ಪರಂತಪ ವಿಜಯ ೨/ ಅಧ್ಯಾಯ ೮

ವಿಕಿಸೋರ್ಸ್ದಿಂದ

ಅಧ್ಯಾಯ ೮

೬೩


ಅನುರಾಗವಿಲ್ಲ; ಅಲ್ಲದೆ, ಮಾಧವನ ಆಸ್ತಿಗೆ ನಿನಗೆ ಹಕ್ಕೂ ಇಲ್ಲ. ಹೀಗಿರುವಲ್ಲಿ, ಅವನ ಧರ್ಮವು ಅವನನ್ನು ಕಾಪಾಡಲಾರದೆ? ನೀನು ಎಷ್ಟು ಬಲಿಷ್ಟನಾದರೂ, ನಿನ್ನ ಅಧರ್ಮವು ನಿನ್ನನ್ನು ಕೆಡಿಸಲಾರದೆ?
ಶಂಬರ- ಆಡಿದ್ದರಿಂದ ಪ್ರಯೋಜನವೇನು? ಈ ವಿಷಯವು ಕಾರ್ಯತಃ ಗೊತ್ತಾಗುವುದು.
ಸುಮಿತ್ರ- ಹಾಗಾದರೆ ನಿನ್ನ ಇಷ್ಟ ಬಂದಂತೆ ಮಾಡು. ನಾನು ಕಲಾವತಿಯ ಹೆಸರಿಗೆ ಬರೆದಿರುವ ಉಯಿಲನ್ನು ಸ್ಥಿರಪಡಿಸುವೆನು. (ಎಂದು ಹೇಳಿ ಹೊರಟುಹೋದನು.)


ಅಧ್ಯಾಯ ೮.



   ಪರಂತಪನು, ತನಗೂ ಕಾಮಮೋಹಿನಿಗೂ ವಿವಾಹ ಪೂರಯಿಸಿದ ಕೂಡಲೆ, ಮುಂದೆ ನಡೆಯ ಬೇಕಾದ ಕಾರ್ಯ ನಿರ್ವಾಹಕೊಸ್ಕರ ಕಲ್ಪತರುವಿಗೆ ಹೋದನು. ಅಲ್ಲಿಗೆ ಹೋದಕೂಡಲೆ, ಶಂಬರನ ಕಡೆಯ ಸೇವಕನೊಬ್ಬನು ಒಂದು ಕಾಗದವನ್ನು ತಂದುಕೊಟ್ಟನು. ಅದನ್ನು ಪರಂತಪನು ಒಡೆದು ಓದಿದನು,
        ಪರಂತಪನ ಸನ್ನಿಧಿಯಲ್ಲಿ,
           ಶಂಬರನ ವಿಜ್ಞಾಪನೆ,


  ಮಾಧವನ ಅವಸಾನಕಾಲದಲ್ಲಿ, ನೀನು ಉಪಾಯಾಂತರದಿಂದ ಅವನ ಕೈಪೆಟ್ಟಿಗೆ ಮೊದಲಾದುವುಗಳನ್ನು ಸ್ವಾಧೀನಪಡಿಸಿಕೊಂಡು, ಕೃತ್ರಿಮವಾದ ಒಂದು ಉಯಿಲನ್ನು ಸೃಷ್ಟಿಸಿ, ಆತನ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿ ಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದುದಲ್ಲದೆ, ಇಲ್ಲಿ ನನ್ನಲ್ಲಿ ಪೂರ್ಣಾನುರಾಗವುಳ್ಳ ಕಾಮಮೋಹಿನಿಗೆ ದುರ್ಬೋಧನೆಯನ್ನು ಮಾಡಿ, ನಮ್ಮಿಬ್ಬರ ವಿವಾಹಕ್ಕೆ ವಿಫಾತವನ್ನುಂಟುಮಾಡಿದೆ. ಈ ತಪ್ಪಿತವನ್ನು ನೀನು ಒಪ್ಪಿ

