ಪರಂತಪ ವಿಜಯ ೨/ಅಧ್ಯಾಯ ೩

ವಿಕಿಸೋರ್ಸ್ದಿಂದ
೧೬

ಪರಂತಪ ವಿಜಯ


ಅಧ್ಯಾಯ ೩



   ಅಲ್ಲಿದ್ದ ಇತರ ಜನಗಳೆಲ್ಲರೂ ಮಾಧವನಿಗೆ ಸಂಭವಿಸಿದ ಆ ಅಪಾಯವನ್ನು ಕುರಿತು ದುಃಖಿಸುತ್ತಿರುವಷ್ಟರಲ್ಲಿಯೇ, ಪರಂತಸನು ಮಾಧವನ ಬಳಿಗೆ ಬಂದು ಶೈತೋಪಚಾರಗಳನ್ನು ಮಾಡಲು, ಮಾಧವನಿಗೆ ಸ್ವಲ್ಪ ಪ್ರಜ್ಞೆಯುಂಟಾಯಿತು. ಆಗ ಪರಂತಪನು ಇವನಿಗೆ ಬಿದ್ದಿರುವ ಪ್ರಹಾರವನ್ನು ಪರೀಕ್ಷಿಸುತ್ತ, ಸ್ವಲ್ಪ ವಿವರ್ಣವದನನಾಗಿ ಚಿಂತಿಸುತ್ತಿದ್ದನು.
ಮಾಧವ-ಅಯ್ಯಾ ಪರಂತಪನೆ : ಸಂತಾಪಪಡಬೇಡ. ನನಗೆ ಈ ಅವಸ್ಥೆ ಬರಬಹುದೆಂದು ನಾನು ಮೊದಲೇ ತಿಳಿಸಿದ್ದೆನಲ್ಲವೆ ! ನಾನು ಯೋಚಿಸಿದಂತೆಯೇ ದೈವಸಂಕಲ್ಪವೂ ಇದ್ದಿತು. ನಾನು ಇನ್ನು ಬಹಳ ಹೊತ್ತು ಬದುಕಲಾರೆನು. ಪ್ರಾಣೋತ್ಕ್ರಮಣ ಕಾಲವು ಸನ್ನಿಹಿತವಾಯಿತು. ಅದಕ್ಕೆ ಮುಂಚಿತವಾಗಿಯೇ ನಾನು ಮಾಡಬೇಕಾದ ಕಾರ್ಯವು ಬಹಳವಿರುವುದು. ಆದುದರಿಂದ ಈ ಕ್ಷಣದಲ್ಲಿಯೇ ನನ್ನನ್ನು ಆ ಭೋಜನ ಶಾಲೆಯಲ್ಲಿರುವ ನನ್ನ ವಾಸಗೃಹಕ್ಕೆ ಕರೆದುಕೊಂಡು ಹೊಗು.
   ಒಡನೆಯೇ ಪರಂತಪನು ಮಾಧವನನ್ನು ಪಲ್ಲಕ್ಕಿಯಲ್ಲಿ ಮಲಗಿಸಿ ಕೊಂಡು, ಅವನು ತೋರಿಸಿದ್ದ ವಾಸಗೃಹಕ್ಕೆ ಕರೆದುಕೊಂಡು ಹೋಗಿ, ಮಂಚದಮೇಲೆ ಮಲಗಿಸಿದನು.

ಮಾಧವ-ಅಯ್ಯಾ : ಪರಂತಪನೆ : ಆಪತ್ಕಾಲಕ್ಕೆ ಒದಗತಕ್ಕವನೇ ಬಂಧುವು ; ಅವನೇ ಪುತ್ರನು. ಆದುದರಿಂದ, ಪ್ರಕೃತದಲ್ಲಿ ನನಗೆ ನೀನೇ ಸಮಸ್ತ ಬಂಧುವೂ ಆಗಿರುವೆ. ಈಗ ವಿಶೇಷವಾಗಿ ಮಾತನಾಡುವುದಕ್ಕೆ ನನಗೆ ಶಕ್ತಿಯಿಲ್ಲ. ಅದು ಹಾಗಿರಲಿ; ನನಗೆ ಇಂಥ ಅಪಾಯವನ್ನುಂಟು ಮಾಡಿದ ದುರ್ಬುದ್ಧಿಗೆ ತಕ್ಕ ಪ್ರತೀಕಾರವನ್ನು ಮಾಡುವ ಭಾರವು ನಿನಗೆ ಸೇರಿದ್ದು. ನನ್ನನ್ನು ಹೊಡೆದಮೇಲೆ ಅವನು ಏನು ಮಾಡಿದನು ? ಈಗ ಎಲ್ಲಿರುವನು ?
೧೭


ಅಧ್ಯಾಯ ೩


ಪರಂತಪ- ಅವನ ಪ್ರಹಾರದಿಂದ ನೀನು ಮೂರ್ಛಿತನಾಗಿ ಕೆಳಗೆ ಬೀಳುವುದರೊಳಗಾಗಿಯೇ, ಅವನ ಶರೀರವು ಸಹಸ್ರ ಪ್ರಕಾರವಾಗಿ ಛೇದಿಸಿ ಉರುಳಿಸಲ್ಪಟ್ಟಿತು. ನಿನಗೆ ಉಂಟಾದ ಮೂರ್ಛೆಯೊಡನೆಯೇ, ಅವನಿಗೆ ದೀರ್ಘನಿದ್ರೆ ಪ್ರಾಪ್ತವಾಯಿತು. ಈಗ ಅವನು ತನ್ನ ದುಷ್ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ಯಮಪುರಿಯಲ್ಲಿ ಅನುಭವಿಸುತ್ತಿರುವನು.
ಮಾಧವ-ಹೀಗೆಯೇ ಆಗಬಹುದೆಂದು ನಾನು ಮೊದಲೇ ಭಾವಿಸಿದ್ದೆನು. ದೈವಾಧೀನದಿಂದ ನನ್ನ ಭಾವನೆಯಂತೆಯೇ ನಡೆಯಿತು. ಅಧರ್ಮ ದ್ಯೂತದಿಂದ ಅನೇಕ ಕುಟುಂಬಗಳನ್ನು ಹಾಳುಮಾಡಿದ ಈ ದುರಾತ್ಮನ ಪಾಪಕೃತ್ಯಕ್ಕೆ ತಕ್ಕ ಪ್ರತಿಫಲವನ್ನು ತೋರಿಸಿ ಈ ನೀಚನನ್ನು ನಿಗ್ರಹಿಸಬೇಕೆಂಬ ನನ್ನ ಸಂಕಲ್ಪವು ದೈವಗತಿಯಿಂದ ನೆರವೇರಿತು. ಅವನ ದುಷ್ಕೃತ್ಯಕ್ಕೆ ಈ ಶಿಕ್ಷೆಯ ಕೂಡ ಅಲ್ಪವಾದುದು. ಅದು ಹಾಗಿರಲಿ; ಒಬ್ಬ ವೈದ್ಯನನ್ನು ಕರೆಯಿಸು.
ಪರಂತಪ -ಅಪ್ಪಣೆ.
   ಹೊರಗೆ ಹೋಗಿ, ಪೂರ್ವದಲ್ಲಿಯೇ ತಾನು ಕರೆಸಿಟ್ಟಿದ್ದ ಜೀವಾನಂದನೆಂಬ ವೈದ್ಯನೊಡನೆ ಬಂದು, ಅಲ್ಲಿದ್ದವರನ್ನೆಲ್ಲ ಹೊರಗೆ ಕಳುಹಿಸಿದನು.
ಮಾಧವ - ವೈದ್ಯನನ್ನು ಕುರಿತು) ಅಯ್ಯಾ ! ಚಿಕಿತ್ಸಕನೆ ನನಗೆ ಬಿದ್ದಿರುವ ಪ್ರಹಾರವನ್ನು ಚೆನ್ನಾಗಿ ಪರೀಕ್ಷಿಸು. ನಾನು ಇನ್ನೆಷ್ಟು ನಿಮಿಷ ಗಳವರೆಗೆ ಬದುಕಿರಬಹುದು ?-ಹೇಳು.
ಜೀವಾನಂದ-(ಅವನನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ) ಅಯ್ಯಾ ! ಮಾಧವನೆ ! ನಿನಗೆ ಸಂಭವಿಸಿರುವ ಅಪಾಯವು ಬಹಳ ಪ್ರಮಾದಕರವಾಗಿರುವುದು.

