ಪುಟ:ಚೆಲುವು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಎಂಜಲಾದ ಈ ಮೆನು ನಾನು ಸಂಜೆಯು ಮೊದಲೇ ಸುಡಬೇಕೆಂದು ಚಿಕ್ಕ ಮಲ್ಲಮ್ಮ ಹೇಳಿದ ಮಾತ ದುಕ್ಕದ ಮಾತೆಂದೆಣಿಸಿತು ಮಂದಿ ; ಒಂದು ಗಳಿಗೆ ಬಿಟ್ಟವಳು ದೇಗುಲದ ಮುಂದೆ ಹೊಂಡವನು ಮಾಡಿರಿ ಎಂದು ತಮ್ಮ ಮೈದುನರ ಕರೆದು ಹೇಳಿದೊಡೆ ಬಿಮ್ಮನೆ ಭಯದಲಿ ಬೀಗಿತು ಮಂದಿ ; ಅಯ್ಯೋ ಅಯ್ಯೋ ಇಂತಹ ಮಾತುಂಟೆ ಮೆಯ್ಯ ಸುಡುವುದೆಂದೊಡೆ ಏನೆಂದು ಎಲ್ಲ ಬಂದು ದಮ್ಮಯ್ಯ ಎಂದು ಮಲ್ಲಮ್ಮನ ಬೇಡಿದರೋ ಅಣ್ಣಾ. ಮಲ್ಲಮ್ಮಾ ಮಲ್ಲಮ್ಮಾ ಕಲ್ಲಾಯಿತೆ ಮನ ಮಲ್ಲಮ್ಮಾ, ಹಡೆದ ತಾಯಿ ಬಂದವಳಿಗೆ, ಅಮ್ಮಾ ಮಡಿವ ತಪ್ಪ ನೀನೇನನು ಮಾಡಿದೆ? ಭಂಡ ಬಾಳ ನೀ ಬಾಳಿದುದೇನು ? ಪುಂಡರು ಕದ್ರೋಡೆ ಮಾಡುವುದೇನು? ಎಂದು ಕೈಗಳನ್ನು ಹಿಡಿದು ಬೇಡಿದಳು ; ತಂದೆ ಬಂದು ಬಿಡು ಈ ಹಠಯೆಂದನು ; ಅತ್ತೆ ಮಾವನು ಮೈದುನ ಭಾವ