೬೪

ಪರಂತಪ ವಿಜಯ


ಕೊಳ್ಳುವ ಪಕ್ಷದಲ್ಲಿ, ಆ ಸ್ವತ್ತುಗಳನ್ನೂ ಉಯಿಲನ್ನೂ ಆ ಸುಂದರಿಯನ್ನೂ ತಂದು ಒಪ್ಪಿಸಿ ಶರಣಾಗತನಾಗು. ಇಲ್ಲದಿದ್ದರೆ, ನಾಳೆ ಪ್ರಾತಃ ಕಾಲ ಎಂಟು ಘ೦ಟೆಯ ವೇಳೆಗೆ, ನಿನ್ನ ಕಡೆಯ ಪಂಚಾಯಿತರೊಡಗೊಂಡು, ಆಯುಧಪಾಣಿಯಾಗಿ ಊರಿನ ಹೊರಗಿರುವ ಉದ್ಯಾನಕ್ಕೆ ಯುದ್ಧ ಸನ್ನದ್ಧನಾಗಿ ಬರತಕ್ಕದ್ದು. ಆ ಯುದ್ಧದಲ್ಲಿ ಆಗುವ ಜಯಾಪಜಯಗಳೇ, ನಮ್ಮಿಬ್ಬರಲ್ಲಿರುವ ನ್ಯಾಯಾನ್ಯಾಯಗಳನ್ನು ತೋರ್ಪಡಿಸಲಿ. ಈ ವಿಷಯದಲ್ಲಿ ಮನಃಪೂರ್ವಕವಾಗಿ ನಾನು ಒಪ್ಪಿ ಈ ಲೇಖನವನ್ನು ಬರೆದಿರುತ್ತೇನೆ.
               ಶಂಬರ.
  ಅದನ್ನು ಓದಿದ ಕೂಡಲೆ, ಪರಂತಪನು ಕೆಳಗೆ ಬರೆದಿರುವಂತೆ ಪ್ರತ್ಯುತ್ತರವನ್ನು ಕಳುಹಿಸಿದನು.
        ಶಂಬರನ ಸನ್ನಿಧಿಯಲ್ಲಿ,
          ಪರಂತಪನ ವಿಜ್ಞಾಪನೆ...
  ನಿನ್ನ ಲೇಖನವನ್ನು ಓದಿಕೊಂಡೆನು. ಅದರಲ್ಲಿ ಕಂಡಂತೆ ನೀನು ನನ್ನ ಮೇಲೆ ಆಪಾದನೆ ಮಾಡಿರುವ ತಪ್ಪಿತಗಳೆಲ್ಲ ಸುಳ್ಳು. ನಿನ್ನ ಲೇಖನದಂತೆ ನೀನು ನಿರ್ಣಯಿಸಿರುವ ಸಂಕೇತ ಸ್ಥಾನಕ್ಕೆ ಸಿದ್ಧನಾಗಿ ನಾನು ಬರುವೆನು. ನೀನೂ ನಿನ್ನ ಕಡೆಯ ಪಂಚಾಯಿತರೊಡನೆ ಸಿದ್ಧನಾಗಿ ಬಾ. ನಮ್ಮಿಬ್ಬರ ನ್ಯಾಯಾನ್ಯಾಯಗಳು, ಈ ಯುದ್ಧದಿಂದಲೇ ಪ್ರಕಟವಾಗಲಿ.
               ಪರಂತಪ.


  ಈ ನಿರ್ಣಯಕ್ಕನುಸಾರವಾಗಿ, ಮರುದಿನವೇ ಆ ಪುರದ ಬಹಿರುದ್ಯಾನದಲ್ಲಿ ಇಬ್ಬರೂ ತಮ್ಮ ತಮ್ಮ ಕಡೆಯ ಪಂಚಾಯಿತರೊಡಗೊಂಡು ಬಂದು ಸೇರಿದರು. ಸುಮಿತ್ರನೂ ಅತ್ಯಾತುರನಾಗಿ ಬಂದು ಸೇರಿದನು. ಸಮರ ನಿಂಹನೆಂಬ ಆ ಪಟ್ಟಣದ ಯಜಮಾನನೂ ಅಲ್ಲಿಗೆ ಬಂದನು. ಎರಡು ಕಡೆಯ ಪಂಚಾಯಿತರೂ, ಆತನನ್ನು ಸಭಾಧ್ಯಕ್ಷನನ್ನಾಗಿ ನಿರ್ಣಯಿಸಿದರು. ಇವರಿಬ್ಬರ ಪಿಸ್ತೂಲಿನಲ್ಲಿಯೂ ಒಂದೊಂದು ಗುಂಡು ಇರುವಂತೆಯೂ, ಅದನ್ನು ಒಂದಾವೃತ್ತಿ ಹಾರಿಸಿ ಅದರಲ್ಲಿ ಜಯಾಪಜಯಗಳು ಗೊತ್ತಾಗದಿದ್ದರೆ ಪಂಚಾಯಿತರ ಅನುಮತಿಯಿಂದ ಮತ್ತೊಂದಾವೃತ್ತಿ ಪ್ರಯೋಗಿಸಬೇಕೆಂದೂ ನಿರ್ಣಯಿಸಿಕೊಂಡರು. ಕೂಡಲೆ, ಇವರಿಬ್ಬರನ್ನೂ ಮಧ್ಯದಲ್ಲಿ ಮುವ್ವತ್ತು