ಮಾಧವ-ಇದು ನನಗೆ ಮೊದಲೇ ಗೊತ್ತಾಗಿದ್ದಿತು. ಹುಟ್ಟಿದವರು ಎಂದಿಗಾದರೂ ಸಾಯಲೇ ಬೇಕು. ಸಾಯುವೆನೆಂಬ ವ್ಯಸನವು ಲೇಶ ಮಾತ್ರವೂ ನನಗಿಲ್ಲ. ಆದರೆ, ನನ್ನ ಆಸ್ತಿಯು ಅಪರಿಮಿತವಾಗಿರುವುದರಿಂದ, ನಾನು ಸಾಯುವಷ್ಟರೊಳಗಾಗಿ ಅದೆಲ್ಲವೂ ಸತ್ಪಾತ್ರದಲ್ಲಿ ವಿನಿಯೋಗವಾಗುವಂತೆ ಮಾಡಬೇಕೆಂಬ ಅಭಿಲಾಷೆಯು ನನಗೆ ಬಹಳವಾಗಿರು ೧೮

ಪರಂತಪ ವಿಜಯ


ವುದು. ಇನ್ನು ಎಷ್ಟು ಹೊತ್ತಿನವರೆಗೆ ನಾನು ಬದುಕಿರಬಹುದು ? ಅದನ್ನು ಭಯಪಡದೆ ಧೈರ್ಯವಾಗಿ ಹೇಳು.
ಜೀವಾನಂದ - ಅಯ್ಯಾ : ಮಾಧವನೆ ! ನಿನ್ನ ಅವಸ್ಥೆಯನ್ನು ನೋಡಿದರೆ, ಇನ್ನು ಅರ್ಧಘಂಟೆಯೊಳಗಾಗಿಯೇ ನಿನ್ನ ಪ್ರಾಣವು ಉತೃಮಿಸಿ ಹೋಗುವಂತೆ ತೋರುವುದು. ಆದರೂ, ನನ್ನ ಚಿಕಿತ್ಸಾ ಶಕ್ತಿಯಿಂದ ಇನ್ನು ಆರುಘಂಟೆಗಳ ಕಾಲ ನಿನ್ನನ್ನು ಬದುಕಿಸುವುದು ಸಾಧ್ಯವೆಂದು ತೋರುವುದು.
ಮಾಧವ-ಅಷ್ಟು ಮಾತ್ರವಾದರೆ ಸಾಕು. ಅಷ್ಟರೊಳಗೆ ನನ್ನ ಅಪರಿಮಿತವಾದ ಧನವೆಲ್ಲವನ್ನೂ ವಿನಿಯೋಗಿಸಬಹುದು. (ಪರಂತಪನನ್ನು ನೋಡಿ) ಅಯ್ಯಾ! ಪ್ರಿಯ ಮಿತ್ರನಾದ ಪರಂತಪನೆ! ನನ್ನ ಜೇಬಿನಲ್ಲಿ ಹತ್ತು ಸಾವಿರ ವರಹಾಗಳನ್ನು ಬಾಳ ಬಹುದಾದ ರತ್ನದ ಪದಕವೊಂದಿರುವುದು. ಅದನ್ನು ತೆಗೆದು ಇವನಿಗೆ ಕೊಡು. ಇತನು ಇಲ್ಲಿಯೇ ಇದ್ದುಗೊಂಡು ನನ್ನ ಧನವೆಲ್ಲವೂ ವಿನಿಯೋಗಿಸಲ್ಪಡುವವರೆಗೂ ನನ್ನ ಪ್ರಾಣ ಹೋಗದಂತೆ ಚಿಕಿತ್ಸೆಗಳನ್ನು ಮಾಡುತಿರಲಿ.
   ಪರಂತಪನು ಆ ಆಭರಣವನ್ನು ತೆಗೆದು ಜೀವಾನಂದ ವೈದ್ಯನಿಗೆ ಕೊಡಲು, ಅವನು ಅತ್ಯಂತ ಸಂತುಷ್ಟನಾಗಿ, ಮಾಧವನಿಗೆ ಯಾತನೆಯಿಲ್ಲದ ಹಾಗೆ ಆ ಗಾಯಗಳಿಗೆ ತಕ್ಕ ಔಷಧಗಳನ್ನು ಹಾಕುತ್ತ, ಅವನ ಪ್ರಜ್ಞೆಗೂ ಪ್ರಾಣಕ್ಕೂ ಶೈಥಿಲ್ಯ ಸಂಭವಿಸದಂತೆ ಚಿಕಿತ್ಸೆಯನ್ನು ಮಾಡುತಿದ್ದನು.
ಮಾಧವ -ಅಯ್ಯಾ ! ಪರಂತಪ ! ಆಚೆಯ ಕೊಠಡಿಯಲ್ಲಿ ಅರ್ಥಪರನೆಂಬ ಲಾಯರೊಬ್ಬನಿರುವನು. ಅವನನ್ನು ಕರೆದುಕೊಂಡು ಬಾ.
   ಹೀಗೆ ಹೇಳುತ್ತಿರುವಷ್ಟರಲ್ಲಿಯೇ ಅರ್ಥಪನು ಸಮೀಪಕ್ಕೆ ಬಂದು “ಅಯ್ಯಾ ! ಮಾಧವನೆ ! ನಾನು ಇಲ್ಲಿಯೇ ಬಂದಿರುವೆನು. ನೀನು ಈಗ ಅನುಭವಿಸುತ್ತಿರುವ ಅವಸ್ಥೆಯನ್ನು ನೋಡಿ ನನಗೆ ಬಹಳ ಸಂಕಟವಾಗುತ್ತಿರುವುದು” ಎಂದನು.

ಮಾಧವ-ನೀನು ಬಂದದ್ದು ಬಹಳ ಸಂತೋಷವಾಯಿತು. ಲೋಕದಲ್ಲಿ ಕಷ್ಟಕ್ಕೆ ಭಾಗಿಗಳಾಗದೆ ಇರತಕ್ಕವರು ಯಾರು ತಾನೆ ಇರುವರು? ಇದಕ್ಕಾಗಿ ನೀನು ಚಿಂತಿಸಬೇಡ. ಈಗ ನಿನ್ನಿಂದ ನನಗೆ ಕೆಲವು ಕಾರ್ಯಗಳಾಗಬೇಕಾಗಿರುವುದರಿಂದ, ಅವನ್ನು ನ್ಯಾಯಶಾಸ್ತ್ರಾನುಸಾರವಾಗಿ ನಡೆ
೧೯

ಅಧ್ಯಾಯ ೩


ಯಿಸು ಅದಕ್ಕೆ ತಕ್ಕ ದ್ರವ್ಯ ಲಾಭವನ್ನು ನೀನು ಪಡೆಯುವೆ. (ಪರಂತಪನನ್ನು ಕುರಿತು) ಅಯ್ಯಾ ! ಪರಂತಪನೆ ! ಇಲ್ಲಿರತಕ್ಕ ಪರಿಜನರೆಲ್ಲರನ್ನೂ ಕರೆದುಕೊಂಡು ಸ್ವಲ್ಪ ಹೊತ್ತು ಹೊರಗಿರು. ಇವನೊಡನೆ ಸ್ವಲ್ಪ ಮಾತನಾಡಬೇಕಾಗಿರುವುದು. ಅನಂತರ ನಿನ್ನನ್ನು ಕರೆಯಿಸಿಕೊಳ್ಳುವೆನು.
ಪರಂತಪ- ಅಪ್ಪಣೆ. (ಹೊರಕ್ಕೆ ಹೋಗುವನು.)
ಮಾಧವ-ಅಯ್ಯಾ ! ಅರ್ಥಪರನೆ ! ಈಗ ನನ್ನ ಆಸ್ತಿಯನ್ನೆಲ್ಲ ಸತ್ಪಾತ್ರದಲ್ಲಿ ವಿನಿಯೋಗಿಸುವುದಕ್ಕಾಗಿ ಒಂದು ಉಯಿಲನ್ನು ಬರೆಯಬೇಕಾಗಿರುವುದು. ಈ ಕಾರ್ಯವನ್ನು ಮಾಡುವುದಕ್ಕಾಗಿ ನಿನಗೆ ಕೊಡಬೇಕಾದುದೇನು ? ಸಂಕೋಚವಿಲ್ಲದೆ ಹೇಳು.
ಅರ್ಥಪರ-ಅಯ್ಯಾ ! ಮಾಧವ ! ನಿನ್ನ ವಿಷಯದಲ್ಲಿ ನಾನು ಇಷ್ಟೇ ಕೊಡಬೇಕೆಂದು ನಿರ್ಣಯಿಸಿ ಹೇಳುವುದಕ್ಕೆ ಶಕ್ತನಲ್ಲ. ನೀನು ಹೇಳಿದ ಕೆಲಸವನ್ನು ಕೃತಜ್ಞನಾಗಿ ನೆರವೇರಿಸುವೆನು. ನಿನಗೆ ತೋರಿದುದನ್ನು ಕೊಡಬಹುದು.
ಮಾಧವ- ಅಯ್ಯಾ ! ಹಾಗಲ್ಲ. ಒಂದುವೇಳೆ ನಿನಗೆ ಅಪರಿಚಿತರಾದವರು ಇಂಥ ಉಯಿಲನ್ನು ಬರೆದುಕೊಡಬೇಕೆಂದು ಪ್ರಾರ್ಥಿಸಿದ ಪಕ್ಷದಲ್ಲಿ, ಅವರಿಂದ ನೀನು ಎಷ್ಟು ಧನವನ್ನು ತೆಗೆದುಕೊಳ್ಳುವೆಯೋ, ಅದನ್ನಾದರೂ ಹೇಳು.
ಅರ್ಥಪರ-ಇದು ಆಯಾ ಕಾರ್ಯಗಳಿಗೆ ಅನುರೂಪವಾಗಿರುವುದು. ಹತ್ತು ವರಹಾಗಳು ಮೊದಲುಗೊಂಡು ನೂರು ವರಹಾಗಳ ವರೆಗೆ ತೆಗೆದು ಕೊಳ್ಳುವುದುಂಟು.
ಮಾಧವ- ಹಾಗಾದರೆ ಈ ಕೆಲಸಕ್ಕಾಗಿ ನಿನಗೆ ಹತ್ತು ಸಾವಿರ ವರಹಾಗಳನ್ನು ಕೊಡುತ್ತೇನೆ ಆ ಉಯಿಲನ್ನು ಬರೆಯುವುದು ಮಾತ್ರವಲ್ಲದೆ, ಅದರಂತೆ ಸ್ವಲ್ಪವೂ ಲೋಪವಿಲ್ಲದೆ ನಡೆಯಿಸತಕ್ಕ ಭಾರವು ನಿನ್ನದಾಗಿದೆ. ಈ ಕಾರ್ಯವನ್ನೆಲ್ಲ ಶ್ರದ್ಧೆಯಿಂದ ನಡೆಯಿಸು.

