ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

+ ೩ ೦ ಧಾ ಕಾ೦ ಡ_೬೭ ನೆ ಅ ಧ್ಯಾ ಯ . 2) ೬.೭ ನೇ ಅ ಧ್ಯಾ ಯ . (೬೪ ೬೫ ೬೬ನೇ ಅಧ್ಯಾಯಗಳು ೬.೦ ೬.೧ ೬.೨ ೬೩ನೇ ಅಧ್ಯಾಯಗಳಲ್ಲಿ ಸೇರಿವೆ.) ಹ ನು ಮ೦ತ ನು ಸಮು ದ ವ ನ್ನು ದಾಟಲು ಸ ಮ್ಮ ತಿ ನಿ ದ್ದು , ಈ ಮರ್ಯಾದೆಯಲ್ಲಿ ಹನುಮಂತನು ನೂರುಗಾವುದದಾರಿ ಅಗಲವಾದ ಸಮುದ್ರವನ್ನು ದಾಟುವದಕ್ಕೆ ಸ್ಮರ ಉಬ್ಬಿ ಬೆಳೆಯುತ್ತಿರಲು ಆತನನ್ನು ಕಂಡು ಆ ಕಪಿನಾಯಕರು ತಮ್ಮ ತಮ್ಮ ಮನಸ್ಸಿನಲ್ಲಿದ್ದ ದುಃಖವನ್ನು ಬಿಟ್ಟು ಹರ್ಷಯುಕ್ತರಾಗಿ ಬೊಬ್ಬಿಡುತ ಹನುಮಂತನು ಮಹಾ ಬಲವಂತನು ” ಎಂದು ಪ್ರೋತ್ರವನ್ನು ಮಾ ಡುತ ಸಂತೋಷಪಡುತ ಆಶ್ಚರ್ಯ ಪಡುತ ನಾನಾದಿಕ್ಕುಗಳಲ್ಲಿ ನಿಂತುಕೊಂಡು ನೋಡುತ್ತಿ ದ್ದರು ; ತಿವಿಕ, ಮಾವತಾರಕಾಲದಲ್ಲಿ ಭೂಮಿಯನ್ನಳೆಯುತ ನಾರಾಯಣನು ಸಮಸ್ತ ಪ್ರಜೆಗಳನ್ನ ನೋಡುತ್ತಿದ್ದಂತೆ ಜಾಂಬ ನಂತನು ಮೊದಲಾದ ಸಮಸ್ತ ಕಪಿನಾಯಕರನ್ನ ನೋಡುತ ಅವರಿಂದ ಜಯಜಯಾ ಎಂದು ಕೊಂಡಾಡಿಸಿಕೊ೦ ಡು ಮಜಾ ಬಲವಂತನಾದ ಹನುಮಂತನು ಅತ್ಯಂತ ವೆಗ್ಗಳವಾಗಿ ಬೆಳೆದು ತನ್ನ ಬಾಲವನ್ನು ಸುಂಟಿಕೊಂಡು ಅತಿ ಹರ್ಷಯುಕ್ತನಾಗಿ ತನ್ನ ತೇಜಸ್ಸಿನಿಂದ ನಾನಾಧಿಕ್ಕುಗಳನ್ನೂ ಬೆಳಗಿಸುತ ತನ್ನ ಸ್ವರೂಪವು ರಮಣೀಯ ವಾಗಿ ತೋರುತ್ತಿರಲು ಹೊಗೆಯಿಲ್ಲದ ಯಜ್ಞಪುರುಷನಂತೆ ಅತಿ ರಮಣೀಯವಾಗಿ ಒಪ್ಪುತ ಸಂತೋಷಾತಿಶ ಯದಿಂದ ಶರೀರವೆಲ್ಲವು ಪುಳಕಿತವಾಗಲು