ತನು ದಾಸೋಹ, ಅವಯವಂಗಳೆಲ್ಲವು

ವಿಕಿಸೋರ್ಸ್ದಿಂದ



Pages   (key to Page Status)   


ತನು ದಾಸೋಹ
ಅವಯವಂಗಳೆಲ್ಲವು ಆಚಾರ
ಮನ ಪ್ರಾಣವೆಂಬವೆಲ್ಲವು ಅರಿವಿನ ಮೂರ್ತಿ ನೋಡಾ. ಒಳಗು ಹೊರಗು
ಹೊರಗು ಒಳಗು ಎಂಬುದನರಿಯದ ಸತ್ಯ ಸದಾಚಾರಿ ನೀನು. ನಿನ್ನಳವ ಅರಿಯಲು ಆನು ಏತರವನಯ್ಯಾ. ಅಂತರಂಗದಲ್ಲಿ ಅರಿವು ಉಂಟಾದಡೇನು ? ಎನ್ನ ಕಾಯದಲ್ಲಿ ಭಕ್ತಿ ಸ್ವಾಯತವಿಲ್ಲ
ಆಚಾರವೆಂಬುದು ಅತ್ತತ್ತಲಿಲ್ಲ. ಸರ್ವಾಚಾರಸಂಪನ್ನ [ನೀನು]
ನಿನ್ನಳವ ನಾನೆತ್ತ ಬಲ್ಲೆನಯ್ಯಾ ? ಗುಹೇಶ್ವರ ಸಾಕ್ಷಿಯಾಗಿ
ನಿಮ್ಮ ಮಹಾಮನೆಯ ಕಾವಲು ಬಂಟ ನಾನೆಂಬುದ ನಿಮ್ಮ ಪ್ರಮಥರೆಲ್ಲಾ ಬಲ್ಲರು ಸಂಗನಬಸವಣ್ಣಾ.