ಅರ್ಥಪರ-(ಸಂತೋಷದಿಂದ) ಅಯ್ಯಾ ! ಮಾಧವನೇ ! ಅನ್ಯತ್ರ ದೊರೆಯುವುದಕ್ಕಿಂತ ಸಹಸ್ರಾಂಶ ಅಧಿಕವಾದ ಧನವನ್ನು ನೀನು ಕೊಡು ೨೦

ಪರಂತಪ ವಿಜಯ


ವುದಾಗಿ ಹೇಳುವಾಗ, ಇಂಥ ಉದಾರಸ್ವಭಾವವುಳ್ಳ ನಿನ್ನ ವಿಷಯದಲ್ಲಿ ಯಾರುತಾನೆ ಶ್ರದ್ದೆಯಿಂದ ಕಾರ್ಯಗಳನ್ನು ನಡೆಯಿಸಲಾರರು ? ನೀನು ಹೇಳುವ ಕಾರ್ಯಗಳನ್ನೆಲ್ಲ ಕೃತಜ್ಞನಾಗಿ ನೆರವೇರಿಸುವೆನು.
   ಅರ್ಥಪರನು ಈರೀತಿಯಲ್ಲಿ ಒಪ್ಪಿಕೊಂಡ ಕೂಡಲೆ, ಮಾಧವನು ತನ್ನ ಆಸ್ತಿಯ ವಿನಿಯೋಗದ ವಿವರವನ್ನು ಬರೆಯಿಸಿ, ಆ ಉಯಿಲಿನಂತೆ ಜಾರಿ ಮಾಡತಕ್ಕ ಭಾರವನ್ನೂ ಆತನಿಗೇ ಒಪ್ಪಿಸಿದನು. ಅರ್ಥಪರನೂ ಕೂಡ ಈ ಕಾರ್ಯಗಳನ್ನೆಲ್ಲ ನೆರವೇರಿಸಿದ ಮೇಲೆ ತನಗೆ ಸಲ್ಲತಕ್ಕೆ ಧನವನ್ನು ತಾನು ತೆಗೆದುಕೊಳ್ಳುವುದಾಗಿ ಒಪ್ಪಿಕೊಳ್ಳಲು, ಮಾಧವನು ಅರ್ಥಪರನನ್ನು ಅವನ ಕೆಲಸಕ್ಕೆ ಕಳುಹಿಸಿ, ಪರಂತಪನನ್ನು ಕರೆಯಿಸಿಕೊಂಡು, ಅಯ್ಯಾ ! ಪರಂತಪನೆ ! ನನಗೆ ಪ್ರಾಣೋತ್ಕ್ರಮಣಕಾಲವು ಸಮಿಾಪಿಸಿತು. ನಾನು ಹೇಳಿದುದನ್ನೆಲ್ಲ ನೀನು ತಪ್ಪದೆ ನಡೆಯಿಸುವೆಯೆಂದು ನಾನು ನಂಬಿದ್ದೇನೆ ಎಂದನು.
ಪರಂತಪ-ಅಯ್ಯಾ ! ಮಾಧವನೆ ! ನೀನು ಹೇಳಿದುದನ್ನೆಲ್ಲ ಅವಶ್ಯವಾಗಿ ನಡೆಯಿಸುವೆನು ; ಅಥವಾ ಆ ಪ್ರಯತ್ನದಲ್ಲಿ ಪ್ರಾಣವನ್ನಾದರೂ ಒಪ್ಪಿಸುವೆನು.

ಮಾಧವ-ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಾನು ಸ್ವರ್ಗಸ್ಥನಾಗುವೆನು. ನನ್ನ ಶವವನ್ನು ಕಲ್ಯಾಣನಗರಕ್ಕೆ ತೆಗೆಸಿಕೊಂಡು ಹೋಗು. ಅಲ್ಲಿ ನನ್ನ ಸಹೋದರನಾದ ಸುಮಿತ್ರನಿರುವನು. ನಾನು ನಿನ್ನ ಕೈಯಲ್ಲಿ ಕೊಟ್ಟಿರುವ ವಜ್ರದ ಉಂಗುರವನ್ನು ತೋರಿಸಿದರೆ, ಆಗ ಅವನು ನಿನ್ನನ್ನು ನನ್ನಂತೆಯ ವಿಶ್ವಾಸದಿಂದ ನೋಡುವನು. ನನ್ನ ಈ ವೃತ್ತಾಂತವನ್ನೆಲ್ಲ ಅವನಿಗೆ ತಿಳಿಯಿಸಿ, ನನ್ನ ಉತ್ತರಕ್ರಿಯಾದಿಗಳನ್ನು ಸಾಂಗವಾಗಿ ನೆರವೇರಿಸುವಂತೆ ಮಾಡು, ಇದೋ ಈ ಯೆರಡು ಕಾಗದಗಳನ್ನು ಅವನಿಗೆ ಕೊಡು. ಇದರಲ್ಲಿ ಒಂದು ನನ್ನ ಆಸ್ತಿಯ ವಿನಿಯೋಗ ವಿಷಯಕವಾದ ಉಯಿಲು ; ಮತ್ತೊಂದು ನಾನು ಅವನಿಗೆ ಬರೆದಿರುವ ಕಾಗದ. ಇವುಗಳನ್ನು ಅವನಿಗೆ ರಹಸ್ಯವಾಗಿ ತಲಪಿಸು. ನಾನು ಬರೆದಿರುವ ಅಂಶಗಳನ್ನು ಆತನೇ ನಿನಗೆ ತಿಳಿಯಿಸುವನು. ನನ್ನ ಕೈ ಪೆಟ್ಟಿಗೆಯಲ್ಲಿ ಒಂದು ಕೋಟಿ ವರಹಾಗಳನ್ನು ಇಟ್ಟಿರುವೆನು. ಇದರಲ್ಲಿ ನಿನ್ನ ಪ್ರಯಾಣ ನನ್ನ ದೇಹಸಂಸ್ಕಾರ ಮೊದ 
೨೧

ಅಧ್ಯಾಯ ೩


ಲಾದುವುಗಳಿಗೆ ೧ ಲಕ್ಷ ವರಹಾ ಗಳನ್ನು ಉಪಯೋಗಿಸಿಕೊಂಡು, ಅರ್ಥಪರನು ಉಯಿಲನ್ನು ಬರೆದು ಅದರಂತೆ ನಡೆಸಿದ ಮೇಲೆ ಅವನಿಗೆ ಹತ್ತು ಸಾವಿರ ವರಹಾಗಳನ್ನು ಕೊಡು. ಉಳಿದ ಹಣದಲ್ಲಿ ೫೦ ಲಕ್ಷವನ್ನು ನನ್ನ ಅನುರಾಗಕ್ಕೆ ವಿಷಯಳಾಗಿದ್ದ ಕಾಮಮೋಹಿನಿಗೆ ಕೊಡು. ಉಳಿದುದನ್ನು ನಿನ್ನ ಸ್ಪಂತಕ್ಕೆ ಉಪಯೋಗಿಸಿಕೊ. ಇದಲ್ಲದೆ, ದುರ್ಬುದ್ಧಿಯ ಆಸ್ತಿಯು ೫೦ ಕೋಟಿಗಳವರೆಗೂ ಆಗಬಹುದು. ದ್ಯೂತದಲ್ಲಿ ಮಾಡಿಕೊಂಡಿದ್ದ ನಿರ್ಣಯದ ಪ್ರಕಾರ, ಅದೆಲ್ಲವೂ ನನಗೆ ಸೇರತಕ್ಕುದಾಗಿದೆ. ಇದೆಲ್ಲವನ್ನೂ ರಾಜ್ಯಾಧಿಕಾರಿಗಳ ವಶಕ್ಕೆ ಮೂಲಧನವಾಗಿ ಕೊಟ್ಟು, ಅದರ ಬಡ್ಡಿಯನ್ನು, ದ್ಯೂತ, ವ್ಯಭಿಚಾರ, ಪರಸ್ವಾಪಹಾರ ಮೊದಲಾದ ದುಷ್ಕೃತ್ಯಗಳಿಂದ ಲೋಕ ಕಂಟಕಭೂತರಾದವರನ್ನು ನಿಗ್ರಹಿಸುವುದಕ್ಕೆ ಉಪಯೋಗಿಸಿಕೊಳ್ಳುವಂತೆ ಮಾಡಬೇಕು. ಇದಲ್ಲದೆ, ನನ್ನ ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆಯೊಂದಿರುವುದು. ಅದರಲ್ಲಿ ೧೦ ಕೋಟಿ ದ್ರವ್ಯದವರೆಗೆ ಸಿಕ್ಕುವುದು; ಮತ್ತು, ನನಗೆ ಭೂಸ್ಥಿತಿಯೂ ಬೇಕಾದಷ್ಟಿರುವುದು. ನನಗೆ ಸೇರಿದ ರತ್ನಾಕರವೆಂಬ ಪ್ರದೇಶದಲ್ಲಿ, ವಿಶೇಷವಾಗಿ ಚಿನ್ನದ ಗಣಿಗಳ ರತ್ನದ ಖನಿಗಳೂ ಇರುವುವು. ಅವುಗಳಲ್ಲಿ ಕೆಲಸಮಾಡಿಸಿ ರತ್ನಗಳನ್ನು ತೆಗೆಯುವ ಪ್ರಯತ್ನಗಳನ್ನು ಮಾಡು, ಅದರಿಂದ ಕುಬೇರನ ಐಶ್ವರ್ಯವನ್ನು ಪಡೆಯಬಹುದು. ಈ ಸಮಸ್ತ ಆಸ್ತಿಯನ್ನೂ ಉಯಿಲಿನಲ್ಲಿ ನಿನ್ನ ಹೆಸರಿಗೆ ಬರೆದಿರುವೆನು. ಇದೆಲ್ಲವನ್ನೂ ನಿನ್ನ ಸ್ವಾಧೀನಪಡಿಸಿಕೊಂಡು, ಅದರಲ್ಲಿ ಒಂಭತ್ತು ಕೋಟಿ ದ್ರವ್ಯವನ್ನು, ದುಷ್ಟನಿಗ್ರಹ ಶಿಷ್ಟಪರಿಪಾಲನಕ್ಕಾಗಿಯೂ, ವರ್ತಮಾನಪತ್ರಿಕೆಗಳ ಮೂಲಕ ಪ್ರಜೆಗಳಲ್ಲಿ ಐಕಮತ್ಯವನ್ನು ಕಲ್ಪಿಸುವುದಕ್ಕಾಗಿಯೂ, ವಿದ್ವಜ್ಜನರನ್ನು ಪ್ರೋತ್ಸಾಹಿಸುವುದಕ್ಕಾಗಿಯೂ ವಿನಿಯೋಗಿಸು. ನನ್ನ ಹಿರಿಯಣ್ಣನ ಮಗನಾದ ಶಂಬರನು ಬಹಳ ದುರಾತ್ಮನು. ಇವನು, ತನ್ನ ಆಸ್ತಿಯನ್ನೆಲ್ಲ ದುರ್ವ್ಯಯದಿಂದ ಕಳೆದುಕೊಂಡು, ಈಗ ನನ್ನ ಸರ್ವಸ್ವಕ್ಕೂ ತಾನೇ ಭಾಗಿಯಾಗಬೇಕೆಂದು ಬಹುಸಾಹಸ ಮಾಡುತಿರುವನು. ಇವನೇ, ನನ್ನಲ್ಲಿ ಕಾಮಮೋಹಿನಿಗೆ ಇದ್ದ ಅನುರಾಗವನ್ನು ತಪ್ಪಿಸಿ ಇಂಥ ಅವಸ್ಥೆಯನ್ನು ನನಗೆ ಉಂಟುಮಾಡಿದವನು. ಆದುದರಿಂದ, ನಿನಗೆ ನನ್ನ ಆಸ್ತಿಯನ್ನೆಲ್ಲ ಬರೆದಿರುವೆನು. ಇದರಿಂದ, ಅವನಿಗೆ ನಿನ್ನ ಮೇಲೆ ೨೨

