ನೆಲನಿಲ್ಲದ ನಿರ್ಮಲದ ಚಿದ್ಭೂಮಿಯಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ನೆಲನಿಲ್ಲದ ನಿರ್ಮಲದ ಚಿದ್ಭೂಮಿಯಲ್ಲಿ ಸ್ವಯಂ ಜ್ಞಾನಶಿಖಿ ಉದಯವಾಯಿತ್ತು ನೋಡಾ. ಆ ಸ್ವಯಂ ಜ್ಞಾನಶಿಖಿ ಊಧ್ರ್ವಲೋಕಕ್ಕೆ ಹೋಗಿ
ವ್ಯೋಮಾಮೃತ ಪ್ರಸಾದವನುಂಡು
ನಾಮ ರೂಪು ಕ್ರೀಗಳನಳಿದು ನಿರವಯವಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.