ಪುಟ:ಚೆನ್ನ ಬಸವೇಶವಿಜಯಂ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mo ಚನ್ನ ಬಸವೇಶವಿಜಯಂ (Fಾt 4) [ಅಧ್ಯಾಯ ನಮ್ಮ ಮಾನಪ್ರಾಣಗಳನ್ನುಳುಹು, ಇಲ್ಲದಿದ್ದರೆ ತಲೆಯನ್ನು ತಪ್ಪಿಸಿಕೊಂ ಡು ಬಾಳುವುದಕ್ಕೆ ಸ್ಥಳವನ್ನು ತೋರಿಸು, ಈ ಹಾಳು ಯಜ್ಞದ ಹವಿ ಸ್ಪಿನ ಆಸೆಗಾಗಿ ಬಂದುದೂ ಸಾಕು, ಈ ಪ್ರಾಣಭೀತಿಯೂ ಸಾಕು, ನಿ ಮನ್ನು ನಂಬಿ ನಾವು ಬಂದುದಕ್ಕೆ ಇದೇ ಫಲ ?” ಎಂದು ದುಗುಡದಿಂದ ಬಿಕ್ಕರಿಸುತ್ತ ಹೇಳಿಕೊಂಡರು. ಆಗ ಹರಿಯು- ಕ್ಷಣಮಾತ್ರದಲ್ಲಿ ಆ ಯಜ್ಞ ವೈರಿಯನ್ನು ಗೆದ್ದು ಬರುವೆನು, ನಿಮಗೇಕೆ ಇಷ್ಟು ಚಿಂತೆ ? ಎ ದು ಧೈರವನ್ನು ಹೇಳಿ, ಸಮಾಧಾನಗೊಳಿಸಿ, ತಾನೇ ಯುದ್ಧಕ್ಕೆ ಸನ್ನದ್ದ ನಾದನು. ಇಂದ್ರಾದಿದಿಕ್ವಾಲಕರ ಪುತ್ರರೂ ಸೂರಾದಿಗ್ರಹಗಳ ಮಕ್ಕ ಳುಗಳೂ ಕಳೆದುಳಿದ ಸೈನ್ಯವನ್ನು ಕಟ್ಟಿಕೊಂಡು ಹರಿಗೆ ಸಹಾಯಕರಾಗಿ ನಡೆದರು. ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ೪ನೆ ಅಧ್ಯಾ ಯವು ಸಂಗ್ಲವು. - **** - ೫ ನ ಅ ಧ್ಯಾ ಯ ವು. ೩ ದ ಕ ಶಿ ರ ದ ನ ವು . ಎಲೆ ನಿದ್ದ ರಾಮೇಶತೆ ಕೇಳು, ವಿಷ್ಣುವು ಯುದ್ಧ ಸನ್ನದ್ಧನಾಗಿ | ಹೊರಟ ಕೂಡಲೆ ಅವನ ಎಡತೋಳು ತೊಡೆ ಕಣ್ಣುಗಳು ಹಾರಿದುವು. ಹಾವು ಮೊಲ ಕಾಗೆಗಳು ದಾರಿಗೆ ಅಡ್ಡಲಾದುವು. ಆದರೂ ಹರಿಯು ದುರ್ಬುದ್ಧಿಯಿಂದ ಅದನ್ನು ಲಕ್ಷ ಮಾಡದೆ ನಡೆಗೊಂಡನು. ಮುಂಗಡೆ ಯಲ್ಲಿ ವೀರಭದ್ರೇಶನ ಬಾಣಸ್ತೋಮದಿಂದ ತುಂಬಿದ ಯುದ್ಧಾಂಗಣವ ನ್ಯೂ, ಹತವಾಗಿರುವ ದೇವಸ್ತೋಮವನ್ನೂ, ಹೆಣಗಳನ್ನು ಮೆಟ್ಟ ಕೈ ಕಾಲ್ಗಳ ತುಂಡುಗಳನ್ನು ವಿಡಿದು ರಕ್ತವನ್ನು ಕುಡಿದು ಕುಣಿದಾಡುತ್ತಿ ರುವ ಭೂತ ಬೇತಾಳ ವಿಶಾಚಾದಿಗಳನ್ನೂ ನೋಡಿ ಕೋಪವೇರಿದನು. CC ಇದುವರೆಗೂ ದೇವತಾಸ್ತೋಮವನ್ನೆಲ್ಲ ಪರಾಜಯಗೊಳಿಸಿದ ವೀರ ನಾರೋ ಆತನನ್ನು ಮುಂಗಡೆಗೆ ಬರಹೇಳಿರಿ, ಪುಡಿಯಾಳುಗಳು ತಳೆಯು