ಪರಂತಪ ವಿಜಯ


ಬಲವಾದ ದ್ವೇಷ ಹುಟ್ಟುವುದು, ನೀನು ಅಜಾಗರೂಕನಾಗಿದ್ದರೆ ನಿನಗೆ ಬಲವಾದ ಕೇಡುಂಟಾಗುವುದರಲ್ಲಿ ಸಂಶಯವಿಲ್ಲ. ಆದುದರಿಂದ, ನೀನು ಇವನ ವಿಷಯದಲ್ಲಿ ಮಾತ್ರ ಬಹಳ ಜಾಗರೂಕನಾಗಿರಬೇಕು. ಇದಲ್ಲದೆ, ರಹಸ್ಯವಾದ ಇನ್ನೊಂದು ವಿಷಯವನ್ನು ನಿನಗೆ ಹೇಳಬೇಕಾಗಿರುವುದು. ಏನೆಂದರೆ, ಆ ಕಾಮಮೋಹಿನಿಯು ಬಹಳ ಸುಂದರಿಯಾಗಿಯೈ ಗುಣಾಧ್ಯಳಾಗಿಯೂ ಇರುವಳಾದುದರಿಂದ, ಸಮಸ್ತ ವಿಷಯದಲ್ಲಿಯೂ ನಿನಗೆ ಅನುರೂಪಳಾಗಿರುವಳು. ಇವಳಿಗೆ ಶಂಬರನ ವಿಷಯದಲ್ಲಿ ಸ್ವಲ್ಪವೂ ಅನುರಾಗವಿಲ್ಲ. ಆದರೂ, ಆ ನೀಚನು ಇವಳನ್ನು ಬಲಾತ್ಕಾರದಿಂದ ವಿವಾಹ ಮಾಡಿಕೊಳ್ಳುವುದಕ್ಕಾಗಿ ಬಹುಪ್ರಯತ್ನ ಮಾಡುತ್ತಲಿದ್ದಾನೆ. ದೈವಗತಿ ಹೇಗಿರುವುದೋ ತಿಳಿಯುವುದಕ್ಕಾಗುವುದಿಲ್ಲ. ಒಂದುವೇಳೆ ದೈವಕೃಪೆಯಿಂದ ಅವಳೇ ನಿನಗೆ ಲಭಿಸಿದರೂ ಲಭಿಸಬಹುದು. ಅದು ದೈವಸಂಕಲ್ಪ ವಿದ್ದಂತಾಗಲಿ. ನೀನು ಮಾತ್ರ ನಾನು ಹೇಳಿರುವ ಕಾರ್ಯಗಳಲ್ಲಿ ಯಾವುದನ್ನೂ ಮರೆಯದೆ ನೆರವೇರಿಸಿ ನನ್ನನ್ನು ಕೃತಕೃತ್ಯನನ್ನಾಗಿ ಮಾಡು. (ಎಂದು ಹೇಳಿ, ತನ್ನ ಕೈಪೆಟ್ಟಿಗೆಯ ಬೀಗದ ಕೈಯನ್ನು ಅವನ ಕೈಯಲ್ಲಿ ಕೊಟ್ಟು,) ಇನ್ನು ನಾನು ಸ್ವಲ್ಪ ವಿಶ್ರಮಿಸಿಕೊಳ್ಳುವೆನು. ವೈದ್ಯನನ್ನು ಕರೆ. ಪರಂತಪನು ಒಡನೆಯೇ ಜೀವಾನಂದನನ್ನು ಕರೆತರುವನು.
ಮಾಧವ-(ಆತನನ್ನು ನೋಡಿ) ಅಯ್ಯಾ ! ಚಿಕಿತ್ಸಕನೆ ನನಗೆ ಮೈಮರೆತು ಸ್ವಲ್ಪ ಹೊತ್ತು ಸುಖನಿದ್ರೆಯುಂಟಾಗುವಂತೆ ಏನಾದರೂ ಔಷಧವನ್ನು ಕೊಡು.
ಜೀವಾನಂದ-ಅಪ್ಪಣೆ (ಔಷಧವನ್ನು ಕೊಡುವನು.)

ಮಾಧವನು ಆ ಔಷಧವನ್ನು ಪಾನಮಾಡಲು, ಕೂಡಲೆ ಅವನಿಗೆ ಚೆನ್ನಾಗಿ ನಿದ್ರೆ ಬಂದಿತು, ಜೀವಾನಂದನು ಅವನ ಹಾಸುಗೆಯ ಬಳಿಯಲ್ಲೇ ಕುಳಿತಿದ್ದನು. ಪರಂತಪನು, ತನ್ನ ದೂತನಾದ ಮಂಜೀರಕನನ್ನು ನೋಡುವುದಕ್ಕೋಸ್ಕರ ಬಾಗಲಿಗೆ ಬಂದು ನೋಡಿ, ಅವನನ್ನು ಕಾಣದೆ ಅಲ್ಲಿದ್ದ ಇತರ ಜನಗಳನ್ನು ಕೇಳಲು, ಅವರು “ ಅಯ್ಯಾ ! ಪರಂತಪನೆ! ಮಂಜೀರಕನು ತನ್ನ ಕೈಯಲ್ಲಿ ಒಂದು ಸಣ್ಣ ತುಪಾಕಿಯನ್ನೂ ಗುಂಡುಗಳನ್ನೂ ಹಿಡಿದುಕೊಂಡು ಹೋಗುತ್ತಿರುವಾಗ, ಯಾಮಿಕರು ಕಂಡು, ಇವನೇ ಆ
೨೩

