ಪರಂತಪ ವಿಜಯ ೨/ಅಧ್ಯಾಯ ೫

ವಿಕಿಸೋರ್ಸ್ದಿಂದ

೪೩

ಪರಂತಪ ವಿಜಯ


ಕೂಡಲೆ, ಸುಮಿತ್ರ ಶಂಬರರಿಗೆ ಅನಿರ್ವಚನೀಯವಾದ ಖೇದವುಂಟಾಗುವುದಲ್ಲದೆ, ಇವರಿಗೆ ನನ್ನ ಮೇಲೂ ದ್ವೇಷವುಂಟಾಗಬಹುದು; ಈ ದ್ವೇಷವನ್ನು ತಪ್ಪಿಸಿಕೊಳ್ಳಬೇಕೆಂದು, ಕಾಮಮೋಹಿನಿಗೆ ಪಿತೃಭಕ್ತಿಯ ವಿಷಯದಲ್ಲಿಯೂ, ಕೃತಜ್ಞತೆಯ ವಿಷಯದಲ್ಲಿಯೂ ಶಂಬರನನ್ನು ವಿವಾಹ ಮಾಡಿಕೊಳ್ಳತಕ್ಕ ವಿಷಯದಲ್ಲಿಯೂ ಕೂಡಿದ ಮಟ್ಟಿಗೂ ಹೇಳಿದೆನು; ಅವಳು ಕೇಳಲಿಲ್ಲ. ಇವರ ದ್ವೇಷವು ಪ್ರಬಲವಾಗಿ, ನನ್ನ ಬಳಿಯಲ್ಲಿರತಕ್ಕೆ ಮಾಧವನ ಉಯಿಲು, ಉಂಗರ, ಕಾಗದಪತ್ರಗಳು, ದ್ರವ್ಯ ಮೊದಲಾದುವುಗಳಿಗೆ ಏನಾದರೂ ಅಪೋಹಬಂದರೆ ಕಷ್ಟ; ಅದಲ್ಲದೆ, ಅಪರಾಧಿಗಳನ್ನು ಪತ್ತೆ ಮಾಡುವ ವಿಷಯದಲ್ಲಿ ನನಗೆ ಪೂರ್ಣಾಧಿಕಾರವನ್ನು ಕೊಟ್ಟು ಸರಕಾರದವರು ಕೊಟ್ಟಿರತಕ್ಕ ಸನ್ನದೂ ನನ್ನ ಬಳಿಯಲ್ಲಿಯೇ ಇದೆ. ಈಗ ಇದನ್ನು ಭದ್ರಪಡಿಸದಿದ್ದರೆ ಬಹಳ ಅನರ್ಥಕ್ಕೆ ಕಾರಣವಾಗುವುದು" ಎಂದು ಯೋಚಿಸಿ, ಆ ಕ್ಷಣದಲ್ಲಿ ಅವುಗಳನ್ನು ತೆಗೆದುಕೊಂಡು ಯಾರಿಗೂ ತಿಳಿಯದಂತೆ ಆ ತೋಟದಲ್ಲಿ ಗಹನವಾದ ಒಂದು ಪ್ರದೇಶಕ್ಕೆ ಹೋಗಿ, ಅಲ್ಲಿ ಒಂದು ಬಂಡೆಯ ಬಳಿಯಲ್ಲಿ ಒಂದು ಹಳ್ಳವನ್ನು ತೆಗೆದು, ಆ ಗುಂಡಿಯಲ್ಲಿ ಇವುಗಳೆಲ್ಲ ಇಡಲ್ಪಟ್ಟಿದ್ದ ಒಂದು ತವರದ ಪೆಟ್ಟಿಗೆಯನ್ನು ಇಟ್ಟು ಮಣ್ಣು ಮುಚ್ಚಿ, ಗುಮಾನಿಗೆ ಆಸ್ಪದವಾಗದಂತೆ ಹೆಪ್ಪುಗಳನ್ನು ಕಟ್ಟಿ, ದಂಸು ಮಾಡಿ ಹೊರಟುಹೋಗಿ, ಅಲ್ಲಿದ್ದ ಅತಿಥಿಗಳ ಜತೆಯಲ್ಲಿ ಸೇರಿಕೊಂಡನು.
  ಹೀಗಿರುವಲ್ಲಿ, ಸುಮಿತ್ರನ ಜವಾನನು ಆ ಯೆರಡು ಕಾಗದಗಳನ್ನು ತೆಗೆದುಕೊಂಡು ಹೋಗಿ ತನ್ನ ಯಜಮಾನನಿಗೆ ಕೊಟ್ಟನು. ಸುಮಿತ್ರನು ಈ ಕಾಗದಗಳ ಮೇಲುವಿಲಾಸಗಳನ್ನು ನೋಡಿದ ಕೂಡಲೆ ಗಾಬರಿಬಿದ್ದು, ಕವರುಗಳನ್ನು ಕೂಡಲೇ ಒಡೆದು ನೋಡಿದನು. ಅದರಲ್ಲಿ ಬರೆದಿದ್ದ ಒಕ್ಕಣೆ ಯೇನೆಂದರೆ:-
  ತೀರ್ಥರೂಪು ಸುಮಿತ್ರರವರ ಚರಣ ಸನ್ನಿಧಾನಗಳಲ್ಲಿ:-
  ಸೇವಕಳಾದ ಕಾಮಮೋಹಿನಿಯ ಸಾಷ್ಟಾಂಗ ನಮಸ್ಕಾರಪೂರ್ವಕ ವಿಜ್ಞಾಪನೆಗಳು ; ಕ್ಷೇಮೋಪರಿ, ಸಂಪ್ರತಿ.


