ಪುಟ:ಕರ್ನಾಟಕ ಗತವೈಭವ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩ನೆಯ ಪ್ರಕರಣ - ಕರ್ನಾಟಕ-ವಿಸ್ತಾರ

೧೯


ಚತುಸ್ಸೀಮೆಯನ್ನು ಇದುವರೆಗೂ ಯಾರೂ ಗೊತ್ತು ಮಾಡಿರುವುದಿಲ್ಲ. ವಿಜಯನಗರದ ಸಾಮ್ರಾಜ್ಯದ ಕಾಲಕ್ಕೆ ಕರ್ನಾಟಕದ ಸೀಮೆಯು ದಕ್ಷಿಣಕ್ಕೆ ಮುಳಬಾಯಿಯ (ಮುಳಬಾಗಲ)ವರೆಗೆ ಹರಡಿತ್ತೆಂಬುದು ಬುಕ್ಕರಾಯನ ಸೊಸೆಯಾದ ಗಂಗಾ ದೇವಿಯು ರಚಿಸಿದ ಕಾವ್ಯದೊಳಗಿನ ಕೆಳಗಿನ ಈ ಶ್ಲೋಕದಿಂದ ಗೊತ್ತಾಗುವುದು.

अथ लङ्घितकर्णाटः पञ्चपैरेव वासरैः ।
प्रापत्कम्पमहीपालः कण्टकाननपट्टणम् ॥

– ವೀರಕ೦ಪಣ ರಾಯ ಚರಿತ್ರ ೪, ೪೭

ಭಾವಾರ್ಥ- ಐದು ದಿವಸ ದಾರಿಯನ್ನು ನಡೆದ ಬಳಿಕ ಕಂಪಮಹಿಪಾಲನು ಕರ್ನಾಟಕವನ್ನು ದಾಟಿ ಕಂಟಕಾನನ (ಮುಳಬಾಗಿಲ) ಪಟ್ಟಣವನ್ನು ತಲ್ಪಿದನು.

ದುದರಿಂದ ಹಿಂದಕ್ಕೂ ಕೂಡ ಕನ್ನಡನಾಡಿನ ಗಡಿಯು ಕಾವೇರಿಯ ನದಿಯ ವರೆಗೆ ಹಬ್ಬಿರಬಹುದೆಂಬುದಕ್ಕೆ ಸಂದೇಹವಿಲ್ಲ. ಈಗ ಕೂಡ ಅಲ್ಲಿಯವರೆಗೆ ಕನ್ನಡ ನುಡಿಯು ಪ್ರಚಾರದಲ್ಲಿರುವುದರಿಂದ ಕನ್ನಡನಾಡಿನ ದಕ್ಷಿಣಗಡಿಯ ನಿಷ್ಕರ್ಷೆ ಯಾದಂತಾಯಿತು. ಇನ್ನು, ಪೂರ್ವಕ್ಕೆ ಕಾವೇರೀ ನದಿಯ ನಡುವಿನಿಂದ ಉತ್ತರಕ್ಕೆ ಸುಮಾರು ಗೋದಾವರಿ ನದಿಯ ಮುಖದವರೆಗೆ ಗೆರೆಯನ್ನಳೆದರೆ ಅದು ಕನ್ನಡನಾಡಿನ ಪೂರ್ವ ಸೀಮೆಯಾಗಬಹುದು. ಇದಲ್ಲದೆ, 'ಮಾಮೂಲನಾರ್' ಎಂಬ ತಮಿಳು ಕವಿಯು ಬರೆದ 'ಕುರುಂಟೋಕಾಯಿ' ಎಂಬುದೊಂದು ತಮಿಳ ಪುಸ್ತಕದಲ್ಲಿ ತಮಿಳು ಭಾಷೆಯ ಸೀಮೆಯನ್ನು ವರ್ಣಿಸಿರುವುದರ ಮೇಲಿಂದ ಕನ್ನಡ ಭಾಷೆಯ ಆಗ್ನೆಯ ಗಡಿಯು ಪುಲಿಕೋಟ್ (ಪಳವೇರ್ಕಾಡು) ಎಂಬ ಪಟ್ಟಣದವರೆಗೆ ಇತ್ತೆಂದು ಊಹಿಸಲಿಕ್ಕೆ ಆಸ್ಪದವಾಗಿದೆ. ಪಶ್ಚಿಮದಲ್ಲಿ ಗೋವೆಯ ಕೆಳಗೆ ಸಮುದ್ರವೇ ಕೊನೆಯ ಸೀಮೆಯಾಗಿತ್ತೆಂಬುದು ದಕ್ಷಿಣ ಕೊಂಕಣದಲ್ಲಿ ದೊರೆಯುವ ಶಿಲಾಲಿಪಿಗಳಿಂದ ಗೊತ್ತಾಗುತ್ತದೆ, ಇನ್ನು ವಾಯವ್ಯ ಮತ್ತು ಉತ್ತರದ ಗಡಿಗಳನ್ನು ನಿಶ್ಚಯಿಸುವುದು ಮಾತ್ರ ಬಲು ಕಠಿಣವಾದ ಕೆಲಸವಾಗಿದೆ. ಏಕೆಂದರೆ, ಅತ್ತ ಕಡೆಯಿಂದ ಮರಾಠರ ದಾಳಿಯು ನಮ್ಮ ನಾಡಿನ ಮೇಲೆ ಬಲವಾಗಿ ಬಿದ್ದು, ಅದನ್ನು ಬಲು ಕೆಳಕ್ಕೆ ಒತ್ತಿದೆ. ಹೀಗೆ, ನಿಜವಾದ ಕರ್ನಾಟಕ ಎಲ್ಲವೂ ಮಹಾರಾಷ್ಟ್ರಮಯವಾಗಿರುವುದರಿಂದ, ಉತ್ತರಕ್ಕೆ ಗೋದಾವರಿಯವರೆಗೆ ನಮ್ಮ ಕನ್ನಡನಾಡು ಹಬ್ಬಕ್ಕೆಂದು ಹೇಳಿದರೆ, ನಮ್ಮ ಕನ್ನಡಿಗರು ಅದು ಸುಳ್ಳೆಂದೇ