ಅಧ್ಯಾಯ ೩


ದುರ್ಬುದ್ದಿಯನ್ನು ಸಂಹರಿಸಿರಬೇಕೆಂದು ನಿಶ್ಚಯಿಸಿ, ಅವನನ್ನು ನಗರಾಧ್ಯಕ್ಷನ ಬಳಿಗೆ ಕರೆದುಕೊಂಡು ಹೋದರು' ಎಂದು ಹೇಳಿದರು. ಕೂಡಲೆ ಪರಂತಪನು ಸ್ವಲ್ಪ ವ್ಯಾಕುಲನಾಗಿ, ಮಾಧವನು ಮಲಗಿರುವ ಸ್ಥಳಕ್ಕೆ ಬಂದು, ಅವನ ದೇಹಸ್ಥಿತಿಯ ವಿಷಯದಲ್ಲಿ ಜೀವಾನಂದ ವೈದ್ಯನನ್ನು ಕೇಳಲು, ಜೀವಾನಂದನು, ಇನ್ನು ೩-೪ ಘಂಟೆಗಳವರೆಗೆ ಇವನ ಪ್ರಾಣಕ್ಕೆ ಯಾವ ಅಪಾಯವೂ ಇಲ್ಲವೆಂದನು. ಆಗ ಪರಂತಪನು ವೈದ್ಯನನ್ನು ಎರಡು ಘಂಟೆಗಳ ಕಾಲ ಅವಕಾಶ ಕೇಳಿಕೊಂಡು, ತ್ವರೆಯಿಂದ ನಗರಾಧ್ಯಕ್ಷನ ಆಸ್ಥಾನಕ್ಕೆ ಬಂದು ವಿಚಾರಿಸಲು, ಮಂಜೀರಕನು ತಪ್ಪಿತಸ್ಥನೆಂದು ತಿಳಿದುದರಿಂದ ಅವನನ್ನು ಕಾರಾಗೃಹದಲ್ಲಿಟ್ಟಿರುವರೆಂದು ಅಲ್ಲಿದ್ದ ಸೇವಕರಿಂದ ತಿಳಿಯಬಂದಿತು. ಅಲ್ಲಿಂದ ಕಾರಾಗೃಹದ ಬಾಗಲಿಗೆ ಬಂದು ನೋಡಲು, ಬಾಗಿಲು ಬೀಗ ಹಾಕಿದ್ದಿತು. ಅಲ್ಲಿ ಕಾವಲಾಗಿದ್ದ ಯಾಮಿಕನೊಬ್ಬನು ಮಾತ್ರ ಬಾಗಿಲಲ್ಲಿ ನಿಂತಿದ್ದನು. ಪರಂತಪನು ಆ ಮಾರ್ಗವಾಗಿ ಬರಲು, ಅಲ್ಲಿದ್ದ ಕಾವಲುಗಾರನು ಇನನನ್ನು ನೋಡಿ 'ಯಾರು ? ಇಷ್ಟು ಹೊತ್ತಿನಲ್ಲಿ ಇಲ್ಲಿಗೆ ಬರಲು ಕಾರಣವೇನು ? ಹೊರಟುಹೋಗು , ಇಲ್ಲದಿದ್ದರೆ ನಿನ್ನನ್ನು ಈಗಲೇ ಗುಂಡಿನಿಂದ ಹೊಡೆಯುವನು' ಎಂದು ಗದರಿಸಿದನು. ಆಗ ಪರಂತಪನು 'ಅಯ್ಯಾ ; ನಾನು ಪರದೇಶಿ, ದಾರಿ ತಿಳಿಯದೆ ಇಲ್ಲಿಗೆ ಬಂದೆನು. ಮನ್ನಿಸು. ಹೊರಟುಹೋಗುತ್ತೇನೆ' ಎಂದು ಹೇಳಿ, ಬೇರೆ ಮಾರ್ಗದಿಂದ ಅವನ ಹಿಂದುಗಡೆಯಲ್ಲಿ ಬಂದು, ಥಟ್ಟನೆ ಅವನಮೇಲೆ ಬಿದ್ದು, ಅವನ ಕೈಯಲ್ಲಿದ್ದ ಬಂದೂಕವನ್ನು ಕಿತ್ತು ಬಿಸುಟು, ಅವನನ್ನು ನೆಲಕ್ಕೆ ಕೆಡವಿಕೊಂಡು, ಬಾಯಿಗೆ ಬಟ್ಟೆಯನ್ನು ತುರುಕಿ, ಕೈಕಾಲುಗಳನ್ನು ಬಿಗಿದು ಕಟ್ಟಿಹಾಕಿದನು. ಆಮೇಲೆ ಅವನ ಮೈಯನ್ನೆಲ್ಲ ಶೋಧಿಸುತಿರಲು, ಅವನ ಜೇಬಿನಲ್ಲಿ ಒಂದು ಬೀಗದಕೈ ಸಿಕ್ಕಿತು. ಅದನ್ನು ತಂದು ಕಾರಾಗೃಹದ ಬಾಗಿಲನ್ನು ತೆಗೆದು 'ಮಂಜೀರಕಾ ! ಎಲ್ಲಿರುವೆ ?' ಎಂದು ಗಟ್ಟಿಯಾಗಿ ಕೂಗಿದನು. ಆಗ ಒಳಗಿನಿಂದ 'ಸ್ವಾಮಿ ! ಇಲ್ಲಿರುವೆನು' ಎಂಬ ಶಬ್ದವು ಕೇಳಬಂದಿತು. ಆಗ ಒಳಮನೆಯ ಚಿಲುಕವನ್ನು ತೆಗೆಯಲು, ಮಂಜೀರಕನು ಅತಿ ವಿಸ್ಮಿತನಾಗಿ ಹೊರಕ್ಕೆ ಬಂದನು. ಅವನನ್ನು ಅತಿ ಸಂತೋಷದಿಂದ ಆಲಿಂಗಿಸಿಕೊಂಡು, ತಾನು ಮಾಡಿದ ಸಾಹಸ ೨೪

ಪರಂತಪ ವಿಜಯ


ಕಾರ್ಯಗಳನ್ನೆಲ್ಲ ಅವನಿಗೆ ರಹಸ್ಯವಾಗಿ ಹೇಳಿ, ಮೊದಲಿದ್ದಂತೆಯೇ ಆ ಬಾಗಿಲುಗಳನ್ನೆಲ್ಲ ಭದ್ರಪಡಿಸಿ, ಆ ಬೀಗದಕೈಯನ್ನು ಕಾವಲುಗಾರನ ಜೇಬಿನಲ್ಲಿಯೇ ಹಾಕಿ, ತನ್ನಲ್ಲಿದ್ದ ೧೦ ವರಹಗಳನ್ನು ಅವನ ಬಟ್ಟೆಯಲ್ಲಿ ಕಟ್ಟಿ, ಆತನ ಕ್ಷಮೆಯನ್ನು ಕೇಳಿಕೊಂಡು, ಅಧಿಕಾರಿಗಳಿಂದ ಅವನಿಗೆ ಯಾವ ತೊಂದರೆಯೂ ಬಾರದಿರಲೆಂದು ಅವನ ಕಟ್ಟುಗಳನ್ನು ಬಿಚ್ಚದೆ, ಮಂಜೀರಕನೊಡನೆ ಮಾಧವನಿದ್ದ ಸ್ಥಳಕ್ಕೆ ಹೊರಟುಬಂದು, ಮಂಜೀರಕನಿಗೆ ವೇಷಾಂತರವನ್ನು ಹಾಕಿ 'ನೀನು ಕಲ್ಯಾಣನಗರಕ್ಕೆ ಹೋಗಿ ಅಲ್ಲಿರು. ನಾನು ಕೂಡಲೆ ಅಲ್ಲಿಗೆ ಬರುವೆನು' ಎಂದು ಹೇಳಿ, ಕಳುಹಿಸಿದನು. ಮಾಧವನು ಆಗತಾನೆ ಎಚ್ಚರಗೊಂಡು, ಅರ್ಥಪರನನ್ನೂ ಪರಂತಪನನ್ನೂ ಸಮೀಪಕ್ಕೆ ಕರೆದು, ತನ್ನ ಹಾಸುಗೆಯ ಬಳಿಯಲ್ಲಿ ಕುಳ್ಳಿರಿಸಿಕೊಂಡು, ಜೀವಾನಂದನನ್ನು ನೋಡಿ 'ಅಯ್ಯಾ! ಮಿತ್ರನೆ ! ನೀನು ಮಾಡಿದ ಪರಮೋಪಕಾರಕ್ಕಾಗಿ ನಾನು ಬಹಳ ಕೃತಜ್ಞನಾಗಿರುವೆನು.' ಎಂದು ಹೇಳಿ, ತನ್ನ ಕತ್ತಿನಲ್ಲಿ ಹಾಕಿಕೊಂಡಿದ್ದ ಮುತ್ತಿನ ಸರವನ್ನು ತೆಗೆದು ಅವನ ಕೈಯಲ್ಲಿ ಕೊಟ್ಟು, 'ನಿನಗೆ ವಾಗ್ದಾನ ಮಾಡಿದ್ದುದಕ್ಕಿಂತ ಹೆಚ್ಚಾದ ದ್ರವ್ಯವನ್ನು ನಿನಗೆ ಕೊಟ್ಟಿರುವೆನು. ಈವೊಂದೊಂದು ಮುತ್ತನ್ನು ವಿಕ್ರಯಿಸಿಕೊಂಡರೂ, ನಿನಗೆ ಜೀವಾವಧಿ ರಾಜಭೋಗಗಳನ್ನು ಅನುಭವಿಸುವುದಕ್ಕೆ ಬೇಕಾದಷ್ಟು ದ್ರವ್ಯ ಲಭಿಸುವುದು. ಇನ್ನು ಮೇಲೆ ನೀನು ಸ್ವತಂತ್ರ ನಾಗಿ ಜೀವಿಸಿಕೊಳ್ಳಬಹುದು. ಇದುವರೆಗಿನಂತೆ ನೀನು ಜೀವನಾರ್ಥವಾಗಿ ಶ್ರಮಪಡಬೇಕಾದುದಿಲ್ಲ. ನಿನ್ನಿಂದ ನನಗೆ ಆಗಬೇಕಾದ ಕೆಲಸವಿನ್ನೊಂದಿರುವುದು. ಅದನ್ನು ನೆರವೇರಿಸಿಕೊಡುವುದಾಗಿ ನೀನು ವಾಗ್ದಾನ ಮಾಡಿದರೆ ಹೇಳುತ್ತೇನೆ.' ಎಂದನು.

