ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

27

ಇನ್ನು ನಾಗವರ್ಮನು ದಕ್ಷಿಣೋತ್ತರಮಾರ್ಗಗಳ ವಿಷಯವಾಗಿ 
ಏನು ಹೇಳುತ್ತಾನೆ ನೋಡುವ ಕಾವ್ಯಾವಲೋಕನದ 3 ನೆಯ 
ಅಧಿಕರಣದ ಮಾರ್ಗವಿಭಾಗದರ್ಶನವೆಂಬ 1ನೆಯ ಪ್ರಕರಣದಲ್ಲಿ ನಾಗ 
ವರ್ಮನು ನೃಪತುಂಗನಂತೆಯೇ ಕಾವ್ಯಗುಣಗಳ ವಿವರಣೆಯಲ್ಲಿ ದಂಡಿ 
ಯನ್ನು ಅನುಸರಿಸಿ ಕೊನೆಗೆ ದಂಡಿಯ  
   ಇತಿ ವೈದರ್ಭಮಾರ್ಗಸ್ಯ ಪ್ರಾಣಾ ದಶಗುಣಾಃ ಸ್ಮೃತಾಃ |
   ಏಷಾಂ ವಿಪರಯಃ ಪ್ರಾಯೋ ದೃಶ್ಯತೇ ಗೌಡವತ್ಮರ್ನಿ || 
ಎಂಬ ಶ್ಲೋಕವನ್ನು ಪರಿವರ್ತಿಸಿ ಕೆಳಗಣ ಪದ್ಯವನ್ನು ಬರೆದಿದ್ದಾನೆ -
   ಇವು ನಿಯತಂ ದಕ್ಷಿಣದೇ | ಶವರ್ತಿ ಕವಿರಾಜಮಾರ್ಗದೊಳಂ ನೆಗಳ್ಗುಮ |
   ತ್ತವರ ವಿಪರ್ಯಯವೃತ್ತಿಯೆ | ಬಮಸುಗುಮುದೀಚ್ಯ ಮಾರ್ಗದೊಳ್ ಪ್ರಚು
                                                     ರತೆಯಿಂ || 
ಇದರ ಮುಂದಣ ಪದ್ಯವಾದ
   ವೈದರ್ಭಗೌಡಮಾರ್ಗವಿ | ಭೇದಂ ಬಗೆವೊಡೆ ಗತಾನುಗತಿಕವಿದೆಂದೊ |
   ಲ್ದಾ ದರಿಪರ್ ಕೆಲಬರ್ ಸಂ | ವಾದದೊಳೆರಡುಂ ಸವ ರ್ಧ ಮಪ್ಪುದರಂದಂ || 
ಎಂಬುದರಲ್ಲಿ ಭಾಮಹನ ಕಾವ್ಯಾಲಂಕಾರದಲ್ಲಿಯ 
   ಗೌಡೀಯಮಿದಮೇತತ್ತು ವೈದರ್ಭಮಿತಿ ಕಿಂ ಸೃಧಕ್ | 
   ಗತಾನುಗತಿಕನ್ಯಾಯಾನ್ನಾ ನಾಖ್ಯೇಯಮವೇಧಸಾಂ || 
ಎಂಬ ಶ್ಲೋಕದ ಅರ್ಥವನ್ನು ಹೇಳಿ ಆ ಪ್ರಕರಣವನ್ನು ಮುಗಿಸಿ 
ದ್ದಾನೆ. ಇದರಿಂದ ನಾಗವರ್ಮನು ಹೇಳುವ ದಕ್ಷಿಣೋತ್ತರಮಾರ್ಗ 
ಗಳು ವೈದರ್ಭಗೌಡಮಾರ್ಗಗಳೇ ಹೊರತು ಕನ್ನಡದ ಭೇದಗಳಲ್ಲ ಎಂಬು 
ದು ವ್ಯಕ್ತವಾಗುತ್ತದೆ. 
     ಆಧುನಿಕನಾದ ಭಟ್ಟಾಕಳಂಕನು ತನ್ನ ಕರ್ಣಾಟಕ ಶಬ್ದಾನುಶಾಸ 
ನದ “ ಆದೆನಃ ” ಎಂಬ 288 ನೆಯ ಸೂತ್ರದ ವ್ಯಾಖ್ಯಾನದಲ್ಲಿ ರ್ನಾ 
ಎಂಬ ರೂಪವನ್ನು ಉತ್ತರ ಮಾರ್ಗದ ಕವಿಗಳು ಅಂಗೀಕರಿಸಿದ್ದಾರೆ, ದ 
ಕ್ಷಿಣಮಾರ್ಗದ ಕವಿಗಳು ಅದನ್ನು ಬಿಟ್ಟು ಆ೯ ಎಂಬ ರೂಪವನ್ನು ಅಂ 
ಗೀಕರಿಸಿದ್ದಾರೆ ಎಂದು ಹೇಳಿ, ದಕ್ಷಿಣೋತ್ತರಮಾರ್ಗಭೇದಸೂಚಕವಾದ 
ಪ್ರಯೋಗಗಳನ್ನು ನೃಪತುಂಗನ ಗ್ರಂಥದಲ್ಲಿ ನೋಡಬಹುದು' ಎನ್ನು 
ತಾನೆ. ಇಲ್ಲಿಯ ದಕ್ಷಿಣೋತ್ತರಶಬ್ದಗಳು ಕನ್ನಡದ ಭೇದಗಳಿಗೆ ಅನ್ಯ