ಪುಟ:ಚಂದ್ರಶೇಖರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಭಾಗ. ೧ G ಹುಡುಗರು ಗುಮ್ಮ ಗೊಗ್ಗನ ಹೆಸರನ್ನು ಹೇಳಿದರೆ ಹೆದರುವರು. ಆದರೆ ಕೆಲವು ದುರಾದ ಹುಡುಗರು ಗುಮ್ಮನ ಹೆಸರನ್ನು ಹೇಳಿದರೆ ಗೊಗ್ಯ ಎಲ್ಲಿದ್ದಾನೆ, ನಾನು ನೋಡುವೆನೆಂದು ಹೇಳುವರು. ರೈವಲಿನಿಯ ಅಂತಹ ಹುಡುಗಿಯಾಗಿದ್ದಳು. ಅವಳು ಮೊದಲುಮೊದಲು ಆಕಾಲದ ಸಂಪ ದಾಯಾನುರೀತಿಯಾಗಿ ಫಾಸ್ಟರನನ್ನು ಕಂಡರೆ ಊರ್ಧ್ವಲ್ಯಾಸದಿಂದ ಓಡಿ ಹೋಗುತಲಿದ್ದಳು, ಅನಂತರ ಇಂಗ್ಲೀಪರು ಮನು ಸ್ಮನನ್ನು ತಿಂದುಹಾಕುವುದಿಲ್ಲ, ಅವರು ಒಂದು ಆಶ್ಚಯ್ಯ ಜಂತು ವಿಶೇಷ ಯಾವಾ ಗಲಾದರೂ ಅವರನ್ನು ಕಂಡರೆ ನಿಂತು ನೋಡಬೇಕೆಂದು ಯಾರೋ ಅವಳಿಗೆ ಹೇಳಿದರು. ಕೈವಲಿನಿಯು ಅದೇಪ)ಕಾರ ನಿಂತು ನೋಡಿದಳು. ನೋಡಿದ್ದ ರಮೇಲೆ ಇಂಗ್ಲೀಷನು ಅವಳನ್ನು ಕೂಡಲೆ ಹಿಡಿದು ತಿಂದು ಹಾಕಲಿಲ್ಲ. ಅದು ಮೊದಲ್ಗೊಂಡು ಶೈವಲಿನಿಯು ಮಾಸ್ಟರನನ್ನು ನೋಡಿದರೆ ಓಡಿ ಹೋಗದೆ ನಿಂತು ನೋಡುವಳು. ಕ್ರಮೇಣ ಅವನು ಮಾತನಾಡಿದರೆ ಅವನೊಡನೆ ಮಾತನಾಡುವುದಕ್ಕೂ ಧೈರ್ ವುಂಟಾಯಿತು, ಅದು ಶಾರ ಕರಿಗೆ ಆಗಲೆ ತಿಳಿದಿದೆ. ಕೈವಲಿನಿಯು ಅಶುಭಹ್ಮಣರಲ್ಲಿ ಭೂಮಿಯ ಮೇಲೆ ಹುಟ್ಟಿದ್ದಳು. ಅಶುಭಕ್ಷಣ ದಲ್ಲಿ ಚಂದ್ರಶೇಖರನು ಅವಳ ಸಾಣಿಗೆ ಹಣವನ್ನು ಮಾಡಿಕೊಂಡನು. ರೈವಲಿನಿಯು ಎಂತಹವಳೊ ಅದನ್ನು ಕ್ರಮೇಣ ತಿಳಿಸುವೆವು, ಅವಳು ಎಂತಹವಳೇ ಆಗಲಿ, ಫಾಸ್ಟ್ ರನ ಪ್ರಯತ್ನ ವೇನೊ ವಿಫಲವಾಯಿತು. ಅನಂತರ ಅಕಸ್ಮಾತ್ತಾಗಿ ಫಾಸ್ಟ್ರನಿಗೆ ಕಲಿಕತ್ತೆಯಿಂದ, ನೀನು ಕೂಡಲೆ ಕಲಿಕ ತ್ರೆಗೆ ಹೊರಟುಬರಬೇಕು ; ಕಾರಖಾನೆಯನ್ನು ನೋಡಿಕೊಳ್ಳುವುದಕ್ಕೆ ಬೇರೆ ಮನು ಏನನ್ನು ಕಳುಹಿಸಿರುತ್ತೆಂದು ಹುಕ.೦ ಬಂದಿತು. ಫಾಸ್ಟ್ರಿಗೆ ಬದಲಾಗಿ ಬಂದವನೇ ಈ ಹುಕುವನ್ನು ತಂದನು. ಫಾಸ್ಟ್ರನು ಕೂಡಲೆ ಹೊರಡಬೇಕಾಗಿಬಂದಿತು. - ಕೈವಲಿನಿಯು ರೂಪವು ಭಾಸ್ಕರನ ಚಿತ್ರವನ್ನು ಅಧಿಕಾರ ಮಾಡಿಕೊಂಡಿತ್ತು. ಈಗ ಅವಳನ್ನು ಬಿಟ್ಟು ಹೋಗಬೇಕಾಗಿ ಬಂದಿತು. ಆ ಕಾಲದಲ್ಲಿ ಬಂಗಾಳೆಯಲ್ಲಿದ್ದ ಇಂಗ್ಲೀಷುಜನರು ಎರಡು ಕೆಲಸದಲ್ಲಿ ಮಾತ್ರ ಅಸಮರ್ಥರಾಗಿದ್ದರು. ಆಕೆಯನ್ನಡಗಿಸ ಲಸಮರ್ಥರಾಗಿದ್ದರು, ಮತ್ತು ಪರಾಭವವನ್ನು ಒಪ್ಪಿಕೊಳ್ಳಲಸಮರ್ಥರಾಗಿದ್ದರು. ಅವರು ಎಂತಹ ಕೆಲಸವನ್ನಾಗಲಿ ಮಾಡಲಾರೆವೆಂದು ಒಪ್ಪರು. ಯಾವ ಕೆಲಸದಿಂದಲೂ ನಿರಸ್ಕರಾಗರು, ಮತ್ತು ಇಂತಹ ಕೆಲಸವು ಅಧರ್ಮವಾದುದು; ಆದುದರಿಂದ ಅದನ್ನು ಮಾಡತಕ್ಕದ್ದಲ್ಲವೆಂದು ಒಪ್ಪರು, ಮೊದಲು ಮೊದಲು ಭಾರತವರ್ಷದಲ್ಲಿ ಬ್ರಿಟಾನಿಯಾ ರಾಜ್ಯವನ್ನು ಸ್ಥಾಪಿಸಲು ಬಂದವರಹಾಗೆ ಪರುಷ ಪರಾಕ್ರಮಶಾಲಿಗಳಾದವರೂ ಪಾಸಾಚರಣೆಯಲ್ಲಿ ನಿರಂಕುಶರಾದವರೂ ಮನುಷ ಸಂಪ್ರದಾಯದಲ್ಲಿ ಭೂಮಂಡಲದಲ್ಲಿ ಎಲ್ಲಿಯ ಇರಲಾರರು. - ಲಾರೆನ್ನು ಫಾಸ್ಯರನು ಅಂತಹ ಪ್ರಕೃತಿಯುಳ್ಳವನಾಗಿದ್ದನು. ಅವನು ಮನಸ್ಸಿನ ಆಕೆಯನ್ನು ಅಡಗಿಸಲಾರದೆಹೋದನು, ಆಗಿನ ಕಾಲದಲ್ಲಿ ಬಂಗಾಳೆಯಲ್ಲಿದ್ದ ಇಂಗೀಷ