಪುಳ್ಳವನ್ನು ಮೂಸಿ ಮೂಸಿ ಶೋಧಿಸುವನು ; ಇಂಪುಳ್ಳವನ್ನು ನಾಲಿಗೆಯಿಂದ ರುಚಿ ನೋಡಿ ಶೋಧಿಸುವನು. ಹೀಗೆ ಸರ್ವೇಂದ್ರಿಯಗಳಿಂದಲೂ ಶೋಧಿಸಿ ನೋಡಿ ಉತ್ತಮವಾಗಿ ಕಂಡವನ್ನು ಮಾತ್ರ ಶಿವನಿಗೆಂದು ತೆಗೆದಿಟ್ಟು, ಕೊಂಡನು, ಬಳಿಕ, ಕಾಡುಮೊಲ್ಲೆಯ ಹೂವುಗಳನ್ನು ಕೊಯ್ದು ತಲೆಯ ಮೇಲಿಟ್ಟು ಕೊಂಡನು, ಬಾಯಲ್ಲಿ ಅಗ್ಗವಣಿಯನ್ನು ತುಂಬಿಕೊಂಡನು. ________________

ಒಂದು ಕೈಯಲ್ಲಿ ಮಾಸಿಗರ ಸ್ನೇಹದಿಂದ ಆಯ್ದಿಟ್ಟ ಮಾಂಸ, ಇನ್ನೊಂದು ಕೈಯಲ್ಲಿ ಬಿಲ್ಲು ಬಾಣಗಳು. ಹೀಗೆ ಸಿದ್ಧನಾಗಿ ಗುಡಿಗೆ ಹಿಂದಿರು ಗಿದನು. , ದಾರಿಯಲ್ಲಿ ನಾನಾ ಬಗೆಯ ಚಿಂತೆ : 4 ಎನ್ನವನು ಹಸಿದ; ಇರಲಾರ. ಬಹಳ ತಡಮಾಡಿದೆನೆಂದು ಕೋಪಿಸುತ್ತಾನೆ. ಹೊತ್ತು ಹೋಯಿತೆಂದು ನನ್ನ ಬರವನ್ನೇ ಹಾರಯಿಸುತ್ತಿರುವನೇನೋ ? ನಾನು ಹೊತ್ತು ಕಳೆದೆ ; ಪಾಪಿ ಯಾದೆ. ತುಂಬ ಹಸಿದು ಎದುರಿಗೆ ಬರುತ್ತಿದ್ದಾನೋ ಏನೋ? ಹುಲಿ ಬಂದರೆ ಅ೦ಜಿ ಹೊರಕ್ಕೆ ಬರಲಾರದೆ ಇರುವನೇನೂ ? ಕರಡಿ ಗರ್ಜಿಸಿದಃ | ಹೆದರಿ ಮಾತಾಡದೆ ಸುಮ್ಮನಿರುವನೇನೋ ? ಒಂಟಿಯಾಗಿ ಬೇಸರಪಟ್ಟರು ವನೋ ? ತಮ್ಮವರನ್ನು ನೆನೆದು ನನ್ನನ್ನು ತೊರೆದುಬಿಟ್ಟ' ಎಂದು ಅಳು ವನೋ ? ನೊಂದುಕೊಂಡು ನನ್ನ ಮೇಲೆ ಮುನಿದಿರುವನೋ ? ಎಂದು ಮುಂತಾಗಿ ಪ್ರೀತಿಯ ಹೆಚ್ಚಿಗೆಯಿಂದ ಚಿಂತಿಸತೊಡಗಿದನು. ಚಿಂತಿಸುತ್ತಲೇ ದೇವಾಲಯದ ಬಳಿ ಬಂದು ಸೇರಿದನು. ಬಾಗಿಲಿಗೆ ಭದ್ರವಾಗಿ ಬೀಗ ಹಾಕಿದೆ. " ಎನ್ನವನೇ ಕದ ತೆರೆ ” ಎಂದು ಅವನು ನುಡಿಯಬೇಕು ; ಅಷ್ಟರೊಳಗಾಗಿ, ಹಾಗೆ ನುಡಿಯುವುದಕ್ಕಿಂತ ಮುಂಚೆಯೇ ಢಣಢಣನೆ ಬೀಗ ಬಿಚ್ಚಿ ಬಾಗಿಲು ತೆರೆಯಿತು. ಕಣ್ಣಪ್ಪ ಒಳಹೊಕ್ಕು * ಒಬ್ಬನೇ ಇದ್ದೆಯಲ್ಲಾ, ತಂದೇ ” ಎಂದುಕೊಂಡು ಲಿಂಗದ ಮೇಲಿದ್ದ ಪೂಜೆಯ ಹೂವು ಮೊದಲಾದುವನ್ನೆಲ್ಲ ಕೆರದ ಕಾಲಿನಿಂದಲೆ ಒತ್ತರಿಸಿದನು. ಬಳಿಕ ಪ್ರೀತಿಯಿಂದ ಬಾಯೊಳಗಿನ ಅಗ್ಗವಣಿಯಿಂದ ಮಜ್ಜನಕ್ಕೆರೆದನು. ತನ್ನ ತಲೆಯ ಮೇಲಿದ್ದ ಹೂವುಗಳಿಂದ ಪೂಜೆಮಾಡಿದನು. ಹೊಸ ಮಾಂಸ ದೋಗರವನ್ನು ತಂದು ಮುಂದಿರಿಸಿ, “ ಎನ್ನವನೇ, ಎನ್ನವನೇ ! ಹಸಿದೆ ಯಪ್ಪಾ, ಹಸಿದೆ. ಓಹೊ ಹೊ ಹೊತ್ತಾಗಿ ಹೋಯಿತು ! ಎನ್ನವನೇ, ಚೆನ್ನವನೇ, ಉಣ್ಣು. ಹೊತ್ತಾಯಿತೇ, ಎನ್ನ ಯ್ಯಾ ? ಉಣ್ಣದನೆ ದಮ್ಮಯ್ಯ” ಎಂದು ಪರಿಪರಿಯಾಗಿ ಬೇಡಿದನು. ಶಿವನು ಉಣ್ಣದಿರಲು, “ಹೋ, ಗೊತ್ತಾ ಯಿತು. ನಾಚಿಕೊಂಡಿದ್ದೀಯ, ನೀನು ” ಎಂದು ಹಿಂದುಮುಂದಾಗಿ ತಿರುಗಿ ಕೊಂಡನು. ಆಗ ಶಿವ ಅವನ ತಿಳಿಯಾದ ಭಕ್ತಿಗೆ ಮೆಚ್ಚಿ ಮೊದಲಿನಂತೆಯ ತಾನು ಉಂಡಂತೆ ತೋರಿಸಿಕೊಂಡು ಮ ________________

ಕನ್ನಡ ಸಾಹಿತ್ಯ ಚಿತ್ರಗಳು ಸ್ವಲ್ಪ ಹೊತ್ತು ತಡೆದು ಕಣ್ಣಪ್ಪ ತಿರುಗಿ ನೋಡಿದನು. ಶಿವ ಆಯೋಗಿ ಸಿರಲು ಕಂಡು ಹರ್ಷಗೊಂಡನು. ತಾನು ನೋಡಿದ್ದರಿಂದ ದೃಷ್ಟಿ ತಾಕೀ ತೆಂದು ಹೆದರಿ ಅಕ್ಕರೆಯಿಂದ ಹೂ, ಥ' ಎಂದು ಉಗುಳಿ ರಕ್ಷೆಯಿಟ್ಟನು. ಆಮೇಲೆ ಲಿಂಗಪ್ರಸಾದವನ್ನು ತೆಗೆದುಕೊಂಡು ಸವಿದನು. ಅಂದು ಆ ಮಾಂಸ ಎಂದಿಗಿಂತಲೂ ಹೆಚ್ಚು ರುಚಿಯಾಗಿ ಕಂಡಿತು. ಮನಸ್ಸು ಹರ್ಷ ದಿಂದ ಉಬ್ಬಿತು, “ ನನ್ನವನು ಉಂಡ. ನಾನು ಬದುಕಿದೆ. ಇನ್ನು ನನಗೆ ಅಸಾಧ್ಯವಾದ್ದೊಂದೂ ಇಲ್ಲ” ಎಂದು ಭುಜ ಅಪ್ಪಳಿಸಿಕೊಂಡನು. ಪ್ರೀತಿ ಯಿಂದ ಲಿಂಗವನ್ನೇ ನೋಡುತ್ತ ನಿಂತನು. ಆಗ ಉಕ್ಕುಕ್ಕಿ ಬರುವ ಆನಂದ ವನ್ನು ತಾಳಲಾರದೆ ಕುಣಿಯತೊಡಗಿದನು. ಆಗಿನ ಅವನ ಒಲವಿನ, ನಲ ವಿನ ಕುಣಿತ ವಿಚಿತ್ರವಾಗಿತ್ತು : ಬಾಗಿ ಕೈ ಚಪ್ಪಾಳೆ ಹೊಡೆಯುವನು; ಮೈಯುಬ್ಬಿ ಕೂಗುವನು; ತೊನೆದಾಡುವನು; ಒಂದೇ ಕಾಲಲ್ಲಿ ಕುಣಿಯು ವನು. ಉಬುಬು' ಎಂದು ಬೊಬ್ಬಿಡುವನು ; ಕೋ ಎಂದು ಕೂಗುವನು' ತೊಟ್ಟ ಮಣಿಗಳೆಲ್ಲ ಅಳ್ಳಾಡುತ್ತಿರಲು ನಾಲ್ಕು ದಿಕ್ಕಿಗೂ ಕೈ ಕಾಲು ಮುಖ ಗಳನ್ನು ಚಾಚುತ್ತ ಕುಣಿದು ಕೆಲೆಯುನು, ಕೈಯ ಕತ್ತಿಯನ್ನು ಎತ್ತಿ ಹಿಡಿದು ಕುಣಿದಾಡುವನು, ತಟಕ್ಕನೆ ಕುಣಿತವನ್ನು ನಿಲ್ಲಿಸಿ ಲಿಂಗದ ಬಳಿಗೆ ಓಡಿ ಬಂದು ಬಿಗಿಯಾಗಿ ಅಪ್ಪಿಕೊಳ್ಳುವನು, ನಿಟ್ಟುಸಿರು ಬಿಟ್ಟು ತನ್ನನ್ನು ತಾನೇ ಬೈದುಕೊಳ್ಳುವನು. ಶಿವನನ್ನೇ ನೆನೆಯುತ್ತಿದ್ದು ಮತ್ತೆ ಎದ್ದು ಒಲೆ ದಾಡುವನು. ಕರಡಿಯಂತ ಕುಪ್ಪಿ ಕುಪ್ಪಿ ಕೆಳೆಯುವನು, ಹುಲ್ಲೆಯಂತ ಹಾರಿ ನೆಗೆಯುವನು, ಬಾಯಿಂದಲೆ ಕೊಂಬು, ಮೌರಿ, ಕಹಳೆಗಳನ್ನೂ ದು ವನು. ಬಾಯಿಂದಲೆ ಕರಡೆಬಾಜಿಸಿ ಕೊಳಲೂದುವನು, “ನನ್ನವನೇ ನೋಡು ” ಎಂದು ' ಎತ್ತಿಕ್ಕಿ' ಆಡುವನು ; “ ಸಿಳ್ಳಿಕ್ಕಿ' ಆಡುವನು. ಮುಂದು ಗಡೆ ತುರುಬು ಕಟ್ಟಿಕೊಂಡು - ದುಮ್ಮಿಸಲಿ ' ಆಡುವನು. ಇನ್ನೂ ಹಲವು ಬಗೆಯ ಚಂದ ಚಂದದ ಬೇಡರಾಟಗಳನ್ನೆಲ್ಲ ಆಡಿ ತೋರಿಸುವನು. ಕಡೆಗೆ ಬೇರೆ ಆಟ ತೋರದಿರಲು ಕಾಲಿಗೆ ಬಂದಂತೆ ಆಡುವನು, ಹಾಡಲರಿಯದೆ * ಎನ್ನವನೇ, ಎನ್ನವನೇ ಎಂದು ಹಾಡುವನು. ಹೀಗೆ ಬೆರಕೆಯಿಲ್ಲದ ಬಚ್ಚ ಬರಿಯ ಭಕ್ತಿಯಿಂದ ಬೆಳಗಾಗುವವರೆಗೂ ಆಡುತ್ತಲೇ ಇದ್ದನು, ________________

ಬೆಳಗಾಗಲು ಪ್ರೀತಿಯಿಂದ ಶಂಕರನನ್ನು ಅಪ್ಪಿ ಕೊಂಡಾಡಿ, 'ಒಡೆ ಯನೇ, ಬೇಟೆಗೆ ಹೋಗುತ್ತೇನೆ” ಎಂದನು. “ನಿನ್ನೆ ಯ ಹಾಗಲ್ಲ, ನನ್ನವನೇ. ತಡಮಾಡುವುದಿಲ್ಲ. ನಿನ್ನಾಣೆ, ಬೇಗನೆ ಬರುತ್ತೇನೆ ” ಎಂದು ನಂಬುಗೆ ನುಡಿದನು. ಆಗಲಲಾರ, ಆಗದೆ ಇರಲಾರ, ಮುನ್ನಿನ ದಿನದಂತೆಯೇ ಹೇಗೋ ಕಷ್ಟದಿಂದ ಹೊರಹೊರಟನು. ೯ ಮೈ ಅತ್ಯ, ಮನಸ್ಸಿಲ್ಲ ' ಎಂಬಂ ತಾಯಿತು ಅವನ ಸ್ಥಿತಿ, ಅಡವಿ ಅಡವಿ ಅಲೆಯುತ್ತ ಬೇಟೆಯಾಡುತ್ತಿದ್ದರೂ ಅವನ ಮನಸ್ಸಿನ ತುಂಬ ಶಿವನೇ ತುಂಬಿಕೊಂಡಿದ್ದನು. ಇತ್ತ ಆ ಶಿವಬ್ರಾಹ್ಮಣನು ಹಿಂದಿನ ದಿನದಂತೆಯೇ ಅಂದು ಕೂಡ ಮಿಂದು ಮಡಿಯುಟ್ಟು ಅಗ್ಗವಣಿಯ ಕೊಡವನ್ನು ಹೊತ್ತು ಹೂ ಪತ್ರಗಳನ್ನು ತೆಗೆದುಕೊಂಡು ಪೂಜೆಗೆಂದು ಬೆಟ್ಟ ಹತ್ತಿ ಬಂದನು. ದೇವಾಲಯದ ಬಾಗಿ ಲಿಗೆ ಬಂದು ನೋಡಿದರೆ ಮೊದಲಿಗಿಂತಲೂ ನಾಲ್ಮಡಿ ಹೇಸಿಕೆಯಾಗಿತ್ತು. ಕಂಡು ಒಳಕ್ಕೆ ಹೋಗದೆ ಸಿಡಿಮಿಡಿಗೊಂಡು ಹೊತ್ತ ಆಗ್ಗವಣಿ ಸಹಿತ ನಾಗಿಯೆ ಬೆರಗಾಗಿ ನಿಂತನು. “ ಎತ್ತ ಹೋದೆ, ಶಿವನೇ ? ಇಲ್ಲಿ ನಿನ್ನ ಹೊಲಬಿಲ್ಲ. ಕಾಳಹಸ್ತೀಶ್ವರನೇ ಹೀಗೆ ಮಾಡಿಸುವರೇ ? ಇಂಥ ಅನಾಚಾರಕ್ಕೆ ಎಡೆಗೊಡುವರೆ ? ಪ್ರಾಣಿಯನ್ನು ಕೊಲ್ಲಬಿಡುವುದು ಇದು ಧರ್ಮವೆ ? ಅವನಿಗೆ ಅಡವಿಯಲ್ಲಿ ಬೇರೆ ಎಲ್ಲಿಯೂ ಎಡೆಯಿರಲಿಲ್ಲವೆ ? ಈ ಮರುಳುತನಕ್ಕೇನು ಮಾಡಲಿ ? ಹೇಗೆ ಬಂದು ಅರ್ಚಿಸಲಿ ? ಇಂದು ಮೊದ ಲಾಗಿ ನಾನು ಬರುವುದಿಲ್ಲ ; ಇತ್ತ ಸುಳಿಯುವುದಿಲ್ಲ. ಮೊದಲು ಅವನನ್ನು ಕೊಲ್ಲುತ್ತೇನೆ ; ಆಮೇಲೆ ಬಂದು ಅರ್ಚಿಸುತ್ತೇನೆ” ಎಂದು ನೊಂದು ನೊಂದು ನುಡಿಯುತ್ತಿದ್ದನು. ಹಾಗೆ ನುಡಿಯುತ್ತಲೆ ಅಗ್ಗವಣಿ ಹೂ ಪತ್ರೆ ಗಳನ್ನು ಒಂದು ಕಡೆ ಇಟ್ಟು, ಗುಡಿಯನ್ನು ಗುಡಿಸಿ ಸಾರಿಸಿ ಚೊಕ್ಕಟಮಾಡಿ ದನು, ಬಳಿಕ ಕ್ರಮವಾಗಿ ಅಭಿಷೇಕ ಅಲಂಕಾರ ಧೂಪ ದೀಪ ನೈವೇದ್ಯಾದಿ ಗಳಿಂದ ಅರ್ಚಿಸಿದನು. ಆದರೂ ಅವನಿಗೆ ದೇವನ ಮೇಲೆ ಕೋಪ, ಎಂದೂ ಇಲ್ಲದ ದುರಾಚಾರಕ್ಕೆ ಅವಕಾಶಕೊಟ್ಟನಲ್ಲಾ ಎಂದು. ಹಾಗೆ ಹೇಸಿಕೆ ಮಾಡುವವನನ್ನು ಕೊಲ್ಲುವ ಸಂಕಲ್ಪ ಮಾಡಿಕೊಂಡು ಬ್ರಾಹ್ಮಣ ಹೊರಟು ಹೋದನು. ________________

ಕನ್ನಡ ಸಾಹಿತ್ಯ ಚಿತ್ರಗಳು ಇದನ್ನೆಲ್ಲ ಕಂಡು ಪಾರ್ವತಿ ಅಚ್ಚರಿಪಟ್ಟು ಶಿವನನ್ನು ಹೀಗೆ ಬೆಸ ಗೊಂಡಳು : * ದೇವಾ, ನೀವು ಮಾಡುವುದು ನನಗೆ ತಿಳಿಯುವುದಿಲ್ಲ. ಈ ಬೇಡನ ನಡವಳಿಕೆ ಲೋಕಕ್ಕೆ ವಿರುದ್ದವಾಗಿದೆ. ಮುಕ್ಕುಳಿಸಿದ ನೀರನ್ನು ಮಜ್ಜನಕ್ಕೆರೆಯುವವರು ಯಾರಾದರೂ ಉಂಟೆ ? ಮುಡಿದ ಹೂವಿ ನಿಂದ ಪೂಜೆ ಮಾಡಿದವರುಂಟೆ ? ಬರಿಯ ಮಾಂಸ ಮಾತ್ರವೇ ಅಲ್ಲ, ಎಂಜಲೂ ಮಾಡಿದ್ದನ್ನು ಆರೋಗಣೆಗಿತ್ತವರುಂಟೆ ? ಇದನ್ನೆಲ್ಲ ಸೈರಿಸಿ ಕೊಂಡಿದ್ದೀರಲ್ಲಾ ! ಇಂಥ ಬೇಡನಿಗೆ ಒಲಿದು ಕದ ತೆರೆಯುವುದೆ ? ದೇವಾ ಇವನು ಹುಟ್ಟಿದಂದಿನಿಂದ ಎಂದಾದರೂ ವಿಭೂತಿಯಿಟ್ಟು ಬಲ್ಲನೆ ? (ಶಿವ ಶಿವಾ' ಎಂದು ಬಲ್ಲನೆ ? ' ಎನ್ನವನೇ, ಎನ್ನವನೇ ? ಎನ್ನುವುದು ಇದು ಮಂತ್ರವೇ ? ತನ್ನ ವಿನೋದಕ್ಕೆ ಏನೇನೋ ಮಾಡಿದರೆ ಅದು ಶಿವಾರ್ಚನೆಗೆ ತಂತ್ರವೆ ? ಒಂದಿಷ್ಟೂ ಕ್ರಮವನ್ನು ಕಾಣದ ಬೇಡನಿಗೆ ಕರುಣಿಸಿದ್ದೀರಿ, ಮಿಂದು ವಿಭೂತಿಯಿಟ್ಟು ರುದ್ರಾಕ್ಷಿ ಧರಿಸಿ ಹೂವಾಯ್ತು ಅಗ್ಗವಣಿಯನ್ನು ತಂದು ಮಜ್ಜನಕ್ಕೆರೆದು ಪೂಜೆಮಾಡಿ ಆರತಿಯೆತ್ತಿ ನಲಿದು ನೋಡಿ ನೈವೇದ್ಯ ಸಮರ್ಪಿಸಿ ಜಪ ತಪ ಧ್ಯಾನ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಪೂಜಿಸುವ ಬ್ರಾಹ್ಮಣನಿಗೆ ಬಾಯಿಬಿಡದೆ ಮಿಡುಕದೆ ಇದ್ದೀರಿ ಎಂದೂ ನಮಸ್ಕಾರ ಮಾಡಿ ಕಂಡರಿಯದ, ಅದು ಹೋಗಲಿ, ಕೈಯೆತ್ತಿ ಮುಗಿಯಲೂ ಬರದ, ಯಾವ ರೀತಿಯಿಂದಲಾದರೂ ಸ್ತೋತ್ರಮಾಡಲಾರದ ದುಶ್ಚರಿತ್ರನಾದ ಕಿರಾತ ನಿಗೆ ಅದು ಯಾವ ರೀತಿ ಒಲಿದಿರೋ ಕಾಣೆ ! ” ಎಂದಳು. ಆ ಮಾತಿಗೆ ನಸುನಗುತ್ತ ಶಿವ ಹೀಗೆ ಉತ್ತರಕೊಟ್ಟನು: “ ಪಾರ್ವತೀ, ಇದನ್ನು ನಿನಗೆ ತಿಳಿಯಹೇಳುತ್ತೇನೆ, ಕೇಳು, ಹಾರುವನ ಅಗ್ಗವಣಿ ತಿಳಿ ; ಮನಸ್ಸು ಕದಡು. ಎಲೆ ಗೌರಿ, ಅವನ ಅರ್ಚನೆ ಇನಿದು ; ಮನಸ್ಸು ಅತಿ ವಿಷ ಇಟ್ಟ ವಿಭೂತಿ ಅವನನ್ನು ಮುಟ್ಟದು, ತೊಟ್ಟ ರುದ್ರಾಕ್ಷಿ ಅವನನ್ನು ಸೋದು. ಬಾಯಲ್ಲಿ ಮಂತ್ರ, ಮನಸ್ಸಿನಲ್ಲಿ ಕುದ ತಂತ್ರ ಅವನಿಗೆ ನನ್ನನ್ನು ಪೂಜಿಸಿ ಬೇರೊಬ್ಬರಿಗೆ ಕೈಯೊಡ್ಡುವರೆ ? ಸತ್ಯವಿಲ್ಲದ ಪೂಜೆ ಚೆನ್ನಾಗುತ್ತದೆಯೇ, ದೇವಿ ? ಮನಸ್ಸಿಲ್ಲದವನು ಮುಟ್ಟಿದರೆ ನನಗೆ ಬಡಿದ ಗಾಹಾಗುತ್ತದೆ. ಮನಸ್ಸುಳ್ಳವನು ಬಡಿದರೆ ಪೂಜಿಸಿದ ಹಾಗಾಗುತ್ತದೆ. ಭಕ್ತಿಯಿದ್ದವರು ಮಾಡಿದ್ದೆಲ್ಲ ನನಗೆ ಉಪಚಾರವೇ ? ಪೂಜೆಯವರು, ಓಜೆ

  1. ________________

ಯವರು, ಓದಿನವರು ಇವರೆಲ್ಲ ಒಂದು ಕಡೆ, ನಿಷ್ಠೆ ಯವರು ಒಲವಿನವರು, ಸಾಧುತ್ವವುಳ್ಳವರು, ಇವರು ಇನ್ನೊಂದು ಕಡೆ, ಗಿರಿಜೆ, ನನ್ನ ಭಕ್ತ ಬೇಡ ನೆಂದೆಯಲ್ಲವೆ ? ಹೌದು, ಅವನು ತನಗೆ ಯಾವ ಪದವಿಯ ಬೇಕೆಂದು ಬೇಡನು. ನನ್ನ ನ್ನಲ್ಲದೆ ಬೇರೊಂದನ್ನೂ ಹಾಡನು, ನೋಡನು, ಅವನ ಕೈಯಲ್ಲಿ ಹೊಲಸು ; ಮನಸ್ಸಿನಲ್ಲಿ ಅಮ್ಮ ತ; ಗೌರೀ, ಅವನ ಬಾಯಲ್ಲಿ ನೀರು ; ಮನದಲ್ಲಿ ಅಗ್ಗವಣಿ, ಆವನ ಮಂಡೆಯ ಮೇಲಿನ ಹೂವು ನನಗೆ ಮನಸ್ಸಿನ ಪರಿಮಳ, ಅವನ ಕಾಲಾಟ ನನಗೆ ಅತಿ ಸ್ನೇಹದ ಅರ್ಚನೆ. < ಎನ್ನ ವನೇ ? ಎಂಬ ಸಲುಗೆಯ ನುಡಿ ನಿಜವಾಗಿಯೂ ಮಂತ್ರವೇ ಸರಿ ನನ್ನ ನೈಟಿ ಒಲಿದು ಮಾಡುವ ಅವನ ಚರ್ಯೆಯೆಲ್ಲವೂ ಶಿವತಂತ್ರವೇ ಹೌದು. ಸ್ವಲ್ಪ ಸೈರಿಸು. ಈ ಭಕ್ತ, ಆ ಏಪ್ರ- ಇಬ್ಬರ ಯೋಗ್ಯತೆಯನ್ನೂ ನಿನಗೆ ತೋರಿಸುತ್ತೇನೆ” ಎಂದನು. ಕಣ್ಣಪ್ಪನ ಭಕ್ತಿ ಪೂಜೆ ಪ್ರಾರಂಭವಾಗಿ ಆರು ದಿನ ಕಳೆಯಿತು. ಏಳ ನೆಯ ದಿನ ಶಿವಾರ್ಚನೆಯ ಬ್ರಾಹ್ಮಣನಿಗೆ ಮನಸ್ಸಿನಲ್ಲಿ ಕೋಪ ಮಿತಿಮೀರಿ ಉಕ್ಕಿತು. ಶಿವಾಲಯದಲ್ಲಿ ಹೊಲಸುಮಾಡುವ ಕಿರಾತನನ್ನು ಇವೊತ್ತು ಕೊಲ್ಲಲೇ ಬೇಕೆಂದು ನಿಶ್ಚಯಿಸಿ ಒಂದು ಕಠಾರಿಯನ್ನು ಸಿದ್ಧಮಾಡಿಟ್ಟು ಕೊಂಡನು. ಅವನ ಜಡಬುದ್ದಿಗೆ ಮತ್ತೆ ಯಾವ ನಿದರ್ಶನ ಬೇಕು ? ಕಠಾರಿ ಯನ್ನು ತೆಗೆದುಕೊಂಡು, “ ಆ ತೊಂಡ ಬೇಡ ಹೀಗೆ ಮಾಡುವನೇ ! ” ಎಂದು ಕೊಂಡು ಬೆಟ್ಟವನ್ನೇರಿ ದೇವಾಲಯದ ಬಾಗಿಲಿಗೆ ಬಂದನು. ಅಷ್ಟರಲ್ಲಿ ಶಿವನು ತನ್ನ ಅರ್ಚಕರ ಮನಸ್ಸನ್ನು ಪರೀಕ್ಷಿಸಲು ಒಂದು ಅದ್ಭುತದ ಉಪಾಯವನ್ನು ಆಲೋಚಿಸಿದನು. ಶಿವಲಿಂಗದಲ್ಲಿ ಎರಡು ಕಣ್ಣುಗಳನ್ನು ಅಳವಡಿಸಿದನು. ಅದರಲ್ಲಿ ಒಂದು ಒಡೆದಂತಿದೆ ; ಅದರಲ್ಲಿ ನೆತ್ತರು ಒಸರು ತಿದೆ. ಬ್ರಾಹ್ಮಣನು ಒಳಹೊಕ್ಕು ಲಿಂಗದ ಅಂದಿನ ರೀತಿಯನ್ನು ಕಂಡು, ( ಏನಿದದ್ಭುತ ! ” ಎಂದು ಅಂಜೆ ನಡುಗಿದನು, " ನಮಃ ಶಿವಾಯ' ಎಂದು ಜಪಿಸತೊಡಗಿದನು. “ ಅರಸನಿಗೆ ಕೇಡಾಗುವುದೋ ? ದೇಶಕ್ಕೇ ಕೆಟ್ಟ ಬಾಗುವುದೋ ? ಏನು ಮಹೋತ್ಸಾತವೋ, ಹರನೇ ಬಲ್ಲ ! ” ಎಂದು ಭಯ ಗೊ೦ಡು ನೊಂದು ನಿಂತನು. ಸ್ವಲ್ಪ ಹೊತ್ತು ಅಲ್ಲಿದ್ದು, ಅದನ್ನು ನೋಡ ಲಾರದೆ ಮನಗುಂದಿ ಪಟ್ಟಣಕ್ಕೆ ಹಿಂತಿರುಗಿದನು. ಆ ಸೋಜಿಗದ ಸುದ್ದಿ ________________

ಕನ್ನಡ ಸಾಹಿತ್ಯ ಚಿತ್ರಗಳು ಯನ್ನು ಊರಲ್ಲೆಲ್ಲ ಹರಡಿದನು, ಕೇಳಿ ಜನವೆಲ್ಲ ತಂಡ ತಂಡವಾಗಿ ಬೆಟ್ಟ ಹತ್ತಿ ಬಂದು ಚೋದ್ಯವನ್ನು ಕಂಡು ಅಂಜಿ ಓಡಿಹೋದರು. ಊರಿಗೆ ಹಿಂದಿರುಗಿ ಮನಸ್ಸಿನಲ್ಲಿ ಅತಿಯಾಗಿ ಭಯಪಡುತ್ತಿದ್ದರು. ಬೇಟೆ ಮುಗಿದ ಮೇಲೆ ಕಣ್ಣ – ತಲೆಯಲ್ಲಿ ಹೂವು, ಬಾಯಲ್ಲಿ ನೀರು, ಕೈಯಲ್ಲಿ ಮಾಂಸದೊಗರ-ಇವನ್ನು ತೆಗೆದುಕೊಂಡು ಗುಡಿಯ ಕಡೆ ಹೊರ ಟನು. ಬರುವಾಗ, “ ಹೊತ್ತು ಹೋಯಿತು ಎನ್ನವನು ಹಸಿದನೋ ಏನೋ ? ಬೇಗ ಬೇಗ ಬರಲಿಲ್ಲವೆಂದು ನನ್ನ ಮೇಲೆ ಕೋಪಿಸುವನೇನೋ ? ಇವ ಶೈಕೋ ಮನಸ್ಸಿನಲ್ಲಿ ತುಂಬ ಮರುಕವಾಗುತ್ತಿದೆ. ಹೀಗೇಕಾಗುತ್ತಿದೆಯೋ ಕಾಣೆ, ಹಸಿದವನನ್ನು ಇವತ್ತು ನಾನೇಕೆ ಬಿಟ್ಟು ಬಂದೆನೋ ? ವಶವಿಲ್ಲದ ಈ ಬೇಟೆಯಲ್ಲಿ ಅನೇಕ ತೊಡಗಿದೆನೋ ? ಮೃಗಗಳೂ ಹಕ್ಕಿಗಳೂ ಗುಂಪು ಕೂಡಿ ನನ್ನ ಪ್ರನನ್ನು ಹೆದರಿಸುತ್ತಿರಬಹುದೆ ? ” ಎಂದು ಹಲವು ಬಗೆಯಾಗಿ ಚಿಂತಿಸುತ್ತಿದ್ದನು. ಹಾಗೆಯೇ ಮುಂದುವರಿದು ಬರುತ್ತಿರಲು ಎಡದ ಭುಜ, ಕಣ್ಣು, ಹುಬ್ಬುಗಳು ಹಾರಿದವು. ಮನಸ್ಸಿಗೆ ಭಯವಾಯಿತು. ಆತಂಕ ಪಡುತ್ತ ಆತುರಾತುರವಾಗಿ ನಡೆದನು. ಈ ದೇವಾಲಯದೊಳಗೆ ಕಾಲಿಟ್ಟ ಕೂಡಲೆ ಶಿವಲಿಂಗದಿಂದ ರಕ್ತಸುರಿ, ಯುವುದು ಕಾಣಿಸಿತು, ಕಂಡು ಕಂಗೆಟ್ಟು ಕಲ್ಲಿನಂತೆ ಮರದಂತೆ ಅಳಾಡದೆ ನಿಂತುಬಿಟ್ಟನು. ಮುಂದೇನು ಮಾಡಬೇಕೆಂದು ಬುದ್ಧಿಗೆ ಹೊಳೆಯ ಲೊಲ್ಲದು, ತಲ್ಲಣಿಸುತ್ತ ಬಿಲ್ಲನ್ನು ಬಿಸುಟು, ಮಾಂಸವನ್ನು ಒಗೆದು, ಬಾಯಲ್ಲಿ ತುಂಬಿಕೊಂಡಿದ್ದ ಅಗ್ಗವಣಿಯನ್ನು ಉಗುಳಿ, ಹೂವನ್ನೂ ಚೆಲ್ಲಿ ಬಿಟ್ಟನು. ಕಣ್ ಕಣ್ ಬಿಡುತ್ತ, ತಲೆ ಚಚ್ಚಿಕೊಳ್ಳುತ್ತ ಹತ್ತಿರ ಹೋದನು. ಆಗ ಒಂದು ಕಷ್ಟೂಡೆದಿರುವುದೂ ಅದರಿಂದ ನೆತ್ತಕೊಸರುತ್ತಿರುವುದೂ ಕಾಣ ಸಿತು, ಕಂಡೊಡನೆ ಕಣ್ಣಪ್ಪ, 1 ಕಟ್ಟೆ ನಾನು, ಕೆಟ್ಟೆ ” ಎಂದು ಚೀರಿದನು. " ಅಯ್ಯೋ ! ನಾನು ನೊಂದೆ ; ಬೆಂದುಹೋದೆ. ಏನೋ ಆಗುವ ಹಾಗೆ ಈ ಪಾಪಿಯ ಮನಸ್ಸಿಗೆ ಮೊದಲೇ ಮುಂದುದೋರಿತ್ತು. ಎನ್ನೊಡೆಯಾ ನಿನ್ನ ಕಣ್ಣು ಒಡೆದರೆ ಹೇಗೆ ನೋಡುತ್ತಿರಲಿ ? ಅಯ್ಯೋ ! ನನ್ನವನ ಹತ್ತಿ ರವೇ ಇದ್ದು ಬಿಡದೆ ಆಗಲಿ ಹೋಗಿ ಕೆಟ್ಟೆನಲ್ಲಾ ! ನನ್ನಂಥ ಕೀಳರೊಡನೆ ನಿನಗೆ ಕೆಳತನವೆ ? ದೊಡ್ಡ ಕಡಲು ಕಿರುಹೊಂಡವೊಂದರ ಕೆಳೆತನ ಮಾಡಿ ________________

ಕೊಂಡಹಾಗಾಯಿತು. ಆಯ್ಯೋ, ಮಹಾದೇವಾ ! ನಾನು ಆಳಾಗಿರುವಾಗ ನಿನಗೆ ಹೀಗಾಗಬೇಕೇ ? ” ಎಂದು ಪರಿಪರಿಯಾಗಿ ಹಲುಬಿ ಗೋಳಾಡಿದನು. ಗೋಳಾಚುತ್ತ ಆಡುತ್ತ ರಂಗಮಂಟಪದಲ್ಲೆಲ್ಲ ಹೊರಳಾಡಿದನು, ಹೊರಳಿ ಹೊರಳಿ ಹೇಗೋ ಸಂತಯಿಸಿಕೊಂಡು ಮೆಲ್ಲನೆ ಬಂದು ಲಿಂಗದ ಮುಂದೆ ಕುಳಿ ತನು. ಕುಳಿತು ಮರುಗುತ್ತ, “ ನನ್ನ ಯ್ಯಾ, ಏನಾಯಿತು ? ನನಗೆ ಹೇಳು ತಂದೇ. ನನ್ನ ಯ್ಯಾ, ಕಣ್ಣಿನ ನೋವು ಹೆಚ್ಚಾಗಿದೆಯಲ್ಲವೆ ? ಯಾವು ದಾದರೂ ಮೃಗ ಬಂದು ಒರಸಿಕೊಳ್ಳುತ್ತಿರಲು ಕೋಡಿನ ಮೊನೆ ನೆಟ್ಟಿತೆ ? ಹಾಗೆ ನೆಟ್ಟು, ನಿಮ್ಮನ್ನಗಲಿ ಹೋದ ಈ ಪಾಪಿಯನ್ನು ಇರಿದು ಸುಟ್ಟಿತೇ ?” ಎಂದು ಪೇಚಾಡಿದನು. ಉಟ್ಟ ಬಟ್ಟೆಯನ್ನು ಬಾಯೊಳಗಿಟ್ಟು ಆದಿ ಅದ ರಿಂದ ಕಣ್ಣನ್ನು ಒತ್ತು ವನು. ಕೆಂಪನೆಯ ಎಳಚಿಗುರನ್ನು ತಂದು ಒತ್ತಿ ನೋಡುವನು. ರಕ್ತದೊತೆ ನಿಲ್ಲದಿರಲು ನೋಡಿ ಬಾಡುವನು. ಹೀಗೆಯೇ ಚಿಂತಿಸುತ್ತಿರಲು, ಕಡೆಗೆ ಒಂದು ಉಪಾಯ ಹೊಳೆಯಿತು. 41 ಹಾ ! ಕಂಡೆ, ಇದಕ್ಕೊಂದುಪಾಯವನ್ನು, ಈ ಕಣ್ಣಿಗೆ ನನ್ನ ಕಣ್ಣು ಕೊಟ್ಟು ನೋಡುತ್ತೇನೆ. ಅದರಿಂದಲು ವಾಸಿಯಾಗದಿದ್ದರೆ ತಲೆಯನ್ನ ಕತ್ತರಿಸಿ ಒಪ್ಪಿಸಿಬಿಡುತ್ತೇನೆ” ಎಂದುಕೊಂಡನು. ಆ ಕ್ಷಣವೇ ಬಹು ಹರಿತ ವಾದ ಒಂದಂಬನ್ನು ತೆಗೆದುಕೊಂಡು ಸ್ವಲ್ಪವೂ ಅಳುಕದೆ, ಅನುಮಾನಿಸದೆ, * ಕಾಳಯರಸನೇ, ನೋಡು ” ಎಂದು ನುಡಿಯುತ್ತ ತಟಕ್ಕನೆ ಒಂದು ಕಣ್ಣನ್ನು ಮಾಟ ತೆಗೆದನು. ಆಗೆದು ಲಿಂಗದ ಒಡೆದ ಕಣೋಳಕ್ಕೆ ಒತ್ತಿ ನೋಡಿದನು. ಆ ಕಣ್ಣು ಥಳಥಳನೆ ಬೆಳಗುತ್ತಿರಲು ನೋಡಿ ಕಣ್ಣಪ್ಪ ಆನಂದಮಯನಾದನು. ಹಾಗೆ ಅವನು ನಲವೇರುತ್ತಿರುವಾಗಲೆ ಲಿಂಗದ ಮತ್ತೊಂದು ಕಣ್ಣಿನಿಂದ ನೆತ್ತರೊಸರಲು ಮೊದಲಾಯಿತು. ಅದನ್ನು ಕಂಡು ಕಟ್ಟಾಳು ಕಣ್ಣಪ್ಪ, “ ನಾನು ಕಲಿ, ಇನ್ನಂಜೆ, ಇನ್ನಂಜೆ, ನನಗೆ ಇನ್ನೂ ಒಂದು ಕಣ್ಣಿದೆ. ಅದನ್ನು ನಿನಗೆ ಕೊಡುತ್ತೇನೆ, ಎನ್ನವನೇ, ಎನ್ನ ವನೇ, ಆ ಬಳಿಕ ನೀನು ನನಗಿದ್ದ ಇರುವೆ” ಎಂದು ನಿಶ್ಚಿಂತನಾಗಿ ನುಡಿ ದನು. ಆಮೇಲೆ ಚಂದ್ರಶೇಖರನ ಒಡೆದ ಕಣ್ಣು ನೋಯದ ಹಾಗೆ ಕಾಲು ಗುಷ್ಠದಿಂದ ಅದನ್ನೂ ಕಣ್'ಕುರುಹು ಮಾಡಿಕೊಂಡನು. ತನ್ನ ಉಳಿದ ಕಣ್ಣನ್ನೂ ಕಿತ್ತು ತಂದು, ಮುಕ್ಕಣ್ಣನು ಒಲಿದು ಕಣ್ತೆರೆದು ನೋಡುವ ________________

ಕನ್ನಡ ಸಾಹಿತ್ಯ ಚಿತ್ರಗಳು ಹಾಗೆ, ಉಂಗುಷ್ಠದ ಕುರುಹಿನಿಂದ ಲಿಂಗದ ಮೇಲಿಟ್ಟು ಲಿಂಗಕ್ಕೆ ಕಣ್ ಕೊಳಿ ಸಿದನು. ಇನ್ನು ಸುಮ್ಮನಿರಬಾರದೆಂದು ಶಿವಲಿಂಗದಿಂದ ಶಿವ ಉದ್ಭವಿಸಿ ಬಂದು ಭಕ್ತಿ ಕುಶಲನಾದ ಕಣ್ಣಪ್ಪನನ್ನು ಕೈಹಿಡಿದೆತ್ತಿದನು. ಆಗ ಹೂಮಳೆ ಸುರಿ ಯಿತು ; ದೇವದುಂದುಭಿಗಳು ಮೊಳಗಿದವು, ನಂದೀಶ ವೀರಭದ್ರಾದಿ ಗಣ ಗಳೂ ಇಂದ್ರಾದಿ ದೇವತೆಗಳೂ ಬಂದು ನೆರೆದರು. ಆಗ ಶಿವನು ( ಕಂಡೆಯಾ ಗಿರಿಜೆ, ನನ್ನ ಪ್ರೀತಿಯ ಪ್ರಾಣವಾದವನನ್ನು ? ಇಂಥ ಭಕ್ತನನ್ನು ಕಂಡು ಬಲ್ಲೆಯಾ, ಗಿರಿಜೆ ? ಕೇಳಿಬಲ್ಲೆಯಾ ಗಿರಿಜೆ ? ಎಂದು ಕೇಳಿದನು. ಕಣ್ಣಪ್ಪನನ್ನು ನೋಡಿ ಪುಳಕವೇರುತ್ತಿರಲು ಬಿಗಿದಪ್ಪಿಕೊಂಡನು. ಅಪ್ಪಿ, ಭಾವು, ಕಣ್ಣಪ್ಪಾ, ಭಾವು, ಎಲ್ಲರಿಗೂ ಕಣ್ಣು ಕೊಡುವವನು ನಾನು. ಅದು ತಪ್ಪಿ, ಇಲ್ಲಿ ನೀನೇ ನನಗೆ ಕಣ್ಣು ಕೊಟ್ಟೆ. ನನ್ನ ಕಣ್ಣ ನೀನೆ, ಪುಣ್ಯವೂ ನೀನೆ, ನನಗೆ ಪುತ್ರನೂ ನೀನೆ, ಮಿತ್ರನೂ ನೀನೆ, ಕಣ್ಣಪ್ಪಾ, ವಿಮಾನವನ್ನೇರು ” ಎಂದು ಕೊಂಡಾಡಿ ಕರೆದನು. ದೇವತೆಗಳೆಲ್ಲ ಚೋದ್ಯ ಪಟ್ಟರು.

