ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಳe ಅರವತ್ತೈದನೇ ಅಧ್ಯಾಯ ಜಾತಿಗೆ ತಕ್ಕ ಬುದ್ಧಿಯ ಯೋಚನೆಯಂಮಾಡಿ ಕಾಶೀಪಟ್ಟಣಕ್ಕೆ ಬಂದು ಇಲ್ಲಿ ಇದ್ದ ಬಾ ಹಣರಂ ಕೊಲ್ಲುವದಕ್ಕೆ ಯತ್ನವ ಮಾಡಿದ ನೆದೆಂತೆನೆ ಸಮಿತ್ತು ದರ್ಭೆ ಪುಟ್ಟ ಕಂದಮ್ಮನಂಗಳಂ ತಹದಕ್ಕೆ ಅರಣ್ಯಕ್ಕೆ ಹೋದವರು ಅಲ್ಲಿಯೇ ಭಕ್ಷಿಸುವನು, ವನದಲ್ಲಿ ಇದ್ದ )ಣಿಗಳ ವನಚ ರನಾಗಿಯೂ, ಜಲದಲ್ಲಿ ಇದ್ದ ಪ್ರಾಣಿಗಳ ಜಲಚರನಾಗಿಯೂ ದೇವತೆಗಳಿಗೆ ಮೊದಲಾಗಿ ಕಾಣಿಸಿಕೊಳ್ಳದೆ ಮಾಯಾವಿಯಾಗಿ ದಿವದಲ್ಲಿ ಮುನೀಶ್ಚರರ ಮಧ್ಯದಲ್ಲಿ ಮುಸಿಯಂತೆ ಕುಳಿತು ತರ್ಪಣಶಾಲೆದು ಹೋಗುವದನ್ನೂ ಹೊರಡುವದನ್ನೂ ನೋಡಿಕೊಂಡು ಅರ್ದು ರಾತ್ರಿಯಲ್ಲಿ ವ್ಯಾಘ ರೂ ಪದಿಂಬಂದು ಅನೇಕಮಂದಿಬ್ರಾಹ್ಮಣರಂ ಎಲುವು ಮೊದಲಾಗಿ ನಿಗದಂತೆ ಭಕ್ಷಿಸಿ ಸದ್ದಾಗದಂತೆ ಪ್ರೇರಮಟ್ಟು ಪೋಪನು, ಈ ರೀತಿಯಲ್ಲಿ ನಾನಾ ಮಾಲೆ ಗಳಿಂದ ಅನೇಕಮಂದಿ ಬಾಹ್ಮಣರನ್ನು ಭಕ್ಷಿಸಲು, ಒಬ್ಬ ಶಿವ ಭಕ್ಕಸು ಒಂಟಿಗನಾಗಿ ರಾತ್ರಿಯಲ್ಲಿ ತನ್ನ ಪರ್ಣಶಾಲೆಯಿಂಪೊರಮಟ್ಟು ಬಂದು ಈಶ್ಚರಾರಾಧನೆಯಂ ಮಾಡುತ್ತಾ ಧ್ಯಾನಪರನಾಗಿ ಇಗಲು, ಆ ರಾಕ್ಷಸನು ತನ್ನ ಬಲಗರ್ವದಿಂದ ವ್ಯಾಘರೂಪವಂ ತಾಳ್, ಆ ಬ್ರಾಹ್ಮ ಣನಂ ಸಂಹರಿಸಬೇಕೆಂದು ಸವಿಾಪಕ್ಕೆ ಬರಲು, ಆ ಸಮಯದಲ್ಲಿ ಬಾ | ಹ್ಮಣನು ಧ್ಯಾನಪರನಾಗಿ ದೃಢಚಿತ್ರದಿಂದ ಸಕಲಮಂತ್ರಂಗಳಿಂದ ಶರೀರ ಸಂರಕ್ಷಣೆಯಂ ಮಾಡಿಕೊಂಡು ಧ್ಯಾನ ಯೋಗದಿಂದಿರುತ್ತಿರಲು, ಆ ರಾಕ್ಷಸನು ಆತನು ಮುಟ್ಟುವದಕ್ಕೆ ಸಾಮರ್ಥ್ಯವಿಲ್ಲದೆ ಸರ್ವಗತನಾದ ಪರಮೇಶ್ವರನು ಆ ಬ್ರಾಹ್ಮಣಾನಂ ಪಿಡಿದೆನು ಎಂದು ಲಂಘಿಸುವವ್ಯಾಘ ರೂಪವ ದುರಾಕ್ಷಸನಂ ನೋಡಿ, ಜಗದ್ರಕ್ಷಕನಾದ ಭಕ್ಯಸಂರಕ್ಷಕ ನಾದ ತ್ರಿಲೋಚನನಾದ ಪರಮೇಶ್ವರನು ಆ ಬ್ರಾಹ್ಮಣನು ಪೂಜಿಸುವ ಲಿಂಗದಿಂ ಪೊರಮಟ್ಟು ಕೋಪದಿಂ ಮುಂದೆ ನಿಂತಿರಲು, ಆ ವಮಾ ಸುರನು, ಆ ದೇಹದಿಂದಲೇ ಪರ್ವತಾಕಾರವಾಗಿ ಬೆಳೆದು ಘರ್ಜಿಸುತ್ತಾ. ಇದಿರಾಗಿ ನಡೆತರಲು ಪರಮೇಶ್ವರನು ವ್ಯಾಘ ಮಂ ಪಿಡಿದು ಕಂಕುಳಲ್ಲಿ ಇರುಕಿಕೊಂಡು ನುಗ್ಗು ನಶಿಯಂ ಮಾಡಿ ಪಂಚಮುಖನಾದ ಶಿವನು ಹಸ್ತವನೆತ್ತಿ ಆ ರಾಕ್ಷಸನ ತಲೆಯುಂ ಕುಟ್ಟಿಲು, ಆ ರಾಕ್ಷಸನು ಪ್ರಳಯ