  ನಾನು ನನ್ನ ಮಾತಾಪಿತೃಗಳನ್ನು ಅರಿಯೆನು. ನನಗೆ ಬುದ್ದಿ ಬಂದುದು ಮೊದಲು ತಾವೇ ತಂದೆತಾಯಿಗಳೆಂದು ಭಾವಿಸಿದ್ದೇನೆ. ಬಾಲ್ಯ

ಅಧ್ಯಾಯ ೫

೪೩


ಮೊದಲುಗೊಂಡು, ನನ್ನನ್ನು ಸ್ವಂತ ಮಗಳಲ್ಲಿರತಕ್ಕ ಪ್ರೇಮಕ್ಕಿಂತಲೂ ಹೆಚ್ಚಾದ ಪ್ರೇಮದಿಂದ ಸಾಕಿ, ನನಗೆ ವಿದ್ಯೆ ಬುದ್ಧಿಗಳನ್ನು ಕಲಿಯಿಸಿದಿರಿ, ಇದಕ್ಕೆ ನಾನು ಎಷ್ಟು ಕೃತಜ್ಞಳಾಗಿದ್ದರೂ ಸಾಲದು; ಇದಕ್ಕಾಗಿ ನಾನು ಪ್ರಾಣವನ್ನು ಒಪ್ಪಿಸುವುದರಿಂದಲಾದರೂ ನನ್ನ ಕೃತಜ್ಞತೆಯನ್ನು ತೋರಿಸುವುದಕ್ಕೆ ಸಿದ್ಧಳಾಗಿರುವೆನು. ಆದರೆ, ಈ ದಿನ ನನ್ನನ್ನು ಬಲಾತ್ಕಾರವಾಗಿ ಶಂಬರನಿಗೆ ಕೊಟ್ಟು ವಿವಾಹಮಹೋತ್ಸವವನ್ನು ನಡೆಸುವುದಾಗಿ ನಿಷ್ಕರ್ಷೆಮಾಡಿ, ಇದಕ್ಕಾಗಿ ಅತಿಥಿಗಳನ್ನು ಕರೆಯಿಸುವ ಪ್ರಯತ್ನದಲ್ಲಿದ್ದೀರಿ. ಮೊದಲಿನಿಂದ ಈತನ ವಿಷಯದಲ್ಲಿ ನನಗಿರತಕ್ಕ ಅಭಿಪ್ರಾಯವನ್ನು ನಾನು ಧಾರಾಳವಾಗಿ ತಮಗೆ ತಿಳಿಯಿಸಿಯೇ ಇದ್ದೇನೆ. ಈತನ ಶೀಲಸ್ವಭಾವಗಳೂ ಗುಣಾತಿಶಯಗಳೂ ತಮಗೆ ತಿಳಿಯದವುಗಳಾಗಿಲ್ಲ. ಈತನನ್ನು ವಿವಾಹಮಾಡಿಕೊಂಡು-ಜೀವಿಸಿರುವವರೆಗೂ ದುಸ್ಸಹವಾದ ವ್ಯಥೆಯನ್ನು ಅನುಭವಿಸುವುದಕ್ಕಿಂತ ಈಗಲೆ ಪ್ರಾಣಹತ್ಯವನ್ನು ಮಾಡಿಕೊಳ್ಳುವುದುತ್ತಮವೆಂದು ಸಂಕಲ್ಪಿಸಿದ್ದೇನೆ. ಈತನಿಗೆ ಕೊಟ್ಟು ವಿವಾಹಮಾಡುವುದಕ್ಕಿಂತಲೂ, ಈ ದೇಹವನ್ನು ಬಿಡೆಂದು ತಾವು ಆಜ್ಞಾಪಿಸಿದ್ದರೆ, ಬಹಳ ಸಂತೋಷದಿಂದ ತನ್ನ ಆಜ್ಞೆಯನ್ನು ಶಿರಸಾ ವಹಿಸುತ್ತಿದ್ದನು. ತಾವು ಮಾಡತಕ್ಕೆ ಬಲಾತ್ಕಾರವನ್ನು ನೋಡಿದರೆ, ನನಗೆ ಬಹಳ ಸಂಕಟವಾಗುತ್ತದೆ. ತಮ್ಮ ಪ್ರಯತ್ನವನ್ನು ತಮ್ಮ ಮನಸ್ಸಿನಲ್ಲಿಯೇ ಯೋಚಿಸಬೇಕು. ನನ್ನನ್ನು ತಮ್ಮ ಮಗಳಿಗಿಂತಲೂ ಹೆಚ್ಚಾಗಿ ಸಾಕಿದಿರಿ. ನನಗೆ ಸರ್ವವಿಷಯ ದಲ್ಲಿಯ ಅನುರೂಪನಾದ ವರನಿಗೆ ಕೊಟ್ಟು ವಿವಾಹಮಾಡುವುದು ತಮ್ಮ ಕರ್ತವ್ಯವಲ್ಲವೆ? ಸರ್ವವಿಧದಲ್ಲಿಯೂ ನನಗೆ ಅನನುರೂಪನಾದವನಿಗೆ ನನ್ನ ಇಷ್ಟಕ್ಕೆ ವಿರೋಧವಾಗಿ ಬಲಾತ್ಕಾರದಿಂದ ನನ್ನನ್ನು ಕೊಟ್ಟು ವಿವಾಹ ಮಾಡಬೇಕೆಂಬ ಸಂಕಲ್ಪವು ತಮಗೆ ಉಂಟಾಗಬಹುದೆ? ಈ ತಮ್ಮ ಪ್ರಯತ್ನವು ನನಗೆ ಮಾತ್ರವೇ ಅನಭಿಮತವಾದುದಲ್ಲ; ನನ್ನನ್ನೂ ಶಂಬರನನ್ನೂ ನೋಡಿರತಕ್ಕ ಸರ್ವರಿಗೂ ಇದು ಅನಭಿಮತವಾಗಿದೆ. ಇದಲ್ಲದೆ, ಮೊದಲು ನೀವು ಈ ನಿಶ್ಚಿತಾರ್ಥವನ್ನು ಮಾಡಿದ ದಿವಸವೇ ಮಾಧವನು ಸ್ವರ್ಗಸ್ಥನಾದ ವರ್ತಮಾನವು ತಮಗೆ ಶ್ರುತವಾಗಿ ಈ ಉತ್ಸವಕ್ಕೆ ಭಂಗವಾದುದರಿಂದ, ಈ ಸಂಬಂಧವು ದೇವರಿಗೂ ಅಭಿಮತವಲ್ಲವೆಂದು ಗೊತ್ತಾಗುತ್ತದೆ. ಇಂಥ

