ಪುಟ:ಚೆನ್ನ ಬಸವೇಶವಿಜಯಂ.djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆನ್ನಬಸವೇಕೆವಿಜಯಿರಿ(ಆಂಜೆ ೫) [ಅಧಿಕತ ಯೇ ಭೂತ, ಅಶ್ವಿನೀದೇವತೆಗಳು ಅಧಿದೇವತೆ, ಗಂಧವೇ ವಿಷಯ, ಸು ಗಂಧ-ದುರ್ಗಂಧವೆಂಬೆರಡು ಗಂಧಭೇದಗಳು ಇನ್ನು ಕನ್ನೇಂದ್ರಿಯಗಳಿಗೆ ಹೇಗೆಂದರೆ- ವಾಕ್ಕು, ಪಾದ, ಮಾಣಿ, ವಾಯು, ಗುಹ್ಯ ಎಂಬಿವೇ ಕರೇಂದ್ರಿಯಗಳು, ಇವುಗಳಲ್ಲಿ ವಾಕಿಗೆನಾಗವಾಯುವು, ಸರಸ್ವತಿ ಅಧಿದೇವತೆ, ಸುವಾಕ್ ದುರಾಕೃಗಳೇ ವಿಪ ಯವು, ಪಾನೇಂದ್ರಿಯಕ್ಕೆ-ಕೂರ ವಾಯು, ಇಂದ್ರನಧಿದೇವತೆ, ದಾನಆದಾನವೆಂಬ ವಿಷಯವು, ಪಾದೇಂದ್ರಿಯಕ್ಕೆ-ಕೃಕರವಾಯು, ವಿಷ್ಣು ವಧಿದೇವತೆ, ಗಮನಾಗಮನಗಳು ವಿಷಯವು, ನಾಯಿಂದ್ರಿಯಕ್ಕೆ-ದೇ ವದತ್ತವಾಯು, ಮೃತ್ಯುವಧಿದೇವತೆ, ಸರ್ಜನ ವಿಸರ್ಜನ ವಿಷಯಗಳು. ಗುಹೇಂದ್ರಿಯಕ್ಕೆ-ಧನಂಜಯವಾಯು, ಬ್ರಹ್ಮನು ಅಧಿದೈವ, ಆನಂದ ಅನಾನಂದಗಳ ವಿಷಯವು. ಇನ್ನು ದಶವಾಯುಗಳ ಸ್ಥಾನಕರಾ ದಿಗಳು ಹೇಗೆಂದರೆ ಪ್ರಾಣ, ಅಮಾನ, ವ್ಯಾನ, ಉದಾನ, ಸವನ, ನಾಗ, ಕೂಗ್ನ, ಕೃಕರ, ದೇವ ದತ್ತ, ಧನಂಜಯ, ಎಂಬಿವೇ ದಶವಾಯಗಳು, ಇವುಗಳಲ್ಲಿ ಪ್ರಾಣವಾ ಯುವಿಗೆ-ಇಂದ್ರನಿಲವರ್ಣ, ಹೃದಯದಲ್ಲಿ ನೆಲೆ, ಇದು ಪಾದದ ಹೆಬ್ಬೆರ ಲಿನಿಂದ ಹಿಡಿದ) ತಲೆಕೂದಲ ತುದಿಯವರೆಗೂ ದೇಹದಲ್ಲಿ ವ್ಯಾಪಿಸಿ, ಈ ಜ್ಞಾಸನಿಶ್ವಾಸಗಳನ್ನು ಮಾಡಿಸುತ್ತ, ಆಹಾರವನ್ನು ಜೀರ್ಣಗೊಳಿಸುತ್ತಿ ರುವುದು, ಅಪಾನವಾಯುವು -ಹಸುರುಬಣ್ಣ, ಇದು ಗುದಸ್ಸನದಲ್ಲಿದ್ದು ಮಲ ಮೂತ್ರವಿಸರ್ಜನೆಗಳನ್ನು ಮಾಡಿಸುತ್ಯ, ಗುದದ್ವಾರವನ್ನು ಮುಚ್ಚಿ ಅನ್ನ ರಸವನ್ನು ವ್ಯಾಪನಗೊಳಿಸುತ್ತಿರುವುದು, ಸಮಾನವಾಯುವು-ಕಪ್ಪು ಬಣ್ಣ, ಇದು ನಾಭಿಸ್ತಾನದಲ್ಲಿದ್ದು ಆಪಾದಮಸ್ತಕವಾಗಿ ದೇಹದಲ್ಲೆಲ್ಲ ವ್ಯಾಪಿಸಿ, ಅನ್ನ ರಸವನ್ನು ರೋಮಗಳಿಗೆಲ್ಲ ಏರಿಸುವುದು, ಉದಾನವಾಯುವು-ಎಳೆ ಮಿಂಚಿನಬಣ್ಣ, ಇದು ಕೊರಲಿನಲ್ಲಿದ್ದು , ಸೀನು, ಕೆಮ್ಮು , ಕನಸು, ಏ ೪ಸುವುದು, ಕುಳ್ಳರಿಸುವುದು, ಓಕರಿಸುವುದು, ಅದನ್ನು ತಡೆಯುವುದು ಈ ಕೆಲಸಗಳನ್ನು ಮಾಡಿಸುತ್ತ, ಇಳಿವ ಅನ್ನ ರಸವನ್ನು ಮತ್ತೆ ಮೇಲಕ್ಕೆ ರಿಸುತ್ತಿರುವುದು, ವ್ಯಾನವ್ವಾಯುವು ಹಾಲಿನ ಬಣ್ಣ, ಇದು ಅಂಗಸಂಧಿ ಗಳಲ್ಲಿದ್ದು, ಮುದುಡಿದ್ದ ಅಂಗವನ್ನು ತಿದ್ದುವ ಕೆಲಸವನ್ನು ಮಾಡಿಸುತ್ತ,