ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



     360                          ಕರ್ಣಾಟಕ ಕವಿಚರಿತೆ 
                                                                                       {17 ನೆಯ
      ಚಂದ್ರ, ರುದ್ರಭಟ್ಟ, ಅಗ್ಗಳ, ಆಂಡಯ್ಯ, ಮಧುರ ಮುಂತಾದ ಕವಿ
      ಗಳ ಕಾವ್ಯಗಳಿಂದ ಪದ್ಯಗಳನ್ನು ಉದಾಹರಿಸಿದ್ದಾನೆ.
              ತಾನು ಕನ್ನಡ ಸಂಸ್ಕೃತ ಈ ಎರಡುಭಾಷೆಗಳ ವ್ಯಾಕರಣದ 
      ಲ್ಲಿಯೂ ಪ್ರವೀಣನೆಂದೂ ರಾಜರ ಸಭೆಗಳಲ್ಲಿ ಜೈನಮತವನ್ನು ಹಲವುಬಾರಿ 
      ಸ್ಥಾಪಿಸಿದೆನೆಂದೂ ಈ ಪದ್ಯದಲ್ಲಿ ಹೇಳಿಕೊಂಡಿದ್ದಾನೆ.
         "ಯೋ ನಾನಾಮತತರ್ಕಕರ್ಕಶ ಸತಿರ್ವ್ಯಾಖ್ಯಾನಮುದ್ರಾಪಟುಃ ||
          ಯಃ ಪ್ರಾಭಾವಯಾರ್ಹತಂ ನಿಜಮತಂ ಭೂಭ್ಯಕ್ಷಭೇನೇಕಧಾ | 
          ಯಃ ಕರ್ಣಾಟಕಸಂಸ್ಕೃತೋಭಯವಿಧಂ ಶಬಾಬ್ಲಿ ಮುತ್ತೀರ್ಣವರ್ಾ | 
          ಸೋಯಂ ಸಾಧುಜನಪ್ರಿಯೋ ವಿಜಯತೇ ಭಟ್ಟಾಕಳಂಕೋ ಭುವಿ ||
              ಇವನ ಗ್ರಂಥ
                               ಕರ್ಣಾಟಕಕಬ್ದಾನುಶಾಸನ 
              ಇದು ಕನ್ನಡಭಾಷೆಯ ವ್ಯಾಕರಣಗ್ರಂಥವು. ಇದರಲ್ಲಿ 4 ಪಾದಗ
          ೪ವೆ; ಸೂತ್ರಗಳು 5+2 ಈ ಸೂತ್ರಗಳಿಗೆ ಭಾಶಾಮಂಜರಿಯಂಒ ವೃತ್ತಿ
           ಯ ಮಂಜರೀಮಕರಂದವೆಂಬ ವ್ಯಾಖ್ಯಾನವೂ ಇವೆ. ಸೂತ್ರ, ವೃತ್ತಿ,
           ವ್ಯಾಖ್ಯಾನ ಈ ಮೂರೂ ಸಂಸ್ಕೃತಭಾಷೆಯಲ್ಲಿ ಬರೆದಿವೆ. ಪೂರ್ವಕವಿ
           ಗಳ ಕನ್ನಡ ಗ್ರಂಥಗಳಿಂದ ಉದಾಹರಣಗಳು ಕೊಟ್ಟಿವೆ. ಇದು ನಾಗ
           ವರ್ಮನ ಕರ್ಣಾಟ ಭಾಷಾಭೂಷಣಕ್ಕಿಂತಲೂ ವಿಸ್ತಾರವಾಗಿಯೂ ವೈ                                       
           ಡವ್ಯಾಖ್ಯಾನಸಮೇತವಾಗಿಯೂ ಇದೆ; ಶಬ್ದಮಣಿದರ್ಪಣಕ್ಕಿಂತಲೂ ಹೆಚ್ಚು
           ವಿಷಯಗಳನ್ನು ಒಳಗೊಂಡಿದೆ, ಕನ್ನಡಭಾಷೆಗೆ ಇದು ಅತ್ಯುತ್ತಮವಾ
            ಕರಣಗ್ರಂಥವೆಂದು ಹೇಳಬಹದು.
                  ಗ್ರಂಧಾವತಾರಗಲ್ಲಿ ವರ್ಧಮಾನಸ್ತುತಿರೂಪವಾದ ಈ ಶ್ಲೋಕವಿದೆ:
             ನಮಃ ಶ್ರೀವರ್ಧಮಾನಾಯ ವಿಶ್ವವಿದ್ಯಾವಭಾಸಿನೇ || 
             ಸರ್ವಭಾಷಾಮಯಿ ಭಾಷಾ ಪ್ರವೃತ್ಯಾ ಯನ್ನು ಖಾಂಬುಜಾತ್ ||
                 ಮಂಜರೀಮಕರಂದದಿಂದ ಕನ್ನಡಭಾಷೆಯ ಪ್ರಶಂಸಾರೂಪವಾದ
          ಸ್ವಲ್ಪಭಾಗವನ್ನು ತೆಗೆದು ಬರೆಯುತ್ತೇವೆ. * 
        ನಚೈಷಾ ಭಾಷಾ ಶಾಸ್ತ್ರಾನುಸಯೋಗಿ: ತತ್ಕಾರ್ಧ ಮಹಾಶಾಸ್ತ್ರ ವ್ಯಾಖ್ಯಾನಸ್ಯ ಷಣ್ಣ        
        ವತಿಸಹಸ್ರಪ್ರಮಿತಗ್ರಂಥಸಂದರ್ಭರೂಪಕ್ಕೆ ಚೂಡಾಮಣ್ಯಭಿಧಾನಸ್ಯ ಮಹಾ