Transclusion_Status_Detection_Tool

ಕಾಯವೆಂಬ ಕೆರೆಗೆ, ತನುವೆಂಬ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಕಾಯವೆಂಬ ಕೆರೆಗೆ
ತನುವೆಂಬ ಏರಿ
ಮನವೆಂಬ ಕಟ್ಟೆಯ ಕಟ್ಟಿ
ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ
ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ. ಆ ಕೆರೆಯ ಏರಿಯ ಮೇಲೆ
ಆಚಾರವೆಂಬ ವೃಕ್ಷವ ಬೆಳೆಸಿ
ಅರುಹೆಂಬ ಹೂವ
ಅದ್ವೆ ೈತವೆಂಬ ಹಸ್ತದಿಂದ ಕುಯಿದು ಅನುಪಮಲಿಂಗಕ್ಕೆ
ಪೂಜಿಸಬಲ್ಲರೆ ಲಿಂಗಾರ್ಚಕರೆಂಬೆ. ಈ ಭೇದವನರಿಯದೆ
ಹುಸಿಯನೆ ಪೂಜಿಸಿ
ಗಸಣೆಗೊಳಗಾದ ಪಿಸುಣಿಗಳ ಲಿಂಗಪೂಜಕರೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.