ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 ಶತಮಾನ] ಉರಿಲಿಂಗದೇವ. ಮೈನೂವಾಗ ಮೂಗಿನ ತುದಿಯಲೊಂದು ಹನಿ ಮಧುಬಿಂದು ಬೀಲಾಗಿ ಆ ಮ ಧುವಂ ಕಂಡು ಹಿರಿ ದಪ್ಪ ದುಳಿದಿವನೆಲ್ಲವ ಸೈರಿಸಿ ನಾಲಗೆಯಲ್ಲಿ ಆ ಮಧು ಸ ಎಸ ವನಂತೆ ಈ ಸಂಸಾರಸುಖವ ವಿಚಾರಿಸಿ ನೋಡಿದರೆ ದುಃಖದಾಗರವು ಇದನಹಿ ದು ಸಕಲವಿಷಯಂಗಳಲ್ಲಿಯ ಸುಖವಿಂಟೆಂದು ನಿರ್ವಿಷಯಿಯಾಗಿ ನಿಂದ ನಿಲವು ನೀನೆ ಸಿಮ್ಮಲಿಗೆಯಚೆನ್ನ ರಾಮ. 18 ರೇಕಣ್ಣ - ರೇವಣ್ಣ ಪ್ರಿಯ ನಾಗಿನಾಥ ಎಂಬ ಅಂಕಿತವುಳ್ಳ ಕೆಲವು ವಚನಗಳಿವೆ. ಈರೇಕಣ್ಣನಾರೋ ತಿಳಿಯದು. ವಚನಗಳು (1) ಕಳ್ಳನ ಕೈಯಲ್ಲಿ ಒಂದು ಒಳ್ಳೆಯ ರತ್ನವ ಕಂಡಡೆ ಎಲ್ಲರೂ ಬಂದು ತಲೆವಿಡಿವರಯ್ಯಾ, ಆರತ್ನವ ರತ್ನದ ವ್ಯವಹಾರ ಕೊಂಡಡೆ ಆರೂ ಬಾಯೆತ್ತಲ ಮ್ಯರು, ಶೈವಗುರುವಿನ ಕೈಯಲ್ಲಿ ಸಾಹಿತ್ಯವಾದ ಅಂಗವನು ವೀರಶೈವಗುರುವಿನ ಕೈಯಲ್ಲಿ ಕೊಟ್ಟು ಮರಳಿ ಕೊಂಡಡೆ ಆತ ಇಹಲೋಕವೂಜ್ಯನು, ಪರಲೋಕವೂ ಜೈನ; ನಿಮಾಣೆ ನಿಮ್ಮ ಪ್ರಮಥರಾಣೆ ತಪ್ಪದು ರೇಕಣ್ಣ ಪ್ರಿಯನಾಗಿನಾಧ. (2) ಕೈಮಅದು ಕಾದುವ ಅಂಕವದೇಕೋ ? ಭಾವಮಅದು ನೋ ಡುವ ನೋಟವದೇಕೋ? ಭಯವ ಮಹದು ಮಾಡುವ ಭಕ್ತಿಯದೇಕೋ? ಏಕಾಂತ ದ ಸುಖಕ್ಕೆ ಲೋಕಾಂತವೇಕೋ ? ರೇಕಣ್ಣಪ್ರಿಯನಾಗಿನಾಥನಲ್ಲಿ ಗುರುವ ಮಅದು ಲಿಂಗವನೊಲಿಪೆನೆಂಬುದೇಕೆ ? 19 ಉರಿಲಿಂಗದೇವ ಸು 1170 ಉರಿಲಿಂಗರೇವ ಎಂಬ ಅಂಕಿತವುಳ್ಳ ಕೆಲವು ವಚನಗಳು ದೊರೆಯು ತವೆ, ಇವು ಶಿವಲೆಂಕಮಂಚಣ್ಣನ (ಸು.1160) ಮಗನೂ ಉರಿಲಿಂಗ ಪೆದ್ದಿ ಯ (ಸು, 1180) ಗುರುವೂ ಆದ ಉರಿಲಿಂಗದೇವನಿಂದ ರಚಿತವಾಗಿ ರಬಹುದು. ವಚನ ಇಂಬಿನ ಚುಂಬನವಮೃತಾಹಾರ, ಆಲಿಂಗನವೆ ಆಭರಣ; ಸೋಂಕೆ ಸುವಸ್ತ್ರ; ನೋಟವೆ ಕೂಟ; ಒಡನಾಟವೆ ಅಷ್ಟಭೋಗ, ಎನಗೆ ಉರಿಲಿಂಗದೇವನ ಕೂಟ ಸರಾ ತ್ಪರವಾಲ್ಮ ನೋತೀತೆಪರಮಸುಖವು. _I, Vol, I, 215, 16 • • • • - -