ಪುಟ:ಚೆನ್ನ ಬಸವೇಶವಿಜಯಂ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧4] ತಾರಕಸಕ್ಕಾರವು ಪ್ರಣವನ್ನು ತೆಗೆದುಕೊಳ್ಳದೆ ಬಿಡಲಾರನೆಂದು ಯೋಚಿಸಿದನು. ಆದರೂ ಧೈರವನ್ನು ತಂದುಕೊಂಡು, ವಿಜಯಧನುಸ್ಸನ್ನು ಹಿಡಿದು, ಇಂಜಿನಿಯ ನ್ನು ಮಿಡಿದು, ಯುದ್ಧಕ್ಕೆ ಸನ್ನದ್ಧವಾಗಿ ನಿಂತನು. ಎಂದು ಚೆನ್ನ ಬಸವೇ ಶನು ನುಡಿದನೆಂಬಿಲ್ಲಿಗೆ ಹನ್ನೆರಡನೆ ಅಧ್ಯಾಯವು ಸಂಪೂಣ್ಣವು. - - ೧೩ನೆ ಅಧ್ಯಾಯವು. ತಾ ರ ಕ ಸ ಹ್ಯಾ ರ ವು - ಎಲೈ ಸಿದ್ದರಾಮೇಶನೆ ಕೇಳು, ಬಳಿಕ ತಾರಕನು ಪೂಣ್ಮುಖನಿದಿ ರಿಗೆ ಬಂದು, ಮೃದುವಚನದಿಂದ ಎಲೆ ಹಸುಳೆಯೆ, ನಿನ್ನನ್ನು ನೋಡಿ ದರೆ ಸಾಧಾರಣವಾದ ಶಿಶುವಂತಿಲ್ಲ; ನಿನ್ನನ್ನು ಹೆತ್ತ ತಾಯಾರೋ ಕಾಣೆ; ಮಗ್ಗುಲಲ್ಲಿ ಮಲಗಿ ತಾಯ ಮೊಲೆಹಾಲನ್ನು ಕುಡಿಯುವ ಈ ವಯಸ್ಸಿ ನಲ್ಲಿ ನೀನು ಆ ವಿಷ್ಯ ಮೊದಲಾದವರ ಮಾಯೆಯ ಮಾತಿನ ಬಲೆಗೆ ಸಿಕ್ಕ ಬಹುದೆ ? ಈಗಳೂ ನಾನು ಬಿಟ್ಟುಕೊಡುತ್ತೇನೆ, ಹೋಗಿ ಬದುಕು; ಎಂದು ನುಡಿಯಲು, ಕುಮಾರಸ್ವಾಮಿಯು ನಕ್ಕನು. ಮತ್ತೂ ಎಲೆ ರಾಕ್ಷಸನೇ ! ನಾನು ಶಿಶುವಾದರೇನಾಯ್ತು ? ಕತ್ತಲೆಯ ಒಟ್ಟಿಲಿಗೆ ಬಾ ಲಸೂರನು ಹೆದರಿಕೊಳ್ಳುವನೆ ? ಕಾಡಾನೆಯ ಭೀಕರತ್ನವನ್ನು ಕಂಡು ನಿಹದಮರಿ ಅಂಜೆ ಓಡುವುದೆ ? ಬೆಟ್ಟಗಳಿಗೆ ವಜವು ಹೆದರುವುದೆ ? ನೀನು ವಿಚಾರ ಮಾಡದೆ ಹುಚ್ಚನಂತೆ ಗಳಹಬಹುದೆ ? ಮೂರುಲೋಕ ವನ್ನೂ ನೀನೇ ತಿಂದು ತೇಗುತ್ತಿರುವಾಗ, ನನ್ನನ್ನು ಉಳುಹಿ ಪಾಲಿಸುವ ಗುಣವು ನಿನಗೇಕೆ ? ” ಎಂದು ಮೂದಲಿಸುತ್ಯ, ಬಾಣಗಳನ್ನು ಜೋಡಿ ನಿ ಜೋಡಿಸಿ ರಕ್ಕಸನಮೇಲೆ ಪ್ರಯೋಗಿಸಿದನು. ಆ ಬಾಣದ ಮಳೆಯಲ್ಲಿ ಮುಳುಗಿಹೋದ ರಕ್ಕಸನು ಕೆರಳ,-- ಆಹಾ! ನಾನು ಯುದ್ಧದಲ್ಲಿ ಹರ ಬೇಂದ್ರಾದಿ ದೇವಾಧಿದೇವತೆಗಳಿಗೆಲ್ಲ ಭಂಗಗೊಳಿಸಿ, ಮನೋವ್ಯಥೆಯ ನ್ನುಂಟುಮಾಡಿರುವೆನು; ಸ್ವರ್ಗನರ್ತಪಾತಾಳಗಳಲ್ಲಿ ನನಗೆ ಇದಿರಾಗು 29