೪೪

ಪರಂತಪ ವಿಜಯ



ಪ್ರಯತ್ನವನ್ನು ತಾವು ಮಾಡಿದ್ದರಿಂದ, ಅದರ ಫಲವನ್ನು ಅನುಭವಿಸುವುದಕ್ಕೆ ಇಷ್ಟವಿಲ್ಲದೆ, ನಾನು ತಮ್ಮ ಮನೆಯನ್ನು ಬಿಟ್ಟು ಹೊರಟುಹೋಗಿದ್ದೇನೆ. ಈ ವಿವಾಹವೊಂದು ವಿನಾ, ನನಗೆ ಏನು ಆಜ್ಞೆ ಮಾಡಿದಾಗ್ಗೂ, ನಾನು ಶಿರಸಾ ವಹಿಸಿ ನಡೆದುಕೊಳ್ಳಲು ಸಿದ್ಧಳಾಗಿರುತ್ತೇನೆ. ನನ್ನ ಅಪರಾಧವನ್ನು ಕ್ಷಮಿಸಬೇಕು. ತಮ್ಮ ವಿಧೇಯಳಾದ
                        ಕಾಮಮೋಹಿನಿ.
  ಈ ಕಾಗದವನ್ನು ಓದಿದಕೂಡಲೆ, ಸುಮಿತ್ರನು ವಿಸ್ಮಿತನಾಗಿ ಅತ್ಯಂತ ಸಂತಾಪಪರವಶನಾಗಿ "ಕರೆಯಲ್ಪಟ್ಟ ಬಂಧುಮಿತ್ರರೆದುರಿಗೆ ದುಸ್ಸಹವಾದ ಅಪಮಾನವುಂಟಾಯಿತಲ್ಲ!” ಎಂದು ಸಂತಪಿಸುತ್ತ, ಧಡೀಲನೆ ಎದ್ದು ಕಾಮಮೋಹಿನಿಯ ಕೊಠಡಿಗೆ ಹೋಗಿ, ಅವಳು ಅಲ್ಲಿ ಇಲ್ಲದಿದ್ದದ್ದರಿಂದ ಮನೆಯಲ್ಲಿ ಹುಡುಕಿ ಎಲ್ಲಿಯೂ ಕಾಣದೆ, ತನ್ನ ಉಪವನವನ್ನೆಲ್ಲ ತಿರುಗಿ, ಅಲ್ಲಿಯೂ ಕಾಣದೆ ಹೋದುದರಿಂದ, ಪರಂತಪನೇನಾದರೂ ಇವಳನ್ನು ಅಪಹರಿಸಿಕೊಂಡು ಹೋದನೇ ಎಂಬ ಗುಮಾನಿಯಿಂದ, ಆತನನ್ನು ನೋಡು ವುದಕ್ಕೋಸ್ಕರ ಪುನಃ ಮನೆಗೆ ಹಿಂದಿರುಗಿದನು. ಆಗ ಪರಂತಪನು ಅಲ್ಲಿದ್ದ ಅತಿಥಿಗಳೊಡನೆ ಸಲ್ಲಾಪಮಾಡುತಿದ್ದುದನ್ನು ನೋಡಿ, ತಾನು ಮಾಡಿದ ಊಹೆಯು ಅಸಂಭಾವಿತವೆಂದೆಣಿಸಿಕೊಂಡು, ಅತ್ಯಂತ ವ್ಯಸನದಿಂದ, ಶಂಬರನ ಕೊಠಡಿಗೆ ಹೋಗಿ, ನಿಶ್ಚಿತಾರ್ಥಕ್ಕೋಸ್ಕರ ಅಲಂಕರಿಸಿಕೊಂಡಿದ್ದ ಅವನ ಕೈಗೆ ಆ ಕಾಗದವನ್ನು ಕೊಟ್ಟು, ಮೌನದಿಂದ ತಲೆಬೊಗ್ಗಿಸಿ ಕೊಂಡು ನಿಶ್ಚಲವಾಗಿ ನಿಂತಿದ್ದನು. ಶಂಬರನು ಇವನ ಮುಖಭಾವದಿಂದ ಸ್ವಲ್ಪ ಗಾಬರಿಪಟ್ಟು, ತನ್ನ ಹೆಸರಿನ ವಿಲಾಸವಿದ್ದ ಆ ಕಾಗದವನ್ನು ಒಡೆದು ನೋಡಿ ಓದಿದನು. ಅದರಲ್ಲಿದ್ದ ಒಕ್ಕಣೆಯೇನೆಂದರೆ:-
  ಸಹೋದರನಿಗೆ ಸಮಾನನಾದ ಶಂಬರನಿಗೆ,
            ಕಾಮಮೋಹಿನಿಯ ವಿಜ್ಞಾಪನೆಗಳು.
   ನಿನ್ನ ಶೀಲಸ್ವಭಾವ, ನಿನ್ನ ಗುಣ, ನಿನ್ನ ಇಂದ್ರಿಯಪರವಶತೆ, - ಇವುಗಳನ್ನೆಲ್ಲ ನಾನು ಬಾಲ್ಯಾರಭ್ಯ ನೋಡುತ್ತಲಿದ್ದೇನೆ. ಸಹೋದರಭಾವ ದಿಂದ, ಇವುಗಳನ್ನು ನೋಡಿಯೂ ನೋಡದಂತೆ ಇರುತ್ತಿದ್ದನು. ಈ ವಿಷ