  • ಕಣ್ಣಪ್ಪ ಕೈಮುಗಿದು, “ದೇವಾ, ಈ ಮೈಯೊಡನೆಯೆ ಬರಲೆ ? ಅಪ್ಪಣೆ ಯಾಗಬೇಕು” ಎಂದು ಬಿನ್ಮಯಿಸಿದನು. ಆ ಮಾತುಕೇಳಿ ಈಶ್ವರನು, (( ಈ ದೇಹ ಇಲ್ಲಿ ಮೆರೆಯುತ್ತಿರಲಿ” ಎಂದು ನುಡಿದು ಬೇರೊಂದು ನಿರ್ಮಲ ದಿವ್ಯ ದೇಹವನ್ನು ತಂದು ಅದರಲ್ಲಿ ಕಣ್ಣಪ್ಪನನ್ನು ಹೊಗಿಸಿ, ತನಗೆ ಕಣ್ಣು ಕೊಟ್ಟವನನ್ನು ವಿಮಾನದಲ್ಲಿ ಕೂರಿಸಿಕೊಂಡು ಸರ್ವಸಂಭ್ರಮದಿಂದ ಕೈಲಾ ಸಕ್ಕೆ ನಡೆದನು. ಅಲ್ಲಿ ಆಸ್ಥಾನದಲ್ಲಿ ಆನಂದಪೂರ್ಣನಾಗಿ ಭದ್ರಾಸನದ ಮೇಲೆ ಕುಳಿತು, ಕಣ್ಣ ಪ್ರನನ್ನು ಕರೆದು ಗಣಪದವಿಯನ್ನು ಕೊಟ್ಟನು. ಭಕ್ತರ ಸುಖವೇ ತನ್ನ ಸುಖ ; ಭಕ್ತರ ಮುಖವೇ ತನ್ನ ಮುಖ ; ಭಕ್ತರ ಜೀವನೇ ತನ್ನ ಜೀವ; ಭಕ್ಕರ ಕಾಯವೇ ತನ್ನ ಕಾಯ ಎನ್ನಿಸುವ ಶಿವನು ಕಣ್ಣಪ್ಪನ ಭಕ್ತಿಯ ಕಥೆಯನ್ನು ತನ್ನ ಗಣಗಳಿಗೆಲ್ಲ ಹೇಳಿ ಹಿಗ್ಗುತ್ತಿದ್ದನು. ತ್ರೈಲೋಕ್ಯರಕ್ಷಾ ದಕ್ಷನಾದ ಹಂಪೆಯ ವಿರೂಪಾಕ್ಷನು ಹೀಗೆ ಒಪ್ಪುತ್ತಿದ್ದನು. ________________

ಕಿನ್ನರ ಬೊಮ್ಮಯ್ಯ ಉತ್ತಮ, ಮಧ್ಯಮ, ಕನಿಷ ನಂದು ಸಂಗಮವನೆಂದೆನಿಪ ವತಿ ನೊಂದೆನಯ್ಯ, ಬೆಂದೆನಯ್ಯ .. ..... ... ಶಿವಭಕ್ತರಾದ ಕಾರಣ ಜಂಗನವೆ: ಲಿಂಗ ಕ ಡಲ್ಲ ಸಂಗಮದೇವ. ತನುವ ಬೇಡಿದನೆ, ಮನವ ಬೆಟಪಡಿನೆ, ಧನನ ಬೇಡಿ ಪಡೀನೆ......... ಕಣ್ಣ ಬೇಡಿದವ, ತಲೆಯ ಬೇಡಿದನೆ, ಕೂಡಲ ಸಂಗಮದೇವಾ ನಿಮಗಿತ್ತು, ಶುದ್ಧನಾಗಿಪ್ಪೆ ನಿಮ್ಮ ಪುರಾತನರ ಮನೆಯಲ್ಲಿ. ಬಸವೇಶ್ವರನ ವಚನ * ಎಲೆ ಬಸವ ಬಸವಣ್ಣ ಬಸವಯ್ಯ ಬಸವರಸ ಬಸವರಾಜ ಬಸವಿದೇಶ, ಕೆಳಮ್ಮ, ನಿನ್ನ ನೇನುವಿದಾರ್ಗqಟು ! ಗುರುಲಿಂಗದೊಳೆವಡಿಲ್ಲದಿಸ, ಶರಣರ ಸಂಗನಂದ ಕಾಣೈ, ಬಂದ ಭಕ್ತರನಾದರಣೆ, ಬಪ್ಪ ಭಕ್ತರ೦ ಹರುಷದೊಳಿದಿ ರ್ಗೊಂಬೆ, ಬೇಡಿದುದ ಇರೆಣರ್ಗಿ – ದಿನ, ಬೇಡಲೊಲ್ಲದವರ್ಗ ಮಿಗಿಲಾಗಿ ಆರಾಧಿಸೆ ಬಸವರಾಜ ದೇವರ ರಗಳೆ [ ಕನ್ನಡ ನಾಡಿನ ಮಹಾಪುರುಷರಲ್ಲಿ ಬಸವಣ್ಣನವರೂ ಒಬ್ಬರು. ಅವರು ಕನ್ನಡ ನಾಡಿನ ಧರ್ಮಜೀವನದಲ್ಲಿ ಬಹಳ ಪ್ರಭಾವ ಬೀರಿದರು, ಹೊಸದೊಂದು ಸಮಾಜರಚನೆಗೆ ರೂಪುಕೊಟ್ಟರು. ಅವರು ಆರಂಭಿಸಿದ ಧಾರ್ಮಿಕ ಸಾಮಾಜಿಕ ಕ್ರಾಂತಿ ಸಾಹಿತ್ಯದಲ್ಲಿ ಪ್ರತಿಬಿಂಬಿಸಿತು. ಬಾಗೇವಾಡಿಯೆಂಬ ಅಗ್ರಹಾರದಲ್ಲಿ ಮಾದರಸ ಮಾದಾಂಬೆ ಎಂಬ ಶೈವ ಬ್ರಾಹ್ಮಣ ದಂಪತಿಗಳಿಗೆ ಬಸವಣ್ಣ ಮಗನಾಗಿ ಹುಟ್ಟಿದನು. ಬಾಲ್ಯ ದಲ್ಲಿ ತಂದೆತಾಯಿಗಳು ತೀರಿ ಹೋದರು. ಶಿವಭಕ್ತಿ ಮುತ್ತಂತಿದ್ದ ಮುತ್ತಜ್ಜಿಯ ಪೋಷಣೆಯಲ್ಲಿ ಹುಡುಗ ನಾಲೈರಡು ವರ್ಷ ಬೆಳೆದನು. ಬಾಲ್ಯ ಕಳೆದು ಯೌವನ ಅಡಿಯಿಟ್ಟಿತು ; ಹದಿನಾರು ವರ್ಷದ ಹರೆಯವಾಯಿತು. ಆಗ ಬಸವಣ್ಣನಿಗೆ ಪರಮ ವೈರಾಗ್ಯವುಂಟಾಗಿ ಶಿವಪೂಜೆಯಲ್ಲಿ ಮನಸ್ಸು ನೆಲ ಸಿತು, ಶಿವಭಕ್ತಿಯೂ ಕರ್ಮವೂ ಒಂದಾಗಿರಲಾರದೆಂದು ನಿಶ್ಚಯಿಸಿ, ________________

ಕನ್ನಡ ಸಾಹಿತ್ಯ ಚಿತ್ರಗಳು 'ಕರ್ಮಲತೆಯಂತಿದ್ದ ಜನಿವಾರವನ್ನು ಕಿತ್ತೊಗೆದು ಆತ ಬಾಗೇವಾಡಿಯನ್ನು ಬಿಟ್ಟು ಹೊರಟನು ; ಕಪ್ಪಡಿ ಸಂಗಮಕ್ಷೇತ್ರಕ್ಕೆ ಹೋಗಿ ಅಲ್ಲಿ ಸಂಗಮೇಶ್ವರ ನನ್ನು ಭಕ್ತಿಯಿಂದ ಪೂಜಿಸುತ್ತಿದ್ದನು, ಕಾಲ ಕಳೆಯಿತು. ಒಂದು ದಿನ ದೇವಾಲಯದ ರಂಗಮಂಟಪದಲ್ಲಿ ಮಲಗಿದ್ದ ಬಸವಣ್ಣನ ಕನಸಿನಲ್ಲಿ ಸಂಗಮೇಶ್ವರನು ಕಾಣಿಸಿಕೊಂಡು ಬಿಜ್ಜಳರಾಯನ ರಾಜಧಾನಿಯಾದ ಮಂಗಳವಾಡಕ್ಕೆ ಹೋಗೆಂದು ಹೇಳಿ ದಂತಾಯಿತು. ಬಸವಣ್ಣ ಬೆಚ್ಚಿದನು ; ಸಂಗನನ್ನು ಅಗಲಿ ಹೋಗಲಾರದೆ ಪರಿಪರಿಯಾಗಿ ಹಂಬಲಿಸಿದನು. ಶಿವ ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು * ಎಲೆ ಮಗನೆ, ಎಲೆ ಕಂದ ಬಸವ, ನಿನ್ನನ್ನಗಲಿ ನಾನಿರಲಾರೆ. ನಿನ್ನೆಡ ನೊಡನೆ ಬಿಡದೆ ಬರುತ್ತೇನೆ ನಾಳೆ ಮಧ್ಯಾಹ್ನ ಶುದ್ಧನಾಗಿ ಬಂದು ನಂದಿಕೇಶ್ವರನ ಮುಂದೆ ನನ್ನನ್ನು ನೆನೆಯುತ್ತ ಕೂತಿರು, ಆಗ ವೃಷಭನ ಮುಖಾಂತರದಿಂದ ನಾವೆ ಬರುತ್ತೇವೆ. ಆತ ನಿನಗೆ ಸದ್ದು ರು. ಅಲ್ಲಿಂದ ಬಳಿಕ ನಮ್ಮನ್ನರ್ಚಸುತ್ತ ಭಕ್ತರ ಬಂಧುವಾಗಿ ಶರಣರ ಪರುಷದ ಕಣಿ ಯಾಗಿ ಪರಮ ಸುಖದಿಂದಿರುವುದು” ಎಂದು ಅಪ್ಪಣೆಮಾಡಿದನು. - ಬಸವಣ್ಣನು ಸಂಗಮೇಶ್ವರನ ಅಪ್ಪಣೆಯಂತೆ, ಮರುದಿನ ಮಿಂದು ವಿಭೂತಿಯಿಟ್ಟು, ಬಿಳಿಯ ಬಟ್ಟೆಯನ್ನುಟ್ಟು, ಸ್ವಾಮಿಗೆ ಅಭಿಷೇಕ ಪೂಜೆಗಳನ್ನು ಮಾಡಿ ನಮಸ್ಕರಿಸಿ ನಂದೀಶ್ವರನ ಮುಂದೆ ಕುಳಿತು ಸಂಗಮೇಶ್ವರನನ್ನು ಧ್ಯಾನಿ ಸುತ್ತಿದ್ದನು. ಆಗ ನಂದಿಕೇಶ್ವರನ ಹೃದಯ ಕಮಲದಿಂದ ಸಂಗಮೇಶ್ವರ ಲಿಂಗ ಹೊರಹೊರಟು ಬಂತು. ವೃಷಭನ ಮುಖ ಅರಳಿತು. ಬಸವಣ್ಣ ನಂದಿಯ ಬಾಯಿಂದ ಬರುತಿ ರುವ ದಿವಲಿಂಗವನ್ನು ಕಂಡು ಸಂತೋಷಿಸಿ ಕೆ ಚಾಚಿದನು. ನಂದಿ ಶಿವನಾಜ್ಞೆಯಂತೆ ಸಂಗಮೇಶ್ವರ ಲಿಂಗವನ್ನು ಬಸವನ ಕೈಗೆ ಬಿಜಯಮಾಡಿಸಿದನು. ಬಸವಣ್ಣನಿಗೆ “ ಪಂಚಾಕ್ಷರಿ 'ಯನ್ನು ಉಪ ದೇಶಿಸಿದನು. ಹೀಗೆ ನಂದಿಕೇಶ್ವರನಿಂದ ಮಂತ್ರೋಪದೇಶ ಹೊಂದಿ ಬಸ ವಣ್ಣನು ಸಂಗಮೇಶ್ವರನನ್ನು ನಿಷ್ಠೆಯಿಂದ ಪೂಜಿಸುತ್ತ ಮತ್ತೆ ಕೆಲವು ದಿನ ಅಲ್ಲೇ ಇದ್ದನು. ಬಳಿಕ ಸಂಗನನ್ನಗಲಾರದೆ ಸಂಕಟಪಡುತ್ತ ಬಹು ದುಃಖದಿಂದ ಸ್ವಾಮಿಯನ್ನು ಬೀಳ್ಕೊಂಡು ಮಂಗಳವ - ಡಕ್ಕೆ ಪ್ರಯಾಣ ಮಾಡಿದನು. ಅಲ್ಲಿ ________________

ಕಿನ್ನರ ಬೊಮ್ಮಯ್ಯ ಆತನ ಬುದ್ದಿ ಸಾಮರ್ಥ್ಯದಿಂದ ಬಸವಣ್ಣನಿಗೆ ಅರಮನೆಯ ಕರಣಿಕ ಶಾಲೆ ಯಲ್ಲಿ ವರ್ಷಕ್ಕೆ ನೂರೊಂದು ಹೊನ್ನು ಸಂಬಳದ ಒಂದು ಕೆಲಸ ದೊರೆ ಯಿತು. ರಾಜಭಂಡಾರದ ಮುಖ್ಯಾಧಿಕಾರಿಯಾಗಿದ್ದ ಸಿದ್ಧ ದಂಡೇಶನು ಬಸ ವಣ್ಣನ ಗುಣಗಳಿಗೆ ಮೆಚ್ಚಿ ಅವನನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಸ್ವಂತ ಮಗನಂತೆ ನಡಸಿಕೊಳ್ಳುತ್ತಿದ್ದನು, ಬಸವಣ್ಣನ ಯೋಗ್ಯತೆ ದಿನ ದಿನಕ್ಕೆ ಹೆಚ್ಚು ಹೆಚ್ಚಾಗಿ ಪ್ರಕಾಶವಾಗುತ್ತಿತ್ತು. ಕಾಲಕ್ರಮದಲ್ಲಿ ಸಿದ್ದ ದಂಡೇಶನು ಮೃತನಾಗಲು ಆತನ ಆಸ್ತಿಯನ್ನೂ ಅಧಿಕಾರವನ್ನೂ ಬಿಜ್ಜಳ ರಾಯನು ಬಸವಣ್ಣನಿಗೇ ಕೊಡಿಸಿದನು. ಬಸವಣ್ಣ ಕಾಜನ ಭಂಡಾರಿಯಾದನು. ಹೀಗೆ ಹೆಚ್ಚಿನ ಅಧಿಕಾರ ಕೈಗೆ ಬಂದರೂ ಬಸವಣ್ಣ ತನ್ನ ಜೀವನದ ಗುರಿಯನ್ನು ಸ್ವಲ್ಪವೂ ಮರೆಯಲಿಲ್ಲ. ಅಧಿಕಾರದ ಜೊತೆಜೊತೆಯಲ್ಲಿ ಶಿವ ಭಕ್ತಿಯೂ ಬೆಳೆಯುತ್ತಿತ್ತು. ತನ್ನ ತನು ಮನ ಧನಗಳನ್ನೆಲ್ಲ ಶಿವಾರ್ಪಣ ಮಾಡಿದ್ದ ಬಸವಣ್ಣನು ತನಗೆ ದೊರೆತ ಉನ್ನತ ಪದವಿಯಿಂದ ನೀರಶೈವ ವನ್ನು ಬೆಳಗಬೇಕೆ೦ದೂ ಶಿವಶರಣರ ಏಳಿಗೆಯನ್ನು ಸಾಧಿಸಬೇಕೆಂದೂ ಸಂ ಕಲ್ಪಿಸಿದನು. ಏಕನಿಷ್ಠೆಯಿಂದ ಅದರಂತೆ ನಡೆಯತೊಡಗಿದನು. - ಬಸವಣ್ಣ ಅನುಸರಿಸಿದ ನೀರಶೈವ ಧರ್ಮ ಹಲವು ವಿಷಯಗಳಲ್ಲಿ ಸಂಪ್ರದಾಯ ಧರ್ಮಕ್ಕೆ ಹೊಂದುತ್ತಿರಲಿಲ್ಲ. ಸಮಾಜದ ಕಟ್ಟುಪಾಡುಗಳಲ್ಲೂ ಕೆಲವಕ್ಕೆ ವಿರೋಧವಾಗಿತ್ತು. ಈ ಕ್ರಾಂತಿಕಾರಕ ಧರ್ಮವನ್ನು ಬೋಧಿಸಿ ಆಚರಿಸುತ್ತಿದ್ದವರಿಗೆಲ್ಲ ಬಸವಣ್ಣ ಮುಂದಾಳಾದನು. ಆತನ ಕೀರ್ತಿ ಎಲ್ಲ ಕಡೆಗೂ ಹರಡಿತು. ದೇಶದೇಶಾಂತರಗಳಿಂದ ಶಿವಶರಣರು ಮಂಗಳವಾಡಕ್ಕೆ ಬರತೊಡಗಿದರು, ಎಲ್ಲರನ್ನೂ ಬಸವಣ್ಣ ಆದರಿಸಿ ಸತ್ಕರಿಸುತ್ತಿದ್ದನು. ತನ್ನ ಸರ್ವ ಸಂಪತ್ತನ್ನೂ ಜಂಗಮರ ಸೇವೆಗೆ ವಿನಿಯೋಗಿಸುತ್ತಿದ್ದನು. 'ಜಂಗಮ ಸೇವೆಯೇ ಶಿವನ ಸೇವೆ' ಎಂದು ಬಸವಣ್ಣನ ದೃಢ ನಂಬಿಕೆ. ಜಂಗಮರಲ್ಲಿ * ಕೀಳು, ಮೇಲು ' ಎಂಬ ಯಾವ ಭೇದವನೂ ಎಣಿಸದೆ ಎಲ್ಲರನ್ನೂ ಶಿವ ನೆಂದೇ ಭಾವಿಸಿ ಭಕ್ತಿಯಿಂದ ಆರಾಧಿಸುತ್ತಿದ್ದನು. ಇದರಿಂದ ಆತ ಶಿವನ * ಭಕ್ತಿ ಭಂಡಾರಿ 'ಯೂ ಆಗದು ________________

ಕನ್ನಡ ಸಾಹಿತ್ಯ ಚಿತ್ರಗಳು ಆ ಭಕ್ತಿಯನ್ನೂ ನಿಷ್ಠೆಯನ್ನೂ ಒರೆಹಚ್ಚಿ ನೋಡುವ ಅನೇಕ ಘಟನೆ ಗಳು ನಡೆದವು. ಎಲ್ಲ ಸಂದರ್ಭಗಳಲ್ಲಿ ಬಸವಣ್ಣನ ಮಹಾಮಹಿಮೆಯೆ ಜಯಿಸಿತು, ಬರಿಯ ಪೀರರೈನರೇ ಏಕೆ, ಮೊ: ಬಿಜ್ಜಳನು ಕೂಡ ಬಸ ವಣ್ಣ ಅವತಾರಪುರುಷನೆಂದು ನಂಬುವಂತಾಯಿತು. ರಾಜ್ಯದ ಮುಖ್ಯಾಧಿ ಕಾರಿಯಾಗಿ, ಭಕ್ತಿ ಭಂಡಾರಿಯಾಗಿ ಬಸವಣ್ಣನು ಸುಖದಿಂದಿದ್ದನು.] ಹೀಗಿರುವಲ್ಲಿ ಒಮ್ಮೆ ಕಿನ್ನರ ಬೊಮ್ಮಯ್ಯನೆಂಬ ಪರಮ ಸಾತ್ವಿಕನಾದ ಶಿವಶರಣನೊಬ್ಬನು ಬಸವಣ್ಣನ ಭಕ್ತಿ, ನಿಷ್ಠೆ, ದಾನ ಶೀಲತೆಗಳನ್ನು ಕೇಳಿ ಆತನನ್ನು ನೋಡಬೇಕೆಂದು ಆಸಪಟ್ಟನು. ತನ್ನೂರಿನಿಂದ ಭಕ್ತಗಣ ದೊಡನೆ ಹೊರಟು ಸಂತೋಷದಿಂದ ನು೦ಗಳವಾಡಕ್ಕೆ ಬಂದನು. ಇತ್ತ ಪರಮ ಭಕ್ತನಾದ ಬಸವಣ್ಣನಿಗೆ ಬಲಗಣ್ಣು ಅಮರಿರು ; ಮನಸ್ಸಿನಲ್ಲಿ ಆನಂದ ಉಕ್ಕತೊಡಗಿತು. “ ಇಂದು ನಭಕ್ಕರು ನನ್ನ ಮನೆಗೆ ಬರು ತ್ತಾರೆ” ಎಂದು ನಿರೀಕ್ಷಸ ಎದುರುಗೊಳ್ಳಲು ಹೊರಟನು. ನಂದಿಯ ಪತಾಕೆಗಳನ್ನು ಮುಂದುಗಡೆ ಹಿಡಿದಿರ ಭಕ್ತ ಸಮೂಹದ ನಡುವೆ ಕಿನ್ನರಯ್ಯ ಬರುತ್ತಿರುವುದು ದೂರದಿಂದಲೆ ಕಾಣಿಸಿತು. ಬಸವಣ್ಣನು ಪರಿವಾರದೊಡನೆ ಹೋಗಿ ಎದುರುಗೊಂಡು ಭಯಭಕ್ತಿಯಿಂದ ಕಿನ್ನರಯ್ಯ ನಿಗೆ ಅಡ್ಡಬಿದ್ದನು. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಕುಶಲ ಪ್ರಶ್ನೆಗಳಿಂದ ಆದರಿಸಿದರು. ಉತ್ತಮ ಶಿವಭಕ್ತನ ದರ್ಶನವಾಯಿತೆಂದು ಇಬ್ಬರೂ ಸಂತೋಷಪಟ್ಟರು. - ಬಸವಣ್ಣ ನು ಕಿನ್ನರಯ್ಯನನ್ನು ತನ್ನ ಮನೆಗೆ ಒಡಗೊಂಡು ಕರೆ ತಂದನು, ಉನ್ನತವಾದ ಪೀಠದಲ್ಲಿ ಕುಳ್ಳಿರಿಸಿ ಆತನ ಪಾದಗಳನ್ನು ತೊಳೆದು ತೀರ್ಥವನ್ನು ತಲೆಗೆ ಎಳೆದುಕೊಂಡನು ಕಿಂಕರನಂತ ಕಿನ್ನ ರಯ್ಯನಿಗೆ ಸೇವೆ ಮಾಡಿದನು. ಲಿಂಗಾರ್ಚನೆಗೆ ಬೇಕಾದ ಸಕಲ ಸಾಮಗ್ರಿಗಳನ್ನೂ ತರಿಸಿ ಕೊಟ್ಟನು, ಆತನೊಡನೆಯೆ ತಾನಃ ಸಂಗನಿಗೆ ಪೂಜೆ ಮಾಡಿದನು ; ಆತ ನೊಡನೆಯೆ ಶಿವಪ್ರಸಾದಗಳನ್ನು ಸ್ವೀಕರಿಸಿದನು. ಕಿನ್ನರಯ್ಯನಿಗೆ ಉಡಲೂ ತೊಡಲೂ ಉತ್ತಮ ವಸ್ತ್ರಾಭರಣಗಳನ್ನು ಕೊಟ್ಟನು. ಆತನ ಹರ್ಷವೇ ತನಗೆ ಹರ್ಷವಾಗಲು ಆದರದಿಂದ ಆತನನ್ನು ಉಪಚರಿಸುತ್ತಿದ್ದನು. ಕೆಲವು ದಿನಗಳಲ್ಲಿ ಒಬ್ಬರನ್ನೊಬ್ಬರಿಗೆ ಒಲವು ಹೆಚ್ಚಿ ಸ್ನೇಹ ಒಲಿಯಿತು. ________________

ಕಿನ್ನರ ಬೊಮ್ಮಯ್ಯ ಹೀಗಿರಲು ಒಂದು ದಿನ ಕಿನ್ನ ರಯ್ಯನು ನನ ಆರೋಗಣೆಗೆ ಉಳ್ಳಿ ಬೇಕೆಂದು ಬಯಸಿದನು. ನನಗೆ ಯಾವುದು ಸೊಗಸೊ ಆದೇ ಶಿವನಿಗೂ ಸೊಗಸೆಂದು ಅವನ ಭಾವನೆ. ಚೆನ್ನಾದ ಉಗಳನ್ನು ತರಿಸಿ ಶರಣರೊಡನೆ ಮಾತಾಡುತ್ತ ಅಡಿಗೆಗಾಗಿ ಅವನ್ನು ಶೋಧಿಸುತ್ತಿದ್ದನು. ಉಳ್ಳಿಯ ಕಂಪು ಬಸವಣ್ಣನ ಮಗಿಗೆ ತೀಡಿತು. ಕಿನ್ನರಯ್ಯ ಬಯಸಿ ತರಿಸಿರುವನೆಂಬ ಸಂಗತಿಯನ್ನರಿಯದೆ ಬಸವಣ್ಣ, ಈ ಅಭಿಜ್ಯ ವಸ್ತುವನ್ನು ತಂದವರು ಯಾರು ?” ಎಂದು ಆಕ್ಷೇಪಿಸಿ ಉಳ್ಳಿಯನ್ನು ನಿಂದಿಸಿ ಅರಮನೆಗೆ ಹೋದನು. ಬಸವಣ್ಣನಾಡಿದ ಮಾತು ಕಿನ್ನರಯ್ಯನಿಗೆ ಕೇಳಿಸಿತು. “ ಏನೆಂದು ಬಿಟ್ಟ, ಬಸವಣ್ಣ ! ” ಎಂದು ಮೊದಲು ಕೋಪ ಬಂತು. ಮರುಕ್ಷಣವೆ ಕೋಪ ನೋವಾಗಿ ಪರಿಣಮಿಸಿತು, ನೊಂದು ಕಣ್ಣೀರಿಡುತ್ತ, “ ಹರಹರಾ ! ನಾನಿಲ್ಲಿ ಬರಬಾರದಾಗಿತ್ತು. ಬಂದಮೇಲೆ ಸೈರಿಸಬೇಕು ! ಶರಣರ ಮಹಿಮೆ ಯನ್ನು ದೂರದಲ್ಲಿ ಕೇಳಿ ಆದರಿಸುವುದು ಒಳ್ಳೆಯದು. ಮಲ್ಲಯ್ಯನು ಆಯೋಗಿಸುವ ಈ ಅಮೃತಮಯ ಶಾಕವನ್ನು ನಿಂದಿಸಿದರಲ್ಲಾ ! ಆ ನಿಂದೆ ಯನ್ನು ಕೇಳಿದಮೇಲೆ ಇಲ್ಲಿ ನಿಲ್ಲಲಾಗದು ” ಎಂದು ನಿರ್ಧರಮಾಡಿಕೊಂಡನು. ಮುನಿದು ಕೂಡಲೇ ಹೊರಹೊರಟು ನಡೆದನು, ಮಂಗಳವಾಡದಿಂದ ಒಂದು ಗಾವುದ ದೂರದಲ್ಲಿದ್ದ ಒಂದೂರನ್ನು ಸೇರಿ ಅಲ್ಲಿ ದೇವಾರ್ಚನೆಯ ನಿತ್ಯ ನೇಮಕ್ಕೆ ಅಣಿಮಾಡಿಕೊಳ್ಳುತ್ತಿದ್ದನು, ಇತ್ತ ಬಸವಣ್ಣನು ಅರಮನೆಯಿಂದ ಬಂದು, ಮಿಂದು ಮಡಿಯುಟ್ಟು ಎಂದಿನಂತೆ ಶರಣರ ಆರಾಧನೆಗೆ ಸಿದ್ಧಮಾಡಿಕೊಂಡನು. ಕಿನ್ನರಯ್ಯನನ್ನು ನೋಡಹೋದರೆ ಆತನಿರಲಿಲ್ಲ. ಎಲ್ಲಿ ಹುಡುಕಿದರೂ ಕಾಣಲಿಲ್ಲ. ಬಸವಣ್ಣ ನಿಗೆ ಭಯವಾಯಿತು. “ ಎನ್ನೊಡೆಯನೆಲ್ಲಿ ? ” ಎಂದು ' ಸುತ್ತಲಿದ್ದ ಶರಣ ರನ್ನು ಕೇಳಿಕೊಂಡನು. ಆವರು, " ಎಲೆ ಬಸವ, ಕಿನ್ನರಯ್ಯಗಳು ತಮ್ಮ ದೇವ ಮಲ್ಲಿನಾಥನಿಗೆ ಸೊಗಸಾದ ಉಳ್ಳಿಯನ್ನು ತರಿಸಿದರೆ, ಅದನ್ನು ನಿಂದಿಸಿದರೆಂದು ಕೋಪಗೊಂಡರು. ಕೆಂಡವನ್ನು ಮೆಟ್ಟಿದ ಹಾಗೆ ಸಂತಾಪ ಪಟ್ಟು ಮುನಿಸಿಕೊಂಡು ಹೊರಟು ಹೋದರು. ಆತ ಗುಣವಂತ ಅಭಿ ಮಾನಿ, ಮುಕ್ಕಣ್ಣನ ಅವತಾರ. ಅಂಥ ಶರಣ ಮುನಿದು ಹೋಗಿಬಿಟ್ಟ, ದೇವಾ!” ಎಂದರು, ________________

ಕನ್ನಡ ಸಾಹಿತ್ಯ ಚಿತ್ರಗಳು ಕೇಳಿ ಬಸವಣ್ಣ ಆ೦ಜಿ ಸಬ್ಬ ನಾಗಿ ನಿಂತನು ; ಮನಸ್ಸಿಗೆ ಎಣೆಯಿಲ್ಲದ ಸರಿತಾಪವುಂಟಾಯಿತ, ಕಂದಿ ಕುಂದಿ, “ ಬಂದ ಸುಕೃತ ತಿರುಗಿ ಹೋಯಿತು ! ” ಎಂದು ಹಂಬಲಿಸಿ ಹಲುಬಿದನು. ತಿನ್ನರಯ್ಯ ಮುನಿ ದನು. ಇನ್ನೇನು ಮಾಡೋಣ ? ಇದರಿಂದ ಇನ್ನೆನೇನಾಗುವುದೋ ? 12 ಎಂದು ಭಯಪಟ್ಟು ಗಣಸಮೂಹಕ್ಕೆ ಮೈಯಿಕ್ಕಿದನು, ಅಂದು ಬಸವಣ್ಣನ ಉಬ್ಬುಡುಗಿಹೋಯಿತು, 1 ಗೊತ್ತಾಯ್ತು ಗೊತ್ತಾಯ್ತು ! ಈ ಕೆಟ್ಟ ನಾಲಗೆಯದೇ ಅಪರಾಧ, ಉಳ್ಳಿಯನ್ನು ನಿಂದಿಸಿದ ಅಪರಾಧಕ್ಕೆ ಒಂದು ದಂಡವನ್ನು ವಿಧಿಸಿರಿ ” ಎಂದು ಶಿವಶರಣರನ್ನು ಕೇಳಿಕೊಂಡನು. ಆಗ ಆವರು, ಈಗ ಸಿದ್ದ ಮಾಡಿರುವ ಅನ್ನ ಎಲ್ಲ ಹಾಗೆಯೇ ಇರಲಿ. ಕಿನ್ನ ರಯ್ಯ ನನ್ನು ಕರೆದುಕೊಂಡು ಬಂದು ಆತನಿಗೆ ಉಳ್ಳಿಯಿಂದ ಬಂದಿರುವ ಮುನಿ ಸನ್ನು ಉಳ್ಳಿಯ ದಲೆ ತೀರಿಸೋಣ ' ಎಂದರು. - ಬಸವಣ್ಣ ನವೇರಿದನು, ಶರಣರ ಅಪ್ಪಣೆಯಂತೆ ಒಳ್ಳೆಯ ಉಳ್ಳಿ ಯನ್ನು ತರಹೇಳಿದನು. ಶಿವಭಕ್ತರೆಲ್ಲ ಒಟ್ಟುಗೂಡಿ ನಲಿನಲಿದು ಉಳ್ಳಿ ಯನ್ನು ತರುತ್ತಿದ್ದರು. ಬಸವಣ್ಣನ ಅಪ್ಪಣೆಯಾಯಿತೋ ಇಲ್ಲವೋ ಉಳ್ಳಿ, ನಾಲ್ಕು ದಿಕ್ಕುಗಳಿಂದಲೂ ಬಂಡಿಬಂಡಿಯಲ್ಲಿ ತುಂಬಿ ಬರತೊಡಗಿತು, ಆಗ ಭಕ್ತರ ಉತ್ಸಾಹರ್ವೆ ಉತ್ಸಾಹ ! ಉಳ್ಳಿಯ ಮುಂದೆ ಕಹಳೆ, ಮದ್ದಳೆ, ಶಂಖ ಮೊದಲಾದ ಬಗೆಬಗೆಯ ವಾದ್ಯಗಳನ್ನು ಮೊಳಗುವರು ! ಹಾಡುವರು, ಹರಸು ವರು, ಕುಣಿಯುವರು ! ನಲಿನಲಿದು ನೋಡುವರು ; ನೋಡುತ್ತ ಆಡುವರು. ಉಳ್ಳಿಯ ಮುಂದೆ ವೃಷಭಧ್ವಜಗಳನ್ನು ಹಿಡಿದೆತ್ತುವರು ! ಹೀಗೆ ಸಂಭ್ರಮ ದಿಂದ ತಂದ ಉಳ್ಳಿಯನ್ನು ಬಸವಣ್ಣ ಎಮರುಗೊಂಡು ತೆಗೆದುಕೊಂಡನು. ಕಿನ್ನರಯ್ಯನನ್ನು ಕರೆತರಲು ತಕ್ಕ ಸಿದ್ಧತೆಗಳನ್ನು ಮಾಡತೊಡಗಿದನು. ಆನೆಯ ರತ್ನಗಂಬಳಿ, ಕುದುರೆಯ ಹಲ್ಲಣ ಮೊದಲಾದವುಗಳನ್ನೆಲ್ಲ ಉಳ್ಳಿಯಿ೦ದಲೆ ಅಣಿಮಾಡಿದರು. ಉಡುವ ಧೋತ್ರ, ಹೊದೆಯುವ ವಲ್ಲಿ, ತೊಡುವ ಕವಚ, ಸುತ್ತುವ ವಾಗು, ಹಿಡಿಯುವ ಕೋಲು, ಆಯುಧಎಲ್ಲಕ್ಕೂ ಉಳ್ಳಿಯ ಆಲಂಕಾರವಾಯಿತು. ಎಲ್ಲೆಲ್ಲಿಯೂ ಉಳ್ಳಿಯ ಚಪ್ಪರ ತೋರಣಗಳಿದ್ದವು. ಊರೆಲ್ಲ ಉಳ್ಳಿಯ ಮಯವಾಯಿತು. ಸಾವಿರಾರು ಭಕ್ತರು ನೆರೆದರು. ನೂರಾರು ವೃಷಭ ಧ್ವಜಗಳೆ ಹಿಡಿದು ವು. ________________

th

  1. ನ್ನರ ಬೊಮ್ಮಯ್ಯ ಆ ಭಕ್ತ ಸಮೂಹದ ನಡುವೆ ಉಳ್ಳಿಗಳ ಗೊಂಚಲಿನಿಂದ ಕಟ್ಟಿದ ಶಿರೋಮಾಲೆ ಗಳನ್ನು ಧರಿಸಿ, ಉಳ್ಳಿಗಳಿಂದ ಮಾಡಿದ ಬಾಗು ಬಳೆಗಳನ್ನು ತೊಟ್ಟು, ಉಳ್ಳಿಯ ಕಂಠಮಾಲೆಯನ್ನು ಹಾಕಿಕೊಂಡು, ಉಳ್ಳಿಯನ್ನು ಮುಡಿದು, ಉಳ್ಳಿಯನ್ನು ಕೈಯ್ಯಲ್ಲಿ ಹಿಡಿದು ಒಳ್ಳೆಯ ಮನಸ್ಸುಳ್ಳ ಬಸವಣ್ಣನು ನಡೆದು ಬರುತ್ತಿದ್ದನು. ಬೆಳೊಡೆಗಳು ಗಗನವನ್ನು ಮುಸುಕಿದವು, ಬಗೆಬಗೆಯ ಆಯುಧಗಳು ಭೋರ್ಗರೆದು ಮೊಳಗಿದವು. ಜಂಗಮರು ಸಂಭ್ರಮದಿಂದ ಕೋಲಾಹಲಮಾಡುತ್ತ ಓರಣವಾಗಿ ಬರುತ್ತಿದ್ದರು. ಪುರಜನರೂ ಪ್ರೀತಿ ಯಿಂದ ಜೊತೆಗೆ ನಡೆದರು. ಬಸವಣ್ಣನ ಎಡಬಲಗಳಲ್ಲಿ ನೀರಮಾಹೇಶ್ವರರು ( ಭಕ್ತ ಜನ ಚರಣ ಸರಸಿರುಹ ಷಟ್ಟಿದಾ ! ಭಕ್ತ ಜನ ಕುಮುದವನ ಕವು ನೀಯ ಶಶೀ ! ಜಂಗಮದ ಕಿಂಕರ! ಜಂಗಮದ ಪ್ರಾಣ ! ಎಂದು ಮುಂತಾಗಿ ಬಿರುದೆ ಹೊಗಳುತ್ತಿದ್ದರು. ಹೀಗೆ ಉಳ್ಳಿಯ ಮೆರವಣಿಗೆ ಕೈಲಾಸದ ಹಾದಿಯ ಹಾಗೆ, ಚಂದ್ರಶೇಖರನ ನಿಬ್ಬಣದ ಹಾಗೆ ಮುಂಬರಿದು ಬರುತ್ತಿತ್ತು, - ಕಿನ್ನ ರಯ್ಯನಿಗೆ ದೂರದಿಂದಲೆ ಈ ಮೆರವಣಿಗೆಯ ಕೋಲಾಹಲ ಕೇಳಿ ಸಿತು ; ಅದರ ಸಂಭ್ರಮ ಕಾಣಿಸಿತು. ಇದೇನಿರಬಹುದೆಂದು ಸ್ವಲ್ಪ ಹೊತ್ತು ಯೋಚಿಸಿದನು. ತನ್ನ ಮುನಿಸನ್ನು ತಿಳಿಸುವುದಕ್ಕಾಗಿ ಬಸವಣ್ಣ ಬರುತ್ತಿರುವ ರೀತಿಯದೆಂದು ಮಸಸ್ಸಿಗೆ ಹೊಳೆಯಿತು. ಆ ಭಾವ ಹೊಳೆಯಿತೋ ಇಲ್ಲವೋ ಮನಸ್ಸಿನಲ್ಲಿ ಮನೆ ಮಾಡಿದ್ದ ಮುನಿಸು ಮಾಯವಾಗಿ ಒಲವು ನೆಲೆ ನೆಲಸಿತು. ಆ ಭಕ್ತನ ನೆನಹು ಬಸವನತ್ತ ತಿರುಗಿತು. ಮೈ ಪುಳಕಗೊಂಡಿತು. ಸದಾ ಶಿವನ ಧ್ಯಾನದಲ್ಲಿ ನಿರತನಾದ ಆ ಸಾತ್ವಿಕ ಶರಣನು ಬಸವಣ್ಣನನ್ನು ಎದುರು ಗೊಳ್ಳಲು ನಡೆದನು, - ಬಸವಣ್ಣ ತನ್ನ ಕಡೆಗೆ ನಗುಮೊಗದಿಂದ ನಲಿದು ಬರುತ್ತಿದ್ದ ಕಿನ್ನರಯ್ಯ ನನ್ನು ಕಂಡನು. ಸಂಗಮೇಶ್ವರನೆ ತನ್ನನ್ನು ಹರಸಬರುತ್ತಿರುವಂತೆ ತೋರಿತು. ಅಕ್ಕರೆಯಿಂದ ಹತ್ತಿರ ಹೋಗಿ ತನ್ನ ಸರ್ವಾಂಗವನ್ನೂ ಕಿನ್ನರಯ್ಯನ ಪಾದ ಗಳ ಮೇಲೆ ಇಳಿಸಿಬಿಟ್ಟನು. ಗಳಗಳನೆ ಆನಂದಾಶ್ರುಗಳನ್ನು ಸುರಿಸಿದನು. ಹೀಗೆ ಉತ್ತಮೋತ್ತಮ ಭಕ್ತಿಯಾಚಾರವನ್ನು ಮೆರೆಯುತ್ತಿರುವ ಬಸವರಾಜ ನನ್ನು ಕಿನ್ನರಯ್ಯನು ಪ್ರೀತಿಯಿಂದ ಎತ್ತಿ ತಬ್ಬಿಕೊಂಡನು. ಇಬ್ಬರಲ್ಲಿ ಒಬ್ಬ ________________

