Transclusion_Status_Detection_Tool

ತಾನೆ ಬ್ರಹ್ಮವೆಂದು ಕರ್ತೃಹೀನನಾದ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತಾನೆ ಬ್ರಹ್ಮವೆಂದು ಕರ್ತೃಹೀನನಾದ ವಾಗದ್ವೆ ೈತಿಯಲ್ಲ. ಅನಾದಿ ಭಿನ್ನವಾಗಿ ದ್ವೆ ೈತಿಯಲ್ಲ ನೋಡ ಶರಣನು. ಅದೇನು ಕಾರಣವೆಂದರೆ: ಮಹಾಘನ ಪರಶಿವತ್ತ್ವದಲ್ಲಿ ಚಿತ್ತು ಉದಯಿಸಿತ್ತು. ಆ ಚಿಚ್ಛಕ್ತಿಯಿಂದ ಶಿವಶರಣನುದಯಿಸಿದನು. ಅಂತು ಉದಯಿಸಿದ ಚಿದ್ರೂಪಮನೇ ಶರಣನು; ಸದ್ರೂಪವೇ ಲಿಂಗವು. ಈ ಶರಣ ಲಿಂಗವೆರಡರ ಸಂಬಂಧವ ದ್ವೆ ೈತವೆನಲಿಲ್ಲ; ಅದ್ವೆ ೈತವೆನಲಿಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.