ಅಧ್ಯಾಯ ೫

೪೫


ಯವನ್ನು ತಿಳಿದುಕೊಳ್ಳದೆ, ನನ್ನಲ್ಲಿ ನೀನು ಅತ್ಯಂತಾನುರಾಗವನ್ನು ತೋರಿದುದು ನನಗೆ ಬಹಳ ಆಶ್ಚರ್ಯವನ್ನುಂಟುಮಾಡುತ್ತದೆ. ವಿವಾಹಮಾಡಿಕೊಳ್ಳುವ ವಧೂವರರು, ಪರಸ್ಪರಾನುರಕ್ತರಾಗಿರಬೇಕು; ಅಥವಾ, ಉದಾಸೀನರಾಗಿಯಾದರೂ ಇರಬೇಕು ನೀನು ನನ್ನಲ್ಲಿಟ್ಟಿರುವ ಅತ್ಯಂತಾನುರಾಗಕ್ಕೆ ಸರಿಯಾಗಿ ನಿನ್ನಲ್ಲಿ ನನಗೆ ಲೇಶಮಾತ್ರವಾದರೂ ಪ್ರೀತಿಯಿಲ್ಲ; ಕೊನೆಗೆ ಉದಾಸೀನತೆಯೂ ಕೂಡ ಇಲ್ಲ. ಪರಂತು, ನಿನ್ನ ಸಂಭಾಷಣೆಯನ್ನೂ, ಸಹವಾಸವನ್ನೂ, ಕೊನೆಗೆ ನೀನು ವಾಸಮಾಡುವ ಪಟ್ಟಣದಲ್ಲಿ ವಾಸವನ್ನೂ ಕೂಡ ಮಾಡಬಾರದೆಂದು, ನಾನು ದೃಢವಾಗಿ ಸಂಕಲ್ಪಿಸಿರುವೆನು. ಪ್ರಾಣವನ್ನಾದರೂ ಬಿಡುವೆನೇ ಹೊರತು, ನಾನು ನಿನ್ನನ್ನು ವಿವಾಹ ಮಾಡಿಕೊಳ್ಳುವವಳಲ್ಲ. ನನ್ನಲ್ಲಿ ವ್ಯಾಮೋಹವನ್ನು ಬಿಟ್ಟು ನಿನಗೆ ಅನುರೂಪಳಾದ ಸ್ತ್ರೀಯನ್ನು ಹುಡುಕಿ ವಿವಾಹ ಮಾಡಿಕೊಂಡು ಸುಖವಾಗಿರು. ಈ ನನ್ನ ಬುದ್ಧಿವಾದವನ್ನು ಕೇಳಿದರೆ, ಇದರಿಂದ ನಮ್ಮಿಬ್ಬರಿಗೂ ಒಳ್ಳೆಯದಾಗುವುದು; ಇಲ್ಲದ ಪಕ್ಷದಲ್ಲಿ, ನಾವಿಬ್ಬರೂ ನಮ್ಮ ಬಂಧು ಬಳಗಗಳೊಡನೆ ಬಹಳ ಸಂಕಟಕ್ಕೆ ಗುರಿಯಾಗಬೇಕಾಗುವುದು. ಚೆನ್ನಾಗಿ ಪರ್ಯಾಲೋಚಿಸಿ, ನನ್ನ ಮೇಲಿನ ಆಶೆಯನ್ನು ಪರಿತ್ಯಾಗಮಾಡಿ, ನಿನಗೆ ಅನುರೂಪಳಾದ ಸ್ತ್ರೀಯನ್ನು ಪಡೆದುಕೊಂಡು, ನೀನು ಸುಖವಾಗಿ ಬಾಳುವೆಯೆಂದು ನಂಬಿರತಕ್ಕ,
                      ನಿನ್ನ ಸಹೋದರಿಯಾದ
                         ಕಾಮಮೋಹಿನಿ.
  ಈ ಕಾಗದವನ್ನು ಓದಿದ ಕೂಡಲೆ, ಶಂಬರನಿಗೆ ಬಹುಕ್ಲೇಶವುಂಟಾಯಿತು. ಈ ಕ್ಷೇಶವು ಕ್ರಮಕ್ರಮವಾಗಿ ಪೂರ್ವಾಪರಜ್ಞತೆಯನ್ನು ತಪ್ಪಿಸಿತು.
ಶಂಬರ-ಸುಮಿತ್ರನೆ !ಇವಳಿಗೆ ನನ್ನಲ್ಲಿ ಇಷ್ಟು ದ್ವೇಷವಿರಲಿಲ್ಲ. ಈ ಲೇಖನವನ್ನು ನೋಡಿದರೆ, ಇವಳ ಮನಸ್ಸು ಬಹಳ ಕ್ರೂರವಾಗಿ ಮಾರ್ಪಡಿಸಲ್ಪಟ್ಟಿದೆಯೆಂದೂ ಇದಕ್ಕೆ ಪರಂತಪನು ಮುಖ್ಯ ಕಾರಣವೆಂದೂ ತೋರುತ್ತದೆ. ಇವನು ನಮ್ಮ ಮನೆಗೆ ಬಂದಾರಭ್ಯ, ಇವಳ ನಡತೆಯಲ್ಲಿ ಬಹಳ ಬದಲಾವಣೆಯುಂಟಾಗಿದೆ. ಇವನಿಗೆ ತಕ್ಕ ಪ್ರತೀಕಾರವನ್ನು ಮಾಡುತ್ತೇನೆ.
  ರೋಷವೇಶದಿಂದ ಪಿಸ್ತೂಲನ್ನು ತೆಗೆದು, ಅದನ್ನು ಸರಿಯಾಗಿ ಬಾರ್ಮಾಡಿಕೊಂಡು ಹೊರಡುವುದಕ್ಕೆ ಉದ್ಯುಕ್ತನಾದನು.

೪೬

ಪರಂತಪ ವಿಜಯ


ಸುಮಿತ್ರ-ಎಲೈ ಶಂಬರನೆ ! ನಿನ್ನ ಕೋಪವನ್ನು ಸಮಾಧಾನಮಾಡಿಕೊ. ಈ ವಿಷಯದಲ್ಲಿ ಪರಂತಪನು ನಿರಪರಾಧಿಯೆಂದು ತೋರುತ್ತದೆ.

ಶಂಬರ-ಅದು ಹೇಗೆ ?


ಸುಮಿತ್ರ-ಕಾಮಮೋಹಿನಿಯು, ನಿನ್ನನ್ನು ವಿವಾಹಮಾಡಿಕೊಳ್ಳುವುದಿಲ್ಲವೆಂದು, ನನಗೂ ಒಂದು ಕಾಗದವನ್ನು ಬರೆದಿರುತ್ತಾಳೆ. ಈ ಯೆರಡು ಕಾಗದಗಳೂ ನನ್ನ ಬಳಿಗೆ ಬಂದಕೂಡಲೆ, ನನ್ನ ಕಾಗದವನ್ನು ಓದಿ ನೋಡಿ ಕೊಂಡು, ಕಾಮಮೋಹಿನಿಯನ್ನು ಎಲ್ಲೆಲ್ಲಿಯೂ ಹುಡುಕಿದೆನು. ಎಲ್ಲಿಯೂ ಕಾಣದೆ ಇದ್ದುದರಿಂದ, ಪರಂತಪನ ವಿಷಯದಲ್ಲಿ ನನಗೂ ಅನುಮಾನಹುಟ್ಟಿತು. ಆದರೆ, ಮನೆಗೆ ಬಂದು ನೋಡುವಲ್ಲಿ, ಅವನು ಅತಿಥಿಗಳ ಜತೆಯಲ್ಲಿ ವಿನೋದವಾಗಿ ಸಲ್ಲಾಸ ಮಾಡುತ್ತಿದ್ದನು. ಈ ದುರಾಲೋಚನೆಗೆ ಸೇರಿದ್ದರೆ ಇವನೂ ಇವಳ ಜತೆಯಲ್ಲಿ ಹೊರಟುಹೋಗುತ್ತಿರಲಿಲ್ಲವೆ?

ಶಂಬರ-ಕಾಮಮೋಹಿನಿನ್ನು ಸಂಕೇತಮಾಡಿ ಯಾವುದಾದರೂ ಒಂದು ಸ್ಥಳಕ್ಕೆ ಕಳುಹಿಸಿ, ಈ ರೀತಿಯಲ್ಲಿ ಅಭಿನಯಿಸುತಿರಕೂಡದೋ?