ಕನ್ನಡ ಸಾಹಿತ್ಯ ಚಿತ್ರಗಳು ರಿಗೂ ತೃಪ್ತಿಯಿಲ್ಲ ; ತಬ್ಬಿ ಒಬ್ಬರೊಳಗೊಬ್ಬರು ಹೊಗಬಯಸುವರೋ ಎಂಬಂತೆ ಕಾಣುತ್ತಿದ್ದರು. ಆಲಿಕಲ್ಲು ಆಲಿಕಲ್ಲನ್ನು ತಾಗಿದಂತಾಯಿತು ; ಹಾಲೊಳಗೆ ಹಾಲು ಬೆರೆಸಿದ ಹಾಗಾಯಿತು ; ಬೆಳಕು ಬೆಳಕನ್ನು ತಬ್ಬಿದಂ ತಾಯಿತು ; ಅಮೃತ ಅದ್ಭುತವನ್ನು ಅಪ್ಪಿ ಕೊಂಡಂತಾಯಿತು. ಹೀಗೆ ಪರಿ ಶುದ್ದ ಮೂರ್ತಿಗಳಾದ ಆ ಇಬ್ಬರೂ ಸ್ನೇಹಪರವಶರಾಗಿರಲು ಕಹಳೆ ದುಂದುಭಿಗಳು ಮೊಳಗಿದವು. ಭಕ್ತರೆಲ್ಲರೂ ಹರಸಿದರು ; ಬಸವಣ್ಣನನ್ನೂ ಕಿನ್ನರಯ್ಯನನ್ನೂ ಸರಿಪರಿಯಾಗಿ ಕೊಂಡಾಡಿದರು. ಪರನು ಸಂಭ್ರಮದಿಂದ ಕಿನ್ನ ರಯ್ಯನನ್ನೊಡಗೊಂಡ ಬಸವಣ್ಣ ಮಂಗಳವಾಡಕ್ಕೆ ಹಿಂದಿರುಗಿದನು. ದಾರಿಯುದ್ದಕ್ಕೂ ಮಾಡಿದ್ದ ಉಳ್ಳಿಯ ಅಲಂಕಾರವನ್ನು ನೋಡಿ ವಿಸ್ಮಯ ಪಡುತ್ತ ಕಿನ್ನರಯ್ಯನು ಬಸವಣ್ಣನ ಮಹಮನೆಗೆ ಬಂದು ಸೇರಿದನು. ಮಲ್ಲಿಗೆಯ ಬಣ , ಬೆಳದಿಂಗಳ ಬೆಳಕುಗಳನ್ನು ಅಪಹರಿಸಿರುವಂತೆ ಥಳಥಳಿಸುವ ಉಳ್ಳಿಗಳಿಂದ ಮಾಡಿದ ಬಗೆಬಗೆಯ ಪಕ್ವಾನ್ನಗಳನ್ನು ಶಿವರ ಣರು ಶಿವನಿಗರ್ಪಿಸಿದರು ; ಲಿಂಗಕ್ಕೆರಗಿ ಪರಮ ಪ್ರಸಾದವನ್ನು ಕೈಕೊಂಡರು. ಕಿನ್ನರಯ್ಯನನ್ನೂ ಅವನಿಗೆ ಸರಿಯಾದ ಉಳ್ಳಿಯನ್ನೂ ಸಂತೋಷದಿಂದ ಹರಸಿದರು. ಕಿರಯ್ಯನನ್ನು ಆ ರೀತಿ ಮನ್ನಿಸಿ ಜಂಗಮ ಸೇವೆಯ ಹಿರಿಮೆಯನ್ನು ಮೆರೆದ ಬಸವಣ್ಣನನ್ನು, * ಶರಣರ ಬಂಧು, ಶರಣರೊಲು ಮೆಯ ಬಸವ, ಶರಣರ ಮನೆಯ ವರುಷ ವರುಷನೆ, ಬಸವ, ಬಸವಯ್ಯ, ಬಸವಣ್ಣ, ದಂಡನಾಥನ ಬಸವ, ಗಜನಿಸರಬೆಳೆ ನರ ಸಂಗನ ಬಸವ ? ಎಂದು ಮೈಯುಬ್ಬಿ ಹೊರತರು ; ಹರಸಿದರು ಬಸವಣ್ಣನು ಆ ತೆಗಳಿಕೆ ಯ ನುಡಿಗಳಿಗೆ ನಡ ನಡುಗಿದನು. * ಒಂದನ್ನೂ ಹೊಗಳದಿ೦ ಎಂದು ಅವರ ಕಾಲಿಗೆರಗಿದನು. “ ಇಲ್ಲಿಂದ ಮುಂದೆ ಪ್ರತಿ ವರ್ಷವೂ ಹೀಗೆಯೆ ಉಳ್ಳಿಯ ರಬ್ಬವನ್ನು ಮಾಡುತ್ತೇನೆ, ಇದು ನನಗೆ ನೇಮ ” ಎಂದು ನುಡಿದನು. ಕಿನ್ನರಯ್ಯನ ಮುನಿಸನ್ನು ಉಳ್ಳಿಯ ಹಬ್ಬದಿಂದ ಪರಿಹರಿಸಿ ಭಕ್ತಿಭಂಡಾರಿ ಬಸವಣ್ಣನು ಸಂಗಮ ಧ್ಯಾನದಲ್ಲಿ ಪರಮಸುಖದಿಂದಿದ್ದನು. ________________

ಕಿನ್ನರ ಬೊಮ್ಮಯ್ಯ టన్నుడి [ ರನ್ನರಡನೆಯ ಶತಮಾನ ಕನ್ನಡ ನಾಡಿನಲ್ಲಿ ಒಂದು ಪರಿವರ್ತನೆಯ ಕಾಲ, ಆಗ ಧರ್ಮ ಏಷಯನಾದ ಚಳವಳಿ ನಡೆಯಿತು ; ಸಮಾಜದ ಸ್ಥಿತಿಯಲ್ಲಿ ಹೊಸ ಮಾಪಾ೯ಟು ಕಳೆದೋರಿತು ; ರಾಜಕೀಯದಲ್ಲೂ ಹೆಚ್ಚು ಕಡಮಯಾಯಿತು. ಈ ವರ್ಷಟು ವಿಶೇಷವಾಗಿ ವೀರಶೈವ ಮತಪ್ರಚಾರದಿಂದ ಉಂಟಾಯಿತನ್ನ ಬಹುದು, ಆಗಿನ ಆ ಹೊಸ ಚಳವಳಿಗೆ ಒಂದು ಸ್ಪಷ್ಟ ರೂಪ ಕೊಟ್ಟು ಮುಂದು ವರಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು, ಜಾತಿ ವೃತ್ತಿ ನಿದ್ವತ್ತುಗಳ ಕೀಳು ಮೇಲುಗಳನ್ನೆಣಿಸದ ಶಿವಭಕ್ತಿಯಲ್ಲಿ ಸರ್ವ ಸಮಾನತೆಯನ್ನು ಬಸವಣ್ಣನವರು ಆಚರಣೆಗೆ ತಂದರು. ಅವರ ಸಂಥ ವಿಶೇಷ ಕಾಗಿ ನಾಡಿನ ಸಾಧಾರಣ ಜನರಿಗೆ ಹೆಚ್ಚು ಮುಚ್ಚಿಕೆಯಾಯಿತು. ಇದಕ್ಕನುಸಾರ ವಾಗಿ ಅವರ ಅವರಿಗೆ ಪ್ರೇರಕರಾಗಿದ್ದ ಇತರ ವಚನಕಾರರೂ ನಾಡುನುಡಿಯಾದ ಕನ್ನಡದಲ್ಲಿ ಧರ್ಮಬೋಧೆ ಮಾಡಿದರು,

  • ಇದರ ಪರಿಣಾಮವಾಗಿ ಅಲ್ಲಿಂದ ಈಚನ ಸಾಹಿತ್ಯದಲ್ಲೂ ಪರಿವರ್ತನೆಯುಂಟ ಯಿತು. ಅದುವರೆಗೆ, ಆಸ್ಥಾನದ ಪ್ರೌಢ ಶcಡಿತರ ಮತ್ತು ರಾಜರ ಮಟ್ಟಿಗೆಯನ್ನೆ ಹೆಚ್ಚಾಗಿ ಲಕ್ಷದಲ್ಲಿಟ್ಟುಕೊಂಡು ಸಂಸ್ಕೃತ ತುಂಬಿದ ಪ್ರೌಢ ಶೈಲಿಯಲ್ಲಿ ಕಾವ್ಯ ಗಳನ್ನು ರಚಿಸುತ್ತಿದ್ದರು. ಆ ಚ ಕನ್ನಡದ ಛಂದಸ್ಸು ಕೂಡ ಹೆಚ್ಚಾಗಿ ಬಳಕೆಯಲ್ಲಿರ ಲಿಲ್ಲ. ಬಸವಣ್ಣನವರ ಆನಂತರದ ಸಾಹಿತ್ಯದಲ್ಲಿ ಈ ಸ್ಥಿತಿ ಬದಲಾಯಿಸಿತು. ಆಚ್ಚ ಕನ್ನಡ ನುಡಿಗೂ ಸಾಮಾನ್ಯರಿಗೆ ಅರ್ಥವಾಗುವ ಸುಲಭ ಶೈಲಿಗೂ ಹೆಚ್ಚು ಪ್ರಾಮುಖ್ಯ ಬಂತು. ರಗಳೆ, ಪಟ್ಟದಿ, ಸಾಂಗತ್ಯ ಮುಂತಾದ ಜನಪ್ರಿಯವಾದ ಛಂದಸ್ಸುಗಳಲ್ಲಿ ಕಾವ್ಯ ರಚನೆಯಾಗತೊಡಗಿತು, ಭಾಷೆಯ ಸರಳವಾಗುತ್ತ ಬಂತು, ಸಾಹಿತ್ಯದಲ್ಲಾದ ಈ ಬಗೆಯ ಮಾರ್ಪಾಟುಗಳಿಗೆ ಜೀವಕೊಟ್ಟವನು Kಂಸೆಯ ಹರಿಹರೇಶ್ವರ ಕಪಿ.

- ಹರಿಹರ ಹೊಯ್ಸಳ ರಾಜರ ಆಸ್ಥಾನದಲ್ಲಿ ಕರಣಿಕರ ಮುಖ್ಯನಾಗಿದ್ದನಂತೆ. ಆತನ ಭಕ್ತಿಪರವಶತೆಯನ್ನು ಕಂಡು ದೊರೆ ಆತನಿಗೆ ಅಧಿಕಾರದ ಹೊರೆಯನ್ನು ತಪ್ಪಿಸಿ ಆತನನ್ನು ಪಂಪಾಕ್ಷೇತ್ರಕ್ಕೆ ಕಳಿಸಿಕೊಟ್ಟ ಸಂತ, ಅಲ್ಲಿ ವಿರೂಪಾಕ್ಷನನ್ನು ಭಕ್ತಿಯಿಂದ ಪೂಜಿಸುತ್ರ ಹರಿಹರ ಆನೇಕ ಕಾವ್ಯಗಳನ್ನು ರಚಿಸಿದನಂತೆ. - ಹೀಗೆಂದು ಅವನ ವಿಷಯದಲ್ಲಿ ಒಂದು ಪ್ರತೀತಿಯಿದೆ. ಅವನು ರಾಜಾಸ್ಥಾನದಲ್ಲಿದ್ದು, ಆ ಸೇವಾವೃಷ್ಟಿಯಿಂದ ಬಿಡುಗಡೆ ಹೊಂದಿ ಹಂಸ್ಥೆಯಲ್ಲಿ ನೆಲಸಿದನೆಂಬುದಕ್ಕೆ ಅವನ ಗ್ರಂಥಗಳಲ್ಲೂ ಸೂಚನೆ ಕಂಡುಬರುತ್ತದೆ, ಯಾವ ರಾಜನ ಆಸ್ಥಾನದಲ್ಲಿ, ಯಾವ ಅಧಿಕಾರದಲ್ಲಿ ಇದ್ದನೆಂಬಿವೇ ಮೊದಲಾದ ಯಾವ ಸಂಗತಿಯ ಗೊತ್ತಾಗುವುದಿಲ್ಲ. ________________

ಕನ್ನಡ ಸಾಹಿತ್ಯ ಚಿತ್ರಗಳು ಹರಿಕರ ಉತ್ತಮವಗಳ" ದ ಕವಿ, 1 ಗಿರಿಜಾ ಕಲ್ಯಾಣ' ಎಂಬ ಚ೦ ಈ ಗ್ರಂಥ, ಸಂಪಾಶತಕ ' ಎಂಬ ಒಂದು ಸೂತ್ರರೂಪನಾದ ಶತಕ, ಅನೇಕ (ನೂರಕ್ಕಿಂತ ಮುಲ್ಪಟ್ಟು) ರಗಳೆಗಳು -- ಇವು ಆತನು ರಚಿಸಿರುವ ಕೃತಿಗಳು. 'ರಗಳೆ' ಎಂಬುದು ಒಂದು ಬಗೆಯ ಅಚ್ಚ ಕನ್ನಡ ಛಂದಸ್ಸು, ಹಿಂದಿನ ಕವಿಗಳು ಅಲ್ಲಿ ಕೆಲವು ಸಾಲುಗಳನ್ನು ಮಾತ್ರ ರಗಳೆಯಲ್ಲಿ ಬರೆಯುತ್ತಿದ್ದರು. ಹರಿಹರ ಪೂರ್ಣಕಾವ್ಯ ಗಳ ಆ ಛಂದಸ್ಸಿನಲ್ಲಿ ಬರೆದನು, ಇದರಿಂದ ಆತನಿಗೆ 1 ರಗಳೆಯ ಕವಿ ? ಎಂದೂ ಒಂದು ಹೆಸರು ಬಂತು, - ಗದ್ಯವನ್ನು ಹರಿಹರ ಮತ್ತೆ ಬಳಕೆಗೆ ತಂದನೆನ್ನ ಬಹುದು, ಕಥಾ ಕಾವ್ಯಕ್ಕೆ ತಕ್ಕಂತ ಮಾತಿನ ಶೈಲಿಯ ಗದ್ಯವನ್ನೆ ಆತ ತನ್ನ ಗ್ರಂಥಗಳಲ್ಲಿ ಬಳಸಿದ್ದಾನೆ, ಹಳ ಗನ್ನಡ ನುಡಿ ಆನೆ ಸಿಂಗಿತ್ತ ಹೊಸಗನ್ನಡದ ಕಡೆಗೆ ತಿರುಗುತ್ತ ಬಂತೆಂದು ಹೇಳ ಬಹುದು, - ಹರಿಹರ ಉತ್ತಮ ಶಿವಭಕ್ತ, ಈತನ ಗ್ರಂಥಗಳಲ್ಲಿ ಭಕ್ತಿಯ ಸಳನು ಎದ್ದು ಕಾಣುತ್ತದೆ. ತಮಿಳು ದೇಶದಲ್ಲಿ ಅರುವತ್ತು ಮೂರು ಮಂದಿ ಶಿವಭಕ್ತರು ಹಿಂದಿನ ಕಾಲದಲ್ಲಿ ಪ್ರಸಿದ್ಧ ಲಾಗಿದ್ದರು. ಅವರನ್ನು 1 ಅರುವತ್ತು ಮೂವರು ಪುರಾತನರು ? ಎಂದು ಕರೆಯುವುದು ರೂಢಿ. ಆವರ ಚರಿತ್ರೆ ತಮಿಳಿನ ಪರಿಯ ಪುರಾಣಂ ಎಂಬ ಗ್ರಂಥದಲ್ಲಿ ದೊಕಿಯುತ್ತದೆ. ಆ ಗ್ರ೦ಥದ ಆಧಾರದಿಂದಲೋ, ಅವರ ವಿಷಯ ವಾಗಿ ದೇಶದಲ್ಲಿ ಪ್ರಚಾರವಾಗಿದ್ದ ಸಂಗತಿಗಳನ್ನು ಸಂಗ್ರಹಿಸಿಯೋ, ಅಥವಾ ಎರ ಡನೂ ಉಪಯೋಗಿಸಿಕೊಂಡ ಹರಿಹರ ಆ ಪುರಾತನರ ಕಥೆಗಳನ್ನೆಲ್ಲ ಕನ್ನಡ ದಲ್ಲಿ ಬರೆದಿದ್ದಾನೆ. ಇವೇ ' ಪುರಾತನರ ರಗಳೆಗಳು.' ತಮಿಳುನಾಡಿನ ಆ ಪುರಾತನ ಭಕ್ತರನ್ನಲ್ಲದೆ ಕನ್ನಡನಾಡಿನಲ್ಲಿ ಬಾಳಿದ ಆನೇಕ ನವೀನ ಭಕ್ತರ ಚರಿತ್ರೆಗಳನ್ನೂ ರಗಳೆಗಳಲ್ಲಿ ರಚಿಸಿದ್ದಾನೆ. ಇವೆಲ್ಲ ಉತ್ತಮ ಕಾವ್ಯಗಳಾಗಿವೆ. ಇಲ್ಲಿ ಕೊಟ್ಟಿರುವ ಕಣ್ಣಪ್ಪನ ಕಥೆ ಆರುವತ್ತು ಮೂವರು ಪುರಾತನರ ರಗಳೆಗಳ ಲೈ೦ದರಿಂದ ಸಂಗ್ರಹಿಸಿದ್ದು, ಕಿನ್ನರ ಬೊಮ್ಮಯ್ಯನ ಕಥೆ ಕನ್ನಡನಾಡಿನ ಧರ್ಮ ವೀರರಲ್ಲೊಬ್ಬರಾದ ಬಸವಣ್ಣ ನವರ ಚರಿತ್ರೆಯಾದ ಬಸವರಾಜ ದೇವರ ರಗಳೆ 'ಯ ಒಂದು ಅಧ್ಯಾಯ, ಬಸವರಾಜ ದೇವರ ರಗಳೆ' ಹರಿಹರನ ಕೃತಿ ಗಳಲ್ಲಿ ಸರ್ವೋತ್ಕೃಷ್ಟ ರತ್ನ ಎನ್ನಬಹುದು. ಹರಿಹರ ಕವಿ ಮುಂದಿನ ಕವಿಗಳೆಲ್ಲರಿಗೂ ಎಷ್ಟೋ ಬಗೆಯಲ್ಲಿ ಮಾರ್ಗದರ್ಶಕ ನಾದನು. ಪ್ರಸಿದ್ದ ಕಪಿ 1 ಭಾಘವಾಂಕ ? ಈತನ ಶಿಷ್ಯ ಮತ್ತು ಸೋದರಳಿಯ. * ಈತನು ಕ್ರಿ. ಶ. ೧೨ನೆಯ ಶತಮಾನದ ಕಡಯಿ ೧೩ನೆಯ ಶತಮಾನದ ಮೊದಲಿನಲ್ಲೂ ಬದುಕಿದ್ದನೆಂದು ವಿಮರ್ಶಕರು ಊಹಿಸುತ್ತಾರೆ. ] ________________

ಉತ್ತರ ಕುಮಾರ ಆರಸುಗಳಿಗಿದು ನೀರ ದ್ವಿಜರಿಗೆ ಪರಮ ವೇದದ ಸಾರ, ಯೋಗೀ ಶ್ವರರ ತತ್ತ್ವ ವಿಚಾರ, ಮಂತ್ರಿ ಜನಕ್ಕೆ ಬುದ್ದಿ ಗುಣ ವಿರಹಿಗಳ ಶೃಂಗಾರ, ವಿದ್ಯಾ ಪರಿಣತರ ಸುಪ್ರೌಥಿ, ಕಾವ್ಯಕೆ ಗುರುನೆನಲು ರಚಿಸಿದ ಕುಮಾರ ವ್ಯಾಸ ಭಾರತವ ನೀರನಾರಾಯಣನ ಕವಿ, ಲಿಪಿ ಕಾರ ಕುವರವ್ಯಾಸ ಕೇಳುವ ಸರಿಗಳು ಸನಕಾದಿಗಳು ಜಂಗಮ ಜನಾರ್ಧನರು || {ಪಾಂಡವರು ಅರಣ್ಯವಾಸವನ್ನು ಮುಗಿಸಿ ಅಜ್ಞಾತವಾಸಕ್ಕೆ ಮುತೃದೇಶಕ್ಕೆ ಹೋದರು. ವೇಷ ಮರೆಸಿಕೊಂಡು ವಿರಾಟರಾಜನ ಆಶ್ರಯದಲ್ಲಿ ಒಬ್ಬೊಬ್ಬರು ಒಂದೊಂದು ಊಳಿಗದಲ್ಲಿ ನಿಂತರು. ಧರ್ಮರಾಯ ಕಂಳಭಟ್ಟನೆಂಬ ಬ್ರಾಹ್ಮಣ ನಗಿ ದೊರೆಯು ಸಖನಾದನು. ಭೀಮ ವಲಲನೆಂಬ ಹೆಸರಿನಿಂದ ಅರಮನೆಯ ಬಾಣಸದ ಮುಖ್ಯನಾದನು. ಅರ್ಜುನ ನಪುಂಸಕ ವೇಷ ತೊಟ್ಟು ಬೃಹನ್ನಳೆಯೆಂಬ ಹಸರಿಟ್ಟುಕೊಂಡು ರಾಜಪುತ್ರಿ ಉತ್ಸರೆಗೆ ನಾಟ್ಯಾಚಾರ್ಯನಾದನು, ನಕುಲ ಸಹ ದೇವರು ಗವಾಧ್ಯಕ್ಷ ತುಂಗಾಧ್ಯಕ್ಷರಾದರು. ಪಾಂಡವರಸಿ ಬ್ರೌಪದಿ ಸೈರಂದ್ರಿಯಾಗಿ ರಾಣಿ ಸುದೇಷ್ಟೆಗೆ ಮುಡಿ ಕಟ್ಟುವ ಊಳಿಗದವಳಾದಳು. - ಹೀಗೆ ವೇಷಾಂತರದಿಂದ ಹರಿಯದಂತೆ ಇರುತ್ತಿರಲು ಸುಖವಾಗಿ ಕಾಲ ಕಳೆಯುತ್ತಿತ್ತು. `ವರ್ಷ ಇನ್ನೇನು ಮುಗಿಯುತ್ತದೆ ಎನ್ನುವಷ್ಟರಲ್ಲಿ ವಿರಾಟರಾಜನ ಹೆಂಡತಿಯ ತನ್ನು ಸೂ ಸೇನಾಪತಿಯೂ ಆದ ಕೀಟ ಕನು ಗೌಪದಿಯನ್ನು ಕೆಣಕಿ ದನು. ಭೀಮ ಗಂಧರ್ವ ವೇಷದಿಂದ ಕೀಚಕನನ್ನೂ ಅವನ ಪರಿವಾರದವರಾದ ಉತಕಿಚಕರನ್ನೂ ಧ್ವಂಸಮಾಡಿದನು. ಯಾರೋ ಗಂಧರ್ವಟಕದ ಕೀಚಕರೆಲ್ಲ ನಾಶವಾದರೆಂಬ ಸುದ್ದಿಯನ್ನು ಕೇಳಿ ಕೌರವರಿಗೆ ಆಶ್ಚರ್ಯವಾಯಿತು. ಕೀಚಕನನ್ನು ಕೊಂದವನು ಭೀಮನೇ ಆಗಿರ ಬೆಕೆಂದು ಊಹಿಸಿದರು. ಕಾಂಡವರನ್ನು ಕಂಡುಹಿಡಿದು ಅವರನ್ನು ಮತ್ತೆ ವನ ಇಸಕೆ ಕಳಿಸಬೇಕೆಂದು ನಿರ್ಧಾನ ಮೇಲೆ ದಂಡೆತ್ತಿ ನಡೆದರು, ________________

ಕನ್ನಡ ಸಾಹಿತ್ಯ ಚಿತ್ರಗಳು ತ್ರಿಗರ್ತದೇಶದರು ಸುಶರ್ಮನೆಂಬವನು ದಕ್ಷಿಣದಿಕ್ಕಿನಿಂದ ದಾಳಿನ ವಿಜಾನ ಗೋವುಗಳನ್ನು ಹಿಡಿದರು. ನೀರಾವೇಶ್ವರನು ತನ್ನ ಸೈನ್ಯವನ್ನೆಲ್ಲ ಕೂಡಿ ಕೊಂಡು ಹೋಗಿ ಅವನನ್ನೆ ದುರಿಸಿದನು. ಆ ಆಕಸ್ಮಿಕದ ದಾಳಿ ತಮ್ಮನ್ನೇ ಉದ್ದೇಶಿಸಿ ಟ್ವೆಂದು ಭಾಂಡವರಿಗೆ ಹೊಳೆಯಿತು. ಗೋವುಗಳನ್ನು ಬಿಡಿಸಿ ತರುವುದಕ್ಕಾಗಿ ತಾವೂ ರಣರಂಗಕ್ಕೆ ನಡೆದರು. ಆರ್ಜುನನೊಬ್ಬ ಹಿಂದುಳಿಯಬೇಕಾಯಿತು. ಅಂದಿನ ಕಾಳಗದಲ್ಲಿ ವಿರಾಟರಾಜನ ಸಸಿಕ್ಕಳು, ವಲಲನು ಆತನನ್ನು ಬಿಡಿಸಿ ತಂದನು. ನನ್ ಒಂತರದಿಂದ ಯುದ್ಧ ನಡಿ ದ ಪಾಂಡವ ನೀರರ ಸಾಹಸದಿಂದ ಶತ್ರುಗಳು ಮುರಿ ನೋಡಿದರು. ತುರು ನರಳಿತು.] ಪರಿತೋಷ ಸ೦ರಂಭದಲ್ಲಿ ಮಾತಿನ ನೀರ ಬರುತಿರ್ದ ದಕ್ಷಿಣ ಗೊಗ್ರಹಣದಲ್ಲಿ ಕೌರವಸೇನೆ ಸೋತು ಮಾನಭಂಗ ಹೊಂದಿ ಹಿಂದೆ ಸರಿಯಿತು, ಆ ಸೇನೆಗೆ ನಾಯಕನಾದ ಸುಶರ್ಮನು ದಮಾನ ದಿಂದ ಮುಸುಕಿಟ್ಟುಕೊಂಡು ಪಾಳೆಯಕ್ಕೆ ಹಿಂದಿರುಗಿದನು. ವಿಜಯವಾರ್ತೆ ವಿರಾಟಪಟ್ಟಣವನ್ನು ಹರ್ಷದಲ್ಲಿ ಮುಳುಗಿಸಿತು. ಆ ರಾತ್ರಿ ಕಳೆದು ಬೆಳಗಾಯಿತು, ಇತ್ತ ಉತ್ತರದಲ್ಲಿ ಭೀಷ್ಮ, ದ್ರೋಣ, ಕರ್ಣ ಮೊದಲಾದ ಮಹಾವೀರರನ್ನೊಳಗೊಂಡ ಮಹಾ ಸೈನ್ಯ ದೊಡನೆ ದುರ್ಯೋಧನ ಸಾಗಿ ಬಂದನು. ಕೌರವನ ವಂಡು ನಿರಾಟನ ಶುರು ನಿಂಡನ್ನು ಮುಟ್ಟಿತು. ಕಾವಲಿನ ಗೋವಳರು ಸಾವಿಗಂಜದೆ ಮಲೆತು ನಿಂತರು ; ಕವಿದು ಬರುವ ಕುರು ಸೇನೆಯನ್ನೆದುರಿಸಿ ತಮ್ಮಳವಿದ್ದ ಸ್ಕೂ ಹೋರಾಡಿದರು. ಕರ್ಣ, ದುಶ್ಯಾಸನ, ಜಯದ್ರಥಾದಿಗಳು ಆ ದಿಟ್ಟ ಗೊಲ್ಲರ ಪಡೆಯನ್ನು ಕೈಗಾಯದೆ ಸದೆಬಡಿದರು. ಕೌರವ ವೀರರ ಸರಳ ಸರಿಮಳೆಗೆ ಗೋಪಾಲಪಡೆ ಮುಖಕೊಡಲಾರದಾಯತು, ಮೇಲುವಳಕ್ಕೆದುರಾಗಿ ಕಾಳಗ ದಲ್ಲಿ ಮುರಿದೊರಗಿ ಅವರ ರಾಜಧಾನಿಯ ಕೋಟೆಯನ್ನು ಲಗ್ಗೆ ಹತ್ತಿತು, ಗೋಪಾಲರು ಸಾಲುಗಟ್ಟೋಡಲು ಕೌರವರಾಯನ ದಳದವರು ತುರುಗಳನ್ನು ಸೆರೆಹಿಡಿದು ಕಾಳಗವನ್ನು ನಿಲ್ಲಿಸಿದರು. ಬಳಿಕ ಗೊಲ್ಲನೊಬ್ಬನಿಗೆ ಮೂಗಿನ ಮೇಲೆ ಸುಣ್ಣ ಬರೆದು * ಶೂರರನ್ನು ಬರಹೇಳು, ಹೋಗು ” ಎಂದು ವಿರಾ ಟನ ಪಟ್ಟಣಕ್ಕೆ ಅಟ್ಟಿದರು. ________________

ಉತ್ತರ ಕುಮಾರ ಆ ಗೊಲ್ಲ ಕೈಯ ಬಿಲ್ಲನ್ನು ಬಿಸುಟು, ಬದುಕಿ ಉಳಿದುಕೊಂಡ ತನ್ನ 'ತಲೆಯನ್ನು ಅಡಿಗಡಿಗೆ ಸವರಿಕೊಳ್ಳುತ್ತ ಪಟ್ಟಣಕ್ಕೆ ಓಡಿದನು. ಕಂಡು ಜನ ನೆಲ್ಲ “ ಮತ್ತೆ ಈ ರಣವಾರ್ತೆಯಿದೇನು ? ” ಎಂದು ಗಜಬಜಿಸಿದರು. ಬಾಯಾರಿ ಗಂಟಲೊಣಗಿದ ಆ ಗೊಲ್ಲ, “ ಈ ರಣ ಕಿರಿದಲ್ಲ” ಎಂದು ನುಡಿ ಯುತ್ತ ಅರಮನೆಯತ್ತ ವೇಗದಿಂದ ನಡೆದನು. ಅರಮನೆಯಲ್ಲಿ ದೊರೆಯಿಲ್ಲ. ದೊರೆಮಗ ಉತ್ತರ ಮೇಳದ ಗಣಿಕೆ ಯರ ಮಧ್ಯದಲ್ಲಿ ಮೆರೆಯುತ್ತಿದ್ದಾನೆ. ಗೊಲ್ಲನಿಗೆ ಮುಖದಲ್ಲಿ ಭೀತಿ ಎದು ಕಾಣುತ್ತಿದೆ ; ಎದೆ ಬಡಿದುಕೊಳ್ಳುತ್ತಿದೆ ; ಗಂಟಲೊಣಗಿ ನಾಲಗೆ ತೊದಲೆ ತಿದೆ. ಹಾಗೆಯೇ ಹುಯ್ಯಲಿಡುತ್ತ ಉತ್ತರನ ಓಲಗವನ್ನು ಹೊಕ್ಕು ಕಾಲಿ ಗೆರಗಿ ಸುದ್ದಿ ಹೇಳಿದನು. * ಏಳು ದೊರೆಯೇ, ಗಂಡನಾಗು, ಕೌರವರಾಯ ತುರುಗಳನ್ನು ಹಿಡಿದನು. ನಂದಗಲಕ್ಕೂ ಸೇನೆ ಬಂತು, ದಾಳಿ ಬರುತ್ತಿದೆ. ಆಳು ಕುದುರೆಗಳನ್ನು ಕರೆಸಿಕೊ, ರಾಣಿವಾಸದ ಗೂಳೆಯ ತೆಗಸು ” ಎಂದು ಬಿನ್ನಯಿಸಿದನು. ದೊರೆಮಗನಿಗೆ ಏನೋವನೆನಿಸಿರಬೇಕು. ಕಾಲಿಗೆರಗಿದ ಗೊಲ್ಲನನ್ನು ಕುರಿತು, " ಎಲವೋ , ಏನಿದು ? ತುದಿನಗಿನಲ್ಲಿ ಬಿಳುವೇನು ? ಢಗೆ ಹೊಯು ಅದೇಕೆ ಓಡಿ ಬಂದೆ ? ನಿನ್ನಿನ ರಣವನ್ನು ಆಯ ಗೆದ್ದನಲ್ಲಾ, ಅದೇನಾಯಿತು ? ಭಯ ಬೇಡ, ಕಲಹದ ವಾರ್ತೆಯನ್ನು ತಿಳಿಸು” ಎಂದನು. ಗೊಲ್ಲನು ಹೇಳತೊಡಗಿದನು: “ ಕೌರವರ ಸೇನೆ ಬಂತು. ಬಡಗ ದಿಕ್ಕಿನಲ್ಲಿ ತುರುಗಳನ್ನು ಹಿಡಿಯಿತು. ಕೌರವರಾಯ ಬಂದ. ಆತನ ನಾಯಕರು---- ಅಶ್ವತ್ಥಾಮ, ದ್ರೋಣ, ಭೀಷ್ಮ, ಶಕುನಿ, ವಿಕರ್ಣ, ಕರ್ಣ, ಜಯದ್ರಥ ಮೊದಲಾದವರು ಎಲ್ಲರೂ ಬಂದರ., ಜೀಯ, ಆ ದಳ ಎಷ್ಟು ದೊಡ್ಡ ದೊ ನಾನೇನು ಬಲ್ಲೆ ? ಎತ್ತ ಕಣ್ಣು ಹೊರಳಿಸಿದರೂ ಅತ್ತ ಆನೆಗಳೂ ಕಾಲಾಳು ಗಳೂ ರಥಗಳೂ ಕುದುರೆಗಳೂ ರಾಯರಾವುತರೂ ಗುಂಪು ಗುಂಪಾಗಿ ಸುತ್ತ ಬಳಸಿರುವರು. ಮನಸ್ಸು ಹರಿಯುವಷ್ಟು ದೂರಕ್ಕೂ ಶತ್ರುಸೇನೆ ಯಲ್ಲದೆ ಮತ್ತೇನೂ ಕಾಣಿಸದು. ಸೂರ್ಯಕಿರಣ ಕೂಡ ನುಸುಳಿ ಬರಲಾರ ಬೆನ್ನು ಎಷ್ಟು ದಟ್ಟವಾಗಿದೆ ಆ ಪಡೆಯ ಒಡು, ನೀನು ಒಳಗೇ ನಿಂತು ಕಾದುವ ಹಾಗಿದ್ದರೆ ದುರ್ಗವನ್ನು ಭದ್ರಪಡಿಸು. ಕಾಳಗವನ್ನು ಹಿಂದುಗಳೆ ________________

| ಕನ್ನಡ ಸಾಹಿತ್ಯ ಚಿತ್ರಗಳು ಯದೆ ಮುನ್ನುಗ್ಗುವ ಮನಸ್ಸುಳ್ಳವನಾದರೆ ಈಗಲೇ ಹೊರಡರ್ಬೇಕು ಎಂದನು, ಆ ಮಾತನ್ನು ಕೇಳಿ ಉತ್ತರ ಕುಮಾರ ಕೆಲಬಲವನ್ನು ನೋಡಿದನು ; ಮಾಸೆಯನ್ನ ಲುಗಿಸಿದನು. ತನ್ನೆದುರಿಗೆ ನೆರೆದಿದ್ದ ಲಲನೆಯರ ಮೊಗ ನೋಡುತ್ತ ಬಿಂಕದಿಂದ ತನ್ನ ಪರಾಕ್ರಮವನ್ನು ಪ್ರದರ್ಶಿಸುತ್ತ " ನೂಕಾಚೆ, ಈ ಕುನ್ನಿಯನ್ನು ಯುದ್ಧ ಮಾಡದೆ ಭೀತಿಯಿಂದ ಕಳವಳಪಟ್ಟು ಕೊಂಡಿ ರನ್ನು ಸಾಕಲೆ೦ದು ಬದುಕುವ ಆಸೆಯಿಂದ ಇಲ್ಲಿಗೆ ಓಡಿಬಂದು ನನ್ನೊಡನೆ ಏನೇನೋ ಹರಟುತ್ತಾನೆ ! ನಾನೇನಾದರೂ ಕೋಪೋದ್ರೇಕದಿಂದ ಯುದ್ಧ ಕೈ ನಿಂತೆನಾದರೆ ಆ ಪಿನಾಕಧರನಿಗೂ ಅಸಾಧ್ಯವಾಗುವುದು ” ಎಂದನು. ಉತ್ತರನ ನುಡಿಗಳನ್ನಾಲಿಸಿ ಸತಿಯರು, “ ಜೀಯ, ಕೌರವನ ಬಲ ಎಷ್ಟು ಘನವಾದರೇನು ನಿನಗೆ ಗಹನವೆ ? ಕತ್ತಲೆ ಎಷ್ಟು ದಟ್ಟವಾಗಿದ್ದರೂ ಸೂರ್ಯನೆದುರಿಗೆ ಅದಕ್ಕೆ ದಿಟ್ಟತನವೆ ? ಆ ಬಿನುಗು ರಾಯರ ಬಿಂಕ ಗೋವಳರ ಮೇಲೆ ಕೈ ಮಾಡುವುದರಲ್ಲಿ , ದೊರೆಯೇ, ಆ ಕೌರವರ ಸೈನ್ಯದಲ್ಲಿ ನಿನ್ನ ಕೈಗುಣವನ್ನು ತೋರಿಸು ” ಎಂದು ಉತ್ತೇಜಿಸಿದರು. ಸತಿಯರು ಹೀಗೆ ಹೊಗಳಲು ಉತ್ತರನು ಉಬ್ಬಿದನು ; ತಾನು ಶೂರ ನೆಂದೇ ಭಾವಿಸಿದನು. ಬೆರಳಿನಿಂದ ಮಾಸೆ ತಿರುವುತ್ತ ಮುಗುಳುನಗೆ ನಗುತ್ತ ಹರ್ಷದಲ್ಲಿ ಮೈಮರೆತನು, ರೋಮಾಂಚ ಹೊಂದಿ ಸುತ್ತಮುತ್ತಣ ಇ೦ದು ಮುಖಿಯರನ್ನು ನೋಡಿ ನಲಿಯುತ್ತ ತನ್ನ ಪೌರುಷದ ಹೆಚ್ಚಿಗೆಯನ್ನು ಹೊಗಳಿಕೊಳ್ಳತೊಡಗಿದನು.

  • ಜೂಜಿನ ಮೋಸದಲ್ಲಿ ಪಾಂಡವರನ್ನು ಸೋಲಿಸಿ ರಾಜ್ಯ ವನ್ನು ತೆಗೆದು ಕೊಂಡ ಹಾಗೆಂದು ಭಾವಿಸಿ ನನ್ನನ್ನು ಕೆಣಕಿದನೇ ಆ ಸುಯೋಧನ ? ಸಾಹಸವನ್ನು ಮೆರೆದು ಮೊದಲು ತುರುಗಳನ್ನು ಮರಳಿಸಿ ತರುತ್ತೇನೆ. ಆ ಮೇಲೆ ಕೌರವನನ್ನು ಸುಮ್ಮನೆ ಬಿಡುವೆನೆ ? ಅವನ ಹಸ್ತಿನಾಪುರವನ್ನು ಸೂರೆ ಮಾಡಿ ಬಿಡುತ್ತೇನೆ. ಆವನೆಂಥ ಶೂರನೆಂಬುದನ್ನು ನಾನೇನರಿಯೆನೆ ? ಜೂಜಿನಲ್ಲಿ ರಾಜ್ಯವನ್ನು ಕಸಿದುಕೊಂಡ ; ಹೆಂಗಸನ್ನು ಬಡಿದ. ಪಾಂಡ ವರನ್ನು ಹೊರಹೊರಡಿಸಿ ಕೊಬ್ಬಿದ್ದಾನೆ. ಆ ಪರಿಯ ಭುಜಬಲವನ್ನು ನನ್ನ ಮೇಲೆ ತೋರಿಸಬಂದನಲ್ಲ ! ನನ್ನನ್ನು ಬಡ ಯುಧಿಷ್ಟಿರನೆಂದು ತಿಳಿದನೋ ________________

ಉತ್ತರ ಕುಮಾರ ಏನೂ ! ಪಾಂಡವರನ್ನು ತಗ್ಗಿಸಿದೆನೆಂಬ ಕೊಬ್ಬಿನಿಂದ ನನ್ನನ್ನು ಕೆಣಕಿದ್ದು ಯಮನ ಬಾಸೆಯನ್ನು ಹಿಡಿದೆಳೆದಂತಾಯಿತು. ಮೃತ್ಯು ದೇವತೆಯ ಸೆರಗು ತೆಗೆದಂತಾಯಿತು. ಅಯ್ಯೋ, ಮರುಳಾಗಿ ಕೌರವ ಕೆಟ್ಟ ! ಇನ್ನ ವನು ಬದುಕಿ ನೆಲವನುಳುವನೆ ? `ಯವನ ಮನೆಯನ್ನು ಸೇರುವನು, ಅದು ಸರಿ, ನಾನು ಕಾಳಗಕ್ಕೆ ಹೋದರೆ ಅಲ್ಲಿ ಯಾರೊಡನೆ ಕಾದಲಿ ? ನನ್ನೊಡನೆ ಕಾಳಗವಾಡಲು ಯೋಗ್ಯರಾದವರು ಯಾರೂ ಇಲ್ಲವಲ್ಲ ! ಕೆಲ ವರು ಹಾರುವರು ; ಇನ್ನು ಕೆಲವರು ಹಣ್ಣು ಹಣ್ಣು ಮುದುಕರಾಗಿ ಯಮನ ನೆರೆಯೂರಿನಲ್ಲಿರುವವರು ; ಇನ್ನು ಕೆಲವರು ಅಧಮ ಕುಲದಲ್ಲಿ ಬಂದವರು. ವೀರರೆನ್ನಿಸಿಕೊಂಡವರು ಇವರೇ. ವೀರರೆನ್ನಿಸಿಕೊಂಡ ಇವರೇ ಯುದ್ಧಕ್ಕೆ ಆರ್ಹರಲ್ಲದಿರಲು ನೀರರಲ್ಲದ ಉಳಿದವರ ಮಾತೇನು ? ದೇಶವನ್ನಾಳುವ ದೊರೆಗಳು ಬಂದು ದನಗಳನ್ನು ಹಿಡಿಯುವುದೇ ? ಈ ಕೆಲಸಮಾಡಿ ಕೌರವ ಕೀಳನಾದ. ಆದರೆ ತಾನೆ ಏನು ? ಅದು ಅವನಿಗೆ ದಕ್ಕೀತೆ ? ಎಂದಿಗೂ ಇಲ್ಲ. ದುರ್ಯಶಸ್ತೂಂದು ಶಾಶ್ವತವಾಗಿ ಉಳಿಯು ಇದೆ. ನನ್ನೊಡನೆ ಕಾದಿ ಬದುಕುವವನಾವನು ? ಆ ದುಷ್ಟನನ್ನು ಧ್ವಂಸ ಮಾಡುತ್ತೇನೆ. ಕೌರವನ ಸೇನೆಯನ್ನು ಧೂಳಿಪಟಮಾಡಿ ತೊಲಗಿಸಿಬಿಡು ತೇನೆ. ಗೆಲವು ಪಡೆದು ಅಷ್ಟಕ್ಕೆ ನಿಲ್ಲದೆ ಹಸ್ತಿನಾಪಟ್ಟಣದಲ್ಲಿ ಮತ್ತೊಂದು ತಾಣೆಯನ್ನು ಇಡುತ್ತೇನೆ, ” -ಹೀಗೆಂದು ಉತ್ತರನು ಹೆಂಗಸರೆದುರಿನಲ್ಲಿ ಮೈ ಕೈ ತಿರುವುತ್ತ ಕತ್ತಿ ಯನ್ನು ಕುಟ್ಟುತ್ತ ಬಾಯಿಗೆ ಬಂದಂತೆ ಹರಟುತ್ತಿದ್ದನು, ಬೇಕು ಬೇಡೆಂದು ತಿಳಿಯ ಹೇಳುವವರು ಯಾರೂ ಇರಲಿಲ್ಲ. ಯಾವ ತಡೆಯೂ ಇಲ್ಲದಿರಲು ಆವನು ಇನ್ನೂ ಮುಂದುವರಿಸಿದನು : “ ಭೀಷ್ಮನನ್ನು ನಾನರಿಯೆನೆ ? ನಾನು ತಿಳಿಯದವನೇ ಆ ದೋಣ ? ಕುಲದಲ್ಲಿ ಕೀಳಾದ ಕರ್ಣ ನನಗೆ ಸಮಬಲನೆ ? ಇಂಥವರನ್ನು ಕೂಡಿ ಕೊಂಡು ಬಂದು ಕೌರವ ಬರಿಯ ಬಯಲಾಡಂಬರದಲ್ಲಿ ತುರುಗಳನ್ನು ಹಿಡಿದನಲ್ಲಾ! ನಾನು ಹೋಗಿ ಅವನ ಹೆಂಡಿರನ್ನು ಸೆರೆಹಿಡಿದು ತರದೆ ಬಿಡು ವುದಿಲ್ಲ ಎಂದು ಜಂಬ ಕೊಚ್ಚಿದನು. ಅದನ್ನು ಕೇಳಿ ಆ ತರಳೆಯರು ಮನಸ್ಸಿನಲ್ಲಿ - ಗಹಗಹಿಸಿ ನಗುತ್ತಿದ್ದರು, ________________

