ಪುಟ:ಕರ್ನಾಟಕ ಗತವೈಭವ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨ನೆಯ ಪೂರಕ ಪ್ರಕರಣ – ಕರ್ನಾಟಕ-ಇತಿಹಾಸ-ಸಂಶೋಧನ.

೧೫೭


ಇರುವ ಸ್ಥಳದಲ್ಲಿ ಒಂದು ಹಸೀ ಬಟ್ಟೆಯನ್ನು ಯಾವಾಗಲೂ ಮಡಿಸಿ ಇಡಬೇಕು. ಆಮೇಲೆ, ದಕ್ಕೆಯಾಗದಂತೆ ಕಾಗದವನ್ನು ತೆಗೆದು ಒಣಗಲಿಕ್ಕೆ ಇಡಬೇಕು. ಮುದ್ರೆಗಳು ಹಿಮ್ಮೈ ಆಗಿರುತ್ತವೆ. ಆದರೆ ಫೋಟೋ ತೆಗೆದುಕೊಂಡರೆ ಅವು ಮತ್ತೆ ಹಿಮ್ಮೈ ಆಗುತ್ತವೆ. ಮಸಿಯ ಕಲೆಗಳು ಪೂರ್ಣವಾಗಿ ಹೋಗಬೇಕಾದರೆ ಟರ್ಪಂಟಾಯಿನವನ್ನು ಸ್ವಲ್ಪ ಹಚ್ಚಿ, ಆಮೇಲೆ ಶಾಸನವನ್ನು ಸಬಕಾರದಿಂದ ತೊಳೆಯಬೇಕು. ಹಾಗೆ ಮಾಡಿದರೆ ಅದು ಸ್ವಚ್ಛವಾಗುವದು.
ಮೇಲೆ ಹೇಳಿದ ರೀತಿಗಳಲ್ಲದೆ ಮಿಕ್ಕ ರೀತಿಗಳುಂಟು, ಆದರೆ ಅವಕ್ಕೆ ಬಹಳ ವೆಚ್ಚ ತಗಲುವದರಿಂದ ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಆದರೆ, ತಾಮ್ರ ಶಾಸನಗಳನ್ನು ಆರ್ಕಿಯಾಲಾಜಿಕಲ್ ಖಾತೆದವರ ಕಡೆಗೆ ಕಳಿಸುವದೇ ಒಳ್ಳೆಯದು. ಅವರು ಅದರ ತಸವೀರು ತೆಗೆದುಕೊಂಡು ತಿರುಗಿ ಕಳುಹಿಸುವರು.