ಪುಟ:ಕರ್ನಾಟಕ ಗತವೈಭವ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಕರ್ನಾಟಕ ಗತವೈಭವ


ಗಳು, ಇವೂ ಶಿಲಾಲಿಪಿಯಷ್ಟೇ ಮಹತ್ವದವಾಗಿರುತ್ತವೆ, ದಪ್ಪ ತಾಮ್ರದ ತಗಡುಗಳ ಮೇಲೆ ಸುವಾಚ್ಯವಾದ ಅಕ್ಷರಗಳು ಕೆತ್ತಲ್ಪಟ್ಟು, ನಾಲ್ಕಾರು ತಗಡುಗಳಲ್ಲಿ ರಂಧ್ರ ಕೊರೆದು ತಾಮ್ರದ ಬಳೆಯು ಪೋಣಿಸಲ್ಪಟ್ಟಿರುತ್ತದೆ. ಈ ತಾಮ್ರಪಟಗಳೆಲ್ಲವೂ ಭೂದಾನದ ಸನದುಗಳೇ ಸರಿ. ಇಂಥ ನೂರಾರು ತಾಮ್ರಪಟಗಳು ಈಗ ದೊರೆತಿರುತ್ತವೆ. ಹುಡುಕಿದರೆ, ಇನ್ನೂ ನೂರಾರು ದೊರೆಯಬಹುದು. ಈಗ ಅವು ಬ್ರಾಹ್ಮಣರ ಮನೆಯಲ್ಲಿ ನೆಲಮನೆಯಲ್ಲಿಯಾಗಲಿ ದೇವರ ಜಗಲಿಗಳ ಮೇಲಾಗಲಿ ಬಿದ್ದಿರುತ್ತವೆ. ಅನೇಕ ಮಠಗಳಲ್ಲಿ ಅವನ್ನು ಜನರು ಪೂಜೆ ಮಾಡುತ್ತಾರೆ. ಇಂಥ ತಾಮ್ರಶಾಸನಗಳನ್ನು ಇತಿಹಾಸ ಸಂಶೋಧಕರು ಹುಡುಕಿ ತೆಗೆಯಬೇಕು.
ರ್ನಾಟಕ ಇತಿಹಾಸವನ್ನು ಸಾರುವ ಮೂರನೆಯ ಸಾಧನವಾವುವೆಂದರೆವೀರಗಲ್ಲು'ಗಳೂ ಮಹಾಸತಿಕಲ್ಲು' ಗಳೂ, ವೀರಗಲ್ಲುಗಳೆಂದರೆ ವೀರರು ಮಡಿದ ಸ್ಥಳದಲ್ಲಿ ಅವರ ಸ್ಮಾರಕಕ್ಕೆಂದು ನಡಿಸಿದ ಕಲ್ಲುಗಳು. ಇವುಗಳ ಮೇಲೆ ಆಯಾ ವೀರರ ಮೂರ್ತಿಗಳು ಕಟ್ಟದಿದ್ದು, ದೇವದೂತರು ಅವರನ್ನು ವಿಮಾನಗಳಲ್ಲಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ಚಿತ್ರ ತೋರಿಸಿರುತ್ತದೆ. ಕೆಲವು ವೀರಗಲ್ಲು ಗಳ ಮೇಲೆ ನಡುನಡುವೆ ಅಕ್ಷರಗಳಿರುತ್ತವೆ. ಮಹಾಸತಿಗಲ್ಲುಗಳೆಂದರೆ ಪತಿ ವ್ರತೆಯರು ವೀರರಾದ ತಮ್ಮ ಪತಿಗಳೊಡನ ಸಹಗಮನಮಾಡಿದ ಸ್ಥಳದಲ್ಲಿ ಅವರ ಸ್ಮಾರಕಾರ್ಥವಾಗಿ ನಿಲ್ಲಿಸಿದ ಕಲ್ಲುಗಳು, ಇವಕ್ಕೆ ಹಳ್ಳಿವಾಡ ಜನರು 'ನಾಸ್ತಿಕಲ್ಲು' ಎಂದೆನ್ನುತ್ತಾರೆ. ಇಂಥ ಕಲ್ಲುಗಳಲ್ಲಿ ಕೆಲವುಗಳ ಮೇಲೆ ಒಂದು ಕೈಯಾಕಾರದ ಗುರುತು ಮಾತ್ರ ಇರುತ್ತದೆ. ಈ ವೀರಗಲ್ಲು ಮಹಾಸತಿಗಲ್ಲು ಗಳಿಂದಲೂ ಕೆಲವು ಮಟ್ಟಿಗೆ ಇತಿಹಾಸಕ್ಕೆ ಸಹಾಯವಾಗುವುದು.
ನಾಲ್ಕನೆಯ ಸಾಧನವಾವುವೆಂದರೆ ನಾಣ್ಯಗಳು, ಈ ನಾಣ್ಯಗಳಿಂದ ಆಯಾಕಾಲದ ಅರಸರ ಹೆಸರು ಇತ್ಯಾದಿಗಳು ವ್ಯಕ್ತವಾಗುತ್ತವೆ.
ದನೆಯ ಮಹತ್ವದ ಸಾಧನವೆಂದರೆ ಪೂರ್ವಕಾಲದ ಕಟ್ಟಡಗಳು, ದಕ್ಷಿಣ ಹಿಂದುಸ್ಥಾನದಲ್ಲಿರುವಂಥ ಭವ್ಯವಾದ ಗುಡಿಗಳು ಇಡೀ ಹಿಂದುಸ್ಥಾನದಲ್ಲಿಯೇ ಇಲ್ಲ. ಇದಕ್ಕೆ ಕಾರಣವೇನಂದರೆ- ನಮ್ಮ ದೇಶದಲ್ಲಿ ಶಿಲ್ಪಕಲೆಯು ಅತ್ಯಂತ ಪರಿಣತಾವಸ್ಥೆಯನ್ನು ಪಡೆದಷ್ಟು ಅದು ಮತ್ತಾವ ದೇಶದಲ್ಲಿಯೂ ಪಡೆದಿರಲಿಲ್ಲ.