ಕೃತಯುಗದಲ್ಲಿ ದೇವಾದಿದೇವರ್ಕಳಿಗೆ ಯುದ್ಧವಾಯಿತ್ತು.

ವಿಕಿಸೋರ್ಸ್ದಿಂದ



Pages   (key to Page Status)   


ಕೃತಯುಗದಲ್ಲಿ ದೇವಾದಿದೇವರ್ಕಳಿಗೆ ಯುದ್ಧವಾಯಿತ್ತು. ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು. ದ್ವಾಪರದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು. ಕಲಿಯುಗದಲ್ಲಿ ಮೌರ್ಯ ಕದಂಬರಿಗೆ ಯುದ್ಧವಾಯಿತ್ತು. ಇಂತು ಅನಂತ ಯುಗಂಗಳಲ್ಲಿ ಅನಂತರಿಗೆ ಯುದ್ಧವಾಗುತ್ತಿಹ ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣರಿಗೆಯೂ ನಮಗೆಯೂ ಅಂದು ಇಂದು ಮುಂದು ಯುದ್ಧವಿಲ್ಲಾ