ತನುವ ಮುಟ್ಟಿಹ ಮನ

ವಿಕಿಸೋರ್ಸ್ದಿಂದ



Pages   (key to Page Status)   


ತನುವ ಮುಟ್ಟಿಹ ಮನ ಮನವ ಮುಟ್ಟಿದ ತನು ತನು ಮನವ ಮುಟ್ಟಿಹ ಸರ್ವಕರಣಂಗಳ ನೋಡಾ. ಕಾಯದ ಕರಣಂಗಳ ಮುಟ್ಟಿಹ ಜೀವನ ನೋಡಾ. ಕಾಯ ಜೀವ ಕರಣಂಗಳ ಶುದ್ಧ ಪರಮಾತ್ಮಲಿಂಗದಲ್ಲಿ ಮುಟ್ಟಿಸಬಲ್ಲರೆ ಅದೇ ಅರ್ಪಿತ
ಅದೇ ಪ್ರಸಾದ ನೋಡಾ. ಆ ಪ್ರಸಾದಿ ಎಂದೂ ಪ್ರಳಯ ವಿರಹಿತ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.