ಅಧ್ಯಾಯ ೮

೬೫


ಗಜ ಅಂತರಾಳವನ್ನು ಬಿಟ್ಟು ನಿಲ್ಲಿಸಿದರು. ಎರಡು ಕಡೆಯ ಪಂಚಾಯಿತರ ಅನುಮತಿಯಿಂದ, ಸಭಾಧ್ಯಕ್ಷನಾದ ಸಮರಸಿಂಹನು ಯುದ್ದ ನಿಯಮಗಳನ್ನು ಓದಿದನು. ಭಟರಿಬ್ಬರೂ ನಿಯಮಕ್ಕನುಸಾರವಾಗಿ ನಡೆಯುವುದಾಗಿ ಒಪ್ಪಿದರು. ಆಗ ಸಮರಸಿಂಹನು ಅವರಿಬ್ಬರನ್ನೂ ನೋಡಿ “ಎಲೈ ವೀರರೇ! ನಿಮ್ಮಿಬ್ಬರಲ್ಲಿ ಯಾರೇ ಆಗಲಿ- ಈಗ `ಪಂಚಾಯಿತರಿಂದ ನಿರ್ಣಯಿಸಲ್ಪಟ್ಟ ನಿಯಮಗಳಿಗನುಸಾರವಾಗಿ ನಡೆಯದೆ ಅತಿಕ್ರಮಿಸಿದಲ್ಲಿ, ಈ ವಿಷಯವನ್ನು ಪಂಚಾಯಿತರ ತೀರ್ಪಿಗೆ ಹಾಕಿ ಅವರಲ್ಲಿ ಹೆಚ್ಚು ಜನರ ಅನುಮತಿಯಂತೆ ಯಾರು ತಪ್ಪಿತವುಳ್ಳವರೋ ಅವರನ್ನು ಕೊಲ್ಲುತ್ತೇನೆ. ಇದೋ ಅದಕ್ಕಾಗಿಯೇ ನಾನು ಕೈಯಲ್ಲಿ ಪಿಸ್ತೂಲನ್ನು ಹಿಡಿದಿರುತ್ತೇನೆ. ಜೋಕೆ! ಎಚ್ಚರವಾಗಿರಿ!” ಎಂದು ಹೇಳಲು, ಅದಕ್ಕೆ ಅವರಿಬ್ಬರೂ ಅನುಮತಿಸಿ, ಪಂಚಾಯಿತರ ತೀರ್ಮಾನದಂತೆ ಅಧರ್ಮ ಪ್ರವೃತ್ತರಾದವರು ಶಿಕ್ಷೆಗೆ ಗುರಿಯಾಗುವುದಾಗಿ ಒಪ್ಪಿಕೊಂಡು, ಯುದ್ಧ ಸನ್ನದ್ದರಾಗಿ ನಿಂತರು. ಆಗ ಶಂಬರನು ಪರಂತಪನನ್ನು ನೋಡಿ "ಎಲೈ ದುರಾತ್ಮನಾದ ಪರಂತಪನೆ! ನೀನು ಬಹು ದುಷ್ಟನು ಏನೋ ತಂತ್ರಗಳನ್ನು ಮಾಡಿ ಮಾಧವನ ಸ್ವತ್ತುಗಳನ್ನು ಅಪಹರಿಸಿದ್ದಲ್ಲದೆ, ನನಗೊಸ್ಕರ ನಿಶ್ಚಯಿಸಲ್ಪಟ್ಟಿದ್ದ ಕಾಮಮೋಹಿನಿಗೆ ದುರ್ಬೋಧನೆಯನ್ನು ಮಾಡಿ ಅವಳನ್ನೂ ಸ್ವಾಧೀನಪಡಿಸಿಕೊಂಡು ವಿವಾಹ ಕಂಟಕನಾದೆ. ಈ ದುಷ್ಕೃತ್ಯಕ್ಕೆ ತಕ್ಕ ಶಿಕ್ಷೆಗೆ ಗುರಿಯಾಗುವೆ.” ಎಂದನು.

ಪರಂತಪ- ಎಲೈ ನೀಚನೇ ! ವೃಥಾ ವಾಗಾಡಂಬರದಿಂದ ಪ್ರಯೋಜನವೇನು ? ನಮ್ಮಿಬ್ಬರ ನ್ಯಾಯಾನ್ಯಾಯಗಳು ಇನ್ನು ಸ್ವಲ್ಪ ಹೊತ್ತಿನೊಳಗಾಗಿಯೇ ಗೊತ್ತಾಗುವುವು. ಮಾಧವನು ಸ್ವಹಸ್ತದಿಂದ ರುಜು ಹಾಕಿ ಬರೆದಿರುವ ಉಯಿಲನ್ನೂ, ಅದಕ್ಕೆ ಸಾಕ್ಷಿಭೂತರಾಗಿ ರುಜು ಮಾಡಿರುವ ಅಧಿಕಾರಿಗಳ ವಾಙ್ಮೂಲವನ್ನೂ ತೆಗೆದು ಚೆನ್ನಾಗಿ ಪರಿಶೀಲನೆ ಮಾಡಿದರೆ, ಮಾಧವನ ಆಸ್ತಿಯು ನನಗೆ ತಂತ್ರದಿಂದ ಪ್ರಾಪ್ತವಾಯಿತೋ ಅಥವಾ ಮಾಧವನ ವಿಷಯದಲ್ಲಿ ನೀನು ಮಾಡಿದ ಕೃತಘ್ನತೆಯಿಂದ ನನಗೆ ಲಭ್ಯವಾಯಿತೋ - ಚೆನ್ನಾಗಿ ಗೊತ್ತಾಗುವುದು. ಇದಿರಲಿ; ಕಾಮಮೋಹಿನಿಯನ್ನು ನಾನು ಅಪಹರಿಸಿಕೊಂಡು ಬಂದೆನೆ? ನಿನ್ನ ಕೆಟ್ಟ ಶೀಲಸ್ವಭಾವಗಳೇ ಅವ 

೬೬

ಪರಂತಪ ವಿಜಯ


ಳಿಗೆ ನಿನ್ನಲ್ಲಿ ಜುಗುಪ್ಪೆಯುಂಟಾಗುವಂತೆ ಮಾಡಿದುವಲ್ಲವೆ? ಈಕೆಯಲ್ಲಿ ಮಾಧವನು ಅನುರಕ್ತನಾಗಿರಲಿಲ್ಲವೆ? ಪಿತೃದ್ರೋಹಿಯಾದ ನೀನು, ಅವರಿಬ್ಬರಿಗೂ ವೈಮನಸ್ಯವನ್ನುಂಟುಮಾಡಿ ಅವನ ಅಕಾಲ ಮರಣಕ್ಕೂ ಮುಖ್ಯ ಕಾರಣಭೂತನಾದೆ. ಈ ಪಾಪಕ್ಕೆ ತಕ್ಕ ಫಲವನ್ನು ಅನುಭವಿಸದಿರುವುದಿಲ್ಲ. ಅವಳನ್ನು ನಿನ್ನ ದುರ್ಬುದ್ಧಿಯಿಂದಲೇ ನೀನು ಕಳೆದುಕೊಂಡು, ಈಗ ಪುನಃ ನನ್ನನ್ನು ಪ್ರಾರ್ಥಿಸುವುದು ಬಹಳ ವಿಸ್ಮಯಾವಹವಾಗಿದೆ. ನಾನು ನಿನಗೆ ಶರಣಾಗತನಾಗಬೇಕೋ? ಆಗಲಿ, ನಿನ್ನ ಕೃತ್ಯಕ್ಕೆ ತಕ್ಕ ಫಲವನ್ನು ಈಗಲೇ ತೋರಿಸುವೆನು.

