ಕಳನೇರಿ ಇಳಿವುದು ವೀರಂಗೆ
ಗೋಚರ
ಲೇಖಕರು: ಅಕ್ಕ ಮಹಾದೇವಿ
ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕಳನೇರಿ ಇಳಿವುದು ವೀರಂಗೆ ಮತವಲ್ಲ. ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ. ಮನದೊಡೆಯ ಮನವನಿಂಬುಗೊಂಬನಯ್ಯಾ. ಏರಲಾಗದು ಶ್ರೀಪರ್ವತವ ಇಳಿದಡೆ ವ್ರತಕ್ಕೆ ಭಂಗ. ಕಳನೇರಿ ಕೈದು ಮರೆದಡೆ ಮಾರಂಕ ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು.