ಪುಟ:ಕರ್ನಾಟಕ ಗತವೈಭವ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೫೨

ಕರ್ನಾಟಕ-ಗತವೈಭವ.




ಪೂರಕ ಪ್ರಕರಣ ೨.
ಲಿಪಿಗಳ ಮುದ್ರಣ- ಪದ್ಧತಿ.
ವಾ

ಚಕರೇ! ನಾವು ಈ ಪ್ರಕರಣದಲ್ಲಿ ಶಿಲಾಲಿಪಿ ಮತ್ತು ತಾಮ್ರ ಶಾಸನಗಳ ಮುದ್ರೆಗಳನ್ನು ತೆಗೆದುಕೊಳ್ಳುವ ರೀತಿಯನ್ನು ಹೇಳುವೆವು. ಶಿಲಾಲಿಪಿಗಳನ್ನು ಓದುವುದು ತುಸ ಕಠಿಣ ಕಾರ್ಯವು. ಆದರೆ ಅವುಗಳನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುವುದು ಅಷ್ಟೊಂದು ಕಠಿಣವಾದ ಕೆಲಸವಲ್ಲ. ಸ್ವಲ್ಪ ಅಭ್ಯಾಸದಿಂದ ಅದನ್ನು ಪ್ರತಿಯೊಬ್ಬನೂ ಕಲಿಯಬಹುದು. ಮೇಲಾಗಿ, ಈಗಿನ ಪರಿಸ್ಥಿತಿಯಲ್ಲಿ ಶಿಲಾಲಿಪಿಗಳನ್ನು ಓದುವುದಕ್ಕಿಂತ ಲಿಪಿಗಳನ್ನು ಸಂಗ್ರಹಿಸುವ ಕೆಲಸವು ಹೆಚ್ಚು ಮಹತ್ವದ್ದಾಗಿದೆ. ಶೋಧನ (Research) ಕ್ಕಿಂತ ರಕ್ಷಣವು (Conservation) ಹೆಚ್ಚು ಮಹತ್ವವುಳ್ಳದ್ದೆಂದು ಅನೇಕ ವರ್ಷಗಳ ಅನುಭವದಿಂದ ಗೊತ್ತಾಗಿದೆ. ಆದುದರಿಂದ, ನಾವು ನಮ್ಮ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಬಿದ್ದಿರುವ ಶಿಲಾಲಿಪಿಗಳನ್ನು ಮೊದಲು ರಕ್ಷಿಸಬೇಕು. ಮತ್ತು ಅವುಗಳ ಮುದ್ರಣವನ್ನು ತೆಗೆದು, ಇತಿಹಾಸ-ಮಂಡಲದಂಥ ಒಂದು ಸಂಸ್ಥೆಯಲ್ಲಿ ಸಂಗ್ರಹಿಸಿಟ್ಟರೆ, ಇಂದಿಲ್ಲ ನಾಳೆ ಯಾವ ಪುಣ್ಯಾತ್ಮನಾದರೂ ಅವುಗಳನ್ನು ಓದಿ, ಸಾರವನ್ನು ತೆಗೆದಾನು. ಆದರೆ ಈ ವಿಷಯದಲ್ಲಿ ಇಲ್ಲಿಯವರೆಗೆ ಆದ ಕೆಲಸವನ್ನು ನಾವು ಮೊದಲು ಅರಿತುಕೊಳ್ಳದೆ ಕೆಲಸಕ್ಕೆ ಪ್ರವೃತ್ತರಾದರೆ ನಿಷ್ಕಾರಣವಾಗಿ ಶ್ರಮವೂ ವೆಚ್ಚವೂ ಬೆಳೆಯುವುದು. ಆದಕಾರಣ ಮುದ್ರಣದ ರೀತಿಯನ್ನು ಹೇಳುವ ಪೂರ್ವದಲ್ಲಿ ಎಷ್ಟು ಶಿಲಾಲಿಪಿಗಳು ಮುದ್ರಿತವಾಗಿರುತ್ತವೆಂಬುದನ್ನು ಹೇಳುವವು. ನಮ್ಮ ಸುದೈವದಿಂದ ೧೯೦೫ ನೇ ಇಸವಿಯವರೆಗೆ ಮುದ್ರಿತವಾದ ಶಿಲಾಲೇಖಗಳದೊಂದು ಸಂಪೂರ್ಣ ಪಟ್ಟಿಯನ್ನು ಪ್ರೊ. ಕಿಲಹಾರ್ನ ಎಂಬವರು ಎಪಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಪತ್ರಿಕೆಯ ೭ನೆಯ ಸಂಪುಟದ ಕೊನೆಯಲ್ಲಿ ಕೊಟ್ಟಿರುತ್ತಾರೆ. ಇದರಲ್ಲಿ, ಸುಮಾರು ೧೧೦೦ ಶಾಸನಗಳ ಯಾದಿಯು ಇರುತ್ತದೆ. ಅವುಗಳಲ್ಲಿ ೨೧೦ ತಾಮ್ರ ಶಾಸನಗಳೂ ೮೯೦ ಶಾಸನಗಳೂ ಇರುತ್ತವೆ. (೩೨೦ ಕನ್ನಡ, ೨೯೦ ಸಂಸ್ಕೃತ ೯೦