ಕನ್ನಡ ಸಾಹಿತ್ಯ ಚಿತ್ರಗಳು ಸುಕುಮಾರ ಮತ್ತೂ ಮುಂದುವರಿಸಿದನು : “ ಮಾತಾಡಿ ಫಲವೇನು ? ನಿನ್ನಿನ ಕಾಳಗದಲ್ಲಿ ನನ್ನ ಸಾರಥಿ ಮಡಿದ ; ನಾನು ಹೆಳವನಾದೆ, ನನ್ನ ಪರಾಕ್ರಮಕ್ಕೂ ಉತ್ಸಾಹಕ್ಕೂ ತಕ್ಕವನಾದ ಸಾರಥಿಯೊಬ್ಬ ಸಿಕ್ಕಿದರೆ ಆಗ ತೋರಿಸುತ್ತೇನೆ ನನ್ನ ಕೈಗುಣವನ್ನು ಶಿವನು ಕೃಪೆಯಿಟ್ಟು ಸಾರಥಿಯನ್ನು ಕೊಟ್ಟನಾದರೆ, ಮಾರಿಗೆ ತಿಂದು ತಿ೦ದು ಉಬ್ಬಸ ಹತ್ತುವುದು ; ರಣಪಿಶಾಚಿ ಗಳ ಡೊಳ್ಳು ಮುಂದಕ್ಕೆ ನೂಕುವುದು ; ಯಮನ ಊರು ತುಂಬಿ ತುಳುಕು ವುದು ; ರಣ ಸಾರ್ಥಕವಾಗುವುದು ?” ಹೀಗೆ ತಡೆಯಿಲ್ಲದೆ ಗಳಸುತ್ತಿದ್ದ ರಾಜಕುಮಾರನ ಬಾಲಭಾಷಿತ ವನ್ನು ಅರ್ಜುನ ಆಲಿಸುತ್ತಿದ್ದನು. ಅವನು ಪಾಂಚಾಲೆಯನ್ನು ಒತ್ತಟ್ಟು ಕರೆದು, ನಾವು ಇನ್ನು ಸುಮ್ಮನಿರುವುದು ಸರಿಯಲ್ಲ. ಅವಧಿ ಮುಗಿಯಿತು. ಕೌರವರ ದಂಡು ಬಂದಿರುವುದು ನಮಸ್ಕರವೇ. ನಾವು ನಮ್ಮ ರಾಜ್ಯವನ್ನು ಕೈಗೆ ತೆಗೆದುಕೊಳ್ಳಬೇಕು. ಆದ್ದರಿಂದ ನಾನು ಅರ್ಜುನನ ಸಾರಥಿಯೆಂದು ಉತ್ತರೆಗೆ ಸೂಚಿಸಿ ನನ್ನನ್ನು ಕರಸುವಂತೆ ಮಾಡು ಎಂದು ಅವಳಿಗೆ ಗುಟ್ಟಾಗಿ ಹೇಳಿದನು. ಬ್ರೌಪದಿಗೆ ನಲವೇರಿತು ಉತ್ತರೆಯ ಬಳಿ ಬಂದು * ಅನಾ, ಈ ಬೃಹನ್ನಳೆ ಅರ್ಜುನನ ಸಾರಥಿ, ಖಾಂಡವ ವನವನ್ನು ಸುಟ್ಟಾಗ ಅಗ್ನಿಯನ್ನು ಕಾಯ್ದವನು ಇವನೇ ?” ಎಂದು ತಿಳಿಸಿದಳು. ಕೇಳಿ ಉತ್ತರೆ ಹರ್ಷಿತೆಯಾದಳು. ಓಲಗಕ್ಕೆ ಬಂದು ಅಣ್ಣ ನಡಿಗೆರಗಿ ಕೈ ಮುಗಿದು * ಸಾರಥಿಯ ನೆಲೆಯನ್ನು ಕೇಳಿದೆ. ಅಣ್ಣ ದೇವ, ಕಾಳಗಕ್ಕೆ ನಡೆ, ಭೂಪಾಲಕ ರನ್ನು ಜಯಿಸು ಎ೦ದಳು. - ( ತಂಗೀ, ಹೇಳಮ್ಮಾ ತಾಯ, ನಿನಗೆ ಈ ಸಂಗತಿಯನ್ನು ಯಾರು ಹೇಳಿದರು ? ಆತ ಸಾರಥಿತನದ ಕೆಲಸದಲ್ಲಿ ಸಮರ್ಥನೆ ? ಸಮರ್ಥನಾದರೆ ಮುಂದೆ ಮಂಗಳವುಂಟು; ಕಾಳಗದಲ್ಲಿ ನಾನು ಅಭಂಗಸಾದೆ. ನನ್ನ ಶೂರತನ ವನ್ನು ನೀನು ಉಳಿಸಿದೆ. ಹೇಳು, ಹೇಳು ” ಎಂದು ಉತ್ತರ ಬಹು ಆತುರ ದಿಂದ ಪ್ರಶ್ನೆ ಮಾಡಿದನು. 14 ಈ ಸೈರಂಧಿ, ನನಗೆ ಹೇಳಿದಳು. ಇಂದ್ರನ ನಂದನ (ಖಾಂಡವ) ವನವನ್ನು ಸುಡುವಾಗ ಈತನು ಪಾರ್ಥನಿಗೆ ಸಾರಥಿಯಾಗಿದ್ದನಂತೆ. ಈ ________________

ಉತ್ತರ ಕುಮಾರ ವಿಚಾರ ನನಗೆ ಗೊತ್ತಿಲ್ಲ ; ಸೈರಂಧಿ ಹೇಳಿದ್ದು, ಹಿಂಜರಿಯದೆ ನಮ್ಮ ಬೃಹನ್ನಳೆಯನ್ನು ಕರಸು ' ಎಂದು ಉತ್ತರೆ ಉತ್ತರ ಕೊಟ್ಟಳು. - ಆ ಮಾತು ಕೇಳಿ ಲೇಸಾಯ್ಕೆಂದು ನುಡಿದು, ಉತ್ತರನು ಸೈರಂಧಿಯ ಕಡೆ ತಿರುಗಿದನು, ಅವಳನ್ನು ಕುರಿತು, “ ಸಾರಥಿಯನ್ನು ಕೊಟ್ಟು ನನ್ನ ನ್ನುಳಿಸಿದೆ, ನೀನು ಮಾಡಿದ್ದು ಲೇಸಾಯಿತು. ಇನ್ನು ಕೌರವನ ಕರುಳು ಬಗೆದುಬಿಡುತ್ತೇನೆ. ತಡಮಾಡದೆ ನೀನೆ ಹೋಗಿ ಪಾರ್ಥಸಾರಥಿಯನ್ನು ಕರೆದುಕೊಂಡು ಬಾ ” ಎಂದು ಪರಮೋಶಾಪದಿಂದ ನುಡಿದನು. ಆಕೆ, “ಆ ವೀರ ನನ್ನನ್ನು ಲೆಕ್ಕಿಸುವುದಿಲ್ಲ. ನಿಮ್ಮ ತಂಗಿಯನ್ನ ಕಳಿಸಿ ಕರಸಿಕೊಳ್ಳಿ ” ಎಂದಳು. ಆಗ ಉತ್ತರ ಕುಮಾರನು ತಂಗಿಗೆ, ( ಅಮಾ ನೀನೆ ಹೋಗಿ ಸಾರಥಿಯನ್ನು ಕರೆದುಕೊಂಡು ಬಾ ?? ಎಂದು ಕೇಳಿದನು. ಉತ್ತರೆ ಒಪ್ಪಿಕೊಂಡು ತನ್ನ ಗುರುವಿನೆಡೆಗೆ ನಡೆದಳು. - ಅವಳ ಬರವನ್ನು ಕಂಡು ಅರ್ಜುನನು, ಉತ್ತರೇ, ಕುಮಾರೀ ! ಇದೇನು, ರಭಸದಿಂದ ಬಂದೆ ? ಈ ರಭಸ ಯಾವುದೋ ದೊಡ್ಡ ಕಾರ್ಯ ವನ್ನು ಸೂಚಿಸುತ್ತದೆ. ಅದೇನು ? ” ಎಂದು ಕೇಳಿದನು. ರಾಜಕುಮಾರಿ * ಬೇರೆ ಏನೂ ಇಲ್ಲ. ನನ್ನ ಮಾತನ್ನು ಹುರುಳಿಲ್ಲದ್ದೆಂದು ಕಡೆಗಣಿಸದೆ ನಡಸಿ ಕೊಡುವುದಾದರೆ ಹೇಳುತ್ತೇನೆ ” ಎಂದಳು, “ಮಗಳೇ, ನಿನ್ನ ಮಾತನ್ನು ಮಾರಬಲ್ಲೆನೇ, ನಾನು ? ಎಂದು ಅರ್ಜುನ ಅವಳಿಗೆ ನಂಬುಗೆ ಹೇಳಿ ದನು, ಉತ್ತರೆ ಧೈರ್ಯಗೊಂಡು ಹೀಗೆಂದಳು : “ಹಸ್ತಿನಾಪುರದ ಅರಸುಗಳು ದಂಡೆತ್ತಿ ಬಂದರು. ಕಾವಲುಗಳಲ್ಲಿ ಮೇಯುತ್ತಿದ್ದ ಲಕ್ಷಾಂತರ , ಗೋವು ಗಳನ್ನು ಹಿಡಿದುಕೊಂಡರು. ದನಗಾವಲಿನ ಗೊಲ್ಲಪಡೆ ಕಾದಿ ಮಡಿಯಿತು. ನಮ್ಮಣ್ಣ ಕಾಳಗವಾಡಿ ತುರುಗಳನ್ನು ಬಿಡಿಸಿಕೊಂಡು ಬರುತ್ತಾನೆ. ಅವನಿಗೆ ಸಾರಥಿಯಿಲ್ಲ. ನೀವು ಆ ಅರ್ಜುನನ ಸಾರಥಿಯೆಂದು ಕೇಳಿದೆವು. 'ಇನ್ನು ಮುಂದಿನದು ನಿಮಗೆ ಗೊತ್ತು ” ಎಂದು ನುಡಿದು ಮುಖ ನೋಡುತ್ತ ನಿಂತಳು, ಆ ಕುಮಾರಿಯು ಮತು ಕೇಳಿ ಅರ್ಜುನನು, ಈ ನಡೆ ; ನಿನ್ನ ಮಾತನ್ನು ಮಾರಬಲ್ಲೆನೆ ? ಹಿಂದೆ ನಾನು ಸಾರಥಿಯಾಗಿದ್ದದ್ದು ನಿಜ. ನೋಡೋಣ ” ಎಂದು ನುಡಿಯುತ್ತ ಅವಳ ಜೊತೆಯಲ್ಲಿ ಉತ್ತರನ ಓಲಗಕ್ಕೆ ಬಂದನು. ________________

ಕನ್ನಡ ಸಾಹಿತ್ಯ ಚಿತ್ರಗಳು ಬೃಹನ್ನಳೆಯನ್ನು ಕಂಡು ಉತ್ತರ ಹರ್ಷಗೊಂಡನು. ಹತ್ತಿರ ಕರೆದು ಮನ್ನಣೆ ಮಾಡಿ ಕಾರ್ಯವನ್ನು ತಿಳಿಸಿದನು. * ಎಳೆ ಬೃಹನ್ನಳೇ, ನನಗೆ ಅಗ್ಗಳೆಯರೊಡನೆ ಕಾಳಗ ತೊಡಕಿಕೊಂಡಿದೆ. ನನ್ನ ಸಾರಥಿ ಸತ್ತು ಹೋದನು, ನೀನು ಸಾರಥಿಯಾಗಿ ನನ್ನನ್ನು ಜಿಸಬೇಕು. ನೀನು ಸಮರ್ಥ ; ಪಾರ್ಥನ ಸಾರಥಿ, ನೀನು ಒಲಿದು ಮೆಚ್ಚುವಂತೆ ಶತ್ರು ಸೇನೆಯೊಡನೆ ಕಾಳಗಮಾಡಿ ತೋರಿಸುತ್ತೇನೆ ಎಂದನು. ಅರಿಯದ ಹುಡುಗನಿಗೆ ವಿವೇಕವನ್ನು ಸೂಚಿಸಲೋ ಎಂಬಂತೆ ಆರ್ಜು ನನು, “ ಈಗ ನನಗೆ ಭರತ ಏದ್ಯೆಯ ಪರಿಚಯವೇನೋ ಚೆನ್ನಾಗಿದೆ. ಸಾರಥಿತನವನ್ನು ಮಾಡಿ ಎಷ್ಟೋ ಕಾಲ ಕಳೆಯಿತು. ಅದು ಮರೆತು ಹೋಗಿದೆ. ಅಲ್ಲದೆ ಈಗ ಎದುರಿಸಬೇಕಾದ ಶತ್ರುಗಳು ಸಾಮಾನ್ಯರಲ್ಲ ; ಭೀಷ್ಮ ಮೊದಲಾದವರು. ಕೈ ಮನ ಬರಡರಾದವರು ಅವರೆದುರು ನಿಲ್ಲುವುದು ಕಷ್ಟ. ರಣವೆಂಬುದು ಬರಿ ಸೂರೆಯಲ್ಲ ಎಂದು ಮರುನುಡಿದನು. ಉತ್ತರ ಸಾರಥಿಯ ಹೆದರಿಕೆಯನ್ನು ಮುಂದುಮಾಡಿ, ನಾನಿರು ವಾಗ ಭೀಷ್ಮಾದಿಗಳು ನಿನಗೇನು ಮಾಡಿಯಾರು ? ಅಳುಕಬೇಡ, ಒಂದು ನಿಮಿಷದಲ್ಲಿ ಕಾಳಗವನ್ನು ಗೆದ್ದು ಬಿಡುತ್ತೇನೆ. ನಾನು ಯಾರೆಂಬುದನ್ನು ತಿಳಿಯೆಯಲ್ಲಾ ! ನೀನು ಸಾರಥಿಯಾಗು, ಸಾಕು !' ಎಂದು ತನ್ನ ಪ್ರತಾಪ ವನ್ನು ಮೆರೆದನು. “ವೀರನಹುದು, ರಾಜಕುಮಾರಾ, ಕಿರುಹರೆಯವಲ್ಲವೆ ನಿನಗೆ ? ಎಂದು ಬೃಹನ್ನಳೆ ಸಾಧಿತನಕ್ಕೆ ಒಪ್ಪಿದನು. ಒಳ್ಳೆಯದೊಂದು ರಥವನ್ನು ತರಿಸಿ, ಲಾಯಕ್ಕೆ ಹೋf} ಉತ್ತಮಾಶ್ವಗಳನ್ನು ಆಯ್ದು ತಂದು ಹೂಡಿದನು ; ಕಲಿಪಾರ್ಥ ರಥವನ್ನೇರಿದನು, ಉತ್ತರ ಕುಮಾರನಿಗೆ ಶೃಂಗಾರಮಾಡಿ ಅಂಗನೆಯರು ಮಂಗಳಾರತಿಯೆತ್ತಿದರು, ರಾಜಕುಮಾರನು ಸರ್ವಾಂಗ ಶೃಂಗಾರದಿಂದ ಹೊಳೆಹೊಳೆಯುತ್ತ ಬಂದು ರಥವನ್ನು ಹತ್ತಿ ಹೊಂಗೆಲಸದ ಅಂಗಿಯನ್ನು ಪಾರ್ಥನಿಗೆ ಕೊಟ್ಟನು. ತಾನು ಸೀಸಳ ಕವಚಗಳನ್ನು ಅನು ಗೊಳಿಸಿಕೊಂಡು ಹೊರಡಲು ಸಿದ್ದನಾದನು, ಅರ್ಜುನ ಅಂಗಿಯನ್ನು ತಲೆಕೆಳಕಾಗಿ ತೊಟ್ಟುಕೊಳ್ಳಹೋಗಲು ಕಂಡು ದೆಂಗಸರೆಲ್ಲ ಕೈತಟ್ಟ ಚಪ್ಪಾಳೆ ಹೊಡೆಯುತ್ತ ಘಳ್ಳೆಂದು ನಕ್ಕರು, ________________

ಉತ್ತರ ಕುಮಾರ ಪಾರ್ಥ ನಾಚಿದಂತೆ ತಲೆಬಾಗಿ ನಿಂತನು. ಆತನು ಮತ್ತೆ ಮೇಲ್ಮುಖವಾಗಿ ತೊಡುತ್ತಿರಲು ಉತ್ತರೆ ನಸುನಕ್ಕಳು. ಆಗ ಉತ್ತರನು, “ ಸಾರಥಿ ಅಂಯ. ತಪ್ಪೇನು ? ” ಎಂದು ನುಡಿಯುತ್ತ ತಾನೆ ಅವನಿಗೆ ಕವಚ ತೊಡಿಸಿದನು. “ ಕವಚ ತೊಡುವುದಕ್ಕೆ ಬಾರದವನು ಅವನು ಹೇಗೆ ಯುದ್ಧದಲ್ಲಿ ಸಾರಥಿತನ ಮಾಡುತ್ತಾನೋ ! ” ಎಂದು ನಾರಿಯರೆಲ್ಲ ಚಿಂತಿಸುತ್ತಿದ್ದರು. “ ನಮ್ಮಣ್ಣ ಯುದ್ದವನ್ನು ಗೆಲ್ಲುತ್ತಾನೆ. ಶತ್ರು ವೀರರ ರತ್ನಾಭರಣ ಅಲಂಕಾರಾದಿಗಳನ್ನು ನನಗಾಗಿ ತೆಗೆದುಕೊಂಡು ಬಾ, ಸಾರ ?' ಎಂದು ಉತ್ತರೆ ಗುರುವನ್ನು ಕೇಳಿಕೊಂಡಳು. ಅರ್ಜುನ ನಸುನಗುತ್ತ ಒಪ್ಪಿಗೆ ಸೂಚಿಸಿದನು. ಇಷ್ಟಾದ ಮೇಲೆ ಪಾರ್ಥ ಸಾರಥಿಯಾಗಿ ರಥ ನಡಸಿದನು. ಆ ಜವ ಗುದುರೆಗಳು ಗಾಳಿಯನ್ನೂ ಮುಂದೆ ನನ್ನು " ಹಾರಿದವು. ತೇರೋಟದ ಆ ವೇಗವನ್ನು ಕಂಡು, “ ಹೊಸ ಪರಿಯ ಸಾರಥಿ. ಇವನ ಸಂಗಡ ಬರಲು ನನಗೆ ಅಸದಳ ” ಎಂದುಕೊಂಡು, ಊರಲ್ಲಿ ಉಳಿದಿದ್ದ ಪರಿವಾರದ ದಂಡು ಹೇಳದೆ ಕೇಳದೆ ಹಿಂದೆ ನಿಂತಿತು. ತೇಲೆ ಗಾಳಿಯಿಂದೆದ್ದ ದೂಳಿನಿಂದ ದಿಕ್ಕು ಗಳನ್ನೆಲ್ಲ ಕಪಿಸುತ್ತ ಅರ್ಜುನ ಕೌರವರಾಯನ ಸೇನೆಗೆ ಎದುರಾಗಿ ನಡೆದನು. ಜಾಗೆ ಆತಿ ವೇಗದಿಂದ ರಥ ಓಡುತ್ತಿರಲು ಸ್ವಲ್ಪ ಹೊತ್ತಿನಲ್ಲಿ ಉತ್ತರ ಕುಮಾರನಿಗೆ ದೂರದಲ್ಲಿ ಕೌರವ ಸೈನ್ಯ ಸಾಗರ ಗೋಚರವಾಯಿತು. ಆನೆ ಗಳೊಡ್ಡು ದೊಡ್ಡ ದೊಡ್ಡ ಬಂಡೆಗಳ ಹಾಗೆ ನಿಂತಿದ್ದವು ; ಕುದುರೆಗಳ ಸಾಲುಗಳು ತೆರೆತೆರೆಯಾಗಿ ಕಂಗೊಳಿಸುತ್ತಿದ್ದವು; ನಡುನಡುವೆ ತೇರುಗಳ ಹೊರಳಿಗಳು ಸುಳಿಗಳನ್ನು ಹೋಲುತ್ತಿದ್ದವು; ಮೇಲೆತ್ತಿದ ಬೆಳ್ಕೊಡೆಗಳು ನೊರೆಗುಳ್ಳೆಗಳಿಗೆಣೆಯಾದವು ; ಓಡಾಡುವ ಭಟಸಮೂಹ ಜಲಚರಗಳಂ ತಿರಲು ಬಗೆಬಗೆಯ ರಣವಾದ್ಯಗಳ ಅಬ್ಬರ ಕಡಲ ಮೊರೆತದಂತೆ ಕಿವಿಯೋಲೆ ಯುತ್ತಿತ್ತು. ವಿರಾಟಕುಮಾರನ ಕಣ್ಣುಗಳಿಗೆ ವೀರರು ಝಳಪಿಸುವ ಕತ್ತಿಯ ಹೊಳಪು ಕಿಡಿಯಾಗಿಯೂ ಕಡಕುಗಳು ಕೆಚ್ಚನೆ ಉರಿಯಾಗಿಯೂ ಭಟರ ಉಗ್ಗಡದ ರೌದ್ರ ರಭಸ ಛಟಛಟ ಧ್ವನಿಯಾಗಿಯೂ ಮೇಲೆದ್ದು ಕವಿಯುವ ದೂಳು ಹೊಗೆಯ ರಾಶಿಗಳಾಗಿಯೂ ಇದನ್ನೆಲ್ಲ ಒಳಕೊಂಡ ಆ ಮಹಾಸೈನ್ಯ ದೊಡ್ಡದೊಂದು ಕಾಡುಕಿಚ್ಚಾ ಗಿಯೂ ಕಾಣಿಸಿತು. “ ಇದೇನು ಕಾಲಕೂಟದ ________________

ಕನ್ನಡ ಸಾಹಿತ್ಯ ಚಿತ್ರಗಳೂ ತೊರೆಯೋ ? ಕಾಲರುದ್ರನ ಹಣೆಗಣ್ಣ ಬೆಂಕಿಯೋ, ಕಾಣೆ. ಎಂದು ಕೊಂಡು ಸುಕುಮಾರ ಹೆದರಿದನು. ಹೆದರಿ ಸಾರಥಿಯನ್ನು ಕುರಿತು, “ ಕಣ್ಣುಗಳು ಈ ಪಡೆಗಡಲನ್ನು ಹಾಯಲಾರವು ; ಮನಸ್ಸು ಹೊಕ್ಕು ಈಸಲಾರದು. ಇಂಥ ಪಡೆಯನ್ನು ಎದುರಿಸಿ ಬದುಕಲಾಗುವುದೇ ? ಒಡಲೊ೦ದುಳಿದಿದ್ದರೆ ಮುಂದೆ ಸುಖ ವನ್ನು ಕಾಣಲಾಡೀತು. ನಲವೇ ಪಡೆಗಳನ್ನಿದಿತೋ ಎಂಬಂತೆ ಹರಡಿದೆ ಈ ಸೇನೆ, ಇದರೊಡನೆ ಕಾದುವವನು ಮೃಡನೇ ಆಗಿರಬೇಕು. ನಾವು ಕಾದಿ ಗೆದ್ದದ್ದಾಯಿತು, ಈ ಬಲಕ್ಕೆ ಇಗೋ, ನಮಸ್ಕಾರ ಮಾಡುತ್ತೇನೆ. ಅಯ್ಯಾ ಬೃಹನ್ನಳೇ, ಹಸಿದ ಮಾರಿಯ ಮಂದೆಯೊಳಕ್ಕೆ ನುಸುಳಿ ಬಂದ ಕುರಿಯಂತಾಗಿದ್ದೇನೆ, ಕುದುರೆಗಳನ್ನೊಡಿಸಬೇಡ, ಚಮ್ಮಟಗೆಯನ್ನು ಬಿಸುಟುಬಿಡು. ನನ್ನಿಂದ ಕದನ ಸಾಗದು, ಕೌರವನು ಅಸಮಬಲನಯ್ಯಾ, ರಥವನ್ನು ಹಿಂದಿರುಗಿಸು ಎಂದು ನುಡಿದನು, ಅದನ್ನು ಕೇಳಿ ಅರ್ಜುನ “ ಎಲೆ ಕುಮಾರ, ಇದೇನು, ನೀನು ಹೇಳು ವುದು ? ಮೊದಲ ಮುತ್ತಿನಲ್ಲಿ ಹಲ್ಲು ಮುರಿದಂತಾಯಿತು, ಕಾಳಗ ತೊಡಗು ವುದಕ್ಕೆ ಮೊದಲೆ ಸಮರಭೀತಿಯನ್ನು ತಳೆದೆಯಲ್ಲ ! ಅಳುಕಬಾರದು. ನಿಮ್ಮ ತಂದೆಯ ಕುಲಕ್ಕೆ ಕುಂದು ತರಬೇಡ. • ಮನಸ್ಸಿನಲ್ಲಿ ಗೆಲುವು ತಂದುಕೊ, ಗೆಲುವನದಿಂದ ಕಾದು ” ಎಂದು ಧೈರ್ಯ ಹೇಳುತ್ತ ರಥ ವನ್ನು ಬೇಗ ಬೇಗ ಮುಂಬರಿಸಿದನು. ತೇರು ಮುಂದೆ ಹರಿದಂತೆಲ್ಲ, ಕುರುಬಲದ ಹತ್ತಿರ ಹತ್ತಿರಕ್ಕೆ ನಡೆ ಬಂತಲ್ಲ ಕುಮಾರನಿಗೆ ತನು ಭಾರಯಿಸಿತು ; ಕೂದಲು ನಿಮಿರಿ ನಿಂತಿತು ; ಮೈ ಬಿಸಿಯಾಯಿತು ; ಕೈ ಕಾಲು ನಡುಗಿತು ; ಭಯದ ತಾಪದಿಂದ ನಾಲ ಗೆಯ ನೀರಾರಿ ತುಟಿಯೊಣಗಿಹೋಯಿತು. ಕಣ್ಣೆವೆ ಸೀದು : ಇನ್ನು ನೋಡಲಾರಿ ' ನೆಂದು ಆ ಸುಕುಮಾರ ಕೈಯಿಂದ ಮುಖ ಮುಚ್ಚಿಕೊಂಡು ಬಿಟ್ಟನು. ಮುಖ ಮುಚ್ಚಿಕೊಂಡೇ ಸಾರಥಿಗೆ ಹೀಗೆ ಹೇಳಿದನು : ಇದೇಕೆ, ಸಾರಥೀ, ರಥವನ್ನು ಮುಂದಕ್ಕೆ ನೂಕಿ ನನ್ನ ಗಂಟಲು ಕೊಯ್ಯುತ್ತೀಯೆ? ಅಯ್ಯೋ ! ನಿನಗೇನು ಕಣ್ಣಂಗಿಹೋಯಿತೆ? ನೋಡು ಈ ಮಹಾಬಲವನ್ನು , ________________

ಉತ್ತರ ಕುತ ಇದು ದೇವತೆಗಳಿಗೂ ಅಸಾಧ್ಯವಾದ್ದು. ನಿನಗೆ ಎಳ್ಳಷ್ಟೂ ವಿವೇಕವಿಲ್ಲ, ವಾಷೆಯನ್ನು ಬಿಗಿಹಿಡಿ, ಕುದುರೆಗಳನ್ನು ತಿರುಗಿಸು. * ಅರ್ಜುನ ಆ ನುಡಿಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ರಥ ಹತ್ತೆಂಟಲ್ಲಿ ಮುಂದೆ ಹರಿಯಿತು, ಉತ್ತರಕುಮಾರನ ಕೈ ನರ ಬಿಗಿಸಡಿಲಿ ಹಿಡಿದ ಬಿಲ್ಲಂಬು ಗಳು ಬಿದ್ದು ಹೋದವು. ಅಖೆ ಕೊಲೆಗಾರ ಸಾರಥೀ ! ಹಿಡಿ ಕುದುರೆ ಗಳನ್ನು, ಹೀಗೆ ಹೇಳುತ್ತಿರುವ ನಾವು ನಿನಗೆ ಹಗೆಗಳೆ ? ಒಡೆಯರಲ್ಲವೆ ? ಸ್ವಾಮಿದ್ರೋಹಕ್ಕೆ ತೊಡಗಿದೆಯಲ್ಲ. ಲೇಸು, ಲೇಸು ” ಎಂದು ಕೂಗಿದನು. ಅದಕ್ಕೂ ಅರ್ಜುನ ಗಮನ ಕೊಡಲಿಲ್ಲ. ನಗುನಗುತ್ತ ರಥವನ್ನು ಮುಂದೆ ಬಿಟ್ಟನು, ನಾಲ್ಕೆಂಟಡಿ ಹೋಗುವಷ್ಟರಲ್ಲಿ ರಾಜಕುಮಾರನಿಗೆ ದಿಕ್ಕು ತೋಚದಾಯಿತು. ಮುಂಜೆರಗನ್ನು ಸರಿಮಾಡಿ ಕಟ್ಟಿಕೊಂಡು ಮೆಲ್ಲನೆ ರಥದ ಹಿಂದುಗಡೆಗೆ ಬಂದು ನಿಂತು ಕೆಳಕ್ಕೆ ಧುಮುಕಿ, 1 ಬದುಕಿದೆ ” ಎಂದು ಕೊಂಡು, ಮಂಡೆಯ ಕೂದಲು ಬಿಚ್ಚಿ ಹಾರಾಡುತ್ತಿದ್ದರೂ ಲಕ್ಷವಿಲ್ಲದೆ ಟೋಟದಲ್ಲಿ ಓಡಿಹೋದನು. ಕಲಿ ಪಾರ್ಥ ಅದನ್ನು ಕಂಡನು. ಈ ಕೇಡಾಡಿ ಕೂದಲು ಕೆದರಿ ಕೆಟ್ಟೋಡುತ್ತಿದ್ದಾನೆ. ಇವನನ್ನು ಹಿಡಿಯಬೇಕು.” ಎಂದು ನಿಶ್ಚಯಿಸಿ ಕೂಡಲೆ ರಥದಿಂದಿಳಿದು ಸೂಠಿಯಿಂದ ಅವನನ್ನು ಅಟ್ಟಿ ಕೊಂಡು ಹೋದನು. ಕೌರವಸೇನೆ ಇದನ್ನೆಲ್ಲ ಕಂಡು, ಎಲೆಲೇ, ಕಾದ ಬಂದ ನೀರನ ಪರಾಕ್ರಮವನ್ನು ನೋಡು, ನೋಡು !” ಎಂದು ನಗೆಗಡಲಿನಲ್ಲಿ ಮುಳುಗಿ ಬಿಟ್ಟಿತ್ತು, ಅರ್ಜುನನು ಬೆಂಬತ್ತು ವುದನ್ನು ಕಂಡು, 'ಇದಾವನೋ ಬೆಂಬತ್ತಿ ಹೋಗುತ್ತಿದ್ದಾನೆ ; ಸುಭಟನ ಹಾಗೆ ಕಾಣುತ್ತಾನೆ. ಇವನಾವನೋ ತಿಳಿ ಯುವುದಿಲ್ಲ. ಆಕಾರದಲ್ಲಿ ಅರ್ಜುನನನ್ನು ಹೋಲುತ್ತಿದ್ದಾನೆ ?” ಎಂದು ಗಜ ಬಜಿಸಿದರು. “ ಈತ ಸಾರಥಿಗಿಂತ ಮೇಲಾದವನು, ಓಡುವವನು ಉತ್ತರ, ಅರ್ಜುನನಿಗೆ ಸಾರಥಿತನ ಎಲ್ಲಿ ಬಂತು ? ನೋಡಿದರೆ ನಪುಂಸಕ ವೇಷ ಬೇರೆ ಕಾಣುತ್ತಿದೆ” ಎಂದು ಕೆಲವರು ತರ್ಕಿಸಿದರು, ಈ ತರ್ಕ ವಿತರ್ಕಗಳನ್ನು ಕೇಳಿ ಕರ್ಣ ಕಡು ಕೋಪದಿಂದ, “ ಈತ ಅರ್ಜುನನಾಗಲಿ, ಇಂದ್ರನಾಗಲಿ, ರಾಮನಾಗಲಿ-ಯಾರೇ ಆಗಲಿ, ಮೇಲೆ ಬಿದ್ದು ಕೆಣಕಿದರೆ ಕತ್ತರಿಸಿ ಹಾಕು ತೇನೆ” ಎಂದು ಗರ್ಜಿಸಿದನು. ________________

ಕನ್ನಡ ಸಾಹಿತ್ಯ ಚಿತ್ರಗಳು - ಇತ್ತ ಆರ್ಜುನನು ಓಡುವ ಉತ್ತರವನ್ನು ಬೆಂಬತ್ತಿ, “ಹೊದೆಯಾದರೆ ನಿನ್ನ ತಲೆಯನ್ನು ಸುತ್ತಿ ಬಿಸುಡುತ್ತೇನೆ. ನಿಲ್ಲು ನಿಲ್ಲು ” ಎಂದು ಬೆದರಿ ಸಿದನು. ಉತ್ತರ ಹಿಂದಿರುಗಿ ನೋಡಿದನು. ಸಾರಥಿ ಬೆನ್ನಟ್ಟಿ ಬರುತ್ತಿರು ವುದು ಕಾಣಿಸಿತು. ಮನಸ್ಸಿನಲ್ಲಿ, * ಇವನು ಸಾರಥಿಯಲ್ಲ, ಮೃತ್ಯು, ಈ ವಾಸಿಯನ್ನು ಎಲ್ಲಿ ತಂದೆನೋ ! ” ಎಂದುಕೊಂಡು ನಿಲ್ಲದೆ ಮತ್ತೆ ಓಡ ತೊಡಗಿದನು. ಪಾರ್ಥನು ಸರಸರನೆ ನುಗ್ಗಿ ನೂರು ಹೆಜ್ಜೆಯಿಡುವಷ್ಟರಲ್ಲಿ ಅಟ್ಟ ಅವನನ್ನು ಹಿಡಿದುಬಿಟ್ಟನು, ಒಡಿದು, ಇದೇನು ಮಾಡಿದೆ ? ನೀನು ಕ್ಷತ್ರಿಯ ಕುಲದಲ್ಲಿ ಹುಟ್ಟಲಿಲ್ಲವೇ ? ಬಹು ದಿಟ್ಟತನದಿಂದ ಹೆಂಗಸರೆದುರಿನಲ್ಲಿ ಹೊಟ್ಟು ಗುಟ್ಟಿದೆಯಲ್ಲ ! ಹಗೆಗಳೆದುರಿಗೆ ಆ ದಿಟ್ಟತನವನ್ನೆಲ್ಲ ತೊರೆದು ಬಿಟ್ಟೆ, ದುರಾತ್ಮಾ , ವಿರಾಟನ ವಂಶವನ್ನು ಮುರಿದೆಯಲ್ಲೋ..!' ಎಂದು ಮೂದಲಿಸಿದನು. ತನ್ನ ಕೋಣೆಯ ಫಲಿದೆ ಸಾರಥಿಯ ಕೈಗೆ ಸಿಕ್ಕಿಬೀಳಲು ಉತ್ತರ ಭಯಭ್ರಾಂತನಾದನು. ಪಲ್ಲ, ಹಿಂದು ಬಾಯೊಳಗೆ ಬೆರಳಿಟ್ಟು ಅಳುಕಿ ತಲೆ ಬಾಗಿಸಿದನು, - ಸಾರಥಿ, ನನ್ನನ್ನು ಬಿಟ್ಟು ಕಳಿಸು. ನಾನು ಮತ್ತೆ ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದೆನೆಂದು ತಿಳಿದುಕೊ, ಕಾಳಗದಲ್ಲಿ ಈ ಒಡ್ಡನ್ನು ಮುರಿಯುವ ಬಳ್ಮೆ ಯಾರಿಗಿದೆ ? ಅವರಿವರಿಂದ ನನ್ನನ್ನು ಕೊಲ್ಲಿಸಬೇಡ. ನೀನೆ ಇಂದು ಕೆಡವಿಬಿಡು. ಇಗೋ, ಕಳಾರಿ” ಎಂದು ಆತಿ ದೈನ್ಯದಿಂದ ಬೇಡಿಕೊಂಡನು. ಅವನ ಆ ಅವಸ್ಥೆಯನ್ನೂ ಕಿ೦ಗಚೇಷ್ಟೆಯನ್ನೂ ಕಂಡು ಅರ್ಜುನ ನಂಥ ಗಂಭೀರ ಪುರುಷನಿಗೂ ನಗು ಒತ್ತರಿಸಿ ಬಂತು. ಒಡಲೊಡೆಯು ವಂತೆ ಉಕ್ಕುವ ಆ ನಗುವನ್ನು ತಡೆದುಕೊ೦ಡು, " ಎಲವೋ, ನೀನು ಸಭೆ ಯಲ್ಲಿ ಹೆಂಗಸರ ಮುಂದೆ ಬಾಯಿಗೆ ಬಂದಂತೆ ಕರಟ, ಈಗ ಅದೇನಾ ಯಿತು ? ಶತ್ರು ಸೇನೆಯ ರಿಯದೆ ನಾಡ ನರಿಯ ಹಾಗೆ. ನನ್ನ ಮುಂದೆ ಹಲ್ಲು ಕಿರಿದರೆ ಬಿಡುವೆನೆ ? ಏಳು, ಕಾದು ಹೋಗು, ನಾಚಿಕೆಯಿರಬೇಡವೆ ನಿನಗೆ ? ವೀರರಾದವರು ಈ ರೀತಿ ಜೀವಗಳ್ಳರ ದಾರಿ ಹಿಡಿಯುತ್ತಾರೆಯೆ ? ನಾವು ನಪುಂಸಕರು : ಆದರೂ ಸಾಏಗ ದೆವೇನು, ನೋಡು ” ಎಂದು ಹಂಗಿಸಿ ದನು ; ಚುಚ್ಚಿ ನುಡಿದನು. ________________

ಇತ್ತ ತವಾದ ಉತ್ತರ ಅಕ್ಷಣವೆ, ನಪುಂಸಕರು ನೀವಲ್ಲ, ನಾವು ನೀವು ವೀರರು, ನಾವು ಸಾಯುವವರಲ್ಲ ; ಬದುಕಬೇಕೆಂದಿರುವವರು, ಲೋಕದಲ್ಲಿರುವ ಜೀನ ಗಳ್ಳರಿಗೆಲ್ಲ ನಾವೇ ಗುರುಗಳು " ಎಂದು ಉತ್ತರಕೊಟ್ಟನು. 'ನಮ್ಮನ್ನು ಕಳಿಸಿಬಿಡು ” ಎಂದು ನಾಚಿಕೆ ಬಿಟ್ಟು ಕೇಳಿಕೊಂಡನು.

  • ನಿಮ್ಮ ತಂದೆ ದೊಡ್ಡ ಹೆಸರು ಪಡೆದಿರುವ ದೊರೆ. ನಿನಗೆ ಈಗ ಯುದ್ಧಮಾಡುವ ಸಮಯ ; ಒಳ್ಳೆಯ ಏರುಜವ್ವನ. ಈಗ ಹೀಗೆ ಮಾಡಿ ದರೆ ಅಪಕೀರ್ತಿ ತಪ್ಪದು. ನರಕುರಿಯೇ, ನಡೆ ಕಾಳಗಕ್ಕೆ ” ಎಂದು ನುಡಿ ಯುತ್ತ ಅರ್ಜುನ ಉತ್ಕನನ್ನು ಎಳೆದುಕೊಂಡು ಬಂದನು. ಯುದ್ಧಕ್ಕೆ ಹಿಂಜರಿದರೆ ಆಗುವ ಕೇಡನ್ನೂ ಮುನ್ನುಗಿದರೆ ದೊರೆಯುವ ಮೇಲನ್ನೂ ವಿವರಿಸಿದನು : (ಕಾಳಗಕ್ಕೆ ಬಂದು ಓಡಿಹೋದರೆ, ಹೆಜ್ಜೆಗೊಂದು ಮಹಾ ಪಾತಕ ಸುತ್ತಿಕೊಳ್ಳುತ್ತದೆ. ಮನವೊಲಿದು ಮುನ್ನುಗ್ಗಿ ಕಾದಿದರೆ ಹೆಜ್ಜೆ ಹೆಜ್ಜೆಗೂ ಒಂದೊಂದು ಅಶ್ವಮೇಧ ಯಜ್ಞದ ಫಲ ದೊರಕುತ್ತದೆ. ಕಾದಿಮದಿ ದರೆ ಆ ಶೂರನಿಗೆ ದೇವಯರು ತೊತ್ತು ಗಳಾಗುತ್ತಾರೆ; ದೇವೇಂದ್ರನೇ ಅವನ ಬಿರುದುಗಳನ್ನು ಗ್ಗಡಿಸುತ್ತಾನೆ. ಇಷ್ಟು ಮಹಿಮೆಯನ್ನು ತರುವ ವೀರ ಸ್ವರ್ಗವುಂಟಾಗುತ್ತದೆ” ಎಂದು ಆಸೆ ತೋರಿಸಿದನು.

ಉತ್ತರ ಪಾತಕಕ್ಕೆ ಹೆದರಲಿಲ್ಲ; ಸ್ವರ್ಗಭೋಗಕ್ಕೆ ಮರುಳಾಗಲಿಲ್ಲ, “ ಯುದ್ಧದಲ್ಲಿ ಓಡಿದ್ದರಿಂದ ಬಂದ ಸಾತಕವನ್ನು ಬ್ರಾಹ್ಮಣರು ಕಳೆಯು ತಾರೆ. ಅಶ್ವಮೇಧವನ್ನು ಪ್ರತ್ಯಕ್ಷವಾಗಿಯೇ ಮಾಡಬಹುದು ; ಉಪಾಯ ದಿಂದ ಅದರ ಫಲವನ್ನೇನು ಪಡೆಯಬೇಕಾಗಿಲ್ಲ. ದೇವಸ್ತ್ರೀಯರನ್ನೋಲ್ಲ. ನನಗೆ ನಮ್ಮರಮನೆಯ ನಾರಿಯರೇ ಸಾಕು, ನಮ್ಮ ದೊರೆತನವೇ ನಮಗೆ 'ಇಂದ್ರಪದವಿ, ನನ್ನನ್ನು ಬಿಟ್ಟು ಕಳಿಸು ” ಎಂದು ಅಂಗಲಾಚಿದನು.

