ಪುಟ:ಓಷದಿ ಶಾಸ್ತ್ರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) [II ನೆಯ ಸುತ್ತಲೂ ಇರುವುದರಿಂದ, ಎಲೆಗಳು ವರಿಸೆಯಾಗಿ ಕಾಣುವುದಿಲ್ಲ. ಒಂದೆಲಗೆ ಮೇಲ ಡೆಯಲ್ಲಿಯೂ, ಕೆಳಗಡೆಯಲ್ಲಿಯೂ, ಎಲೆಗಳನ್ನು ಎಣಿಸಿ ದರೆ, ಆ ಎಲೆಯಿಂದ ಆರನೆಯ ಎಲೆಯು, ಇದಕ್ಕೆ ನೇರವಾಗಿರುವುದು. ಗಿಣ್ಣು ಸಂದುಗಳಿಂದಲೇ ಈ ಮರದಲ್ಲಿಯ ಎಲೆಗಳು ಹೊರಟುಬರುವುವುಇದನ್ನು ಮೇಲಿರುವ ಚಿತ್ರದಲ್ಲಿ ಕಾಣಬಹುದು. ಇದೂ ಅಲ್ಲದೆ, ಕೊನೇ ಗೈಯು ಈ ಚಿತ್ರದಲ್ಲಿ ಚೆನ್ನಾಗಿ ಕಾಣುವುದನ್ನೂ ನೋಡಿರಿ, ಗಿಣ್ಣುಗಳಲ್ಲಿ ಕಾವುಗಳ ಕೆಳಗೆ ಎರಡು ಕಡೆಗಳಲ್ಲಿಯ, ಮೃದುವಾಗಿಯ, ಮೊನೆಯಾ ಗಿಯ, ಇರುವ ಎರಡು ಪುಚ್ಛಗಳು ಕಾಣುತ್ತಿರುವುವು. ಇವು ಎಳೆಕೊನೆ ಗಳಲ್ಲಿ ಸಾಯಿಕವಾಗಿ ಎಲ್ಲಾ ಗಿಣ್ಣುಗಳಲ್ಲಿಯೂ ಇರುವುವು. ಎಲೆಯು ಬಲಿತಮತಿ, ಈಗಿನ ಪುಚ್ಚಗಳು ಬಿದ್ದು ಹೋಗುವುವು. ಉಮ್ಮತ್ರ, ಕುಂಬಳ, ಬದನೆ, ಮೊದಲಾದ ಗಿಡಗಳಲ್ಲಿಯ, ಪ) ಕಾಂ -ಡವು ಕವಲುಗಳಾಗಿ ಒಡೆಯುವುದು. ಎಲೆಗಳು ದಿಂಡಿನ ಸುತ್ತಲೂ, ಉದ್ದ ವಾದ ಕಾವುಗಳೊಡನೆ ಗಿಣ್ಣಿಗೆ ಒಂದರಂತೆ ಬೆಳೆಯುವುವು, ಮೇಲೆ ಹೇಳಿದ ಎಲ್ಲಾ ಗಿಡಗಳಲ್ಲಿಯ, ಗಿಣ್ಣು ಸಂದುಗಳೆಳ ಗಿಂದ, ಕೆಲವು ಕಾಲದಲ್ಲಿ ಕವಲುಗಳು ಹೊರಟು ಬೆಳೆಯುವುದು ಮಾತ್ರವಲ್ಲದೆ, ಹೂ ಗಳೂ, ಕಾಯಿಗಳೂ ಉಂಟಾಗುವುದೂ ಉಂಟು. ಸುರ ಹೊನ್ನೆ ಸಸಿಯ ಕವಲು, ಬೆಳಕಿಗೆ ಇದಿರಾಗಿ ಹೊರಕ್ಕೆ ಬಂದು, ಮೇಲಕ್ಕೆ ಹೊರಟು ಹಬ್ಬಿ ಬರು ವಂತೆಯೇ, ಆಮರದ ಕೊಂಬೆಗಳ ಮತ್ತು ಇತರ ವೃಕ್ಷಗಳು, ಗಿಡಗಳು ಮುಂತಾದುವುಗಳ ಕೊಂಬೆಗಳ ನಾಲ್ಕು ಕಡೆಗಳಿಗೂ ಹಬ್ಬಿ ಬೆಳೆಯುವುವು. ಬೇಲಿಗಳಲ್ಲಿ, ನೆಳಲಿರತಕ್ಕ ಕಡೆಗಳಲ್ಲಿ ಬೆಳೆದ ಗಿಡಗಳು ಕತ್ತಲೆಯುಳ್ಳ ಭಾಗ ಗಳನ್ನು ಬಿಟ್ಟು, ಬೆಳಕು ತಗುಲಬಹುದಾದ ಭಾಗಕ್ಕೆ ಅಭಿಮುಖವಾಗಿ ಕನ ತೊಡೆದು, ಹೂಬಿಡುವುದನ್ನು ನಾವು ಪ್ರತಿದಿನವೂ ನೋಡಬಹುದು. ಮರ