ಶಂಬರ- ಎಲಾ ದುರಾತ್ಮನೆ! ಮಾಧವನ ಮರಣಕಾಲದಲ್ಲಿ ಅವನ ಸಮೀಪದಲ್ಲಿದ್ದವನು ನೀನು. ನೀನೇ ಅವನ ಮರಣಕ್ಕೆ ಕಾರಣಭೂತನು. ನಿನಗೆ ಇಂಥ ದುರ್ಬುದ್ಧಿ ಹುಟ್ಟುವುದಕ್ಕೂ ಅವನ ಅನ್ಯಾದೃಶವಾದ ಸಂಪತ್ತುಗಳೇ ಕಾರಣವು. ನಿನ್ನ ವಂಚನೆಗೆ ಒಳಪಟ್ಟು ಕಾಮಮೋಹಿನಿಯು ನಿನಗೆ ಸ್ವಾಧೀನಳಾದುದಕ್ಕೆ, ನನ್ನ ಶೀಲಸ್ವಭಾವಗಳಲ್ಲಿ ದೋಷವನ್ನು ಕಲ್ಪಿಸುವೆಯೋ? ಎಲೈ ನೀಚನೇ! ನಿನ್ನೊಡನೆ ವೃಥಾಲಾಪಗಳಿಂದ ಪ್ರಯೋಜನವೇನು? ಅಯ್ಯಾ! ಸಮರಸಿಂಹ! ಈ ನೀಚನ ಪ್ರಲಾಪವನ್ನು ನಿಲ್ಲಿಸುವೆನು; ಆಜ್ಞೆಯನ್ನು ಕೊಡು.

ಪರಂತಪ- ಎಲೈ ಸಮರಸಿಂಹನೆ! ಈ ನೀಚನೊಡನೆ ವೃಥಾ ವಾಕ್ಕಲಹದಿಂದ ಪ್ರಯೋಜನವೇನು? ನಮ್ಮ ನಮ್ಮ ನ್ಯಾಯಾನ್ಯಾಯಗಳಿಗೆ ನಮ್ಮ ನಮ್ಮ ಮನಸ್ಸೇ ಕಾರಣಭೂತವಾಗಿರುತ್ತದೆ. ಅಲ್ಲದೆ, ನಮ್ಮಿಬ್ಬರ ಧರ್ಮಾಧರ್ಮಗಳನ್ನು ಸರ್ವಾಂತರ್ಯಾಮಿಯಾದ ಜಗದೀಶ್ವರನೊಬ್ಬನೇ ಬಲ್ಲನು. ನಾನು ಮಾಧವನ ಆಸ್ತಿಯ ವಿಷಯದಲ್ಲಾಗಲಿ ಕಾಮಮೋಹಿನಿಯ ವಿಷಯದಲ್ಲಾಗಲಿ ದುರಾಶೆಪಟ್ಟು ಪ್ರವರ್ತಿಸಿದ್ದರೆ, ಶಂಬರನ ಪ್ರಹಾರವು ನನಗೆ ತಗುಲಲಿ; ಹಾಗಿಲ್ಲದೆ ಈತನು ಪಿತೃದ್ರೋಹಿಯೂ ಕೃತಘ್ನುನೂ ಆಗಿದಲ್ಲಿ, ನನ್ನ ಪ್ರಹಾರಕ್ಕೆ ಈತನೇ ಗುರಿಯಾಗಲಿ. ಧರ್ಮವಿದ್ದ ಕಡೆ ಜಯವೆಂಬುದು ಈಗ ಸ್ಥಿರಪಡುವುದು. ಇನ್ನು ನಮಗೆ ಆಜ್ಞೆಯನ್ನು ಕೊಡು.

ಸಮರಸಿಂಹನು “ಅಯ್ಯಾ! ಇನ್ನು ನಿಮ್ಮಿಬ್ಬರ ಸಲ್ಲಾಪಗಳನ್ನು ನಿಲ್ಲಿಸಿರಿ. ಯುದ್ಧಕ್ಕೆ ಸಿದ್ಧರಾಗಿರಿ. ನಾನು ಒಂದರಿಂದ ಮೂರರವರೆಗೆ

