ಪುಟ:ಚಂದ್ರಮತಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಲ್ಕನೆಯ ಪ್ರಕರಣ ಒಂದುದಿನ ಚಂದ್ರಮತಿಯು ಪಾಠಶಾಲೆಗೆ ಹೊತ್ತು ಮಾರಿ ಬಂದು, ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದಕ್ಕೆ ತೋರದೆ ಖಿನ್ನ ಳಾಗಿ ನೆಲವನ್ನು ನಿಟ್ಟಿಸುತ್ತೆ ಕುಳಿತಿದ್ದಳು. ವಿದ್ಯಾ ಸಮುದ್ರನು ಅದನ್ನು ಕಂಡು ಮಕ್ಕಳಿಗೆ ಮನಸ್ಸರ್ಯವಿಲ್ಲದಿರುವಾಗ ಓದಿಸುವುದರಿಂದ ಪ್ರಯೋಜನವಿಲ್ಲವೆಂದು ಅರಿತವನಾದುದರಿಂದ ಅವಳನ್ನು ನಿರ್ಬಂಧಪಡಿ ಸದೆ, ಅವಳ ಮನೋವ್ಯಥೆಯ ಕಾರಣವನ್ನರಿತವನಾಗಿದ್ದರೂ ಆ ವಿಷಯ ನನ್ನವಳ ಬಾಯಿಂದಲೇ ಹೊರಡಿಸಿ ಸಂದರ್ಭಾನುಸಾರವಾಗಿ ಮತ್ತೆ ಕೆಲ ನೂತನವಿಷಯಗಳನ್ನು ತಿಳಿಸಬೇಕೆಂಬ ಅಭಿಲಾಷೆಯಿಂದ ಇಂತೆಂದನು -- ಗುರು- ಚಂದ್ರಮತೀ ! ನೀನು ಯಾವಾಗಲೂ ಕಾಲಕ್ಕೆ ಸರಿಯಾಗಿ ತಪ್ಪದೆ ಬರುತ್ತಿದ್ದೆ. ಎಷ್ಟು ಕೆಲಸವಿದ್ದರೂ ನೀನು ಇಂದಿನವರೆಗೂ, ಯಾವಾಗಲೂ ಕಾಲವನ್ನತಿಕ್ರಮಿಸಿ ಬಂದವಳಲ್ಲ. ಇಂತಹ ನೀನು ಈದಿನ ಕಾಲವನ್ನು ಮಾರಿ ಆಲಸ್ಯವಾಗಿ ಬರುವುದಕ್ಕೆ ಕಾರಣವೇನು? ಚಂದ್ರ-ನನ್ನನ್ನು ಬಾಲ್ಯದಿಂದಲೂ ಮೊನ್ನೆ ಮೊನ್ನೆಯವರೆಗೂ ಎತ್ತಿಕೊಂಡು ಆಡಿಸುತ್ತಿದ್ದ ವೃದ್ಧಳಾದ ಒಬ್ಬ ವರಿಚಾರಿಣಿಯು ರಾತ್ರಿ ಆಕಸ್ಮಿಕವಾಗಿ ಮೃತಳಾದಳು. ಅವಳನ್ನು ಹಾವು ಕಚ್ಚಿ ತ೦ತೆ. ನಮ್ಮ ತಾಯಿಯು ಅತ್ತೆಯಮನೆಗೆ ಬಂದಾಗ ಅವಳ ತವರ್ಮನೆಯವರು ಆ ದಾಸಿ ಯನ್ನು ಬಳುವಳಿಯೊಡನೆ ಇಲ್ಲಿಗೆ ಕಳುಹಿಸಿದರಂತೆ. ಅವಳು ನನ್ನನ್ನು ತನ್ನ ಪಂಚಪ್ರಾಣಗಳೊಳಗೆ ಒಂದು ಪ್ರಾಣವೆಂದೆಣಿಸಿ ನೋಡಿಕೊಳ್ಳು ತ್ರಿದಳು. ಇಷ್ಟು ಪ್ರೇಮವುಳ್ಳ ಸೇವಕಿಯು ಮ ತಳಾದಳೆಂಬ ವ್ಯಥೆ ಯಿಂದ ನಾನು ಕಾಲಕ್ಕೆ ಸರಿಯಾಗಿ ಬಾರದೆ ತಪ್ಪಬೇಕಾಯಿತು. ಈ ಅಪರಾಧವನ್ನು ದಯವಿಟ್ಟು ಮನ್ನಿಸಿರಿ. ಈಗಲೂ ನನ್ನ ಮನಸ್ಸು ಅಲ್ಲಿಯೇ ನಾಟಿರುವುದು,