  • ಮೈ ಕೈ ಬೆಳಸಿಕೊಂಡು ಮನೆಯಲ್ಲಿ ಸೂಳೆಯರ ಮುಂದೆ ಸಿಕ್ಕಿದಂತೆ ಪರಾಕ್ರಮದ “ಮಾತಾಡಿ ಬಂದು, ಇಲ್ಲಿ ಬಾಣವನ್ನೂ ಬಿಡದೆ ಕಾಲ ವೇಗ ತೋರಿಸಿ ಬದುಕಿ ಓಡಿಹೋದರೆ, ಆಮೇಲೆ ನಿನ್ನೊಲಗದಲ್ಲಿ ಕೂರುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವೆ ?” ಎಂದು ಅರ್ಜುನ ಚುಚ್ಚಿ ನುಡಿದನು. ಉತ್ತರ ಅದಕ್ಕೂ ಜಗ್ಗಲಿಲ್ಲ. “ ನಾಚಿಕೆಯ ಮಾತನ್ನು ನನಗೆ ಹೇಳಬೇಡ. ಕಾಳಗ ಮಾಡಲು ನಾನಂಜುತ್ತೇನೆ. ನೀನು ನಮ್ಮ ಅನ್ನ ವುಂಡವನು. ________________

- ಕನ್ನಡ ಸಾಹಿತ್ಯ ಚಿತ್ರಗಳು ಶತ್ರುವಿನ ನಗೆ ನೀನೆ ನನಗೆ ಮೃತ್ಯುವಾಗುವುದು ಸರಿಯೇ ? ನನ್ನನ್ನು ಕೊಲ್ಲದೆ ಬಿಟ್ಟು ಕಳಿಸು. ನೀನು ಕೇಳಿದ್ದು ಕೊಡುತ್ತೇನೆ, ಅಗ್ರಹಾರ ಮಾನ್ಯಾದಿಗಳು ಬೇಕೆ ? ಏಕಾವಳಿಯಲಂಕಾರಗಳು ಬೇಕೇ ? ರಥ ಬೇಕೆ ? ಲಲನೆಯರು ಬೇಕೆ ? ಏನು ಬೇಕು ಹೇಳು, ನಾನು ಅರಮನೆಯಲ್ಲಿ ಅದ ನೆಲ್ಲ ನಿನಗೆ ಈಸಿ ಕೊಡುತ್ತೇನೆ, ಈಗಲಾದರೂ ಬಿಡು ನನ್ನನ್ನು ” ಎಂದು ಕಾಡಿದನು. ಪಾರ್ಥನ ಸಮ್ಮತಿ ಸದಿರಲು, “ ಎಲೆ ಬೃಹನ್ನಳೇ, ನಮ್ಮ ತಂದೆ ನಿನ್ನನ್ನು ಕಾಪಾಡಿದ್ದಕ್ಕೆ ಬಹುಬೇಗ ಪ್ರತ್ಯುಪಕಾರ ಮಾಡಿದೆ. ಕಲ್ಲು ಮನಸ್ಸಿನವನಾದೆಯಲ್ಲಾ !?” ಎಂದು ನಿಟ್ಟುಸಿರು ಬಿಡುತ್ತ ನಿಂದಿಸಿದನು. . “ಎಲಾ, ದೊರೆಗಳ ಹೊಟ್ಟೆಯಲ್ಲಿ ಹುಟ್ಟಿ ಕಾಳಗದಲ್ಲಿ ಹೀಗೆ ಒಡಲಿ ನಾಸೆಗೆ ಮರುಗಿದವರು ಹಿಂದೂ ಇಲ್ಲ, ಮುಂದೂ ಇಲ್ಲ. ಮನುಷ್ಯ ಬಂಜೆ ಮಾತನ್ನಾಡಬಹುದೆ ? ೬೦ಥವನ ಬಾಳನ್ನು ಸುಡಬೇಕು ! ಎಲವೋ ರಾಜ ಬಾಹಿರ, ರಥದ ಬಳಿಗೆ ನಡೆ, ನೀನೇನು ಕಾದಬೇಡ, ಬಾ, ಮಾರ್ಬಲ ದೊಡನೆ ನಾನು ಕಾಳಗ ಮಾಡುತ್ತೇನೆ. ನೀನು ಸಾರಥಿಯಾಗು ; ಸಾಕು !! ಎಂದು ಉತ್ತರನಿಗೆ ಧೈರ್ಯ ಹೇಳಿ ಅವನ ಅಂಜಿಕೆಯನ್ನು ಹೋಗಲಾಡಿ ಸಲು ಯತ್ನಿಸಿದನು. - ಉತ್ತರನಿಗೆ ನಂಬಿಕೆಯಾಗಲಿಲ್ಲ. ತನ್ನನ್ನು ಕಣಕ್ಕೆ ನೂಕಲು ಇದು ಇನ್ನೊಂದು ತಂತ್ರವೆಂದು ಭಾವಿಸಿದನು. ಈ ಮೊದಲು ನೀನು ಯಾವ ರಾಜರನ್ನು ಕಾದಿ ಗೆದ್ದಿರುವೆ ? ಸುಲು ಬೃಹನ್ನಳೇ, ನೀನು ನಪುಂಸಕ. ನಿನಗೆ ಈ ಕದನ ನಾಟ್ಯ ವಿದ್ಯವಲ್ಲ. ನನ್ನ ಓರಗೆಯ ಹುಡುಗರಿಗೆ ಇನ್ನೂ ತೇರು ನಡೆಸುವುದಕ್ಕೆ ಬರುವುದಿಲ್ಲ. ನನ್ನನ್ನು ಸಾರಥಿ ಮಾಡಿಕೊಂಡು ಈ ಬಲವನ್ನು ಜಯಿಸುವೆಯಾ ? ಚೆನಾಯು, ಈ ಉಪಾಯ ಸಾಕು. ನನ್ನನ್ನು ಕಳಿಸಿಬಿಡು ” ಎಂದು ಮತ್ತೆ ಅದೇ ರಾಗ ಎತ್ತಿದನು. ಅರ್ಜುನನಿಗೆ ಇನ್ನು ತಡೆಯಲಾಗಲಿಲ್ಲ. ಈ ಎಲವೋ ! ಸಾರಥಿ ಯಾಗು, ನಡೆ, ಇನ್ನೇನಾದರೂ ಗಳಹಿದೆ, ನಿನ್ನ ಕಟವಾಯಿ ಕುಯ್ದು ಬಿಡುತ್ತೇನೆ. ಮಾರೆಡ್ಡಿ ನಿಂತಿರುವ ಈ ಪ್ರತಿಭಟರನ್ನೆಲ್ಲ ಕೊಲ್ಲು ¥ನೆ ; ನಿನ್ನಾಣೆ, ಆಮೇಲೆ ನಗುವೆಯಂತೆ ! ಈಗ ತೆಪ್ಪಗಿರು ” ಎಂದು ________________

ಉತ್ತರ ಕುಮಾರ ಬಿರುನುಡಿ ನುಡಿದು ಜುಟ್ಟು ಹಿಡಿದುಕೊಂಡು ಹೆಡತಲೆಯನ್ನು ಅವುಕಿ ಎಳೆದುಕೊಂಡು ಬಂದು ರಥದ ಮೇಲೆ ಹತ್ತಿಸಿದನು. ಬಳಿಳ, ಅಂಜಿದ ಉತ್ತರನಿಗೆ ಪರಿಪರಿಯಾಗಿ ಭೈರಹೇಳಿ ಕಲಿಯಾಗಿ ಮಾಡಿಕೊಂಡು ತಮ್ಮ ಶಸ್ತ್ರಾಸ್ತ್ರಗಳನ್ನಿಟ್ಟಿದ್ದ ಶಮಿಯ ಬಳಿಗೆ ಕರೆದುಕೊಂಡು ಹೋದನು. ಬನ್ನಿ ಯ ಮರದ ಬಣ ರಘದಿಂದಿಳಿದು, “ ಈ ಮರದ ಮೇಲೆ ಪಾಂಡ ವರು ತಮ್ಮ ಶಸ್ತ್ರಾಸ್ತ್ರಗಳನ್ನಿಟ್ಟಿದ್ದಾರೆ. ಮರ ಹತ್ತಿ ಸೆಗೆದುಕೊಡು ” ಎಂದು ಉತ್ತರವನ್ನು ಕೇಳಿದನು. ಉತ್ತರನಿಗೆ ಮರದ ಕೊಂಬೆಯಿಂದ ನೇತಾಡುವ ಹೆಣವೊಂದಲ್ಲದೆ ಮತ್ತೇನೂ ಕಾಣಿಸಲಿಲ್ಲ. “ ಬೃಹನ್ನಳೇ, ಆರಸು ಮಕ್ಕಳು ಹೆಣ ಮುಟ್ಟುವುದು ಅನುಚಿತ, ಬೇರೆ ಯಾವ ಕೆಲಸವನ್ನಾದರೂ ಹೇಳು, ಮಾಡುತ್ತೇನೆ” ಎಂದನು. ಅದು ಹೆಣವಲ್ಲವೆಂದೂ ಮೇಲುಗಡೆ ತೊಗಲು ಬಿಗಿದಿರುವ ಆಯುಧಗಳ ಕಟ್ಟಿಂಗೂ ಅರ್ಜುನ ತಿಳಯಹೇಳಲು ಉತ್ತರ ಮರ ಹತ್ತಿದನು, ಹತ್ತಿ ಕಟ್ಟಿನ ಹುರಿಗಳನ್ನು ಹರಿದನು. ಕೂಡಲೆ ಬರಸಿಡಿಲಿನಂತೆ ಮಸಗುವ ಆ ದಿವ್ಯಾಯುಧಗಳ ತೀವ್ರ ಪ್ರಭೆಯಲ್ಲಿ ಸಿಕ್ಕಿಕೊಂಡು ನೋಡ ಲಾರದೆ ನಡುಗುತ್ತ ನಿಂತನು. ಮುಟ್ಟಲಾರ, ಬಿಟ್ಟಳಿಯಲೂ ಆರ. ಬಿಡಿಸಿ ಕೊಳ್ಳೆಂದು ಸಾರಥಿಗೆ ಮೊರೆಯಿಟ್ಟನು. ಸಾರಥಿ ಅರ್ಜುನನ್ನು ನೆನೆಯುತ್ತ ಕೈ ಯಿಕ್ಕಿದರೆ ಆಯುಧಗಳು ವಶನಾಗುವುದೆಂದು ತಿಳಿಸಿ ಅಂಜಿಕೆಯನ್ನು ಹೋಗಲಾಡಿಸಿದನು. ಉತ್ತರ ಕುಮಾರ ಪಾರ್ಥನನ್ನು ಸ್ಮರಿಸುತ್ತ ಕೈ * ಒಡಲು ಉಗ್ರಾಯುಧಗಳು ಸೌಮ್ಯವಾದವು. ರಾಜ ಪುತ್ರನು ಒಂದೊಂದಾಗಿ ಆಯುಧಗಳನ್ನು ಎತ್ತಿ ಕೊಡಲು ಮೊದಲು ಮಾಡಿದನು. ಎತ್ತ ಹೋದರೆ ಒ೦ದೂ ಸುಭವಾಗಿ ಕೈಗೆ ಬಾರದು. ತನ್ನ ಬಲವನ್ನೆಲ್ಲ ಬಿಟ್ಟು ಅವುಕ್ಕಿ, ಕಷ್ಟ ಪಟ್ಟು ತೆಕ್ಕೆಯಲ್ಲಿ ತಬ್ಬಿ ತೆಗೆದುಕೊಡುವುದ ರಲ್ಲಿ ಉತ್ತರನಿಗೆ ಸಾಕುಸಾಕಾಯಿತು ; ಮೈ ಬೆವರಿಟ್ಟಿತು ; ಅಳ್ಳೆ ಹೊಡೆದ ಕೊಳ್ಳತೊಡಗಿತು. ಅಷ್ಟು ಕಷ್ಟ ಪಟ್ಟು ಎತ್ತಿ ಕೊಟ್ಟ ಬಿಲ್ಲನ್ನು ಬೃಹನ್ನಳೆ ಸ್ವಲ್ಪವೂ ಆಯಾಸವಿಲ್ಲದೆ ಲೀಲೆಯಿಂದ ಹಿಡಿದಾಡಿಸುವುದನ್ನು ಕಂಡು ಅತ್ಯಾಶ್ಚರ್ಯವಾಯಿತು. “ನೀನು ಸಮರ್ಥ, ನಿನಗೆ ಶರಣು ” ಎಂದು ಅವನಿಗೆ ಕೈ ಮುಗಿದನು, ಆಮೇಲೆ ಆ ಆಯುಧಗಳಲ್ಲಿ ಯಾವಯಾವುದು ಯಾರು ________________

ಕನ್ನಡ ಸಾಹಿತ್ಯ ಚಿತ್ರಗಳು {ಳಿದನು. ಅರ್ಜುನನು ವಿವರಿಸಿ ಹೇಳಿದನು, - ಉತ್ತರನಿಗೆ ಬೆರಗು ; ಬೆರಗಿನ ಜೊತೆಗೆ ಸಂಶಯ. “ಪಾಂಡವರ ಈ ಗುಟ್ಟನ್ನು ಬಲ್ಲ ನೀನು ಯಾರು ? ಅರ್ಜುನನೇ ? ಭೀಮನೆ ? ನಕುಲನೇ ? ಸಹದೇವನ ? ಮಹಾತ್ಮಾನಾದ ಯುಧಿಷ್ಟರನೆ ? ಆಥವಾ ಅವರ ಬಂಧುವೆ ? ತಿಳಿಸು” ಎಂದು ಬೇಡಿದನು. ಆಗ ಆತನು, “ ಹೌದು, ನಾನು ಅರ್ಜುನ. ಕಂಕಯತಿ ಯುಧಿಷ್ಠಿರ ; ಬಾಣಸದ ವಲಲನ ಭೀಮ ; ನಿಮ್ಮ ಗೋಕುಲವನ್ನು ಕಾಯುವವನು ನಕುಲ ; ಅಶ್ಲಾಧ್ಯಕ್ಷನಾಗಿರುವವನು ಸಹದೇವ ; ನಿಮ್ಮಂತಃ ಪುರದಲ್ಲಿ ಸೈರಂಧಿಯಾಗಿರುವಾಕೆಯೆ ನನ್ನರಸಿ ಗೌಪದಿ' ಎಂದು ತಮ್ಮೆಲ್ಲರ ಪರಿಚಯವನ್ನೂ ಹೇಳಿದನು. ಉತ್ತರನ ಸಂಶಯಗಳನ್ನೆಲ್ಲ ಪರಿಹರಿಸಿ ನಂಬಿಕೆಯಾಗುವಂತೆ ಮಾಡಿದನು. ಕಡೆಗೆ ನಂಬಿಕೆಯಾಗಲು ಉತ್ತರ ಕುಮಾರ ಅರ್ಜುನನ ಅಡಿಗೆರಗಿ, ಉಳಿದವರಿಗೆ ಈ ಮಹಿಮೆಯಲ್ಲಿಯದು ? ಬದುಕಿದ್ದರೆ ಅತಿಶಯವನ್ನು ಕಾಣಬಹುದೆಂಬ ನುಡಿ ನಿಜವಾಯಿತು. ನಾನು ತಿಳಿವಳಿಕೆಯಿಲ್ಲದೆ ಹಲವು ತಪ್ಪು ಮಾತನ್ನಾಡಿದ್ದೇನೆ. ಅವನ್ನೆಲ್ಲ ಮನ್ನಿಸಿ ಕಾಪಾಡಬೇಕು” ಎಂದು ಬೇಡಿಕೊಂಡನು. ಅರ್ಜುನನು ಹಿಡಿದೆತ್ತಿ ತಲೆ ಸವ ರುತ್ತ “ನಿನ್ನ ಮೇಲೆ ತಪ್ಪಿಲ್ಲ” ಎಂದು ಕ್ಷಮೆ ನುಡಿದು ಸಮಾಧಾನ ಪಡಿಸಿದನು. ಬಳಿಕ ಬಳೆಗಳನ್ನು ನೆಕ್ಕಿ ಹೆಣ್ಣುಡೆಯನ್ನು ತೊರೆದು ನೀರವೇಷವನ್ನು ಧರಿಸಿದನು. ನೆನೆದ ಕೂಡಲೆ ಪಾರ್ಥನ ದಿವ್ಯ ರಥಾಶ್ವಗಳು ಬಂದು ನಿಂತವು ; ಕಪಿವೀರನು ಧ್ವಜಾಗ್ರದಲ್ಲಿ ಮಂಡಿಸಿದನು. ಗಾಂಡೀನ ಧನುಸ್ಸನ್ನು ಹಿಡಿದು ಆಕ್ಷಯವಾದ ಬತ್ತಳಿಕೆಗಳನ್ನು ಬೆನ್ನಿಗೆ ಕಟ್ಟಿ ಕಲಿಸಾರ್ಥ ರಥವನ್ನು ಹತ್ತಿದನು. ಉತ್ತರ ಕುಮಾರ ಅಂಜಿಕೆ ತೊರೆದು ರಧ ನಡಸಿದನು. ಉತ್ತರ ಸಾರಥ್ಯ ಮಾಡುತ್ತಿರಲು ಅರ್ಜುನನು ಕುರುಸೇನೆಯ ಮೇಲೆ ಸಾಗಿ ಬಂದನು. ಈಗ ಕಾದ ಬಂದವನು ಅರ್ಜುನನೆಂಬುದನ್ನು ಭೀಷ್ಮ ದ್ರೋಣಾದಿಗಳು ಹಲವು ಸೂಚನೆಗಳಿಂದ ಅರಿತುಕೊಂಡರು. ಅರ್ಜುನನು ಪ್ರಕಟವಾಗಿ ಕಾಣಿಸಿಕೊಂಡರೆ ಮೊದಲಿನ ನಿಯಮದಂತೆ ಮತ್ತೆ ಪಾಂಡವರು ಅರಣ್ಯವಾಸಕ್ಕೆ ನಡೆಯಬೇಕಾಗುವುದೆಂದು ದುರ್ಯೋಧನ ಹರ್ಷಿಸಿದನು. ಭೀಷ್ಮರು ಲೆಕ್ಕ ಮಾಡಿ, “ನಿನ್ನಿನ ಹಗಲು ನಿನ್ನದು ; ಇ೦ದಿನದು ಅವರದು ಈಗ ಅವಧಿ ಮುಗಿದಿದೆ.” ಎಂದು ನಿರ್ಣಯ ಹೇಳಿದರು. ಅರ್ಜುನನೊಡನೆ , ________________

ಉತ್ತರ ಕುಮಾರ ಕದನ ಕೊಡಗಿತೆಂದು ಕೌರವರು ತಕ್ಕ ಸಿದ್ಧತೆ ಮಾಡಿಕೊಂಡರು. ಸೇನೆಯನ್ನು ಎರಡು ಭಾಗಮಾಡಿ ಒಂದು ಅರ್ಜುನನನ್ನೆದುರಿಸಬೇಕೆಂದೂ ಮತ್ತೊಂದು ತುರುನಿಂಡಿನೊಡನೆ ದುರ್ಯೋಧನನ ನಾಯಕತ್ವದಲ್ಲಿ ಹಸ್ತಿನಾವತಿಗೆ ನಡೆಯು ಬೇಕೆಂದೂ ಗೊತ್ತಾಯಿತು, ಆ ಹಂತಿಕೆಯನ್ನರಿತು ಪಾರ್ಥನು ತನ್ನನ್ನೆದುರಿಸಿ ನಿಂಶ ಪಡೆಯನ್ನು ತಾಕದೆ ಕೊರಳಿ ನಡೆದು ಮೊದಲು ಕುರುರಾಯನ ಮೇಲೆ ನುಗ್ಗಿದನು. ತನ್ನ ಅಮೋಘ ಬಾಣಗಳಿಂದ ಆ ದಂಡನ್ನು ಬೆದರಿಸಿ ಗೋವು ಗಳನ್ನು ಬಿಡಿಸಿ ಹಿಂದಿರುಗಿಸಿದನು. ಬಳಿಕ ಕೌರವನ ಸೇನಾಸಾಗರವನ್ನು ಹೊಕ್ಕು ಕಲಕಿ ನೀರರೆಲ್ಲರಿಗೂ ತನ್ನ ಬಾಣದ ರುಚಿ ತೋರಿಸಿದನು. ಕಡೆಗೆ ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ ಎಲ್ಲರೂ ಮೈ ಮರೆದೊರಗುವಂತ ಮಾಡಿದನು. ತರುವಾಯ ಉತ್ತರನೊಡನೆ ಕಥದಿಂದಿಳಿದು ಬಂದು ದೋಣ ಭೀಷ್ಮರ ಪಾದಗಳ ಮೇಲೆ ತಲೆಯಿಟ್ಟು ನಮಸ್ಕಾರ ಮಾಡಿದನು. ಉತ್ತರನು ಅರ್ಜುನನ ಸೂಚನೆಯನ್ನನುಸರಿಸಿ ದುರ್ಯೋಧನ ಕರ್ಣ ದುಶ್ಯಾಸನಾದಿ ವೀರರಿ ವಸ್ತಾ ಭರಣಗಳನ್ನು ಕಳಚಿ ತೆಗೆದುಕೊಂಡು ರಥದಲ್ಲಿ ಇಂದಿಟ್ಟನು. ಬಳಿಕ ಇಬ್ಬರೂ ರಥವನ್ನು ಹತ್ತಿ ಬನ್ನಿಯ ಪರದೆಡೆಗೆ ನಡೆದರು. ಅಲ್ಲಿ ಆಯುಧಗಳನ್ನಿಟ್ಟು ಅರ್ಜುನನು ತನ್ನ ದಿವ್ಯ ರಥವನ್ನು ಬಿಟ್ಟು ವಿರಾಟಪಟ್ಟಣದಿಂದ ತಂದಿದ್ದ ಹುಲುರಡನಕ್ಕೆ ಸಜ್ಜು ಮಾಡಿ ಮತ್ತೆ ಸಾರಥಿ ತನವನ್ನು ಅಳವಡಿಸಿಕೊಂಡನು, ನಗುನಗುತ್ತ ಉಾರನನ್ನು ಕುರಿತು, “ದೂತರನ್ನು ಕರೆದು ಇಂದಿನ ಕಾಳಗವನ್ನು ನೀನೆ ಗೆದ್ದು ದಾಗಿ ಸುದ್ದಿ ಕಳಿಸು. ನನ್ನ ವಿಚಾರವನ್ನು ಇಂದು ತಿಳಿಸಬೇಡ, ಈ ದಿನ ನಿನ್ನ ಪರಾಕ್ರಮವನ್ನು ಪ್ರಸಾರಮಾಡು. ಆ ರಸ ನಿನ್ನನ್ನೆ ಮನ್ನಿಸಲಿ, ಸುರಜನರೂ ಪರಿಜನರೂ ನಿನ್ನ ವಿಜಯದಿಂದ ಹರ್ಷಿತರಾಗಿ ತಣಿಯಲಿ ” ಎಂದು ತಿಳಿಸಿ ಅದಕ್ಕೆ ಶಿವನನ್ನು ಒಡಂಬಡಿಸಿದನು. ಇತ್ಯ ಸುಶರ್ಮನ ಕಾಳಗದಿಂದ ಹಿಂದಿರುಗಿದ ವಿರಾಟೇಶ್ವರನು ಅರಮನೆ ಯಲ್ಲಿ ಮಗನನ್ನು ಕಾಣದೆ, ನಪುಂಸಕನನ್ನು ಸಾರಥಿ ಮಾಡಿಕೊಂಡು ಅವನು ಕೌರವ ಸೇನೆಯ ಮೇಲೆ ನಡೆದನೆಂದು ಕೇಳಿ ಕಳವಳ ಪಡುತ್ತಿದ್ದನು, ಅಪ್ಪ, ರಲ್ಲಿ ಕರ್ಣ ದ್ರೋಣ ಭೀಷ್ಮಾದಿ ಕುರುಬಲವನ್ನೆಲ್ಲ ಗೆದ್ದು ಉತ್ತರ ಕುಮಾರ ________________

ಕನ್ನಡ ಸಾಹಿತ್ಯ ಚಿತ್ರಗಳು ವಿಜಯಿಯಾಗಿ ಬರುತ್ತಿರುವನೆಂದು ದೂತರು ಬಂದು ಬಿನಯಿಸಿದರು. ಕೇಳಿ ದೊರೆ ಹಿಗ್ಗಿದನು, ಪಟ್ಟಣವನ್ನಲಂಕರಿಸಿ ಕುಮಾರನನ್ನು ಎದುರು ಗೊಂಡು ಕರೆತರಬೇಕೆಂದು ಅಪ್ಪಣೆ ಮಾಡಿದನು. ಕುರುಬಲವನ್ನು ಗೆದ್ದು ಬಂದ ವೀರಕುಮಾರನನ್ನು ನೋಡಲೆಂದು ಜನ ನೆರೆದು ನೂಕು ನುಗ್ಗಾಯಿತು, ಮಂಗಳ ವಾದ್ಯಗಳು ಭೋರ್ಗರೆದು ಮೊಳಗು ತಿರಲು ಮಂತ್ರಿಗಳು ಸಂಭ್ರಮದಿಂದ ಬಂದು ರಾಜಕುಮಾರನನ್ನು ಎದುರು ಗೊಂಡರು, ಸುಮಂಗಲಿಯರು ಮುತ್ತಿನಾರತಿಯೆತ್ತಿ ಸೇಸೆಯಿಕ್ಕಿದರು, ಪುರ ಜನರೆಲ್ಲರೂ ಗುಂಪುಗುಂಪಾಗಿ ಹರ್ಷದಿಂದು ಜಯಘೋಷ ಮಾಡು ತಿದ್ದರು. ಆದರೂ ಉತ್ತರನ ಮುಖದಲ್ಲಿ ಕಳೆಯಿಲ್ಲ, ಗೆಲವಿಲ್ಲ. ಬಿರುದುಗ್ಗ ಡಿಸಿ ಹೊಗಳುವ ಕೈವಾರಿಗಳಮೇಲೆ ಕೋಪಿಸುತ್ತ ಕತ್ತೆತ್ತದೆ ನೆಲದ ಮೇಲೆ ನೋಟ ನೆಟ್ಟು ದುಗುಡದ ಭಾರವನ್ನು ಹೊತ್ತು ಅರಮನೆಯನ್ನು ಸೇರಿದನು. ಅಲ್ಲಿ ತಂದೆ ಎದುರು ಬಂದು ಮಗನನ್ನು ' ಬಾಚಿ ತಬ್ಬಿ ಕೊಂಡನು, ಬಿಗಿಯಪ್ರಿ, “ಬಾ, ಮಗನೇ ! ನಸುಕುಲದ ಚಿಂತಾಮಣಿಯೇ ! ಕುರುರಾಯ ಮೋಹರ ಧೂಮಕೇತುವೆ ! ಕಂದ, ಬಾ” ಎಂದು ಮನದಣಿಯ ಕೊಂಡಾಡಿದನು, ಲಲನೆಯರು ಆರತಿ ಬೆಳಗಿ ನಿವಾಳಿ ತೆಗೆದರು. ಉತ್ತರಸಿಗೆ ಈ ಉಪಚಾರಗಳಿಂದ ಸುಖವಿಲ್ಲವಾಯಿತು. “ಅಪ್ಪಾ, ಸಾಕು. ಇದೆಲ್ಲ ನನಗೆ ಬರಿಯ ಬಯಲಾಡಂಬರ, ಈ ವೀರೋಪಚಾರ ನನಗೆಪ್ಪುದಿಲ್ಲ. ನಿಲ್ಲಿಸಿ ಬಿಡಿ ಎಂದನು. "ಅರಸನಿಗೆ ಆನಂದ ಮಿಗಿಲಾ ಯಿತು, “ದರ್ಪವುಳ್ಳವನಿಗೆ ಈ ಮಂಗಳ ಒಪ್ಪುವುದಿಲ್ಲವೆ ? ನಿಜವಾಗಿ ನೋಡಿದರೆ ಈ ಬಲ, ಈ ನಿಗರ್ವಿಕೆ, ಯಾರಿಗಿದೆ ?” ಎಂದು ಮಗ ನನ್ನು ಮತ್ತೆ ಪ್ರಶಂಸಿಸಿದನು, “ಮಗನೇ, ಕರ್ಣಾದಿ ವೀರರನ್ನೆಲ್ಲ ನೀ ನೊಬ್ಬನೆ ಗೆದ್ದು ಬಂದೆ, ಇಂಥ ಕಲಿತನ ಪೂರ್ವಪುರುಷರಲ್ಲಿ ಯಾರಿ ಗುಂಟು ? ಇಷ್ಟಾದರೂ ನಿನಗೆ ಅದೇಕೆ ದುಗುಡ ? ಹೆತ್ತವರಿಗೆ ಹರ್ಷವನ್ನು ತಂದೆ. ಎಂದು ಪ್ರೀತಿಯಿಂದ ಮುಖವನ್ನು ಹಿಡಿದೆತ್ತಿದನು. ಆಗ ಉತ್ತರ, “ಕಾದಿ ಗೆದ್ದವನು ಬೇರೊಬ್ಬ, ನಾನಲ್ಲ. ನಾನು ಸಾರಥಿ ಮಾತ್ರ, ನನಗೇಕಿಷ್ಟು ಮರ್ಯಾದೆ ? ನನ್ನನ್ನು ನಾಚಿಸಬೇಡಿ ! ಎಂದು ಬೇಡಿದನು, ಸಿರಾಟೇಶ್ವರನಿಗೆ ಅದು ನಿಜವಾಗಿ ತೋರಲಿಲ್ಲ, 'ಕಾದಿ ________________

ಇtuಳ ಕುಹಳಳ IS ದಾತ ನೀನು ; ಸಾರಥಿ ಆ ಬೃಹನ್ನಳೆ ವಾದ ಬೇಡ. ಮಗನೇ, ನಿನ್ನ ಪರಾಕ್ರಮವನ್ನು ನಾನು ಬಟ್ಟೆ ” ಎಂದು ಉಬ್ಬಿ ನುಡಿದನು. ನನಗೆ ಆ ದಿಟ್ಟತನವೆಲ್ಲ ಬರಬೇಕು ? ಬೆಂದದ್ದನ್ನು ಬೆದಕಿ ನೋಯಿಸಬೇಡಿ. ಈ ದಿನದ ಕಾಳಗವನ್ನು ಗೆದ್ದಾತ ಬೇರೊಬ್ಬನಿದ್ದಾನೆ. ನಾಳೆ ಬೆಳಗ್ಗೆ ಆತನನ್ನು ನಿಮ್ಮೆದುರಿಗೆ ಕರೆತಂದು ತೋರಿಸುತ್ತೇನೆ ” ಎಂದು ನಂಬಿಸಿ ನುಡಿದು, ತಂದೆ ಯನ್ನು ಬೀಳ್ಕೊಂಡು ತನ್ನರಮನೆಗೆ ಹೋಗಿ ಸೇರಿದನು. ಅರ್ಜುನನು ಉತ್ತರೆಯ ಮಂದಿರಕ್ಕೆ ಹೋಗಿ ರಣರಂಗದಿಂದ ತಾನು ತಂದಿದ್ದ ಉತ್ತಮಾಂಬರಗಳನ್ನೂ ವಿವಿಧ ರತ್ನಾಭರಣಗಳನ್ನೂ ಆಕಗೆ ಕೊಟ್ಟನು. ಅವನ್ನೆಲ್ಲ ಕಂಡು ಆಕೆ ಮಿಗಿಲಾಗಿ ಹಿಗ್ಗಿದಳು. ಆ ರಾತ್ರಿ ಪಾಂಡು ಕುಮಾರರೆಲ್ಲ ಒಟ್ಟುಗೂಡಿ ಆಲೋಚಿಸಿ ತಮ್ಮ ವೇಷಗಳನ್ನು ತೊರೆದು ಮರುದಿನ ಓಲಗದಲ್ಲಿ ಪ್ರಕಟವಾಗಿ ಕಾಣಿಸಿ ಕೊಂಡರು, ಉತ್ತರ ಕುಮಾರ ಉತ್ತರಗೋಗ್ರಹಣದ ವಿಜಯದ ನಿಜ ವನ್ನು ವಿವರಿಸಿ, ಪಾಂಡವರನ್ನು ತಂದೆಗೆ ತೋರಿಸಿ ಅವರನ್ನು ವಿರೋಚಿತ ವಾಗಿ ಗೌರವಿಸಿದನು. ಹಿನ್ನುಡಿ ಕಾಮಾಯಣ ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು ಸಾವಿರಾರು ವರ್ಷಗಳಿಂದ ಜನಕ್ಕೆ ಇವು ತಿಳಿವು ಕೊಟ್ಟು ಕಾಗೆ ಬೆಳಕಾಗಿ ಮರೆಯುತ್ತಿವೆ, ಭರತ ಖಂಡದ ಬೇರೆ ಬೇರೆ ಭಾಷೆಗಳೆಲ್ಲರೂ ಇವು ಪರಿವರ್ತನೆಯಾಗಿದ, ಅರಿಯದವರಿಂದ ಹಿಡಿದು ಮಹಾ ನಿದ್ವಾಂಸರವರೆಗೂ ಎಲ್ಲ ಜನಕ್ಕೂ ಇವು ಮೆಚ್ಚಿಕಯಾಗಿ ಆವರ ಜೀವನದ ಹಾಸು ಹೊಕ್ಕಾಗಿ ಹರಡಿವ. ಕನ್ನಡದಲ್ಲಿ ಮಹಾಭಾರತವನ್ನು ಬರೆದವರನ್ನೆಲ್ಲ ಪಂಪ, ನಾರಣಪ್ಪ-ಈ ಇಬ್ಬರು ತುಂಬ ಪ್ರಸಿದ್ದರು. ಇವರಿಬ್ಬರೂ ಒಬ್ಬರಿಗೊಬ್ಬರು ಸರಿಮಿಗಿಲಾದವರು, ಪಂದನ ಗ್ರಂಥ ಹಳಗನ್ನಡದಲ್ಲಿ ರಚಿಸಿರುವ ಚಂಪೂಕಾವ್ಯ, ನಾರಣಪ್ಪನು ರಚಿ ಸಿರುವುದು ನಡುಗನ್ನಡದ ಷಟ್ನದಿ ಕಾವ್ಯ. ಇವೆರಡೂ ನಮ್ಮ ಕನ್ನಡ ಭಾಷೆಯ ಸರ್ವೋತ್ಕೃಷ್ಟ ಗ್ರಂಥಗಳು.

  • ಪಂಪ ಭಾರತ' ತನ್ನ ಉತ್ತಮ ಗುಣಗಳಿಂದ ಉಳಿದ ಪೂರ್ವ ಕಾವ್ಯ ಗಳನ್ನೆಲ್ಲ ನರಸಿಬಿಟ್ಟಿತು. ಆದರೂ ಆದು ಜನಸಾಮಾನ್ಯದಲ್ಲಿ ಬಳಕೆಗೆ ಬರಲಿಲ್ಲ. ________________

ಕನ್ನಡ ಸಾಹಿತ್ಯ ಚಿತ್ರಗಳು ನಾರಣಪ್ಪನು ರಚಿಸಿದ ( ಗದುಗಿನ ಭಾರತ' ವಾದರೂ, ಈಗ ಕನ್ನಡ ನಾಡಿನ ಹಳ್ಳಿ ಹಳ್ಳಿಯಲ್ಲೂ ನೆಪಳಗುತ್ತಿದೆ. ಸಾಧಾರಣ ಜನವನ್ನು ಸಲ್ಲಿಸುತ್ತ, ಪಂಡಿತ ರನ್ನು ತಲೆದೂಗಿಸುತ್ತ ಎಲ್ಲರಿಗೂ ಮೆಚ್ಚಾಗಿದೆ. - ಕನ್ನಡ ಭಾರತ ' ಎಂದು ರಸಲಾಗಿದೆ ನಾರಣಪ್ಪ' ಸಂಸನಂತೆ ಮಹಾ ಪಂಡಿತ ; ಜನರನಂತೆ ದೊಡ್ಡ ಭಕ್ತ, ಇವನ ಭಾರತ ಭಕ್ತಿ ರಸದ ಆಗಾಧ ಪ್ರವಾಹವಾಗಿದೆ. ಇದನ್ನು ಓದುವವರೂ ಕಳುವವರೂ ಭಕ್ತಿಯು ಪುಣ್ಯ ಜಲದಲ್ಲಿ ಒಂದು ಪುನೀತರಾಗುತ್ತಾರೆ. ಗದು ಗಿನ ನೀರನಾರಾಯಣನ ಕಿಂಕರನಾಗಿ ಕಾವ್ಯ ರಚನೆ ಮಾಡಿದ್ದಾನೆ. 1 ನೀರ ನಾರಾಯಣನೆ ಕವಿ, ತಾನು ಬರೆಯುವವನು ಮಾತ್ರ' ಎಂದು ಬಿನ್ನಯಿಸಿ ' ಕೊಂಡಿದ್ದಾನ. - ಇಲ್ಲಿ ಎತ್ತಿ ಕೊಟ್ಟಿರುವ ಉತ್ತರಕುಮಾರನ ಕಥೆ ಗದುಗಿನ ಭಾರತದಲ್ಲಿ ಏವರಿಸಿರುವ ಉತ್ತರ ಗೋಗ್ರಹಣ ವೃತ್ತಾಂತದ ಸಂಗ್ರಹ. ಉತ್ತರಕುಮಾರನ ವಿಷಯವನ್ನು ಇಷ್ಟು ರಸವತ್ತಾಗಿ ಚಿತ್ರಿಸಿರುವವನು ನಾರಣಪ್ಪನೊಬ್ಬನ, ಪಂಪ ಭಾರತದಲ್ಲಾಗಲಿ ಸಂಸ್ಕೃತದ ಮೂಲ ಮಹಾಭಾರತದಲ್ಲಾಗಲಿ ಈ ಕಥೆ ಇಷ್ಟು ಸ್ವಾರಸ್ಯವಾಗಿ ಬಂದಿಲ್ಲ. ಇಲ್ಲಿ ಹಾಸ್ಯವನ್ನು ನಿರೂಪಿಸಿರುವಷ್ಟು ಸ್ವಾರಸ್ಯವಾಗಿಯೆ ನಾರಣಪ್ಪ ಬೇರೆ ಕಡೆಗಳಲ್ಲಿ ಶೃಂಗಾರ, ನೀರ ಮೊದಲಾದ ಉಳಿದ ರಸಗಳನ್ನೂ ನಿರೂಪಿಸಿದ್ದಾನೆ. - r ಕುಮಾರ ವ್ಯಾಸ ' ಎಂಬುದು ನಾರಣಪ್ಪನ ಕಾವ್ಯ ನಾಮ. ಈತನು ಗದು ಗಿನ ಹರ ಇರುವ 1 ಕೋಳಿವಾಡ ' ಎಂಬ ಊರಿನ ಕರಣಿಕರ ವಂಶದವ ನಂತ, ಗದುಗಿನ ವೀರನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಭಾರತವನ್ನು ರಚಿಸಿದನಂತೆ. ಈತನ ಜೀವನಕ್ಕೆ ಸಂಬಂಧಿಸಿದ ಯಾವ ವಿವರವೂ ಸ್ಪಷ್ಟವಾಗಿ ಗೊತ್ತಿಲ್ಲ. ಈತನಿದ್ದದ್ದು ಕ್ರಿ.ಶ. ೧೫ ನೆಯ ಶತಮಾನದಲ್ಲಿ ; ವಿಜಯನಗರದ ವೈಭವದ ಕಾಲದಲ್ಲಿ, ಆತನು ಕಂಡ ಕನ್ನಡ ನಾಡಿನ ಶೌರ್ಯ ಧೈರ್ಯ ಸಾಹಸ ಸಂಪತ್ತು ಗಳ ಚಿತ್ರವೇ ಕನ್ನಡ ಭಾರತದಲ್ಲಿ ಮೂಡಿ ಬಂದಿದೆಯೆನ್ನಬಹುದು. * ಪಂಪ, ಹರಿಹರ, ನಾರಣಪ್ಪ - ಈ ಮೂವರೂ ಕನ್ನಡದ ವರ ಕವಿಗಳು, ಈ ದವರೂ ಪ್ರಪಂಚದ ಮಹಾಕವಿಗಳೊಡನೆ ಸರಿಸಮಾನವಾಗಿ ಗೌರವಕ್ಕೆ ಅರ್ಹರಾಗಿರುವರು, ________________

ನಿಂಕೆಯ ಕಥೆ ಅತಿಶಯ ಜಿನೇಂದ್ರ ವಚನಾ ನುಪಮಂ ಸಕಿಕ ಜೀವ ಹಿತನು; ಪುಣೋ ವಿತಮಂ ಭವ್ಯ ನಿಕಾಯ | ಸ್ತುತನುಂ ನೆರೆ ಪೇಳ್ವೆನರಿಯೆ ಧರ್ಮಾಮೃತಮಂ ಜಿನಮತದೊಳೆತು ಸಾರನು ದನಿವಂ ಲೇಸಾಗಿ ತೋರ್ಪುದೀ ಕೃತಿಯೊಬ್ಬ ↑ ಜಿನೇಂದ್ರನ ವಚನಾಮೃತವು ಅತಿಶಯವಾದ್ದು ; ಸ ಕ ಜೇವಗಳಿಗನಿ ಒತವನ್ನು ಭಿಟುಮಾಡುವಂಥದು ; ಪುಣ್ಯ ದಿಂದ ದೊರಕುವಂಥದು ; ಭವ್ಯಸನ ಸವ ಸ್ತುತಿಸಿರುವಂಥ ಮ, ಆಂಘ ಜಿನ ವಚನ ರೂಪವಾದ ಧರ್ಮವೆಂಬ ಅನ್ನುತವನ್ನು ೯ ಧರ್ಮಾಮೃತವೆಂಬ ಈ ಗ್ರಂಥದಲ್ಲಿ ಚೆನ್ನಾಗಿ ತಿಳಿಯುವಂತೆ ವಿವರಿಸುತ್ತೇನೆ. ಚಿನ ಮತದಲ್ಲಿ ಸಾರ ಎಷ್ಟಿದೆಯೋ ಅ ಸ ಈ ಗ್ರಂಥದಲ್ಲಿ ತೂರಿ ಬರುತ್ತದೆ. ] ಲಲಿತಾಂಗ ಕಾಶ್ಮೀರ ದೇಶದಲ್ಲಿ ವಿಜಯಪುರವೆಂಬ ಒಂದು ಪಟ್ಟಣ. ಆದ ನ ಳುವವನು ಅರಿಮಥನನೆಂಬ ಅರಸ, ಸೌಂದರಿಯೆಂಬವಳು ಅವನ ಪಟ್ಟದರಸಿ, ಅವರಿಗೆ ಲಲಿತಾಂಗನೆಂಬ ಮಗ ಹುಟ್ಟಿದನು. ಲಲಿತಾಂಗ ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಿದ್ದನು. ತಾಯಿ ತಂದೆಗಳಿಗೆ ಮಗನ ಮೇಲೆ ಮೋಹ ಅತಿಯಾಯಿತು. ಶಿವನು ಕೆಟ್ಟದ್ದು ಮಾಡಿದರೆ ಕೈಯೆತ್ತಿ ಹೊಡೆಯುತ್ತಿಲ್ಲ ; “ ಆಹ್ವಾ, ದುರ್ಜನರ ಜೊತೆ ಹೋಗಬಾರದು ” ಎಂದು ಮುನಿದು ಮೃದುವಾಗಿ ಬಯ್ಯುತ್ತಲೂ ಇರ ಲಿಲ್ಲ. ಮಗ ತಾನೂ ತನ್ನ ಗೆಳೆಯರೂ ಕೂಡಿ ಪುರಜನರನ್ನೂ ಸರಿ ಜನರನ್ನೂ ಹಿಡಿದು ಅವಮಾನಿಸಿ ಬಡಿದರೆ, ಅರಸನೂ ಅರಸಿಯ ________________

