ಪುಟ:ಕೋಹಿನೂರು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗತಿ ಕೋಹಿಸುಕು ಶಬ್ಬವು ಈ ಕೋಲಾಹಲಕ್ಕೆ ಸೇರಿ ಹೆಚ್ಚು ಶಬ್ದವಾಯಿತು. ಇದ್ದಕ್ಕಿದ್ದಹಾಗೆ ಅರುಣಮೂರ್ತಿಯುಳ್ಳ ತರುಣಕೃಷಿಕ ಯುವಕನು ಪ್ರಳಯದ ಮೇಘದೋವಾ ದಿಯಲ್ಲಿ ಹಸ್ತದಲ್ಲಿ ದೀರ್ಘವಾದ ಕತ್ತಿಯನ್ನು ಹಿಡಿದು ರಣರಂಗವನ್ನು ಸೇರಿ ದನು, ಮತ್ತೆ ಇದೇನು ? ಅದೇ ಸಮಯದಲ್ಲಿ ಶ್ವೇತಶ್ನಶ್ರವುಳ್ಳವನಾಗಿಯೂ ಶ್ವೇತಜಟಾಧಾರಿಯಾಗಿಯೂ ದೀರ್ಘದೇಹವುಳ್ಳವನಾಗಿಯೂ ಕೌಪೀನಧಾರಿ ಯಾಗಿಯೂ ಇದ್ದ ಮುಸಲಮಾನ ಫಕೀರನೊಬ್ಬನು ಭಯಂಕರವಾದ ಕತ್ತಿ ಯನ್ನು ತಿರಿಗಿಸುತ ಮೇಘಗರ್ಜನೆಯಹಾಗೆ • ಭಂ, ಭಂ, ಹರ ೨, ಶಬ್ಬದಲ್ಲಿ • ಅಲ್ಲಾ ಹೊ ೨೨ ನಾದವನ್ನು ಸೇರಿಸಿ ಕೂಗುತ ಹಿಂದೂಗಳ ಪಾರ್ಶ್ವದಲ್ಲಿ ನಿಂತು ವೃಕ್ಷ ಶಾಖಾಧಾರಿಗಳಾಗಿದ್ದ ಹಿಂದೂ ವೀರರನ್ನು ಆಲಿಂಗನ ಮಾಡಿ ಹಿಂದೂಗಳ ಜತೆಯಲ್ಲಿ ಯವನರನ್ನು ಸಂಹರಿಸಲು ಸೇರಿದನು. ಮೂ ರ ನ ಯ ಸ ರಿ ಟೈ ದ. (• ಮುಸಲಮಾನನು ಯಾವಾಗಲಾದರೂ ಕಾಫರನ ಸಂಗಡ ಸೇರಿ ಕೊಂಡು ಮುಸಲಮಾನರಮೇಲೆ ಕೈಯೆತ್ತುವದುಂಟೆ ? ಅದು ದಿಟವಾಗಿಯೂ ಭೂತವಾಗಿರಬೇಕಲ್ಲವೆ ? 99 66 ಭೂತವೆಂಬುವುದಕ್ಕೆ ಇನ್ನು ಸಂದೇಹವುಂಟೆ ? ಆದರೆ ಹಿಂದೂಗಳ ಭೂತವು ಫಕೀರನಹಾಗೆ ವೇಷವನ್ನು ತಾಳಿದಒಗೆ ನನಗೆ ಚೆನ್ನಾಗಿ ಗೊತ್ತಾಗ ಅಲ್ಲಆ ಹಿಂದೂಗಳು ಅಂತಹ ಮೂರು ನಾಲ್ಕು ಭೂತಗಳನ್ನು ವಶಮಾಡಿ ಕೊರಿಡಿದ್ದರೆ ಮುಸಲರ ದುರ್ದಶೆಗೆ ಪಾರವೇ ಇಲ್ಲವೆಂದು ತೋರುತ್ತದೆ ! ೨೨ “ ಅದು ಹೇಗಾದರೂ ಇರಲಿ, ಇಷ್ಟು ಹೊತ್ತಿಗೆ ಭೂತಗಳೆಲ್ಲಾ ಹೊರಟು ಹೊಗಿರಬೇಕೆಂದು ಕಾಣುತ್ತದೆ. ಅಲ್ಲಿ ನಬಾಬನಿಗೇನುಗತಿಯಾಗಿದೆ ಹೋಗಿ ನೋಡಿಕೊಂಡಾದರೂ ಬರೋಣ, ಹೊರಡು, ಅತ್ತ ಕಡೆ ನೋಡು, ೪ಾಚಾ ! ಇದು ನೋಡಿದರೆ?9 ಈ ಯುದ್ಧದಲ್ಲಿ ಪ್ರಾಣವನ್ನುಳಿಸಿಕೊಂಡು ಪಲಾಯನರಾಗಿ ಹೋದ ನಾಲ್ಕು ಬುಂದಿ ಮುಸಲಮಾನ ಸೈನಿಕರು ಯುದ್ದ ರಂಗಭೂಮಿಗೆ ಎರಡು ಹರಿದಾರಿಯ