ಅಧ್ಯಾಯ ೮

೬೭


ಎಣಿಸಿದಕೂಡಲೆ, ನಿಮ್ಮ ಪಿಸ್ತೂಲನ್ನು ಏಕಕಾಲದಲ್ಲಿ ಹಾರಿಸತಕ್ಕುದು” ಎಂದು ಹೇಳಲು, ಪ್ರತ್ಯರ್ಥಿಗಳಿಬ್ಬರೂ, ತಮ್ಮ ತಮ್ಮ ಆಯುಧಗಳನ್ನು ಸಿದ್ಧ ಪಡಿಸಿಕೊಂಡು ಸನ್ನದ್ಧರಾದರು. ಸುಮಿತ್ರನು, ಶಂಬರನ ಜಯವನ್ನು ನಿರೀಕ್ಷಿಸುತ್ತ ಪರಂತಪನ ಬಲಗಡೆಯಲ್ಲಿ ನಿಂತಿದ್ದನು.
ಸಮರಸಿಂಹ- ಇನ್ನು ಸಿದ್ಧರಾಗಿ, ಒಂದು! ಎರಡು! ಮೂರು!!!
   ಕೂಡಲೇ ಎರಡು ಪಿಸ್ತೂಲುಗಳು ಹಾರಿಸಲ್ಪಟ್ಟುವು. ಶಂಬರನ ಗುಂಡು ಗುರಿತಪ್ಪಿ, ಪರಂತಪನ ಬಲಗಡೆಯಲ್ಲಿ ನಿಂತಿದ್ದ ಸುಮಿತ್ರನಿಗೆ ತಗುಲಿ, ಕೂಡಲೆ ಅವನು ಕೆಳಕ್ಕೆ ಬಿದ್ದು ಒದ್ದಾಡಿ ಮೃತನಾದನು. ಪರಂತಪನ ಗುಂಡು ಶಂಬರನ ಬಲಭುಜಕ್ಕೆ ತಗುಲಿ ಅವನೂ ಕೆಳಗೆ ಬಿದ್ದನು. ಕೂಡಲೇ ಪಂಚಾಯಿತರಲ್ಲಿ ಒಬ್ಬನಾಗಿದ್ದ ವೈದ್ಯನೊಬ್ಬನು, ಶಂಬರನಿಗೆ ಬಿದ್ದ ಏಟನ್ನು ಪರೀಕ್ಷಿಸಿ, ಕೂಡಲೇ ಬಾಹುಚ್ಛೇದವನ್ನು ಮಾಡಿ ಚಿಕಿತ್ಸೆ ಮಾಡಿದರೆ ಅವನು ಬದುಕಬಹುದೆಂದು ಹೇಳಿದನು. ಸ್ವಲ್ಪ ಹೊತ್ತಿನಲ್ಲಿಯೇ ಶಂಬರನು ಪ್ರಜ್ಞೆ ಹೊಂದಿ, ವೈದ್ಯನ ಅಭಿಪ್ರಾಯವನ್ನು ಕೇಳಿ, ಅವನ ಹೇಳಿಕೆಯಂತೆ ತನ್ನ ಬಾಹುಚ್ಛೇದಕ್ಕೆ ಒಪ್ಪಿಕೊಂಡನು. ಕೂಡಲೇ ಆ ವೈದ್ಯನು ಅವನನ್ನು ವೈದ್ಯಶಾಲೆಗೆ ಕರೆದುಕೊಂಡು ಹೋಗಿ, ಇತರ ವೈದ್ಯರ ಅಭಿಪ್ರಾಯವನ್ನೂ ಕೇಳಿ, ಇವನ ಬಲದ ಭುಜವನ್ನು ತೆಗೆಸಿದನು. ಮೂರು ತಿಂಗಳೊಳಗಾಗಿ ಆ ವ್ರಣವು ವಾಸಿಯಾಯಿತು. ಅದುವರೆಗೂ ಆ ಯಾತನೆಯಿಂದ ಅವನು ಬಹಳ ಕೃಶನಾಗಿದ್ದನು. ಆಮೇಲೆ ಪಂಚಾಯಿತರೆಲ್ಲರೂ ಸೇರಿ, ಪರಂತಪನನ್ನು ಮುಂದಿರಿಸಿಕೊಂಡು, ಶಂಬರನನ್ನು ನೋಡಿ,ಅಯ್ಯಾ! ಶಂಬರ! ನಿಮ್ಮಿಬ್ಬರ ಯುದ್ಧವೂ ಪೂರಯಿಸಿ ಮೂರು ತಿಂಗಳುಗಳಾದುವು. ನೀನು ಅವನ ಪ್ರಹಾರದಿಂದ ಮೃತನಾಗಿಯೇ ಹೋಗಿದ್ದ ಪಕ್ಷದಲ್ಲಿ, ಆ ಪರಂತಪನು ನಿರ್ದೋಷಿಯೆಂದು ಆಗಲೇ ತೀರ್ಮಾನಿಸುತ್ತಿದ್ದೆವು. ಈಗಲೂ ಹಾಗೆ ತೀರ್ಮಾನಿಸುವ ವಿಚಾರದಲ್ಲಿ ಯಾವ ಅಭ್ಯಂತರವೂ ಇಲ್ಲ. ಆದರೂ ನಿನ್ನ ಅಭಿಪ್ರಾಯವೇನು?-ಹೇಳು,

ಶಂಬರ- ಈ ನೀಚನಾದ ಪರಂತಪನು, ನನ್ನನ್ನು ಕೊಲ್ಲದೆ, ನಾನು ಜೀವಿಸಿದ್ದು ಮನಃಕ್ಲೇಶವನ್ನು ಅನುಭವಿಸಬೇಕೆಂಬ ಅಭಿಪ್ರಾಯದಿಂದ, ಜೀವಚ್ಛವವನ್ನಾಗಿ ಮಾಡಿದನು. ಆದರೂ ಚಿಂತೆಯಿಲ್ಲ; ಈ ಯುದ್ದದಿಂ