ಕನ್ನಡ ಸಾಹಿತ್ಯ ಚಿತ್ರಗಳು ಅಕ್ಕರೆಯಿಂದ ನೋಡಿ ನಗುವರು. ಹೀಗಾಗಿ ಲಲಿತಾಂಗನು ಅಂಕುಶ ನಿಲ್ಲದ ಮದದಾನೆಯಂತಾದನು ; ಬೇವನ್ನು ಸೇರಿದ ನೀರು ಕಹಿಯಾಗು ವಂತೆ ದುರ್ಜನರ ಸಂಗದಿಂದ ಅವನು ದುಷ್ಟನಾಗಿ ಸೊಕ್ಕಿದನು. ಅವನಿಗೆ ಯೌವನವೊದಗಿತು ದರ್ಪ, ಸೊಕ್ಕು, ಬಲ ಇವುಗಳ ಜೊತೆಗೆ ಯೌವನವೂ ಸೇರಲು ಅವನ ಕೆಟ್ಟತನಕ್ಕೆ ಕಟ್ಟಿಲ್ಲವಾಯಿತು. ಅವನು ಯಾರನ್ನೂ ಬಿಡದೆ ಎಲ್ಲರನ್ನೂ ತವುಡಿಗೂ ಆಗದಂತೆ ಕಂಡು ಬಯ್ಯುವನು ; ಹೊಯ್ಯುವನು. ಊರಿನ ತಿರುಕರನ್ನೆಲ್ಲ ಅಟ್ಟಿ ಹಿಡಿತರಿಸಿ ಸುಂಕ ಕೊಡಿರೆಂದು ಕಾಡುವನು, ಎಣ್ಣೆ ಯವರ ಕೇರಿಯನ್ನು ಸೂರೆ ಮಾಡಿ ದೇವಸ್ಥಾನದಲ್ಲಿ ದೀಪ ಹೊತ್ತಿಸುವನು. ಹೂವಿನ ಸಂತೆಯನ್ನು ಹೊಕ್ಕು ಮಾಲೆಗಾರರು ದಿಕ್ಕುಗೆಟ್ಟೋಡಲು ಮಾಲೆಗಳನ್ನು ತಾನೂ ತನ್ನ ಪರಿವಾರದ ಧೂರ್ತರೂ ಮುಡಿದು ವಿನೋದದಿಂದ ನಗುವರು. ಕಂಚು ಗಾರರು, ಮಣಿಗಾರರು, ಬಟ್ಟೆಯವರು ಮೊದಲಾದವರ ಅಂಗಡಿಗಳಿಗೆ ನುಗ್ಗಿ ಕಣ್ಣಿಗೆ ಬೇಕಾದ ವಸ್ತುಗಳನ್ನೆಲ್ಲ ಕಿತ್ತುಕೊಂಡು ತನ್ನ ಪರಿವಾರ ದವರಿಗೆ ಸಂಬಳವೆಂದು ಹಂಚುವನು, ಧನಿಕರ, ಲೋಭಿಗಳ ಹೊನ್ನನ್ನು ಒಂದುಳಿಯದಂತೆ ಕವರಿಕೊಂಡು ಸಿಕ್ಕಿದವರಿಗೆ ದಾನ ಮಾಡುವನು, ನಾಯಿ ಹಂದಿಗಳನ್ನೂ ಗಂಡು ಹೆಣ್ಣುಗಳನ್ನೂ ಬಲಾತ್ಕಾರದಿಂದ ಎಳ ತರಿಸಿ, ಕಂಡವರೆದೆ ನಡುಗುವಂತೆ ಅವರನ್ನು ಹೊರಿಸುವನು. ಅವನ ಈ ರೀತಿಯ ಹಲವು ಕಾಟಗಳಿಂದ ಹೊಳಲೆಲ್ಲ ಅಲ್ಲೋಲ ಕಲ್ಲೋಲ ವಾಯಿತು. ಜನಕ್ಕೆ ಕನಸಿನಲ್ಲೂ ಲಲಿತಾಂಗನ ಭಯವೆ ಹೆಚ್ಚಾಯಿತು. ಆಗ ಎಲ್ಲರೂ ನೆರೆದು ಒಂದಾಗಿ ಅರಮನೆಯ ಬಾಗಿಲಿಗೆ ಬಂದು ಹುಯ್ಯಲಿಟ್ಟರು. ಓಲಗದಲ್ಲಿದ್ದ ಅರಿಮಥನ ಮಹಾರಾಜನು ಅವರನ್ನು ಬರಹೇಳಿ ಹುಯ್ಯಲಿದೇನೆಂದು ಕೇಳಿದನು. ಅವರು ಅದಕ್ಕೆ 11 ದೇವಾ, ನಿಮ್ಮ ಕುಮಾರನ್ನು ಆಡುವ ಆಟ ಮಾಡುವ ಮಾಟಕ್ಕೂ ನಾವು ನಿಲ್ಲಲಾರೆವು ; ತಾಳಲಾರೆವು ಎ೦ದು ಅವನ ದುಷ್ಟತನವನ್ನೆಲ್ಲ ವಿವರಿ ಸಿದರು. ನಮಗೆ ಏನಪ್ಪಣೆ ? ” ಎಂದು ಬೆಸಗೊಂಡರು, ಕೇಳಿ ಮಹಾ ರಾಜನು, 'ನನಗೆ ಇದು ಗೊತ್ತಿರಲಿಲ್ಲ. ನೀವು ಅಂಜಬೇಡಿ ” ಎಂದು ________________

ಒcಳಯ ಕಥೆ ನುಡಿದು, ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಮನ್ನಿಸಿ ವೀಳಿಯ ಕೊಟ್ಟು ಕಳಿಸಿದನು. ಬಳಿಕ, “ಮಗ ಓದಹೊದರೆ ಬಳಲುವನೆಂದೆಣಿಸಿ ಓದಿಸದೆ ಹೋದೆ. ಅವನು ದುಷ್ಟರೊಡನೆ ಸೇರಿ ಕೆಟ್ಟನು. ನಾನೆ ಕೆಡಿಸಿದಂತಾಯಿತು ” ಎಂದು ಚಿಂತಿಸಿದನು. ಮಗನನ್ನು ಕರಸಿಕೊಂಡು ರಾಜನ ಕರ್ತವ್ಯ ಗಳೇನೆಂದು ವಿವರಿಸಿ ಬುದ್ದಿ ಹೇಳಿದನು. “ ಹೋದದ್ದು ಹೊಗಲಿ, ಇನ್ನು ಮುಂದೆ ಹೀಗೆ ಮಾಡ ಬೇಡ, ಇಂದು ಮೊದಲಾಗಿ ನೀನು ಕೊಳಲಿನಲ್ಲಿ ಸೊಕ್ಕಿನಿಂದ ಏನಾದರೂ ಬಾಧೆಯುಂಟುಮಾಡಿದರೆ ಆಗ ನೀನು ನನ್ನ ಮಗನಲ್ಲ, ನಾನು ಮುಸಿಯುತ್ತೇನೆ” ಎಂದು ಬುದ್ಧಿ ಹೇಳಿ ಎಚ್ಚರಿಸಿದನು, ಆರು ತಿಂಗಳವರೆಗೆ ಹುರಿಬಿಗಿದು ಕಂಬಿ ಕಟ್ಟಿದ್ದರೂ ಬಿಟ್ಟ ಕೂಡಲೆ ಮತ್ತೆ ಡೊಂಕೇ ಆಗುವ ನಾಯ ಬಾಲದ ಹಾಗಾಯಿತು ಅವನ ನಡತೆ, ತಂದೆಯ ಮಾತಿಗೆ ಸ್ವಲ್ಪವೂ ಮನ್ನಣೆದೋರದೆ ಅವನು ಮೊದಲಿ ಗಿಂತಲೂ ಹೆಚ್ಚಾಗಿ ಹೊಳಲನ್ನು ಕಾಡಿ ಅಳಲಿಸತೊಡಗಿದನು. ಅದನ್ನು ಕಂಡು ದೊರೆ ಕೋಪಗೊಂಡು ಲಲಿತಾಂಗನನ್ನು ಕರೆಸಿ, “ಮಗನೇ, ಮೊಹ ದಿಂದ ನಿನ್ನ ಹಲವು ಕಟ್ಟತನಗಳನ್ನು ಇದುವರೆಗೂ ಸೈರಿಸಿದ್ದೆ. ಈಗ ನೀನು ಮೊದಲಿಗಿಂತ ಹೆಚ್ಚು ಕೇಡಿಗಸಾದೆಯಲ್ಲ! ಉಳಿದ ಮಕ್ಕಳನ್ನು ಉಪೇಕ್ಷಿಸಿ ನಿನಗೆ ರಾಜ್ಯವನ್ನು ಕೊಡಬೇಕೆಂದಿದ್ದೆ ನಾನು. ನೀನು ಹೀಗೆ ಸಂತಾಪವುಂಟುಮಾಡಿದೆ. ಇನ್ನು ನನ್ನ ಮೇಲೆ ತಪ್ಪಿಲ್ಲ. ಲೇಸೆಂದು ಓಡನ್ನು ಹಿಡಿದರೆ ಕೈ ಮಸಿಯಾಗುವ ಹಾಗೆ ನಿನ್ನಂಥ ದುಷ್ಟ ನನ್ನು ಒಳಗೊಂಡಿದ್ದರೆ ನನ್ನ ಕೀರ್ತಿ ಕೆಡುವುದು ; ಸದ್ಧತಿ ಹಾಳಾಗು ವುದು. ಇನ್ನು ಮೇಲೆ ನಾನಾಳುವ ರಾಜ್ಯದಲ್ಲಿರಬೇಡ, ಹೊರಟುಹೋಗು” ಎಂದು ಗದರಿಸಿ ಮಡಿದನು. ಲಲಿತಾಂಗ ತಾಯಿಯ ಬಳಿ ಬಂದು ತನ್ನ ದೇಶಶ್ಯಾಗದ ಸುದ್ದಿ ಯನ್ನು ತಿಳಿಸಿದನು. ಆಕೆ, 14 ಕಂದಾ, ಕೆಟ್ಟತನವನ್ನು ಬಿಟ್ಟುಬಿಡು ವಂತೆ ಮಹಾರಾಜರು ನಿನ್ನನ್ನು ಕೈ ಮುಗಿದು ಕೇಳಿಕೊಳ್ಳಲಿಲ್ಲವೇ ? ________________

ಕನ್ನಡ ಸಾಹಿತ್ಯ 11ತ್ರಳು ಹಲವು ಸಲ ನನ್ನಿಸಿದರಲ್ಲ! ನೀನು ಕೆಟ್ಟವರ ಕೆಳೆಯನ್ನು ಬಿಡದಿದ್ದತಿ ಅವರೇನು ಮಾಡಿಯಾರು ? ಈಗಲಾದರೂ ದುರ್ಗುಣವನ್ನು ಬಿಡು, ಮಗನೇ, ನಿನ್ನಯ ಮುನಿದು ನಿನ್ನನ್ನು ತೊರೆದೇ ಬಿಡುವರೆಂದು ತಿಳಿ ಬೆಯಾ? ನೀರು ಎಷ್ಟು ಕಾದರೂ ಮನೆಯನ್ನು ಸುಟ್ಟತೆ ? ನಿನ್ನ ನಡತೆಯನ್ನು ತಿದ್ದಿ ಕೊ” ಎಂದು ತಾನೂ ಬುದ್ದಿ ಹೇಳಿದಳು. ಲಲಿತಾಂಗನು ಅದೊಂದನ್ನೂ ಕೇಳದಿರಲು ಬೇಸತ್ತು, ಕಾಗೆಯ ಮರಿಯೆಂದರಿಯದೆ ಕೊftಲೆ ಪ್ರೀತಿ ಯಿಂದ ಸಾಕುತ್ತಿದ್ದರೂ ಅದು ' ಕಾ ! : ' ಎಂದು ಕೂಗಿತು ; ಕಾಗೆ ಗಳ ಜೊತೆಗೂಡಿತು-ಎಂಬಂತಾದೆ ನೀನು. ನಿನ್ನ ಕೇ? ... ಬಾರದು ”” ಎಂದು ಅವನನ್ನು ಕೈಬಿಟ್ಟಳು. ಆಗ ಅವನು ವಿಜಯಪುರ ವನ್ನು ಬಿಟ್ಟು ನೇಪಾಳ ದೇಶಕ್ಕೆ ಹೊರಟುಹೋದನು, ಅಲ್ಲಿ ಹೋಗಿ ಒಂದು ಕಳ್ಳರ ಪಡೆಯಲ್ಲಿ ಸೇರಿಕ - ತನು. ಆ ಕಳ್ಳರೊಡನಾಡುತ್ತಿರಲು, ಈ ಮೊದಲು ಬಂದ ಕಿವಿಗಿಂತ ಬಳಿಕ ಬ೦ದ ಕೋಡು ಹರಿತ ' ಎಂಬಂತೆ ಅವರನ್ನೆಲ್ಲ ಮಾಸಿವನು, ಅವರಿಂದ ಅಂಜನ ಘಟಕದ ಉಪದೇಶ ಪಡೆದು ಸಾಧಿಸಿದನು. ಅದರ ಬಲದಿಂದ ದೃಶ್ಯನಾಗಿ ಕದಿಯುತ್ತ ಬಂದನು. ಅವನಿಗೆ ೬೦ಜನತೆಗೀರನೆಂಬ ಹೆಸರು ಪ್ರಸಿದ್ಧವಾಯಿತು. ಕಳವು, ಜೂಜು, ಮದ್ಯ, ಮಾಂಸ ಮೊದ ಲಾದವುಗಳಲ್ಲಿ ಅತ್ಯಾಸಕ್ಕಾಗಿ ಮನಬಂದಂತೆ ಮಾಡುತ್ತ ಅವನು ವೇತ ದೇಶ ಸುತ್ತುತ್ತಿದ್ದನು. ಒಮ್ಮೆ ರಾಜಗೃಹವೆಂಬ ಪಟ್ಟಣಕ್ಕೆ ಹೋಗಿದ್ದನು. ಅಲ್ಲಿ ಅನಂತ ಸುಂದರಿಯೆಂಬೊಬ್ಬ ಸೂಳೆಯನ್ನು ಕಂಡ ಅವಳಲ್ಲಿ ನೊಣಹಗೊಂಡನು. ಅವಳ ಸ್ನೇಹವನ್ನು ಸಂಪಾದಿಸಿ ಅವಳ ಕೆಳಿದ್ದನ್ನೆಲ್ಲ ತಂದುಕೊಡುತ್ತ ನಿಕ್ಷೇಪದ ಹೊನ್ನನ್ನು ಕಾಯುವ ಸರ್ಪದ ಹಾಗೆ ಅವನ್ನ ಬಿಟ್ಟಗಲಾರದೆ ಇದ್ದನು. ಅವಳು ಕೂಡ ಮನೆ ಮಠವೊಂದೂ ಇಲ್ಲದಿದ್ದರೂ ಎಷ್ಟು ಕೇಳಿ ದರೆ ಅಷ್ಟನ್ನೂ ಅಳುಕದೆ ತಂದುಕೊಡುವ ಅವನ ಶಕ್ತಿಗೆ ಬೆರಗಾದಳು, ಮೆಲ್ಲನೆ ಅವನಿಂದ ಗುಟ್ಟನ್ನು ಹೊರಡಿಸಿ ತಿಳಿದುಕೊಂಡಳು. ಮರುದಿನ ಅಲ್ಲಿನ ದೊರೆ 6ರಸಿಯ:ಕಿಡನೆ ಜಲಕ್ರೀಡೆಗಾಗಿ ಮೋರ ಪಟ್ಟಣದ ಬೀದಿಯಲ್ಲಿ ಪರಿವಾರದೊಡನೆ ಹೋಗುತ್ತಿದ್ದನು. ಘಟ್ಟದ ಮಹಾ ________________

ನಿಶ್ಚಿಂಳಿಯ ಕಥೆ ದೇವಿಯ ಎದೆಯ ಮೇಲೆ * ಜ್ಯೋತಿಪ್ರಭ ' ಎಂಬ ಒಂದು ಪದಕ ಸೂರ್ಯ ನಂತೆ ಕಾಂತಿಯುಕ್ತವಾಗಿ ಹೊಳೆಯುತ್ತಿತ್ತು. ಅದನ್ನು ಕಂಡು ಆನಂಗ ಸುಂದರಿ ಆಸೆಪಟ್ಟು ಅದನ್ನು ತಂದುಕೊಡಬೇಕೆಂದು ಅಲ್ಲೆ ಮಾಡಿ ಅಂಜನ ಚೋರನನ್ನು ಪ್ರಾರ್ಥಿಸಿದಳು. ಅವನು, “ಅದೊಂದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು, ತರುತ್ತೇನೆ. ಅದು ಬೇಡ. ಅದನ್ನು ತಂದರೆ, ಸದಾ ಅದನ್ನು ತೊಟ್ಟೇ ಇರಬೇಕು. ದೊರೆ ಕಂಡರೆ ಕೊಲ್ಲಿಸುತ್ತಾನೆ. ಅದರ ಹಂಬಲನ್ನು ಬಿಡು ” ಎಂದು ನಯದಿಂದ ಒಡಂಬಡಿಸಹೋದನು. ಸೂಳೆ ಕೇಳ್ಲಿಲ್ಲ. ತಂದುಕೊಟ್ಟ ತೀರಬೇಕೆಂದು ಹಟ ಹಿಡಿದಳು. ಮುನಿದು ಹಾಸಿಗೆಯಿಂದ ಕೆಳಕ್ಕುರುಳಿ ಬೀಳುವಂತೆ ಅವನನ್ನೆ ದೆದು, “ಪರದೇಶಿಯಾಗಿ ಬಂದ ನಿನ್ನಲ್ಲಿ ಒಂದೇ ಮನಸ್ಸಿನಿಂದ ಸ್ನೇಹಮಾಡಿ ಆದರಿಸಿದ್ದಕ್ಕೆ ನನಗೆ ಸಂತೋಷವುಂಟು ಮಾಡಿದೆ !” ಎಂದು ಮುಟ್ಟಿ ನುಡಿ ದಳು. ಅವಳ ಪ್ರೇಮವನ್ನು ಉಳಿಸಿಕೊಳ್ಳುವುದಕ್ಕಾಗಿ, “ಅದನ್ನು ನಿನಗೆ ತಂದುಕೊಡುತ್ತೇನೆ. ಅಂಜಬೇಡ ” ಎಂದು ನಂಬುಗೆ ಹೇಳಿ ಸಮಾಧಾನ ಗೊಳಿಸಿದನು. ಬಳಿಕ, 'ಕಳ್ಳನಿಗೆ ಬೆಳುದಿಂಗಳು ಸೊಗಸದು ' ಎಂಬಂತೆ ಶುಕ್ಲ ಪಕ್ಷ ಹೋಗುವವರೆಗೂ ಕಾದಿದ್ದು, ಕೃಷ್ಣ ಪಕ್ಷದ ಅಷ್ಟಮಿಯ ದಿನ ಲಲಿತಾoಗನು ಕಣ್ಣಿಗೆ ಅಂಜನ ಎಚ್ಚಿಕೊಂಡು ಆರನುನೆಯತ್ತ ನಡೆವನು. ಅದೃಶ್ಯನಾಗಿ ಒಳಹೊಕ್ಕು ಪದಕವನ್ನು ತೆಗೆದುಕೊಂಡು ಹೊರಬಿದ್ದನು. ಒಸ್ಸಿನಿಂದ ಮೈ ಮರೆತು ಬರುತ್ತಿರಲು ರತ್ನದ ಬೆಳಕು ಸುತ್ತಲೂ ಹರಡಿತು, ಬರಿಯ ಬೆಳಕು ನಡೆದು ಹೋಗುತ್ತಿರುವುದನ್ನು ಅಲ್ಲಿಯ ತಳಪನು ಕಂಡು ಕಳ್ಳಿ ನೆಂದರಿತು ಅವನ ಅತಿ ಜನ ವಿದ್ಯೆಯನ್ನು ಕೆಡಿಸಿ ಬೆನ್ನಟ್ಟಿ ಬಂದನು. - ಅಂಜನಚೋರನು ಭಯದಿಂದ ಪದಕವನ್ನೆ ಸೆದು ಕೋಟಿಯನ್ನು ವಿದ್ಯಾಧರ ಕರಣದಿಂದ ದಾಟ, ದೆಗಣಿಡುತ್ತ ಸ್ಮಶಾನದಲ್ಲಿ ಒಂದಾದ ಮರದ ಕೆಳಗೆ ಉರಿಯುವ ದೀಪವನ್ನು ಕಂಡು ಅಲ್ಲಿ ಬಂದನು. ಬಂದು ನೋಡಿದರೆ, ಮಳೆ ಮರದ ಕೊಂಬೆಯಲ್ಲಿ ನೂರೊಂದು ಕಾಲಿನ ಒಂದು ನಿಲುವನ್ನು ಕಟ್ಟಿದೆ ಕೆಳಗೆ ಬಗೆಬಗೆಯ ಮೂವತ್ತೆರಡು ಆಯುಧಗಳನ್ನು ನೆಟ್ಟಿದೆ ; ಒಬ್ಬ ಮನುಷ್ಯ ಅದನ್ನು ಪೂಜಿಸಿ ನೆಲುವಿನ ಮೇಲೆ ಹತ್ತಿ, ಕನ್ನಡ ಸಾಹಿತ್ಯ ಚಿತ್ರಗಳು ಅದನ್ನು ಕೊಯ್ಯಲಾರದೆ ಇಳಿಯುತ್ತಲೂ ಹತ್ತುತ್ತಲೂ ಇದ್ದಾನೆ. ಈ ಏಚಿತ್ರವನ್ನು ಕಂಡು ಆ೦ಜನಚೋರನು ಆ ಮನುಷ್ಯನನ್ನು , “ನೀನು ಯಾರು ? ನೀನು ಸಾಧಿಸುವ ಈ ವಿದ್ಯೆಯ ಹೆಸರೇನು ? ಯಾರು ಉಸ ದೇಶ ಮಾಡಿದರು ? ಹೇಳು, ಹೇಳದಿದ್ದರೆ ನಿನ್ನನ್ನು ಕೊಂದು ಹಾಕು ತೆನೆ' ಎಂದು ಸುರಗಿಯನ್ನು ಹಿಡಿದು ಅವನ ಗಂಟಲಿಗೆ ಒಡ್ಡಿದನು. ಆತ ಭಯಪಟ್ಟು “ನನ್ನ ಹೆಸರು ವರಸೇನ, ಈ ವಿದ್ಯೆಗೆ ಗಗನ ಗಾಮಿನಿಯೆಂದು ಹೆಸರು. ಜಿನದತ್ತಸೆಟ್ಟು ಇದನ್ನು ನನಗೆ ಉಪದೇಶ ಮಾಡಿದನು ” ಎಂದು ತಿಳಿಸಿದನು. ಲಲಿತಾಂಗನು, ಈ ಜಿನದತ್ತ ಸೆಟ್ಟಿ ದಯಾನಿಧಿ, ನಿರ್ಮಲಚರಿತ್ರ, ಆತನು ಉಪದೇಶಿಸಿದ ಮೇಲೆ ನಿನಗೆ? ಈ ಹೇಡಿತನ ? ನಾನಾಗಿದ್ದರೆ, ನೆಲುವಿನ ಕಾಲುಗಳನ್ನೆಲ್ಲ ಒಟ್ಟಿಗೆ ಕೊಯ್ದು ಬಿಡುತ್ತಿದ್ದೆ. ನೀನು ಹೀಗೆ ಇಳಿಯುತ್ತಲೂ ಹತ್ತುತ್ತಲೂ ಇರುವುದೇಕೆ ?” ಎಂದನು. “ಮನುಷ್ಯರ ಮನಸ್ಸನ್ನು ಹೇಗೆ ತಿಳಿಯುವುದು ? ಹಿಂದು ಮುಂದು ಯೋಚಿಸದೆ ದಡ್ಡತನದಿಂದ ನಾನಿದನ್ನು ಕೊಯ್ದು ಸತ್ತರೆ, ಕನಸಿನ ಬತ್ತಕ್ಕೆ ಎಚ್ಚತ್ತು ಗೋಣಿ ಹಿಡಿದ ಹಾಗಾಗುತ್ತದೆ. ಸತ್ತು ಸಿಕ್ಕುವ ಸ್ವರ್ಗ ಕ್ಕಿಂತ ಬದುಕಿ ಸಿಕ್ಕುವ ನರಕವೇ ಲೇಸು. ನಾನು ಸಾಗಿ” ಎಂದು ವರಸೇನ ಉತ್ತರ ಕೊಟ್ಟನು.

  • ಜಿನದತ್ತನ ಉತ್ತವ ಜನಭಕ್ತ ; ಸರ್ವಜೀವ ಹಿತಸಾಧಕ ; ವಾತ್ಸಲ್ಯ ರತ್ನಾಕರ. ಒಂದು ಇರುವೆಯ ಪ್ರಾಣಕ್ಕೂ ತಪ್ಪದವನು ನಿನಗೆ ತಪ್ಪುವನೆ ??” ಎಂದು ನುಡಿದು ಲಲಿತಾಂಗ ತಳರನ ಕೈಗೆ ಸಿಕ್ಕಿ ಸಾಯು ವುದಕ್ಕಿಂತ ಈ ಆಯುಧಗಳ ಮೇಲೆ ಬೀಳುವುದೆ ಮೇಲೆಂದು ನಿಶ್ಚಯಿಸಿ ವನು. ಬಳಿಕ, “ಕೊಡು ನನಗೆ ಆ ಮಂತ್ರವನ್ನು, ಬೇಗ ಕೊಡ ಬಿದ್ದರೆ ನಿನ್ನನ್ನು ದಿಕ್ಕುಗಳಿಗೆ ಬಲಿಹಾಕಿ ಬಿಡುತ್ತೇನೆ” ಎಂದು ಗರ್ಜಿಸಿ ದನು. ನರಸೇನ ಬೆಚ್ಚಿ ಜಿನದತ್ತ ಸೆಟ್ಟ ತನಗೆ ಹೇಗೆ ಹೇಳಿದ್ದನೋ ಹಾಗೆ ಅವನಿಗೆ ಮಂತ್ರವನ್ನು ಉಪದೇಶ ಮಾಡಿದನು.

ನಿಶ್ಚಂಕೆ : ಲಲಿತಾಂಗನು ನಿಶ್ಯಂಕೆಯಿಂದ ನಂಬಿ ಆ ಮಂತ್ರವನ್ನು ಗ್ರಹಿಸಿ ದನು. ಜನಸಾದಸದ್ಯ ಸ್ಮರಣೆಮಾಡಿ ಜಿನದತ್ತ ಸೆಟ್ಟಿಗೆ ಕೈಮುಗಿದು ನಲು ವಿನ ನೂರು ಕಾಲುಗಳನ್ನೂ ಚೆಕ್ಕನೆ ಕತ್ತರಿಸಿದನು. ಕೆಳಗೆ ಬೀಳುತ್ತ ಯುಧಗಳ ತುದಿ ಮುಟ್ಟುವ ಜಾಗೆ ಬರುವಷ್ಟರಲ್ಲಿ ಮುಟ್ಟಿದ ಮೇಲಕ್ಕೆ ನೆಗೆದನು. ವಿದ್ಯಾದೇವತೆ ಬಂದು ಕೈ ಮುಗಿದು, “ಏನಪ್ಪಣೆ ” ಎಂದು ಬೆಸಗೊಂಡಿತು. ಅವನು, “ ಜಿನದತ್ತಸಿಕ್ಕಿಯ ಬಳಿಗೆ ಕರೆದುಕೊಂಡು ಹೋಗು” ಎಂದನು. ಹಾಗೆಯೇ ಆಗಲೆಂದು ಆ ವಿದ್ಯಾದೇವತೆ ಮರು ಪರ್ವತಕ್ಕೆ ಅವನನ್ನು ಕೊಂಡೊಯ್ದು ಅಲ್ಲಿ ಬಂದಿದ್ದ ಜಿನದತ್ತನನ್ನು ತೋರಿಸಿ ಕೆಳಗಿಳಿಸಿತು, ಇಳಿದ ಕೂಡಲೆ ಅವನು ಜಿನದತ್ತನ ಬಳಿಗೆ ಹೋಗಿ ಅವನ ಕಾಲಿಗೆ ತಲೆ ಮುಟ್ಟಿಸಿ ನಮಸ್ಕಾರ ಮಾಡಿದನು, ಅಂಜನಚೋರ ಅಲ್ಲಿ ಬಂದದ್ದನ್ನು ಕಂಡು ಸಿಟ್ಟಿಗೆ ಬೆರಗಾಯಿತು, ಕಳ್ಳನಿಗೆ ಈ ವಿದ್ಯೆ ದೊರಕಿದ್ದು ಸುಮ್ಮನೆ ಕುಣಿಯುವವನಿಗೆ ಹರೆಯವನೂ ಕೂಡಿದಂತಾಯಿತು. ಅ೦ಜನವಟಿಕೆಯ ಜೊತೆಗೆ ಗಗನಗಾವಿ:ನೀ ವಿದ್ಯೆಯೂ ಬರಲು, ಇವನಿನ್ನು ನಾಡನ್ನೆಲ್ಲ ನಿವಾಳಿ ತೆಗೆದಂತೆ ಕದಿಯದಿರನು.” ಎಂದು ಅಂಜಿ, “ನಿನಗೆ ಈ ವಿದ್ಯ ಹೇಗೆ ಬಂತು ?” ಎಂದು ಕೇಳಿದನು. ಆಂಜನಚೋರನು ಅದರ ಕಥೆಯನ್ನೆಲ್ಲ ಹೇಳಿ, “ಜಿನದತ್ತಾ, ನಿಮ್ಮ ಮಾತನ್ನು ಸಂದೇಹಪಡದೆ ನಂಬಿದ್ದರಿಂದ ಬರುವ ಫಲವನ್ನು ಮನವಾರ ಕಂಡೆ, ಇನ್ನು ಮುಂದೆ ಜನರ ಮತ್ತು ನಿಮ್ಮ ಪಾದಗಳೇ ನನಗೆ ಶರಣು ? ಎಂದು ನುಡಿದು, ಅದುವರೆಗೆ ದುಮಾರ್ಗದಲ್ಲಿ ನಡೆದು ಬಾಳನ್ನು ಹಾಳು ಮಾಡಿಕೊಂಡದ್ದಕ್ಕಾಗಿ ತನ್ನನ್ನು ಪರಿಪರಿಯಲ್ಲಿ ಹಳಿದುಕೊಂಡನು. ಬಳಿಕ, “ ನೀವು ಅರ್ಹನನ್ನಲ್ಲದೆ ಬೇರೆ ದೇವರನ್ನು ಕೈಕೊಳ್ಳುವವರಲ್ಲ. ಪಂಜ ನಮಸ್ಕಾರವನ್ನುಳಿದು ಬೇರೆ ಮಂತ್ರವನ್ನು ನೆನೆಯುವವರಲ್ಲ. ಈ ವಿಧ್ಯ ನಿಮಗೆ ಬಂದದ್ದು ಹೇಗೆ ?” ಎಂದು ಸಿಟ್ಟಿಯನ್ನು ಕೇಳಿದನು. ಆತನು ಆ ಸಂಗತಿಯನ್ನು ಸಂಕ್ಷೇಪವಾಗಿ ಹೇಳತೊಡಗಿದನು ! ________________

ಕನ್ನಡ ಸಾಹಿತ್ಯ ಚಿತ್ರಗಳು ಧನ್ವಂತರಿ, ವಿಶ್ವಾನುಲೋಮ ಜನಪದವೆಂಬ ನಾಡಿನಲ್ಲಿ ನಂದರನೆಂಬ ರಾಜಿಗೆ ಧನ್ವಂತರಿ ಯ:cಬ ಮಗನಿದ್ದನು. ರ:ಜ ಇರೋ ಹಿತನದ ಸೋಮಶರ್ಮನೆಂಬ ಬ್ರಾಹ್ಮಣನಿಗೆ ವಿಶ್ವಾಸವನೆಂಬ ಮಗನಿದ್ದನು. ಇವರಿಬ್ಬರಿಗೂ ಸ್ನೇಹ ಒಂದಾಗು ಹಾಲು ನೀರುಗಳ೦ತೆ ಹೊಂದಿಕೊಂಡಿದ್ದರು. ಇಬ್ಬರೂ ದುರ್ಜನರ ಸಹವಾಸದಿಂದ ಕೆಟ್ಟು ಹೋದರು. ಸೌಂದರ ಸೆಟ್ಟಯ ಸೋಮಶರ್ಮನೂ ಏನೇನು ಮಾಡಿದರೂ ಅವರ ದುಷ್ಟತನವನ್ನು ತಿದ್ದಲಾಗಲಿಲ್ಲ. ಕಡೆಗೆ ಇಬ್ಬರೂ ಮಕ್ಕಳನ್ನು ತೊರೆದುಬಿಟ್ಟರು. ಆ ದುಷ್ಟ ರು ತಂದೆ ತಾಯಿಗಳನ್ನು ಅಗಲಿ ಹೋಗಿ ಬೇರೆ ಇದ್ದರು. ಒಂದು ಸಲ ಅವರಿಬ್ಬರೂ ಅರಮನೆಗೆ ನುಗ್ಗಿ ದಿವ್ಯ ರತ್ನಗಳನ್ನು ಕದ್ದು ಹೊರ ಬರುತ್ತಿರುವಾಗ ತಳಾರನು ಅವರನ್ನು ಹಿಡಿದು ಅರಸನಿಗೆ ಒಪ್ಪಿಸಿದನು. ಆತ ಅವರನ್ನು ಕೊಲ್ಲಿಸದೆ ದೇಶ ಬಿಟ್ಟೋಡಿಸಿದನು. ತನ್ನ ಹೆಂಡತಿಯರನ್ನೂ ತಾಯಿಯರನ್ನೂ ಜೊತೆಯಲ್ಲಿ ಕರೆದುಕೊಂಡು ಅವರು ಗಜಪುರನೆಂಬ ಬೇರೊಂದು ಕಟ್ಟಣಕ್ಕೆ ಹೋಗಿ ನೆಲಸಿದರು. ಒಬ್ಬೊ ಬರೂ ಐನೂರು ಮಂದಿಗೆ ನಾಯಕರಾಗಿ ಪರದೇಶಗಳಲ್ಲಿ ಕದ್ದು ತಂದು ಭೋಗಗಳನ್ನನುಭವಿಸುತ್ತ ಸುಖವಾಗಿದ್ದರು. ಆಗ ವಿಶ್ವಾನುಭೋವನು ಧನ್ವಂತರಿಯನ್ನು ಕುರಿತು, “ ನಾನೊಂ ದನ್ನು ಕೇಳಿಕೊಳ್ಳುತ್ತೇನೆ. ಇಲ್ಲೆನ್ನದೆ ಒಪ್ಪಿಕೊಳ್ಳಬೇಕಣ್ಣಾ, ಅದೇ ನೆಂದರೆ ಮೊದಲಿನಂತೆ ಬಸದಿಗೆ ಹೋಗುವುದನ್ನೂ ನಿಷಿಗಳೊಡನೆ ಮಾತಾಡುವುದನ್ನೂ ಬಿಡು. ಏಕೆಂದರೆ ಅದರಿಂದ ನನ್ನು ಭೋಗಕ್ಕೆ ಜಿಡಿ” ಎಂದು ಒಡ-ಬಡಿಸಿ ಪ್ರತಿಜ್ಞೆ ಮಾಡಿಸಿದನು. ಒಂದು ದಿನ ಅವರಿಬ್ಬರೂ ಪಟ್ಟಣದಿಂದ ಹೊರಟು ಕೆರೆಗೆ ಹೋಗು ರುನಗ ಮದ್ದಾನೆಯೊಂದು ನಿರಂಕುಶವಾಗಿ ನುಗ್ಗಿ ಬರುತ್ತಿರಲು ಕಂಡು ಓಡತೊಡಗಿದರು. ಅತ್ತ ಇತ್ತ ಎಲ್ಲಿಯ ಬೇರೆ ಎಡೆಯಿಲ್ಲದ್ದರಿಂದ ಹತ್ತಿ ರದ, ಜಿನಾಲಯಕ್ಕೆ ಜೋಗಬೇಕಾಯಿತು, ಆನೆಯ ಭಯ ಕಳೆಯುವ ವರೆಗೂ ಇದ್ದು ಹೋಗಬೇಕೆಂದಿದ್ದರು. ಅಷ್ಟರಲ್ಲಿ ದೊಡ್ಡ ಮಳೆ ಬಂತು, ________________

ನಿತ್ಯ೦ಕಳು ಕಘ ಮಳೆ ನಿಲ್ಲುವಷ್ಟರಲ್ಲಿ ಹೊತ್ತು ಮುಳುಗಿ ಕೊಟಿಯ ಬಾಗಿಲು ಹಾಕಿತು. ಆ ಮಹಾ ಪ್ರತಿಜ್ಞರಿಬ್ಬರೂ ರಾತ್ರಿ ಅಲ್ಲಿಯೇ ತಂಗಬೇಕಾಯಿತು. ತನ್ನ ಪ್ರತಿಜ್ಞೆಯನ್ನು ನೆನೆದು ಕಿವಿಗೆ ಹತ್ತಿ ಗಿಣಗಿಕೊಂಡು ಮಲಗಿದರು. ಆ ಬಸದಿಯಲ್ಲಿ ವರಧರ್ಮ ರೆಂಬ ಮುನಿಗಳು ಉಪವಾಸವಿದ್ದ ಭವ್ಯ ಜನಕ್ಕೆ ಧರ್ಮಬೋಧೆ ಮಾಡುತ್ತಿದ್ದರು. ಧನ್ವಂತರಿಗೆ ಎಚ್ಚರವಾಯಿತು. ವಿಶ್ವಾನುಲೋಮನನ್ನು ತಡವರಿಸಿ ನೋಡಿ ಅವನು ನಿದ್ದೆಯಲ್ಲಿ ಮೈಮರೆ ತಿರುವನೆಂದರಿತು ಕಿವಿಯ ಹತ್ತಿಯನ್ನು ತೆಗೆದು ಆಲಿಸಿದನು, “ ಧರ್ಮವನ್ನು ಮನಸ್ಸಿನಿಂದ ಕೇಳಲೊಲ್ಲದವನೆ ಕಿರಿಯ, ಆಯಿ ಲ್ಲದವನ ಬರಿಯ ” ಎಂಬ ಉಪದೇಶದ ಮಾತು ಕಿವಿಗೆ ಬಿತ್ತು. ಅವನಿಗೆ ಕರ್ಮ ಸವೆಯುವ ಕಾಲ ಒದಗಿ ಬಂದಿತ್ತು, ಅವನು ಭಟ್ಟಾರಕರ ಹತ್ತಿರ ಹೋಗಿ, “ ನನ ಗೊಂದು ವ್ರತವನ್ನು ಬಯಪಾಲಿಸಿ: ” ಎಂದು ಬೇಡಿಕೊಂಡನು. ದಿವ್ಯ ಜ್ಞಾನಿಗಳಾದ ಭಟಾರರು ಅವನು ಸನ್ಮಾರ್ಗಕ್ಕೆ ತಿರುಗುವನೆಂದರಿತರು. * ನಿತ್ಯವೂ ತರಟು ತಲೆಯನ್ನು ಕಂಡಲ್ಲದೆ ಊಟ ಮಾಡಬೇಡ " ಎಂದರು. ಹಾಗೆ ಮಾಡುವೆನೆಂದು ಧನ್ವಂತರಿ ವ್ರತ ತೊಟ್ಟನು. ಕೆಲವು ದಿವಸ ಕಳೆಯಿತು, ಒಂದು ದಿನ ಧನ್ವಂತರಿ ಊಟಕ್ಕೆ ಬಂದು ಕುಳಿತಾಗ ತಟಕ್ಕನೆ ಪ್ರತದ ನೆನಪಾಯಿತು. ಆ ದಿನ ವ್ರತವನ್ನು ಮರ ತದ್ದಕ್ಕೆ ನಾಚಿ ಎದ್ದನು. ಪಕ್ಕದ ಮನೆಯ ಕುಂಬಾರ ತರಟು ತಲೆಯವನು. ಅವನನ್ನು ನೋಡಹೋದನು. ಅವನು ಮನೆಯಲ್ಲಿರಲಿಲ್ಲ. ಹುಡುಕುತ್ತ ಮಣ್ಣ ಗುಂಡಿಯ ಬಳಿ ಹೋದನು, ದೂರದಲ್ಲಿ ಅವನ ಬೋಳು ತಲೆಯನ್ನು ಕಂಡು, “ ಕಂಡೆ ! ” ಎಂದು ಕೂಗಿ ಹಿಂದಕ್ಕೆ ಬಂದು ಊಟಮಾಡಿದನು, ಅದೇ ಹೊತ್ತಿನಲ್ಲಿ ಕುಂಬಾರನಿಗೆ ಹೂಳಿದ್ದ ನಿಧಿಯೊಂದು ಕಾಣಿಸಿತ್ತು. ಅದನ್ನೇ ಧನ್ವಂತರಿ ಕಂಡನೆಂದು ತಿಳಿದು ಕುಂಬಾರ ಭಯಪಟ್ಟು ನಡು ರಾತ್ರಿ ಯಲ್ಲಿ ಅದನ್ನು ತಂದೊಪ್ಪಿಸಿದನು. ಮುನಿಯ ಮಾತಿನಿಂದ ಇಷ್ಟಾಯಿತೆಂದು ನೆನೆದು ಧನ್ವಂತರಿ ಕುಂಬಾರನಿಗೆ ಸಾಕಾಗುವಷ್ಟನ್ನು ಕೊಟ್ಟು ಕಳಿಸಿ ನಿಧಿ ಯನ್ನು ತಾನಿಟ್ಟುಕೊಂಡನು. ಮರುದಿನ ಬಸದಿಗೆ ಹೋಗಿ ಭಟಾರರಿಗೆ ತನ್ನ ಲಾಭವನ್ನು ತಿಳಿಸಿ ಮತ್ತೊಂದು ವ್ರತವನ್ನು ಬೇಡಿದನು. ಅವರು, “ ಹಸರಯದ ಹಣ ________________

ಕನ್ನಡ ಸಾಹಿತ್ಯ ಚಿತ್ರಗಳು ತಿನ್ನ ಬೇಡ " ಎಂದರು. ಧನಂತರಿ ಆಗಲೆಂದು ಅಡಿಗೆ ಮನೆಗೆ ಬಂದನು.

