Pages (key to Page Status)
ಕೋಪತಾಪವೆಂಬುದು ಅರಿವಿನೊಳಗೆ ಭಕ್ತಿ ಯುಕ್ತಿ ಎಂಬುದು ನಿತ್ಯದೊಳಗೆ. ಭಾವದ ಬಗೆಗೆ ಬಣ್ಣವಿಟ್ಟುಕೊಂಡಡೆ ನಿರ್ಭಾವಿಕಂಗೆ ಅದು ಸಹಜವೆ ? ಬಂದ ಶರಣರ ನಿಲವನರಿದು ಸಂದುಸಂಶಯವಳಿದು ನಂಬದಿದ್ದಡೆ ಹಿಂದು ಮುಂದಾಗಿ ಹೋಹನು ಕಾಣಾ ನಮ್ಮ ಗುಹೇಶ್ವರಲಿಂಗವು.