ಸುಮಿತ್ರ-ಹಾಗೆ ಇದ್ದರೂ ಇರಬಹುದು; ಆದಾಗ್ಯೂ, ಈಗ ಅವನು ಬಹುಜನ ಅತಿಥಿಗಳ ಮಧ್ಯದಲ್ಲಿ ಇದ್ದಾನೆ. ಈ ಕಾಲದಲ್ಲಿ ದುಡುಕುವುದು ಸರಿಯಲ್ಲ. ಇದಲ್ಲದೆ, ಕಾಮಮೋಹಿನಿಯ ಪತ್ತೆಗಾಗಿ ಚಾರರನ್ನು ಕಳುಹಿಸಿದ್ದೇನೆ. ಜಾಗ್ರತೆಯಲ್ಲಿಯೇ ಅವಳನ್ನು ಬರಮಾಡಿ, ನಿನ್ನ ವಿಷಯದಲ್ಲಿ ಪ್ರಸನ್ನಳಾಗುವಂತೆ ಮಾಡುತ್ತೇನೆ. ನೀನು ದುಡುಕದಿರು.
  

ಅವನ ಪಿಸ್ತೂಲನ್ನೂ ಇತರ ಆಯುಧಗಳನ್ನೂ ಒಂದು ಕೊಠಡಿಯಲ್ಲಿ ಹಾಕಿ, ಅದಕ್ಕೆ ಬೀಗ ಹಾಕಿಕೊಂಡು, ಮುಂದಿನ ಕೆಲಸಗಳಿಗೆ ಪ್ರಯತ್ನ ಮಾಡುವುದಾಗಿ ಹೇಳಿ ಹೊರಟು ಹೋದನು. ಆದರೂ, ಶಂಬರನು ಉನ್ಮತ್ತ ಪ್ರಲಾಪವನ್ನು ಮಾಡುತ್ತ, ಹಾಗೆಯೇ ರೇಗುತ್ತ, ಪರಂತಪನನ್ನು ಬೈಯುತ್ತ ಹುಚ್ಚನಂತೆ ನಡೆಯುವುದಕ್ಕೆ ಉಪಕ್ರಮಿಸಿದನು. ಕೂಡಲೆ, ಸುಮಿತ್ರನು ಕೆಲವು ಜನ ಭೃತ್ಯರನ್ನು ಕರೆದು, ಅವನನ್ನು ಹೊರಗೆ ಬಿಡ ಕೂಡದೆಂದು ಏಕಾಂತವಾಗಿ ಅವರಿಗೆ ಹೇಳಿ, ತಾನು ತನ್ನ ಕೊಠಡಿಗೆ ಹೋಗಿ, ಪರಂತಪನಿಗೆ ಒಂದು ಚೀಟಿಯನ್ನು ಬರೆದು ಕಳುಹಿಸಿದನು. ಕೂಡಲೇ ಪರಂತವನು ಇವನ ಕೊಠಡಿಗೆ ಬಂದನು.

ಅಧ್ಯಾಯ ೫

೪೭


ಸುಮಿತ್ರ - ಅಯ್ಯ! ಪರಂತಪನೆ! ನಿನ್ನನ್ನು ಪುತ್ರನಿರ್ವಿಶೇಷವಾಗಿ ನಾನು ನೋಡುತ್ತಿದ್ದೆನು. ನೀನೇ ಮಾಧವನೆಂಬುದಾಗಿ ತಿಳಿದುಕೊಂಡು, ನಿನ್ನಲ್ಲಿ ಭ್ರಾತೃವಾತ್ಸಲ್ಯವನ್ನು ಇಟ್ಟಿರುವೆನು. ನನ್ನ ವಿಷಯದಲ್ಲಿಯೂ ನೀನು ಸೌಹಾರ್ದವುಳ್ಳವನಾಗಿರಬೇಕಾದುದು ಅವಶ್ಯಕವಲ್ಲವೆ ?

ಪರಂತಪ - ಇದೇನು ಹೀಗೆ ಹೇಳುವೆ? ಈಗ ನಿನ್ನ ಭಾವನೆ ಹೇಗಾದರೂ ಇರಲಿ; ನನಗೆ ನಿನ್ನ ಪಿತೃಭಕ್ತಿಯು ಅಕೃತ್ರಿಮವಾಗಿರುವುದು. ಈ ರೀತಿಯಲ್ಲಿ ನೀನು ಮಾತನಾಡುವುದು ನನಗೆ ಬಹಳ ವ್ಯಥೆಯನ್ನುಂಟು ಮಾಡುತ್ತದೆ.

ಸುಮಿತ್ರ - ನನ್ನಲ್ಲಿ ನಿನಗಿರತಕ್ಕ ವಿಶ್ವಾಸವು ಅಕೃತ್ರಿಮವಾಗಿದ್ದರೆ, ಈಗ ಕಾಮಮೋಹಿನಿ ಯೆಲ್ಲಿರುವಳು?-ಹೇಳು.

ಪರಂತಪ - ಅವಳಿಗೆ ಆಪ್ತರಾದವರ ಬಳಿಯಲ್ಲಿರುವಳು.

ಸುಮಿತ್ರ - ಅವಳನ್ನು ಚಿಕ್ಕಂದಿನಿಂದ ಸಾಕಿ ಸಲುಹಿ ಚಿಕ್ಕವಳನ್ನು ದೊಡ್ಡವಳನ್ನಾಗಿ ಮಾಡಿದ ನನಗಿಂತಲೂ ಆಪ್ತರು ಯಾರಿರುವರು ?

ಪರಂತಪ - ಇದಕ್ಕೆ ಉತ್ತರವನ್ನು ಅವಳೇ ಕೊಡಬೇಕು.