  • ಕೆಲವು ದಿನ ಕಳೆದ ಮೇಲೆ ಅವನೂ ವಿಶ್ವಾನುಲೋಮನೂ ತನ್ನ ಪಡೆಯೊಡನೆ ಪರದೇಶಕ್ಕೆ ಹೋಗಿ ಕದ್ದು ಬಹು ದ್ರವ್ಯವನ್ನು ಪಡೆದು ಹಿಂದಿರುಗಿ ಬರುವ ದಾರಿಯಲ್ಲಿ ಒಂದಡವಿಯಲ್ಲಿ ಬೀಡು ಬಿಟ್ಟರು, ಬುತ್ತಿ ಮುಗಿದಿತ್ತು. ಹಸಿವು ಹೆಚ್ಚಾಯಿತು. ಅಡವಿಯ ಹಣ್ಣುಗಳನ್ನು ಹುಡುಕಿ ತನ್ನಿರೆಂದು ಆಳುಗಳನ್ನು ಕಳಿಸಿದರು. ಅವರು ಕರ್ಪೂರದ ಹಂಪಣ ಕುಂ ಕುಮದ ಬಣ್ಣವೂ ಕೂಡಿ ಅಂದವಾಗಿ ಕಂಡ ಕಾಂಚೀರದ ಕಣ್ಣುಗಳನ್ನು ಆಯು ಕಂದು ರಾತ್ರಿ ಹಾಕಿದರು. ಹೆಸರು ಗೊತ್ತಿಲ್ಲದ್ದರಿಂದ ಧನ್ವಂತರಿ ತಿನ್ನಲಿಲ್ಲ. ವಿಶ್ವಾನುಲೋಮನು, “ ಈ ಸವಣರು ತಾವು ಉಣ್ಣದೆ ಹೋಗು ವುದಲ್ಲದೆ ಉಳಿದವರನ್ನೂ ಉಣ್ಣಗೊಡುವುದಿಲ್ಲ. ಇಂಥ ಧೂರ್ತರನ್ನು ಈ ಲೋಕದಲ್ಲಿ ಈ ಸೆ. ಇವರ ಮಾತು ಯಾವ ನಿಶ್ಚಯ ? ” ಎಂದು ನುಡಿದು ಒಡಂಬಡಿಸಿ ನೋಡಿದನ. ಆದರೂ ಧನ್ವಂತರಿ ಹಣ್ಣು ತಿನ್ನಲಿಲ್ಲ. ಅವನು ತಿನ್ನಲಿಲ್ಲವೆಂದು ವಿಶ್ವಾನುಲೋಮನ ತಿನ್ನಲಿಲ್ಲ. “ ನೀವಿಬ್ಬರೂ ಸವ ಇರುಳಗಳು, ಉಪವಾಸ ಸಾಯಿರಿ ಎಂದುಕೊಂಡು ಹಸಿವು ತಡೆಯ ಲಾರದೆ ನೃತ್ಯರೆಲ್ಲರೂ ಹಣ್ಣು ತಿಂದರು ತಿಂದು ಸತ್ತರು. ' ಶಂಕಿಸಿ ಬದುಕಿದೆ ಎಂದು ಗೆಳೆಯರಿಬ್ಬರೂ ಸಂತೋಷಪಟ್ಟರು. ನೃತ್ಯರ ಹೊನ್ನ ನ್ನೆಲ್ಲ ಇಬ್ಬರೂ ಹಂಚಿಕೊಂಡು ಊರಿಗೆ ಬಂದರು.

ಧನ್ವಂತರಿ ವರಧರ್ಮ ಭಟ್ಟಾರಕರನ್ನು ಕಂಡು ನಡೆದದ್ದನ್ನು ತಿಳಿಸಿ ಮತ್ತೊಂದು ವ್ರತವನ್ನು ಬೇಡಿದನು. ಅವರು “ ಹಿಟ್ಟನನ್ನೂ ಬಂಡಿ ಯನ್ನೂ ತಿನ್ನಬೇಡ” ಎನ್ನಲು ಆ ವ್ರತವನ್ನು ಕೈಕೊಂಡನು. ಹೀಗಿರುವಲ್ಲಿ ಮತ್ತೊಂದು ಸಲ ಕದ್ದು ಹಿಂದಿರುಗಿ ಬರುತ್ತಿರುವಾಗ ನಟ್ಟಡವಿಯಲ್ಲಿ ಹಸಿವು ನೀರಡಿಕೆಗಳಿಂದ ಕಂಗೆಟ್ಟರು, ನಾಗಾಲಯದ ಮುಂದಿನ ತಾವರೆಗೊಳಕ್ಕೆ ನೀರು ಕುಡಿಯಲು ಹೋದರು. ಅಲ್ಲಿ ಮುನ್ನಿನ ವಿನ ನಾಡವರು ಬಂದು ಹಿಟ್ಟಿನ ಎತ್ತು ಬಂಡಿಗಳನ್ನು ಪೂಜಿಸಿ ಹೋಗಿದ್ದರು. ಪೃಶ್ಯರು ಅವನ್ನು ತಂದು ತೋರಿಸಿದರು. ಧನ್ವಂತರಿ ತಿನ್ನಿಲ್ಲದಿರಲು ವಿಶ್ಯಾನುಲೋಮನೂ ಒಲ್ಲೆನೆಂದೆನು. ಉಳಿದವರೆಲ್ಲ ಸೈರಣೆಗೆಟ್ಟು ತಿಂದರು. ಹಿಂದಿನಿರುಳು ಹುತ್ತದಿಂದ ಹೊರಬಂದ ಹಾವೊಂದು ಆ ಹಿಟ್ಟಿನಲ್ಲಿ ವಿಷ ________________

ಸಿಲ್ಕಂಕಳು ಆg ಕಾಗಿತ್ತು, ತಿಂದವರೆಲ್ಲ ಸತ್ಯರು. ಕಂಡು ಅಚ್ಚರಿಪಟ್ಟು ಇಬ್ಬರೂ ಎದೆ ನೀಸಿಕೊಂಡರು. ಭಟರ ಹೊನ್ನನ್ನೆಲ್ಲ ಹಂಚಿಕೊಂಡು ಊರಿಗೆ ಬಂದರು. ಇದನ್ನೆಲ್ಲ ಭದರಿಕೆ ಬಿನ್ನಂ, ಮತ್ತೊಂದು ವ್ರತವನ್ನು ಬೇಡಲು, *ನುಗ, ಎರಡು: ಸರ್ವ? ಅಷ್ಟಮಿ ಚರುರ್ದಶಿr ಇಲ್ಲJಣ ಕನ್ನೂ ನಳಂಸವನೂ ಬಿಟ್ಟು ಬಿಡು ” ಎಂದರು. ಮುನಿಯ ಮಾತನ್ನು ನಿಶ್ಚಯ ಎಂದು ನ೦ಬ ವೃತವನ್ನು ಕೈಕೊಂಡನು, ಮತ್ತೊಮ್ಮೆ ಸರದರರಲ್ಲಿ ಕದ್ದು ಹಿಂದಿರುಗುತ್ತ ಒಂದು ಬೆಟ್ಟದ ಅಪ್ಪ ಅಲ್ಲಿ ಬೀಡು ಬಿಟ್ಟಿದ್ದಳು. ಆಗ ವಿಶ್ಯಾವಮನು, ಈ ಪಯಣ ಗಲ್ಲಿ ಹಲವು ದಿನಗಳಿಂದ ಕಳೂ ಮಾಂಸವೂ ದೊರೆತಿಲ್ಲ. ಕಳೂ ಮಾಂಸವೂ ಇಲ್ಲವಾದ ಸಂಸಾರದಿಂದೇನು ಫಲ ? ” ಎಂದುಕೊಂಡು ತನ್ನ ಭಟರಲ್ಲಿ ನಾಲ್ವರನ್ನು ಕರೆದು ಸಕ್ಕದ ಬೆಡರ ಹಳ್ಳಿಯಿಂದ ಕಳ್ಳು ತನ್ನಿರೆಂದು ಕೇಳಿ ಕಳಿಸಿದನು ಧನ್ವಂತರಿಯ ತನ್ನ ಭಟರಲ್ಲಿ ನಾಲ್ವರನ್ನು ಮಾಂಸ ತರಲು ಕಳಿಸಿದನು, ಕಳ್ಳು ತರುತ್ತಿದ್ದ ನಾಲ್ವರೂ, “ ಈ ಕಣ್ಣಿನಲ್ಲಿ ವಿಷ ಬೆರಸಿ ಕೊಟ್ಟು ಎಲ್ಲರನ್ನೂ ಕೊಂದು ಹಾಕಿ ಎಲ್ಲರ ಜೊನ್ನ ನ್ಯೂ ನಾನೇ ತೆಗೆದುಕೊಳ್ಳೋಣ ” ಎಂದು ಆಲೋಚಿಸಿ ಕಳ್ಳಿಗೆ ವಿಷ ಬೆರೆಸಿ ತಂದರು. ಮಾ೦ಸ ತರಹೋದ ವರೂ ಅದೇ ಆಲೋಚನೆಯಿಂದ ಆಡಗಿನಲ್ಲಿ ವಿಷ ಬೆರೆಸಿಕೊಂಡು ಬಂದರು, ಒಂದು ಚತುರ್ದಶಿಯೆಂದರಿತು ಧನ್ವಂತರಿ ಒಲ್ಲದೆ ಹೋದನು. ಅವನ್ನೆಲ್ಲ ಕೆಂರು ನಿತ್ಯಾನವನೂ ಒಲ್ಲದೆ ಬಿಟ್ಟನು. ಉಳಿದವರು ಅವರಿವರಿಗೆ ಅವರವರಿಗೆ ಉಪತ :ರ ಹೇಳುತ್ತ ಕಪಟದಿಂದ ಕಳ್ಳು ಮಾಂಸಗಳನ್ನು ಕೊಟ್ಟರು. ಕುಡಿದು ತಿ .ದು ನಂಜೇರಿ ಸತ್ತರು, ಅವರ ನೋವನ್ನು ನೋಡಿ ವ್ರತದ ಒಳನ್ನು ಭಾನಿಸಿ ಮುನಿಸೇವೆಗಿಂತ ಮಿಗಿಲಾದ ಲಾಭವಿಲ್ಲವೆಂದು ಧನ್ವಂತರಿ ನಿಶ್ಚಯ ಮಾಡಿಕೊಂಡನು. ಎಂದಿನಂತೆ ಹಣವನ್ನು ಹಂಚಿಕೊಂಡು ಗೆಳೆಯರು ಮರಳಿದರು. ಧನ್ವಂತರಿ ಮತ್ತೊಂದು ವ್ರತವನ್ನು ಬೇಡಿದನು. ಮುನಿಗಳು, “ನಿನಗೆ ಯಾವ ಪ್ರಾಣಿಯ ಮೇಲಾದರೂ ಕೋಪ ಬಂದರೆ ಹಿಂದಕ್ಕೆ ಎಳಡಿಯಿಟ್ಟು ಬಳಿಕ ಮನ ಬಂದಂತೆ ಮಾಡು ” ಎಂದು ವಿಧಿಸಿದರು. ________________

04 ಕನ್ನಡ ಸಾಹಿತ್ಯ ಚಿತ್ರಗಳು ಒಂದು ಸಲ ಕಳಿಂಗ ದೇಶಕ್ಕೆ ಕದಿಯ: ಹೋಗಿ ಆರು ತಿಂಗಳಿದ್ದು ಹಿಂದಿರುಗಿ ಬರುತ್ತಿದ್ದಾಗ ಧನ್ವಂತರಿಗೆ, “ ನಾನು ಹೆರರ ಹೆಂಡರಿಗೂ ಹಣಕೂ ಆಸೆಪಡು ಕಾಲ ಕಳೆದೆ. ನನ್ನ ಹೆಂಡರಿಗೂ ಹಣಕೂ ಆಸೆ ಪಡುವವರು ಯಾರಾದರೂ ಇರುವರೋ ಇಲ್ಲವೋ ನೋಡಬೇಕು. ಇದೊಂದು ಚೋದ್ಯ ” ಎನ್ನಿಸಿತು. ಊರಿಗೆ ಬಂದು ಕೆಲವು ಕಾಲ ವಿಲಾಸ ದಿಂದಿದ್ದು ಒಂದು ದಿನ ಪಯಣಿ ಹೊಗುವೆನೆಂದು ಹೇಳಿ ಮನೆಬಿಟ್ಟು ಹೊರೆ ಟನು. ಜಿನಮಂದಿರದಲ್ಲಿ ನಡುವಿರುಳಾಗುವವರೆಗೂ ಪೂಜೆಯನ್ನು ನೋಡು ತಿದ್ದು ತನ್ನ ಮನೆಗೆ ಬಂದನು. ವಿದ್ಯಾಬಲದಿಂದ ಬಾಗಿಲ ಕದವನ್ನು ತೆಗೆದು ಮೆಲ್ಲನೆ ಒಳಹೊಕ್ಕು ನೋಡಿದನು. ಹಾಸಿಗೆಯ ಮೇಲೆ ತನ್ನ ಹೆಂಡ ತಿಯ ಜೊತೆಯಲ್ಲಿ ಯಾರೋ ಮಲಗಿದ್ದದ್ದನ್ನು ಕಂಡು ಕೋಪವುಕ್ಕಿತು. ವ್ರತವನ್ನು ನೆನೆದು ಏಡಿ ಹಿಂದೆ ಸರಿದನು. ಅಷ್ಟರಲ್ಲಿ ಅವನ ಹೆಂಡತಿ ಎಚ್ಚತ್ತು “ ಸೆಕೆಯಾಗುತ್ತದೆ. ಅತ್ತೇ, ಅತ್ರ ಹೋಗಿ ” ಎಂದು ಹೊದಕೆಯನ್ನು ತೆಗೆದೆಸೆದಳು. ತಾಯಿ ಹೆಂಡತಿಯರಿಬ್ಬರನ್ನೂ ಕಂಡು ಧನ್ವಂತರಿ ಬೆರಗಾದನು. * ಮುನಿ ಕೊಟ್ಟ ವ್ರತವನ್ನು ನೆನೆದು ಒಳ್ಳೆಯದೆ ಆಯಿತು. ನೆನೆಯದೆ ಕೋಪದಿಂದ ಇರಿದಿದ್ದರೆ ತಾಯಿಯ ಗರ್ಭಿಣಿಯಾದ ಹೆಂಡತಿಯ ಸತ್ತು ನನಗೆ ಮಹಾ ಪಾತಕ ಸುತ್ತಿಕೊಳ್ಳುತ್ತಿತ್ತು. ಇಹ, ಪರ ಎರಡೂ ಕೆಡುತ್ತಿತ್ತು. ಎಲ್ಲ ವ್ರತಗಳಿಗಿಂತಲೂ ಈ ವ್ರತವೇ ಮೇಲು' ಎಂದು ಕೊಂಡನು. ಪರಮ ವೈರಾಗ್ಯವುಂಟಾಗಲು ಇದ್ದ ಹಣದಲ್ಲಿ ತಾಯಿಗೂ ಹೆಂಡತಿಗೆ ತಕ್ಕಷ್ಟನ್ನು ಕೊಟ್ಟು ಉಳಿದದ್ದನ್ನು ಬಡ ಶ್ರಾವಕರಿಗೂ ಜಿನ ಪೂಜೆಗೂ ಕೊಟ್ಟನು. ಬಳಿಕ ವರಧರ್ನು ಭಟ್ಟಾರಕರ ಬಳಿ ಹೋಗಿ ದೀಕ್ಷೆ ಕೊಡಬೇಕೆಂದು ಬೇಡಿದನು, ಅವರು, “ ಹುಟ್ಟಿದ ಕಡೆ ಹೊನ್ನು ಹೆಚ್ಚುತ್ತದೆ, ಹೋದ ಕಡೆ ತಪಸ್ಸು ಹೆಚ್ಚುತ್ತದೆ ಎಂದು ನಾಣ್ಣುಡಿಯಂಟು. ನೀನು ಇಲ್ಲಿ ತಪಸ್ಸು ಮಾಡ ಬೇಡ ” ಎಂದು ನುಡಿದು ತಮ್ಮ ಸಧರ್ಮಿಗಳಾದ ಶ್ರೀವರ್ಮ ಭಟ್ಟಾರಕ ರಿಂದ ದೀಕ್ಷೆ ಪಡೆಯು ಹೇಳಿ ಅವರಲ್ಲಿಗೆ ಕಳಿಸಿದರು. ಧನ್ವಂತರಿ ಮನೆಗೆ ಬಂದು, ವಿಶ್ಯಾನುಲೋಮನನ್ನು ತನ್ನಲ್ಲಿಗೆ ಕಳಿಸುವಂತೆ ತಾಯಿಗೆ ತಿಳಿಸಿ ________________

ಸಿಳ್ಳcಯ ಕಪಿ ಶ್ರೀ ವರ್ಮ ಭಟ್ಟಾರಕರ ಬಳಿ ಹೋಗಿ ದೀಕ್ಷೆ ಪಡೆದು ತಪಸ್ಸಿಗೆ ನಿಂತನು ಇತ್ಯ ವಿಶ್ವಾನುಲೋಮನು ಧನ್ವಂತರಿ ಹೋದದ್ದನ್ನು ಕೇಳಿ ಮರುಗಿ, “ ನನಗೆ ನನ್ನ ಕೈಯನ ಗತಿಯ ಗಶಿ ! ಎಂದು ಅವನನ್ನು ಹಿಂಬಾಲಿ ಸಿದನು. ಅವನು ಬಂದು ನಾಶ: ಡಿಸಿದಾಗ ಧನ್ವಂತರಿ ಮುನಿ ತಪೋನಿರತ ನಾಗಿದ್ದರಿಂದ ಮಾತಾಡಲಿಲ್ಲ. ನಿಶಾನು:ಲೋನವು ಮುಗಿದು ಬೇರೊಬ್ಬ ತಾಷಸನಿಗೆ ಶಿಷ್ಯನಾದನು. ಮರುದಿನ ತಪಸ್ಸು ಮುಗಿದ ಮೇಲೆ ಧನ್ವಂತರಿ ಮುನಿ ಏಶ್ವಾನುಲೋಮನಿದ್ದಲ್ಲಿಗೆ ಬಂದು ಮಾತಾಡಿಸಿದನು. ಅವನು ಮುನಿಸಿ ನಿಂದ ಪತ್ನವಾಗಿದ್ದನು. ಆಗ ಧನ್ವಂತರಿ “ ನನ್ನ ತಪಸ್ಸಿನ ಫಲವೂ ನಿನ್ನ ಮನಸ್ಸಿನ ಫಲವೂ ಕಡೆಯಲ್ಲಿ ಕಣ?ಟಿರುವುದು ” ಎಂದು ನುಡಿದು ಹೊರಟುಹೋದನು. ಇಬ್ಬರೂ ಗೋಗ್ರ ತಪಸ್ಸು ಮಾಡಿ ಸಮಾಧಿಮರಣ ಪಡೆದು ಧನ್ವಂತರಿ ಅಚ್ಯುತ ಕಲ್ಪದಲ್ಲಿ ಆಶಮಿಂದ್ರನಾದನು ; ವಿಶ್ವಾನುಲೋಮನು ವ್ಯಂಢರಲೋಕದಲ್ಲಿ ವಾಹನ ದೇವನಾದನು. ಒಮ್ಮೆ ಇಬ್ಬರೂ ಸಂಧಿಸಿ ದಾಗ ಹಿಂದಿನ ಜನ್ಮದ ಸಂಗತಿಗಳನ್ನು ನೆನೆದುಕೊಂಡರು, ಅಚ್ಯುತೇಂದ್ರನು “ ನಮ್ಮ ನಿಮ್ಮ ತಪಸ್ಸಿನ ಫಲವನ್ನು ನೋಡು ” ಎಂದು ಹಂಗಿಸಿದನು, ವಾಹನದೇವನು ನಾಚಿದರೂ, “ ನಿಮ್ಮಲ್ಲಿಯೇ ಅಲ್ಲ, ನಮ್ಮಲ್ಲಿಯೂ ಒಳ್ಳೆ ಯವರಿದ್ದಾರೆ. ನನ್ನನ್ನು ನೋಡಬೇಡ ” ಎಂದನು. ಇಬ್ಬರೂ ಹಟ ತೊಟ್ಟು ಯಾರ ತಪಸ್ಸು ಹೆಚ್ಚೆಂದು ಪರೀಕ್ಷಿಸಹೊರಟರು. ಮೈಗೆ ಬಳ್ಳಿ ಹಬ್ಬಿ ಹುತ್ತ ಬೆಳೆದು ತಪಸ್ಸಿನಲ್ಲಿ ನಿರತನಾಗಿದ್ದ ಜಮ ದಗ್ನಿ ಯೆಂಬ ಜಟಾಧಾರಿ ಮುನಿಯನ್ನು ವಾಹನದೇವನು ತೋರಿ, 1 ಇವನ ತಪಸ್ಸನ್ನು ನೋದೆ '೦ದನು, “ ಮೂರ್ಖನ ತಪಸ್ಸು ಶಾಶ್ವತವಲ್ಲ ” ಎಂದು ಇತಿಹಮಿಂದ್ರನು ತನ್ನ ಮಾಯೆಯಿ೦ದ ಬಹು ಸುಲಭವಾಗಿ ಆ ಮುನಿಯ ತಪಸ್ಸನ್ನು ಭಂಗಪಡಿಸಿದನು. ಬಳಿಕ, “ ನಮ್ಮ ಖುಷಿಗಳು ಹಾಗಿರಲಿ, ಸಾಮಾನ್ಯ ಗೃಹಸ್ಸನೊಬ್ಬನ ವ್ರತವನ್ನು ನೀನು ಭಂಗಪಡಿಸಿದರೆ ನಮಗಿಂತ ಅಜ್ಞಾನಿಗಳಿಲ್ಲವೆಂದು ಒಪ್ಪಿಕೊಳ್ಳುತ್ತೇನೆ” ಎಂದು ಸಂತ ಕಟ್ಟ, ರಾತ್ರಿ ಪ್ರತಿಮಾಯೋಗದಲ್ಲಿ ನಿಂತಿದ್ದ ನನ್ನನ್ನು ತೋರಿಸಿದನು. ವಾಹನದೇವನು ಎಂಥೆಂಥ ಭಯಂಕರ ಮಳೆಯನ್ನು ಪ್ರಯೋಗಿಸಿದರೂ ವ್ರತಭಂಗ ಮಾಡ ________________

ಕನ್ನಡ ಸಾಹಿತ್ಯ ಚಿತ್ರಗಳು ಲಾಗಲಿಲ್ಲ. ಆಗ ಆತನು ಮಿಥ್ಯಾತ್ವವನ್ನು ಬಿಟ್ಟು ಸಮೃಷ್ಟಿಯಾದನು. ಆಚ್ಯುತೇಂದ್ರನು ಬಂದು ನನಗೆ ನಮಸ್ಕಾರ ಮಾಡಿ, 4 ಸರ್ವ ದಿನ ಗಳಲ್ಲಿ ಆಕೃತ್ರಿಮ ಚೈತ್ಯಾಲಯಗಳಿಗೆ ಹೋಗಿ ಬರಲು ಸಹಕಾರಿಯಾಗು ಇದೆ ; ತೆಗೆದುಕೊಳ್ಳಿ” ಎಂದು ಪ್ರಾರ್ಥಿಸಿ ಒಡಂಬಡಿಸಿ ಈ ಗಗನಗಾಮಿನೀ ವಿಯನ್ನು ಕೊಟ್ಟು ದೇವಲೋಕಕ್ಕೆ ಹೋದನು. ವಾತ್ಸಲ್ಯದಿಂದ ನಾನಿ ದನ್ನು ನಮ್ಮ ದೇವಸ್ಥಾನದ ಮಣಿ ವರಸೇನನಿಗೆ ಕೊಟ್ಟೆನು, -ಹೀಗೆಂದು ಜಿನದತ್ತ ಸೆಟ್ಟ ಹೇಳಲು ಕೇಳಿ ಲಲಿತಾಂಗನು ಬೆರಗಾ ದನು. “ ಈತ ಕಿರುಕುಳ ಮನುಷ್ಯ, ಇವನಿಗೆ ದೇವತೆಗಳೂ ಎರಗಿದ ಕೆಂದರೆ, ಧರ್ಮಕ್ಕಿಂತ ದೊಡ್ಡದೇನೂ ಇಲ್ಲ” ಎಂದು ನಿಶ್ಯಂಕನಾಗಿ ನಂಬಿ ದನು. ನಂಬಿ ಜೈನ ದೀಕ್ಷೆ ಪಡೆದು ತಪಸ್ಸು ಮಾಡಿ ಮುಕ್ತನಾದನು. ಹಿನ್ನುಡಿ ಇದು ಧರ್ಮಾಮೃತವೆಂಬ ಗ್ರಂಥದಲ್ಲಿನ ಒಂದು ಕಥೆ, “ ಧರ್ಮವನ್ನು ಕೈಕೊಂಡು ನಡಸುವವನು ಸಂದೇಹ ಬಡಬಾರದು' ಎಂಬುದನ್ನು ಈ ಕಥೆಯಲ್ಲಿ ಒತ್ತಿ ಹೇಳಿದೆ. ಇದೇ ರೀತಿ ಜೈನ ಧರ್ಮದ ಮುಖ್ಯಾಂಶಗಳನ್ನೆಲ್ಲ ಈ ಗ್ರಂಥದಲ್ಲಿ ಒಂದೊಂದು ಕಥೆಯಲ್ಲಿ ವಿವರಿಸಿದೆ. - ಧರ್ಮಾಮೃತವನ್ನು ಬರೆದವನು ನಯಸೇನ, ಇವನು ಕ್ರಿ.ಶ. ೧೨ನೆಯ ಶತ ಮಾನದಲ್ಲಿದ್ದು, ಕನ್ನಡದಲ್ಲಿ ಸಂಸ್ಕೃತವನ್ನು ಬೆರಸುವುದನ್ನು ಇವನೊಪ್ಪುವು ದಿಲ್ಲ ; ಶುದ್ಧ ಕನ್ನಡದಲ್ಲಿ ಬರೆಯಬೇಕೆನ್ನುತ್ತಾ ನ. ಜನರಲ್ಲಿ ರೂಢಿಯಾಗಿರುವ ಸಂಸ್ಕೃತ ಮಾತುಗಳನ್ನೂ ಗಾದೆಗಳನ್ನೂ ಸೇರಿಸಿಕೊಂಡು ಕನ್ನಡದ ಬಳಿಕ ಮಾತಿನ ಶೈಲಿಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಾನು ಗ್ರಂಥರಚನೆ ಮಾಡಿದ್ದಾನೆ. ಇಂಥ ಗ್ರಂಥದಲ್ಲಿ ಬೇರೆ ಮತಧರ್ನುಗಳ ವಿಮರ್ಶೆ ಬರುವುದು ಸಹಜ, ಬರ ದಾಗ ಜನರ ಮನ ನೋಯುವಂತ ಕಟುವಾಗಿ ಬರೆಯದ ಜೈನಧರ್ಮದ ಪ್ರಭಾವ ದನ್ನು ಎತ್ತಿ ತೋರಿಸುವುದನ್ನು ಮಾತ್ರ ಗುರಿಯಾಗಿಟ್ಟು ಕೊಂಡಿದ್ದಾನೆ. ಸುಲಭ ಶೈಲಿಯ ಈ ಗ್ರಂಥ ಈ ಕಾಲದಲ್ಲಿ ಜನರಂಜಕವಾಗಿತ್ತೆಂದು ________________

ತಾಂಡವ ಮುನಿ ಶ್ರೀ ಜನಕಚಾರಮಣ ನಿಮಲ ಸ ಓಜಸಂಭವ ಜನಕನಸನು ರಾಜ: ಖಳ ನಿನುತ ನಿಖಿಲಾಮರ ಕಿರಿಚಯ ರಾಚಿತಾಮಲ ಆಳಿತಷದ ಪಂ ಜನಿವಸ ಜನದಯ ಶುಭ ಭೂಜ ತೆರವರು ರಾಯ ನರಹರಿ ಪಾಲಿಸುಕಿ ಜಗವ (ಸುಮಂತ್ರನು ರ್ಸತಾ ರಾಮ೭ಕ್ಷಣರನ್ನು ಗಂಗಾತೀರದಲ್ಲಿ ಬಿಟ್ಟು ಅವರ ಪ್ರಗಲಲಾರದ ಕಂಬನಿ ದುಂಬಿ ಕಷ್ಟದಿಂದ ಅಯೋಧ್ಯೆಗೆ ಹಿಂದಿರುಗಿದನು, ಬರ ದೇರನ್ನು ಕಂಡು ಪುರಜನರು ಆಳಲಿದರು, ಅರಮನೆಯಲ್ಲಿ ದಶರಥ ಮಹಾರಾಜ ದುಃಖದಿಂದ ಬೆಂದು ಬಿಸುಸುಯುತ್ತಿದ್ದನು. ಸುಮ೦ತ್ರ ಆರಮನೆಯನ್ನು ಹೊಕ್ಕು ರಾಮನು ಗಂಗೆಯನ್ನು ದಾಟ ಆರಣ್ಯ ಪ್ರವೇಶಮಾಡಿದನೆಂದು ತಿಳಿಸಿದರು. ಕೆ: ದಶರಥನು ದೊಪ್ಪನೆ ಬಿದ್ದನು, ಕೈ ಸನ್ನೆಯಲ್ಲಿ ಸರ್ವಸ್ವವನ್ನು ಹೋಗಹೇಳಿ ರಾಮನನ್ನು ನೆನೆದು ಪರಿಪರಿಯಾಗಿ ಹಲುಬಿದನು, ಕೌಸಲ್ಯ, “ ರಾಜೇಂದ್ರ, ನೀನು ಸತ್ಯವ್ರತ, ನಿನ್ನ ಆ ಗ್ರಹವನ್ನು ಬಿಸಿ, ಕುಲಸಂಪನ ಸಿರಿಗೆ ಮಗ ಅಭಾರವಾದ ನಂದು ಸಂತೋಷಪಡಬೇಕು. ಹೀಗೆ ಕಳವಳ ಪಡುವುದ ? ” ಎಂದು ಸಮಾಧಾನ ಹೇಳಿದಳು, ದೊರೆಗೆ ಸಮಾಧಾನವಾಗಲಿಲ್ಲ. ಮರೆಯುವಂಥ ಮನವೇ, ಎಂದು ಸಂಕಟಪಟ್ಟನು. ಕುಮಾರನನ್ನು ಕಾಡಿಗೆ ಕಳಿಸಿ ತಾನು ಬದುಕುವುದಿಲ್ಲ ಬಂದು ನುಡಿದು ವೈಶ್ಯ ತಪಸರಿಂದ ತನಗೆ ಶಾಪ ಬಂದ ಸಂಗತಿಯನ್ನು ಹೇಳ ಭೂಡಗಿದನು. ಕೌಸಲ್ಯ ಕೇಳು. ನನಗೆ ಮೌವನದ ಆರಂಭ ಕಾಲ, ಆ ಉನ್ನ ಯೌವನದಲ್ಲಿ ಬೇಟೆಯಲ್ಲಿ ಅತ್ಯಾಸಕ್ತಿಯಿತ್ತು. ಬೇಟೆಯ ಹುಚ್ಚೇ ನನ್ನನ್ನು ಹಾಳು ಮಾಡಿತು. ಒಮ್ಮೆ ನಾನು ಬೇಟೆಗೆ ಹೋಗಿ ಕಾಡಿನಲ್ಲಿ ನಡುರಾತ್ರಿಯಲ್ಲಿ ಬಿಲ್ಲಿಗೆ ಬಾಣಹೂಡಿ ಮೃಗ ಬಂದೀತೆ ಎಂದು ಕಾಯುತ್ತಿದ್ದೆ. ಕಾದು ಕೂತಿದ್ದಾಗ * ಘಳು ಘಳು ಘುಳು ' ಎಂದು ಸದ್ದಾಯಿತು, ಹೆಂದಿ ನೀರನಲ್ಲಿ ಸದ್ದು ________________

fity ಮಾಡುತ್ತಿರುವುದೆಂದು ತಿಳಿದು ಹೂಡಿ ಹಿಡಿದಿದ್ದ ೬೦ಬನ್ನು ಎಳೆದು ಬಿಟ್ಟೆ, ಆಕ್ಷಣವೆ ಆ ಕಡೆಯಿಂದ ಆರ್ತನಾದ ಕೇಳ ಬಂತು. " ಶಂಕರಾ ! ಸದಾ ಶಿವಾ !' ಎಂದು ನೋಂದು ಕೂಗಿ ಯಾರೋ ಬಿದ್ದಂತಾಯಿತು. ಕೂಡಲೆ ಬಿಲ್ಲನ್ನಲ್ಲಿಯೇ ಎಸೆದ ಬಿಟ್ಟು ದನಿ ಬಂದ ಕಡೆಗೋಡಿದೆನು, ಅಲ್ಲಿ ನೆಲದ ಮೇಲೆ ಕಡೆದಿದ್ದ ಮುನಿಕುಮಾರನನ ಕಂಡೆನು ಕಂಡು ಎದೆ ಕದಡಿಹೋಯಿತು. ಸುತ್ತಿಕೊಂಡ ಸಾಸಕ್ಕೆ ಮನಸ್ಸು ಬೆದಬದನೆ ಬೆಂದು ಹೋಯಿತು. ನಡುನಡುಗುತ್ತ ಅವನನ್ನು ಮಾತಾಡಿಸಿದೆನು : 'ನೀನು ಯಾರು ? ನರನೋ, ನಿಶಾಚರನೋ? ನಿಜ ಹೇಳು " ಎಂದು ಕೇಳಿದನು. ಆತ, ನಾವು ನರರು ; ವೈಶ್ಯರು, ತೀರ್ಥಯಾತ್ರೆಗಾಗಿ ಸುತ್ತು ತಿದ್ದೆವು. ಯಾರಾದರೇನು ? ಇನ್ನು ನನಗೆ ಇಲ್ಲಿಯ ಮಣ ಹರಿಯಿತು. ನನಗೆ ಬಲು ಮುಪ್ಪಿನ ತಂದೆ ತಾಯಿಗಳಿದ್ದಾರೆ. ಅಲಸದೆ ಅವರ ಶುಶ್ರ ಮಾಡುತ್ತಿದ್ದೆ, ಅವರನ್ನು ಹೊತ್ತು ಎಲ್ಲ ತೀರ್ಥಕ್ಷೇತ್ರಗಳನ್ನೂ ದರ್ಶನ ಮಾಡಿಸಿದೆ. ಕಾಶಿಯೊಂದುಳಿಯಿತು. ಅವರನ್ನು ಕಾಶಿಗೆ ಕರೆದುಕೊಂಡು ಹೋಗಬೇಕೆಂದು ಮಾಡಿಕೊಂಡಿದ್ದೆ. ಆ ಸಂಕಲ್ಪ ನಿಲುಕದಾಯಿತು. * ದೈವಗತಿ ಬೇರೆ ಇತ್ತು” ಎಂದು ನೊಂದು ನುಡಿದನು. ಅವನೇ ತಾಂಡವ ಮುನಿ, ತಂದೆತಾಯಿಗಳ ಸೇವೆಯಲ್ಲಿ ತೊಡಗಿ ಹಣ್ಣು ಮುದುಕರಾದ ಅವರನ್ನು ಕಾವಡಿಯಲ್ಲಿ ರೂಪಿಸಿ ಹೊತ್ತು ತೀರ್ವ ಯಾತ್ರೆಯಲ್ಲಿ ತೊಳಲುತ್ತಿದ್ದನು. ಆ ರಾತ್ರಿ ಕಾಡಿನ ನಡುವೆ ಅವರು ನೀರು ಬೇಕನ್ನಲು ಕಾವಡಿಯನ್ನಿ ೪ಸಿ ಚರ್ಮದ ತಂಬಿಗೆಯನ್ನು ತೆಗೆದುಕೊಂಡು ನೀರು ಹುಡುಕುತ್ತ ಬಂದು ನನ್ನ ಬಾಣಕ್ಕೆ ಗುರಿಯಾಗಿದ್ದನು. ನನ್ನ ಮಾತಿನ ಸರಣಿಯಿಂನ ನಾನು ದೊರೆಯೆಂದು ತಿಳಿದನು. ನನ್ನ ಮನಸ್ಸಿನ ಸಂಕಟವನ್ನರಿತು, " ಏಕೆ ಚಿಂತಿಸುತ್ತೀಯೆ ? ಯಾರ ಆಯಸ್ಸನ್ನು ಯಾರು ಮುಗಿಸಬಲ್ಲರು ? ಆತ್ಮನಿಗೆ ಅಳಿವಿಲ್ಲ. ಮಾಯೆಯ ತೆರೆ ಆತ್ಮಜ್ಯೋತಿ ಯನ್ನು ಮರೆಮಾಡಿರುತ್ತದೆ, ಅಷ್ಟೆ. ಇದಕ್ಕೆ ಸೀನಳುಕಬೇಡ ” ಎಂದು ನನಗೆ ಸಮಾಧಾನ ಹೇಳಿದನು.

  • ಆಯ್ತಾ ರಾಜಾ, ಹಲವು ಮಾತೇಕೆ ? ನಮ್ಮ ತಾಯಿಯನ್ನು ಸಲಹು ; ತಾತನನ್ನು ಕಾಪಾಡು. ನಿನಗೆ ಅಕ್ಷಯ ಫಲ ದೊರೆಯುವುದು,

ನಿನ್ನ ಪಾಪಕ್ಕೆ ಇದೇ ತಕ್ಕ ಪ್ರಾಯಶ್ಚಿತ್ತ, ಅವರಿಗೆ ಸಿರನ್ನೆಲೆ, ಮೇಲುಷ ಚಾರ ಏನೇನಾಗಬೇಕೋ ಅದನ್ನೆಲ್ಲ ಮಾಡು, ಗಂಗಾತೀರಕ್ಕೆ ಹೋಗ ಬಯಸಿದರೆ ಕಾಶಿಗೆ ಕರೆದುಕೊಂಡು ಜೋರು. ಮೃತ ಸಂಸ್ಕಾರದವರೆಗೂ ಅವರಿಗೆ ತಕ್ಕ ಉಪಚಾರ ಮಾಡುತ್ತಿರುವದು ಅರಸು, ಇನ್ನ ಸ್ನೇ ಕೂಡಿದ್ದು ” ಎಂದು ತನ್ನ ತಂದೆ ತಾಯಿಗಳ ರಕ್ಷಣೆಯ ಭಾರವನ್ನು ನನಗೊಪ್ಪಿಸಿದನು. ಬಳಿಕ ಎದೆಗೆ ನಮ್ಮ ಸರಳನ್ನು ಕಿತ್ತೆಸೆದನು. ರಕ್ತ ಸುರಿದು ಬಳಲಿ ಕಣ್ಣು ಮುಚ್ಚಿದನು. ಹೃದಯ ಕಮಲದಲ್ಲಿ ಶಂಕರನ ವರನ ಮೂರ್ತಿಯ ನ್ನಿರಿಸಿ ಧ್ಯಾನಮಗ್ನನ: ದನು. ಆತ್ಮಜ್ಯೋತಿ ತಲೆಯ ಚಿಪ್ಪನ್ನೊಡೆದು ಹೊರ ಹಾಯಿತು. ಅದನ್ನು ಕಂಡು ನನ್ನ ಮನಸ್ಸಿನಲ್ಲಿ ಅನುತಾಪದ ಬೆಂಕಿ ತೊತ್ತಿ ಹೊಗೆಯಾಡತೊಡಗಿತು. ಕಣ್ಣಿನಲ್ಲಿ ನಿರುಕ್ಕಿ, ಸಂಕಟದಲ್ಲಿ ಚೆಯು ತಂಬಿಗೆಯಲ್ಲಿ ನೀರು ತುಂಬಿಕೊಂಡು ತಾಂಡವನ ತಾಯ೦ದೆ ಗಳನ್ನು ಅರಸುತ್ತ ಹೋದೆನು. ಆ ಮುಪ್ಪಿನ ತಪಸ್ವಿಗಳು ಮತ್ತು ಸಡಿಲಿನ ಚಿಪ್ಪಿನ ಹಾಗೆ ಬಾಯಿ ಭಾಯಿ ಬಿಡುತ್ತಿದ್ದರು, “ ನೀನೊಳಗೆ ಜಾರಿ ಬಿದ್ದನೋ ? ಕಾಳೊರಗ್ಯ ವೇನಾದರೂ ಕಟ್ಟಿ ತೋ ? ಹುಲಿ ಹಿಡಿಯಿತೋ ? ಹಳ್ಳಕೊಳ್ಳದಲ್ಲೆಲ್ಲಾ ದರೂ ಬಿದ್ದನೋ ? ಅಲ್ಲದಿದ್ದರೆ, ಹೊರರಾದ ಬೇಟೆಗಾರರ ಶಸ್ಸದೇಟಿಗೆ ಸಿಕಿ ಆಳಿದನೋ ? ಇನ್ನೂ ಬರಲಿಲ್ಲವಲ್ಲ ! ಶಾ, ಕಂದಾ, ಹಾ ! ” ಎಂದು ಗೋಳಾಡುತ್ತಿದ್ದರು. ತಾಂಡವನ ತಾಯ್ತಂದೆಗಳ ಆ ಗೋಳನ್ನು ಕೇಳಿ ನೋ೦ದೆನು. ವಾತಾಡದೆ ಕೈಯ ತಂಬಿಗೆಯನ್ನು ಕೆಳಗಿಳಿಸಿದೆನು. ಅವರು, “ ಇಂದು ಇದೇಕಪ್ಪಾ ತಡಮಾಡಿದೆ ? ನೀರು ತಂದಿದ್ದರೆ ಎರೆ ಎಂದರು, ನನ್ನ ಹರ್ಷನೆಲ್ಲ ಹಾರಿಹೋಯಿತು. ನಗುತ ಬಂದ ಮೌನವಾಗಿಯೆ ಸೀರೆರೆದೆನು. 'ಮಗನೇ, ಈ ನೀರ; ಹೊಸು ಕಾಣುತ್ತದೆ. ನಮ್ಮ ಸೇವೆಯಲ್ಲಿ . ಅಲಸನಾದೆಯಲ್ಲಪ್ಪಾ, ಅಯ್ಯೋ, ಈ ಸಾಸಿಗಳ ಮೇಲೆ ವಿಧಿ ಮುಳಿದನೆ ?” ಎಂದು ನಾನೆರಿದ ನೀರನ್ನೆಲ್ಲ ಚೆಲ್ಲಿಬಿಟ್ಟರು. ಆಗ ನಾನು ನಡೆದದ್ದನ್ನೆಲ್ಲ ತಿಳಿಸಿದೆನು ಅರಿಯದೆ ನನ್ನಿಂದಾದ ಅಪರಾಧವನ್ನು ತಿಳಿಯಹೇಳಿದೆನು. ಹೇಳಿ, 'ನನಗೆ ಶಾಪ ಕೊಡಿ ” ಎಂದು ಕೈ ಮುಗಿದು ನಿಂತೆವು. ________________

ಗೆಗಿ ಕನ್ನಡ ಸಾಹಿತ್ಯ ಚಿತ್ರಗಳು ನನ್ನ ಮಾತು ಕೇಳಿ ಆ ವೃದ್ಧರು ಕವಡಿಯಲ್ಲಿ ಹೊರಳಿ ಬಿದ್ದರು, ನಡುಗುವ ತಲೆ ಸುತ್ರಶೋಕದಿಂದ ಮತ್ತೂ ನಡುಗತೊಡಗಿತು, ಬತ್ತಿದ ಕಣ್ಣುಗಳಿಂದ ಕಂಬನಿ ಉರುಳತೊಡಗಿತು, “ಅಯ್ಯೋ ! ವಿಧಿಯು ನಮಗೆ ಈ ರೀತಿಯ ಪುತ್ರಶೋಕವನ್ನು ಕರುಣಿಸಿದನೆ! ಹು ಮಗನೆ ! ನಮ್ಮನ್ನು ಪರಕ್ಕೆ ಸಲ್ಲಿಸದೆ, ನಮಗೆ ಸಮ್ಮತಿ ಕಾಣಿಸದೆ ನೀನೆ ಹೀಗೆ ಹೋಗಿ ಬಿಡುವುದೆ ? ಹಾ, ಕಂದಾ ! ” ಎಂದು ಗೋಳಾಡಿದರು. ಬಳಿಕ ನನ್ನನ್ನು ಕಳು, “ಎಲೆ ಮಹಾಪುರುಷ, ಇದು ನಮ್ಮ ಪೂರ್ವಕರ್ಮಧ ಫಲ, ನಿನೇನು ಮಾಡೀಯೆ ? ನಮ್ಮ ಚೈತನ್ಯವದುಗಿ ಹೋಗುವ ಮೊದಲೆ ನನ್ನನ್ನು ನಿನ್ನಿ: ದಳಿದ ಶಾಂಡವನ ಬಳಿಗೆ ಕರೆದುಕೊಂಡು ಹೋಗು, ಮಗನಲ್ಲಿ ನಮಗೆ ಮಾತುಂಟು. ನಮ್ಮನ್ನು ಮಗನ ಬಳಿಗೈದಿಸುವುದು ನಿನ್ನ ಕಾರ್ಯಕ್ಕೆ ಕಳಸ ವಿಟ್ಟಂತೆ ” ಎಂದು ನನಗೆ ಕೈ ಮುಗಿದು ಬೇಡಿದರು. ಕಾವಡಿಯನ್ನು ಹೊತ್ತುಕೊಂಡು ನಡೆದು ನದಿಯೊನ ತಂಡವನ ಬಳಿಯಲ್ಲಿ ಇಬ್ಬರ ಇಳಿಸಿದೆನು. ಚಲಿಸಲಾರದ ಆ ನದಿಯರು ಮಗನ ಮೈಯನ್ನು ತಡವರಿಸಿ ತಡವರಿಸಿ ನೋಡಿದರು. ಇರಿದ ಒಂಬಿನ ಗಾಯವನ್ನು ತಡವರಿಸಿ ಅಳಲನ್ನು ತಡೆಯಲಾರದೆ ಮತ್ತೆ ಗೋಳಾಡಿದರು. 'ಕಂಬು, ಕೊಟ್ಟ ಮಾತನ್ನು ನಡಸಕ್ಕೆ ಬೇಸತ್ತು ನಮ್ಮನ್ನು ಬಿಸುಟ:ಹೊದೆಯಾ ನಮಗಿನ್ನೇನು ಗತಿ ? ಯಾವ ದಾರಿ ? ಹೇಳು ಕಂದಾ' ಎಂದು ಹಲುಬಿದರು. ಅಳಿದ ನಿಮ್ಮ ಮಗನ ಹಾಗೆಯೇ ನಿಮ್ಮನ್ನು ನಾನು ಕಾಪಾಡುತ್ತೇನೆ. ನನ್ನ ಮಾತು ನಂಬಿ ” ಎಂದು ಪ್ರಾರ್ಥಿಸಿಕೊಂಡೆನು. ನನ್ನ ಮಾತು ಕೇಳಿ ಅವರಿಗೆ ಅಳಲುಬ್ಬಿತು. ಮಗನನ್ನ ಗಲಿ ಜೀವ ಹಿಡಿದಿರಲೊಲ್ಲೆನೆಂದರು. (( ನಿನಗೂ ಹೀಗೆಯೇ ಸುತ ಏಯೋಗದಿಂದ ಅಳೆವಾಗಲಿ ” ಎಂದು ಶಪಿಸಿ ಇಬ್ಬರೂ ಪ್ರಾಣಬಿಟ್ಟರು. ಬಳಿಕ ಅವರಿಗೆ ಸಂಸ್ಕಾರದಿಂದ ಉತ್ತರ ಕ್ರಿಯೆ ಮಾಡಿ ಊರಿಗೆ ಬಂದೆನು, -ಹೀಗೆಂದು ಕಥೆ ಹೇಳಹೇಳುತ್ತಲೆ ದಶರಥ ಮಹಾರಾಜನು ಬಹಿ ರಂಗ ಭಾವಗಳನ್ನೆಲ್ಲ ಮರೆತನು, ಸಚ್ಚಿದಾನಂದ ಸ್ವರೂಪವಾದ ಆತ್ಮ ತತ್ರದಲ್ಲಿ ಐಕ್ಯಭಾವನೆಯನ್ನು ಪಡೆದು ದೇಹವನ್ನು ತೊರೆದ ನು.

