ಪುಟ:ಕೋಹಿನೂರು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಕೊಹಿನುರು mಜಜಯಜ ಶಬ್ದವನ್ನು ಮಾಡುತ ವರ್ಸವರ್ಸೆಯಾಗಿ ತಿರುಗುತಿದ್ದಿತು. ಹೆಣದ ಮೇಲೆ ಹೆಣವು ಬೀಳಲಾರಂಭವಾಯಿತು. ತುಂಡಾದ ಮುಂಡಗಳ ಮೇಲೆ ತುಂಡಾದ ಮುಂಡಗಳು ಬಿದ್ದು ವು. ಆದರೂ ಯುದ್ಧಕ್ಕೆ ವಿರಾಮವಿಲ್ಲ ! ಕ್ಷತ್ರಿಯ ಯುವರಾಜನ ಕೈಯಲ್ಲಿ ತಿರುಗುತಿದ್ದ ಕತ್ತಿಗೆ ವಿಶ್ರಾಮವಿಲ್ಲ ! ಈ ದಿನ ಒಂದು ಕೇಸರಿಯು ನರಿಗಳನ್ನೆಲ್ಲಾ ಸಂಹಾರ ಮಾಡಿದ ಹೊರತು ನಿಲ್ಲುವುದಿಲ್ಲವೆಂದು ತೋರುತ್ತದೆ. ಇದ್ದಕ್ಕಿದ್ದಹಾಗೆ ಸ್ವಲ್ಪ ದೂರದಲ್ಲಿ ಹಿಂದೂ ಸೈನ್ಯದವರು - ಹೊಡಿ, ಹೊಡಿ ” ಎಂದು ಕೂಗಿದ ಶಬ್ಬ ವು ಕೇಳಿತು. ಕೇಸರಿಸಿಂಹನು ತಿರುಗಿ ನೋಡ ಲಾಗಿ, ವಿಜಯಪಾಲನೂ ಕೃಷಿಕ ಸೈನಿಕ ಯುವಕನೂ ದುರ್ಗದಲ್ಲಿದ್ದ ಸೈನ್ಯವನ್ನು ತೆಗೆದುಕೊಂಡು ಯುದ್ದ ಪ್ರಾಂಗಣದಕಡೆ ಓಡಿಬರುತಿದ್ದರು. ಕೇಸರಿಸಿಂಹನು ವಿಕೃತಕಂಠದಿಂದ ಉಚ್ಛವಾದ ಸ್ವರದಿಂದ, “ ನೀವು ದೂರ ನಿಂತು ನೋಡು ತಿರಿ, ಕೇಸರಿಯೋಬ್ಬನೇ ಉಳಿದಿರುವ ಶೃಗಾಲಗಳ ಸಂಗಡ ಯುದ್ದ ಮಾಡುವ ನೆಂದು 99 ಕೂಗಿ ಹೇಳಿದನು. ವಿಜಯಪಾಲ-(ನ) -ಯಾರಸಂಗಡ ಯು ದ್ರವನ್ನು ಮಾಡುವೆ ? ಅದೋ, ನೋಡು, ನಿನ್ನ ಶೃಗಾಲಗಳೆಲ್ಲಾ ಓಡಿ ಹೋಗುತ್ತಿವೆ. ಅಯ್ಯೋ ! ಬೇಡಿಯನ್ನು ತೊಡಿಸಿದ್ದುದಕ್ಕೆ ಪ್ರತೀಕಾರ ಮಾಡುತಿದ್ದೆನು, ಆದರೆ ಓಡಿಹೋ ಗುವ ಶತ್ರುವಿನ ಪ್ರಾಣವಧೆ ಮಾಡುವುದು ಕ್ಷತ್ರಿಯ ಧರ್ಮಕ್ಕೆ ಸಿಪಿದ್ದ. ಕೇಸರಿಸಿಂಹನು ಅತ್ತ ಕಡೆ ತಿರುಗಿ ನೋಡಿದ, ಮುಸಲಮಾನ ಸೈನ್ಯದ ವರು ಯುದ್ಧರಂಗವನ್ನು ಬಿಟ್ಟು ಓಡಿ ಹೋಗುತಿದ್ದರು. ಅವನು ಕ್ರೋಧದಿಂ ದಲ ಕ್ರೋಧೆಯಿಂದಲೂ ಗರ್ಜಿಸಿ ಹೇಳಿದ. :-(• ಓಡಿಹೋಗುವ ಶತ್ರು ಗಳನ್ನು ಕೊಲ್ಲುವುದು ಕ್ಷತ್ರಿಯನ ಧರ್ಮಕ್ಕೆ ನಿದಿದ್ದ, ೨೨ ಹೀಗೆಂದು ಹೇಳಿ ಕೊಂಡು ತನ್ನ ಕೈಯಲ್ಲಿದ್ದ ಕತ್ತಿಯನ್ನು ದೂರ ಬಿಸುಟು, ಓಡಿ ಹೋಗುತಿದ್ದ ಸೈನ್ಯದವರ ಮುಂದುಗಡೆ ಓಡಿಹೋಗಿ ಎರಡು ತೋಳುಗಳನ್ನೂ ಮೇಲಕ್ಕೆತ್ತಿ ಕೊಂಡು ಅವರನ್ನು ಅಡ್ಡಹಾಕಿದನು. ಅವನ ಬಲದ ರವೈಯು ಕತ್ತರಿಸಿ ಕೆಳಗೆ ಬಿದ್ದಿತು: ಪುನಃ ಓಡಿಹೋಗಿ ಎಡದ ರಟ್ಟೆಯನ್ನೆ ಅಡಗಿಸಿದನು. ಆ ರಟ್ಟೆಯ ಎರಡು ತುಂಡಾಗಿ ನೆಲಕ್ಕೆ ಬಿದ್ದಿತು, ಆದರೂ ಕೇಸರಿಯು ತೃಗಾಲ ಯುದ್ಧದಿಂದ ಹಿಮ್ಮೆಟ್ಟಲಿಲ್ಲ. ಪುನಃ ಓಡಿಹೋಗಿ ಶತ್ರುಗಳನ್ನು ಕಾಲಿಂದೊ