ಪುಟ:ಚಂದ್ರಮತಿ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒ೦ಭತ್ತನೆಯ ಪ್ರಕರಣ. ೫೧ ಚ೦ದ್ರ-ತಮ್ಮ ಅನುಗ್ರಹದಿಂದ ಈಗ ನನಗೆ ಸಮಸ್ತ ಧರ್ಮಗಳೂ ತಿಳಿದುವು. ಆವವಿಷಯದಲ್ಲಿ ಹೇಗೆ ನಡೆದುಕೊಳ್ಳ ಬೇಕೋ ಲೇಶವಾದರೂ ತಿಳಿಯದೆ ಕುರುಡಿಯಂತಿದ್ದ ನನಗೆ ತಾವು ಜ್ಞಾನೋಪದೇಶಮಾಡಿ ಕಣ್ಣು ಗಳನ್ನು ತೆರೆಯಿಸಿ ಕಾವಾಡಿದಿರಿ. ತಮ್ಮ ಋಣದ ಉಪಕಾರವನ್ನು ಹೇಗೆ ತಾನೇ ನಾನು ತೀರಿಸಲಾದೀತು ? ಗುರು- ನಾನು ಹೇಳಿದರೀತಿಯಲ್ಲಿ ನಡೆದುಕೊಳ್ಳುತ್ತೆ ಮುಂದೆ ನೀನು ಹೆಸರನ್ನು ಹೊಂದುವುದೇ ನನ್ನ ಸಾಲಕ್ಕೆ ಪರಿಹಾರ. ಧರ್ಮವನ್ನು ಸುಮ್ಮನೆ ಕೇಳುವುದರಿಂದ ಪ್ರಯೋಜನವೇನೂ ಇಲ್ಲ; ಕೇಳಿದುವುಗಳನ್ನು ಮರೆಯದೆ ಅದರಂತೆ ನಡೆದುಕೊಳ್ಳು ವುದರಿಂದ ಇಹಪರಗಳೆರಡರಲ್ಲಿಯೂ ನಕಲ ಿಯನ್ನೂ ಉಂಟಾಗುವುದು. ಕೆಲವರು ಸತ್ರ ನರ್ತನ ವುಳ್ಳವರಾಗಿ ಬಾಳುವುದು ಬಹು ಕಷ್ಟಕರವಾದುದೆಂದು ಭಾವಿಸಿರುವರು. ಅಭ್ಯಾಸವಾದ ಬಳಿಕ ಅದರಷ್ಟು ಸುಲಭವಾದ ಕಾರ್ಯವು ಮತ್ತಾವುದೂ ಇಲ್ಲ. ಗೇಣುದ್ದದ ಹೊಟ್ಟೆಗೋಸುಗ ಮಹಾಸಮುದ್ರಗಳನ್ನು ದಾಟಿಯೂ, ಹೊರಲಾರದಷ್ಟು ಭಾರವನ್ನು ಹೊತ್ತೂ, ಪ್ರಾಣದಾಸೆಯನ್ನು ಬಿಟ್ಟು ಯುದ್ದಗಳಲ್ಲಿ ಕಾದಾಡಿಯೂ, ಕಷ್ಟಪಡುವಂಥವರಿಗೆ ಸತ್ಯ, ಶಾಂತತೆ, ಭೂತ ದಯೆ ಇವುಗಳನ್ನು ಹೊಂದಿ ಬಾಳುವುದಸಾಧ್ಯವೆಂದರೆ ಯಾರಾದರೂ ನಗ ದಿರುವರೆ ? ಮನಸ್ಸಿಗೆ ಆಯಾಸವನ್ನುಂಟುಮಾಡಿ ಇಲ್ಲದುದನ್ನು ಹೊಸ ವಾಗಿ ಕಲ್ಪಿಸಿಕೊಂಡು ಹೇಳುವುದಕ್ಕಿಂತ ನಾಲಗೆಯ ಕೊನೆಯಲ್ಲಿದ್ದು ತನ್ನ ಷ್ಟಕ್ಕೆ ತಾನೇ ಅಪ್ರಯತ್ನವಾಗಿ ಹೊರಕ್ಕೆ ಬರುವುದಕ್ಕೆ ಸಿದ್ದವಾಗಿರುವ ಸತ್ಯವನ್ನು ಆಡುವುದು ಕಷ್ಟವೆಂದರೆ ಯಾರು ನಂಬಬಲ್ಲರು ? ಲೋಕದಲ್ಲಿ ಎಲ್ಲರಿಗೂ ಸಾಧುಗಳನ್ನು ಪ್ರೀತಿಸುವುದೂ ದುಷ್ಟರನ್ನು ದ್ವೇಷಿಸುವದೂ ಸಹಜಗುಣಗಳಾಗಿರುವುವು. ಈಗ ನಾವು ನೋಡುತ್ತಿರುವವರನ್ನು ಮಾತ್ರವೇ ಅಲ್ಲದೆ ಯಾವಾಗಲೋ ಇದ್ದು ಕಧೆಗಳಲ್ಲಿ ಉಕ್ತರಾದ ಯೋಗ್ಯರನ್ನು ಭೂಷಿಸುತ್ತೆ ಅಯೋಗ್ಯರನ್ನು ದೂಷಿಸುತ್ತಿರುವೆವು. ನಮಗೆ ಅಂತಹ ಅಭಿಪ್ರಾಯವುಂಟಾಗುವುದಕ್ಕೆ ಯೋಗ್ಯರು ನಮಗೆ ಮಾಡಿದ ಉಪಕಾರ ವಾವುದು ? ಅಯೋಗ್ಯರು ಮಾಡಿದ ಅಪಕಾರವಾವುದು ? ಜನರು ಆಯಾ ಜನರನ್ನು ಪ್ರೀತಿಸುವುದಕ್ಕೂ ದ್ವೇಷಿಸುವುದಕ್ಕೂ ಅವರವರ ಸುಗುಣ