ಹಿನ್ನುಡಿ[ಸಂಪಾದಿಸಿ]

'ತೊರವೆಯ ರಾಮಯಣ' ಎಂದು ಪ್ರಸಿದ್ಧವಾಗಿರುವ ಕನ್ನಡ ರಾಮಾಯಣದಿಂದ ಈ ಕಥೆಯನ್ನಾಯ್ದದೆ. ವಾಲ್ಮೀಕಿ ರಾಮಾಯಣವನ್ನನುಸರಿಸಿ ರಾಮ ಕಥೆಯನ್ನು ಸರ್ವ ಸುಲಭವಾಗಿ ಸಿಗುವ ಸರಳವಾದ ಗ್ರಂಥ ಈ ತೊರವೆಯ ರಾಮಯಣ.

ಇದನ್ನು ಬರೆದ ಕಹಿಯ ಚೆಸರು ನರಹರಿ. ಬಿಜಾಪುರದ ಹತ್ತಿರ ಇರುವ ತೊರವೆಯೆಂಬ ಗ್ರಾಮ ಇವನ ಊರು. ಅಲ್ಲಿನ ಸರಸಿಂಹ ಸ್ವಾಮಿಯ ಅಂಕಿತದಲ್ಲಿ ಕಾವ್ಯ ರಚನೆ ಮಾಡಿದ್ದಾನೆ. ಕವಿಯ ಊರಿನಿಂದ ಗ್ರಂಥಕ್ಕೆ 'ತೊರವೆಯ ರಾಮಯಣ' ಎಂಬ ಹೆಸರು ಬಂದಿದೆ 'ಗದುಗಿನ ಭಾರತ' ಎಂಬಂತೆ.

'ಕುಮಾರ ವಾಲ್ಮೀಕಿ' ಎಂಬುದು ನರತರಿಗೆ ಬಿರುದು. ಇವನು 'ಕುಮಾರವ್ಯಾಸ' ನನ್ನು ಆದರ್ಶವಾಗಿಟ್ಟುಕೊಂಡಂತಿದೆ. ಅವನನ್ನು ಮೆಚ್ಚಿ ಸ್ಮರಿಸಿದ್ದಾನೆ. ಇವನ ಕಾಲ ಸುಮಾರು ಕ್ರಿ. ಶ. ೧೫೦೦.

ತೊರವೆ ರಾಮಾಯಣ ಜನಪ್ರಿಯವಾದ ಕಾವ್ಯ,


________________

ಕಳೂರು ಕೊಡಗೂಸು ಶ್ರೀಗೌರೀ ಪ್ರೇಮಸುಧಾ ಸಾಗರಪೂರ್ಣbದು ಸತಾಮಳವದನಾ ಭೋಗ ಭೋಗೀಶ್ವರವರ ನಾಗವು ನುತನಿಗೆ ಸೌಖ್ಯ ಮಂ ಶಿವಲಿಂಗಂ [ ಶಿವನ ಮುಖ ಶ್ರೀಗೌರಿಯ ಮೂಾನ್ನು ತದ ಸಾಗರಕ್ಕೆ ಪೂರ್ಣಚಂದ್ರ ನಾಗಿರುವುದು ; ಮುಗುಳು ನಗೆಯಿಂದ ಕೂಡಿ ನಿರ್ನುನಾಗಿರುವುದು. ಹೀಗೆ ನಗುಮೊಗವನ್ನು ತಳೆದು ಸರ್ಷಗಳನ್ನು ಮುಡಿದು ಆಗ ಮಗಳಿಂದ ಹೊಗಳಿಸಿ ಕೊಳ್ಳುತ್ತಿರುವ ಶಿವಲಿಂಗ ಸೌಖ್ಯವನ್ನು ಕೊಡಲಿ. } ಕೋಳೂರೆಂಬ ಒಂದು ಪಟ್ಟಣವುಂಟು. ಊರ ಹೊರವಳಯದಲ್ಲಿ ಸೊಗಸಾದ ಉದ್ಯಾನಗಳು ; ಕೋಟೆಯನ್ನು ಬಳಸಿದ ಅಗಳಿನಲ್ಲಿ ಕಮಲ, ಕನ್ನೈದಿಲೆ ಮೊದಲಾದ ಹೂವುಗಳು ; ಊರೊಳಗೆ ದೊಡ್ಡ ದೊಡ್ಡ ಸುಂದರ ಮಂದಿರಗಳು, ಮಂಟಪಗಳು, ಶಿವಾಲಯಗಳು ಇವುಗಳಿಂದ ಆ ಪಟ್ಟಣ ಕಳೆಗೂಡಿ ಬೆಳಗುತ್ತಿತ್ತು. ಆ ಪಟ್ಟಣದಲ್ಲಿ ಶಿವದೇವನೆಂತೊಬ್ಬ ಭಕ್ತನಿದ್ದನು, ಅವನು ಗುಣವಂತ, ಶಿವಪೂಜಾಸಕ್ಕ, ಅವನಿಗೊಬ್ಬ ಮಗಳಿದ್ದಳು. ಅವಳು ಚೆಲುವೆ, ಏನಯ ಸಂಪನ್ನ. ಅವಳ ಮಾತು ಅನ್ನುತದಂತೆ ಮೃದು, ಅನ ಇನ್ನೂ ಚಿಕ್ಕವಳು ; ಮದುವೆಯಿಲ್ಲ ; ಕಸ್ಯೆ, ಒಂದು ದಿನ ಶಿವದೇವ ದೇವಕಾರ್ಯಕ್ಕಾಗಿ ಹೆಂಡತಿಯೊಡನೆ ನೆರೆ ಯೂರಿಗೆ ಹೋಗಬೇಕಾಯಿತು. ಪ್ರಯಾಣಕ್ಕೆ ಸಿದ್ಧ ಮಾಡಿಕೊಂಡು ಮಗ ಇನ್ನು ಮನೆಯ ಕಾವಲಿಗೆ ಇಟ್ಟು ಹೋಗಬೇಕೆಂದು ನೆನೆದು ಅವಳನ್ನು ಹತ್ತಿರ ಕರೆದನು. ಅವಳ ಮೈ ತಡವಿ ಗಲ್ಲ ಹಿಡಿದು ಮುದ್ದಿಸಿ ಪ್ರೀತಿಯಿಂದ ಸ್ವಲ್ಪ ಹೊತ್ತು ನೋಡುತ್ತಿದ್ದನು. ಬಳಿಕ ಅವಳಿಗೆ “ಮಗಳೇ, ಆಚೆಯಿಚೆಯ ಮಕ್ಕಳೊಡನೆ ಆಟಕ್ಕೆ ಹೋಗಬೇಡ, ಮರೆಯಬೇಡ ಕಾಯಿ, ಹಿತ್ತಿಲ ಕಡೆಯ ಕೋಣೆಗೆ ಒಬ್ಬಳೇ ಹೋಗಬೇಡ, ಮನೆಬಿಟ್ಟು ಎಲ್ಲಿಯೂ ಹೋಗ ಬೇಡ. ನಾನು ನಾಳ ಹಿಂದಿರುಗಿ ಬರುವಾಗ ನಿನ್ನ ಮನಸ್ಸಿಗೆ ಒಪ್ಪಾಗುವ ಬಟ್ಟೆ ತಂದುಕೊಡುತ್ತೇನೆ ; ಬಂಗಾರದ ಬೊಂಬೆ ತಂದುಕೊಡುತ್ತೇನೆ; ಒಡವೆ ತಂದುಕೊಡುತ್ತೇನೆ. ಎಚ್ಚರಿಕೆಯಿಂದ ಮನೆಯನ್ನು ಕಾದುಕೊಂಡಿರು. ದಿನವೂ ಶಿವಾಲಯಕ್ಕೆ ಹೋಗುತ್ತಿರು, ಒಂದು ಬಳ್ಳ ಕಪಿಲೆಯ ಹಾಲನ್ನು ತೆಗೆದುಕೊಂಡು ಹೋಗಿ ಹೊತ್ತು ತಪ್ಪದಂತೆ ಶಿವಲಿಂಗಕ್ಕೆ ಒಪ್ಪಿಸಬೇಕು, ಇದು ನನ್ನ ವ್ರತ. ಇದನ್ನು ನಡೆಸುತ್ತಿರು, ತಪ್ಪಬೇಡ” ಎಂದು ಬುದ್ದಿ ಹೇಳಿ ಗನು. ಅವಳನ್ನು ಒಪ್ಪಿಸಿ ಹೆಂಡತಿಯೊಡನೆ ನೆರೆಯೂರಿಗೆ ಹೊರಟುಹೋದನು, ಈ ಹುಡುಗಿ ಪರಿಮಳೋದಕದಲ್ಲಿ ಸ್ನಾನ ಮಾಡಿದಳು ; ಒಳ್ಳೆಯ ಮಡಿ ಸೀರೆಯನ್ನು ಟ್ಟುಕೊಂಡಳು ; ಹಣೆಗೆ ವಿಭೂತಿಯಿಟ್ಟು ಶೃಂಗಾರ ಮಾಡಿ ಕೊಂಡಳು. ಆಮೇಲೆ ಶಿವನಿಗೆ ಮೀಸಲಾಗಿಟ್ಟಿದ್ದ ಕಪಿಲೆಯ ಹಾಲನ್ನು ಕಮ್ಮಗೆ ಇನಿದಾಗುವ ಹಾಗೆ ಕಾಸಿ ಬಳ್ಳದಲ್ಲಿ ಅಳೆದು ಹೊಂಬಟ್ಟಲಿಗೆ ತುಂಬಿ ಕೊಂಡಳು. ಶುಭ್ರವಾದ ಬಿಳಿಯ ಬಟ್ಟೆಯನ್ನು ಎರಡು ಮಡಿಕೆ ಮಾಡಿ ಬಟ್ಟಲ ಮೇಲೆ ಮುಚ್ಚಿಕೊಂಡು ಸಡಗರದಿಂದ ಶಿವಾಲಯಕ್ಕೆ ಹೋದಳು. ಈ ದೇವಾಲಯದ ಒಳಹೊಕ್ಕು ಕಲ್ಲಿನಾಥನನ್ನು ಕಂಡು ನಮಸ್ಕಾರಮಾಡಿ ಜಾಲಿಸ ಬಟ್ಟಲನ್ನು ಮುಂದಿಟ್ಟಳು. ಇಟ್ಟು, “ ದೇವಾ, ಹಸಿದೆ ; ಹಾಲು ಕುಡಿ” ಎಂದು ನುಡಿದು ಕೊಡಗೂಸು ಕಂಬದ ಮರೆಗೆ ಹೋದಳು. ಸ್ವಲ್ಪ ಹೊತ್ತು ಬಿಟ್ಟು ಬಂದು ನೋಡಿದರೆ ಹಾಲಿನ ಬಟ್ಟಲು ಇದ್ದಂತೆಯೇ ಇತ್ತು. ಕಂಡು ನಡುಗಿ ನೊಂದಳು ; ಮರುಗಿದಳು, ಎದೆ ದಡದಡಿಸಿತು ; ಉಸಿರು ಬಿಸಿ ಬಿಸಿಯಾಯಿತು ; ಕೈ ನಡುಗಿತು ; ಬಾಯೊಣಗಿತು ; ಗುಡುಗುಡನೆ ಕಂಬನಿಯಿಳಿಯಿತು. ಕಂಬನಿ ಸುರಿಸುತ್ತ ಲಿಂಗವನ್ನು ನೋಡಿ, " ಏನು ಕಾರಣ ಈ ಹಾಲು ಕುಡಿಯದೆ ನೀನು ಸುಮ್ಮನಿದ್ದೀಯ ? ಅಯ ! ನನಗೆ ಆತಂಕವುಂಟುಮಾಡುವುದು ಸರಿಯೆ ? ಶಂಕರಾ, ನೀನೆ ಹೇಳು, ದೇವಾ, ನಿನಗೇನು ಹಸಿವಾಗಿಲ್ಲವೊ ? ಹಾಲು ಕಾದಿಲ್ಲವೊ ? ಹೆಚ್ಚು ಕಾದು ಕೈ ಬಿಟ್ಟಿದೆಯೋ ? ಬಿಸಿಯೇನಾದರೂ ಆರಿಹೋಗಿದೆಯೇ ? ಕಮ್ಮಗಿಲ್ಲವ ? ಇಂಪಾಗಿಲ್ಲವೆ ? ನಿನ್ನ ಕಣ್ಣಿಗೆ ಚೆನ್ನಾಗಿ ಕಾಣುವುದಿಲ್ಲವೆ ? ಅಥವಾ ಹೊಗೆ ಸುತ್ತಿಕೊಂಡಿದೆಯೆ ? ಹೆರರ ಕಣ್ಣೆ೦ಜಲಾಯಿತೆ ? ತುಂಬ ಕನ್ನತ ಸಾಹಿತ್ಯ ಚಿತ್ರಗಳು ಬಿಸಿಯಾಗಿ ಬಿಟ್ಟಿದೆಯೆ ? ಮಾಸತಿಳಿಯಿತೆ ? ಏಕೆ ಕುಡಿಯುವುದಿಲ್ಲ ಹೇಳು ಎಂದಳು. ಉತ್ತರವಿಲ್ಲದಿರಲು ಮತ್ತೆ, “ ನಾನೇನಾದರೂ ಆಸೆಪಟ್ಟು ನೋಡಿದೆನೆ ? ಕೆನೆಯನ್ನು ಬೇರೆ ತೆಗೆದಿರಿಸಿ ತಂದೆನೆ ? ಮನೆಯಲ್ಲಿ ಹೊತ್ತು ಕಳೆದು ತಡ ಮಾಡಿದೆನೆ ? ಮತ್ತೇನಾದರೂ ನೆನೆದೆನೆ ? ಏಕೆ ನೀನು ಮಾತಾಡು ವುದಿಲ್ಲ, ಪುರಾ ” ಎಂದು ಕೇಳಿದಳು. “ ಆರಿಹೊಗಿಬಿಟ್ಟರೆ ಸವಿಯಾಗಿರು ಇದೆಯೆ ? ಮನಸ್ಸು ಮಾಡಿ ಬೇಗ ಕುಡಿದು ಬಿಡಯ್ಯ” ಎಂದು ಬೇಡಿದಳು. ಆ ನಿನಗೆ ಏನು ಬೇಕು, ಹೇಳು, ಈಗಲೆ ಹೋಗಿ ತಂದು ಕೊಂಡು ಇನೆಹೊಸ ಸಕ್ಕರೆ, ಹೊಸ ಜೇನು, ನರನಯ್ಯ, ಬಾಳೆಯ ಹಣ್ಣು, ನಾಲಿಗೆ ಬಯಸಿದ್ದು ಏನಿದ್ದರೂ ಹೇಳು; ತಂದುಕೊಡುತ್ತೇನೆ, ಹುರಿಗಡುಬು, ತರಗು, ಚಕ್ಕುಲಿ, ಕರಂಜಿಕಾಯಿ, ಅತಿರಸ ಚಿಗುಳಿ, ಲಡ್ಡುಗೆ, ಸಕ್ಕರೆ ಫೇಣಿ-ಇವೆಲ್ಲ ಇವೆ ನಮ್ಮ ಮನೆಯಲ್ಲಿ. ನೀನು ಬಯಸಿದರೆ ಹೋಗಿ ಈಗಲೇ ತರುತ್ತೇನೆ. ಹಾಲೊಡನೆ ಆರೋಗಿಸಬೇಕೆಂದರೆ ಮನೆಗೆ ಹೋಗಿ ಓಗರ ತರುತ್ತೇನೆ. " ಇವಳು ಹಸುಳೆ ; ಸುಳ್ಳಾಡುತ್ತಾಳೆ' ಎನ್ನಬೇಡ, ನನ್ನ ಗುಣವನ್ನು ಪರೀಕ್ಷೆ ಮಾಡಿ ನೋಡು ” ಎಂದು ಕೇಳಿಕೊಂಡಳು. ಆಗಲೂ ಶಿವ ಸುಮ್ಮನಿರಲು, “ ಅಯ್ಯಾ, ಕೇಳು. ನನ್ನ ಮಾತನ್ನು ಉಪೇಕ್ಷೆ ಮಾಡದೆ ನೀನು ಹಾಲು ಕುಡಿದರೆ ನಿನ್ನನ್ನು ವೀರಭದ್ರನ ತೇರಿಗೆ ಕರೆದುಕೊಂಡು ಹೋಗುತ್ತೇನೆ; ನಮ್ಮ ಗುರುವಿನ ಪರ್ವಕ್ಕೆ ಕರೆದುಕೊಂಡು ಹೋಗುತ್ತೇನೆ. ನಮ್ಮ ತಂದೆ ನಾಳೆ ನನಗೆ ತಂದುಕೊಡುವ ರತ್ನಾಭರಣ ಗಳನ್ನೆಲ್ಲ ನಿನಗೇ ಕೊಟ್ಟು ಬಿಡುತ್ತೇನೆ, ಚಂದ್ರಶೇಖರಾ ” ಎಂದು ಅಡಿಗೆರಗಿ ಮರುಗಿ ಹಲವು ಬಗೆಯಲ್ಲಿ ಒಡಂಬಡಿಸಿದಳು. ಆದರೂ ಶಿವ ಪುಟ ಮಿಡುಕದೆ ಸುಮ್ಮನಿದ್ದನು. ಕೊಡಗೂಸು ನೊಂದು ತಲ್ಲಣಿಸಿದಳು, “ಮಹೇಶ್ವರನು ನುಡಿಯು ವುದಿಲ್ಲ; ಹಾಲು ಕುಡಿಯುವುದಿಲ್ಲ. ಅಯ್ಯೋ ! ಏನು ಮಾಡಲಿ ?” ಎಂದು ಅತ್ತತ್ತು ಬಾಯಿಬಿಟ್ಟಳು ; ಸುರನೆ ಸುಯ್ದಳು ; ಬೆಪ್ಪಾಗಿ ನಿಂತಳು ; ಬೆಚ್ಚಿ ________________

ಗಿಣ ಕೋಳೂರು ಕೊಡಗೂಸು ಬೆದರಿ ಬಿದ್ದಳು ; ಎದ್ದು ದುಃಖದಿಂದ ದಿಕ್ಕು ತೋರದೆ ನಿಂತಳು. ಹೀಗೆ ಕೊಟಪಟ್ಟು ಸಾಕಾಗಿ ಕಡೆಗೆ ಅತಿ ನಿಷಾದದಿಂದ, ಹಾಲು ಕುಡಿಯದ ನಿನಗೆ ನನ್ನ ಪ್ರಾಣವನ್ನೆ ಒಪ್ಪಿಸುತ್ತೇನೆ” ಎಂದು ನಿಶ್ಚಯಿಸಿ ಮುಂದಿದ್ದ ಕಲ್ಲು ಕಂಬಕ್ಕೆ ತಲೆಯನ್ನೊಡ್ಡಿ ತಟ್ಟನೆ ಹಾಯ್ದ ಳು,

  • ಮಗಳಿಗೆ ನೋವಾಗುವುದಲ್ಲ” ಎಂದು ಚಂದ್ರಶೇಖರನು ಪ್ರತ್ಯಕ್ಷ ವಾಗಿ ಬಂದು ಅವಳನ್ನು ಕೈಯಿಂದ ಎತ್ತಿಕೊಂಡನು. ಬಳಿಕ ಆ ಭಕ್ತ ವತ್ಸಲನು ಅವಳು ತಂದ ಅಕ್ಷೆವಾಲನ್ನು ಸಂತೋಷದಿಂದ ಕುಡಿದನು,

ಆಗ ಕೊಡಗೂಸಿನ ಮುದ್ದು ಮುಖದಲ್ಲಿ ಎಳನಗೆಯುಕ್ಕಿತು, ನಲಸಿ ನಿಂದ ಲಿಂಗವನ್ನು ನೋಡಿದಾಗ ಅವಳ ಕಣ್ಣ ಬೆಳಕಿನಿಂದ ಲಿಂಗಕ್ಕೆ ಅಮ್ಮ ಶಾಭಿಷೇಕ ಮಾಡಿದಂತಾಯಿತು. ಅವಳು ಅನುರಾಗ ತುಂಬಿದ ವಿನೋದ ದಿಂದ, " ನಾನು ಹಸುಳೆಯೆಂದು ಪಾಲು ಕುಡಿಯದೆ ನನಗೆ ಸಂಕಟವುಂಟು ಮಾಡಿ ಕಾಡಿದೆಯಲ್ಲವೆ ? ” ಎನ್ನಲು ನಾಗಭೂಷಣನು ನಲಿದು ನಕ್ಕನು.

  • ಅಪ್ಪ ಬರಲಿ. ಇದನ್ನೆಲ್ಲ ಹೇಳುತ್ತೇನೆ, ಅಯ್ಯಾ, ಮರೆಯಬೇಡ. ಆಮೇಲೆ ನನಗೂ ನಿನಗೂ ಸಂವಾದವುಂಟು ” ಎಂದು ನುಡಿದು ಅಡ್ಡ ಬಿದ್ದು ನಗುನಗುತ್ತ ಕೊಡಗೂಸು ಮನೆಗೆ ಬಂದಳು, ಮಹೇಶ್ವರನು, “ ಬಾಲೆಯ ಮೃದು ಮಡಿ ಬಟ್ಟಲ ಹಾಲಿಗಿಂತ ಕಿವಿಗಿನಿದಾಗಿತ್ತು. ಅದರಿಂದ ಮೊದಲು ಹಾಲು ಕುಡಿಯದೆ ಅವಳ ಮುದ್ದು ಮಾತುಗಳನ್ನು ಕೇಳಿ ಆನಂದಿಸುತ್ತಿದ್ದೆ” ಎಂದು ಮೆಗೆ ಹೇಳಿದನು.

ಆಮೇಲೆ ಆ ಬಾಲೆ ದಿನ ದಿನವೂ ಭಕ್ತಿಯಿಂದ ಹಾಲು ತಂದು ಶಿವನಿಗೆರೆದು ಕುಡಿಸಿ ಮನೆಗೆ ಹೋಗುತ್ತಿದ್ದಳು. ಕೆಲವು ದಿನ ಕಳೆಯಿತು. ಒಂದು ದಿನ ಕೊಡಗೂಸು ಶಿವನಿಗೆ ಹಾಲೆರೆದು ಮನೆಗೆ ಬರುತ್ತಿದ್ದಳು. ಬೇರೂರಿಗೆ ಹೋಗಿದ್ದ ಶಿವದೇವನೂ ಅಂದು ಊರಿಗೆ ಹಿಂದಿರುಗಿ ಅದೇ ದಾರಿಯಲ್ಲಿ ಬರುತ್ತಿದ್ದವನು ಮಗಳ ಹತ್ತಿಕ ಬಂದು ಅವಳ ಕೈಯ ಬಟ್ಟಲು ಬರಿದಾಗಿದ್ದದ್ದನ್ನು ಕಂಡನು. ಕಂಡು ಕರಳಿದನು. ಮಗಳನ್ನು ಕುರಿತು, “ಎಲೆ ತಬ್ಬಲೀ, ನಿನ್ನ ಕೈಯಲ್ಲಿ ಬರಿಯ ಬಟ್ಟಲಿದೆಯಲ್ಲ ! ಹಾಲು ಕನ್ನಡ ಸಾಹಿತ್ಯ ಚಿತ್ರಗಳು ನೆಲಕ್ಕೆ ಚೆಲ್ಲಿತೋ ? ನೀನೆ ಕುಡಿದೆಯೋ ? ಇಲ್ಲ, ನಿನ್ನೊಡನಾಡಿಗಳಿಗೆ ಎರೆದು ಬಿಟ್ಟಿ ಯೊ ? ಹೇಳು ” ಎಂದು ಆಗ್ರಹಿಸಿ ನುಡಿದನು, ತಂದೆ ಕೋಪಿಸಿ ನುಡಿಯುತ್ತಿದ್ದರೂ ಹುಡುಗಿ ಹೆದರದೆ ಧೈರ್ಯವಾಗಿ ನಿಂತಳು. ( ಅಪ್ಪಾ, ನೀನು ಹೇಳಿದ್ದಂತೆ ಬಟ್ಟಲು ಹಾಲನ್ನು ತೆಗೆದು ಕೊಂಡು ಹೋಗಿ ಮುಂದಿಟ್ಟಿ, ಕುಡಿದ ತ್ರ್ಯಂಬಕ, ಅದರಿಂದ ಬರಿಯ ಬಟ್ಟಲನ್ನು ತರುತ್ತಿದ್ದೇನೆ. ದಿನದಿನವೂ ಹೀಗೆಯೆ ಶಿವ ಹಾಲು ಕುಡಿಯು ತ್ತಾನೆ. ಸುಳ್ಳಲ್ಲ ; ನಿಜ ” ಎಂದಳು. ಅದನ್ನು ಕೇಳಿ ಆ ತಂದೆ, “ಹಾಲನ್ನು ಶಿವ ಕುಡಿಯುತ್ತಾನೆಯೆ ? ಸುಳ್ಳು ಸುಳ್ಳು” ಎಂದನು. “ ಅತಿ ವೃದ್ದ ರಾದ ಭಕ್ತರು ಸದಾಕಾಲವೂ ಪ್ರಾರ್ಥಿಸಿದರೂ ಶಿವನು ಆಯೋಗಿಸುವುದು ದುರ್ಲಭ. ಏನೂ ಅರಿಯದ ಬುದ್ದಿಯಲ್ಲದ ಹುಡುಗಿಯ ಮಾತು ಕೇಳಿ ಹಾಲು ಕುಡಿಯುತ್ತಾನೆಯೆ ??” ಎಂದು ತನ್ನ ಮನಸ್ಸಿನಲ್ಲಿ ಆಲೋಚಿಸಿ ದನು, “ ಶಿವನಿಗೆ ಇವಳು ಹಾಲು ಕೊಡುವುದನ್ನು ನಾಳೆ ನೋಡುತ್ತೇನೆ” ಎಂದು ನಿರ್ಧರಿಸಿ ಮಗಳೊಡನೆ ಮನೆಗೆ ಬಂದನು. ಮರುದಿನ ಬೆಳಗ್ಗೆ ಎಂದಿನಂತೆ ಹೊಂಬಟ್ಟಲಿನಲ್ಲಿ ಹಾಲು ತುಂಬಿ ಕೊಂಡು ಹೊರಟು ಮಗಳೊಡನೆ ಶಿವದೇವನೂ ದೇವಾಲಯಕ್ಕೆ ಹೋಗಿ ಶಿವನೆದುರಿಗೆ ನಿಂತು ನೋಡುತ್ತಿದ್ದನು. ಕೊಡಗೂಸು ಮೃಡನಿಗೆರಗಿ ಹಾಲನ್ನು ಮುಂದಿಟ್ಟು ಕೈ ಮುಗಿದು ಆರೋಗಿಸೆಂದು ಬಿನ್ನಹ ಮಾಡಿದಳು. ಹರನು ಆ ಭಕ್ತಿಯ ಮಹಿಮೆಯನ್ನು ಧರೆಗೆಲ್ಲ ತೋರಬೇಕೆಂದು ಹಾಲು ಕುಡಿ ಯದೆ ಸುಮ್ಮನಿದ್ದನು. ಆಗ ತರಳೆ ಅಂಜಿ ನಡುಗಿದಳು. ಅದನ್ನು ಕಂಡು ತಂದೆ ಕೋಪಗೊಂಡು, “ ನೀನೇ ಕುಡಿದು ಹಾಲನ್ನು ಶಿವ ಕುಡಿದನಂದು ಹುಸಿ ನುಡಿದೆಯಲ್ಲ. ಪಾತಕಿ, ನಿನ್ನನ್ನು ಕಡಿದಿಕ್ಕದೆ ಬಿಡುತ್ತೇನೆಯೇ ?ಎಂದು ಉಗ್ರವಾಗಿ ನುಡಿಯುತ್ತ ಹೊಡೆಯಲು ಮೇಲೆ ನುಗ್ಗಿದನು. ಹುಡುಗಿಗೆ ಮಹಾಭಯವುಂಟಾಯಿತು. ಗಡಗಡನೆ ನಡುಗುತ್ತೆ, * ಹಾ, ಮಹೇಶ್ವರಾ ! ಹಾ, ನಂದೀಶ್ವರಾ ! ನೀನೆ: ಸವೃತಿ ಕಾಪಾಡು » ಎಂದು ಚೀರಿದಳು. ಆಗ ಸೋಮಶೇಖರನು, 11 ಅಂಜದಿರು ಮಗಳೇ ! !! ________________

ಜೋಳರು ಕೊಡಗೂಸು ಎಂದು ಬೇಗ ಅಭಯ:ಕೊಟ್ಟನು. ಕೃಪಾನಿಧಿಯಾದ ಶಂಕರನು ಮನಸ್ಸಿ ಗೊಪ್ಪಿ ಸೊಗಸುವ ಆ ಅಮ್ಮ ಥರಸವನ್ನು ಕುಡಿದನ: . ಬಳಿಕ ಆ ಕೊಡಗೂಸನ್ನು ಕೃಪಾಕಟಾಕ್ಷದಿಂದ ನೋಡಿ, ಕೈ ನೀಡಿ ಸೆಳೆದು ಬಿಗಿಯಪ್ಪಿಕೊಂಡು, ಗೌರೀಕಾಂತನು ಅವಳನ್ನು ತನ್ನೊಡಲಿನಲ್ಲಿ ಜೋಕೆಯಿಂದ ಇರಿಸಿಕೊಂಡನು. ಶಿವಲಿಂಗದಲ್ಲಿ ಒಳಹೊಗುತ್ತಿರುವ ಮಗ ಳನ್ನು ಕಂಡು ತಂದೆ, " ಎಟಿ, ಹೆಣಗಬೆಡ ” ಎಂದು ಚಂಡಿಕೆ ಹಿಡಿದೆಳೆ ಧನು, ಜಡೆ ಮಾತ್ರ ಹೊರಗುಳಿಯಿತು; ಲೋಕವೆಲ್ಲ ಮೆಟ್ಟಿ ಕೊಂಡಾಡು ವಂತೆ ಕೊಡಗೂಸು ಲಿಂಗದೊಳಹೊಕ್ಕಳು. ಪಾಪಹರನಾದ ಪರಮೇಶ್ವರನು ಪ್ರೀತಿಯಿಂದ ತನಗೆ ಹಾಲು ಕೊಟ್ಟು ಮುಗ್ಧ ಭಕ್ತಿಗೆ ಸೊಗಸಾದ ಅಮೃತ ವನ್ನು ಕೊಟ್ಟು ಕಾಪಾಡಿದನು | ಹಿ ನ್ನು ಡಿ ಈ ಕಥೆ ವೃಷಭೇಂದ್ರ ವಿಜಯವೆಂಬ ಕಾವ್ಯದಿಂದ ಆಯ್ದು ಕೊಂಡದ್ದು. ವೃಷಭೇಂದ್ರ ವಿಜಯದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರೂಪಿಸಿದೆ, ಹರಿಹರನ (ಬಸವರಾಜ ದೇವರ ರಗಳೆ ” ಯಲ್ಲಿನ ಕಥೆಗೆ ಈ ಗ್ರಂಥದಲ್ಲಿನ ಕಥೆಗೂ ಹಲವು ವ್ಯತ್ಯಾಸಗಳಿವೆ. ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದ ಇನ್ನೂ ಕೆಲವು ಭಕ್ತರ ಕಥೆಗಳೂ ಇಲ್ಲಿ ದೊರೆಯುತ್ತವೆ. ಕೊಡಗೂಸಿನ ಕಥೆಯನ್ನು ಬಸವಣ್ಣನವರು ಹೇಳಿದಂತೆ ವರ್ಣಿಸಿದೆ, ಇದನ್ನು ಬರೆದವನು ಷಡಕ್ಷರದೇವ, ಇವನು ಯಳಂದೂರು ವಶಕ್ಕೆ ಸ್ವಾಮಿ ಯಾಗಿದ್ದನು. ಇವನ ಕವಿತೆ ಅಲಂಕಾರ ಚಮತ್ಕಾರ ಪೂರ್ಣವಾಗಿ ಪಂಡಿತರಂಜಕ ನಾf}ದ. _ರಾಜಶೇಖರವಿಳಾಸ, ವೃಷಭೇಂದ್ರ ವಿಜಯ, ಶಬರ ಶಂಕರವಿಲಾಸ-ಎಂಬವು ಇವನ ಕೃತಿಗಳು. ಇವೆಲ್ಲ ಪ್ರೌಢಶೈಲಿಯ ಚಂಪೂ ಕಾವ್ಯಗಳು ; ಹಳಗನ್ನಡದಲ್ಲಿ ರಚಿತವಾಗಿವ. ಇವನ ಕಾಲ ಕ್ರಿ. ಶ. ೧೭ ನೆಯ ಶತಮಾನದ ಉತ್ತರಾಧ, ________________

ಆರ್ಥಕೋಶ ಆಗ್ಗ ದಳ ಆಭಿಷೇಕಕ್ಕೆ ನೀರು ಕರುನೆ = ಗಮಗಮಿಸುವ ತುಪ್ಪ ಆಣ್ಣ ವಾಲು = ಶುದ್ಧವಾದ ಹಾಲು ನೇಸರು = ಸತರ್ಯ - ಉಪ್ಪವಡಿಸುವ ( ನಿದ್ದೆಯಿಂದ) ಏಳು ಸಬೆಳ್ಳನ ಸೇನಾ ಆಗ್ರಹಿಸು=ಪರಾಕು ಹೇಳು, ಹೂಗಳು ಕಾವುದ = ಕಾಣಿಕೆಯಾಗಿ ಕಳಿಸುವ ಒಳ್ಳು = ಒಳ್ಳೆಯತನ ಓಗd= ಅನ್ನ ಇಸು = ಬಳಿದು ಓ= ೪ಪಾಧ್ಯಾಯ ಬcಯುವ ಏನೂ ಇಲ್ಲದವನ, ದರಿದ್ರ ಓ ಚಕ್ರವು ೨೩೯ = ಆಡಿಗೆ ಕಡಹುಜ ಪ್ರತಾಸೆ, ಹತಾ ಕ್ರಮ ಬಿಸುಗು-- ಅಲ್ಪ ೬೯Y ಕರಡಿಗೆ, ಕರಂಡಕ ಪಟ್ಟಿಗೆ ಸಭೆಳು ಆ೦ಬು, ತಾಣ ಕೈವಾರಿ= ಕೂಗಳುಭಟ್ಟ ಸಣ=ಶ್ರಮ; ಜೈನ ಸಂನ್ಯಾಸಿ ಗಂಡನಾಗು = ಭೂತನಾಗು ಸವಣ್ಣ ಧುಳುಗಳು -- ಸವಣರ ಯಚ್ಚು ಕವಲು= ದುರ್ವಾಸನೆ, ಕೆಟ್ಟ ನತ ಓಡಿದವರು ಗೂಳೆಯ= ಪೂರ್ತಿಯಾಗಿ ಸ್ಥಳ ಬಿಟ್ಟು * ಸಕ= s೮ಾಭ, ಲೋಹದ ಕುಲಾತಿ ಹೂಇಗುವುದು ಸಸಯಕ್ಕು = ಅಕ್ಷತೆಯರು ಆಗಸು ಎಬ್ಬರನ್ನೂ ಕಳಿಸಿಬಿಡು ನೋವು= ಅಟ್ಟ ತರು -ಭಿಕ್ಷಾಟನೆ ಹರದವರ್ತಕ, ವ್ಯಾಪಾರಿ ಚರ್ಮಗುರಾಳ ಜವೊಂಟೆ= ವೇಗದಿಂದ ಓಡುವ ಒಂಟಿ ಘಳರದಕಳ್ಳರನ್ನು ಹಿಡಿದು ಶಿಕ್ಷಿಸುವ ಹಿರಿಮೆ= ದೊಡ್ಡತನ ಹೆಚ್ಚುಗಾರಿಕೆ ದೂಡ್ಡ ಅಧಿಕಾರಿ ಹೊಲಬು= ದಾರಿ, ಸುಳಿವ ನಟ್ಟು ನಂಟತನ ಹಳಳು ಗಟ್ಟಣ,

ಟಿಪ್ಪಣ್ಣಿಗಳು[ಸಂಪಾದಿಸಿ]

ಅಚ್ಯುತೇಂದ್ರ :-ಜೈನರ ನಂಬಿಕೆಯ ಪ್ರಕಾರ ಸ್ವರ್ಗ ಒಂದಲ್ಲಿ ಹಲವು ಆದ್ರಗಳಲ್ಲಿ ಅಚ್ಚುತಕಲ್ಪ' ಎಂಬುದೊಂದು, ಅಲ್ಲಿನ ಇಂದ್ರನೇ ಅಚುತೇಂದ್ರ,

ಸಮ್ಮ: - ಸಮ್ಯಗ್ನರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ- ಈ ಮಸಿ ಜೈನಧರ್ಮದ ಮ೬ ತತ್ವಗಳು. ಇವಕ್ಕೆ ಕ್ರಮವಾಗಿ ಚೆನ್ನಾಗಿ ನೋಡುವುದು, ಚೆನ್ನಾಗಿ ತಿಳಿಯುವದು, ಚೆನ್ನಾಗಿ ನಡೆಯುವುದು – ಎ೦ದು ಆರ್ಥ, ಜೈನಧರ್ಮವನ್ನು ನಂಬಿ ತಿಳಿದು ನಡೆಯುವುದೆಂದು ಇವುಗಳ ತಾತ್ಪರ್ಯ, ಇವಃ ತತ್ನತ್ರಯಗಳು, ಸಾಕ್ಷ್ಯವೆಂದ" ಇವೇ, ಸಮ್ಮಗ ದರ್ಶನ (ಎಂದರೆ ಜೈನಧರ್ಮದಲ್ಲಿ ನಂಬಿಕೆ ಉಳ್ಳವರು ಸಮ್ಮಗೆ ದೃಷ್ಟಿ, ಇಲ್ಲದವನು ಮಾದ್ಯಷ್ಟಿ.

ಪಂಚಾಶ್ಚರ್ಯಗಳು :- ಐದು ಆಶ್ಚರ್ಯಗಳು : > :ನದಂದುಭಿ ನೋಳಗುವುದು ಹುನ ಮಳೆ ಸುರಿಯುವುದು & ಚಿನ್ನದ ಮಳೆ ಸುರಿಯು ವುದು * ದೇವತೆಗಳು ಪ್ರಶಂಸೆ ಮಾಡುವುದು ೫ ತಂಗಾಳಿ ಬೀಸುವುಡು.

ಪಂಚ ನಮಸ್ಕಾರ ಮಂತ್ರ:- ಆರ್ಹಂತರು, ಸಿದ್ದರು, ಆಚಾರ್ಯರು, ಉಪಾಧ್ಯಾಯರು, ಸವ೯ಸಾಧುಗಳು- ಎಂಬ ಈ ಐದು ಬಗೆಯ ಮಹಾಪುರುಷ ರನ್ನು ಜೈನರು ದಿನದಿನವೂ ನಮಸ್ಕರಿಸುತ್ತಾರೆ. ಅವರನ್ನು ನಮಸ್ಕರಿಸುವಾಗ "ಆರ್ಹ೦ತರಿಗೆ ನಮಸ್ಕಾರ, ಸಿದ್ಧರಿಗೆ ನಮಸ್ಕಾರ ” ಎಂದು ಮುಂತಾಗಿ ಹೇಳುವ ನುಡಿಗಳಿ ಪಂಟಿ ನಮಸ್ಕಾರ ಮಂತ್ರ.