ಕಾಯಗೊಂಡು ಹುಟ್ಟಿಸಿ, ಕರಣಾದಿಗುಣಂಗಳಿಗೆ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯಗೊಂಡು ಹುಟ್ಟಿಸಿ
ಕರಣಾದಿಗುಣಂಗಳಿಗೆ ಗುರಿಮಾಡಿ
ಕಾಡಿಸಾಡುವಿರಯ್ಯ. ಇದು ಕಾರಣ
ಎನ್ನ ಕಾಯದ ಕರಣದ ಗುಣಂಗಳ ಕಳದು ಎನ್ನ ಒಳಹೊರಗೆ ಹಿಡಿದಿಪ್ಪ ಮಾಯಾಪ್ರಪಂಚವ ಮಾಣಿಸಿ
ನೀವಲ್ಲದೆ ಮತ್ತೇನುವನು ಅರಿಯದಂತೆ ಸಂಸಾರಸುಖವ ನೆನೆಯದಂತೆ ಕರುಣಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.