ಸುಮಿತ್ರ - (ಹುಬ್ಬುಗಳನ್ನು ಗಂಟುಹಾಕಿಕೊಂಡು, ಕಣ್ಣುಗಳಲ್ಲಿ ಕಿಡಿಗಳನ್ನು ಉದರಿಸುತ್ತ ಸರ್ವಾವಯವಗಳನ್ನೂ ನಡಗಿಸುತ) ಏನೆಂದೆ? ಈ ಪ್ರಶ್ನೆಗೆ ಅವಳೇ ಉತ್ತರಕೊಡಬೇಕೆ? ಅವಳಿಗೆ ದುರ್ಬೋಧನೆಯನ್ನು ಮಾಡಿ ಇಲ್ಲಿಂದ ರವಾನಿಸಿದ ನಿನಗೆ ಈ ಪ್ರಶ್ನೆಗೆ ಉತ್ತರ ಕೊಡುವುದು ಅಸಾಧ್ಯವೋ ? ಅವಳಿರುವ ಸ್ಥಳವನ್ನು ನೀನು ಬಲ್ಲೆ. ಕೂಡಲೇ ಅವಳನ್ನು ತೋರಿಸಿದರೆ ಸರಿ ; ಇಲ್ಲದಿದ್ದರೆ ನಿನ್ನ ದೌರಾತ್ಮ್ಯಕ್ಕೆ ತಕ್ಕ ಫಲವನ್ನು ಈಗಲೇ ಅನುಭವಿಸುವೆ.

ಪರಂತಪ - ಅವಳು ಇರತಕ್ಕೆ ಸ್ಥಳವನ್ನು ನಾನು ಬಲ್ಲೆನು. ಆದರೂ ಅದನ್ನು ನಾನು ತೋರಿಸುವುದಿಲ್ಲ. ನಿನ್ನ ಮನೆಗೆ ಬಂದಾರಭ್ಯ, ನಾನು ದೊಡ್ಡ ಮನಷ್ಯನಂತೆ ಇದ್ದೆನೇ ಹೊರತು, ದುರಾತ್ಮನಂತೆ ಎಂದಿಗೂ ನಡೆದು ಕೊಳ್ಳಲಿಲ್ಲ ; ದೌರಾತ್ಮ್ಯದ ಫಲವನ್ನು ನಾನು ಅನುಭವಿಸತಕ್ಕವನೂ ಅಲ್ಲ.

ಸುಮಿತ್ರ - ನೀನು ದುರಾತ್ಮನು ಮಾತ್ರವೇ ಅಲ್ಲ; ಕೃತಘ್ನುನು ಕೂಡ ಅಹುದು. ನೀನು ನನ್ನ ಮನೆಗೆ ಬಂದು, ನನ್ನಿಂದ ಸತ್ಕೃತನಾಗಿ,

೪೮

ಪರಂತಪ ವಿಜಯ


ಇಲ್ಲಿ ಗೃಹಚ್ಛಿದ್ರಗಳನ್ನುಂಟುಮಾಡಿ, ಕಾಮಮೋಹಿನಿಯನ್ನು ಮರುಳು ಮಾಡಿ, ಶಂಬರನ ವಿಷಯದಲ್ಲಿ ಆಕೆಗೆ ಜುಗುಪ್ಸೆಯನ್ನು ಹುಟ್ಟಿಸಿ, ಅವಳನ್ನು ಅಪಹರಣಮಾಡಿ, ಇಷ್ಟು ಜನ ಬಂಧುಮಿತ್ರರ ಮುಂದೆ ನನಗೆ ಅನಿರ್ವಚನೀಯವಾದ ಅಪಮಾನವನ್ನೂ ಕ್ಲೇಶವನ್ನೂ ಉಂಟುಮಾಡಿದ್ದೀಯೆ. ಶಂಬರನು ಇದರಿಂದ ಬುದ್ಧಿಭ್ರಂಶವನ್ನು ಹೊಂದಿ, ಉನ್ಮತ್ತಾವಸ್ಥೆಯಲ್ಲಿರುತ್ತಾನೆ. ನಾನು ಜೀವಿಸಿದ್ದರೂ ಸತ್ತವನಂತೆಯೇ ಇರುತ್ತೇನೆ. ಈ ಅನರ್ಥಗಳಿಗೆ ನೀನೇ ಕಾರಣಭೂತನು. ಕಾಮಮೋಹಿನಿಯನ್ನು ತೋರಿಸುತ್ತೀಯೋ? - ನಿನ್ನ ದೌರಾತ್ಮ್ಯಕ್ಕಾಗಿ ನಿನ್ನ ಪ್ರಾಣವನ್ನು ಬಲಿಯಾಗಿ ಒಪ್ಪಿಸುತ್ತಿಯೊ ?

ಪರಂತಪ- ಎಲೈ ಸುಮಿತ್ರನೇ ! ನೀನು ವೃದ್ದನು; ನನ್ನ ವಿಶ್ವಾಸಕ್ಕೆ ಪಾತ್ರನು ; ನನ್ನ ಮಿತ್ರನಾದ ಮಾಧವನಿಗೆ ಸಹೋದರನು. ಈ ಕಾರಣ ಗಳಿಂದ, ನೀನು ಕೋಪಪರವಶನಾಗಿ ಯಕ್ಷಾಯುಕ್ತ ವಿಚಾರಹೀನನಾಗಿ ಆಡತಕ್ಕ ದುರ್ಭಾಷೆಗಳನ್ನು ಮನ್ನಿಸುವೆನು. ನೀನು ನನ್ನಲ್ಲಿ ಆರೋಪಿಸಿರುವ ಅಪರಾಧಗಳ ಅಸತ್ಯಗಳು. ನಾನು ನಿನ್ನ ಮನೆಗೆ ಬಂದು ಸತ್ಕೃತನಾದದ್ದು ನಿಜ; ಆದರೆ, ಈ ಸತ್ಕಾರದ ಬಲದಿಂದ ನೀನು ಇಂಥ ಅಪರಾಧಗಳನ್ನು ಆರೋಪಿಸುವೆಯೆಂದು ತಿಳಿದಿದ್ದರೆ, ನಿನ್ನ ಮನೆಯಲ್ಲಿ ಗಂಗಾಮೃತಪಾನವನ್ನು ಕೂಡ ಮಾಡುತ್ತಿರಲಿಲ್ಲ. ಕಾಮಮೋಹಿನಿಗೆ ನಾನು ದುರ್ಬೋಧನೆಯನ್ನು ಮಾಡಿದವನೂ ಅಲ್ಲ; ನಿನ್ನ ಮನೆಯಲ್ಲಿ ಗೃಹಚ್ಛಿದ್ರವನ್ನುಂಟುಮಾಡಿದವನೂ ಅಲ್ಲ; ಆ ಚಂದ್ರಮುಖಿಯನ್ನು ಅಪಹರಿಸಿ ನಾನು ರವಾನಿಸಲೂ ಇಲ್ಲ. ಈ ಆರೋಪಣೆಗಳನ್ನು ನೀನು ವಾಪಸು ತೆಗೆದುಕೊಳ್ಳದಿದ್ದರೆ, ಈ ನಿಮಿಷದಲ್ಲಿ ನಿನಗೆ ತಕ್ಕ ಪ್ರತೀಕಾರವನ್ನು ಮಾಡುತ್ತೇನೆ.

