ಪುಟ:ಅಶೋಕ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨| ಅಶೋಕ ಅಥವಾ ಪ್ರಿಯದರ್ಶಿ. ಪ್ರಿಯಃ ಪ್ರಿಯದರ್ಶಿ ( ” ಎಂದೆನಿಸಿಕೊಳ್ಳುವ ಅಶೋಕಚಕ್ರವರ್ತಿಯ ಜೀವನಚರಿತ್ರ ವನ್ನು ಹೇಳುವದಕ್ಕೆ ಮುಂಚೆ ಒಮ್ಮೆ ನಾವು ಮಗಧದೇಶದ ಪ್ರಾಚೀನ-ಇತಿಹಾಸ ವನ್ನಷ್ಟು ಆಲೋಚಿಸುವ. - ಗೌತಮಬುದ್ಧನು ಬದುಕಿರುವಾಗ ಶಿಶುನಾಗವಂಶದ ಬಿಂಬಸಾರನೆಂಬ ರಾಜನು ಮಗಧದೇಶವನ್ನಾಳುತ್ತಿದ್ದನು. ಆಗ ರಾಜಗೃಹವೆಂಬ ಪಟ್ಟಣವು ಆ ದೇಶದ ರಾಜಧಾನಿ ಯಾಗಿತ್ತು. ಮಗಧದೇಶವನ್ನಾಳಿಹೋದ ಜರಾಸಂಧನಿಗೆ ಗಿರಿವಜಪುರವು ರಾಜಧಾನಿ ಯಾಗಿತ್ತೆಂದು ಭಾರತದಲ್ಲಿ ಉಲ್ಲೇಖವುಂಟು, ಈ ಗಿರಿಜಪುರಕ್ಕೇ ಈಗ ಕುಶಾಗಾರ ಪುರ, ಇಲ್ಲವೆ ಪ್ರಾಚೀನ ರಾಜಗೃಹವೆಂದು ಕರೆಯುತ್ತಾರೆ. ಪ್ರಸಿದ್ದ ಶಿಲ್ಪಿಯಾದ* ಮಹಾಗೋವಿಂದನೆಂಬವನು ಗಿರಿದುರ್ಗವುಳ್ಳ ಈ ಪಟ್ಟಣವನ್ನು ಕಟ್ಟಿದ್ದನು. ಕ್ರಿ. ಪೂ. ೬ ನೆಯ ಶತಮಾನದಲ್ಲಿ ಬಿಂಬಸಾರನು ಈ ನಗರವನ್ನು ಬಿಟ್ಟು ಸಮೀಪದ ಪರ್ವತದ ಕೆಳಗಡೆಯಲ್ಲಿ ನವರಾಜಗೃಹವೆಂಬ ಹೊಸರಾಜಧಾನಿಯನ್ನು ಕಟ್ಟಿಸಿದನು. ಮಗಧವು ಬಹು ಪ್ರಾಚೀನ ದೇಶವು, +ಋಲ್ವೇದದಲ್ಲಿ ಉಲ್ಲೇಖಿಸಿರುವ ಸೀಕಟವೆಂಬದು ಮಗ ಧದ ಮೊದಲಿನ ಹೆಸರೆಂದು ಹಲವರು ಹೇಳುತ್ತಾರೆ, ಮಗಧದ ರಾಜಧಾನಿಯು ಗಿರಿ ವ್ರಜಪುರವೆಂದು ರಾಮಾಯಣದಲ್ಲಿಯೂ, ಮಹಾಭಾರತದಲ್ಲಿಯೂ ಹೇಳಿದೆ. ಬ್ರಹ್ಮ ವಂಶದಲ್ಲಿ ಹುಟ್ಟಿದ ಮಹಾತ್ಮನಾದ ಕುಶನಿಗೆ ವಿದರ್ಭ ದೇಶದ ಹೆಂಡತಿಯ ಹೊಟ್ಟೆ ಯಲ್ಲಿ ನಾಲ್ವರು ಮಕ್ಕಳು ಹುಟ್ಟಿದರು. ಅವರಲ್ಲಿ ವಸು ಎಂಬವನು ಎಲ್ಲರಿಗಿಂತ ಚಿಕ್ಕ ವನು, ಈ ವಸುವೇ ಗಿರಿವಜಪುರವನ್ನು ಸ್ಥಾಪಿಸಿ ಬಹು ಪರಾಕ್ರಮದಿಂದ ರಾಜ್ಯವಾಳಿ ದನು. ರಾಮಾಯಣದಲ್ಲಿ ಹೇಳಿದುದೇನಂದರೆ:- ಈ ಎದುರಿಗಿರುವ ಭೂಪ್ರದೇಶವು ಆ ಮಹಾತ್ಮನಾದ ವಸುವಿನ ರಾಜ್ಯವು, ಮುಂದೆ ಕಾಣುವ ಐದು ಪರ್ವತಗಳು ಇದರ ನಾಲ್ಕೂ ದಿಕ್ಕಿಗೆ ಶೋಭಿಸುತ್ತಿರುವವ, ಮಗಧದೇಶದಲ್ಲಿ ಹರಿದ ಸುಮಾಗಧಿ ಎಂಬ ಹೊಳೆಯು ಈ ಪರ್ವತಗಳ ನಡುವೆ ಮಾರಾಕಾರವಾಗಿ ಕಂಗೊಳಿಸುತ್ತಿರುವದು. " ( ರಾಮಾಯಣ ಆದಿ, ೩೨ನೆಯ ಸರ್ಗ: ) ಇಂದ್ರಪ್ರಸ್ಥದಲ್ಲಿ ಧರ್ಮರಾಯನು ಮಾಡಿದ ರಾಜಸೂಯಯಜ್ಞದ ಆರಂಭ ದಲ್ಲಿ ಮಗಧಾಧಿಪತಿಯಾದ ಜರಾಸಂಧನ ವಧಕ್ಕಾಗಿಯೂ, ಅವನು ಸೆರೆಹಾಕಿದ ಆರ

  • ನಾಭಾರತ, ಸಭಾ ಸನ೯: ೬೯೮ .೪೦೦ ಶ್ಲೋಕಗ. ರಾಮಾ ಣ, 'ಆದಿಕಾಂಡ ಹ *:*, ೫ನೆ ಅರ್ಧ ದು. ** ೨ : ಸಜ್ಞರಾದ ಈಸಿಂಗ್ ಹಾಸ್ಯ ಸಾಹೇಬರು.. ಯಾದಿಂದ ಈಕೆ; ನೃಕ ೩೬ ಮೈಲುಗಳ ಮೇಲೆ ಇರುವ :ಗಿನ ೧.೯೮ ( (juvek ) : ಬದ: ಇರ್ವ ಕಾಲದ 11, ಸ ಜ ಪುರವೆಂದು : ರ್ಣರು' ಸಿರವರು.
  1. .ಮಾನವಸ್ತ ಎಂಬ ಸಾಲಿಗ್ರಫರ ಕಟೀ ಯ :: ತನ್11-. * ಖಗೋದೆ, ಕನೆ , .., $ ಮಗಧಾವ.