ಜೀವಾನಂದ-ಅಯ್ಯಾ ! ನೀನು ನನಗೆ ಮಾಡಿರುವ ಉಪಕಾರಕ್ಕೆ, ನಾನು ಯಾವ ಕೆಲಸವನ್ನು ಮಾಡಿದರೆತಾನೆ ಸಾಕಾಗುವುದು ? ಜೀವನಾರ್ಥವಾಗಿ ಅಹೋರಾತ್ರಿಗಳಲ್ಲಿಯೂ ಶ್ರಮಪಡುತ್ತಿದ್ದ ನನಗೆ ಸುಖವಾದ ಬೇವಿಕೆಯನ್ನು ಕಲ್ಪಿಸಿದ ನಿನಗೆ, ನಾನೆಂದಿಗೂ ತಕ್ಕ ಪ್ರತ್ಯುಪಕಾರಮಾಡಲಾರೆನು, ನನ್ನ ಕೈಯಲ್ಲಿ ಸಾಧ್ಯವಾದುವುಗಳನ್ನೆಲ್ಲ ಶಿರಸಾ ವಹಿಸಿ ಮಾಡುವೆನು, ಹೇಳು. 
೨೫

ಅಧ್ಯಾಯ ೩


ಮಾಧವ-ನಿನ್ನ ಕೈಯಲ್ಲಿ ಕೊಟ್ಟಿರುವುದಲ್ಲದೆ ನನ್ನ ಪೆಟ್ಟಿಗೆಯಲ್ಲಿ ಉಳಿದಿರುವ ರತ್ನಗಳನ್ನು ವಿಕ್ರಯಿಸಿದರೆ, ೧೦ ಕೋಟಿ ವರಹಗಳಿಗಿಂತ ಹೆಚ್ಚಾಗಿಯೇ ಬರಬಹುದು. ಅದರಲ್ಲಿ ೨ ಕೊಟಿ ದ್ರವ್ಯಗಳಿಂದ, ವಿಶಾಲವಾಗಿಯೂ ಅನುಕೂಲವಾಗಿಯೂ ಇರುವ ಒಂದು ವೈದ್ಯಶಾಲೆಯನ್ನು ಕಟ್ಟಿಸಬೇಕು. ಉಳಿದುದನ್ನು ರಾಜ್ಯಾಧಿಕಾರಿಗಳಲ್ಲಿ ಮೂಲ ಧನವಾಗಿ ಕೊಟ್ಟು, ಅದರ ವೃದ್ಧ್ಯಾಂಶವನ್ನು, ದರಿದ್ರರಾಗಿಯೂ ರೋಗಪೀಡಿತರಾಗಿಯೂ ಇರುವ ಜನಗಳ ಅನ್ನ ಪಾನಗಳಿಗಾಗಿಯೂ ಔಷಧಗಳಿಗಾಗಿಯೂ ಉಪಯೋಗಿಸುವಂತೆ ಮಾಡಬೇಕು. ನೀನು ದುಡ್ಡು ಕೊಡತಕ್ಕವರಿಗೆ ಎಷ್ಟು ಆದರದಿಂದ ಚಿಕಿತ್ಸೆ ಮಾಡುತಿದ್ದೆಯೋ, ಹಾಗೆ ಆ ವೈದ್ಯ ಶಾಲೆಗೆ ಬರತಕ್ಕಂಥ ರೋಗಿಗಳಿಗೆ ಪಾರಮಾರ್ಥಿಕವಾಗಿ ಬೆಕಿತ್ಸೆ ಮಾಡುತಿರಬೇಕೆಂಬುದೇ ನನ್ನ ಪ್ರಾರ್ಥನೆ. ಈ ಧರ್ಮವು ಆಚಂದ್ರಾರ್ಕವಾಗಿ ನಡೆಯುವಂತೆ, ನೀನೂ ಪರಂತಪನೂ ಪರ್ಯಾಲೋಚಿಸಿ. ನಿಮ್ಮಿಬ್ಬರಿಗೂ ಸೂಕ್ತವಾದ ರೀತಿಯಲ್ಲಿ ನಡೆಯಿಸಬೇಕು. ಈ ರತ್ನಗಳನ್ನೆಲ್ಲ ಏತದರ್ಥವಾಗಿ ಈಗಲೇ ರಾಜ್ಯಾಧಿಕಾರಗಳಲ್ಲಿ ಒಪ್ಪಿಸಿ-ನನ್ನ ಮನೋರಥವು ಸಫಲವಾಗುವುದೆಂಬ ಪ್ರತ್ಯಯವನ್ನು ಉಂಟುಮಾಡಿದರೆ, ನಾನು ಸಂತೋಷದಿಂದ ಪ್ರಾಣಗಳನ್ನು ಬಿಡುವೆನು.
ಪರಂತಪ-ನಿನ್ನ ಮನೋರಥ ನೆರವೇರುವಂತೆ ಈಗಲೇ ಮಾಡುವೆವು, ಅಯ್ಯಾ ! ಚಿಕಿತ್ಸಕನೆ ! ಇವನನ್ನು ನೋಡಿಕೊಂಡಿರು. ನಾನು ಅಯ್ದು ನಿಮಿಷಗಳೊಳಗಾಗಿ ಈ ಪಟ್ಟಣದ ನ್ಯಾಯಾಧಿಪತಿಯನ್ನು ಕರೆದುಕೊಂಡು ಬರುವೆನು. ಮಾಧವನು ಈ ಅನ್ಯಾದೃಶವಾದ ಧರ್ಮವನ್ನು ತನ್ನ ಕೈಯಿಂದಲೇ ಮಾಡಲಿ.

  ಜೀವಾನಂದ-ಅಗಲಿ, ನೀನು ಜಾಗ್ರತೆಯಾಗಿ ಹೋಗಿ ಬಾ.


  ಪರಂತಪನು ಕೂಡಲೆ ನ್ಯಾಯಾಧಿಪತಿಯ ಬಳಿಗೆ ಹೋಗಿ, ಈ ಅಂಶ ಗಳನ್ನು ಅವನಿಗೆ ಸಂಕ್ಷೇಪವಾಗಿ ತಿಳಿಯಿಸಿ, ಅವನನ್ನು ಕರೆದುಕೊಂಡು ಬಂದನು. ಮಾಧವನು ಅವನಿಗೆ ಪ್ರತ್ಯುತ್ಥಾನಮಾಡಲಾರದೆ ಶ್ರಮಪಡುತಿದ್ದುದನ್ನು ನೋಡಿ, ಪರಂತಪನೂ ಜೀವಾನಂದನೂ ಅವನನ್ನು ಎತ್ತಿ ಕೂರಿಸಿದರು. ಆಗ ಮಾಧವನು ನ್ಯಾಯಾಧಿಪತಿಯನ್ನು ನೋಡಿ 'ಅಯ್ಯಾ! ೨೬

ಪರಂತಪ ವಿಜಯ


ನ್ಯಾಯಾಧಿಪತಿಯೇ ! ನೀನು ಸರಿಯಾದ ಕಾಲಕ್ಕೆ ಸಿಕ್ಕಿದುದು, ನನ್ನ ಸುಕೃತಾತಿಶಯವನ್ನು ತೋರಿಸುತ್ತದೆ. ನಾನು ಈಗ ಕೃತಕೃತ್ಯನಾದೆನು. ಇದೇ ಈ ರತ್ನಗಳನ್ನು ತೆಗೆದುಕೊ, ಈ ಪರಂತಪನನೂ ವೈದ್ಯನೂ ನನಗೆ ಪರ ಮಾಪ್ತರು. ನೀನು ಇವರೊಡನೆ ಸೇರಿಕೊಂಡು ಈ ಧರ್ಮವನ್ನು ನೆರವೇರಿಸಿದರೆ, ಇದರಿಂದ ಉಂಟಾಗತಕ್ಕ ಸುಕೃತಕ್ಕೆ ನೀವೂ ಭಾಗಿಗಳಾಗುವಿರಿ. ಇನ್ನು ನನಗೆ ಕಾಲ ಸಮೀಪಿಸಿತು. ಈ ಅಂಶಕ್ಕೆ ನೀನು ಒಪ್ಪಿದ ಪಕ್ಷದಲ್ಲಿ, ನಾನು ಸಂತುಷ್ಟನಾಗಿ ಪ್ರಾಣಬಿಡುವೆನು.
ನ್ಯಾಯಾಧಿಪತಿ--ನಾನು ಬಹು ಕಾಲದಿಂದ ನೀನು ಪರೋಪಕಾರಪರನೆಂಬುದನ್ನು ಕಿವಿಯಿಂದ ಕೇಳುತ್ತಿದ್ದೆನು. ಆದರೆ, ಈಗ ಅದೆಲ್ಲವೂ ನನಗೆ ಪ್ರತ್ಯಕ್ಷಾನುಭವಕ್ಕೆ ಬಂದಿತು. ಇಂಥ ಧರ್ಮಪರಾಯಣರನ್ನು ನಾನೆಲ್ಲಿಯೂ ನೋಡಿರಲಿಲ್ಲ. ನೀನೇ ಧನ್ಯನು. ಅಪರಿಮಿತವಾದ ಧನವನ್ನು ಸಂಪಾದಿಸಿ, ತಾವೂ ಅನುಭವಿಸದೆ, ಸತ್ಪಾತ್ರರಲ್ಲಿಯೂ ವಿನಿಯೋಗಿಸದೆ, ಧನಪಿಶಾಚಿಗಳಂತೆ ಬದುಕಿ, ಕೊನೆಗೆ ಚೋರರೇ ಮೊದಲಾದ ಅಪಾತ್ರಗಳಲ್ಲಿ ತಮ್ಮ ದ್ರವ್ಯವೆಲ್ಲ ಸೇರಿಹೋಗುವಂತೆ ಮಾಡಿದ, ಅನೇಕ ಜನ ಮೂಢರನ್ನು ನಾವು ನೋಡಿರುವೆವು. ಸಂಪಾದಿಸಿದ ದ್ರವ್ಯಕ್ಕೆ ದಾನ ಭೋಗಗಳೆರಡರಿಂದಲೇ ಸಾರ್ಥಕ್ಯವುಂಟಾಗುವುದು. ಇವೆರಡೂ, ಪುಣ್ಯವಂತರಿಗಲ್ಲದೆ ಇತರರಿಗೆ ಲಭಿಸಲಾರದು. ಈ ದಿವಸ ನೀನು ನಿನ್ನ ದ್ರವ್ಯ ವನ್ನು ವಿನಿಯೋಗಿಸಿರತಕ್ಕ ರೀತಿಯೇ ನಿನ್ನ ಪುಣ್ಯಾತಿಶಯವನ್ನು ತೋರಿಸುತ್ತಲಿದೆ. ಈ ವಿಷಯದಲ್ಲಿ ನಿನಗೆ ಯಾರು ತಾನೆ ಸಹಾಯಕರಾಗುವುದಿಲ್ಲ? (ಪರಂತಪನನ್ನು ನೋಡಿ) ಅಯ್ಯಾ! ಪರಂತಪ ! ಅದೋ ಅಲ್ಲಿ ನೋಡು, ಆ ಮಾರ್ಗದಲ್ಲಿ ಈ ದೇಶದ ಕೋಶಾಧ್ಯಕ್ಷನು ಹೋಗುತ್ತಿರು ವಂತೆ ಕಾಣುವುದು. ಪಾರಮಾರ್ಥಿಕರಾದವರಿಗೆ ಮನೋರಥ ಪರಿಪೂರ್ತಿಗೆ ಬೇಕಾದ ಸಾಧನೆಗಳೆಲ್ಲ ಅಪ್ರಾರ್ಥಿತವಾಗಿ ಒದಗುವುದು ಸಹಜವಾದುದೇ ಸರಿ : ಜಾಗ್ರತೆಯಾಗಿ ಹೋಗಿ ಅವನನ್ನು ಕರೆದು ಕೊಂಡು ಬಾ


