ಪುಟ:ಉಮರನ ಒಸಗೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಮರನ ಒಸಗೆ

೫೧

೫೦
ಅಚ್ಚರಿಯನೇನೆಂಬೆ ನಾ ಮಣ್ಣು ಜನರೊಳಗೆ
ಕೆಲರು ಮಾತಾಡುವರು, ಕೆಲರಾಡದವರು.
ಅವರೊಳಾತುರನೊರ್ವನಿಂತೊಮ್ಮೆ ಕೇಳಿದನು :
"ಕುಂಬಾರನಾರಯ್ಯ, ಕುಂಬ ತಾನಾರು?"

೫೧
ಇನ್ನೋರ್ವನಿಂತೆಂದನ್: "ಈ ನೆಲದ ಮಣ್ಣಿಂದೆ
ಎನ್ನೊಡಲನಿಂತೆಸಗಿ ಸೊಗಸುಗೊಳಿಸಿದವಂ
ಮರಳಿ ಮಣ್ಣೊಳಗೆನ್ನ ಬೆರೆವಂತೆ ಮಾಡಿದೊಡೆ
ಅಚ್ಚರಿಯದೇನದರೊಳದೆ ತಕ್ಕುದಲ್ತೆ?”

೫೨
ಮತ್ತೊರ್ವನಿಂತೊರೆದನ್: "ಅದನೊಪ್ಪೆನಾವನುಂ
ಸಂತಸದಿ ತಾಂ ಕುಡಿವ ಕುಡಿಕೆಯನ್ನು ಮುರಿಯಂ;
ಆದರದಿ ಜಾಳ್ಮೆಯಿಂದೊಡರಿಸಿದ ಬಟ್ಟಲನು
ಕೋಪದಿಂದೊಡೆವುದೇನದು ತಕ್ಕುದಲ್ಲಂ."