೬೮

ಪರಂತಪ ವಿಜಯ


ದಲೇ ನ್ಯಾಯ ನಿರ್ಣಯವಾಗುವುದಾಗಿಲ್ಲ. ಕಲಿಪ್ರಚುರವಾದ ಈ ಕಾಲವು ವ್ಯತ್ಯಸ್ತಸ್ಥಿತಿಯುಳ್ಳದಾದುದರಿಂದ, ಪಾಪಶೀಲರಿಗೆ ಉತ್ತಮ ಸ್ಥಿತಿಯನ್ನೂ ಸುಕೃತಿಗಳಿಗೆ ಅಧೋಗತಿಯನ್ನೂ ಉಂಟುಮಾಡುವುದು ಸ್ವಭಾವ ಸಿದ್ಧವಾಗಿದೆ. ಮಾಡತಕ್ಕುದೇನು?
ಸಮರಸಿಂಹ- ನ್ಯಾಯನಿರ್ಣಯಕ್ಕಾಗಿ ಈ ಯುದ್ಧವನ್ನು ಏರ್ಪಡಿಸಿದವನೇ ನೀನು. ಇದರಲ್ಲಿ ನಿರಾಕ್ಷೇಪವಾಗಿ ಧರ್ಮವ್ಯವಸ್ಥೆಯಾಗುವುದೆಂದು ನಿಷ್ಕರ್ಷಿಸಿದವನೂ ನೀನು, ಈಗ ಯುದ್ದದಿಂದ ನ್ಯಾಯನಿರ್ಣಯವಾಗುವುದಿಲ್ಲವೆಂದು ನೀನೇ ಹೇಳುತ್ತೀಯಾ? ಇಂಥ ಅಸಂಬದ್ಧ ಪ್ರಲಾಪಗಳಿಗೆ ಯಾರಿಂದ ತಾನೆ ಪ್ರತ್ಯುತ್ತರವನ್ನು ಕೊಡಲಾದೀತು? ನಿನ್ನ ಶತ್ರುವಿಗೆ ತಗುಲ ಬೇಕಾಗಿದ್ದ ನಿನ್ನ ಗುಂಡು, ನಿನ್ನ ಕಡೆಯವನಾದ ಸುಮಿತ್ರನಿಗೆ ತಗುಲಿ, ಅವನೇ ಸಾಯಬೇಕಾದರೆ, ನಿನ್ನ ಅಧರ್ಮವು ಇದರಿಂದಲೇ ಸ್ಪಷ್ಟವಾಗುವುದಲ್ಲವೆ? ಇದೆಲ್ಲ ಹಾಗಿರಲಿ; ಈಗ ಸುಮಿತ್ರನನ್ನು ಕೊಂದ ತಪ್ಪಿತಕ್ಕೆ ಗುರಿಯಾಗತಕ್ಕವರು ಯಾರು?
ಶಂಬರ - ಯುದ್ಧ ನಿರ್ಣಯಕ್ಕನುಸಾರವಾಗಿ ಪಂಚಾಯಿತರು ತೀರ್ಮಾನವನ್ನು ಕೊಡುವ ವಿಷಯದಲ್ಲಿ ಯಾವ ಅಡ್ಡಿಯೂ ಇಲ್ಲ. ಆ ವಿಷಯದಲ್ಲಿ ನಾನು ಬದ್ಧನಾಗಿಯೇ ಇರುತ್ತೇನೆ. ಸುಮಿತ್ರನನ್ನು ಕೊಲ್ಲುವ ವಿಷಯದಲ್ಲಿ ನಾನು ಮನಃಪೂರ್ವಕವಾಗಿ ಪ್ರವರ್ತಿಸಿದವನಲ್ಲ. ಆದುದರಿಂದ, ಆ ವಿಚಾರದಲ್ಲಿ ಮಾತ್ರ ನಾನು ತಪ್ಪಿತಸ್ಥನಾಗಲಾರೆನು.
ಪಂಚಾಯಿತರು - ಇದು ನಮ್ಮ ಪಂಚಾಯಿತರ ತೀರ್ಮಾನಕ್ಕೆ ಒಳ ಪಟ್ಟುದುದಲ್ಲ. ಆ ವಿಷಯವು ಹೇಗಾದರೂ ಇರಲಿ, ಈಗಲೂ ನೀನು ಪರಂತಪನಲ್ಲಿ ಶರಣಾಗತಿಯನ್ನು ಹೊಂದಿ ಅವನ ಮೇಲೆ ನೀನು ಹೊರಿಸಿರುವ ದೋಷಗಳೆಲ್ಲ ಅಸತ್ಯವಾದುವುಗಳೆಂದು ಒಪ್ಪಿಕೊ; ಅದರಿಂದ ನಿನಗೆ ಕ್ಷೇಮವುಂಟು. ಈ ವಿಷಯದಲ್ಲಿ ನಾವು ಅನುಮತಿಸಿರುತ್ತೇವೆ. ನಮ್ಮ ಮಾತನ್ನು ಕೇಳು.

ಶಂಬರ- ಮಹನೀಯರೇ! ನಿಮ್ಮ ಆಜ್ಞೆಯನ್ನು ಶಿರಸಾ ವಹಿಸಿದೆನು. ಅಯ್ಯಾ! ಪರಂತಪನೇ! ನಾನು ದುರಭಿಪ್ರಾಯದಿಂದ ಇದುವರೆಗೂ ನಿನ್ನ ಮೇಲೆ ದೋಷಾರೋಪಣೆಗಳನ್ನು ಮಾಡಿ ನಿನ್ನನ್ನು ಯುದ್ಧಕ್ಕೆ ಕರೆದೆನು.