ಆ ಕಪಿನಾಯಕರ ಮಧ್ಯದಲ್ಲಿ ಬಂದು ಜಾಂಬವಂತನು ಮೊದಲಾದ ಕಪಿ ವೃದ್ಧರಿಗೆ ಅಭಿನಂದಿಸಿ ಅವರನ್ನು ಕುರಿತು ಎಲೈ ಕವಿನಾಯಕರುಗಳರ, ಆಕಾಶದಲ್ಲಿ ಸಂಚರಿಸುವವನಾಗಿ ಅಪ ರಿಮಿತವಾದ ಶಕ್ತಿಯುಳ್ಳವನಾಗಿ ಯಜ್ಞಪುರುಷನಿಗೆ ಸಖನಾಗಿ ಪರ್ವತಾಗ್ರಗಳಲ್ಲಿ ಸಂಚರಿಸುವ ವಾಯುದೇವನು ಯಂಥಾ ಬಲವಂತನೋ ನಾನೂ ಅಂಥಾ ಬಲವಂತನಾಗಿ ಆತನಂತೆ ಅತಿ ವೇಗವುಳ್ಳವನು; ನಾನು ವಾಯುದೇವನ ಮಗನು ; ಈ ಸಮುದ್ರವನ್ನು ವಾಯುವಿಗೆ ಸಮಾನವಾಗಿ ದಾಟುವನಲ್ಲದೆ ಮತ್ತೊಂದಲ್ಲ; ಗಗನವನ್ನು ತುಡುಕು ತ ಅತಿ ವಿಶಾಲವಾದ ಮಹಾಮೇರುಪರ್ವತವನ್ನಾದರೂ ಸಾವಿರಸಾರಿ ನೆಗೆದು ದಾಟಿಹೋಗುವೆನು ; ನನ್ನ ಭುಜಗ ೪ಂದ ಸಮುದ್ರವನೆತ್ತರಿಸಿ ನೂಕಿಬಿಟ್ಟೆನಾದರೆ ಸಮಸ್ತ ವನಸಹಿತವಾದ ಭೂಮಂಡಲವು ಸಮಾರೋದಕದಿಂದ ಪರಿಪುರ್ಣವಾಗುವದು ; ಆ ಬಳಿಕ ನನ್ನ ಜಂಘಗಳಿಂದಲೂ ತೊಡೆಗಳಿಂದಲೂ ಒಟ್ಟುಗೂಡಿಸಿದೆನಾದರೆ ಎಂದಿನ ಮರಾಗೆಯಲ್ಲಿ ಉದಕವು ಒಂದುಗೂಡಿ ಸಮುದ್ರವಾಗುವದು ; ಆಕಾಶಮಾರ್ಗದಲ್ಲಿ ಅತಿ ವೇಗದಿಂದ ಸಂಚರಿಸುವ ಗರುಡನ ಬಳಿಗೆ ಸಾವಿರ ಬಾರಿ ಹೋಗಿಬರುವ ಸಾಮರ್ಥ್ಯವು ನನಗುಂಟು ; ಸರನು ಉದಯಪರ್ವತದಲ್ಲಿ ಉದ ಯವಾಗಿ ಆಸಮಯಪರ್ವ ತದಲ್ಲಿ ಅಸ್ತಮಯವಾಗುವ ಪರಂತರ ಭೂಮಿಯನ್ನು ಮುಟ್ಟದೆ ಆತನಕಡೆ ಸಂಚರಿ ಸಿಕೊಂಡಿದ್ದು ತಿರಿಗಿ ಬರಲಾಪೆನು ; ಅಂತರಿಕ್ಷಮಾರ್ಗದಲ್ಲಿ ಸಂಚರಿಸುವ ನಕ್ಷತ್ರಗಳೆಲ್ಲವನ್ನೂ ಅತಿಕ್ರಮಿಸಿ ಹೋಗುವೆನು ; ಸಮುದ್ರವನ್ನು ಹೀರಿ ಒಣಗಿಸುವೆನು ; ಭೂಮಿಯನ್ನು ಇಬ್ಬಗೆಯಾಗಿ ಒಡೆದೇನು ; ಪರ್ವತಗ ಳನ್ನು ಚೂರ್ಣಮಾಡೇನು ; ಸಮುದ್ರವನ್ನು ಹೊಕ್ಕು ಅದನ್ನು ನನ್ನ ಪಾದವೇಗದಿಂದ ಕದಡಿಬಿಟ್ಟೆನು ; ನನಗೆ ಆಕಾಶಮಾರ್ಗದಲ್ಲಿ ತಡೆಯಿಲ್ಲದ ಸಂಚಾರವುಂಟು ! ಎಳ್ಳೆ ಕೆಪಿನಾಯಕಮಕ್ಕಳಾ, ನಾನು ಮಹಾಮೇರುಪರ್ವತ ಕ್ಕೆ ಸಮಾನವಾದ ಶರೀರದೊಡನೆ ಸಮುದ್ರವನ್ನು ದಾಟುವದನ್ನು ಸಮಸ್ತ ಪ್ರಾಣಿಗಳ ನೋಡಲೀ ! ನಾನು ಅಂ ತರಿಕಮಾರ್ಗದಲ್ಲಿ ಹೋಗುವಾಗ ಸಮಸ ದಿಕ್ಕುಗಳನ್ನು ವ್ಯಾಪಿಸಿಕೊಂಡು ಆಕಾಶವನ್ನು ನುಂಗುವಂತೆ ಸವ ಸ ಮೇಘಗಳನ್ನೂ ಒಡೆದು ತುಂಡು ತುಂಡು ಮಾಡಿಕೊಂಡು ಸಮಸ್ತ ಪರ್ವತಗಳಗೂ ಕಂಪನವನ್ನು ಹುಟ್ಟಿಸುತ ಸಮುದ್ರವನ್ನು ದಾಟುವದನ್ನು ನೀವೇ ಕಾಣುವಿರಿ ; ನನಗುಂಟಾದ ಶಕ್ತಿಯು ಗರುಡನಲರಿಬ್ಬರಿಗೆ ಹೊರ್ತಾಗಿ ಮತ್ತಾರಿಗೂ ಇಲ್ಲ; ನನಗೆ ಸಮಾನವಾದ ಬಲವು ಗರುಡ ವಾಯುಗಳಲ್ಲಲ್ಲದೆ ಮತ್ತೊಬ್ಬರಲ್ಲಿಲ್ಲ ; ಯವಹೊಳಪು ವಷ್ಟು ಹೊತ್ತಿನೊಳಗೆ ಮೇಘಮಂಡಲದಲ್ಲಿ ಮಿಂಚುಹೊಳೆಯುವಂತೆ ನಾನು ಮೇಘಮಂಡಲಕ್ಕೆ ನೆಗೆದು ತಿರಿಗಿ ಬ ರುವೆನು ; ತ್ರಿವಿಕ್ರಮಾವತಾರಕಾಲದಲ್ಲಿ ಭೂಮಂಡಲವನ್ನು ನೀರಡೆಯಮಾಡಿ ಸ್ವರ್ಗಲೋಕಕ್ಕೆ ಪಾದವನ್ನು ನೀ ಡಿದ ಪರಮಪುರುಷನಂತೆ ನಾನು ಸಮುದ್ರವನ್ನು ದಾಟುವದನ್ನು ಸಮಸ್ತ ಪಣಿಗಳೂ ನೋಡಲೀ ! ನನ್ನ ಸಾವು ರ್ಥವನ್ನು ನಾನೇ ಬಲ್ಲೆನು ; ಸರ್ವಥಾ ಸೀತಾದೇವಿಯನ್ನು ಕಂಡು ಬರುವನು; ನೀವೆಲ್ಲರೂ ನಿಮ್ಮ ಮನಸ್ಸಿಗೆ 27.