ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಚೇರಮಾಂಕ. 269

 ಅರಸನರ್ಧವನಿತ್ತು ಶರಣಗ್ಗೆ೯ಯಾಕೆಯ |
 ಮರುಳಿಂದ ಕಟ್ಟಿಸುತ ಬಯಲಾದ ಹಿರಿಯ ಪ |
 ದ್ಮ ರಸರವರಣುಗನು ವ ರಾಮಾನುಜನ ಶಿಷ್ಯನಂ ಭಂಗಿಸುತ್ತಾತನ ||
ಪೊರೆದನಂ ವೀರಬಲ್ಲಳನ ಸಭೆಯೊಳಗಿರ್ದು |
ಕರಮರ್ದನಂಗೈದ ಮಹಿಮೆಗವನಿಪನೆಗೆ | 
ಬರುತ ಹಂಪೆಯೊಳೀಶಭಕ್ತರಂ ನುತಿಸಿದ ಹರೀಶನಂ ಬಲಗೊಂಬೆನು ||

ಎಂಬ ಪದ್ಯದಲ್ಲಿ ಕೆರೆಯಪದ್ಮರಸ, ಕುಮಾರಪದ್ಮರಸ, ಹರೀಶ್ವರ ಇವರುಗಳನ್ನು ಸ್ಮರಿಸುತ್ತಾನೆ, “ನವರಸಭಾವಲಕ್ಷಣಾಲಂಕಾರನಿಪುಣ” ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ.

   ಇವನ ಗ್ರಂಥ
                ಚೇರಮಕಾವ್ಯ
   ಇದು ವಾರ್ಧಕಸಮ್ಪದಿಯಲ್ಲಿ ಬರೆದಿದೆ , ಸಂಧಿ 11, ಪದ್ಯ 555. ಇದರ ಕಧಾಗರ್ಭವು ಈ ಪದ್ಯದಲ್ಲಿ ಹೇಳಿದೆ__
    ನಾರದನ ಬಿನ್ನಪಕೆ ಭಸಿತಕಾಯನ ಶಿವಂ |
    ಧಾರಿಣಿಗೆ ಕಳುಪೆ ಚೇರಮನೆನಿಸಿ ರಕ್ಷಾವಿ |
    ಚಾರಮಂ ಪರಕಲಿಸಿ ಭವನನುಜ್ಞೆಯ ಭದ್ರಗಾಯಕಂಗಿಷ್ಟವಿತ್ತು ||
    ಆರುಚಿರನಂಬ್ಯಣ್ಣನೊಡನಿರ್ದು ಒಟಕವಂ | 
    ಮಾರಾರಿಯೂರ್ಗೆಯ್ದೆ ಪಿಂದೆ ಧಾಯಪೋಗಿ | 
    ಚಾರುಕಾವ್ಯವನಲ್ಲಿ ಕೇಳಿಸಿದನೆಂಬಕಥೆ.
      ಇದರ ಉತ್ಕೃಷ್ಟತೆಯನ್ನು ಕವಿ 
    ಬಿಟ್ಟಕಣ್ಣವರೂರ ಸುಧಯ ಸವಿ ಮನವಲರ್ದು | 
    ನಟ್ಟು ಕೂಡುವ ಲತಾಂಗಿಯ ಸೋಂಕು ಪುಳಕವಳ |
    ವಟ್ಟು ಹಾಡುವ ಗಾನರಸದಿಂಪು ಜಾಜೆಯೊಳ್ಳರಲ ಕಂಪುಗಳ ಸೊಂಪು ||
    ಕಟ್ಟಕ್ಕಿ ಉನ ಸುತನ ರೂಪು ನಲ್ಲಿನ ಸೈಪು |
    ಮುಟ್ಟಿ ಪಂಚೇಂದ್ರಿಯಂ ನಲಿವವೋಲ್ ಗಂಗಪ್ಪ |
    ಸೆಟ್ಟಿಯಾತ್ಮ ಚಚೇರಮಂ ಪೇಲ್ದಿ ರಸಕಾವ್ಯವೆಸವುದಖಿಳರಿಗೆ ಸೇವ್ಯ || 
    ರಸಿಕರಾಹಾ ಎನಲು ಭಾವಕರು ತಲೆದೂಗೆ |
      27