ಅಧ್ಯಾಯ ೮

೬೯


ಇದರ ಫಲಿತಾಂಶದಿಂದಲೇ, ನಾನು ಮಾಡಿದ ಆಪಾದನೆಗಳೆಲ್ಲ ಅಸತ್ಯಗಳೆಂದು ವ್ಯಕ್ತಪಡುವುದು. ನನ್ನ ದುರ್ಬುದ್ಧಿಗಾಗಿ ನಾನೇ ವಿಷಾದಿಸಬೇಕಾಗಿದೆ. ಈ ನನ್ನ ಅಪರಾಧಗಳನ್ನು ಕ್ಷಮಿಸುವನಾಗು.
ಪರಂತಪ -ಅಯ್ಯಾ! ಶಂಬರನೆ! ಅಪಕಾರ ಮಾಡಿಸಿಕೊಂಡವರಿಗಿಂತಲೂ ಅಪಕಾರ ಮಾಡಿದವರಿಗೆ ದ್ವೇಷವು ದೀರ್ಘವಾಗಿರುವುದು ಲೋಕ ಸ್ವಭಾವವು. ಹೀಗಿರುವಲ್ಲಿ, ನೀನೇ ದ್ವೇಷವನ್ನು ಬಿಟ್ಟು ಸಮಾಧಾನವನ್ನು ಹೊಂದುವಾಗ, ನಾನು ಮನಃಕಾಲುಷ್ಯವನ್ನು ಬಿಡುವುದೇನು ಅಸಾಧ್ಯ? ನಿನ್ನ ಪ್ರಾರ್ಥನೆಯಿಂದ ನಾನು ಬಹಳ ಸಂತೋಷಿಸಿದೆನು. ಸ್ನೇಹದಿಂದಾಗ ತಕ್ಕ ಅನುಕೂಲ್ಯಗಳು ದ್ವೇಷದಿಂದ ಆಗುವುದಿಲ್ಲ. ಈ ಯುದ್ಧದಿಂದ ನಿನಗೆ ಆಗಿರತಕ್ಕ ನಷ್ಟಗಳನ್ನು ನೋಡಿ, ನಾನು ತುಂಬ ವಿಷಾದಿಸಬೇಕಾಗಿದೆ. ಮಾಧವನ ಆಸ್ತಿಗೆ ನಾನು ಆಸೆ ಪಟ್ಟು ಪ್ರವರ್ತಿಸಿದವನೆಂದು ತಿಳಿಯಬೇಡ. ಅವನು ಬರೆದಿರುವ ಉಯಿಲಿನಲ್ಲಿಯೇ, ಆ ದ್ರವ್ಯದ ವಿನಿಯೋಗಗಳೆಲ್ಲ ವ್ಯಕ್ತ ಪಡುವುವು. ಅದರಂತೆ ಆ ಪತ್ರವನ್ನು ರಿಜಿಸ್ಟರ್ ಮಾಡಿಸುವುದಕ್ಕಾಗಿ ಮಾಧವನ ಕಡೆ ಲಾಯರಾದ ಅರ್ಥಪರನು ಬರುತ್ತಾನೆ. ಆ ವುಯಿಲು ರಿಜಿಸ್ಟರಾದ ಕೂಡಲೆ, ಅದರಲ್ಲಿ ಕಾಣಿಸಿರುವಂತೆ ನನ್ನ ಭಾಗಕ್ಕೆ ಬರತಕ್ಕ ದ್ರವ್ಯಗಳನ್ನು ನಿನಗೇ ಒಪ್ಪಿಸುತ್ತೇನೆ. ಅದನ್ನೂ, ನಿನ್ನ ದೊಡ್ಡಪ್ಪನಾದ ಸುಮಿತ್ರನ ಆಸ್ತಿಯನ್ನೂ ಸ್ವಾಧೀನ ಪಡಿಸಿಕೊಂಡು, ಕಲಾವತಿಯನ್ನು ವರಿಸಿ, ಅವಳೊಡನೆ ಸೌಖ್ಯವಾಗಿ ಬದುಕು. ಇನ್ನು ನಾನು ಹೋಗುತ್ತೇನೆ. ಅನುಮತಿಯನ್ನು ಕೊಡು.
ಶಂಬರ- "ಅಯ್ಯಾ! ವಂದಿಸುವೆನು, ನೀನು ಹೇಳಿದ ವಿಷಯವನ್ನೆಲ್ಲ ಮುಂದೆ ಪರ್ಯಾಲೋಚಿಸಿ ಸೂಕ್ತವಾದಂತೆ ನಡೆಸೋಣ," ಎಂದು ಹೇಳಿ, ಆತನನ್ನೂ ಪಂಚಾಯಿತರನ್ನೂ ಬಹುಮಾನಪುರಸ್ಸರನಾಗಿ ಕಳುಹಿಸಿಕೊಟ್ಟನು.
  ಸಮರಸಿಂಹನು, ಪಂಚಾಯಿತರೊಡನೆ ದಾರಿಯಲ್ಲಿ ಹೋಗುತ್ತ, ಪರಂತಪನನ್ನು ನೋಡಿ - 'ಅಯ್ಯಾ ! ಪರಂತಪ ! ನೀನೇ ಅದೃಷ್ಟಶಾಲಿ. ಶಂಬರನ ಗುಂಡು ನಿನಗೆ ತಗುಲಿದ್ದರೆ, ನಿನ್ನ ಗತಿಯೇನಾಗುತಿತ್ತು?

ಪರಂತಪ- (ಹುಸಿನಗೆಯೊಡನೆ) ನಾನು ಇಂಥ ನೂರಾರು ವಿಪತ್ತುಗಳಿಗೆ ಗುರಿಯಾಗಿದ್ದೇನೆ. ಅವೆಲ್ಲ ದೈವಯೋಗದಿಂದ ಪರಿಹಾರವಾಗಿವೆ.

