ಪುಟ:ಚೆನ್ನ ಬಸವೇಶವಿಜಯಂ.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಲಜ್ಞಾನವು ೪೧೭ ಪ್ರರಾಗುವರು. ಎನಲು, ಸಿದ್ದರಾಮೇಶನು- ಗುರುವೆ ! ಒಬ್ಬನಿಂದಿಷ್ಟು ಜನರಿಗೆ ತೃಪ್ತಿಯಾಗುವುದು ಹೇಗೆನ್ನಲು, ಚೆನ್ನಬಸವೇಶನು ಹಿಂದೆ ದೂರಾಸನು ೧೨ಸಾವಿರ ಋಷಿಗಳನ್ನು ಕೂಡಿಕೊಂಡು ಧಮ್ಮರಾಯನ ಬ ೪ಗೆ ಬಂದು ಆಹಾರವನ್ನು ಕೇಳುವಲ್ಲಿ, ಕೃಷ್ಣನಿತ್ತಿದ್ದ ಅಕ್ಷಯಪಾತ್ರೆ ಯನ್ನು ತೊಳೆದ ನೀರನ್ನು ಕುಡಿಸಲು, ಅಷ್ಟು ಮಂದಿಗಳಿಗೂ ಮೃಷ್ಟಾನ್ನ ಭೋಜನದಿಂದಾಗುವ ಪರಿಸೃಪ್ತಿಯುಂಟಾಯ್ಲೆಂದು ಪ್ರಸಿದ್ಧವಾಗಿರುವಲ್ಲಿ ಇಂಥ ಪ್ರಭುತೃಪ್ತಿಯಿಂದ .ಶಿವಗಣತೃಪ್ತಿಯಾಗುವುದೇನಾಶ್ಚರೈ ? ಒಳಕ, ಹಾಗೆ ತೃಪ್ತಿಪಟ್ಟ ಜಂಗಮರನ್ನೆಲ್ಲ ಬಸವೇಶನು ಕರಿಸಿ, ಬೇಡಿದುದನ್ನೆಲ್ಲ ಅವರಿಗೆ ಕೊಟ್ಟು, ಸಕಲ ಗಣರೊಡನೆ ಪ್ರಭುವಿಗೆ ನಮಸ್ಕರಿಸಿ, ನಮಗೆ ಮುಂದೆ ಗತಿಯೇನೆಂದು ಪ್ರಾರ್ಥಿಸುವರು. ಆಗ ಪ್ರಭುವು ಅವರೆಲ್ಲರ ಐಕ್ಯಸ್ಥಲವನಕ್ರಮವನ್ನು ಪರೀಕ್ಷಿಸಿ ತಿಳಿದು, ಮೆಚ್ಚಿ, ನಿಮಗೆ ಐಕೃಪದವಿಯು ಅಳವಟ್ಟಿತೆಂದು ಅನುಗ್ರಹಿಸಿ, ಅವರು ಬಯಲಾಗುವ ರೀತಿಯನ್ನು ಅಪ್ಪಣೆ ಕೊಡಿಸಿ, ನನ್ನನ್ನು ತನ್ನೊಡನೆ ಕರೆದುಕೊ೦ ಡು ಶ್ರೀಶೈಲಕ್ಕೆ ದಯಮಾಡಿಸುವನು, ಆ ಪರತದಲ್ಲಿ ಗೋರಕ್ಕೆ ಮೊದ ಲಾದ ಯೋಗಿಗಳಿಗೆ ಇಷ್ಟಾರ್ಥವನ್ನು ಕೊಟ್ಟು, ಮಹಾದೇವಿಯಕ್ಕನಿಗೆ ನಿರಾಣಪದವಿಯ ಮಾರ್ಗವನ್ನ ರುಹಲು, ಆಕೆಯು ಕದಳಿಯ ವನವನ್ನು ಹೊಕ್ಕು ಬಯಲಾಗುವಳು. ಪ್ರಭುವೂ ಅಲ್ಲೇ ಕದಳಯ ವನವನ್ನು ಪು ವೇಶಿಸಿ ಐಕ್ಯನಾಗುವನು. ಆ ಸುದ್ದಿಯನ್ನು ಒಸವೇಶನು ಕೇಳಿ, ಸಕಲ ಗಣಸಮೂಹಕ್ಕೂ ನಮಸ್ಕರಿಸಿ, ಶಾಲಿವಾಹನಶಕದ ೭೦೬ನೆ ರಕ್ತಾಕ್ಷಿ ಸಂವತ್ಸರದ ಫಾಲ್ಗುಣಶುದ್ದೆ ಕಾದಶಿ ಮಂಗಳವಾರ ಹಗಲು ೨೫ ಗಳಿಗೆ ಯಲ್ಲಿ ಸಂಗಮೇಶನಲ್ಲಿ ಐಕೈಗೊಳ್ಳುವನು. ಇವರಿಬ್ಬರ ಐಕ್ಯದ ಸುದ್ದಿ ಯನ್ನೂ ಹಡಪದಪ್ಪಣ್ಣನು ಒಸವೇಶನ ಪತ್ನಿಯಾದ ನೀಲಾಂಬಿಕೆಗೆ ಬಿ ಸಲು, ಅವರೀರರೂ ತಮ್ಮಿಲಿಂಗಗಳಿಕ್ಯರಾಗುವರು. ಅನಂ ತರ ಇನ್ನು ಕಲಶರಣರೂ ಐಕ್ಯರಾಗುವರು, ಆ ಬಳಿಕ ಬಿಜ್ಜಳನು ಬಸ ವೇಶನ ಪಟ್ಟವನ್ನು ನಮಗೆ ಕಟ್ಟುವನು. ಹಳ್ಳಯ್ಯ ಮಧುವಯ್ಯ ಎಂಬಿ ಬ್ಬರು ಬೇರೆ ಬೇರೆ ಕುಲದವರು ಬಾಂಧವ್ಯವನ್ನು ಬೆಳಸಿದರೆಂಬ ಕಾರಣ ದಿಂದ ಅವರನ್ನು ಆನೆಯ ಕಾಲಿಗೆ ಕಟ್ಟಿಸಿ ದೊರೆಯು ಎಳೆಯಿಸಲು, ಆ