  ಪರಂತಪನು ಅವನನ್ನು ಕರೆದುಕೊಂಡು ಬಂದನು. ಆಗ ಆ ಕೋಶಾಧ್ಯಕ್ಷನು ನ್ಯಾಯಾಧಿಪತಿಯನ್ನು ನೋಡಿ 'ಅಯ್ಯಾ ! ನ್ಯಾಯಾಧಿಪತಿಯೇ ! ನಾನು ನಿನ್ನನ್ನೇ ಹುಡುಕುತಿದ್ದೆನು. ಈ ದ್ಯೂತಶಾಲೆಯಲ್ಲಿ, 
೨೭

ಅಧ್ಯಾಯ ೩


ದುರ್ಬುದ್ಧಿಯೆಂಬವನು, ದ್ಯೂತದಲ್ಲಿ ಉಂಟಾದ ಕಲಹದಿಂದ ಕೋಪಪರವಶನಾಗಿ, ತನ್ನನ್ನು ದ್ಯೂತದಲ್ಲಿ ಸೋಲಿಸಿ ಸರ್ವಸ್ವವನ್ನೂ ಗೆದ್ದುಕೊಂಡ ಮಾಧವನೆಂಬ ಒಬ್ಬ ಮನುಷ್ಯನನ್ನು ಕಠಾರಿಯಿಂದ ತಿವಿದು ಕೊಂದನೆಂಬುದಾಗಿಯೂ, ಕೂಡಲೆ ಮಾಧವನ ಕಡೆಯವನಾದ ಯಾವನೂ ಒಬ್ಬನು ಒಬ್ಬರಿಗೂ ತಿಳಿಯದಂತೆ ತುಪಾಕಿಯನ್ನು ಹಾರಿಸಿ ದುರ್ಬುದ್ಧಿಯನ್ನು ಕೊಂದನೆಂಬುದಾಗಿಯೂ, ದುರ್ಬುದ್ಧಿಯನ್ನು ಕೊಂದವನೆಂಬ ಸಂಶಯದಿಂದ ಒಬ್ಬ ಮನುಷ್ಯನನ್ನು ಯಾಮಿಕರು ಹಿಡಿದು ಕಾರಾಗೃಹದಲ್ಲಿ ಇಟ್ಟಿದ್ದುದಾಗಿಯೂ, ಹಾಗೆ ಇಡಲ್ಪಟ್ಟ ಮನುಷ್ಯನ ಮಿತ್ರನಾವನೋ ಒಬ್ಬನು ಕಾರಾಗೃಹದ ಬಳಿಗೆ ಹೋಗಿ ಅಲ್ಲಿದ್ದ ಕಾವಲುಗಾರನನ್ನು ಹಿಡಿದು ಅವನ ಕೈಕಾಲುಗಳನ್ನು ಕಟ್ಟಿ ಕೆಡವಿ ಬಾಯಿಗೆ ಬಟ್ಟೆಯನ್ನು ತುರುಕಿ ಅವನನ್ನು ಬಿಡಿಸಿಕೊಂಡು ಹೋದುದಾಗಿಯೂ ವರ್ತಮಾನ ತಿಳಿಯಿತು. ಇದರ ನಿಜಾಂಶವನ್ನು ತಿಳಿಯುವುದಕ್ಕಾಗಿ, ನಗರಾಧ್ಯಕ್ಷನನ್ನು ಕರೆದುಕೊಂಡು ಆ ದ್ಯೂತಶಾಲೆಗೆ ಹೋಗಿ ನೋಡುವಲ್ಲಿ, ಅಲ್ಲಿ ದುರ್ಬುದ್ಧಿಯು ತಲೆಯು ಅನೇಕ ಶಕಲಗಳಾಗಿ ಬಿದ್ದಿದ್ದಿತು. ದುರ್ಬುದ್ಧಿಗೂ ಮಾಧವನಿಗೂ ದ್ಯೂತದಲ್ಲಿ ನಡೆದಿದ್ದ ನಿರ್ಣಯಪತ್ರಿಕೆಯು ಅಲ್ಲಿದ್ದ ಜನಗಳ ವಶದಲ್ಲಿದ್ದಿತು. ಅದಕ್ಕಾಗಿ ಅಲ್ಲಿದ್ದ ಪ್ರತಿಯೊಬ್ಬರ ವಾಙ್ಮೂಲಗಳನ್ನೂ ಆಮೂಲಾಗ್ರವಾಗಿ ಪತ್ರಿಕಾಮುಖೇನ ತೆಗೆದುಕೊಂಡು, ಆ ಜನರನ್ನೂ ಅವರಲ್ಲಿದ್ದ ಪತ್ರಿಕೆಯನ್ನೂ ದಂಡಾಧ್ಯಕ್ಷನ ಬಳಿಗೆ ಕಳುಹಿಸಿ, ದುರ್ಬುದ್ಧಿಯ ಅಸ್ತಿ ಯಾವುದೂ ಹೋಗದಂತೆ ನೋಡಿಕೊಳ್ಳುವುದಕ್ಕಾಗಿ ಅವನ ಮನೆಬಾಗಲಿಗೂ ದ್ಯೂತಾಲಯಕ್ಕೂ ಯಾಮಿಕರನ್ನು ಕಾವಲಿಟ್ಟು, ಆ ಯಾಮಿಕಾಧಿಕಾರಿಯು ದಂಡಾಧ್ಯಕ್ಷನೊಡನೆ ನಿನ್ನನ್ನೇ ಹುಡುಕಿಕೊಂಡು ನಿನ್ನ ಮನೆಯ ಕಡೆಗೆ ಹೋಗುತ್ತಿರುವನು.' ಎಂದು ಹೇಳಿದನು.

  ನ್ಯಾಯಾಧಿಪತಿ-ಅಯ್ಯಾ ! ಪರಂತಪ ! ಜಾಗ್ರತೆಯಾಗಿ ಹೋಗಿ ಅವರನ್ನೂ ಇಲ್ಲಿಯೇ ಕರೆದುಕೊಂಡು ಬಾ.


  ಪರಂತಪನು ಹೋದ ಕೂಡಲೆ ಕೋಶಾಧಿಕಾರಿಯನ್ನು ನೋಡಿ “ಅಯ್ಯಾ ! ಕೋಶಾಧ್ಯಕ್ಷನೆ ! ಇದೋ ಇವನೇ ಮಾಧವನು. ದುರ್ಬುದ್ಧಿಯ ಪ್ರಹಾರದಿಂದ ಮೂರ್ಭೆ ಹೋದ ಕೂಡಲೆ ಈ ವೈದ್ಯನೂ ನಿನ್ನನ್ನು ೨೮