೭೦

ಪರಂತಪ ವಿಜಯ


ಸಮರಸಿಂಹ- ಅದು ಹಾಗಿರಲಿ; ಶಂಬರನು ಗುರಿಹಿಡಿದು ಹೊಡೆಯುವ ವಿಷಯದಲ್ಲಿ ಸಮರ್ಥನೆಂದು ನೀನು ನಂಬಿರುವೆಯೋ?

ಪರಂತಪ- ಎಂದಿಗೂ ಇಲ್ಲ; ಹಾಗೆ ಅವನು ಶಕ್ತನಾಗಿದ್ದ ಪಕ್ಷದಲ್ಲಿ, ನನ್ನ ಪಾರ್ಶ್ವದಲ್ಲಿ ಬಹುದೂರದಲ್ಲಿ ನಿಂತಿದ್ದ ಸುಮಿತ್ರನಿಗೆ ಎಂದಿಗೂ ಗುಂಡು ತಗುಲುತ್ತಿರಲಿಲ್ಲ. ಅವನ ಗಂಡು ಅಕಸ್ಮಾತ್ತಾಗಿ ಸುಮಿತ್ರನಿಗೆ ತಗುಲಿರಬಹುದು.

ಸಮರಸಿಂಹ- ಅವನು ಮನಃಪೂರ್ವಕವಾಗಿ ಕ್ಷಮಾಪಣೆಯನ್ನು ಕೇಳಿಕೊಂಡಿರುವನೆಂದು ನಂಬಿರುವೆಯೋ?

ಪರಂತಪ- ಆ ಅಭಿಪ್ರಾಯವೂ ವ್ಯಕ್ತವಾಗಿಯೇ ಇರುವುದು. ನಾನು ಏನು ಮಾಡಿದ್ದಾಗ್ಯೂ, ಅವನಿಗೆ ನನ್ನಲ್ಲಿ ಮನಃಪೂರ್ವಕವಾಗಿ ಪ್ರೀತಿಯು ಎಂದಿಗೂ ಉಂಟಾಗುವುದಿಲ್ಲ. ಸಾಧ್ಯವಾದ ಪಕ್ಷದಲ್ಲಿ ಅವನು ನನ್ನನ್ನು ಕೊಲ್ಲುವುದಕ್ಕೂ ಹಿಂಜರಿಯುವವನಲ್ಲ. ಸುಮಿತ್ರನು ತನ್ನ ಆಸ್ತಿಯು ಕಲಾವತಿಗೆ ಸೇರತಕ್ಕುದೆಂದು ಉಯಿಲಿನಲ್ಲಿ ಕಾಣಿಸಿರುತ್ತಾನೆ. ಮಾಧವನ ಆಸ್ತಿಯು ನನಗೆ ಸೇರತಕ್ಕುದಾಗಿದೆ. ಇವೆರಡೂ ಈತನಿಗೆ ಪಿತ್ರಾರ್ಜಿತವು. ಇವು ಹೊರತು ಈತನಿಗೆ ಇನ್ನೇನೂ ಗತಿಯಿಲ್ಲ. ಇವನ ದುರವಸ್ಥೆಯನ್ನು ನೋಡಿ, ನಾನು ನನ್ನ ಭಾಗಕ್ಕೆ ಬಂದ ಮಾಧವನ ಆಸ್ತಿಯನ್ನು ಈತನಿಗೇ ಕೊಡಬೇಕೆಂದು ಯೋಚಿಸಿದೆನು. ಆದರೆ ಇವನು ಇವುಗಳನ್ನು ಪರಿಗ್ರಹಿಸಿ ಬದುಕತಕ್ಕವನಲ್ಲ. ಏನಾದರೂ ದುರ್ವೃತ್ತಗಳನ್ನು ನಡೆಸಿ ತಕ್ಕ ಫಲ ವನ್ನು ಅನುಭವಿಸುವನೆಂದು ತೋರುತ್ತದೆ.

ಸಮರಸಿಂಹ- ನೀನು ಹೇಳುವುದೆಲ್ಲ ನಿಜ. ಶಂಬರನ ಪೂರ್ವಾಪರಗಳನ್ನೆಲ್ಲ ನಾನು ಕೇಳಿರುವೆನು. ಅವನು ಕಾಲಾಂತರದಲ್ಲಿ ನಿನಗೆ ಮೃತ್ಯುವಾಗುವನೆಂದು ಊಹಿಸುವೆನು.

ಪರಂತಪ- ಮನುಷ್ಯ ಯತ್ನದಂತೆಯೇ ದೈವವು ನಡೆಸುವುದೆಂದು ನಂಬುವುದು ಹೇಗೆ? ದೈವವು ನನ್ನ ಕಡೆಗೆ ಅನುಕೂಲವಾಗಿರಬಾರದೆ? ನಾವು ಇದಕ್ಕೆ ಚಿಂತಿಸುವುದೇಕೆ?
  

ಹೀಗೆ ಪರಸ್ಪರ ಸಲ್ಲಾಪಗಳನ್ನು ಮಾಡುತ, ಎಲ್ಲರೂ ಪುರಪ್ರವೇಶವನ್ನು ಮಾಡಿ, ತಮ್ಮ ತಮ್ಮ ವಾಹನಗಳನ್ನಿಳಿದು, ಆ ಪುರದ ಒಂದು