ಕಬ್ಬುನದ ಗುಂಡಿಗೆಯಲ್ಲಿ ರಸದ

ವಿಕಿಸೋರ್ಸ್ದಿಂದ



Pages   (key to Page Status)   


ಕಬ್ಬುನದ ಗುಂಡಿಗೆಯಲ್ಲಿ ರಸದ ಭಂಡವ ತುಂಬಿ
ಹೊನ್ನ ಮಾಡ ಬಲ್ಲಡೆ ಅದು ಪರುಷ ಕಾಣಿರಣ್ಣಾ. ಲಿಂಗ ಬಂದು ಉಂಬಡೆ ಪ್ರಸಾದಕಾಯವಪ್ಪಡೆ
ಅಂದಂದಿಂಗೆ ಭವಕರ್ಮ ಮುಟ್ಟಲಮ್ಮದು ಕಾಣಿರೆ. ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ. ಶಶಿಯಲ್ಲಿ ಕರಗದು ಬಿಸಿಲಲ್ಲಿ ಕೊರಗದು
ರಸವುಂಡ ಹೊನ್ನು _ಗುಹೇಶ್ವರಾ ನಿಮ್ಮ ಶರಣ !