ಪುಟ:ಕನ್ನಡದ ಬಾವುಟ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೯ ಧನಕನಕ ವಸ್ತುವಾಹನವಾಗಲೆಂದು ಕನಕದಂಡಿಗೆ ಚೌರಿ ನಿಮಗಾಗಲೆಂದು ದಿನದಿನಕೆ ರಾಜಮನ್ನಣೆ ಹೆಚ್ಚಲೆಂದು ಅನುದಿನವು ಹರಸಿದೆವು ಬಾಲಕರು ಬಂದು ಛತ್ರ ಚಾಮರ ತೇಜಿ ನಿಮಗಾಗಲೆಂದು ಅರ್ತಿಯಿಂ ಮಾಲಕುಮಿ ನಿಮಗೋಲಿಯಲೆಂದು ಪುತ್ರಪೌತ್ರರು ನಿಮಗೆ ಹೆಚ್ಚುತಿರಲೆಂದು ಅರ್ತಿಯಿಂ ಹರಸಿದೆವು ಬಾಲಕರು ಬಂದು ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು ತಿಳಿಗೊಳಗಳುಕ್ಕಿ ತುರುಗಳು ಕರೆಯಲೆಂದು ನಳಿನಮುಖಿಯರು ಸುಪುತ್ರರ ಪಡೆಯಲೆಂದು ಇಳೆಯೊಳಗೆ ಹರಸಿದೆವು ಬಾಲಕರು ಬಂದು ಆಯುರಾರೋಗ್ಯಗಳು ನಿಮಗಾಗಲೆಂದು ಶ್ರೇಯಸ್ಸು ಸಂಪತ್ತು ಹೆಚ್ಚುತಿರಲೆಂದು ಆಯತದಿ ಜಗದೊಡೆಯನೊಲವಾಗಲೆಂದು ಪ್ರಿಯದಿಂ ಹರಸಿದೆವು ಬಾಲಕರು ಬಂದು