ವಿಷಯಕ್ಕೆ ಹೋಗು

ತನುವಿಕಾರದಿಂದ ಸವದು ಸವದು,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya

ತನುವಿಕಾರದಿಂದ ಸವದು ಸವದು
ಮನವಿಕಾರದಿಂದ ನೊಂದು ಬೆಂದವರೆಲ್ಲಾ ಬೋಳಾಗಿ ; ದಿನ ಜವ್ವನಂಗಳು ಸವದು ಸವದು
ಜಂತ್ರ ಮುರಿದು ಗತಿಗೆಟ್ಟವರೆಲ್ಲಾ ಬೋಳಾಗಿದ 'ಹೇಸಿ
ಒಲ್ಲೆ ಸಂಸಾರವನೆಂಬರು ' ವೈರಾಗ್ಯವ ಬಲ್ಲವರಲ್ಲ ಕೇಳವ್ವಾ. ಕನ್ನೆಯಳಿಯದ ಜವ್ವನ ಸತಿಗಲ್ಲದೆ ಚೆನ್ನಮಲ್ಲಿಕಾರ್ಜುನದೇವಗಲ್ಲ ಕೇಳವ್ವಾ.