ಪುಟ:ಕರ್ನಾಟಕ ಗತವೈಭವ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧ನೆಯ ಪೂರಕ ಪ್ರಕರಣ – ಕರ್ನಾಟಕ-ಇತಿಹಾಸ-ಸಂಶೋಧನ

೧೪೩


೧೬ನೆಯದರಲ್ಲಿ, ಡಾ. ಫ್ಲೀಟರವರು ಚಾಲುಕ್ಯರ ಗುಜರಾಥದಲ್ಲಿಯ ಶಾಖೆಯ ಅರಸನಾದ ೨ನೆಯ ಪುಲಿಕೇಶಿಯ ಮಗನಾದ ಆದಿತ್ಯವರ್ಮನ ತಾಮ್ರ ಶಾಸನವು ಮುದ್ರಿತವಾಗಿದೆ. ಇದಲ್ಲದೆ, ಒಂದನೆಯ ವಿಕ್ರಮಾದಿತ್ಯನ ಮೂರು ತಾಮ್ರ ಶಾಸನಗಳೂ ವಿಜಯಾದಿತ್ಯನ ಒಂದು ತಾಮ್ರ ಶಾಸನವೂ ಮುದ್ರಿತವಾಗಿವೆ.

ರಾಷ್ಟ್ರಕೂಟ– ೨ನೆಯ ಸಂಪುಟದಲ್ಲಿ, ಸಾಮನಗಡದಲ್ಲಿ ಸಿಕ್ಕಿದ ತಾಮ್ರ ಶಾಸನವು (೯೭೫ ಶಕ) ಮುದ್ರಿತವಾಗಿದೆ. ೩ನೆಯದರಲ್ಲಿ, ರಾಷ್ಟಕೂಟದ ೧೫ನೆಯ ಅರಸನಾದ ೪ನೆಯ ಗೋವಿಂದನೆಂಬವನ ೮೫೫ನೆಯ ಶಕದ ಸಾಂಗಲಿಯಲ್ಲಿಯ ದೊರೆತ ತಾಮ್ರ ಶಾಸನವು ಮುದ್ರಿತವಾಗಿದೆ. ೧೮ನೆಯ ಸಂಪುಟದಲ್ಲಿ ೮೬೨ ಶಕದ ೩ನೆಯ ಕೃಷ್ಣನೆಂಬವನ ದೇವಳೆಯಲ್ಲಿಯ ದೊರೆತ ತಾಮ್ರ ಶಾಸನವು ಮತ್ತು ೧೩ನೆಯ ಅರಸನಾದ ೩ನೆಯ ಇಂದ್ರನ ನವಸರಿಯಲ್ಲಿ ದೊರೆತ ೮೩೬ನೆಯ ಶಕದ ಶಾಸನವೂ ಮುದ್ರಿತವಾಗಿವೆ. ೧೦ನೆಯ ಸಂಪುಟದಲ್ಲಿ, ಮಾಂಡಲೀಕ ಆರಸನಾದ ಪೃಥ್ವಿ ವರ್ಮನೆಂಬವನು ಸುಗಂಧವರ್ತಿ(ಸವದತ್ತಿ)ಯನ್ನು ೮೯೬ನೆಯ ಶಕದಲ್ಲಿ ಜೈನಗುಡಿಗೆ ದಾನಕೊಟ್ಟ ಶಿಲಾಲೇಖವೂ ಮತ್ತೂ ಒಂದು ೮೩೪ನೆಯ ಶಕದಲ್ಲಿ ಮುಳಗುಂದದಲ್ಲಿ ಜೈನ ಗುಡಿ ಕಟ್ಟಿದ ಶಿಲಾಲೇಖಗಳೂ ಮುದ್ರಿತವಾಗಿವೆ. ೧ನೆಯ ಸಂಪುಟದಲ್ಲಿ ಖಾರೆಪಟ್ಟಣದಲ್ಲಿಯ ಶಾಸನವು ೧೮೪೩ನೆಯ ಇಸವಿಯಲ್ಲಿ ಮುದ್ರಿತವಾಯಿತು.

ಚಾಲುಕ್ಯರು- ಇವರ ಶಿಲಾಲೇಖಗಳು ಈ ಮಾಸಪತ್ರಿಕೆಯಲ್ಲಿ ಬಹಳವಾಗಿ ದೊರೆಯುವುದಿಲ್ಲ. ೯ನೆಯ ಸಂಪುಟದಲ್ಲಿ ತ್ರಿಭುವನಮಲ್ಲ ವಿಕ್ರಮಾದಿತ್ಯನ ಶಿಲಾಲೇಖವಿದೆ. ೧೦ನೆಯದರಲ್ಲಿ ತೈಲಪದೇವನ ಮಾಂಡಲಿಕ ಅರಸನಾದ ಶಾಂತಿ ವರ್ಮನೆಂಬವನು ೯೦೨ನೆಯ ಶಕದಲ್ಲಿ ಸವದತ್ತಿಯಲ್ಲಿ ಜೈನಗುಡಿಗೆ ಕೊಟ್ಟ ತಾಮ್ರಶಾಸನವುಂಟು. ಮತ್ತೊಂದರಲ್ಲಿ ಕಾರ್ತವೀರ್ಯನ ಹೆಸರು ಇರುತ್ತದೆ. ೩ನೆಯದರಲ್ಲಿ ತ್ರಿಭುವನಮಲ್ಲನ ಮಾಂಡಲಿಕನಾದ ಸೇನನೆಂಬವನ ಹೆಸರುಂಟು. ೧೧ನೆಯದರಲ್ಲಿ ಡಾ. ಫ್ಲೀಟ ಇವರು ಸಿಂದವಂಶದ ಶಿಲಾಲೇಖಗಳನ್ನು ಮುದ್ರಿಸಿದ್ದಾರೆ. ಈ ಸಿಂದವಂಶದ ಶಿಲಾಲೇಖಗಳು ೨-೩-೪ನೆಯ ಸಂಪುಟಗಳಲ್ಲಿಯೂ ಉಂಟು.