ಕಾಲಾಗ್ನಿರುದ್ರನ ಲೋಕದಿಂದ ಜೇನುಮಳೆ

ವಿಕಿಸೋರ್ಸ್ದಿಂದ



Pages   (key to Page Status)   


ಕಾಲಾಗ್ನಿರುದ್ರನ ಲೋಕದಿಂದ ಜೇನುಮಳೆ ಕರೆವುದ ಮಾನವಲೋಕದವರು ಕಂಡು
ಕಾಲಾಗ್ನಿರುದ್ರನ ಭುವನವೆತ್ತ ಜೇನುಮಳೆಯತ್ತಲೆಂದು ತಾವು ಚೋದ್ಯವ ಮಾಡುತ್ತಿರಲು
ಮೇಲಣ ಲೋಕದಿಂದ ಅಮೃತಸೋನೆ ಸುರಿಯಲು ಕಾಲಾಗ್ನಿ ಕೆಟ್ಟಿತ್ತು. ಜೇನುಸೋನೆ ಅಮೃತವಾಗದ ಮುನ್ನ
ನೋಡಬಂದವರೆಲ್ಲ ಸತ್ತುದ ಕಂಡು
[ತಾ] ನಿರ್ವಯಲಾದನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.