ಪುಟ:ಕಥಾ ಸಂಗ್ರಹ - ಭಾಗ ೨.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಕಥಾಸಂಗ್ರಹ-೪ ನೆಯ ಭಾಗ ಸಾಯದಂತೆ ವರವನ್ನು ಕೊಡೆಂದು ಬೇಡಿದುದಕ್ಕೆ ಬ್ರಹ್ಮನು ಆ ಪ್ರಕಾರವೇ ವರವ ಸ್ವತ್ತು ಇಂದ್ರನನ್ನು ಬಿಡಿಸಿ ಅಮರಾವತಿಗೆ ಕರೆದುಕೊಂಡು ಹೋಗಿ ಅಲ್ಲಿ ಅವನನ್ನು ಕುರಿತು-- ಮೊದಲು ನೀನು ಗೌತಮಪತ್ನಿ ಯಾದ ಅಹಲ್ವೆಯನ್ನು ಕಾಮಿಸಿದುದರಿಂದ ನಿನಗೆ ಇಂಥ ಪರಾಜಯವುಂಟಾಯಿತೆಂದು ಹೇಳಿ ಆ ಪಾಪಪರಿಹಾರಕ್ಕಾಗಿ ವೈಷ್ಣ ವಾ ಧ್ವರವನ್ನು ಮಾಡಿಸಿ ಮನಸ್ಸನ್ನು ಸಂತೋಷಪಡಿಸಿ ಅವನನ್ನು ಸ್ವರ್ಗಲೋಕದಲ್ಲೇ ಕಟ್ಟು ತನ್ನ ವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ಹೊರಟುಹೋದನು. - ಇತ್ತಲಾ ರಾವಣನು ಒಂದು ದಿವಸ ಪರಿವಾರಪರಿವೃತನಾಗಿ ತನ್ನ ಓಲಗದ ಚಾವಡಿಯಲ್ಲಿ ಕುಳಿತು ಕೊಂಡು ಇಂದ್ರಾದಿ ದಿಗೀಶರನ್ನೂ ದೈತ್ಯ ದಾನವಾದಿಗಳನ್ನೂ ಜಯಿಸಿದೆನೆಂಬ ಗರ್ವಾತಿಶಯದಿಂದ ಮದಿಸಿದವನಾಗಿ ಮಾರೀಚ ಪ್ರಹಸ್ತರೇ ಮೊದ ಲಾದ ತನ್ನ ಮಂತ್ರಿಗಳನ್ನು ನೋಡಿ--ನಾವು ಇನ್ನಾರನ್ನು ಜಯಿಸಬೇಕು ” ತ್ರಿಮೂ ರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ನನಗೆ ಮುತ್ತಜನು, ಕೈಲಾಸಗಿರಿಯನ್ನು ಕಿತ್ತು ಅಲ್ಲಾಡಿಸಲು ಶಿವನು ನನ್ನ ಪರಾಕ್ರಮಕ್ಕೆ ಮೆಚ್ಚಿ ಚಂದ್ರಹಾಸವೆಂಬ ಕತ್ತಿ ಯನ್ನಿತ್ತು ಸಂತೋಷಪಡಿಸಿದನು, ವಿಷ್ಣು ಒಬ್ಬನು ಮಾತ್ರ ಉಳಿದಿರುವನು. ಆತನು ಪಾಲ್ಗಡಲಲ್ಲಿ ಮಲಗಿದ್ದಾನಂತೆ. ಅಲ್ಲಿಗೆ ಹೋಗಿ ಆತನೊಬ್ಬನನ್ನೂ ಜಯಿಸಿಬಿಟ್ಟರೆ ಈರೇಳು ಲೋಕಗಳಲ್ಲೂ ನನ್ನೆದುರಿಗೆ ನಿಲ್ಲುವವರು ಯಾರೂ ಇಲ್ಲವೆಂದು ಹೇಳು ತಿರಲು ; ಆಗ ಸಭಾಸೀನನಾಗಿದ್ದ ವಿಭೀಷಣನು ರಾವಣನನ್ನು ಕುರಿತು-ಎಲೈ ರಾಕ್ಷಸರಾಜನೇ, ಲೋಕದಲ್ಲಿ ಶೂರರಿಲ್ಲ ವೆಂದು ಹೇಳಕೂಡದು, ಪ್ರಪಂಚದಲ್ಲಿ ಒಬ್ಬ ನಿಗಿಂತ ಇನ್ನೊಬ್ಬನು ಬಲಶಾಲಿಯು ಇದ್ದೇ ಇರುತ್ತಾನೆ. ಸಹಸ್ರಬಾಹುಗಳನ್ನು ಧರಿಸಿ ಮಹಾವೀರನಾಗಿ ಚಕ್ರವರ್ತಿಯೆನ್ನಿಸಿಕೊಂಡು ಮಾಹಿಷ್ಮತೀ ನಗರಾಧೀಶ್ವರ ನಾದ ಕಾರ್ತವೀರ್ಯಾರ್ಜುನನು ಸಾಮಾನ್ಯನೇ ? ಜಗದೇಕವೀರನಲ್ಲವೇ ? ಮತ್ತು ದೇವೇಂದ್ರನ ಮಗನಾದ ವಾಲಿಯೆಂಬವನು ವಾನರಾಧೀಶ್ವರನಾಗಿ ಕಿಂಧಾಪಟ್ಟಿ ಣದಲ್ಲಿ ವಾಸಿಸುತ್ತಿರುವನು. ಆತನು ದುಂದುಭಿ ಮಾಯಾವಿಗಳೆಂಬ ಅಪರಿಮಿತ ಬಲಪರಾಕ್ರಮಶಾಲಿಗಳನ್ನು ಲೀಲಾಮಾತ್ರದಿಂದ ಜಯಿಸಿದಂಥ ಮಹಾವೀರಾಗ್ರ ಸರನು, ಆತನೇನು ಸಾಧಾರಣನೇ ? ಅಪ್ರತಿಮಮಲ್ಲನಲ್ಲ ವೇ ? ಎಂದು ಹೇಳಲು ; ಆಗ ರಾವಣನು ಮೊದಲು ಅವರಿಬ್ಬರನ್ನೂ ಜಯಿಸಬೇಕೆಂದು ಮಾರೀಚಪ್ರಹ ಸ್ವಾದಿ ಮಂತ್ರಿಗಳೊಡನೆ ಕೂಡಿ ಮಾಹಿಷ್ಮತೀ ನಗರ ಸಮಿಾಪಕ್ಕೆ ಹೋಗಿ ಆ ರಾಜ ಧಾನಿಯ ಹೊರಗಣ ಉದ್ಯಾನವನದಲ್ಲಿ ಪಾಳಯವನ್ನು ಬಿಡಿಸಿಕೊಂಡು ತನ್ನ ದೂತ ರನ್ನು ಕರೆದು--ನೀನು ಕಾರ್ತವೀರ್ಯಾರ್ಜುನನ ಬಳಿಗೆ ಹೋಗಿ ನಾವು ಬಂದಿರುವ ವರ್ತಮಾನವನ್ನು ತಿಳಿಸೆಂದು ಹೇಳಿ ಕಳುಹಿಸಲು ; ಆ ದೂತನು ಬಂದು ಕಾರ್ತವೀ ರ್ಯಾರ್ಜುನನ ಮಂತ್ರಿಯನ್ನು ಕಂಡು ಆತನೊಡನೆ-ಅಯ್ಯಾ ಮಂತ್ರಿಯೇ, ನಮ್ಮೊ ಡೆಯನಾದ ದಶಕಂಧರನು ನಿನ್ನೊಡೆಯನಾದ ಕಾರ್ತವೀರ್ಯಾರ್ಜುನನನ್ನು ಯುದ್ಧಕ್ಕೆ ಕರೆದು ಕೊಂಡು ಒರಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದನೆಂದು ಹೇಳಲು ; “ಆಗೆ ಆ ಮಂತ್ರಿ, ಯು ರಾವಣಸಂದೇಶಹಾರಿಯೊಡನೆ-ನಮ, ರಾಜನು ಅಂತಃಪುರ ಕಾಂತಾ