ಪರಂತಪ ವಿಜಯ


ಕರೆಯುವುದಕ್ಕೆ ಬಂದಿದ್ದ ಆ ಪರಂತಪನೂ ಸೇರಿ ಇವನನ್ನು ಇಲ್ಲಿಗೆ ಎತ್ತಿ ಕೊಂಡು ಬಂದು ಉಪಚರಿಸುತ್ತಿದ್ದಾರೆ. ಈ ವೈದ್ಯನು, ತನ್ನ ಸರ್ವ ಪ್ರಯತ್ನದಿಂದಲೂ ಚಿಕಿತ್ಸೆ ಮಾಡಿ, ಇದುವರೆಗೂ ಇವನ ಪ್ರಾಣಕ್ಕೆ ಅಪಾಯ ಸಂಭವಿಸದಂತೆ ಇಟ್ಟುಕೊಂಡಿದ್ದನು. ಈತನಿಗೆ ಉತ್ಕ್ರಮಣ ಕಾಲವು ಸನ್ನಿಹಿತವಾಗುತ್ತಲಿದೆ. ಇವನು ೧೨ ಕೋಟಿ ವರಹಗಳು ಬಾಳ ತಕ್ಕ ರತ್ನಗಳನ್ನು ಒಂದು ಧರ್ಮಾರ್ಥವಾದ ವೈದ್ಯಶಾಲೆಯನ್ನು ಸ್ಥಾಪಿಸುವು ದಕ್ಕಾಗಿ ಕೊಟ್ಟಿರುತ್ತಾನೆ. ಈ ಧರ್ಮವು ಆಚಂದ್ರಾರ್ಕವಾಗಿ ನಡೆಯುವುದಕ್ಕೋಸ್ಕರ, ಈ ಹಣವನ್ನು ರಾಜ್ಯಾಧಿಕಾರಿಗಳಲ್ಲಿ ಒಪ್ಪಿಸಿ-ಅದನ್ನು ಲೋಪವಿಲ್ಲದೆ ನಡೆಯಿಸತಕ್ಕ ಪ್ರಯತ್ನವನ್ನು ಮಾಡಬೇಕೆಂದು, ನನ್ನನ್ನು ಇಲ್ಲಿಗೆ ಕರೆಯಿಸಿಕೊಂಡಿರುವನು. ಈ ವಿಷಯದಲ್ಲಿ ಸರಿಯಾದ ಕಾಗದಗಳನ್ನು ಬರೆಯಿಸಿ ತನಗೆ ನಂಬುಗೆಯುಂಟಾಗುವುದಕ್ಕಾಗಿಯೇ ಇವನು ಇದುವರೆಗೂ ಪ್ರಾಣಧಾರಣೆಯನ್ನು ಮಾಡಿಕೊಂಡಿರುವಂತೆ ತೋರುತ್ತದೆ. ಇದಕ್ಕೆ ನಿನೂ ಸಹಾಯನಾಗಿರಬೇಕೆಂದು, ನಿನ್ನನ್ನೂ ಇಲ್ಲಿಗೆ ಕರೆಯಸಿದೆನು.

  ಕೋಶಾಧ್ಯಕ್ಷ-ಇಂಥ ಧರ್ಮಗಳನ್ನು ಮಾಡುವುದಕ್ಕಂತೂ ನಮಗೆ ಶಕ್ತಿಯಿಲ್ಲ. ಅದು ಹಾಗಿರಲಿ; ಇಂಥ ಧರ್ಮಕಾರ್ಯಗಳಲ್ಲಿ ಸಹಾಯ ಮಾಡತಕ್ಕ ಸಂದರ್ಭ ದೊರಕಿದುದೇ ನಮ್ಮ ಪುಣ್ಯಪ್ರಭಾವವನ್ನು ತೋರಿಸುವುದು. ಹೀಗಿರುವಲ್ಲಿ, ಈ ಕಾರ್ಯದಲ್ಲಿ ಸಹಾಯಮಾಡುವುದಕ್ಕೆ ಯಾರು ತಾನೆ ಹಿಂಜರಿಯುವರು? ನನ್ನಿಂದ ಆಗಬೇಕಾದ ಕಾರವೇನಿದ್ದರೂ ಅದನ್ನು ಅವಶ್ಯವಾಗಿ ಮಾಡುತ್ತೇನೆ.
  ಅಷ್ಟರಲ್ಲಿಯೇ, ಯಾಮಿಕಾಧಿಕಾರಿಯೂ ದಂಡಾಧ್ಯಕ್ಷನೂ ಪರಂತಪನೊಡನೆ ಅಲ್ಲಿಗೆ ಬಂದರು. ಅವರು ಈ ವಿಷಯಗಳನ್ನೆಲ್ಲ ಆಮೂಲಾಗ್ರವಾಗಿ ಕೇಳಿ ವಿಸ್ಮಿತರಾಗಿ, ಅವನ ಔದಾರ್ಯಕ್ಕೆ ಮೆಚ್ಚಿ, ತಮ್ಮ ಕೈಲಾದ ಸಹಾಯವನ್ನು ತಾವೂ ಮಾಡುವುದಾಗಿ ಒಪ್ಪಿದರು. ಕೂಡಲೆ ನ್ಯಾಯಾಧಿಪತಿಯು ಈ ಧರ್ಮಕ್ಕೆ ಉಪಯೋಗಿಸತಕ್ಕ ದ್ರವ್ಯಗಳಿಗಾಗಿ ಒಂದು ಉಯಿಲನ್ನು ಬರೆಯಿಸಿ, ಅದಕ್ಕೆ ಮಾಧವನ ಅನುಮತಿ ಚಿಹ್ನೆಯನ್ನು ಹಾಕಿಸಿ, ಅವನು ಕೊಟ್ಟಿದ್ದ ರತ್ನಗಳನ್ನು ಕೋಶಾಧ್ಯಕ್ಷನ ವಶಕ್ಕೆ ಒಪ್ಪಿಸಿದನು.

ಅಧ್ಯಾಯ ೪

೨೯


ಮಾಧವ-ಎಲೈ ಮಹನೀಯರೇ ! ಇದುವರೆಗೂ ನಾನು ನನ್ನ ಧರ್ಮ ಸಂಕಲ್ಪವು ನೆರವೇರುವುದೋ ಇಲ್ಲವೋ ಎಂದು ಬಹಳವಾಗಿ ಚಿಂತಿಸುತಿದ್ದೆನು. ತಕ್ಕ ಕಾಲಕ್ಕೆ ನೀವೆಲ್ಲರೂ ಒದಗಿ ನನ್ನನ್ನು ಕೃತಕೃತ್ಯನನ್ನಾಗಿ ಮಾಡಿದ ವಿಷಯದಲ್ಲಿ ನಾನು ಬಹಳ ಕೃತಜ್ಞನಾಗಿರುವೆನು. ನೀವು ಮಾಡಿರುವ ಈ ಉಪಕಾರಕ್ಕೆ ತಕ್ಕ ಪ್ರತಿಫಲವನ್ನು ಭಗವಂತನೇ ನಿಮಗೆ ಉಂಟುಮಾಡುವನೆಂದು ನಂಬಿರುತ್ತೇನೆ. ನನ್ನ ಇತರ ಆಸ್ತಿಗಳಿಗೆಲ್ಲ ಸರಿಯಾದ ವಿನಿಯೋಗವನ್ನು ಮಾಡಿರುತ್ತೇನೆ. ನೀವು ಸ್ಥಾಪಿಸತಕ್ಕ ವೈದ್ಯ ಶಾಲೆಯಿಂದ ಅನೇಕ ಸಹಸ್ರ ಜನಗಳಿಗೆ ಅನಂತವಾದ ಕ್ಲೇಶ ನಿವಾರಣೆಯುಂಟಾಗುವುದು, ಇದರಿಂದುಂಟಾಗುವ ಪುಣ್ಯಕ್ಕೆ ನೀವೂ ಭಾಗಿಗಳಾಗಬೇಕೆಂದು, ನಾನು ಜಗದೀಶ್ವರನನ್ನು, ಪ್ರಾರ್ಥಿಸುತ್ತೇನೆ. ಹೀಗೆ ಹೇಳುತ, ಆತ್ಮ ಶುದ್ಧಿಯಿಂದ ದೇವತಾ ಧ್ಯಾನ ಮಾಡುತ, ಮಾಧವನು ಸ್ವರ್ಗಸ್ಥನಾದನು.

ಅಧ್ಯಾಯ ೪.



   ಕಲ್ಯಾಣಪುರವು, ಪೂರ್ವಕಾಲದಲ್ಲಿ ಗಂಧರ್ವಪುರಿಯಂತೆಯೇ ಬಹಳ ಪ್ರಸಿದ್ಧವಾದ ರಾಜಧಾನಿಯಾಗಿದ್ದಿತು. ಈ ಪಟ್ಟಣವು ಸಪ್ತಕಕ್ಷ್ಯೆಗಳಿಂದ ಕೂಡಿರುವ ಅನೇಕ ಸೌಧಾಗ್ರಹಗಳಿಂದಲೂ, ಕುಬೇರೈಶ್ವರ್ಯವುಳ್ಳ ದೊಡ್ಡವರ್ತಕರಿಂದಲೂ, ಅಹೋರಾತ್ರಿಯೂ ತಮ್ಮ ತಮ್ಮ ಬುದ್ಧಿ ಬಲದಿಂದಲೂ ದೇಹಶ್ರಮದಿಂದಲೂ ಬಹು ದ್ರವ್ಯವನ್ನಾರ್ಜಿಸುವ ಶಿಲ್ಪಿಗಳಿಂದಲೂ, ಅತ್ಯುನ್ನತವಾದ ಗೋಪುರಗಳಿಂದ ಕೂಡಿದ ಶಿವಾಲಯಗಳಿಂದಲೂ, ಧರ್ಮಮಾರ್ಗೈಕ ಪಾರಾಯಣರಾಗಿ ರಾಜತಂತ್ರ ಧುರೀಣರಾಗಿರುವ ಅಧಿಕಾರಿಗಳಿಂದಲೂ, ಸಮಸ್ತ ವಿದ್ಯೆಗಳಲ್ಲಿಯೂ ಅದ್ವಿತೀಯರಾದ ವಿದ್ವಜ್ಜನಗಳಿಂದಲೂ, ಅತಿಮನೋಹರವಾಗಿದ್ದಿತು. ಮಾಧವನ ಅಣ್ಣನಾದ ಸುಮಿತ್ರನೂ, ಇವನ ಇನ್ನೊಬ್ಬ