ಸುಮಿತ್ರ- ಈ ಕಾಮಮೋಹಿನಿಯನ್ನು ಶಂಬರನಿಗೆ ಕೊಡಬೇಕೆಂದು ನಾನು ನಿಷ್ಕರ್ಷೆ ಮಾಡಿರುವುದು ನಿನಗೆ ತಿಳಿಯದೆ? ಈ ವಿವಾಹಕ್ಕೆ ವಿಘ್ನವನ್ನು ನೀನು ಮಾಡಿಲ್ಲವೆ? ಮಾಧವನ ಆಸ್ತಿಯು ನಿನಗೆ ಇರಲಿ; ಕಾಮಮೋಹಿನಿಯಾದರೂ ಶಂಬರನಿಗೆ ಇರಲೆಂದು ನಾನು ಸಂಕಲ್ಪಿಸಿದ್ದಾಗ, ನೀನು ಈ ವಿವಾಹಕ್ಕೆ ವಿಘ್ನವನ್ನು ಮಾಡಿಲ್ಲವೆ? ಇವಳು ಮನೆಯನ್ನು ಬಿಟ್ಟು ಹೋಗುವುದಕ್ಕೆ ನೀನೇ ಕಾರಣನು,

ಅಧ್ಯಾಯ ೫

೪೯


ಪರಂತಪ- ಕಾಮಮೋಹಿನಿಯು ಶಂಬರನಿಗೆ ವಿವಾಹವಾಗಕೂಡದೆಂದು ಅಭಿನಿವೇಶವು ನನಗಿಲ್ಲ ; ಇದಕ್ಕೆ ನಾನು ವಿಘ್ನವನ್ನೂ ಮಾಡಿಲ್ಲ. ಮಾಧವನ ಆಸ್ತಿಯ ವಿಷಯದಲ್ಲಿ ನಾನು ಅಪೇಕ್ಷೆಯುಳ್ಳವನಾಗಿದ್ದೆನೆ? ಸಂಪಾದಿಸುವುದಕ್ಕೆ ಶಕ್ತಿಯಿಲ್ಲದ ಹೇಡಿಗಳು ಅನ್ಯರ ಆಸ್ತಿಯನ್ನಪೇಕ್ಷಿಸಬೇಕು. ಮಾಧವನು-ಈ ಆಸ್ತಿಯನ್ನು ತೆಗೆದುಕೊಂಡು ಇದರಲ್ಲಿ ಕೆಲವು ವಿನಿಯೋಗಗಳನ್ನು ಮಾಡಬೇಕೆಂದು ಆಜ್ಞೆ ಮಾಡಿರುವುದರಿಂದಲೂ, ಈ ವಿಷಯದಲ್ಲಿ ನಿನ್ನನ್ನು ಕಾಣು ಎಂಬುದಾಗಿ ಹೇಳಿದುದರಿಂದಲೂ ನಾನು ನಿನ್ನ ಬಳಿಗೆ ಬಂದೆನು ನಿನ್ನ ತಾತ್ಪರ್ಯಕ್ಕನುಸಾರವಾಗಿ, ಮಾಧವನ ಉಯಿಲಿನ ವಿಚಾರವನ್ನು ಈ ವಿವಾಹವು ಪೂರಯಿಸುವವರೆಗೂ ಬಹಿರಂಗಪಡಿಸದೆ ಇದ್ದೆನೆ. ಹೀಗಿದ್ದಾಗ್ಯೂ, ಇಂಥ ದುರಾಲೋಚನೆಗಳನ್ನು ನೀನು ಮಾಡಿದ್ದೀಯೆ. ಇವುಗಳನ್ನು ವಾಪಸು ತೆಗೆದುಕೊ.

ಸುಮಿತ್ರ- ನೀನು ಕಳ್ಳ, ಸುಳ್ಳುಗಾರ, ಕೃತ್ರಿಮಿ; ಅಸಾಧಾರಣವಾದ ದೌರಾತ್ಮ್ಯವನ್ನು ಮಾಡಿ ನನ್ನನ್ನು ಹೆದರಿಸುತ್ತೀಯಾ ? ಶಂಬರನು, ನೀನು ಮಾಡಿರತಕ್ಕ ದೌರಾತ್ಮ್ಯದಿಂದ ರೌದ್ರಾವೇಶವುಳ್ಳವನಾಗಿದ್ದಾನೆ. ನಾನು ನಿರೋಧಿಸದಿದ್ದರೆ ಇಷ್ಟು ಹೊತ್ತಿಗೆ ನಿನ್ನನ್ನು ಸಂಹರಿಸುತ್ತಿದ್ದನು. ಈಗಲೂ ನಿನಗೆ ವಿಪತ್ತು ತಪ್ಪಲಿಲ್ಲ. ಕಾಮಮೋಹಿನಿಯನ್ನು ತೋರಿಸುವೆಯೋ ?- ಅಥವಾ ನಿನ್ನ ದೌರಾತ್ಮ್ಯಕ್ಕೆ ತಕ್ಕ ಫಲವನ್ನು ಪಡೆಯುತ್ತೀಯೋ ?
  

ಇದುವರೆಗೂ ಪ್ರಸನ್ನನಾಗಿ ಮಂದಹಾಸ ಪೂರ್ವಕವಾಗಿ ಮಾತನಾಡುತ್ತಿದ್ದ ಪರಂತಪನಿಗೆ, ಈ ಮಾತುಗಳನ್ನು ಕೇಳಿದ ಕೂಡಲೇ ಆಕ್ರೋಶ ಬಂದಿತು. ಆ ಕ್ಷಣದಲ್ಲಿಯೆ ಈತನ ಹುಬ್ಬುಗಳು ಗಂಟುಬಿದ್ದುವು; ಕಣ್ಣುಗಳು ಕೆಂಪಾದುವು. ನಿಗ್ರಹಿಸುವುದಕ್ಕಾಗದಷ್ಟು ಆಗ್ರಹವುಂಟಾಯಿತು. ಕೂಡಲೇ ಎದ್ದು -

