ದಾಸಪ್ರಸಾದವ ದಾಸಿಮಯ್ಯಗಳು ಕೊಂಡರು,

ವಿಕಿಸೋರ್ಸ್ದಿಂದ



Pages   (key to Page Status)   


ದಾಸಪ್ರಸಾದವ ದಾಸಿಮಯ್ಯಗಳು ಕೊಂಡರು
ಪ್ರಾಣಪ್ರಸಾದವ ಸಿರಿಯಾಳ ಕೊಂಡ
ಸಮತೆಪ್ರಸಾದವ ಬಲ್ಲಾಳ ಕೊಂಡ
ಜಂಗಮಪ್ರಸಾದವ ಬಸವಣ್ಣ ಕೊಂಡ
ಸಮಯಪ್ರಸಾದವ ಬಿಬ್ಬ ಬಾಚಯ್ಯಗಳು ಕೊಂಡರು
ಜ್ಞಾನಪ್ರಸಾದವ ಅಕ್ಕಗಳು ಕೊಂಡರು
ಶೂನ್ಯಪ್ರಸಾದವ ಪ್ರಭುದೇವರು ಕೊಂಡರು. ಎನಗಿನ್ನೆಂತಯ್ಯಾ ? ಮುಳ್ಳಗುತ್ತೆ ತೆರಹಿಲ್ಲ. ಇದು ಕಾರಣ
ಕೂಡಲಚೆನ್ನಸಂಗನ ಶರಣರ ಒಕ್ಕು ಮಿಕ್ಕ ಪ್ರಸಾದವೆನಗಾಯಿತ್ತು.