ಪುಟ:ಚೆನ್ನ ಬಸವೇಶವಿಜಯಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆ ಬಸವೇಶವಿಜಯ೦ (ಕಾಂಡ ೨) [ಅಧ್ಯಾಯ ವೆಂದರಿತು, ಯುದ್ಧಕ್ಕೆ ತಕ್ಕ ಸನ್ನಾಹವನ್ನು ಮಾಡಿಕೊಂಡನು. ಇತ್ಯ ಬೆಳಗಾದ ಕೂಡಲೇ ರಾಕ್ಷಸರು ಯುದ್ಧ ಸನ್ನದ್ಧರಾದರು. ಅಸ್ಟ್ರಲ್ಲಿ ಒಬ್ಬ ದೂತನು ಓಡಿಬಂದ, ದೇವತೆಗಳೆಲ್ಲರೂ ರಾತ್ರಿಯೇ ಪಟ್ಟಣವನ್ನು ಬಿಟ್ಟು ಓಡಿಹೋದರೆಂದು ತಿಳಿಸಿದನು. ಅದನ್ನು ಕೇಳಿ ಜಲಂಧರನು ಅತಿಸಂತೋಷಗೊಂಡು, ತನ್ನ ಸೇನೆಯೊಡನೆ ಅಮರಾವತಿಯ ಸಂಪ ತನ್ನು ನೋಡುವುದಕ್ಕಾಗಿ ಹೊರಟನು. ಸುವಣ್ಣರಜತಮಯವಾಗಿ ಕ ಟ್ಟಿರುವ ಉಪ್ಪರಿಗೆಗಳ ಸಾಲುಗಳಿಂದ ಸಂಪತ್ತನ್ನು ಬೀರುತ್ತಿರುವ ರಾಜ ವಿಧಿಗಳನ್ನೂ, ಸೌಂದರವೇ ಮರಿಮತ್ತಾಗಿರುವ ದೇವನಾರಿಯರ ಸಾಲುಗಳನ್ನೂ, ತಂಡತಂಡವಾಗಿ ನಿಂತಿರುವ ಹ»ಶರಥಪದಾತಿಗಳ ನ್ನೂ ನೋಡುತ್ತ ಬಂದು, ಅರಮನೆಯನ್ನು ಹೊಕ್ಕು, ಸಭಾಮಂದಿರ ದಲ್ಲಿ ಕುಳಿತು, ಪಟ್ಟಣದ ಜನರನ್ನೆಲ್ಲ ಬರಮಾಡಿಕೊಂಡು, ಅವರಿದಿರಿಗೆ ಶುಂಭಾಸುರನಿಗೆ ಸ್ವರ್ಗಲೋಕದ ಆಧಿಪತ್ಯವನ್ನು ವಹಿಸಿ, ಪಟ್ಟವನ್ನು ಕಟ್ಟಿ, ಎಲ್ಲ ದಿಕ್ಕಾಲಿಕರುಗಳ ತಾಣೆಯಗಳಮೇಲೂ ತನ್ನ ಕಡೆಯ ಕಾ ವಲನ್ನಿರಿಸಿ, ದೇವೇಂದ್ರನ ಸಕಲ ವಸ್ತು ವಾಹನಗಳೂ ಎಲ್ಲಿವೆ ಯೆಂದು ವಿ ಚಾರಿಸಲು, ಅಲ್ಲಿದ್ದ ಆಳುಗಳು ಇಗೊ ಸಕಲ ವಸ್ತುಗಳೂ ಇಲ್ಲೇ ವೆ, ಚಿಂತಾಮಣಿಯೊಂದನ್ನು ಮಾತ್ರ ಅವರು ಸಂಗಡ ತೆಗೆದುಕೊಂ ಡು ಹೋದರು, ಎಂದು ಹೇಳಿದರು. ಹಾಗಾದರೆ ದೇವೇಂದ್ರಾದಿಗಳು ಎ ತ್ಯ ಹೊದರೆಂದು 'ಹಲಧರನು ಖಿನ್ನನಾಗಿ ಕೇಳುತ್ತಿದ್ದನು. ಅಷ್ಟರ ಲ್ಲಿ ಕಮಂಡಲು ಕಾಪಾಯವಸ್ತ್ರವನ್ನು ಧರಿಸಿ, ವೀಣೆಯಂ ವಿಡಿದು, ಶಿ ವಾರಸಂಕಿ:ಗ್ರನವನ್ನು ಮಾಡುತ್ತ, ಬಿಳಿಯಮೋಡವು ಆಕಾಶದಿಂದಿ ೪ನಬಂದಂತೆ ನಾರದಮಹರ್ಷಿಯು ಅಂತರಿಕ್ಷ ಮಾರ್ಗವಾಗಿ ಜಲಂಧ ರನ ಮುಂದೆ ಬಂದಿಳಿದನು. ಆಗ ರಾಕ್ಷಸಶರನು ಜಗ್ಗನೆದ್ದು, ಮಸ್ತಿ ಯ ಪಾದಕ್ಕೆ ನಮಸ್ಕರಿಸಿ ಆಶಿರಾದವನ್ನು ಪಡೆದು, ಅರ್ಧಾಸನದಲ್ಲಿ ಮುನೀಶ್ವರನನ್ನು ಕುಳ್ಳಿರಿಸಿಕೊಂಡನು. ನಾರದನು ಜಲಂಧರನಮುಖ ವನ್ನು ನೋಡಿ, ನಿನಗೆ ಹಿಂತೆಯೇಕೆಂದು ಕೇಳಲು, ನಿಮಗೆ ತಿಳಿಯದೆ ? ನಾವಿಶ್ಯಸಾಹಸವನ್ನು ಮಾಡಿದುದೂ ವ್ಯರ್ಥವಾಯಿತು; ದೇವೇಂದ್ರ ನು ಮುಖ್ಯವಾದ ಚಿಂತಾಮಣಿಯನ್ನೆತ್ತಿಕೊಂಡು ಎಲ್ಲಿಗೆ ಹೊರಟು