ಪರಂತಪ- ಎಲೈ ಸುಮಿತ್ರನೇ! ಇದುವರೆಗೂ ನೀನು ಹಿರಿಯವನೆಂಬುದಾಗಿಯೂ, ಗೌರವಿಸುವುದಕ್ಕೆ ಪಾತ್ರನೆಂಬುದಾಗಿಯೂ ಭಾವಿಸಿ, ನಿನ್ನಲ್ಲಿ ವಿನೀತನಾಗಿದ್ದೆನು. ಈ ವಿನಯಕ್ಕೆ ನೀನು ಅರ್ಹನಲ್ಲವೆಂದು ಈಗ ಗೊತ್ತಾಗುತ್ತದೆ. ನೀನು ದೊಡ್ಡ ಮನುಷ್ಯನೆಂದು ಭಾವಿಸಿದ್ದೆನು, ದೊಡ್ಡ ಮನುಷ್ಯತನ ನಿನಗೂ ಬಹಳ ದೂರವೆಂದು ಈಗ ಗೊತ್ತಾಯಿತು. ನೀನು

೫೦

ಪರಂತಪ ವಿಜಯ


ಬೆದರಿಸುವುದನ್ನು ನೋಡಿದರೆ ನನಗೆ ಆಶ್ಚದ್ಯವಾಗುತ್ತದೆ. ನೀನೂ ನಿನ್ನ ಸಹೋದರನ ಪುತ್ರನೂ ಎಷ್ಟು ಮಟ್ಟಿನವರು ! ನಿಮ್ಮ ಯೋಗ್ಯತೆ ಯಂತ ಹುಡು ! ನೀವು ನನಗೆ ತೃಣಕ್ಕಿಂತಲೂ ಕಡೆಯಾಗಿದ್ದೀರಿ. ಇನ್ನು ವಿಕೇ ಪವಾಗಿ ದುಡುಕುಮಾತಾಡಿದ ಪಕ್ಷದಲ್ಲಿ, ನಿನ್ನ ದುರ್ವಿನಯಕ್ಕೆ ತಕ್ಕ ಫಲ ವನ್ನು ಅನುಭವಿಸುವಿರಿ. ಹುಷಾರಾಗಿರು. ನಿನ್ನ ಸ್ನೇಹದಮೇಲೆ ದೃಷ್ಟಿ ಯಿಟ್ಟು, ಮಾಧವನ ಉಯಿಲನ್ನು ಇದುವರೆಗೂ ನಾನು ಪ್ರಕಟಮಾಡಲಿಲ್ಲ. ನೀನು ಮಾಧವನ ಸಹೋದರನಾದುದರಿಂದ, ನಿನ್ನನ್ನು ಮಾಧವನಂತೆ ಭಾವಿ ಸಿದ್ದೆನು. ನನಗೆ ಮಾಡಿದ ಸತ್ಕಾರದ ವಿಷಯದಲ್ಲಿ ನೀನು ನಿನ್ನ ಪ್ರತಿಷ್ಠೆಯನ್ನು ಕೊಚ್ಚಿಕೊಂಡೆ. ಇದು ನಿನ್ನ ಯೋಗ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಆದರೆ, ನೀನು ಮಾಡಿದ ಸತ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದ ಕ್ಕಾಗಿ ನೀನು ನನ್ನಿಂದ ಯಾವಾಗ ಏನಾಗಬೇಕೆಂದು ಅಪೇಕ್ಷಿಸಿದಾಗ, ಅದನ್ನು ನಾನು ನನ್ನ ಶಕ್ತಿ,ಾರಿ ನಡೆಸಿ ನಿನ್ನ ಸಾಲವನ್ನು ತೀರಿಸುತ್ತೇನೆ. ನೀನು ಈಗ ಮಾಡಿರತಕ್ಕ ಅಸಮಾನವು ಬಹಳ ದುಸ್ಸಹವಾದುದು. ಇನ್ನು ಒಂದು ನಿಮಿಷವೂ ನಾನು ನಿನ್ನ ಮನೆಯಲ್ಲಿರತಕ್ಕವನಲ್ಲ ; ನಿನ್ನ ಸತ್ಕಾರವನ್ನು ಪರಿಗ್ರಹಿಸತಕ್ಕವನೂ ಅಲ್ಲ. ಮಾಧವನ ಉಯಿಲನ್ನು ಆಚರಣೆಗೆ ತರತಕ್ಕೆ ವಿಷಯದಲ್ಲಿ, ನೀನು ವಾಗ್ದಾನಮಾಡಿದಂತೆ ಸಹಾಯ ಮಾಡುವುದಾದರೆ ಮಾಡಬಹುದು ; ಇಲ್ಲ ದಪಕ್ಷದಲ್ಲಿ ಸರಾರದಮೂಲಕ ನಡೆಯತಕ್ಕ ಕೆಲಸಗಳನ್ನು ನಡೆಯಿಸುತ್ತೇನೆ. ಈ ಪಟ್ಟಣದ ಕಲ್ಪತರು ವೆಂಬ ಹೋಟಲಿನಲ್ಲಿ ನಾನು ಇರುತ್ತೇನೆ. ಆವಶ್ಯಕವಾದ ಪಕ್ಷದಲ್ಲಿ ನೀನು ನನ್ನನ್ನು ಅಲ್ಲಿ ನೋಡಬಹುದು.
  ಎಂಬುದಾಗಿ ಹೇಳಿ, ಕೂಡಲೆ ಆತನ ಸಾನ್ನಿಧ್ಯವನ್ನು ಬಿಟ್ಟು -ಪರಂತಪನು ಹೊರಟುಹೋದನು. ಸುಮಿತ್ರನು, ಈ ನಿಶ್ಚಿತಾರ್ಥ ಮಹೋತ್ಸವ ಕಾಲದಲ್ಲಿ ಕಾಮಮೋಹಿನಿ ಹೊರಟುಹೋದುದರಿಂದ ಉಂಟಾದ ದುಃಖವನ್ನೂ ಅಪಮಾನವನ್ನೂ ಸಹಿಸಲಾರದೆ, ಸ್ವಲ್ಪಹೊತ್ತು ಇತಿಕರ್ತವ್ಯತಾ ಮೂಢನಾಗಿ, ಅನಂತರದಲ್ಲಿ ತಾನು ಕಳುಹಿಸಿದ ಲಗ್ನಪತ್ರಿಕೆಗೆ ಅನುಸಾರವಾಗಿ ಬಂದಿದ್ದ ಅತಿಥಿಗಳನ್ನು ಭೋಜನ ತಾಂಬೂಲ ಪುಷ್ಪಹಾರಾದಿಗಳಿಂದ ಉಪಚರಿಸಿ, ಅನಂತರ ನಿಶ್ಚಿತಾರ್ಥ ವಿಷಯದಲ್ಲಿ ಸಂಭವಿಸಿದ ಅಸಂದರ್ಭಗ